Homeಸಾಮಾಜಿಕಒಮ್ಮೆ ಕಣ್ಣು ಮುಚ್ಚಿ ಹೀಗೆ ಕಲ್ಪಿಸಿಕೊಳ್ಳಿ. ನಿಧಾನಕ್ಕೆ ಇದೇನೆಂದು ಅರ್ಥವಾಗಬಹುದು

ಒಮ್ಮೆ ಕಣ್ಣು ಮುಚ್ಚಿ ಹೀಗೆ ಕಲ್ಪಿಸಿಕೊಳ್ಳಿ. ನಿಧಾನಕ್ಕೆ ಇದೇನೆಂದು ಅರ್ಥವಾಗಬಹುದು

- Advertisement -
- Advertisement -

 ಡಾ. ಕಾರ್ತಿಕ್ ಬಿಟ್ಟು
ಕನ್ನಡಕ್ಕೆ: ರಾಜಶೇಖರ ಅಕ್ಕಿ |

ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ, ಅದರೊಂದಿಗೆ ನಿಮ್ಮ ಕೈಗಳನ್ನು ಮೇಲೆತ್ತಿ. ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ಕಾಣಿಸದಿದ್ದರೂ ನೀವು ನಿಮ್ ಕೈಗಳನ್ನು ಮೇಲಕ್ಕೆತ್ತಿದ್ದು ನಿಮಗೆ ಖಂಡಿತವಾಗಿಯೂ ಅನುಭವವಾಗುತ್ತದೆ. ನಿಮ್ಮ ಕೈಗಳು ಎಲ್ಲಿವೆ ಎನ್ನುವುದು ನಿಮಗೆ ತಿಳಿಯುತ್ತದೆ. ಹೀಗೇಕೆ ಎಂದರೆ, ನಮ್ಮ ಮಿದುಳು ದೇಹದ ಅಂಗಗಳ ಆಂತರಿಕ ಸ್ಪರ್ಶವನ್ನು ಗ್ರಹಿಸಿ, ಯಾವ ಅಂಗ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳುವಲ್ಲಿ ಸಶಕ್ತವಾಗಿದೆ.
ಯಾವುದಾದರೊಂದು ಅಪಘಾತಕ್ಕೀಡಾಗಿ ತಮ್ಮ ಕೈಯನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಈಗ ಇಲ್ಲದಿರುವ ಆ ಕೈ ಇನ್ನೂ ಅಲ್ಲಿಯೇ ಇದೆ ಎನ್ನುವ ಅನುಭವ ಆಗುತ್ತಿರುತ್ತದೆ. ಆ ಕೈ ಅಲ್ಲಿ ಇಲ್ಲದಿರುವುದನ್ನು ಅವರು ಕಾಣಬಹುದು; ಆದರೆ ದೇಹದ ನರಗಳಿಂದ ಬರುವ ಮಾಹಿತಿಯಿಂದ ಆ ಕೈ ಇನ್ನೂ ಅಲ್ಲೇ ಇದೆ ಎಂದು ಮಿದುಳಿನ ಭಾಗ ಅರ್ಥೈಸುತ್ತದೆ. ಇದು ಆ ಕೈ ಜೊತೆಗೆ ಅಲ್ಲಿಯ ನರಗಳನ್ನೂ ತೆಗೆದುಹಾಕಿದ್ದರೂ ಈ ಅನುಭವ ಆಗುತ್ತಲೇ ಇರುತ್ತದೆ. ದೇಹದಲ್ಲಿ ಒಂದು ಅಂಗ ಇರದೇ ಇದ್ದರೂ, ಒಬ್ಬ ವ್ಯಕ್ತಿಯ ದೇಹದಿಂದ ಇಲ್ಲದೇ ಇರುವ ಅಂಗವನ್ನು ಹೇಗೆ ಅನುಭವಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ.
