Homeಮುಖಪುಟನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ಈ ಎಂಟು ಲಕ್ಷಣಗಳು ಯಾವುದೇ ತರಹದ ದೌರ್ಬಲ್ಯವನ್ನು ತೋರಿಸುವುದಿಲ್ಲ, ಕೇವಲ ವ್ಯಕ್ತಿತ್ವದ ವೈಶಿಷ್ಠ್ಯವನ್ನು ತಿಳಿಸುತ್ತದೆ. ಈ ಗುಣಲಕ್ಷಣಗಳನ್ನು ಆ ವ್ಯಕ್ತಿ ಅರಿತು ಅದನ್ನು ತನ್ನ “ಶಕ್ತಿ”ಯನ್ನಾಗಿಸಿಕೊಳ್ಳಬಹುದು ಅಥವಾ ಅವರಿಗೆ ಇದು ತನ್ನ ದೌರ್ಬಲ್ಯ ಎಂದು ಅನಿಸಿದಲ್ಲಿ ಅದನ್ನು ತಿದ್ದಿಕೊಳ್ಳಲೂಬಹುದು.

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ವ್ಯಕ್ತಿತ್ವ ವಿಕಸನ 1- ಮೈಯರ್ಸ್-ಬ್ರಿಗ್ಸ್ ಟೈಪ್ ಇಂಡಿಕೇಟರ್

ನಾನು ನನ್ನ ಹಿಂದಿನ ಲೇಖನದಲ್ಲಿ “ಜೀವನಾವಶ್ಯಕ ಕಲೆ” ಬಗ್ಗೆ ತಿಳಿಸುತ್ತಾ, ವಿಶ್ವ ಆರೋಗ್ಯ ಸಂಸ್ಥೆ ಹೆಸರಿಸಿರುವ  10 ಕಲೆಗಳ ಪೈಕಿ ಮೊದಲನೆಯದಾದ “ಸ್ವ-ಅರಿವು” (ಸೆಲ್ಫ್ ಅವೇರ್ನೆಸ್) ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೆ. ಈ ಜೀವನಾವಶ್ಯಕ ಕಲೆಗಳು ನಮಗೆ ಜೀವನದ ಉದ್ದಕ್ಕೂ ಬೇಕಾಗುತ್ತದೆ. ಆದ್ದರಿಂದ ಇದನ್ನು ಚಿಕ್ಕಂದಿನಲ್ಲಿಯೇ ಕಲಿತರೂ ಸಹ, ಸಾಯುವವರೆಗೂ ಬಳಸುತ್ತಿರಬೇಕು. ಇದರಿಂದ ನಾವು ನಿರಂತರ ಲಾಭ ಪಡೆಯಬಹುದು. ಸ್ವ-ಅರಿವನ್ನು ಸ್ವಲ್ಪ ಆಳಕ್ಕಿಳಿಸಿದಾಗ ಓರ್ವ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಇದನ್ನು ಪರ್ಸನಾಲಿಟಿ ಟ್ರೇಟ್ (Personality Trait) ಎಂದು ಕರೆಯುತ್ತಾರೆ. ಇದರ ಬಗ್ಗೆ ಸುದೀರ್ಘವಾಗಿ ಅಧ್ಯಯನ/ಅನುಸಂಧಾನ ನಡೆಸಿರುವ ಮನೋವೈಜ್ಞಾನಿಕರು ಮತ್ತು ಸಾಮಾಜಿಕ ಶಾಸ್ತ್ರಜ್ಞರು ವ್ಯಕ್ತಿಗಳಲ್ಲಿ ಮುಖ್ಯವಾಗಿ ಎಂಟು ಗುಣಲಕ್ಷಣವನ್ನು ಗುರುತಿಸಿದ್ದಾರೆ. ಇವುಗಳು ಒಂದು ರೀತಿಯಲ್ಲಿ ವಿರೋಧಾಭಾಸ ಅಥವಾ ಜೋಡಿಗಳು ಎಂಬಂತೆಯೂ ಕಾಣುತ್ತವೆ: ಈ ಎಂಟಕ್ಕೆ ಸೂಚಕವಾಗಿ ಒಂದು ಇಂಗ್ಲೀಷ್ ಅಕ್ಷರವನ್ನೂ ಸೇರಿಸಿದ್ದಾರೆ.

