Homeಅಂಕಣಗಳುಕೃಷಿ ಕಾರ್ಮಿಕನ ಗೋಳು ದೊಡ್ಡದು

ಕೃಷಿ ಕಾರ್ಮಿಕನ ಗೋಳು ದೊಡ್ಡದು

- Advertisement -
- Advertisement -

ಹೆಚ್.ಎಸ್.ದೊರೆಸ್ವಾಮಿ |

ವ್ಯವಸಾಯ ಪ್ರಧಾನ ದೇಶ ಭಾರತ. ನೂರಕ್ಕೆ 60 ಜನ ಇಂದಿಗೂ ಗ್ರಾಮಗಳಲ್ಲೇ ವಾಸ ಮಾಡುತ್ತಿದ್ದಾರೆ. ಅವರು ತಾವು ಬೆಳೆದು ತಿಂದು ದೇಶದ ಎಲ್ಲ ಜನಕ್ಕೂ ಆಹಾರ ಪದಾರ್ಥಗಳನ್ನು ಒದಗಿಸುತ್ತಿದ್ದಾರೆ. ಇತ್ತೀಚೆಗೆ ಹೆಚ್ಚು ಭೂಮಿ ಇರುವವರು ದಿನಗೂಲಿ 500-600 ಕೊಟ್ಟು ವ್ಯವಸಾಯ ಮಾಡಿಸಲು ಆಗುತ್ತಿಲ್ಲ. ಅದರಿಂದ ಅವರು ತಮ್ಮ ಮನೆಗೆ ಬೇಕಾದಷ್ಟು ಆಹಾರ ಪದಾರ್ಥಗಳನ್ನು ಬೆಳೆದುಕೊಂಡು ಉಳಿದ ಭೂಮಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಆಹಾರ ಧಾನ್ಯ ಪೂರೈಕೆ ಕಷ್ಟವಾಗುತ್ತಿದೆ. ಒಂದು ಎರಡು ಎಕರೆ ಜಮೀನುಳ್ಳವರು ನೂರಕ್ಕೆ 60 ಜನ ಇದ್ದು, ಇವರು ಬೆಳೆಯುವ ಬೆಳೆ ಇವರ ಜೀವನ ನಿರ್ವಹಣೆಗೇ ಬೇಕಾಗುತ್ತದೆ. ಇವರ ಕೈಗೆ ಇನ್ನಷ್ಟು ಜಮೀನು ಒದಗಿಸಿದರೆ ಮಾತ್ರ ಈ ದೇಶದ ಜನರ ಆಹಾರ ಪೂರೈಕೆಯ ಕೆಲಸ ಸುಸೂತ್ರವಾಗಿ ನಡೆಯುತ್ತದೆ.
ಈ ಬಡ ರೈತರ ಕೈಗೆ ಇನ್ನಷ್ಟು ಜಮೀನು ಕೊಡ ಮಾಡಬೇಕಿದ್ದರೆ, ಈಗಿನ ಸೀಲಿಂಗ್ ಮಿತಿಯನ್ನು ಇಳಿಸಬೇಕು. ಆದಾಗಬೇಕಾದರೆ ಭೂಸುಧಾರಣೆ ಶಾಸನವನ್ನು ಪುನಃ ಪರಿಶೀಲಿಸಬೇಕು. ಸರ್ಕಾರ ಈ ಸುಧಾರಣೆಗೆ ಕೈ ಹಾಕದಿದ್ದರೆ. ನಮ್ಮ ಸರ್ಕಾರ ಇತರೆ ರಾಷ್ಟ್ರಗಳ ಹತ್ತಿರ ಭಿಕ್ಷಾಪಾತ್ರೆ ಹಿಡಿದುಕೊಂಡು ಹೀಗೆ ಅವರ ಬಾಗಿಲಲ್ಲಿ ನಿಲ್ಲಬೇಕಾಗುತ್ತದೆ. ವ್ಯವಸಾಯ ಪ್ರಧಾನವಾದ ಭಾರತ. ಆಹಾರ ಪದಾರ್ಥಗಳಿಗಾಗಿ ಬೇರೆ ದೇಶಗಳಿಗೆ ಜೋಳಿಗೆ ಹಿಡಿದು ಹೋಗುವುದು ಅಪಮಾನ. ಆದ್ದರಿಂದ ಭೂಮಿತಿ ಶಾಸನವನ್ನು ಪುನಃ ಪರಿಶೀಲಿಸುವುದು ಅತ್ಯಗತ್ಯ. ಸರ್ಕಾರ ಈ ಕೆಲಸವನ್ನು ಮಾಡದಿದ್ದರೆ ಇದಕ್ಕಾಗಿ ಬಡರೈತರು ತಮ್ಮ ಉಳಿವಿಗಾಗಿ ಹೋರಾಟ ಮಾಡುವುದು ಅನಿವಾರ್ಯ.
