Homeಎಕಾನಮಿಬಜಾಜ್ ಅವರ ಬುಲಂದ್ “ಟೀಕೆ” ಮತ್ತು ಹಮಾರಾ “ಮಿಜಾಜ್” : ರಾಜಾರಾಂ ತಲ್ಲೂರು

ಬಜಾಜ್ ಅವರ ಬುಲಂದ್ “ಟೀಕೆ” ಮತ್ತು ಹಮಾರಾ “ಮಿಜಾಜ್” : ರಾಜಾರಾಂ ತಲ್ಲೂರು

- Advertisement -
- Advertisement -

ಸರ್ಕಾರವೊಂದು ತನ್ನ ಎಲ್ಲ ಬಲ ಬಳಸಿಕೊಂಡು, ತನ್ನ ವಿರುದ್ಧ ತಳಮಟ್ಟದಲ್ಲಿ ಯಾರೂ ಚಕಾರ ಎತ್ತುವಂತಿಲ್ಲ ಎಂಬ ವಾತಾವರಣ ನಿರ್ಮಿಸಿರುವಾಗ, ಧ್ವನಿ ಎತ್ತಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನೂ ತನ್ನ ಕ್ರಿಯೆಯ ಮೂಲಕವೇ ಸ್ಪಷ್ಟವಾಗಿ ನೀಡಿರುವಾಗ, ರಾಹುಲ್ ಬಜಾಜ್ ಅವರ ಈ ಪ್ರತಿಕ್ರಿಯೆ “ಕೃತಕವಾಗಿ ಉತ್ಪಾದಿಸಲಾದ” ಪ್ರತಿಕ್ರಿಯೆ ಎಂಬ ಯೋಚನೆಗಳು ಬರುವುದೂ ಸಹಜ.

ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ ಎಂಬುದರಲ್ಲಿ ಅಧಿಕಾರಸ್ಥರ ಪಾವತಿ ಕೂಲಿಗಳು (ಟ್ರಾಲ್ ಸೇನೆ) ಬಿಟ್ಟರೆ ಬೇರಾರಿಗೂ ಎಲ್ಲೂ ಯಾರಿಗೂ ಸಂಶಯ ಉಳಿದಂತಿಲ್ಲ. ಸ್ವತಃ ಹಣಕಾಸು ಸಚಿವೆ ಎಲ್ಲವೂ ಸರಿಯಿಲ್ಲ, ಆದರೆ ಪೂರ್ಣ ಕೆಟ್ಟಿಲ್ಲ ಎಂದು ಸಂಸತ್ತಿನಲ್ಲೇ ದಾಖಲಿಸಿಯಾಗಿದೆ. ಸಾರ್ವಜನಿಕ ಅಭಿಪ್ರಾಯಗಳೂ ಈ ನಿಟ್ಟಿನಲ್ಲಿ ಹರಳುಗಟ್ಟಿವೆ.

ಮೊನ್ನೆ ಡಿಸೆಂಬರ್ ಒಂದರಂದು ಎಕನಾಮಿಕ್ ಟೈಮ್ಸ್ ಕಾನ್‍ಕ್ಲೇವ್‍ನಲ್ಲಿ ವೇದಿಕೆಯ ಮೇಲಿದ್ದ ಗೃಹ ಸಚಿವ ಅಮಿತ್ ಷಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೇ ಸಚಿವ ಪಿಯೂಷ ಗೋಯಲ್ ಅವರನ್ನುದ್ದೇಶಿಸಿ ಬಜಾಜ್ ಗುಂಪಿನ ಮುಖ್ಯಸ್ಥ ರಾಹುಲ್ ಬಜಾಜ್ ಅವರು, ಸರ್ಕಾರದ ವಿರುದ್ಧ ಕುತೂಹಲಕರ ಟೀಕೆಯೊಂದನ್ನು ಮಾಡುತ್ತಾರೆ. “ಯುಪಿಎ -2 ಆಳ್ವಿಕೆಯಲ್ಲಿ ನಾವು (ಉದ್ಯಮಿಗಳು) ಯಾರನ್ನು ಬೇಕಿದ್ದರೂ ಟೀಕಿಸಬಹುದಿತ್ತು. ಆದರೆ ನೀವೀಗ ಅದನ್ನು (ಟೀಕೆಯನ್ನು) ಸ್ವೀಕರಿಸುತ್ತೀರಿ ಎಂಬ ವಿಶ್ವಾಸ ಇಲ್ಲ. ನಾನು ಹೇಳುತ್ತಿರುವುದು ತಪ್ಪಿರಬಹುದು, ಆದರೆ ಎಲ್ಲರಲ್ಲೂ ಈ ಭಾವನೆ ಇದೆ.”

ಅಸಹನೆಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವಾಗ ಹುಲ್ಲುಕಡ್ಡಿಯಂತೆ ಕಾಣಿಸಿಕೊಂಡ ಈ ಟೀಕೆಯನ್ನು ಎಲ್ಲರೂ ಗಪ್ಪೆಂದು ಹಿಡಿದು ಕುಳಿತಿರುವ ರೀತಿ – ಹಲವಾರು ವ್ಯಥೆಗಳನ್ನು ಒಟ್ಟಾಗಿ ಹೇಳುತ್ತಿದೆ. ಅಲ್ಲಿ ದೇಶದ ಹಲವು ಮಂದಿ ಪ್ರಮುಖ ಕಾರ್ಪೋರೇಟ್ ಧಣಿಗಳು ಹಾಜರಿದ್ದರು.

ಅಧಿಕಾರಸ್ಥರ ಪ್ರತಿಕ್ರಿಯೆ
ಮೊದಲನೆಯದಾಗಿ ಬಜಾಜ್ ಟೀಕೆಗೆ ಅಲ್ಲೇ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಷಾ , ನರೇಂದ್ರ ಮೋದಿ ಸರ್ಕಾರ ಅತ್ಯಂತ ಹೆಚ್ಚು ಟೀಕೆಗೊಳಗಾಗಿರುವ ಸರ್ಕಾರ ಎಂದರಲ್ಲದೇ ಬಿಜೆಪಿಗೆ ಸತ್ಯ ತಿಳಿಸುವ ಕುರಿತು ಇನ್ನೂ ಜನರಲ್ಲಿ ಭಯ ಇದ್ದರೆ, ಅದನ್ನು ಹೋಗಲಾಡಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಭರವಸೆ ಇತ್ತರು. ಇದು ಸರ್ಕಾರದ ಕಡೆಯಿಂದ ಬಂದ ತಕ್ಷಣದ ಪ್ರತಿಕ್ರಿಯೆ.

ಅದಾದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮರುದಿನ, ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿ, ಪ್ರಶ್ನೆ ಕೇಳಿ ಉತ್ತರ ಪಡೆಯುವ ಬದಲು, ಅಭಿಪ್ರಾಯಗಳನ್ನು ಹರಡುತ್ತಾ ಹೋದರೆ ಆ ಅಭಿಪ್ರಾಯ ಜನಪ್ರಿಯವಾಗತೊಡಗಿದೊಡನೆ ದೇಶದ ಹಿತಾಸಕ್ತಿಗೆ ಹಾನಿ ಆಗಬಹುದೆಂದು ಎಚ್ಚರಿಸಿದರು.

ಅದೇದಿನ ಅಧಿಕಾರಸ್ಥರ ಮುಖವಾಣಿ ಸ್ವರಾಜ್ಯ ಮ್ಯಾಗಝೀನಿನ ಸಂಪಾದಕ ಆನಂದ್ ರಂಗನಾಥನ್ ಅವರು ಒಂದು ಟ್ವೀಟ್‍ನಲ್ಲಿ “ಬಜಾಜ್‍ಗೆ ಪ್ರಜ್ಞೆ ಬರಬೇಕೆಂದರೆ (ಅವರ ಸ್ಕೂಟರಿನಂತೆ) ಎರಡು ಬಾರಿ ಬಗ್ಗಿಸಿ ಕಿಕ್ ಒದೆಯಬೇಕು. ಓಆಂ ಸರ್ಕಾರ ಎದುರಿಸಿದಷ್ಟು ಟೀಕೆಗಳನ್ನು ಯಾರೂ ಎದುರಿಸಿಲ್ಲ. ಅವರು ಯಾವ ಲೋಕದಲ್ಲಿದ್ದಾರೆ? ಭೂಲೋಕದಲ್ಲಂತೂ ಅಲ್ಲ” ಎಂದು ವ್ಯಂಗ್ಯವಾಗಿ ಹೇಳಿದರು.