ಕೈಗಳು, ಕಾಲುಗಳು ಹೀಗೆ ಗಂಡು ಮತ್ತು ಹೆಣ್ಣಿನ ದೇಹಗಳು ಬಹುತೇಕವಾಗಿ ಒಂದೇ ಬಗೆಯವಾಗಿರುತ್ತವೆ. ಜನನಾಂಗದ ಮತ್ತು ಎದೆಯ ಭಾಗಗಳು ಬೇರೆಯಾಗಿರುತ್ತವೆ. ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಅನುಭವವನ್ನು ತಿಳಿಯುವ ಒಂದು ವಿಧಾನವೇನೆಂದರೆ, ನಮ್ಮ ದೇಹದಲ್ಲಿ ಇರದಿರುವ ಅಥವಾ ನಮ್ಮ ದೇಹದಲ್ಲಿದ್ದ ಅಂಗಕ್ಕಿಂತ ಬೇರೆಯದೇ ಆದ ಒಂದು ಅಂಗದ ಸಂವೇದನೆಯನ್ನು ನಮ್ಮ ಮಿದುಳು ಅಪೇಕ್ಷಿಸುವುದು. ಹಾಗಾಗಿ ಒಬ್ಬ ಟ್ರಾನ್ಸ್‍ಜೆಂಡರ್ ಮಹಿಳೆ ತನಗೆ ಇಲ್ಲದಿರುವ ಸ್ತನಗಳು ಇದ್ದಂತೆ ಭಾವಿಸಬಹುದು. ಹಾಗೂ ತಮ್ಮ ದೇಹದಲ್ಲಿರುವ ಒಂದು ಅಂಗದ ಗ್ರಹಿಕೆ ಮಿದುಳಿಗೆ ಇಲ್ಲದೇ ಇದ್ದಾಗ ತಮ್ಮ ಜನನಾಂಗವನ್ನು ನೋಡಿ ಆ ವ್ಯಕ್ತಿಗಳು ಗೊಂದಲಕ್ಕೊಳಗಾಗಬಹುದು. ಅದರಂತೆ ಟ್ರಾನ್ಸ್‍ಜೆಂಡರ್ ಪುರುಷರು ಎದೆಯ ಭಾಗದಲ್ಲಿ ಒಂದು ರೀತಿಯ ಭಾರವನ್ನು ಅನುಭವಿಸಿ ಗೊಂದಲಕ್ಕೊಳಗಾಗಬಹುದು, ಏಕೆಂದರೆ ಅವರ ಮಿದುಳು ಅದನ್ನು ಅಪೇಕ್ಷಿಸುವುದಿಲ್ಲ. ಅನೇಕ ಟ್ರಾನ್ಸ್‍ಜೆಂಡರ್ ಪುರುಷರು ಪುರುಷರಿಗಿರುವ ಜನನಾಂಗಗಳು ಇರುವಂತೇ ಅನುಭವವಕ್ಕೀಡಾಗಬಹುದು. ವ್ಯಕ್ತಿಗಳ ಅನುವಂಶಿಕ ವ್ಯತ್ಯಾಸದ (genetic variation) ಆಧಾರದ ಮೇಲೆ ದೇಹ ಮತ್ತು ಮಿದುಳುಗಳೆರಡೂ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿ ಬೆಳವಣಿಗೆಯಾಗಿ, ತಮ್ಮ ದೇಹದಿಂದ ಅವರ ಮಿದುಳು ಮತ್ತು ದೇಹದ ಅಪೇಕ್ಷೆಗಳು ಬೇರೆಬೇರೆಯಾಗುವುದನ್ನು ಡಿಸ್‍ಫೋರಿಯಾ ಎಂದು ಕರೆಯುತ್ತಾರೆ.