ಆಹಾರ ಧಾನ್ಯಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರ ಮಾಡುವ ಹೊರದೇಶಗಳ ಕಂಪೆನಿಗಳು ಈಗ ಭಾರತಕ್ಕೆ ಲಗ್ಗೆ ಇಡುತ್ತಿವೆ. ವಾಲ್‍ಮಾರ್ಟ್, ಮೆಟ್ರೋ ಮುಂತಾದ ಬೃಹತ್ ಪ್ರಮಾಣದ ಮಳಿಗೆಗಳು ಭಾರತದ ಎಲ್ಲ ಪಟ್ಟಣಗಳಿಗೆ, ಜಿಲ್ಲಾ ಮುಖ್ಯಸ್ಥಳಗಳಿಗೆ ಬಂದಿವೆ. ಇದರ ಜೊತೆ ಜೊತೆಗೆ ಭಾರತೀಯ ಬಂಡವಾಳಗಾರರೂ ಬಿಗ್‍ಬಜಾರ್‍ನಂತಹ ಮಳಿಗೆ ಸಮುಚ್ಚಯಗಳನ್ನು ಅಲ್ಲಲ್ಲಿ ಸ್ಥಾಪಿಸಲು ತೊಡಗಿದ್ದಾರೆ. ಇವರೆಲ್ಲರ ದಾಳಿಯಿಂದಾಗಿ ಸಣ್ಣ-ಪುಟ್ಟ ಆಹಾರ ಧಾನ್ಯ ಪೂರೈಕೆಯ ಅಂಗಡಿಗಳು ಮಾಯವಾಗುತ್ತಿವೆ. ಇವೆಲ್ಲ ಸಣ್ಣ-ಪುಟ್ಟ ಅಂಗಡಿಗಳೂ ಈ ಬ್ರಹ್ಮರಾಕ್ಷಸನ ಹೊಟ್ಟೆಯೊಗಳಗೆ ಸೇರಿ ಹೋಗಿವೆ. ಜಿಲ್ಲರೆ ಅಂಗಡಿ ನಡೆಸುತ್ತಿದ್ದ ಸಹಸ್ರಾರು ಮಂದಿ ಈ ಪೈಪೋಟಿ ಎದುರಿಸಲಾಗದೆ ಬೀದಿಪಾಲಾಗಿದ್ದಾರೆ. ನಮ್ಮ ಸರ್ಕಾರಗಳೇ ಈ ಮಾರ್ಟ್‍ಗಳನ್ನು ಆಹ್ವಾನಿಸುತ್ತವೆ. ಅವರಿಗೆ ಬೇಕಾದಷ್ಟು ಭೂಮಿ, ಜಲ, ವಿದ್ಯುತ್ ಎಲ್ಲವನ್ನೂ ಒದಗಿಸುತ್ತವೆ.
ಭಾರತದ ರೈತರಲ್ಲೂ ಈಗ ಎರಡು ಬಣಗಳಾಗಿವೆ. ಮೊದಲನೆಯ ಬಣ ದೆಹಲಿಗೆ ಮುತ್ತಿಗೆ ಹಾಕಿ, ಬ್ಯಾಂಕ್ ಸಾಲಮನ್ನಾ ಮಾಡಿ, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಬೆಳೆಗಳಿಗೆ ಸಬ್ಸಿಡಿ ಕೊಡಿ ಮುಂತಾದ ಬೇಡಿಕೆಗಳನ್ನು ಇಟ್ಟರೆ, ಶಿರ್ಡಿಯಲ್ಲಿ ಸಮಾವೇಶಗೊಂಡ ರೈತಸಂಘಟನೆಗಳು ಅದಕ್ಕೆ ವ್ಯತಿರಿಕ್ತವಾದ ಬೇಡಿಕೆಗಳನ್ನು ಇಟ್ಟವು. ಅವರೇನು ಹೇಳಿದರೆಂಬುದು ನೋಡಿದರೆ, ಕೆಲವು ರೈತರ ಪರವಾಗಿಯೇ ಇದ್ದಾವೆ ಎನಿಸಿದರೂ, ನಿಧಾನಕ್ಕೆ ಬೇರೆಯದೇ ಅಜೆಂಡಾ ಇರುವುದು ಅರಿವಾಗುತ್ತಾ ಹೋಗುತ್ತವೆ.
