Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಬೇಯುವ ಭೂಮಿಯನ್ನು ಉಳಿಸುವುದು ಎಲ್ಲರ ಕರ್ತವ್ಯ

ಬೇಯುವ ಭೂಮಿಯನ್ನು ಉಳಿಸುವುದು ಎಲ್ಲರ ಕರ್ತವ್ಯ

- Advertisement -
- Advertisement -

ನಿನ್ನೆ ದೆಹಲಿಯಲ್ಲಿ ಅತ್ಯಂತ ಹೆಚ್ಚು ಮಾಲಿನ್ಯವಿತ್ತೆಂದು ಇಂದಿನ ದಿನಪತ್ರಿಕೆಗಳು ಬರೆದಿವೆ. ಇದರಿಂದ ಜನರು ಕಂಗಾಲಾಗಿದ್ದಾರೆಂದೂ ವರದಿಯಲ್ಲಿ ಹೇಳಲಾಗಿದೆ. ವಾಸ್ತವದಲ್ಲಿ ಜನರೇನೂ ಕಂಗಾಲಾಗಿಲ್ಲ. ಏಕೆಂದರೆ, ಇದು ಇದ್ದಕ್ಕಿದ್ದಂತೆ ಒಂದು ದಿನ ಸಂಭವಿಸಿದ ವಿಕೋಪವಲ್ಲ. ಪ್ರವಾಹ, ಸುನಾಮಿ, ಭೂಕಂಪದಂತಹ ಕೆಲವು ಪ್ರಾಕೃತಿಕ ವಿಕೋಪಗಳು ಉಂಟುಮಾಡುವ ಪರಿಣಾಮದ ಸ್ವರೂಪ ಬೇರೆ. ಒಳಗೊಳಗೇ ಶಿಥಿಲಗೊಳಿಸುವ ಬರ, ಪರಿಸರ ಮಾಲಿನ್ಯಗಳ ಪರಿಣಾಮದ ಸ್ವರೂಪ ಬೇರೆ. ನಿಧಾನಕ್ಕೆ ಹೆಚ್ಚಾಗುತ್ತಾ ಹೋಗುವ ಎರಡನೆಯ ಬಗೆಯ ಸಮಸ್ಯೆಗಳಿಗೆ ಜನರು ಹೊಂದಿ ಕೊಳ್ಳುತ್ತಾ ಹೋಗುತ್ತಾರೆ. ಅವರಲ್ಲಿ ಅಂತಹ ‘ಕಂಗಾಲು’ ಉಂಟಾ ಗುವುದಿಲ್ಲ. ಸದರಿ ವರದಿಯನ್ನು ಬರೆದ ವರದಿಗಾರರಿಗೂ ಕಂಗಾಲು ಉಂಟಾಗಿರುವುದಿಲ್ಲ; ತನ್ನ ಕರ್ತವ್ಯದ ಭಾಗವಾಗಿ ಬರೆದ ವರದಿಯಾಗಿರುತ್ತದೆ. ಇಲ್ಲವೇ ಗಮನ ಸೆಳೆಯುವ ದೃಷ್ಟಿಯಿಂದ ಪರಿಣಾಮ ಬೀರುವ ಪದಗಳನ್ನು ಬಳಸಬೇಕೆಂಬ ಉದ್ದೇಶ ಅವರದ್ದಾಗಿರುತ್ತದೆ.
ಇದಕ್ಕೆ ಕಾರಣವಿದೆ. ಈಗಾಗಲೇ ಚಾಲ್ತಿಯಲ್ಲಿರುವ ಉದಾಹರಣೆಯೊಂದರ ಮೂಲಕ ಅದನ್ನು ವಿವರಿಸಬಹುದು. ನೀವು ಕಪ್ಪೆಯೊಂದನ್ನು ಬಿಸಿ ನೀರಿಗೆ ಹಾಕಿದಲ್ಲಿ ಅದು ಕೂಡಲೇ ನೆಗೆದು ಅಲ್ಲಿಂದ ತಪ್ಪಿಸಿಕೊಳ್ಳುತ್ತದೆ. ಆದರೆ, ತಣ್ಣೀರಿನ ಪಾತ್ರೆಯಲ್ಲಿ ಅದನ್ನು ಇಟ್ಟು ತಳವನ್ನು ನಿಧಾನಕ್ಕೆ ಬಿಸಿ ಮಾಡುತ್ತಾ ಹೋದಲ್ಲಿ, ತಾನು ಬೆಂದು ಹೋಗುವವರೆಗೂ ಅದು ಸುಮ್ಮನೇ ಇರುತ್ತದೆ.