ಇದನ್ನು ತಿಳಿದುಕೊಳ್ಳಲು ಇದನ್ನು ಊಹಿಸಿ; ನಾಳೆ ಬೆಳಗ್ಗೆ ನೀವು ನಿದ್ರೆಯಿಂದ ಎದ್ದಾಗ, ನಿಮ್ಮ ಮಿದುಳು ಮತ್ತು ಮನೋಭಾವಗಳಲ್ಲಿ ಯಾವುದೇ ಬದಲಾವಣೆ ಆಗದೆ, ನಿಮ್ಮ ಭುಜದಿಂದ ಒಂದು ಹೆಚ್ಚಿನ ಕೈ ಉದ್ಭವಿಸಿದೆ ಎಂದುಕೊಳ್ಳಿ. ಈ ಹೊಸ ಕೈ ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಮಾಡುತ್ತಿಲ್ಲ ಎಂದು ಅಂದುಕೊಳ್ಳೊಣ. ಆದರೂ ಏನೋ ಕಿರಿಕಿರಿ ಅನುಭವಿಸುತ್ತೀರಿ, ಇರಬಾರದ್ದೇಕಿದೇ ಎನ್ನುವ ತೊಂದರೆ ಇರುತ್ತದೆ. ಈ ಅಂಗದಿಂದ ನಿಮಗೆ ಉಂಟಾಗುವ ಅಸೌಖ್ಯದ ಅನುಭವವು, ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಈ ಹೊಸ ಅಂಗ ಎಷ್ಟು ಅಡ್ಡಿಪಡಿಸುತ್ತೆ ಎನ್ನುವುದರ ಜೊತೆಗೆ ನೀವು ಮುಂಚೆ ಮಾಡುತ್ತಿದ್ದ ದೈನಂದಿನ ಚಟುವಟಿಕೆಗಳನ್ನು ಹಾಗೆಯೇ ಮುಂದುವರೆಸಲು ಈ ಅಂಗದಿಂದ ಎಷ್ಟು ಅಡೆತಡೆ ಎದುರಾಗುತ್ತದೆ ಎಂಬುದನ್ನೂ ಸೇರಿ ಅವಲಂಬಿಸಿದೆ.
ಅದರ ಮೇಲೆ, ನೀವು ಎದುರಿಸುವ ಎಲ್ಲಾ ಜನರೂ ಆಶ್ಚರ್ಯ ಹಾಗೂ ಕೌತುಕದಿಂದ ಪ್ರತಿಕ್ರಿಯಿಸಿದಾಗ, ನಿಮ್ಮನ್ನು ಭೇಟಿಯಾಗುವ ಎಲ್ಲರೂ ನಿಮ್ಮ ಭುಜದಿಂದ ಈ ಕೈ ಏಕೆ ಉದ್ಭವಿಸಿದೆ ಎಂದು ಕೇಳಿದಾಗ, ನೀವು ಸಾರ್ವಜನಿಕ ಸಾರಿಗೆಯನ್ನು ಬಳಸಿದಲ್ಲಿ ನೂರಾರು ಜನರು ನಿಮ್ಮನ್ನು ನೋಡಿ ಆಶ್ಚರ್ಯ ಮತ್ತು ಕೌತುಕ ವ್ಯಕ್ತಪಡಿಸಿ, ತಮ್ಮಲ್ಲೇ ಮಾತನಾಡಿಕೊಳ್ಳುತ್ತ ನಿಮ್ಮನ್ನು ಗೇಲಿ ಮಾಡಿದಾಗ, ಇದೇನು ಎಂದು ಕೇಳಿದಾಗ, ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿ ಯಾವ ಅನುಭವಗಳಿಂದ ಹಾದು ಹೋಗಬೇಕಾಗುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ದೈಹಿಕ ಅಂಗವೈಕಲ್ಯತೆಯುಳ್ಳವರೂ ಇಂತಹ ಅನುಭವ ಹೊಂದಿರುತ್ತಾರೆ.
