Homeಸಾಮಾಜಿಕಒಮ್ಮೆ ಕಣ್ಣು ಮುಚ್ಚಿ ಹೀಗೆ ಕಲ್ಪಿಸಿಕೊಳ್ಳಿ. ನಿಧಾನಕ್ಕೆ ಇದೇನೆಂದು ಅರ್ಥವಾಗಬಹುದು

ಒಮ್ಮೆ ಕಣ್ಣು ಮುಚ್ಚಿ ಹೀಗೆ ಕಲ್ಪಿಸಿಕೊಳ್ಳಿ. ನಿಧಾನಕ್ಕೆ ಇದೇನೆಂದು ಅರ್ಥವಾಗಬಹುದು

- Advertisement -
- Advertisement -

 ಡಾ. ಕಾರ್ತಿಕ್ ಬಿಟ್ಟು
ಕನ್ನಡಕ್ಕೆ: ರಾಜಶೇಖರ ಅಕ್ಕಿ |

ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ, ಅದರೊಂದಿಗೆ ನಿಮ್ಮ ಕೈಗಳನ್ನು ಮೇಲೆತ್ತಿ. ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ಕಾಣಿಸದಿದ್ದರೂ ನೀವು ನಿಮ್ ಕೈಗಳನ್ನು ಮೇಲಕ್ಕೆತ್ತಿದ್ದು ನಿಮಗೆ ಖಂಡಿತವಾಗಿಯೂ ಅನುಭವವಾಗುತ್ತದೆ. ನಿಮ್ಮ ಕೈಗಳು ಎಲ್ಲಿವೆ ಎನ್ನುವುದು ನಿಮಗೆ ತಿಳಿಯುತ್ತದೆ. ಹೀಗೇಕೆ ಎಂದರೆ, ನಮ್ಮ ಮಿದುಳು ದೇಹದ ಅಂಗಗಳ ಆಂತರಿಕ ಸ್ಪರ್ಶವನ್ನು ಗ್ರಹಿಸಿ, ಯಾವ ಅಂಗ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳುವಲ್ಲಿ ಸಶಕ್ತವಾಗಿದೆ.
ಯಾವುದಾದರೊಂದು ಅಪಘಾತಕ್ಕೀಡಾಗಿ ತಮ್ಮ ಕೈಯನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಈಗ ಇಲ್ಲದಿರುವ ಆ ಕೈ ಇನ್ನೂ ಅಲ್ಲಿಯೇ ಇದೆ ಎನ್ನುವ ಅನುಭವ ಆಗುತ್ತಿರುತ್ತದೆ. ಆ ಕೈ ಅಲ್ಲಿ ಇಲ್ಲದಿರುವುದನ್ನು ಅವರು ಕಾಣಬಹುದು; ಆದರೆ ದೇಹದ ನರಗಳಿಂದ ಬರುವ ಮಾಹಿತಿಯಿಂದ ಆ ಕೈ ಇನ್ನೂ ಅಲ್ಲೇ ಇದೆ ಎಂದು ಮಿದುಳಿನ ಭಾಗ ಅರ್ಥೈಸುತ್ತದೆ. ಇದು ಆ ಕೈ ಜೊತೆಗೆ ಅಲ್ಲಿಯ ನರಗಳನ್ನೂ ತೆಗೆದುಹಾಕಿದ್ದರೂ ಈ ಅನುಭವ ಆಗುತ್ತಲೇ ಇರುತ್ತದೆ. ದೇಹದಲ್ಲಿ ಒಂದು ಅಂಗ ಇರದೇ ಇದ್ದರೂ, ಒಬ್ಬ ವ್ಯಕ್ತಿಯ ದೇಹದಿಂದ ಇಲ್ಲದೇ ಇರುವ ಅಂಗವನ್ನು ಹೇಗೆ ಅನುಭವಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ.