ಈ ರೀತಿ ಬೇಯುವ ಸ್ಥಿತಿಗೆ ಭೂಮಿ ಬರುತ್ತಿದೆ ಎಂದು ಹಲವು ತಜ್ಞರು ಹೇಳುತ್ತಿದ್ದಾರೆ. ಅದನ್ನು ಸೂಚಿಸುತ್ತಿರುವ ಹಲವು ಸಂಗತಿಗಳನ್ನೂ ಅವರು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಇನ್ನೂ ಎಲ್ಲವೂ ಮುಗಿದು ಹೋಗಿಲ್ಲ ಎಂಬ ಸಮಜಾಯಿಷಿಯನ್ನು ನೀಡುತ್ತಾ, ಭೂಮಿಯನ್ನು ಮತ್ತಷ್ಟು ಸಂಕಷ್ಟಕ್ಕೆ ಒಡ್ಡುವ ಕೆಲಸ ನಡೆಯುತ್ತಲೇ ಇದೆ. ಉದಾಹರಣೆಗೆ ಕಾವೇರಿಗೆ ಅಡ್ಡಲಾಗಿರುವ ಕಟ್ಟಿರುವ ಕೆಆರ್‍ಎಸ್ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ಉಂಟಾದ ಕಂಪನಗಳು, ಅಣೆಕಟ್ಟೆಯ ಪಕ್ಕದಲ್ಲೇ ಸ್ಥಾಪನೆಯಾಗಿರುವ ಕಂಪನ ಮಾಪನ ಕೇಂದ್ರದವರೆಗೂ ಹೋಗಿ ಅಲ್ಲಿ ದಾಖಲಾಗಿವೆ. ಆದರೆ, ಆ ಕಂಪನದಿಂದ ಅಣೆಕಟ್ಟೆಗೆ ಯಾವುದೇ ಧಕ್ಕೆಯಾಗಿಲ್ಲವೆಂಬ ವರದಿಯನ್ನು ಇಟ್ಟುಕೊಂಡು ಗಣಿಗಾರಿಕೆ ಮುಂದುವರೆಸುವ ಸನ್ನಾಹಗಳು ಜಾರಿಯಲ್ಲಿವೆ. ಹಾಗಾದರೆ, ಒಮ್ಮೆ ಅಣೆಕಟ್ಟೆಗೆ ಧಕ್ಕೆಯಾದ ಮೇಲೆಯೇ ನಾವು ಎಚ್ಚೆತ್ತುಕೊಳ್ಳಬೇಕೆಂಬುದು ಅದರ ಅರ್ಥವೇ?
ಇಂತಹ ಅದೆಷ್ಟೋ ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು. ಒಟ್ಟಿನಲ್ಲಿ ಮನುಷ್ಯರು ಸಾಂದ್ರವಾಗಿ ಜೀವನ ನಡೆಸುವ ಎಲ್ಲೆಡೆ ಪ್ರಕೃತಿಯಲ್ಲಿ ಭಾರೀ ಪ್ರಮಾಣದ ಏರುಪೇರುಗಳುಂಟಾಗುತ್ತವೆ. ಅವರು ಬಳಸಿ ಎಸೆಯುವ ತ್ಯಾಜ್ಯದ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ, ಅದನ್ನೂ ದಾಟಿ ನೋಡಿದರೆ, ಇದು ‘ಜೀವನ’ದ ಪ್ರಶ್ನೆ ಅಷ್ಟೇ ಅಲ್ಲ. ಈ ರೀತಿಯ ನಗರೀಕರಣ ಹೆಚ್ಚಾದರೆ, ಭೂಮಿಯನ್ನು ಬೇಯಿಸುತ್ತಲೇ ಹೋಗುವ ಅಭಿವೃದ್ಧಿ ಹೆಚ್ಚಾಗುತ್ತಾ ಹೋದರೆ ಜಿಡಿಪಿ ಹೆಚ್ಚಾಗುತ್ತದೆ. ಹಾಗಾಗಿ ಜಿಡಿಪಿ ಹೆಚ್ಚಳದ ಹಿಂದೆ ಬಿದ್ದಿರುವ, ಕೆಲವು ಕಂಪೆನಿಗಳ ಲಾಭ ಹೆಚ್ಚಿಸುವ ಅಭಿವೃದ್ಧಿಯನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳ ಕೂಟ ಬೆಂಬಲಿಸುತ್ತಾ ಹೋಗುತ್ತದೆ. ಅಂತಿಮವಾಗಿ ಇನ್ನು ತಡೆದುಕೊಳ್ಳುವುದು ಸಾಧ್ಯವೇ ಇಲ್ಲ ಎನಿಸಿದಾಗ, ದೂರದ ಕಾಡಿನಲ್ಲಿರುವ ಜನರಿಗೆ ಕಾಡನ್ನು ರಕ್ಷಿಸುವ ಹೊಣೆ ವಹಿಸಲಾಗುತ್ತದೆ. ಅಲ್ಲಿ ಉಳಿದುಕೊಳ್ಳುವ ಕಾಡು, ಇನ್ನೆಲ್ಲೋ ನಡೆಯುತ್ತಿರುವ ಉತ್ಪಾತವನ್ನು ತಡೆಗಟ್ಟುವ ವಿಪರೀತದ ಪರಿಸರ ಸಮತೋಲನದ ಯೋಜನೆಗಾಗಿ ವರದಿಗಳು ತಯಾರಾಗುತ್ತವೆ.