ಅವೆಂದರೆ ರೈತರಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಡಿ, ರೈತರನ್ನು ಸರ್ಕಾರದ ಬಂಧನದಿಂದ ಬಿಡುಗಡೆ ಮಾಡಿ ರೈತ ತುಂಬ ತೊಂದರೆಯಲ್ಲಿದ್ದಾಗ ಅವನ ಮೇಲೆ ಸಲ್ಲದ ಸುಧಾರಣೆಗಳನ್ನು ತಂದು ಹೇರಬೇಡಿ, ಸಾಲಮನ್ನಾ ಒಂದೇ ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ, ಆದ್ದರಿಂದ ಸರ್ಕಾರದ ಖಜಾನೆ ಖಾಲಿಯಾಗುತ್ತದೆ. ಹೀಗೇ ಮುಂದುವರಿದರೆ ಸಾಲ ಮಾಡುವ ರೈತ ಸಾಲ ಮಾಡುವುದು ತನ್ನ ಹಕ್ಕು ಅದನ್ನು ತೀರಿಸುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಲು ಎಡೆಮಾಡಿಕೊಡುತ್ತದೆ. ಅಲ್ಲದೆ ಸಾಲಮನ್ನಾದ ಲಾಭ ಬಹುಸಂಖ್ಯೆಯಲ್ಲಿರುವ ಒಂದು ಎರಡು ಎಕರೆ ಜಮೀನುಳ್ಳವರಿಗೆ ಖಂಡಿತ ಸಿಗುವುದಿಲ್ಲ. ಶ್ರೀಮಂತ ರೈತರಿಗೆ ಲಕ್ಷಗಟ್ಟಲೆ ಲಾಭ ಆಗುವುದಾದರೆ ಬಡ ರೈತನಿಗೆ ಸಾವಿರ, ಎರಡು ಸಾವಿರ ಕೂಡ ಸಿಗುವುದಿಲ್ಲ. ರೈತರ ರ್ಯಾಲಿಯ ಈ ಮಾತುಗಳನ್ನು ಒಪ್ಪಿಕೊಳ್ಳಬಹುದು. ಆದರೆ ಅಲ್ಲಿ ವ್ಯಕ್ತವಾದ ಇನ್ನು ಕೆಲವು ಸಲಹೆಗಳು ಬಡ ರೈತನ್ನು ಬೀದಿಪಾಲು ಮಾಡುವ ಸಂಚಿನಂತೆ ತೋರುತ್ತದೆ. ಹೆಚ್ಚಿನ ಸ್ವಾತಂತ್ರ್ಯವನ್ನು ರೈತರಿಗೆ ನೀಡಿ ಎಂದು ಸರ್ಕಾರಕ್ಕೆ ತಿಳಿಸುತ್ತಾ ಹೆಚ್ಚಿನ ಬಂಡವಾಳ, ವ್ಯವಸಾಯ ಕ್ಷೇತ್ರಕ್ಕೆ ಹರಿದು ಬರುವಂತಾಗಬೇಕು ಎಂಬ ಸಲಹೆಯನ್ನು ಮಾಡಲಾಗಿದೆ. ವ್ಯವಸಾಯ ಕ್ಷೇತ್ರದಿಂದ ರಾಷ್ಟ್ರದ ಬೊಕ್ಕಸಕ್ಕೆ ಶೇ.14ರಷ್ಟು ಮಾತ್ರ ಆದಾಯ ಬರುತ್ತದೆ. ಆದರೆ ಭಾರತದ ಒಟ್ಟು ಕಾರ್ಮಿಕರ ಸಂಖ್ಯೆಯ ಅರ್ಧದಷ್ಟು ಕಾರ್ಮಿಕರು ಗ್ರಾಮೀಣ ಭಾರತದಲ್ಲೇ ಕೆಲಸ ಮಾಡುವವರು.