ಕೈಗಳು, ಕಾಲುಗಳು ಹೀಗೆ ಗಂಡು ಮತ್ತು ಹೆಣ್ಣಿನ ದೇಹಗಳು ಬಹುತೇಕವಾಗಿ ಒಂದೇ ಬಗೆಯವಾಗಿರುತ್ತವೆ. ಜನನಾಂಗದ ಮತ್ತು ಎದೆಯ ಭಾಗಗಳು ಬೇರೆಯಾಗಿರುತ್ತವೆ. ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಅನುಭವವನ್ನು ತಿಳಿಯುವ ಒಂದು ವಿಧಾನವೇನೆಂದರೆ, ನಮ್ಮ ದೇಹದಲ್ಲಿ ಇರದಿರುವ ಅಥವಾ ನಮ್ಮ ದೇಹದಲ್ಲಿದ್ದ ಅಂಗಕ್ಕಿಂತ ಬೇರೆಯದೇ ಆದ ಒಂದು ಅಂಗದ ಸಂವೇದನೆಯನ್ನು ನಮ್ಮ ಮಿದುಳು ಅಪೇಕ್ಷಿಸುವುದು. ಹಾಗಾಗಿ ಒಬ್ಬ ಟ್ರಾನ್ಸ್‍ಜೆಂಡರ್ ಮಹಿಳೆ ತನಗೆ ಇಲ್ಲದಿರುವ ಸ್ತನಗಳು ಇದ್ದಂತೆ ಭಾವಿಸಬಹುದು. ಹಾಗೂ ತಮ್ಮ ದೇಹದಲ್ಲಿರುವ ಒಂದು ಅಂಗದ ಗ್ರಹಿಕೆ ಮಿದುಳಿಗೆ ಇಲ್ಲದೇ ಇದ್ದಾಗ ತಮ್ಮ ಜನನಾಂಗವನ್ನು ನೋಡಿ ಆ ವ್ಯಕ್ತಿಗಳು ಗೊಂದಲಕ್ಕೊಳಗಾಗಬಹುದು. ಅದರಂತೆ ಟ್ರಾನ್ಸ್‍ಜೆಂಡರ್ ಪುರುಷರು ಎದೆಯ ಭಾಗದಲ್ಲಿ ಒಂದು ರೀತಿಯ ಭಾರವನ್ನು ಅನುಭವಿಸಿ ಗೊಂದಲಕ್ಕೊಳಗಾಗಬಹುದು, ಏಕೆಂದರೆ ಅವರ ಮಿದುಳು ಅದನ್ನು ಅಪೇಕ್ಷಿಸುವುದಿಲ್ಲ. ಅನೇಕ ಟ್ರಾನ್ಸ್‍ಜೆಂಡರ್ ಪುರುಷರು ಪುರುಷರಿಗಿರುವ ಜನನಾಂಗಗಳು ಇರುವಂತೇ ಅನುಭವವಕ್ಕೀಡಾಗಬಹುದು. ವ್ಯಕ್ತಿಗಳ ಅನುವಂಶಿಕ ವ್ಯತ್ಯಾಸದ (genetic variation) ಆಧಾರದ ಮೇಲೆ ದೇಹ ಮತ್ತು ಮಿದುಳುಗಳೆರಡೂ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿ ಬೆಳವಣಿಗೆಯಾಗಿ, ತಮ್ಮ ದೇಹದಿಂದ ಅವರ ಮಿದುಳು ಮತ್ತು ದೇಹದ ಅಪೇಕ್ಷೆಗಳು ಬೇರೆಬೇರೆಯಾಗುವುದನ್ನು ಡಿಸ್‍ಫೋರಿಯಾ ಎಂದು ಕರೆಯುತ್ತಾರೆ.