ಒಂದಲ್ಲಾ ಒಂದು ರೀತಿಯಲ್ಲಿ ಕಸ್ತೂರಿ ರಂಗನ್ ವರದಿ ಅದೇ ಆಗಿದೆ. ಪಶ್ಚಿಮಘಟ್ಟ ಏನು ಮಾಡಬೇಕು ಎಂದು ನೀಡಲಾಗುತ್ತಿರುವ ವರದಿಗಿಂತ, ಈ ನಗರಗಳಲ್ಲಿ ಏನು ಮಾಡಬೇಕು ಎಂಬ ವರದಿಗಳು ಬರಬೇಕು ಮತ್ತು ಅವನ್ನು ಉಲ್ಲಂಘಿಸಲೇಬಾರದು ಎಂಬ ನಿಯಮಗಳನ್ನು ಹಾಕಿಕೊಳ್ಳಬೇಕು. ಅದು ನಡೆಯುತ್ತಿಲ್ಲ.
ನಮ್ಮ ನಗರಗಳ ಜನರ ಬದುಕನ್ನು ಸಹನೀಯಗೊಳಿಸಲು ಪ್ರತ್ಯೇಕ ಬಿಡಿ ಯೋಜನೆಗಳನ್ನು ತಯಾರಿಸುವುದನ್ನೇ ಬಿಡಬೇಕು. ಇಡೀ ಭೂಮಿಯ ಎಲ್ಲಾ ಭಾಗಗಳಲ್ಲೂ ಸಮತೋಲನದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳಲು ಹೆಚ್ಚಿನ ತಜ್ಞತೆಯೇನೂ ಬೇಕಿಲ್ಲ. ದೆಹಲಿಯ ವಿಚಾರವನ್ನೇ ನೋಡಿ. ದೆಹಲಿ ಕೇಂದ್ರಿತವಾದ ಅಭಿವೃದ್ಧಿಯ ಭಾಗವಾಗಿ ಜಾರಿಗೆ ಬಂದ ಹಸಿರುಕ್ರಾಂತಿಯನ್ನು ಪಂಜಾಬಿನವರು ಅನುಸರಿಸಬೇಕಾಯಿತು. ಈಗ ಅಲ್ಲಿನ ಹೊಲಗದ್ದೆಗಳಲ್ಲಿ ಬೆಳೆ ಬೆಳೆದ ನಂತರ ಉಳಿಯುವ ಹುಲ್ಲಿನ ವಿಲೇವಾರಿ ಸಾಧ್ಯವಾಗದೇ ಬೆಂಕಿ ಹಾಕಲಾಗುತ್ತದೆ. ಆಗ ಅಲ್ಲಿಂದ ಏಳುವ ಹೊಗೆಯು ದೆಹಲಿಯವರೆಗೆ ಬಂದು ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ವರದಿಯೊಂದಿದೆ. ಅದೇ ಪಂಜಾಬಿನವರೂ, ಹರಿಯಾಣದವರು ತಮ್ಮ ಹಳ್ಳಿಗಳಲ್ಲಿ ಬದುಕಲಾರದೇ ದೆಹಲಿಗೆ ಬಂದು ದುಡಿಯುತ್ತಾರೆ. ದೆಹಲಿಯನ್ನು ಜೀವಂತವಾಗಿಡಲು ಅವರೂ ಬೆವರು ಸುರಿಸುತ್ತಾರೆ ಮತ್ತು ದೆಹಲಿಯ ಕೊಳೆಗೆ ಅವರೂ ಕಾರಣರಾಗುತ್ತಾರೆ.
ಅಂದರೆ ಎಲ್ಲವೂ ಪರಸ್ಪರ ಹೆಣೆದುಕೊಂಡಿರುವ ಸಂಗತಿಗಳಿವು ಮತ್ತು ದೆಹಲಿಗೋ ಬೆಂಗಳೂರಿಗೋ ವಾಷಿಂಗ್ಟನ್ನಿಗೋ ಸೀಮಿತವಾದ ಸಂಗತಿಗಳೂ ಅಲ್ಲ. ಹಾಗೆಯೇ ಇದನ್ನು ಉಳಿಸಿಕೊಳ್ಳುವ ಕರ್ಮವನ್ನು ಅಂಚಿನಲ್ಲಿರುವವರ ಮೇಲೆ ಹೇರುವುದಕ್ಕಿಂತ ಆಷಾಢಭೂತಿತನ ಹಾಗೂ ಕ್ರೌರ್ಯ ಇನ್ನೊಂದಿಲ್ಲ. ಯಾರು ಶುರು ಮಾಡಬೇಕೆಂದು ಯಾದಿ ತಯಾರಿಸುವುದಾದರೆ, ಇದು ಮೊದಲು ಮೇಲಿನವರಿಂದ ಶುರುವಾಗಬೇಕಾದ ಕೆಲಸ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...