ಈಗ ಇನ್ನೊಂದು ಪ್ರಸಂಗವನ್ನು ಊಹಿಸಿ, ನೀವು ಬೆಳಗ್ಗೆ ಎದ್ದಾಗ, ನೀವು ಗಂಡಾಗಿದ್ದರೆ ನಿಮ್ಮ ದೇಹ ಹೆಣ್ಣಿನಂತೆ, ಹೆಣ್ಣಾಗಿದ್ದರೆ ಗಂಡಿನಂತೆ ಬದಲಾಗಿದೆ. ಜನರೊಂದಿಗೆ ವ್ಯವಹರಿಸುವಾಗ ಎಷ್ಟು ಬಾರಿ ಒಬ್ಬ ವ್ಯಕ್ತಿಯ ಜೆಂಡರ್ ಅನ್ನು ನೋಡಲಾಗುತ್ತದೆ ಹಾಗೂ ಎಷ್ಟು ಬಾರಿ ನಿಮ್ಮನ್ನು ನೋಡಿ ನಗಲಾಗುತ್ತದೆ, ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಹಾಗೂ ನಿಮ್ಮ ಗುರುತು ಮುಂಚಿನಂತೆಯೇ ಇದ್ದು, ನಿಮ್ಮ ಉಡುಪೂ ಮುಂಚಿನಂತಿದ್ದು ಹಾಗೂ ನೀವು ಮುಂಚಿನಂತೇ ವರ್ತಿಸುತ್ತಿದ್ದೀರಿ, ಆದರೆ ನಿಮ್ಮ ದೇಹ ಬದಲಾಗಿದ್ದರೆ?
ಇನ್ನು ಕೊನೆಯ ಒಂದು ಪ್ರಯೋಗ: ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಒಬ್ಬ ವ್ಯಕ್ತಿಯನ್ನು ಊಹಿಸಿ, ಒಬ್ಬ ಡಾಕ್ಟರ್ ಅಂತಿಟ್ಟುಕೊಳ್ಳಿ, ಆ ವ್ಯಕ್ತಿಯ ಜೊತೆಗೆ ಮಾತನಾಡುತ್ತಿದ್ದೀರಿ ಎಂದು ಊಹಿಸಿ. ಈಗ ಕಣ್ಣು ಬಿಡಿ. ನಿಮಗೆ ಆ ಡಾಕ್ಟರ್‍ನ ಜೆಂಡರ್ ನೆನಪಿದೆಯೇ? ಗಂಡೋ, ಹೆಣ್ಣೋ, ಎರಡೂ ಅಲ್ಲವೋ? ನಾವು ಯಾವುದೇ ವ್ಯಕ್ತಿಯೊಂದಿಗೆ ವ್ಯವಹರಿಸುವುದನ್ನು ಊಹೆ ಮಾಡಿದಾಗ, ಮೊಟ್ಟಮೊದಲಿಗೆ ಆ ವ್ಯಕ್ತಿಯ ಜೆಂಡರ್ ಅನ್ನು ಊಹಿಸುತ್ತೇವೆ. ಇದಕ್ಕೆ ನಮ್ಮ ಭಾಷೆಗಳೂ ಸಹಕರಿಸುತ್ತವೆ. ಅಧಿಕಾಂಶ ಭಾಷೆಗಳ ಸರ್ವನಾಮಗಳು ಒಬ್ಬ ವ್ಯಕ್ತಿಯ ಜೆಂಡರ್ ಅನ್ನು ಸೂಚಿಸುತ್ತವೆ (ಬಂಗಾಳಿ ಭಾಷೆ ಹೊರತುಪಡಿಸಿ). ಹಾಗಾಗಿ ಒಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸುವುದನ್ನು ನಾವು ಊಹೆ ಮಾಡಿದಾಗ, ಆ ವ್ಯಕ್ತಿಯ ವರ್ಗ, ಜಾತಿ, ಧರ್ಮ ಇತ್ಯಾದಿಗಳಿಗಿಂತ ಮುಂಚೆ ಮೂಲಭೂತವಾಗಿ ಆ ವ್ಯಕ್ತಿಯ ಜೆಂಡರ್ ಅನ್ನು ಊಹಿಸಿಕೊಂಡಿರುತ್ತೇವೆ. ನೀವು ಮೊದಲ ಬಾರಿಗೆ ಯಾರನ್ನಾದರೂ ಭೇಟಿಯಾದಾಗ ಮೊದಲು ಅವರ ಜೆಂಡರ್ ಅನ್ನು