ಇದನ್ನು ತಿಳಿದುಕೊಳ್ಳಲು ಇದನ್ನು ಊಹಿಸಿ; ನಾಳೆ ಬೆಳಗ್ಗೆ ನೀವು ನಿದ್ರೆಯಿಂದ ಎದ್ದಾಗ, ನಿಮ್ಮ ಮಿದುಳು ಮತ್ತು ಮನೋಭಾವಗಳಲ್ಲಿ ಯಾವುದೇ ಬದಲಾವಣೆ ಆಗದೆ, ನಿಮ್ಮ ಭುಜದಿಂದ ಒಂದು ಹೆಚ್ಚಿನ ಕೈ ಉದ್ಭವಿಸಿದೆ ಎಂದುಕೊಳ್ಳಿ. ಈ ಹೊಸ ಕೈ ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಮಾಡುತ್ತಿಲ್ಲ ಎಂದು ಅಂದುಕೊಳ್ಳೊಣ. ಆದರೂ ಏನೋ ಕಿರಿಕಿರಿ ಅನುಭವಿಸುತ್ತೀರಿ, ಇರಬಾರದ್ದೇಕಿದೇ ಎನ್ನುವ ತೊಂದರೆ ಇರುತ್ತದೆ. ಈ ಅಂಗದಿಂದ ನಿಮಗೆ ಉಂಟಾಗುವ ಅಸೌಖ್ಯದ ಅನುಭವವು, ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಈ ಹೊಸ ಅಂಗ ಎಷ್ಟು ಅಡ್ಡಿಪಡಿಸುತ್ತೆ ಎನ್ನುವುದರ ಜೊತೆಗೆ ನೀವು ಮುಂಚೆ ಮಾಡುತ್ತಿದ್ದ ದೈನಂದಿನ ಚಟುವಟಿಕೆಗಳನ್ನು ಹಾಗೆಯೇ ಮುಂದುವರೆಸಲು ಈ ಅಂಗದಿಂದ ಎಷ್ಟು ಅಡೆತಡೆ ಎದುರಾಗುತ್ತದೆ ಎಂಬುದನ್ನೂ ಸೇರಿ ಅವಲಂಬಿಸಿದೆ.
ಅದರ ಮೇಲೆ, ನೀವು ಎದುರಿಸುವ ಎಲ್ಲಾ ಜನರೂ ಆಶ್ಚರ್ಯ ಹಾಗೂ ಕೌತುಕದಿಂದ ಪ್ರತಿಕ್ರಿಯಿಸಿದಾಗ, ನಿಮ್ಮನ್ನು ಭೇಟಿಯಾಗುವ ಎಲ್ಲರೂ ನಿಮ್ಮ ಭುಜದಿಂದ ಈ ಕೈ ಏಕೆ ಉದ್ಭವಿಸಿದೆ ಎಂದು ಕೇಳಿದಾಗ, ನೀವು ಸಾರ್ವಜನಿಕ ಸಾರಿಗೆಯನ್ನು ಬಳಸಿದಲ್ಲಿ ನೂರಾರು ಜನರು ನಿಮ್ಮನ್ನು ನೋಡಿ ಆಶ್ಚರ್ಯ ಮತ್ತು ಕೌತುಕ ವ್ಯಕ್ತಪಡಿಸಿ, ತಮ್ಮಲ್ಲೇ ಮಾತನಾಡಿಕೊಳ್ಳುತ್ತ ನಿಮ್ಮನ್ನು ಗೇಲಿ ಮಾಡಿದಾಗ, ಇದೇನು ಎಂದು ಕೇಳಿದಾಗ, ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿ ಯಾವ ಅನುಭವಗಳಿಂದ ಹಾದು ಹೋಗಬೇಕಾಗುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ದೈಹಿಕ ಅಂಗವೈಕಲ್ಯತೆಯುಳ್ಳವರೂ ಇಂತಹ ಅನುಭವ ಹೊಂದಿರುತ್ತಾರೆ.