ಕಳೆದ ಆರು ವರ್ಷಗಳಲ್ಲಿ ಹಾಲೀ ಕೇಂದ್ರ ಸರ್ಕಾರದ ಮತ್ತವರ ಸಮರ್ಥಕರ ಕಾರ್ಯವೈಖರಿಯನ್ನು ಅರಿತಿರುವವರಿಗೆ ಈ ಮೂರು ಪ್ರತಿಕ್ರಿಯೆಗಳು ಸ್ತರವಾರು ಏನನ್ನು ಧ್ವನಿಸುತ್ತಿವೆ ಎಂಬುದನ್ನು ವಿವರಿಸಬೇಕಾಗಿಲ್ಲ.

ಉದ್ಯಮಿಗಳೇಕೆ ಹೀಗೆ?

ಇಲ್ಲಿ ನಿಜಕ್ಕೂ ಅಚ್ಚರಿ ಪಡಬೇಕಾಗಿರುವುದು ರಾಹುಲ್ ಬಜಾಜ್, ಕಿರಣ್ ಮಜುಂದಾರ್ ಅವರಂತಹ ದೊಡ್ಡ ಉದ್ಯಮಪತಿಗಳ ಈ ಚಹಾಕಪ್ಪಿನ ಹಠಾತ್ ಕ್ರಾಂತಿಯ ಬಗ್ಗೆ. ಯಾಕೆಂದರೆ, ಹಾಲೀ ಕೇಂದ್ರ ಸರ್ಕಾರ ಕಳೆದ ಆರು ವರ್ಷಗಳಲ್ಲಿ, ಅದರಲ್ಲೂ ನೋಟು ರದ್ಧತಿಯ ಬಳಿಕ, ಉದ್ದಿಮೆಗಳಿಗೆ ಕೊಟ್ಟಿರುವಷ್ಟು ಸವಲತ್ತುಗಳನ್ನು ಬೇರಾರಿಗೂ ಕೊಟ್ಟಿಲ್ಲ. ಆದರೂ ಹೀಗೇಕೆ?

ಒಂದು ಮಗ್ಗುಲಿನಿಂದ ನೋಡಿದಾಗ, ಇದು ಅಧಿಕಾರಸ್ಥರಿಗೆ ಹತ್ತಿರ ಇರುವ ಉದ್ದಿಮೆಗಳ (ಉದಾಹರಣೆಗೆ ಎಲ್ಲ ಆರ್ಥಿಕ ಹೊಡೆತಗಳ ಹೊರತಾಗಿಯೂ ಅಸ್ವಾಭಾವಿಕ ಎಂಬಷ್ಟು ಬೆಳವಣಿಗೆ ಕಂಡಿರುವ ಅದಾನಿ, ಅಂಬಾನಿ ಇತ್ಯಾದಿ ಕಾರ್ಪೋರೇಟ್ ಗಳು) ವಿರುದ್ಧ ಸ್ವಲ್ಪ ದೂರದಲ್ಲಿರುವವರ ಅಸಹಾಯಕ ಅಸಹನೆಯಂತೆ ಕಾಣಿಸುತ್ತದೆ.
ಎರಡನೆಯದಾಗಿ ತಮ್ಮ ಇಷ್ಟಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೆ, ಸರ್ಕಾರಿ ವ್ಯವಸ್ಥೆ ಬಳಸಿಕೊಂಡು ಉದ್ದಿಮೆಗಳವರ ಬೆನ್ನು ಮುರಿಯಲು ನಾವು ಹಿಂಜರಿಯಲಾರೆವು ಎಂಬ ಸರ್ಕಾರದ ಪರೋಕ್ಷ ಎಚ್ಚರಿಕೆಗೆ ಉದ್ಯಮಿ ವರ್ಗದ ಭಯ-ಆತಂಕದ ಪ್ರತಿಕ್ರಿಯೆಯೂ ಇದಾಗಿರಬಹುದು.

