Homeಎಕಾನಮಿಬಜಾಜ್ ಅವರ ಬುಲಂದ್ “ಟೀಕೆ” ಮತ್ತು ಹಮಾರಾ “ಮಿಜಾಜ್” : ರಾಜಾರಾಂ ತಲ್ಲೂರು

ಬಜಾಜ್ ಅವರ ಬುಲಂದ್ “ಟೀಕೆ” ಮತ್ತು ಹಮಾರಾ “ಮಿಜಾಜ್” : ರಾಜಾರಾಂ ತಲ್ಲೂರು

- Advertisement -
- Advertisement -

ಸರ್ಕಾರವೊಂದು ತನ್ನ ಎಲ್ಲ ಬಲ ಬಳಸಿಕೊಂಡು, ತನ್ನ ವಿರುದ್ಧ ತಳಮಟ್ಟದಲ್ಲಿ ಯಾರೂ ಚಕಾರ ಎತ್ತುವಂತಿಲ್ಲ ಎಂಬ ವಾತಾವರಣ ನಿರ್ಮಿಸಿರುವಾಗ, ಧ್ವನಿ ಎತ್ತಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನೂ ತನ್ನ ಕ್ರಿಯೆಯ ಮೂಲಕವೇ ಸ್ಪಷ್ಟವಾಗಿ ನೀಡಿರುವಾಗ, ರಾಹುಲ್ ಬಜಾಜ್ ಅವರ ಈ ಪ್ರತಿಕ್ರಿಯೆ “ಕೃತಕವಾಗಿ ಉತ್ಪಾದಿಸಲಾದ” ಪ್ರತಿಕ್ರಿಯೆ ಎಂಬ ಯೋಚನೆಗಳು ಬರುವುದೂ ಸಹಜ.

ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ ಎಂಬುದರಲ್ಲಿ ಅಧಿಕಾರಸ್ಥರ ಪಾವತಿ ಕೂಲಿಗಳು (ಟ್ರಾಲ್ ಸೇನೆ) ಬಿಟ್ಟರೆ ಬೇರಾರಿಗೂ ಎಲ್ಲೂ ಯಾರಿಗೂ ಸಂಶಯ ಉಳಿದಂತಿಲ್ಲ. ಸ್ವತಃ ಹಣಕಾಸು ಸಚಿವೆ ಎಲ್ಲವೂ ಸರಿಯಿಲ್ಲ, ಆದರೆ ಪೂರ್ಣ ಕೆಟ್ಟಿಲ್ಲ ಎಂದು ಸಂಸತ್ತಿನಲ್ಲೇ ದಾಖಲಿಸಿಯಾಗಿದೆ. ಸಾರ್ವಜನಿಕ ಅಭಿಪ್ರಾಯಗಳೂ ಈ ನಿಟ್ಟಿನಲ್ಲಿ ಹರಳುಗಟ್ಟಿವೆ.

ಮೊನ್ನೆ ಡಿಸೆಂಬರ್ ಒಂದರಂದು ಎಕನಾಮಿಕ್ ಟೈಮ್ಸ್ ಕಾನ್‍ಕ್ಲೇವ್‍ನಲ್ಲಿ ವೇದಿಕೆಯ ಮೇಲಿದ್ದ ಗೃಹ ಸಚಿವ ಅಮಿತ್ ಷಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೇ ಸಚಿವ ಪಿಯೂಷ ಗೋಯಲ್ ಅವರನ್ನುದ್ದೇಶಿಸಿ ಬಜಾಜ್ ಗುಂಪಿನ ಮುಖ್ಯಸ್ಥ ರಾಹುಲ್ ಬಜಾಜ್ ಅವರು, ಸರ್ಕಾರದ ವಿರುದ್ಧ ಕುತೂಹಲಕರ ಟೀಕೆಯೊಂದನ್ನು ಮಾಡುತ್ತಾರೆ. “ಯುಪಿಎ -2 ಆಳ್ವಿಕೆಯಲ್ಲಿ ನಾವು (ಉದ್ಯಮಿಗಳು) ಯಾರನ್ನು ಬೇಕಿದ್ದರೂ ಟೀಕಿಸಬಹುದಿತ್ತು. ಆದರೆ ನೀವೀಗ ಅದನ್ನು (ಟೀಕೆಯನ್ನು) ಸ್ವೀಕರಿಸುತ್ತೀರಿ ಎಂಬ ವಿಶ್ವಾಸ ಇಲ್ಲ. ನಾನು ಹೇಳುತ್ತಿರುವುದು ತಪ್ಪಿರಬಹುದು, ಆದರೆ ಎಲ್ಲರಲ್ಲೂ ಈ ಭಾವನೆ ಇದೆ.”

ಅಸಹನೆಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವಾಗ ಹುಲ್ಲುಕಡ್ಡಿಯಂತೆ ಕಾಣಿಸಿಕೊಂಡ ಈ ಟೀಕೆಯನ್ನು ಎಲ್ಲರೂ ಗಪ್ಪೆಂದು ಹಿಡಿದು ಕುಳಿತಿರುವ ರೀತಿ – ಹಲವಾರು ವ್ಯಥೆಗಳನ್ನು ಒಟ್ಟಾಗಿ ಹೇಳುತ್ತಿದೆ. ಅಲ್ಲಿ ದೇಶದ ಹಲವು ಮಂದಿ ಪ್ರಮುಖ ಕಾರ್ಪೋರೇಟ್ ಧಣಿಗಳು ಹಾಜರಿದ್ದರು.

ಅಧಿಕಾರಸ್ಥರ ಪ್ರತಿಕ್ರಿಯೆ
ಮೊದಲನೆಯದಾಗಿ ಬಜಾಜ್ ಟೀಕೆಗೆ ಅಲ್ಲೇ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಷಾ , ನರೇಂದ್ರ ಮೋದಿ ಸರ್ಕಾರ ಅತ್ಯಂತ ಹೆಚ್ಚು ಟೀಕೆಗೊಳಗಾಗಿರುವ ಸರ್ಕಾರ ಎಂದರಲ್ಲದೇ ಬಿಜೆಪಿಗೆ ಸತ್ಯ ತಿಳಿಸುವ ಕುರಿತು ಇನ್ನೂ ಜನರಲ್ಲಿ ಭಯ ಇದ್ದರೆ, ಅದನ್ನು ಹೋಗಲಾಡಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಭರವಸೆ ಇತ್ತರು. ಇದು ಸರ್ಕಾರದ ಕಡೆಯಿಂದ ಬಂದ ತಕ್ಷಣದ ಪ್ರತಿಕ್ರಿಯೆ.

ಅದಾದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮರುದಿನ, ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿ, ಪ್ರಶ್ನೆ ಕೇಳಿ ಉತ್ತರ ಪಡೆಯುವ ಬದಲು, ಅಭಿಪ್ರಾಯಗಳನ್ನು ಹರಡುತ್ತಾ ಹೋದರೆ ಆ ಅಭಿಪ್ರಾಯ ಜನಪ್ರಿಯವಾಗತೊಡಗಿದೊಡನೆ ದೇಶದ ಹಿತಾಸಕ್ತಿಗೆ ಹಾನಿ ಆಗಬಹುದೆಂದು ಎಚ್ಚರಿಸಿದರು.

ಅದೇದಿನ ಅಧಿಕಾರಸ್ಥರ ಮುಖವಾಣಿ ಸ್ವರಾಜ್ಯ ಮ್ಯಾಗಝೀನಿನ ಸಂಪಾದಕ ಆನಂದ್ ರಂಗನಾಥನ್ ಅವರು ಒಂದು ಟ್ವೀಟ್‍ನಲ್ಲಿ “ಬಜಾಜ್‍ಗೆ ಪ್ರಜ್ಞೆ ಬರಬೇಕೆಂದರೆ (ಅವರ ಸ್ಕೂಟರಿನಂತೆ) ಎರಡು ಬಾರಿ ಬಗ್ಗಿಸಿ ಕಿಕ್ ಒದೆಯಬೇಕು. ಓಆಂ ಸರ್ಕಾರ ಎದುರಿಸಿದಷ್ಟು ಟೀಕೆಗಳನ್ನು ಯಾರೂ ಎದುರಿಸಿಲ್ಲ. ಅವರು ಯಾವ ಲೋಕದಲ್ಲಿದ್ದಾರೆ? ಭೂಲೋಕದಲ್ಲಂತೂ ಅಲ್ಲ” ಎಂದು ವ್ಯಂಗ್ಯವಾಗಿ ಹೇಳಿದರು.