ಈಗ ಇನ್ನೊಂದು ಪ್ರಸಂಗವನ್ನು ಊಹಿಸಿ, ನೀವು ಬೆಳಗ್ಗೆ ಎದ್ದಾಗ, ನೀವು ಗಂಡಾಗಿದ್ದರೆ ನಿಮ್ಮ ದೇಹ ಹೆಣ್ಣಿನಂತೆ, ಹೆಣ್ಣಾಗಿದ್ದರೆ ಗಂಡಿನಂತೆ ಬದಲಾಗಿದೆ. ಜನರೊಂದಿಗೆ ವ್ಯವಹರಿಸುವಾಗ ಎಷ್ಟು ಬಾರಿ ಒಬ್ಬ ವ್ಯಕ್ತಿಯ ಜೆಂಡರ್ ಅನ್ನು ನೋಡಲಾಗುತ್ತದೆ ಹಾಗೂ ಎಷ್ಟು ಬಾರಿ ನಿಮ್ಮನ್ನು ನೋಡಿ ನಗಲಾಗುತ್ತದೆ, ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಹಾಗೂ ನಿಮ್ಮ ಗುರುತು ಮುಂಚಿನಂತೆಯೇ ಇದ್ದು, ನಿಮ್ಮ ಉಡುಪೂ ಮುಂಚಿನಂತಿದ್ದು ಹಾಗೂ ನೀವು ಮುಂಚಿನಂತೇ ವರ್ತಿಸುತ್ತಿದ್ದೀರಿ, ಆದರೆ ನಿಮ್ಮ ದೇಹ ಬದಲಾಗಿದ್ದರೆ?
ಇನ್ನು ಕೊನೆಯ ಒಂದು ಪ್ರಯೋಗ: ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಒಬ್ಬ ವ್ಯಕ್ತಿಯನ್ನು ಊಹಿಸಿ, ಒಬ್ಬ ಡಾಕ್ಟರ್ ಅಂತಿಟ್ಟುಕೊಳ್ಳಿ, ಆ ವ್ಯಕ್ತಿಯ ಜೊತೆಗೆ ಮಾತನಾಡುತ್ತಿದ್ದೀರಿ ಎಂದು ಊಹಿಸಿ. ಈಗ ಕಣ್ಣು ಬಿಡಿ. ನಿಮಗೆ ಆ ಡಾಕ್ಟರ್‍ನ ಜೆಂಡರ್ ನೆನಪಿದೆಯೇ? ಗಂಡೋ, ಹೆಣ್ಣೋ, ಎರಡೂ ಅಲ್ಲವೋ? ನಾವು ಯಾವುದೇ ವ್ಯಕ್ತಿಯೊಂದಿಗೆ ವ್ಯವಹರಿಸುವುದನ್ನು ಊಹೆ ಮಾಡಿದಾಗ, ಮೊಟ್ಟಮೊದಲಿಗೆ ಆ ವ್ಯಕ್ತಿಯ ಜೆಂಡರ್ ಅನ್ನು ಊಹಿಸುತ್ತೇವೆ. ಇದಕ್ಕೆ ನಮ್ಮ ಭಾಷೆಗಳೂ ಸಹಕರಿಸುತ್ತವೆ. ಅಧಿಕಾಂಶ ಭಾಷೆಗಳ ಸರ್ವನಾಮಗಳು ಒಬ್ಬ ವ್ಯಕ್ತಿಯ ಜೆಂಡರ್ ಅನ್ನು ಸೂಚಿಸುತ್ತವೆ (ಬಂಗಾಳಿ ಭಾಷೆ ಹೊರತುಪಡಿಸಿ). ಹಾಗಾಗಿ ಒಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸುವುದನ್ನು ನಾವು ಊಹೆ ಮಾಡಿದಾಗ, ಆ ವ್ಯಕ್ತಿಯ ವರ್ಗ, ಜಾತಿ, ಧರ್ಮ ಇತ್ಯಾದಿಗಳಿಗಿಂತ ಮುಂಚೆ ಮೂಲಭೂತವಾಗಿ ಆ ವ್ಯಕ್ತಿಯ ಜೆಂಡರ್ ಅನ್ನು ಊಹಿಸಿಕೊಂಡಿರುತ್ತೇವೆ. ನೀವು ಮೊದಲ ಬಾರಿಗೆ ಯಾರನ್ನಾದರೂ ಭೇಟಿಯಾದಾಗ ಮೊದಲು ಅವರ ಜೆಂಡರ್ ಅನ್ನು