1. ಅಂತರ್ಮುಖಿ (ಇನ್ಟ್ರೊವರ್ಟ್)    -I                   2. ಬಹಿರ್ಮುಖಿ (ಎಕ್ಸ್ಟ್ರೊವರ್ಟ್)     – E

3. ಸೂಕ್ಷ್ಮವೇದಿ (ಸೆನ್ಸಿಟಿವ್)         – S                 4. ಸಹಜ ಜ್ಞಾನಿ (ಇನ್ಟ್ಯೂಟಿವ್)      – N

5. ಯೋಚನಾಶೀಲ (ಥಿಂಕಿಂಗ್)     – T                 6. ಸಂವೇದನಾಶೀಲ (ಫೀಲಿಂಗ್)   – F

7. ತೀರ್ಪುಗಾರ (ಜಡ್ಜಿಂಗ್)           – J                 8. ಗ್ರಹಿಕಾಶಕ್ತಿಯ (ಪರ್ಸೆಪ್ಟಿವ್)      – P

ಒಂದು ಗುಣಲಕ್ಷಣ ಪ್ರಮುಖವಾಗಿದ್ದಾಗ ಅದರ ಜೊತೆಗೆ ಮಿಕ್ಕ ಜೋಡಿಗಳ ಪೈಕಿ ಒಂದನ್ನು ಸೇರಿಸಿ ರಚಿಸಿದ ಹದಿನಾರು ಸಂಯೋಗ ಗುಂಪುಗಳನ್ನು ಮೈಯ್ಯರ್ಸ್-ಬ್ರಿಗ್ಸ್ ಟೈಪ್ ಇಂಡಿಕೇಟರ್ (MBTI) ಎನ್ನುತ್ತಾರೆ. ಇದು ಸಂಪೂರ್ಣ ವೈಜ್ಞಾನಿಕ ತತ್ವವಾದ ಎನ್ನಲು ಬರುವುದಿಲ್ಲ, ಆದರೂ ಸಾಕಷ್ಟು ಪ್ರಚಲಿತವಿರುವ ಅರೆ-ವೈಜ್ಞಾನಿಕ ತತ್ವವಾದ ಎನ್ನಲು ಅಡ್ಡಿಯಿಲ್ಲ. ಈ ನಾಲ್ಕು ಅಕ್ಷರದ ಹಣೆಪಟ್ಟಿ ವಿಶ್ಲೇಷಣೆಯಿಂದ ಓರ್ವ ವ್ಯಕ್ತಿಯ ವ್ಯಕ್ತಿತ್ವ ಏನು ಎಂಬುದನ್ನು ಬಹಳಷ್ಟು ಮಟ್ಟಿಗೆ ಗ್ರಹಿಸಬಹುದು. ಇದರ ಬಗ್ಗೆ ಮುಂದೆ ತಿಳಿಸುತ್ತೇನೆ. MBTI ರಚಿಸಿದ ಶ್ರೇಯ ಕ್ಯಾಥರೀನ್ ಕುಕ್ ಬ್ರಿಗ್ಸ್ ಮತ್ತು ಅವರ ಮಗಳು ಇಸಬೆಲ್ ಬ್ರಿಗ್ಸ್ ಮೈಯ್ಯರ್ಸ್ ಅವರಿಗೆ ಸಲ್ಲುತ್ತದೆ. ಇದು ಮೂಲತಃ ಕಾರ್ಲ್ ಜಂಗ್ ಎಂಬ ಸ್ವಿಸ್ ಮನೋವಿಜ್ಞಾನಿಯ ತತ್ವವಾದದ ಮೇಲೆ ಆಧರಿಸಲ್ಪಟ್ಟಿವೆ. ಕಾರ್ಲ್ ಜಂಗ್ ಪ್ರಕಾರ ಮನುಷ್ಯರಲ್ಲಿ ಸೂಕ್ಷ್ಮತೆ, ಸಹಜ ಜ್ಞಾನ, ಸಂವೇದನೆ ಮತ್ತು ಯೋಚನಾಶಕ್ತಿ ಎಂಬ ನಾಲ್ಕು ಗುಣ-ಲಕ್ಷಣಗಳು, ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ. ಮೇಲೆ ಹೆಸರಿಸಿದ ಎಂಟು ಗುಣ-ಲಕ್ಷಣಗಳನ್ನು ಪ್ರತ್ಯೇಕವಾಗಿ ನೋಡಿದಾಗ:

