HomeUncategorizedಗದಗ್ ನಲ್ಲಿ ನಡೆದ ಕಲಾಶಿಬಿರದಲ್ಲಿ ಯುದ್ಧ ಮತ್ತು ಸ್ವಾತಂತ್ರ್ಯ: ಹಿಟ್ಲರ್‍ಗೆ ಪಿಕಾಸೋ ಮುಖಾಮುಖಿ

ಗದಗ್ ನಲ್ಲಿ ನಡೆದ ಕಲಾಶಿಬಿರದಲ್ಲಿ ಯುದ್ಧ ಮತ್ತು ಸ್ವಾತಂತ್ರ್ಯ: ಹಿಟ್ಲರ್‍ಗೆ ಪಿಕಾಸೋ ಮುಖಾಮುಖಿ

- Advertisement -
- Advertisement -

| ಮಲ್ಲನಗೌಡರ್ |
ಇಲ್ಲಿ ಫ್ಯಾಸಿಸಂ ಮತ್ತು ಯುದ್ಧಗಳಿಗೆ ಮಾನವೀಯತೆ ಮತ್ತು ಅಂತ:ಕರಣ ಮುಖಾಮುಖಿಯಾಗುತ್ತಿದೆ,,,, ದೇಶದ ಜನರ ಸಂಕಟವನ್ನು ಕೆಲವೇ ಗೆರೆಗಳ ಮೂಲಕ ಮನದಾಳಕ್ಕೆ ತಟ್ಟಿಸಿ ಎಚ್ಚರಿಸುವ ಯತ್ನ ನಡೆದಿದೆ.

ಗದಗಿನಲ್ಲಿ ಇವತ್ತು ಫ್ಯಾಸಿಸ್ಟ್ ಹಿಟ್ಲರ್‍ಗೆ ಜೀವಪರ ನಿಲುವಿನ ಕಲಾವಿದ ಪಿಕಾಸೋ ಮುಖಾಮುಖಿಯಾಗಿ ಗೆದ್ದಿದ್ದಾರೆ. ಮೇ 4, 5 ರಂದು ಗದಗಿನಲ್ಲಿ ನಡೆಯುತ್ತಿರುವ 6ನೇ ಮೇ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ, ಪೂರಕವಾಗಿ ಇಂದು ಚಿತ್ರಕಲಾ ಶಿಬಿರದ ಚಾಲನೆಯಾಗಿದೆ.

ಹೋರಾಟಕ್ಕೆ ಕತ್ತಿ, ಚೂರಿ, ಬಂದೂಕೂ ಬೇಕಿಲ್ಲ, ಸಂವಿಧಾನವೇ ನಮ್ಮ ಹೋರಾಟದ ಅಸ್ಸ್ತ್ರ ಎಂದು ಶಿಬಿರಕ್ಕೆ ಚಾಲನೆ ನೀಡಿದ ಖ್ಯಾತ ಕಲಾವಿದ ರಾ. ಸೂರಿ ಹೇಳಿದರು. ಅವರು ಹೇಳಿದ್ದಕ್ಕಿಂತ ಹೆಚ್ಚಿನದನ್ನು ಅವರು ಬಿಡಿಸಿದ ಚಿತ್ರ ಹೇಳುತ್ತಿತ್ತು! ಕಲೆಯ ಶಕ್ತಿಯೇ ಅದಲ್ಲವೇ?

ಹಿಟ್ಲರ್ ಬಂದೂಕು ಗಿ/s ಪಿಕಾಸೋ ಚಿತ್ರ!
ಮೇ ಸಾಹಿತ್ಯ ಸಮ್ಮೇಳನಕ್ಕೆ ಪೂರಕವಾಗಿಯೇ ನಡೆದಿರುವ ಈ ಕಲಾ ಶಿಬಿರದಲ್ಲಿ ಹಿಟ್ಲರ್ ಬಂದಿದ್ದು ಆತನಿಗೆ ಎದುರಾಗಿ ಕಲಾವಿದ ಪಿಕಾಸೋ ನಿಂತಿದ್ದು ಆಶ್ಚರ್ಯವೇನೂ ಅಲ್ಲ. ಈ ಸಲದ ಸಮ್ಮೇಳನದ ಥೀಮೇ ಭ್ರಮಾತ್ಮಕ ಭಾರತ ಗಿ/s ವಾಸ್ತವ ಭಾರತ… ಅಂದರೆ ಅಭಿವೃದ್ಧಿ ಭಾರತ: ಕವಲು ದಾರಿಗಳ ಮುಖಾಮುಖಿ…