ಇದಲ್ಲದೇ ಬೇರೆ ಕಾರಣಗಳೂ ಇದ್ದಿರಬಹುದು. ಆದರೆ ಕಾರಣಗಳಿಗಿಂತ ಹೆಚ್ಚಾಗಿ ಇದೊಂದು ಸುಯೋಜಿತ ತಂತ್ರವಾಗಿರಬಹುದು ಎಂಬ ಸಂಶಯ ಮೂಡಿದರೂ ಅಚ್ಚರಿ ಇಲ್ಲ.

ಮಾರುಕಟ್ಟೆಯ ವಾಸ್ತವಗಳು

ಆದರೆ ಸೇವಾ ಉದ್ಯಮವನ್ನೇ 65%ರಷ್ಟು ನೆಚ್ಚಿಕೊಂಡಿರುವ ಭಾರತದಂತಹ ದೇಶವೊಂದರಲ್ಲಿ ಮೂಲಸೌಕರ್ಯ, ಆಟೊ ಮೊಬೈಲ್‍ನಂತಹ ಉದ್ಯಮಗಳು ಬದಿಗೆ ಸರಿಯತೊಡಗಿದ್ದು ಹೊಸ ಬೆಳವಣಿಗೆಯೇನಲ್ಲ. ಇದು 90ರ ದಶಕದ ಕೊನೆಯಲ್ಲಿ ನಡೆದ “ಐಟಿ ಕ್ರಾಂತಿ”ಯ ಫಲ.

ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿತ, ಮಾರುಕಟ್ಟೆಯಲ್ಲಿ ಬೇರೆ ದೇಶಗಳ ಬುಡ ಕತ್ತರಿಸುವ ಸ್ಪರ್ಧೆ ಹಾಗೂ ಮೂರನೇ ಹಂತದ ಐಟಿ ಕ್ರಾಂತಿ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇತ್ಯಾದಿ) ಆರಂಭಗೊಂಡಿರುವುದರಿಂದ, ಅದಕ್ಕೆ ಸನ್ನದ್ಧಗೊಂಡಿರದ ಭಾರತದ ಐಟಿ ಉದ್ಯಮ ಥಂಡಾ ಹೊಡೆಯುತ್ತಿದೆ. ಪರ್ಯಾಯ ಇಂಧನ ಮೂಲಗಳ ಗಲಾಟೆಯಲ್ಲಿ ಆಟೊಮೊಬೈಲ್ ಉದ್ಯಮ ಕೂಡ ದಾರಿಕಾಣದೆ ನಿಂತಿದೆ.

ಇತ್ತ ಡಿಮಾನೆಟೈಸೇಷನ್‍ನಿಂದಾಗಿ ದೇಶದ ಹಣಕಾಸು ವ್ಯವಸ್ಥೆಗೆ “ಸಾಸಿವೆ ಡಬ್ಬಿಯ ಶಾಪ” ತಗುಲಿದೆ. ಒಂದು ಪುಟ್ಟ ಗಲ್ಲಿಯ ಆರ್ಥಿಕತೆಯ ಮೇಲೆ ಇದರಿಂದ ಬಿದ್ದಿರುವ ಹೊಡೆತ ಹಂತಹಂತವಾಗಿ ಮೇಲೆದ್ದು, ಎಲ್ಲವನ್ನೂ ನುಂಗಿ ನೊಣೆಯುತ್ತಾ, ಬಹುತೇಕ ಎಲ್ಲ ಮೂಲಸೌಕರ್ಯ ಉದ್ದಿಮೆಗಳ ಮೇಲೂ ದುಷ್ಪರಿಣಾಮ ಬೀರಿದೆ.