1. ಅಂತರ್ಮುಖಿ: ಇವರು ಹೆಚ್ಚು ಸಂಘಜೀವಿಗಳಲ್ಲ. ಇವರಿಗೆ ಜನ ಸಂಪರ್ಕಕ್ಕಿಂತ ಒಂಟಿತನ ಹೆಚ್ಚು ಪ್ರಿಯ. ಇವರಿಗೆ ಬೇರೆಯವರೊಂದಿಗೆ ಮಾತುಕತೆ, ಚರ್ಚೆ ಬೇಕಿಲ್ಲ. ಇದು ಒಂದು ರೀತಿಯ ಮನೋದೌರ್ಬಲ್ಯ ಅಥವಾ ರೋಗವಲ್ಲ, ಕೇವಲ ಅವರ ಆಯ್ಕೆ. ತಮಗೆ ಬೇಕಾದ ವಿಷಯದ ಚರ್ಚೆ ನಡೆಯುತ್ತಿದ್ದಾಗ ಇವರು ಇದ್ದಕ್ಕಿದ್ದಂತೆ ಬಹಿರ್ಮುಖಿಯಾಗಿ ಭಾಗವಹಿಸಲೂಬಹುದು ಆದರೆ ಹೆಚ್ಚಾಗಿ ಮೌನವಾದಿ.

2. ಬಹಿರ್ಮುಖಿ: ಅಂತರ್ಮುಖಿಯ ತದ್ವಿರುದ್ಧ, ಇವರಿಗೆ ಯಾವಾಗಲೂ ಜನರ ಜೊತೆ ಇರಬೇಕು. ಏನೇ ಮಾತುಕತೆ ಇರಲಿ, ಚರ್ಚೆ ಇರಲಿ, ಇವರು ಸದಾ ಸಿದ್ಧ. ಇವರಿಗೆ ಒಂಟಿತನ ಇಷ್ಟವಿಲ್ಲ. ಪಕ್ಕದಲ್ಲಿ ಗುರುತಿಲ್ಲದವರಿದ್ದರೂ ಅವರನ್ನು ತಾವಾಗಿಯೇ ಮಾತನಾಡಿಸುತ್ತಾರೆ. ಇವರೂ ಸಹ ತಮಗೆ ಇಷ್ಟವಿಲ್ಲದ ವಿಷಯದ ಚರ್ಚೆ ಬಂದಾಗ ಅಂತರ್ಮುಖಿಯಾಗಿ ಸುಮ್ಮನಿರಲೂಬಹುದು ಆದರೆ ಹೆಚ್ಚಾಗಿ ಮಾತುಗಾರರು.

3. ಸೂಕ್ಷ್ಮವೇದಿ: ಇವರು ಬಹಳ ಸೂಕ್ಷ್ಮ ಸ್ವಭಾವದವರು ಹಾಗಾಗಿ ಯಾವುದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇವರು ಉದ್ವೇಗಕ್ಕೆ ಬೇಗ ಒಳಗಾಗುತ್ತಾರೆ.

4. ಸಹಜಜ್ಞಾನಿ: ಇವರು ಹೇಳದೆಯೇ ಎಲ್ಲವನ್ನೂ ಅರ್ಥಮಾಡಿಕೊಳ್ಳಬಲ್ಲರು. ಹೀಗಾಗುತ್ತದೆ ಎಂದು ಇವರಿಗೆ ಮೊದಲೇ ಅನುಮಾನವಿರುತ್ತದೆ.

5. ಯೋಚನಾಶೀಲ: ಇವರು ಎಲ್ಲವನ್ನೂ ಬಹಳ ಗಂಭೀರವಾಗಿ, ಮಾಹಿತಿ ಸಂಗ್ರಹಿಸಿ, ಆಳವಾಗಿ ಯೋಚಿಸುತ್ತಾರೆ.

6. ಸಂವೇದನಾಶೀಲ: ಇವರು ಇನ್ನೊಬ್ಬರ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ.

7. ತೀರ್ಪುಗಾರ: ಇವರು ಇನ್ನೊಬ್ಬರ ಬಗ್ಗೆ ತಮ್ಮ ಅಭಿಪ್ರಾಯವನ್ನು ಸದಾ ಘೋಷಿಸುತ್ತಿರುತ್ತಾರೆ. ಉದಾ: ಯಾರೋ ಒಬ್ಬರು ಹೇಳಿದ್ದು ಸರಿ ಇಲ್ಲ ಎಂದು ಇವರಿಗೆ ಅನಿಸಿದಲ್ಲಿ ಅವರಿಗೆ ಇವರು “ನೀವು ಹೇಳಿದ್ದು ತಪ್ಪು” ಎಂದು ನೇರವಾಗಿ ಉತ್ತರಿಸುತ್ತಾರೆ.

