*ನೀರು* (ಪುಟ್ಕತೆ)

- Advertisement -
- Advertisement -

‘ಬೇಕೇ ಬೇಕು ನೀರೂ ಬೇಕು’ ಹೀಗೆ ಸುತ್ತ ಎಂಬತ್ತಾರು ಹಳ್ಳಿ ಜನ ಘೋಷಣೆ ಕೂಗುತ್ತ ಸತ್ಯಾಗ್ರಹಕ್ಕೆ ಕುಳಿತಿದ್ದರು. ಕುಡಿಯೊ ನೀರಿಗಾಗಿ ಎಂಟು ವರ್ಷದಿಂದ ಅರ್ಜಿ ಕೊಟ್ಟು ಸಾಕಾಗಿ ಹೋಗಿತ್ತು. ಇನ್ನೆರಡು ತಿಂಗಳಲ್ಲಿ ಚುನಾವಣೆ. ನೂರನೇ ದಿನದ ಸತ್ಯಾಗ್ರಹಕ್ಕೆ ಮಿನಿಸ್ಟರ್, ಅಧಿಕಾರಿಗಳು ಬಂದರು. ಜನರ ಗದ್ದಲ ಹೆಚ್ಚಾಯಿತು. ಯಾರೋ ‘ಭಾರತ್ ಮಾತಾಕಿ’ ಅಂದರು. ಜನ ‘ಜೈ’ ಅಂದು ನಿಶ್ಯಬ್ಧರಾದರು.

ಮಿನಿಸ್ಟರ್ ಮೈಕ್ ಹಿಡಿದು ‘ಮಹಾಜನಗಳೇ, ನಿಮ್ಮ ನೋವು ನನಗರ್ಥವಾಗತ್ತೆ. ಈ ಮಣ್ಣಿಗೆ ನೀರು ತರದೆ ನಾನು ಸಾಯಲಾರೆ’ ಎಂದು ಸ್ವಲ್ಪ ಹೊತ್ತು ಸುಮ್ಮನಾದರು. ಮಿನಿಸ್ಟರ್ ಹಿಂಬಾಲಕರು, ಅಧಿಕಾರಿಗಳನ್ನು ಬಿಟ್ಟು ಯಾರೂ ಚಪ್ಪಾಳೆ ತಟ್ಟಲಿಲ್ಲ. ‘ಇನ್ನೆರಡೇ ತಿಂಗಳು. ನನಗೆ ಮತ್ತೆ ಅಧಿಕಾರ ಕೊಡಿ. ನಿಮ್ಮ ಋಣ ತೀರಿಸದೇ ಸಾಯೋದಿಲ್ಲ’ ಎಂದರು. ಅಷ್ಟರಲ್ಲಿ ಮದ್ಯೆ ಬಾಯಿ ಹಾಕಿದ ಜನತೆ.

‘ಸಾಯೆಬ್ರೆ ಎಂಟು ವರ್ಷದಿಂದ ಒಂದು ಹನಿ ಮಳೆ ಬಿದ್ದಿಲ್ಲ’

‘ಸಾಯೆಬ್ರೆ ಕುಡಿಯೋ ನೀರಿಗೆ ಏಳು ಮೈಲಿ ನಡಿಬೇಕಾಗ್ಯದ’

‘ಸಾಯೆಬ್ರೆ ಮಕ್ಕಳು ಸಾಲಿ ಬಿಟ್ಟು ನೀರು ಹೊರಾಕತ್ತೇರ’

‘ಸಾಯೆಬ್ರೆ ಎಂಟು ವರ್ಷ ಆತ್ರಿ. ನಿಮ್ಮನ್ನ ಎರಡು ಸಲ ಗೆಲ್ಸಿವಿ ನೆಪ್ಪಿರ್ಲಿ’

ಪೊಲೀಸ್ ಎಲ್ಲರನ್ನು ಗದರಿಸಿ ಕೂರಿಸಿದರು.
ಮಿನಿಸ್ಟರ್ : ಮಹಾಜನಗಳೆ 100 ಕಿಲೋಮೀಟರಿಂದ ನದಿ ನೀರು ತರಬೇಕಂದ್ರೆ ಅಷ್ಟು ಸುಲಭವಲ್ಲ. ಆದ್ರೂ ನಾನು ಪ್ರಾಮಾಣಿಕ ಪ್ರಯತ್ನ ಮಾಡಿ ಫೈಲ್ ಮೂವ್ ಮಾಡ್ಸಿದಿನಿ. ಸರ್ಕಾರ ಹಣ ಬಿಡುಗಡೆ ಮಾಡಿದ ತಕ್ಷಣ ಕಾಮಗಾರಿ ಚಾಲೂ ಮಾಡ್ತಿನಿ’

ಜನತೆ : ಅಲ್ಲಿಮಟ ನಮ್ಕತಿ? ಸಾಯೆಬ್ರೆ ಅಂತರ್ಜಲ ಇಲ್ಲದಂಗಾಗ್ಯದ. ಬೋರ್ ಬಾವಿ ಬರಿದಾಗ್ಯವ. ಕೆರೆ, ಕುಂಟೆ ಬಾಯ್ಬಿಟ್ಕಂಡ್ ನೀರು ನೀರು ಅಂತಾವೆ. ದನಕರುಗಳಿಗಾದ್ರೂ ಕುಡಿಯೋ ನೀರು ವ್ಯವಸ್ಥೆ ಮಾಡ್ರಿ

