Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಬೇಯುವ ಭೂಮಿಯನ್ನು ಉಳಿಸುವುದು ಎಲ್ಲರ ಕರ್ತವ್ಯ

ಬೇಯುವ ಭೂಮಿಯನ್ನು ಉಳಿಸುವುದು ಎಲ್ಲರ ಕರ್ತವ್ಯ

- Advertisement -
- Advertisement -

ನಿನ್ನೆ ದೆಹಲಿಯಲ್ಲಿ ಅತ್ಯಂತ ಹೆಚ್ಚು ಮಾಲಿನ್ಯವಿತ್ತೆಂದು ಇಂದಿನ ದಿನಪತ್ರಿಕೆಗಳು ಬರೆದಿವೆ. ಇದರಿಂದ ಜನರು ಕಂಗಾಲಾಗಿದ್ದಾರೆಂದೂ ವರದಿಯಲ್ಲಿ ಹೇಳಲಾಗಿದೆ. ವಾಸ್ತವದಲ್ಲಿ ಜನರೇನೂ ಕಂಗಾಲಾಗಿಲ್ಲ. ಏಕೆಂದರೆ, ಇದು ಇದ್ದಕ್ಕಿದ್ದಂತೆ ಒಂದು ದಿನ ಸಂಭವಿಸಿದ ವಿಕೋಪವಲ್ಲ. ಪ್ರವಾಹ, ಸುನಾಮಿ, ಭೂಕಂಪದಂತಹ ಕೆಲವು ಪ್ರಾಕೃತಿಕ ವಿಕೋಪಗಳು ಉಂಟುಮಾಡುವ ಪರಿಣಾಮದ ಸ್ವರೂಪ ಬೇರೆ. ಒಳಗೊಳಗೇ ಶಿಥಿಲಗೊಳಿಸುವ ಬರ, ಪರಿಸರ ಮಾಲಿನ್ಯಗಳ ಪರಿಣಾಮದ ಸ್ವರೂಪ ಬೇರೆ. ನಿಧಾನಕ್ಕೆ ಹೆಚ್ಚಾಗುತ್ತಾ ಹೋಗುವ ಎರಡನೆಯ ಬಗೆಯ ಸಮಸ್ಯೆಗಳಿಗೆ ಜನರು ಹೊಂದಿ ಕೊಳ್ಳುತ್ತಾ ಹೋಗುತ್ತಾರೆ. ಅವರಲ್ಲಿ ಅಂತಹ ‘ಕಂಗಾಲು’ ಉಂಟಾ ಗುವುದಿಲ್ಲ. ಸದರಿ ವರದಿಯನ್ನು ಬರೆದ ವರದಿಗಾರರಿಗೂ ಕಂಗಾಲು ಉಂಟಾಗಿರುವುದಿಲ್ಲ; ತನ್ನ ಕರ್ತವ್ಯದ ಭಾಗವಾಗಿ ಬರೆದ ವರದಿಯಾಗಿರುತ್ತದೆ. ಇಲ್ಲವೇ ಗಮನ ಸೆಳೆಯುವ ದೃಷ್ಟಿಯಿಂದ ಪರಿಣಾಮ ಬೀರುವ ಪದಗಳನ್ನು ಬಳಸಬೇಕೆಂಬ ಉದ್ದೇಶ ಅವರದ್ದಾಗಿರುತ್ತದೆ.
ಇದಕ್ಕೆ ಕಾರಣವಿದೆ. ಈಗಾಗಲೇ ಚಾಲ್ತಿಯಲ್ಲಿರುವ ಉದಾಹರಣೆಯೊಂದರ ಮೂಲಕ ಅದನ್ನು ವಿವರಿಸಬಹುದು. ನೀವು ಕಪ್ಪೆಯೊಂದನ್ನು ಬಿಸಿ ನೀರಿಗೆ ಹಾಕಿದಲ್ಲಿ ಅದು ಕೂಡಲೇ ನೆಗೆದು ಅಲ್ಲಿಂದ ತಪ್ಪಿಸಿಕೊಳ್ಳುತ್ತದೆ. ಆದರೆ, ತಣ್ಣೀರಿನ ಪಾತ್ರೆಯಲ್ಲಿ ಅದನ್ನು ಇಟ್ಟು ತಳವನ್ನು ನಿಧಾನಕ್ಕೆ ಬಿಸಿ ಮಾಡುತ್ತಾ ಹೋದಲ್ಲಿ, ತಾನು ಬೆಂದು ಹೋಗುವವರೆಗೂ ಅದು ಸುಮ್ಮನೇ ಇರುತ್ತದೆ.