ನೋಟುರದ್ಧತಿಯ ಬಳಿಕ ಕೇಂದ್ರ ಸರ್ಕಾರ ತನ್ನಲ್ಲಿ ಆರೋಗ್ಯವಂತ ಯೋಜನೆಯೊಂದು ಇದ್ದಿದ್ದರೆ, ತನ್ನ ಮರುನಿರ್ಮಾಣ ಕೆಲಸವನ್ನು ದೇಶದ ಕೃಷಿಭೂಮಿಗಳಿಂದ ಆರಂಭಿಸಬೇಕಿತ್ತು. ಅದನ್ನು ಬಿಟ್ಟು ಕೃಷಿ ಭೂಮಿಗಳನ್ನು ಈಗ ಕೆಲಸ ಇಲ್ಲದೆ ಕುಳಿತಿರುವ ಕಾರ್ಪೋರೇಟ್ ಗಳಿಗೆ ಹಸ್ತಾಂತರಿಸುವ ಹಠ ಹಿಡಿದು ಕಾರ್ಯಾಚರಿಸುತ್ತಿದೆ. ಏನೆಲ್ಲ ಇದೆಯೋ ಅದನ್ನೆಲ್ಲ ಕಾರ್ಪೋರೇಟ್ ಗಳಿಗೆ ದಾನ ಕೊಡುವುದೇ ತನ್ನ ಉದ್ಯೋಗ ಎಂದು ತಿಳಿದಂತಿದೆ.

ಒಟ್ಟು ಅರ್ಥ ಏನು?

ಇಂತಹದೊಂದು ಗಂಭೀರ ಸನ್ನಿವೇಶದಲ್ಲಿ ಕೈಗಾರಿಕೆಗಳ ಪ್ರತಿನಿಧಿಯೊಬ್ಬರು ಸರ್ಕಾರವನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಾಗ ಅದನ್ನು ದೇಶದ ನಾಗರಿಕ ಹೇಗೆ ಗ್ರಹಿಸಬೇಕು?

ಸರ್ಕಾರವೊಂದು ತನ್ನ ಎಲ್ಲ ಬಲ ಬಳಸಿಕೊಂಡು, ತನ್ನ ವಿರುದ್ಧ ತಳಮಟ್ಟದಲ್ಲಿ ಯಾರೂ ಚಕಾರ ಎತ್ತುವಂತಿಲ್ಲ ಎಂಬ ವಾತಾವರಣ ನಿರ್ಮಿಸಿರುವಾಗ, ಧ್ವನಿ ಎತ್ತಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನೂ ತನ್ನ ಕ್ರಿಯೆಯ ಮೂಲಕವೇ ಸ್ಪಷ್ಟವಾಗಿ ನೀಡಿರುವಾಗ, ರಾಹುಲ್ ಬಜಾಜ್ ಅವರ ಈ ಪ್ರತಿಕ್ರಿಯೆ “ಕೃತಕವಾಗಿ ಉತ್ಪಾದಿಸಲಾದ” ಪ್ರತಿಕ್ರಿಯೆ ಎಂಬ ಯೋಚನೆಗಳು ಬರುವುದೂ ಸಹಜ.

ಸಾವಿರಾರು ರೈತರು ದಿಲ್ಲಿ ಚಲೋ ಮಾಡಿದಾಗಲಾಗಲೀ, ಬ್ಯಾಂಕ್ ನೌಕರರು-ಸಾರ್ವಜನಿಕ ವಲಯದ ಸಂಸ್ಥೆಗಳ ಉದ್ಯೋಗಿಗಳು ತಮ್ಮ ಸಂಸ್ಥೆಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂದು ನಡೆಸಿದ ಹೋರಾಟಕ್ಕಾಗಲೀ, ಯಾವತ್ತೂ ಮಣೆ ಹಾಕದ ಮಾಧ್ಯಮಗಳು ಇದೊಂದು ಒಂಟಿಧ್ವನಿಗೆ ಈ ಮಹತ್ವ ಯಾಕೆ ಕೊಟ್ಟವು?!

ಸದ್ಯಕ್ಕೆ ಚಹಾಕಪ್ಪಿನಲ್ಲಿ ನಡೆದುಹೋದ ಈ ಕ್ರಾಂತಿ ಅಲ್ಲಿಂದ ಹೊರಜಗತ್ತಿಗೆ ಚೆಲ್ಲಿ ಬಿರುಗಾಳಿ ಮೂಡಿಸೀತೇ ಎಂಬುದು ಸ್ಪಷ್ಟವಾಗಲು ಇನ್ನೂ ಸ್ವಲ್ಪ ಸಮಯ ಕಾದುನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...