ಗುರುತಿಸಿ ಅವರನ್ನು ಸಂಬೋಧಿಸಲು ಯಾವ ಭಾಷೆಯನ್ನು ಬಳಸಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತೀರಿ. ಒಬ್ಬ ವ್ಯಕ್ತಿಯ ದೇಹರಚನೆ ಸಾಮಾಜಿಕವಾಗಿ ಗುರುತಿಸಿಕೊಂಡ ಗಂಡು ಅಥವಾ ಹೆಣ್ಣಿನಂತೆ ಇಲ್ಲದಿದ್ದಾಗ ಗಂಭೀರ ಸಮಸ್ಯೆ ಎದುರಾಗುತ್ತದೆ. ಅನೇಕ ಸಲ ಆ ವ್ಯಕ್ತಿಯನ್ನು ಇನ್ನಷ್ಟು ಸೂಕ್ಷ್ಮವಾಗಿ, ಉಡುಪಿನ ಒಳಗೆ ಎಂತಹ ದೇಹ ಇರಬಹುದು ಎಂದು ನೋಡಲಾಗುತ್ತದೆ. ಆಗ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳಿಗೆ ತಮ್ಮ ದೇಹದ ಜೊತೆಗೆ ಇರುವ ಮುಜುಗರ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ತಾನು ಯಾವ ಜೆಂಡರ್‍ನೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸುತ್ತಾರೋ ಆ ಜೆಂಡರ್ ಬದಲಾಗಿ ಬೇರೆ ಜೆಂಡರ್‍ನೊಂದಿಗೆ ಜನರು ಆ ವ್ಯಕ್ತಿಯನ್ನು ಗುರುತಿಸಿದಾಗ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಖಿನ್ನತೆಗೆ ಒಳಗಾಗಬಹುದು. ಇದು ಡಿಸ್‍ಫೋರಿಯಾದ ಸಾಮಾಜಿಕ ಅಂಶ.
ಹಾಗಾಗಿ ಜೆಂಡರ್ ಅನ್ನು ನೋಡುವ ರೀತಿಯಲ್ಲಿ ಬದಲಾವಣೆ ಮಾಡುತ್ತ, ಸಾಮಾಜಿಕ ಡಿಸ್‍ಫೋರಿಯಾವನ್ನು ಕಡಿಮೆ ಮಾಡಲು ನಮ್ಮ ಸಮಾಜದಲ್ಲಿ ಅನೇಕ ಅವಕಾಶಗಳಿವೆ. ಸಮಾಜವು ಜೆಂಡರ್‍ಗಳ ಮೇಲೆ ಹೇರಿದ ನಿರೀಕ್ಷೆಗಳನ್ನು ಕೆಲವರು ಪೂರ್ಣಗೊಳಿಸುತ್ತಾರೋ ಇಲ್ಲವೋ ಎನ್ನುವುದರ ಆಧಾರದ ಮೇಲೆ ಗೇಲಿ ಮಾಡುವುದನ್ನು ಬಿಡಬೇಕಿದೆ. ಸಮಾಜವು ಇಂತಹ ಅಪಹಾಸ್ಯ ಮಾಡುವುದನ್ನು ಬಿಟ್ಟರೆ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಹಾಗೂ ಸಿಸ್‍ಜೆಂಡರ್ ವ್ಯಕ್ತಿಗಳೂ ಕೂಡ ಮುಕ್ತವಾಗಿ ಸಂಚರಿಸಬಹುದು ಮತ್ತು ಜಗತ್ತನ್ನು ಸಾವಧಾನವಾಗಿ ಅನುಭವಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....