ಆದರೆ ವ್ಯವಸಾಯ ಕ್ಷೇತ್ರದಿಂದ ಹೊರಗಿರುವ ಕಾರ್ಮಿಕ ಗ್ರಾಮೀಣ ಕಾರ್ಮಿಕನಿಗಿಂತ ಮೂರು ಪಟ್ಟು ಹೆಚ್ಚಿನ ವರಮಾನ ಪಡೆಯುತ್ತಾನೆ. ಗ್ರಾಮೀಣ ಕಾರ್ಮಿಕನಿಗೆ ಪಟ್ಟಣದ ಕಾರ್ಮಿಕರಿಗೆ ಸಿಗುವಷ್ಟು ಆದಾಯ ದೊರಕಬೇಕಾದರೆ ಕೆಲವು ಸುಧಾರಣೆಗಳನ್ನ ವ್ಯವಸಾಯ ಕ್ಷೇತ್ರದಲ್ಲಿ ತರಬೇಕಾಗುವುದು. ಈ ಸುಧಾರಣೆಗಳನ್ನು ಜಾರಿಗೊಳಿಸಲು ಸ್ವಲ್ಪ ಕಾಲಾವಕಾಶ ಬೇಕಾಗಿರುವುದರಿಂದ ಕೂಡಲೇ ಮಾಡಬೇಕಾದ ಕೆಲಸವೆಂದರೆ ವ್ಯವಸಾಯಗಾರನನ್ನು ಸರ್ಕಾರ ಬಂಧಮುಕ್ತನನ್ನಾಗಿ ಮಾಡಬೇಕು. ರೈತ ಬೆಳೆದ ಬೆಳೆಗೆ ತಾನೇ ಬೆಲೆ ನಿರ್ಧರಿಸುವಂತಾಗಬೇಕು. ತನಗೆ ಬೇಕಾದವರಿಗೆ ತನ್ನ ಜಮೀನನ್ನು ಮಾರಿಕೊಳ್ಳುವ ಮತ್ತು ಬೇರೆಯವರಿಗೆ ವರ್ಗಾಯಿಸುವ ಅಧಿಕಾರ ರೈತನಿಗೆ ಇರಬೇಕು. ಭೂಮಿ ಕಾಯ್ದೆಯನ್ನು ರದ್ದು ಮಾಡಬೇಕು. ವ್ಯವಸಾಯ ಮಾಡಲಾಗುತ್ತಿರುವ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ಅವಕಾಶವಿರಬೇಕು. ಈ ವಿಚಾರದಲ್ಲಿ ಸರ್ಕಾರದ ನಿರ್ಬಂಧಗಳು ಹಾಗೂ ಭ್ರಷ್ಟಾಚಾರ ಇರಕೂಡದು. ಈ ಸುಧಾರಣೆಗಳಲ್ಲಿ ಬೆಳೆದ ಬೆಳೆಗಳಿಗೆ ಅನಿರ್ಬಂಧಿತ ರಫ್ತು ಅವಕಾಶ ಇರಬೇಕು. ಫಾರಂಗಳಲ್ಲಿ ವ್ಯವಸಾಯೋತ್ಪನ್ನಗಳನ್ನು ಬೆಳೆಯುವ ಕಂಪನಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿ ಬಹಳ ಮುಂದಿವೆ. ಅವು ಫಾರಂಗಳ ಒಕ್ಕೂಟ ರಚಿಸಿ, ಅದರ ಆಡಳಿತವನ್ನು ನಡೆಸುವ ಕೌಶಲ್ಯವನ್ನು ಹೊಂದಿವೆ. ಆ ಮೂಲಕ ರೈತರಿಗೆ ಹೆಚ್ಚಿನ ಲಾಭ ದೊರಕಿಸಲೂ ಸಾಧ್ಯವಾಗುತ್ತದೆ. ಆದರೆ ಈ ಕಂಪೆನಿಗಳು ತಮ್ಮ ಮೇಲೆ ಸರ್ಕಾರ ಹೇರುವ ತೆರಿಗೆಗಳಿಂದ ಮುಕ್ತಿ ಪಡೆಯಬೇಕು ಮತ್ತು ಸರ್ಕಾರ ಇಂತಹ ಕಂಪೆನಿಗಳು ಅಸ್ತಿತ್ವಕ್ಕೆ ಬರಲು ನೆರವು ನೀಡಬೇಕು ಮತ್ತು ಬೆಳೆಯ ಮೇಲಿನ ತೆರಿಗೆಗಳನ್ನು ರದ್ದು ಮಾಡಬೇಕು. ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ರೈತರು ಬಡವರಾಗಿ ಉಳಿದಿಲ್ಲ. ಭಾರತದಲ್ಲೂ ಈ ಬಗೆಯ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂದು ಅಭಿಪ್ರಾಯಪಡಲಾಗಿದೆ. ಶಿರಡಿಯಲ್ಲಿ ಸಮಾವೇಶಗೊಂಡ ಈ ರೈತರು ಶ್ರೀಮಂತ ವರ್ಗದವರು ಮತ್ತು ಬಂಡವಾಳ ಶಾಹಿಗಳ ಬಾಲಬಡುಕರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಪಟ್ಟಭದ್ರ ಹಿತಾಸಕ್ತಿಯನ್ನು ಕಾಯುವ ಈ ಬಾಲಬಡುಕ ರೈತಮುಖಂಡರು ಒಂದು ಎಕರೆ ಎರಡು ಎಕರೆ ಹೊಂದಿರುವ ¨ಡ ರೈತರ ಜಮೀನುಗಳನ್ನೆಲ್ಲ ಕೊಂಡುಕೊಳ್ಳಲು ಆ ಶ್ರೀಮಂತ ಕಂಪೆನಿಗಳನ್ನು ಬಳಸಿಕೊಳ್ಳಬಹುದು. ಆ ಮೂಲಕ ಕನ್ಸಾಲಿಡೇಷನ್ ಆಫ್ ಹೋಲ್ಡಿಂಗ್ಸ್‍ಗೆ ಕೈ ಹಾಕಬಹುದು. ಆ ಮೂಲಕ ಗ್ರಾಮೀಣ ಬಡರೈತರನ್ನು ಬೀದಿಪಾಲು ಮಾಡಬಹುದು. ಬಡ ರೈತರ ಕೈಯಲ್ಲಿ ಜಮೀನಿರುವುದನ್ನು ಶ್ರೀಮಂತ ಕಂಪೆನಿಗಳು ಸಹಿಸುವುದಿಲ್ಲ. ಅದಕ್ಕೆ ಕಾರಣವೇನೆಂದರೆ ಈ ಬಡರೈತರಿಂದ ಅವರಿಗೆ ಏನೂ ಪ್ರತಿಫಲ ಸಿಗುವುದಿಲ್ಲ. ಅಲ್ಲದೆ ಈ ಬಡ ರೈತರನ್ನು ಭೂರಹಿತರನ್ನಾಗಿ ಮಾಡಿದರೆ, ಅವರೆಲ್ಲರೂ ಶ್ರೀಮಂತ ರೈತರ ಜಮೀನುಗಳಲ್ಲಿ ದಿನಗೂಲಿಗಳಾಗಿ ಕೆಲಸಕ್ಕೆ ಸೇರಬಹುದು. ಅವರ ದುಡಿಮೆಯ ಲಾಭವನ್ನು ಶ್ರೀಮಂತ ರೈತರು ಹಾಗೂ ಬಂಡವಾಳ ಹೂಡುವ ಕಾರ್ಪೊರೇಟ್ ಕಂಪನಿಗಳು ಲಪಟಾಯಿಸಬಹುದು ಎಂಬುದು ಅವರ ಲೆಕ್ಕಾಚಾರ.
ನಮ್ಮ ಶ್ರೀಮಂತ ರೈತರು ತಿಳಿಯಬೇಕಿರುವುದೇನೆಂದರೆ ಭಾರತ ಅಮೆರಿಕಾ ಅಲ್ಲ. ಅಮೆರಿಕಾ ಒಂದು ಔದ್ಯೋಗಿಕ ದೇಶ. ಅಲ್ಲಿ ವ್ಯವಸಾಯ ಮಾಡುವವರ ಸಂಖ್ಯೆ ಬಹಳ ಕಡಿಮೆ. ವ್ಯವಸಾಯದಲ್ಲಿ ತೊಡಗುವ ಹಿಡಿ ಮಂದಿಗೆ ಸಾವಿರ ಸಾವಿರ ಎಕರೆ ಜಮೀನು ಇರುತ್ತದೆ. ಇವರಿಗೆ ವ್ಯವಸಾಯ ಕೂಲಿಗಳು ಸಿಗುವುದು ದುರ್ಲಭ. ಇದರಿಂದಾಗಿ ಅಲ್ಲಿಯ ರೈತರು ಉಳುವುದಕ್ಕೆ ಕಳೆಕೀಳುವುದಕ್ಕೆ, ಪೈರು ಕಟಾವು ಮಾಡುವುದಕ್ಕೆ, ಕಾಳು ಒಣಗಿಸುವುದಕ್ಕೆ ಹೀಗೆ ಎಲ್ಲಕ್ಕೂ ಯಂತ್ರಗಳನ್ನು ಅವಲಂಬಿಸಬೇಕು. ಅವಿಲ್ಲದೆ ವ್ಯವಸಾಯವೇ ಸಾಧ್ಯವಿಲ್ಲ.