ಈ ರೀತಿ ಬೇಯುವ ಸ್ಥಿತಿಗೆ ಭೂಮಿ ಬರುತ್ತಿದೆ ಎಂದು ಹಲವು ತಜ್ಞರು ಹೇಳುತ್ತಿದ್ದಾರೆ. ಅದನ್ನು ಸೂಚಿಸುತ್ತಿರುವ ಹಲವು ಸಂಗತಿಗಳನ್ನೂ ಅವರು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಇನ್ನೂ ಎಲ್ಲವೂ ಮುಗಿದು ಹೋಗಿಲ್ಲ ಎಂಬ ಸಮಜಾಯಿಷಿಯನ್ನು ನೀಡುತ್ತಾ, ಭೂಮಿಯನ್ನು ಮತ್ತಷ್ಟು ಸಂಕಷ್ಟಕ್ಕೆ ಒಡ್ಡುವ ಕೆಲಸ ನಡೆಯುತ್ತಲೇ ಇದೆ. ಉದಾಹರಣೆಗೆ ಕಾವೇರಿಗೆ ಅಡ್ಡಲಾಗಿರುವ ಕಟ್ಟಿರುವ ಕೆಆರ್‍ಎಸ್ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ಉಂಟಾದ ಕಂಪನಗಳು, ಅಣೆಕಟ್ಟೆಯ ಪಕ್ಕದಲ್ಲೇ ಸ್ಥಾಪನೆಯಾಗಿರುವ ಕಂಪನ ಮಾಪನ ಕೇಂದ್ರದವರೆಗೂ ಹೋಗಿ ಅಲ್ಲಿ ದಾಖಲಾಗಿವೆ. ಆದರೆ, ಆ ಕಂಪನದಿಂದ ಅಣೆಕಟ್ಟೆಗೆ ಯಾವುದೇ ಧಕ್ಕೆಯಾಗಿಲ್ಲವೆಂಬ ವರದಿಯನ್ನು ಇಟ್ಟುಕೊಂಡು ಗಣಿಗಾರಿಕೆ ಮುಂದುವರೆಸುವ ಸನ್ನಾಹಗಳು ಜಾರಿಯಲ್ಲಿವೆ. ಹಾಗಾದರೆ, ಒಮ್ಮೆ ಅಣೆಕಟ್ಟೆಗೆ ಧಕ್ಕೆಯಾದ ಮೇಲೆಯೇ ನಾವು ಎಚ್ಚೆತ್ತುಕೊಳ್ಳಬೇಕೆಂಬುದು ಅದರ ಅರ್ಥವೇ?
ಇಂತಹ ಅದೆಷ್ಟೋ ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು. ಒಟ್ಟಿನಲ್ಲಿ ಮನುಷ್ಯರು ಸಾಂದ್ರವಾಗಿ ಜೀವನ ನಡೆಸುವ ಎಲ್ಲೆಡೆ ಪ್ರಕೃತಿಯಲ್ಲಿ ಭಾರೀ ಪ್ರಮಾಣದ ಏರುಪೇರುಗಳುಂಟಾಗುತ್ತವೆ. ಅವರು ಬಳಸಿ ಎಸೆಯುವ ತ್ಯಾಜ್ಯದ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ, ಅದನ್ನೂ ದಾಟಿ ನೋಡಿದರೆ, ಇದು ‘ಜೀವನ’ದ ಪ್ರಶ್ನೆ ಅಷ್ಟೇ ಅಲ್ಲ. ಈ ರೀತಿಯ ನಗರೀಕರಣ ಹೆಚ್ಚಾದರೆ, ಭೂಮಿಯನ್ನು ಬೇಯಿಸುತ್ತಲೇ ಹೋಗುವ ಅಭಿವೃದ್ಧಿ ಹೆಚ್ಚಾಗುತ್ತಾ ಹೋದರೆ ಜಿಡಿಪಿ ಹೆಚ್ಚಾಗುತ್ತದೆ. ಹಾಗಾಗಿ ಜಿಡಿಪಿ ಹೆಚ್ಚಳದ ಹಿಂದೆ ಬಿದ್ದಿರುವ, ಕೆಲವು ಕಂಪೆನಿಗಳ ಲಾಭ ಹೆಚ್ಚಿಸುವ ಅಭಿವೃದ್ಧಿಯನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳ ಕೂಟ ಬೆಂಬಲಿಸುತ್ತಾ ಹೋಗುತ್ತದೆ. ಅಂತಿಮವಾಗಿ ಇನ್ನು ತಡೆದುಕೊಳ್ಳುವುದು ಸಾಧ್ಯವೇ ಇಲ್ಲ ಎನಿಸಿದಾಗ, ದೂರದ ಕಾಡಿನಲ್ಲಿರುವ ಜನರಿಗೆ ಕಾಡನ್ನು ರಕ್ಷಿಸುವ ಹೊಣೆ ವಹಿಸಲಾಗುತ್ತದೆ. ಅಲ್ಲಿ ಉಳಿದುಕೊಳ್ಳುವ ಕಾಡು, ಇನ್ನೆಲ್ಲೋ ನಡೆಯುತ್ತಿರುವ ಉತ್ಪಾತವನ್ನು ತಡೆಗಟ್ಟುವ ವಿಪರೀತದ ಪರಿಸರ ಸಮತೋಲನದ ಯೋಜನೆಗಾಗಿ ವರದಿಗಳು ತಯಾರಾಗುತ್ತವೆ.