ಶಿಬಿರಕ್ಕೆ ಚಾಲನೆ ನೀಡಿದ ರಾ. ಸೂರಿ ಸಂವಿಧಾನದ ಮಹತ್ವದ ಕುರಿತು ಬಿಡಿಸಿದ ಚಿತ್ರ ಸಾಕಷ್ಟು ಸಂಚಲನೆ ಉಂಟು ಮಾಡಿತು. ನಂತರ ಮಾತಾಡಿದ ಪ್ರೇಮಾ ಹಂದಿಗೋಳರು ಮೂಲಭೂತ ಸೌಕರ್ಯ ಮತ್ತು ಸ್ವಾತಂತ್ರ್ಯ ಇದ್ದಾಗಲಷ್ಟೇ ಕಲಾವಿದ ಶಕ್ತಿಶಾಲಿ ಮೆಸೇಜ್ ಕೊಡಬಲ್ಲ ಎಂದರು.

ಶೀಬಿರದ ನಿದೇರ್ಶಕ ಭರಮಗೌಡರು ಹಿಟ್ಲರ್ ಮತ್ತು ಶ್ರೇಷ್ಠ ಕಲಾವಿದ ಪಿಕಾಸೋನನ್ನು ಚರ್ಚೆಗೆ ಎಳೆ ತಂದರು. ಯುದ್ಧದ ಭೀಕರತೆಯನ್ನು, ಸಾವುನೋವನ್ನು ನೋಡಲಾಗದೇ ತತ್ತರಿಸಿದ ಪಿಕಾಸೋ ಮನೆ ಬಾಗಿಲು ಹಾಕಿಕೊಂಡು ಯುದ್ಧದ ಕ್ರೌರ್ಯವನ್ನು ಖಂಡಿಸುವ ಮತ್ತು ಜಗತ್ತಿಗೆ ಅಗತ್ಯವಾದ ಮಾನವೀಯತೆಯನ್ನು ಬೆಂಬಲಿಸುವ ಶ್ರೇಷ್ಠ ಚಿತ್ರಗಳನ್ನು ಬರೆದ ಎಂದರು.

ಶಿಬಿರದ ಇನ್ನೊಬ್ಬ ನಿರ್ದೇಶಕ ವಿಜಯ ಕಿರೇಸೂರು ಈ ವಿಷಯವನ್ನು ಇನ್ನಷ್ಟು ವಿಸ್ತರಿಸಿದರು. ಹಿಟ್ಲರ್ ಒಬ್ಬ ಒಳ್ಳೆ ಕಲಾವಿದ… ಕಲಾವಿದನೂ ಮೃಗನಾಗಬಲ್ಲ ಎಂಬುದಕ್ಕೆ ಅವನೇ ಸಾಕ್ಷಿ ಎಂದರು. ‘ ಚಿತ್ರ ಪ್ರದರ್ಶನದಲ್ಲಿ ಪಿಕಾಸೋ ಬಿಡಿಸಿದ ಯುದ್ಧದ ಕ್ರೌರ್ಯ ಕುರಿತ ಚಿತ್ರಗಳನ್ನು ನೋಡುವಾಗ, ಇದನ್ನು ಯಾರು ರಚಿಸಿದ್ದು ಎನ್ನುತ್ತಾನೆ ಹಿಟ್ಲರ್. ಆಗ ಪಕ್ಕದಲ್ಲೇ ಇದ್ದ ಪಿಕಾಸೋ ‘ನೀವೇ’ ಎನ್ನುವ ಮೂಲಕ ಮಾರ್ಮಿಕ ಉತ್ತರ ನೀಡಿದರು ಎಂಬುದನ್ನು ಕಿರೇಸೂರು ವಿವರಿಸಿದರು.

ಮೇ ಸಾಹಿತ್ಯ ಸಮ್ಮೇಳನ ಹೀಗೆ ಯುದ್ಧ ವಿರೋಧಿಯಾಗಿ, ಸೌಹಾರ್ದದ ಬೆಂಬಲಿಗನಾಗಿ ಈಗಷ್ಟೇ ಶುರುವಾಗಿದೆ. ಮೇ 4, 5 ರಂದು ಈ ಚಿತ್ರಗಳ ಮಾತಿನ ಬದಲು ವ್ಯಕ್ತಿಗಳ ಮಾತನ್ನು ಕೇಳಲು ಗದಗದಲ್ಲಿ ಸೇರೋಣ. ಬನ್ನಿ….
ಬನ್ನಿ ಗದಗಿಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...