8. ಗ್ರಹಿಕಾಶಕ್ತಿಯ ವ್ಯಕ್ತಿ: ಇವರು ತಮ್ಮ ಅನಿಸಿಕೆಯನ್ನು ಅನಿಸಿದಂತೆ ತಿಳಿಸಿದರೂ ಸಹ ಇನ್ನೊಬ್ಬರ ಬಗ್ಗೆ ಅದನ್ನು “ತೀರ್ಪು” ಎಂದು ಘೋಷಿಸುವುದಿಲ್ಲ. ಉದಾ: ಯಾರೋ ಒಬ್ಬರು ಹೇಳಿದ್ದು ಸರಿ ಇಲ್ಲ ಎಂದು ಇವರಿಗೆ ಅನಿಸಿದಲ್ಲಿ ಅವರು “ನೀವು ಹೇಳಿದ್ದು ತಪ್ಪು” ಎಂದು ಹೇಳದೆ, ”ನೀವು ಹೇಳಿದ್ದು ನನಗೆ ತಪ್ಪು ಎಂದು ಅನಿಸುತ್ತದೆ” ಎಂದು ಹೇಳುತ್ತಾರೆ ಹಾಗಾಗಿ, ತೀರ್ಪುಗಾರರಲ್ಲ.

ಈ ಎಂಟು ಲಕ್ಷಣಗಳು ಯಾವುದೇ ತರಹದ ದೌರ್ಬಲ್ಯವನ್ನು ತೋರಿಸುವುದಿಲ್ಲ, ಕೇವಲ ವ್ಯಕ್ತಿತ್ವದ ವೈಶಿಷ್ಠ್ಯವನ್ನು ತಿಳಿಸುತ್ತದೆ. ಹೀಗೆ ಜನರನ್ನು ಪ್ರತ್ಯೇಕಿಸಿ “ಗೂಡಿನೊಳಗೆ ಸೇರಿಸು”ವುದರಿಂದ ಏನು ಪ್ರಯೋಜನ ಎಂದು ನೀವು ಕೇಳಬಹುದು. ಈ ಗುಣಲಕ್ಷಣಗಳನ್ನು ಆ ವ್ಯಕ್ತಿ ಅರಿತು ಅದನ್ನು ತನ್ನ “ಶಕ್ತಿ”ಯನ್ನಾಗಿಸಿಕೊಳ್ಳಬಹುದು ಅಥವಾ ಅವರಿಗೆ ಇದು ತನ್ನ ದೌರ್ಬಲ್ಯ ಎಂದು ಅನಿಸಿದಲ್ಲಿ ಅದನ್ನು ತಿದ್ದಿಕೊಳ್ಳಲೂಬಹುದು. ಉದಾ: ಅಂತರ್ಮುಖಿ ವ್ಯಕ್ತಿ ಪ್ರಯತ್ನಪಟ್ಟು ಬಹಿರ್ಮುಖಿಯಾಗಲೂ ಬಹುದು. ಇದರಿಂದ ವ್ಯಕ್ತಿಗೆ ತನ್ನ ಗುಣಲಕ್ಷಣಗಳಿಗೆ ಹೊಂದುವಂತಹ ಜೀವನೋಪಾಯ/ವೃತ್ತಿ, ಅಧ್ಯಯನ ಮಾರ್ಗ ಆರಿಸಿಕೊಳ್ಳಲು ಸಹಕಾರಿಯಾಗುತ್ತದೆ.

MBTI ತರಹದ್ದೇ ಇನ್ನೊಂದು ಪ್ರಚಲನೆಯಲ್ಲಿರುವ ವ್ಯಕ್ತಿತ್ವ ವಿಶ್ಲೇಷಣೆ ಬಿಗ್-ಫೈವ್ ಅಥವಾ ಒಷನ್ (OCEAN) ಮಾಡೆಲ್. ಇವೆರಡರ ಬಗ್ಗೆ ಮುಂದೊಮ್ಮೆ ತಿಳಿಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...