Homeಅಂಕಣಗಳುನಕಲಿ ಲಿಂಗಾಯತ ನಾಯಕನನ್ನು ಬಲೆಗೆ ಕೆಡವಿದ 'ಶರಣ'!

ನಕಲಿ ಲಿಂಗಾಯತ ನಾಯಕನನ್ನು ಬಲೆಗೆ ಕೆಡವಿದ ‘ಶರಣ’!

- Advertisement -
- Advertisement -

ವಿಶ್ವರಾಧ್ಯ ಸತ್ಯಂಪೇಟೆ |
ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನು ಉಂಟು ಮಾಡಿದ ಧ್ವನಿ ಸುರುಳಿಯ ಕರ್ತೃ ಶರಣಗೌಡ ಕಂದಕೂರ ಗುರುಮಿಠಕಲ್ ಕ್ಷೇತ್ರದಿಂದ ಗೆದ್ದು ಬಂದ ನಾಗಣ್ಣಗೌಡ ಕಂದಕೂರ ಅವರ ಪುತ್ರ. ಕಂದಕೂರ ಕುಟುಂಬ ವರ್ಗದವರಿಗೆ ದೇವೇಗೌಡರು ಎಂದೆಂದೂ ಸನಿಹವೆ. ಶರಣಗೌಡರ ದೊಡ್ಡಪ್ಪ ಲಿಂ.ಸದಾಶಿವರೆಡ್ಡಿ ಕಂದಕೂರ ಅಂದರೆ ಪಂಚಪ್ರಾಣ. ಯಾದಗಿರಿಗೆ ಗೌಡರು ಆಗ ಯಾವಾಗ ಬಂದರೂ ಸದಾಶಿವರೆಡ್ಡಿಯವರನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ. ಸದಾಶಿವರೆಡ್ಡಿ ಜನತಾ ಪಕ್ಷ ಪಾಳೆಯದಲ್ಲಿ ಹಿಂದಿನಿಂದಲೂ ಗುರುತಿಸಿಕೊಂಡಿದ್ದರು. ಯಾದಗಿರಿ ಮತ ಕ್ಷೇತ್ರದ ಶಾಸಕರಾಗಿದ್ದ ಕೆಲವು ಕಾಲ ಮಂತ್ರಿಯಾಗಿದ್ದ ವಿಶ್ವನಾಥರೆಡ್ಡಿ ಮುದ್ನಾಳರ ಒಡನಾಟವಿದ್ದರೂ ತಮ್ಮದೆ ಅಸ್ತಿತ್ವ ಹೊಂದಿದವರು. ಸಣ್ಣ ಪುಟ್ಟ ಗಿಮಿಕ್ ಮಾಡದೆ ನೇರ ನಿಷ್ಠುರ ಗುಣಗಳನ್ನು ಬೆಳೆಸಿಕೊಂಡು ಜನ ಮನ್ನಣೆ ಗಳಿಸಿಕೊಂಡಿದ್ದವರು. ಬಹುಶಃ ಇದನ್ನು ಗುರುತಿಸಿದ್ದ ದೇವೇಗೌಡರು ಯಾದಗಿರಿಗೆ ಯಾವಾಗ ಬಂದರೂ ಸದಾಶಿವರೆಡ್ಡಿಯವರನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ.

ಈ ಸದಾಶಿವರೆಡ್ಡಿಯವರ ತಮ್ಮ ನಾಗಣ್ಣಗೌಡ ಕಂದಕೂರ ಅವರ ಮಗನೆ ಶರಣಗೌಡ ಕಂದಕೂರ. ಗುರುಮಿಠಕಲ್ ಮತಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಸೋತು ಹೋಗಿದ್ದ ನಾಗಣ್ಣಗೌಡರ ಗೆಲುವಿಗೆ ಮುಖ್ಯ ಕಾರಣವೆ ಶರಣಗೌಡ ಕಂದಕೂರ. ಕೇವಲ 37 ವರ್ಷ ವಯಸ್ಸಿನವನಿದ್ರೂ ಮತಕ್ಷೇತ್ರದ ಉದ್ದಕ್ಕೂ ಪಾದರಸದಂತೆ ಓಡಾಡಿ ತಮ್ಮ ಕುಟುಂಬದ ಪ್ರಭಾವ ಉಂಟು ಮಾಡಿದ್ದಾನೆ.