ಗುರುತಿಸಿ ಅವರನ್ನು ಸಂಬೋಧಿಸಲು ಯಾವ ಭಾಷೆಯನ್ನು ಬಳಸಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತೀರಿ. ಒಬ್ಬ ವ್ಯಕ್ತಿಯ ದೇಹರಚನೆ ಸಾಮಾಜಿಕವಾಗಿ ಗುರುತಿಸಿಕೊಂಡ ಗಂಡು ಅಥವಾ ಹೆಣ್ಣಿನಂತೆ ಇಲ್ಲದಿದ್ದಾಗ ಗಂಭೀರ ಸಮಸ್ಯೆ ಎದುರಾಗುತ್ತದೆ. ಅನೇಕ ಸಲ ಆ ವ್ಯಕ್ತಿಯನ್ನು ಇನ್ನಷ್ಟು ಸೂಕ್ಷ್ಮವಾಗಿ, ಉಡುಪಿನ ಒಳಗೆ ಎಂತಹ ದೇಹ ಇರಬಹುದು ಎಂದು ನೋಡಲಾಗುತ್ತದೆ. ಆಗ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳಿಗೆ ತಮ್ಮ ದೇಹದ ಜೊತೆಗೆ ಇರುವ ಮುಜುಗರ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ತಾನು ಯಾವ ಜೆಂಡರ್‍ನೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸುತ್ತಾರೋ ಆ ಜೆಂಡರ್ ಬದಲಾಗಿ ಬೇರೆ ಜೆಂಡರ್‍ನೊಂದಿಗೆ ಜನರು ಆ ವ್ಯಕ್ತಿಯನ್ನು ಗುರುತಿಸಿದಾಗ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಖಿನ್ನತೆಗೆ ಒಳಗಾಗಬಹುದು. ಇದು ಡಿಸ್‍ಫೋರಿಯಾದ ಸಾಮಾಜಿಕ ಅಂಶ.
ಹಾಗಾಗಿ ಜೆಂಡರ್ ಅನ್ನು ನೋಡುವ ರೀತಿಯಲ್ಲಿ ಬದಲಾವಣೆ ಮಾಡುತ್ತ, ಸಾಮಾಜಿಕ ಡಿಸ್‍ಫೋರಿಯಾವನ್ನು ಕಡಿಮೆ ಮಾಡಲು ನಮ್ಮ ಸಮಾಜದಲ್ಲಿ ಅನೇಕ ಅವಕಾಶಗಳಿವೆ. ಸಮಾಜವು ಜೆಂಡರ್‍ಗಳ ಮೇಲೆ ಹೇರಿದ ನಿರೀಕ್ಷೆಗಳನ್ನು ಕೆಲವರು ಪೂರ್ಣಗೊಳಿಸುತ್ತಾರೋ ಇಲ್ಲವೋ ಎನ್ನುವುದರ ಆಧಾರದ ಮೇಲೆ ಗೇಲಿ ಮಾಡುವುದನ್ನು ಬಿಡಬೇಕಿದೆ. ಸಮಾಜವು ಇಂತಹ ಅಪಹಾಸ್ಯ ಮಾಡುವುದನ್ನು ಬಿಟ್ಟರೆ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಹಾಗೂ ಸಿಸ್‍ಜೆಂಡರ್ ವ್ಯಕ್ತಿಗಳೂ ಕೂಡ ಮುಕ್ತವಾಗಿ ಸಂಚರಿಸಬಹುದು ಮತ್ತು ಜಗತ್ತನ್ನು ಸಾವಧಾನವಾಗಿ ಅನುಭವಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...