ಕಳೆದ ಆರು ವರ್ಷಗಳಲ್ಲಿ ಹಾಲೀ ಕೇಂದ್ರ ಸರ್ಕಾರದ ಮತ್ತವರ ಸಮರ್ಥಕರ ಕಾರ್ಯವೈಖರಿಯನ್ನು ಅರಿತಿರುವವರಿಗೆ ಈ ಮೂರು ಪ್ರತಿಕ್ರಿಯೆಗಳು ಸ್ತರವಾರು ಏನನ್ನು ಧ್ವನಿಸುತ್ತಿವೆ ಎಂಬುದನ್ನು ವಿವರಿಸಬೇಕಾಗಿಲ್ಲ.

ಉದ್ಯಮಿಗಳೇಕೆ ಹೀಗೆ?

ಇಲ್ಲಿ ನಿಜಕ್ಕೂ ಅಚ್ಚರಿ ಪಡಬೇಕಾಗಿರುವುದು ರಾಹುಲ್ ಬಜಾಜ್, ಕಿರಣ್ ಮಜುಂದಾರ್ ಅವರಂತಹ ದೊಡ್ಡ ಉದ್ಯಮಪತಿಗಳ ಈ ಚಹಾಕಪ್ಪಿನ ಹಠಾತ್ ಕ್ರಾಂತಿಯ ಬಗ್ಗೆ. ಯಾಕೆಂದರೆ, ಹಾಲೀ ಕೇಂದ್ರ ಸರ್ಕಾರ ಕಳೆದ ಆರು ವರ್ಷಗಳಲ್ಲಿ, ಅದರಲ್ಲೂ ನೋಟು ರದ್ಧತಿಯ ಬಳಿಕ, ಉದ್ದಿಮೆಗಳಿಗೆ ಕೊಟ್ಟಿರುವಷ್ಟು ಸವಲತ್ತುಗಳನ್ನು ಬೇರಾರಿಗೂ ಕೊಟ್ಟಿಲ್ಲ. ಆದರೂ ಹೀಗೇಕೆ?

ಒಂದು ಮಗ್ಗುಲಿನಿಂದ ನೋಡಿದಾಗ, ಇದು ಅಧಿಕಾರಸ್ಥರಿಗೆ ಹತ್ತಿರ ಇರುವ ಉದ್ದಿಮೆಗಳ (ಉದಾಹರಣೆಗೆ ಎಲ್ಲ ಆರ್ಥಿಕ ಹೊಡೆತಗಳ ಹೊರತಾಗಿಯೂ ಅಸ್ವಾಭಾವಿಕ ಎಂಬಷ್ಟು ಬೆಳವಣಿಗೆ ಕಂಡಿರುವ ಅದಾನಿ, ಅಂಬಾನಿ ಇತ್ಯಾದಿ ಕಾರ್ಪೋರೇಟ್ ಗಳು) ವಿರುದ್ಧ ಸ್ವಲ್ಪ ದೂರದಲ್ಲಿರುವವರ ಅಸಹಾಯಕ ಅಸಹನೆಯಂತೆ ಕಾಣಿಸುತ್ತದೆ.
ಎರಡನೆಯದಾಗಿ ತಮ್ಮ ಇಷ್ಟಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೆ, ಸರ್ಕಾರಿ ವ್ಯವಸ್ಥೆ ಬಳಸಿಕೊಂಡು ಉದ್ದಿಮೆಗಳವರ ಬೆನ್ನು ಮುರಿಯಲು ನಾವು ಹಿಂಜರಿಯಲಾರೆವು ಎಂಬ ಸರ್ಕಾರದ ಪರೋಕ್ಷ ಎಚ್ಚರಿಕೆಗೆ ಉದ್ಯಮಿ ವರ್ಗದ ಭಯ-ಆತಂಕದ ಪ್ರತಿಕ್ರಿಯೆಯೂ ಇದಾಗಿರಬಹುದು.