ಒಂದಲ್ಲಾ ಒಂದು ರೀತಿಯಲ್ಲಿ ಕಸ್ತೂರಿ ರಂಗನ್ ವರದಿ ಅದೇ ಆಗಿದೆ. ಪಶ್ಚಿಮಘಟ್ಟ ಏನು ಮಾಡಬೇಕು ಎಂದು ನೀಡಲಾಗುತ್ತಿರುವ ವರದಿಗಿಂತ, ಈ ನಗರಗಳಲ್ಲಿ ಏನು ಮಾಡಬೇಕು ಎಂಬ ವರದಿಗಳು ಬರಬೇಕು ಮತ್ತು ಅವನ್ನು ಉಲ್ಲಂಘಿಸಲೇಬಾರದು ಎಂಬ ನಿಯಮಗಳನ್ನು ಹಾಕಿಕೊಳ್ಳಬೇಕು. ಅದು ನಡೆಯುತ್ತಿಲ್ಲ.
ನಮ್ಮ ನಗರಗಳ ಜನರ ಬದುಕನ್ನು ಸಹನೀಯಗೊಳಿಸಲು ಪ್ರತ್ಯೇಕ ಬಿಡಿ ಯೋಜನೆಗಳನ್ನು ತಯಾರಿಸುವುದನ್ನೇ ಬಿಡಬೇಕು. ಇಡೀ ಭೂಮಿಯ ಎಲ್ಲಾ ಭಾಗಗಳಲ್ಲೂ ಸಮತೋಲನದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳಲು ಹೆಚ್ಚಿನ ತಜ್ಞತೆಯೇನೂ ಬೇಕಿಲ್ಲ. ದೆಹಲಿಯ ವಿಚಾರವನ್ನೇ ನೋಡಿ. ದೆಹಲಿ ಕೇಂದ್ರಿತವಾದ ಅಭಿವೃದ್ಧಿಯ ಭಾಗವಾಗಿ ಜಾರಿಗೆ ಬಂದ ಹಸಿರುಕ್ರಾಂತಿಯನ್ನು ಪಂಜಾಬಿನವರು ಅನುಸರಿಸಬೇಕಾಯಿತು. ಈಗ ಅಲ್ಲಿನ ಹೊಲಗದ್ದೆಗಳಲ್ಲಿ ಬೆಳೆ ಬೆಳೆದ ನಂತರ ಉಳಿಯುವ ಹುಲ್ಲಿನ ವಿಲೇವಾರಿ ಸಾಧ್ಯವಾಗದೇ ಬೆಂಕಿ ಹಾಕಲಾಗುತ್ತದೆ. ಆಗ ಅಲ್ಲಿಂದ ಏಳುವ ಹೊಗೆಯು ದೆಹಲಿಯವರೆಗೆ ಬಂದು ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ವರದಿಯೊಂದಿದೆ. ಅದೇ ಪಂಜಾಬಿನವರೂ, ಹರಿಯಾಣದವರು ತಮ್ಮ ಹಳ್ಳಿಗಳಲ್ಲಿ ಬದುಕಲಾರದೇ ದೆಹಲಿಗೆ ಬಂದು ದುಡಿಯುತ್ತಾರೆ. ದೆಹಲಿಯನ್ನು ಜೀವಂತವಾಗಿಡಲು ಅವರೂ ಬೆವರು ಸುರಿಸುತ್ತಾರೆ ಮತ್ತು ದೆಹಲಿಯ ಕೊಳೆಗೆ ಅವರೂ ಕಾರಣರಾಗುತ್ತಾರೆ.
ಅಂದರೆ ಎಲ್ಲವೂ ಪರಸ್ಪರ ಹೆಣೆದುಕೊಂಡಿರುವ ಸಂಗತಿಗಳಿವು ಮತ್ತು ದೆಹಲಿಗೋ ಬೆಂಗಳೂರಿಗೋ ವಾಷಿಂಗ್ಟನ್ನಿಗೋ ಸೀಮಿತವಾದ ಸಂಗತಿಗಳೂ ಅಲ್ಲ. ಹಾಗೆಯೇ ಇದನ್ನು ಉಳಿಸಿಕೊಳ್ಳುವ ಕರ್ಮವನ್ನು ಅಂಚಿನಲ್ಲಿರುವವರ ಮೇಲೆ ಹೇರುವುದಕ್ಕಿಂತ ಆಷಾಢಭೂತಿತನ ಹಾಗೂ ಕ್ರೌರ್ಯ ಇನ್ನೊಂದಿಲ್ಲ. ಯಾರು ಶುರು ಮಾಡಬೇಕೆಂದು ಯಾದಿ ತಯಾರಿಸುವುದಾದರೆ, ಇದು ಮೊದಲು ಮೇಲಿನವರಿಂದ ಶುರುವಾಗಬೇಕಾದ ಕೆಲಸ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...