ಕಳೆದ ಎರಡು ವಿಧಾನಸಭೆಯ ಚುನಾವಣೆಯಲ್ಲಿ ಅಲ್ಲಿನ ಬಾಬುರಾವ್ ಚಿಂಚನಸೂರ ಎಂಬ ವ್ಯಕ್ತಿಯಿಂದ ಸೋತು ಸುಣ್ಣವಾಗಿದ್ದ ನಾಗಣ್ಣಗೌಡ ಕಂದಕೂರ ಮತ್ತೆ ಚಿಗುರುವಂತೆ ಮಾಡಿದ್ದೇ ಈ ಶರಣಗೌಡನ ಸಂಘಟನಾ ಚತುರತೆ. ನಾಗಣ್ಣಗೌಡರ ತೂಕದ ಮಾತು ಹಾಗೂ ಗಟ್ಸ್ ಒಂದೆಡೆ ಕೆಲಸ ಮಾಡಿದ್ದರೆ ಇನ್ನೊಂದೆಡೆ ಶರಣಗೌಡನ ಕ್ಷೇತ್ರದ ಪಾದಯಾತ್ರೆಗಳೂ ಪ್ಲಸ್ ಪಾಯಿಂಟ್ ಆದವು. ಎರಡು ಬಾರಿ ನೆಲ ಕಚ್ಚಿ ಇನ್ನೇನು ಮೂರನೆ ಬಾರಿ ಕಂದಕೂರ ಕುಟುಂಬ ನೆಲ ಕಚ್ಚಿಯೇ ಹೋಗುತ್ತದೆ ಎಂದು ರಾಜಕೀಯ ನಾಯಕರು ಎಣಿಕೆ ಹಾಕಿದಾಗ ಮತದಾರನ ಕರುಣಾ ದೃಷ್ಟಿ ಇವರ ಮೇಲೆ ಬಿತ್ತು. ಸಾಡೆ ಸಾತಿಯಂತೆ ಗುರುಮಿಠಕಲ್ ಮತಕ್ಷೇತ್ರಕ್ಕೆ ಗಂಟು ಬಿದ್ದಿದ್ದ ಚಿಂಚನಸೂರ ಬಾಬುರಾವ್ ನೇಪಥ್ಯಕ್ಕೆ ಸರಿಯಬೇಕಾಯಿತು.

ಮೂರನೆ ಸಲ ಗುರುಮಿಠಕಲ್ ಕ್ಷೇತ್ರದಲ್ಲಿ ನಿಲ್ಲಲು ದೇವೇಗೌಡರ ಜನತಾದಳ ನಾಗಣ್ಣಗೌಡ ಕಂದಕೂರರಿಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಿದೆ. ಈ ಸಹಕಾರ ಇಂದು ನಿನ್ನೆಯದಲ್ಲ. ಹೀಗಾಗಿ ನಾಗಣ್ಣಗೌಡ ಕಂದಕೂರ ಆತನ ಮಗ ಶರಣಗೌಡ ಮತ್ತು ಮುಖ್ಯಮಂತ್ರಿ ಕುಮಾರ ಸ್ವಾಮಿಗಳು ಬೀಸಿದ ಬಲೆಯಲ್ಲಿ ಯಡಿಯೂರಪ್ಪ ಸಿಕ್ಕು ಹಾಕಿಕೊಂಡಿದ್ದಾನೆ. ಯಡಿಯೂರಪ್ಪನ ಮುಖ್ಯಮಂತ್ರಿಯ ಕನಸಿಗೆ ಬ್ರೇಕ್ ಹಾಕದೆ ಹೋದರೆ ಕುಮಾರಣ್ಣನ ಸರಕಾರ ಉರುಳಿ ಹೋಗುತ್ತದೆಂಬುದು ಯಾರಾದರೂ ಊಹಿಸಬಹುದಾಗಿತ್ತು. ಕುದುರೆಗಳು ಹೇಗೂ ಖರೀದಿಗೆ ಸಿಗುತ್ತವೆ ಎಂಬ ಖಾತ್ರಿಯಲ್ಲಿದ್ದ ಯಡಿಯೂರಪ್ಪ ಹೈಕಮಾಂಡ್‌ನಿಂದ ಗ್ರಿನ್ ಸಿಗ್ನಲ್ ಪಡೆದು ತನ್ನ ಕೈಚಳ ಆರಂಭಿಸಿದ್ದರು. ಇದರಿಂದ ಕಾಂಗ್ರೆಸ್ ಹಾಗೂ ದಳದ ಮೈತ್ರಿ ಸರಕಾರ ತನ್ನ ಅಸ್ತಿತ್ವಕ್ಕಾಗಿ ಯಡ್ಡಿಯನ್ನು ಖೆಡ್ಡಾದಲ್ಲಿ ಕೆಡವಲು ಸಖತ್ ಗೇಮ್ ಆಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...