ಇದಲ್ಲದೇ ಬೇರೆ ಕಾರಣಗಳೂ ಇದ್ದಿರಬಹುದು. ಆದರೆ ಕಾರಣಗಳಿಗಿಂತ ಹೆಚ್ಚಾಗಿ ಇದೊಂದು ಸುಯೋಜಿತ ತಂತ್ರವಾಗಿರಬಹುದು ಎಂಬ ಸಂಶಯ ಮೂಡಿದರೂ ಅಚ್ಚರಿ ಇಲ್ಲ.

ಮಾರುಕಟ್ಟೆಯ ವಾಸ್ತವಗಳು

ಆದರೆ ಸೇವಾ ಉದ್ಯಮವನ್ನೇ 65%ರಷ್ಟು ನೆಚ್ಚಿಕೊಂಡಿರುವ ಭಾರತದಂತಹ ದೇಶವೊಂದರಲ್ಲಿ ಮೂಲಸೌಕರ್ಯ, ಆಟೊ ಮೊಬೈಲ್‍ನಂತಹ ಉದ್ಯಮಗಳು ಬದಿಗೆ ಸರಿಯತೊಡಗಿದ್ದು ಹೊಸ ಬೆಳವಣಿಗೆಯೇನಲ್ಲ. ಇದು 90ರ ದಶಕದ ಕೊನೆಯಲ್ಲಿ ನಡೆದ “ಐಟಿ ಕ್ರಾಂತಿ”ಯ ಫಲ.

ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿತ, ಮಾರುಕಟ್ಟೆಯಲ್ಲಿ ಬೇರೆ ದೇಶಗಳ ಬುಡ ಕತ್ತರಿಸುವ ಸ್ಪರ್ಧೆ ಹಾಗೂ ಮೂರನೇ ಹಂತದ ಐಟಿ ಕ್ರಾಂತಿ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇತ್ಯಾದಿ) ಆರಂಭಗೊಂಡಿರುವುದರಿಂದ, ಅದಕ್ಕೆ ಸನ್ನದ್ಧಗೊಂಡಿರದ ಭಾರತದ ಐಟಿ ಉದ್ಯಮ ಥಂಡಾ ಹೊಡೆಯುತ್ತಿದೆ. ಪರ್ಯಾಯ ಇಂಧನ ಮೂಲಗಳ ಗಲಾಟೆಯಲ್ಲಿ ಆಟೊಮೊಬೈಲ್ ಉದ್ಯಮ ಕೂಡ ದಾರಿಕಾಣದೆ ನಿಂತಿದೆ.

ಇತ್ತ ಡಿಮಾನೆಟೈಸೇಷನ್‍ನಿಂದಾಗಿ ದೇಶದ ಹಣಕಾಸು ವ್ಯವಸ್ಥೆಗೆ “ಸಾಸಿವೆ ಡಬ್ಬಿಯ ಶಾಪ” ತಗುಲಿದೆ. ಒಂದು ಪುಟ್ಟ ಗಲ್ಲಿಯ ಆರ್ಥಿಕತೆಯ ಮೇಲೆ ಇದರಿಂದ ಬಿದ್ದಿರುವ ಹೊಡೆತ ಹಂತಹಂತವಾಗಿ ಮೇಲೆದ್ದು, ಎಲ್ಲವನ್ನೂ ನುಂಗಿ ನೊಣೆಯುತ್ತಾ, ಬಹುತೇಕ ಎಲ್ಲ ಮೂಲಸೌಕರ್ಯ ಉದ್ದಿಮೆಗಳ ಮೇಲೂ ದುಷ್ಪರಿಣಾಮ ಬೀರಿದೆ.