ಭಾರತ ವ್ಯವಸಾಯ ಪ್ರಧಾನ ದೇಶ. ಜನಸಂಖ್ಯೆ ಅಧಿಕವಾಗಿರುವ ದೇಶ. ಅಷ್ಟೇ ಅಲ್ಲ ಭಾರತದ ಹಳ್ಳಿಗಳಲ್ಲಿ ಒಟ್ಟು ಜನಸಂಖ್ಯೆಯ ಶೇ.60ರಿಂದ 70 ಜನ ವಾಸಿಸುತ್ತಾರೆ. ಇವರಲ್ಲಿ ಒಂದು ಎರಡು ಎಕರೆ ಜಮೀನುಳ್ಳವರು ಹಾಗೂ ವ್ಯವಸಾಯ ಕಾರ್ಮಿಕರು ಗ್ರಾಮೀಣ ಜನಸಂಖ್ಯೆಯ ಶೇ.60 ಜನ ಇದ್ದಾರೆ. ಇಷ್ಟು ಅಪಾರ ಸಂಖ್ಯೆಯ ನಿರುದ್ಯೋಗಿ ರೈತಾಪಿಗಳಿಗೆ ಗ್ರಾಮಗಳಲ್ಲೆ ಕೆಲಸ ಒದಗಿಸುವುದು ಸಾಧ್ಯವಿಲ್ಲ. ಹಾಗೆಂದು ಅವರನ್ನೆಲ್ಲ ನಗರಗಳಿಗೆ ಅಟ್ಟಿದರೆ ಅಲ್ಲಿ ಅವರಿಗೆಲ್ಲ ಜೀವನ ನಿರ್ವಹಣೆಗೆ ಬೇಕಾದಷ್ಟು ವರಮಾನ ದೊರಕಿಸುವುದಾದರೂ ಹೇಗೆ?
ಹಳ್ಳಿಯಲ್ಲೇ ಉಳಿಯುವ ಸಂಕಲ್ಪ ಮಾಡುವ ಈ ನತದೃಷ್ಟರಿಗೆಲ್ಲಾ ಶ್ರೀಮಂತ ರೈತರು, ಅವರ ಬೆಂಬಲಕ್ಕೆ ನಿಂತ ಕಾರ್ಪೊರೇಟ್ ಕಂಪನಿಗಳು ಅವರ ಹೊಟ್ಟೆ ತುಂಬುವಷ್ಟು ವೇತನವನ್ನು ಕೊಟ್ಟು ಪೂರೈಸಬಲ್ಲವೇ? ಕನ್ಸಾಲಿಡೇಷನ್ ಆಫ್ ಹೋಲ್ಡಿಂಗ್ ಮಾಡಿದ ಮೇಲೆ ಅಮೆರಿಕಾದಂತೆ ಭಾರತದಲ್ಲಿಯೂ ವ್ಯವಸಾಯ ಮಾಡಲು ಎಲ್ಲಾ ಹಂತದಲ್ಲೂ ಯಂತ್ರಗಳನ್ನೇ ಬಳಸುವುದು ಅನಿವಾರ್ಯವಾಗುತ್ತದೆ. ಯಂತ್ರಗಳನ್ನು ಎಲ್ಲಾ ಹಂತದಲ್ಲೂ ಬಳಸಿದ ಮೇಲೆ ಗ್ರಾಮಗಳಲ್ಲಿರುವ ಈ ನಿರುದ್ಯೋಗಿಗಳಿಗÉಲ್ಲ ದುಡಿಯಲು ಅವಕಾಶ ಕೊಡುವುದು ಸಾಧ್ಯವಿಲ್ಲದ ಮಾತು.
ಒಟ್ಟಿನಲ್ಲಿ ಈ ಪಟ್ಟಭದ್ರ ಹಿತಾಸಕ್ತಿಗಳು ಅಂದುಕೊಂಡಂತೆ ವ್ಯವಸಾಯ ಕ್ಷೇತ್ರದಲ್ಲಿ ಈ ಕ್ರಾಂತಿಯಾದಲ್ಲಿ ಹಳ್ಳಿಗಳಲ್ಲಿ ಉಳ್ಳವರು ಮತ್ತು ಬಡವರ ಮಧ್ಯೆ ಒಂದು ವಿಪ್ಲವ ನಡೆಯಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...