ಮಿನಿಸ್ಟರ್: ಅದಕ್ಕೆ ಇನ್ನೂರು ಕೋಟಿ ಬೇಕು. ಸರ್ಕಾರ ಸಾಲದಲ್ಲಿದೆ. ಯಾವ್ದುಕ್ಕೂ ಎರಡು ತಿಂಗಳು ಸಮಯ ಕೊಡಿ ದಯಮಾಡಿ

ಜನತೆ ಮಾತಾಡಬೇಕೆಂದುಕೊಂಡರೂ ಪೊಲೀಸ್ ಬಿಡಲಿಲ್ಲ. ಅಧಿಕಾರಿಗಳು ಮಿನಿಸ್ಟರ್ ಕಿವಿಲಿ ಏನೋ ಹೇಳಿದಾಗ
ಮಿನಿಸ್ಟರ್: ಮಹಾಜನಗಳೇ ನಿಮಗೊಂದು ಸಂತಸದ ಸುದ್ಧಿ.

ಮಿನಿಸ್ಟರ್ ಮಾತು ಕೇಳಿ ಅಲ್ಲಿದ್ದ ರೈತರಿಗೆ ಬೆಳೆ ಕಂಡಂಗಾಯ್ತು. ಕೂಲಿ ಜನಗಳಿಗೆ ಕೆಲಸ ಕಂಡಂಗಾಯ್ತು. ಮಹಿಳೆಯರಿಗೆ ಮೋಡ ಕಟ್ಟಿದಂಗಾಯ್ತು. ಮಕ್ಕಳಿಗೆ ಬರಿಮೈಲಿ ಈಜು ಹೊಡೆದಂಗಾಯ್ತು. ಜನರ ಕಿವಿಗಳೆಲ್ಲ ನೆಟ್ಟಗಾದವು.

ಮಿನಿಸ್ಟರ್: ಈ ಸಾಧನೆ ಅಮೆರಿಕಾ, ಚೀನಾ, ರಷ್ಯಾ ಅಷ್ಟೇ ಮಾಡಿದ್ದು. ಈಗ ಆ ಸಾಧನೇನ ನಮ್ಮ ದೇಶ ಮಾಡುತ್ತಿದೆ. ಇವತ್ತು ರಾತ್ರಿ ಚಂದ್ರನ ಮೇಲೆ ಉಪಗ್ರಹ ಕಳಿಸುತ್ತಿದ್ದಾರೆ. ಸಾವಿರ ಕೋಟಿ ಪ್ರಾಜೆಕ್ಟ್ ಈ ಚಂದ್ರಯಾನ. ಎಲ್ಲರೂ ನೋಡಿ ಹಾರೈಸಿ. ದೇಶದ ಕೀರ್ತಿ ಪ್ರಚಾರ ಮಾಡಿ.

ಮಿನಿಸ್ಟರ್ ಮಾತು ಕೇಳಿ ಜನತೆಯಲ್ಲೊಬ್ಬ ‘ಸಾಯೆಬ್ರೆ ಸಾವ್ರ ಕೋಟಿಯಾ’ ಎಂದೊಡನೆ ಅದ್ಯಾರೋ ‘ಭಾರತ್ ಮಾತಾಕಿ’ ಅಂದರು. ಜನ ‘ಜೈ’ ಅಂದರು. ಮಿನಿಸ್ಟರ್ ಕಾರು ಹತ್ತುವವರೆಗೆ ಘೋಷಣೆ ಮೊಳಗುತ್ತಲೇ ಇತ್ತು. ಅಲ್ಲೆ ಸಂದಿಯಲ್ಲಿ ನುಗ್ಗಿ ಸೂಟು ತೊಟ್ಟ ಅಧಿಕಾರಿಯೊಬ್ಬರ ಕೈ ಹಿಡಿದುಕೊಂಡ ಶಾಲೆ ಯೂನಿಪಾರ್ಮ್ ತೊಟ್ಟ ಹುಡುಗಿ ‘ಸಾರ್ ಚಂದ್ರಯಾನ ಯಾಕೆ’ ಎಂದು ಕೇಳಿದಳು. ಅಧಿಕಾರಿ ಹೆಮ್ಮೆಯಿಂದ ಹೇಳಿದ ‘ ಚಂದ್ರನಲ್ಲಿ ನೀರು ಹುಡುಕೋಕೆ ಪುಟ್ಟ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...

SIR | ಸೆಕ್ಸ್ ವರ್ಕರ್ಸ್, ಅವರ ಮಕ್ಕಳ ಬಳಿ ದಾಖಲೆಗಳಿಲ್ಲ : ಮಹಾರಾಷ್ಟ್ರ ಸಿಇಒಗೆ ಪತ್ರ ಬರೆದ ರಾಷ್ಟ್ರೀಯ ಸಂಸ್ಥೆ

ದಾಖಲಾತಿ ಮತ್ತು ಪರಿಶೀಲನೆ ಅಗತ್ಯತೆಗಳ ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಲೈಂಗಿಕ ಕಾರ್ಯಕರ್ತೆಯರು ಮತ್ತು ಅವರ ಮಕ್ಕಳನ್ನು ಹೊರಗಿಡದಂತೆ ನೋಡಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು...

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...