ನೋಟುರದ್ಧತಿಯ ಬಳಿಕ ಕೇಂದ್ರ ಸರ್ಕಾರ ತನ್ನಲ್ಲಿ ಆರೋಗ್ಯವಂತ ಯೋಜನೆಯೊಂದು ಇದ್ದಿದ್ದರೆ, ತನ್ನ ಮರುನಿರ್ಮಾಣ ಕೆಲಸವನ್ನು ದೇಶದ ಕೃಷಿಭೂಮಿಗಳಿಂದ ಆರಂಭಿಸಬೇಕಿತ್ತು. ಅದನ್ನು ಬಿಟ್ಟು ಕೃಷಿ ಭೂಮಿಗಳನ್ನು ಈಗ ಕೆಲಸ ಇಲ್ಲದೆ ಕುಳಿತಿರುವ ಕಾರ್ಪೋರೇಟ್ ಗಳಿಗೆ ಹಸ್ತಾಂತರಿಸುವ ಹಠ ಹಿಡಿದು ಕಾರ್ಯಾಚರಿಸುತ್ತಿದೆ. ಏನೆಲ್ಲ ಇದೆಯೋ ಅದನ್ನೆಲ್ಲ ಕಾರ್ಪೋರೇಟ್ ಗಳಿಗೆ ದಾನ ಕೊಡುವುದೇ ತನ್ನ ಉದ್ಯೋಗ ಎಂದು ತಿಳಿದಂತಿದೆ.

ಒಟ್ಟು ಅರ್ಥ ಏನು?

ಇಂತಹದೊಂದು ಗಂಭೀರ ಸನ್ನಿವೇಶದಲ್ಲಿ ಕೈಗಾರಿಕೆಗಳ ಪ್ರತಿನಿಧಿಯೊಬ್ಬರು ಸರ್ಕಾರವನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಾಗ ಅದನ್ನು ದೇಶದ ನಾಗರಿಕ ಹೇಗೆ ಗ್ರಹಿಸಬೇಕು?

ಸರ್ಕಾರವೊಂದು ತನ್ನ ಎಲ್ಲ ಬಲ ಬಳಸಿಕೊಂಡು, ತನ್ನ ವಿರುದ್ಧ ತಳಮಟ್ಟದಲ್ಲಿ ಯಾರೂ ಚಕಾರ ಎತ್ತುವಂತಿಲ್ಲ ಎಂಬ ವಾತಾವರಣ ನಿರ್ಮಿಸಿರುವಾಗ, ಧ್ವನಿ ಎತ್ತಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನೂ ತನ್ನ ಕ್ರಿಯೆಯ ಮೂಲಕವೇ ಸ್ಪಷ್ಟವಾಗಿ ನೀಡಿರುವಾಗ, ರಾಹುಲ್ ಬಜಾಜ್ ಅವರ ಈ ಪ್ರತಿಕ್ರಿಯೆ “ಕೃತಕವಾಗಿ ಉತ್ಪಾದಿಸಲಾದ” ಪ್ರತಿಕ್ರಿಯೆ ಎಂಬ ಯೋಚನೆಗಳು ಬರುವುದೂ ಸಹಜ.

ಸಾವಿರಾರು ರೈತರು ದಿಲ್ಲಿ ಚಲೋ ಮಾಡಿದಾಗಲಾಗಲೀ, ಬ್ಯಾಂಕ್ ನೌಕರರು-ಸಾರ್ವಜನಿಕ ವಲಯದ ಸಂಸ್ಥೆಗಳ ಉದ್ಯೋಗಿಗಳು ತಮ್ಮ ಸಂಸ್ಥೆಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂದು ನಡೆಸಿದ ಹೋರಾಟಕ್ಕಾಗಲೀ, ಯಾವತ್ತೂ ಮಣೆ ಹಾಕದ ಮಾಧ್ಯಮಗಳು ಇದೊಂದು ಒಂಟಿಧ್ವನಿಗೆ ಈ ಮಹತ್ವ ಯಾಕೆ ಕೊಟ್ಟವು?!

ಸದ್ಯಕ್ಕೆ ಚಹಾಕಪ್ಪಿನಲ್ಲಿ ನಡೆದುಹೋದ ಈ ಕ್ರಾಂತಿ ಅಲ್ಲಿಂದ ಹೊರಜಗತ್ತಿಗೆ ಚೆಲ್ಲಿ ಬಿರುಗಾಳಿ ಮೂಡಿಸೀತೇ ಎಂಬುದು ಸ್ಪಷ್ಟವಾಗಲು ಇನ್ನೂ ಸ್ವಲ್ಪ ಸಮಯ ಕಾದುನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...