Homeಎಕಾನಮಿಬಜಾಜ್ ಅವರ ಬುಲಂದ್ “ಟೀಕೆ” ಮತ್ತು ಹಮಾರಾ “ಮಿಜಾಜ್” : ರಾಜಾರಾಂ ತಲ್ಲೂರು

ಬಜಾಜ್ ಅವರ ಬುಲಂದ್ “ಟೀಕೆ” ಮತ್ತು ಹಮಾರಾ “ಮಿಜಾಜ್” : ರಾಜಾರಾಂ ತಲ್ಲೂರು

- Advertisement -
- Advertisement -

ಸರ್ಕಾರವೊಂದು ತನ್ನ ಎಲ್ಲ ಬಲ ಬಳಸಿಕೊಂಡು, ತನ್ನ ವಿರುದ್ಧ ತಳಮಟ್ಟದಲ್ಲಿ ಯಾರೂ ಚಕಾರ ಎತ್ತುವಂತಿಲ್ಲ ಎಂಬ ವಾತಾವರಣ ನಿರ್ಮಿಸಿರುವಾಗ, ಧ್ವನಿ ಎತ್ತಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನೂ ತನ್ನ ಕ್ರಿಯೆಯ ಮೂಲಕವೇ ಸ್ಪಷ್ಟವಾಗಿ ನೀಡಿರುವಾಗ, ರಾಹುಲ್ ಬಜಾಜ್ ಅವರ ಈ ಪ್ರತಿಕ್ರಿಯೆ “ಕೃತಕವಾಗಿ ಉತ್ಪಾದಿಸಲಾದ” ಪ್ರತಿಕ್ರಿಯೆ ಎಂಬ ಯೋಚನೆಗಳು ಬರುವುದೂ ಸಹಜ.

ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ ಎಂಬುದರಲ್ಲಿ ಅಧಿಕಾರಸ್ಥರ ಪಾವತಿ ಕೂಲಿಗಳು (ಟ್ರಾಲ್ ಸೇನೆ) ಬಿಟ್ಟರೆ ಬೇರಾರಿಗೂ ಎಲ್ಲೂ ಯಾರಿಗೂ ಸಂಶಯ ಉಳಿದಂತಿಲ್ಲ. ಸ್ವತಃ ಹಣಕಾಸು ಸಚಿವೆ ಎಲ್ಲವೂ ಸರಿಯಿಲ್ಲ, ಆದರೆ ಪೂರ್ಣ ಕೆಟ್ಟಿಲ್ಲ ಎಂದು ಸಂಸತ್ತಿನಲ್ಲೇ ದಾಖಲಿಸಿಯಾಗಿದೆ. ಸಾರ್ವಜನಿಕ ಅಭಿಪ್ರಾಯಗಳೂ ಈ ನಿಟ್ಟಿನಲ್ಲಿ ಹರಳುಗಟ್ಟಿವೆ.

ಮೊನ್ನೆ ಡಿಸೆಂಬರ್ ಒಂದರಂದು ಎಕನಾಮಿಕ್ ಟೈಮ್ಸ್ ಕಾನ್‍ಕ್ಲೇವ್‍ನಲ್ಲಿ ವೇದಿಕೆಯ ಮೇಲಿದ್ದ ಗೃಹ ಸಚಿವ ಅಮಿತ್ ಷಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೇ ಸಚಿವ ಪಿಯೂಷ ಗೋಯಲ್ ಅವರನ್ನುದ್ದೇಶಿಸಿ ಬಜಾಜ್ ಗುಂಪಿನ ಮುಖ್ಯಸ್ಥ ರಾಹುಲ್ ಬಜಾಜ್ ಅವರು, ಸರ್ಕಾರದ ವಿರುದ್ಧ ಕುತೂಹಲಕರ ಟೀಕೆಯೊಂದನ್ನು ಮಾಡುತ್ತಾರೆ. “ಯುಪಿಎ -2 ಆಳ್ವಿಕೆಯಲ್ಲಿ ನಾವು (ಉದ್ಯಮಿಗಳು) ಯಾರನ್ನು ಬೇಕಿದ್ದರೂ ಟೀಕಿಸಬಹುದಿತ್ತು. ಆದರೆ ನೀವೀಗ ಅದನ್ನು (ಟೀಕೆಯನ್ನು) ಸ್ವೀಕರಿಸುತ್ತೀರಿ ಎಂಬ ವಿಶ್ವಾಸ ಇಲ್ಲ. ನಾನು ಹೇಳುತ್ತಿರುವುದು ತಪ್ಪಿರಬಹುದು, ಆದರೆ ಎಲ್ಲರಲ್ಲೂ ಈ ಭಾವನೆ ಇದೆ.”

ಅಸಹನೆಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವಾಗ ಹುಲ್ಲುಕಡ್ಡಿಯಂತೆ ಕಾಣಿಸಿಕೊಂಡ ಈ ಟೀಕೆಯನ್ನು ಎಲ್ಲರೂ ಗಪ್ಪೆಂದು ಹಿಡಿದು ಕುಳಿತಿರುವ ರೀತಿ – ಹಲವಾರು ವ್ಯಥೆಗಳನ್ನು ಒಟ್ಟಾಗಿ ಹೇಳುತ್ತಿದೆ. ಅಲ್ಲಿ ದೇಶದ ಹಲವು ಮಂದಿ ಪ್ರಮುಖ ಕಾರ್ಪೋರೇಟ್ ಧಣಿಗಳು ಹಾಜರಿದ್ದರು.

ಅಧಿಕಾರಸ್ಥರ ಪ್ರತಿಕ್ರಿಯೆ
ಮೊದಲನೆಯದಾಗಿ ಬಜಾಜ್ ಟೀಕೆಗೆ ಅಲ್ಲೇ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಷಾ , ನರೇಂದ್ರ ಮೋದಿ ಸರ್ಕಾರ ಅತ್ಯಂತ ಹೆಚ್ಚು ಟೀಕೆಗೊಳಗಾಗಿರುವ ಸರ್ಕಾರ ಎಂದರಲ್ಲದೇ ಬಿಜೆಪಿಗೆ ಸತ್ಯ ತಿಳಿಸುವ ಕುರಿತು ಇನ್ನೂ ಜನರಲ್ಲಿ ಭಯ ಇದ್ದರೆ, ಅದನ್ನು ಹೋಗಲಾಡಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಭರವಸೆ ಇತ್ತರು. ಇದು ಸರ್ಕಾರದ ಕಡೆಯಿಂದ ಬಂದ ತಕ್ಷಣದ ಪ್ರತಿಕ್ರಿಯೆ.

ಅದಾದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮರುದಿನ, ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿ, ಪ್ರಶ್ನೆ ಕೇಳಿ ಉತ್ತರ ಪಡೆಯುವ ಬದಲು, ಅಭಿಪ್ರಾಯಗಳನ್ನು ಹರಡುತ್ತಾ ಹೋದರೆ ಆ ಅಭಿಪ್ರಾಯ ಜನಪ್ರಿಯವಾಗತೊಡಗಿದೊಡನೆ ದೇಶದ ಹಿತಾಸಕ್ತಿಗೆ ಹಾನಿ ಆಗಬಹುದೆಂದು ಎಚ್ಚರಿಸಿದರು.

ಅದೇದಿನ ಅಧಿಕಾರಸ್ಥರ ಮುಖವಾಣಿ ಸ್ವರಾಜ್ಯ ಮ್ಯಾಗಝೀನಿನ ಸಂಪಾದಕ ಆನಂದ್ ರಂಗನಾಥನ್ ಅವರು ಒಂದು ಟ್ವೀಟ್‍ನಲ್ಲಿ “ಬಜಾಜ್‍ಗೆ ಪ್ರಜ್ಞೆ ಬರಬೇಕೆಂದರೆ (ಅವರ ಸ್ಕೂಟರಿನಂತೆ) ಎರಡು ಬಾರಿ ಬಗ್ಗಿಸಿ ಕಿಕ್ ಒದೆಯಬೇಕು. ಓಆಂ ಸರ್ಕಾರ ಎದುರಿಸಿದಷ್ಟು ಟೀಕೆಗಳನ್ನು ಯಾರೂ ಎದುರಿಸಿಲ್ಲ. ಅವರು ಯಾವ ಲೋಕದಲ್ಲಿದ್ದಾರೆ? ಭೂಲೋಕದಲ್ಲಂತೂ ಅಲ್ಲ” ಎಂದು ವ್ಯಂಗ್ಯವಾಗಿ ಹೇಳಿದರು.

ಕಳೆದ ಆರು ವರ್ಷಗಳಲ್ಲಿ ಹಾಲೀ ಕೇಂದ್ರ ಸರ್ಕಾರದ ಮತ್ತವರ ಸಮರ್ಥಕರ ಕಾರ್ಯವೈಖರಿಯನ್ನು ಅರಿತಿರುವವರಿಗೆ ಈ ಮೂರು ಪ್ರತಿಕ್ರಿಯೆಗಳು ಸ್ತರವಾರು ಏನನ್ನು ಧ್ವನಿಸುತ್ತಿವೆ ಎಂಬುದನ್ನು ವಿವರಿಸಬೇಕಾಗಿಲ್ಲ.

ಉದ್ಯಮಿಗಳೇಕೆ ಹೀಗೆ?

ಇಲ್ಲಿ ನಿಜಕ್ಕೂ ಅಚ್ಚರಿ ಪಡಬೇಕಾಗಿರುವುದು ರಾಹುಲ್ ಬಜಾಜ್, ಕಿರಣ್ ಮಜುಂದಾರ್ ಅವರಂತಹ ದೊಡ್ಡ ಉದ್ಯಮಪತಿಗಳ ಈ ಚಹಾಕಪ್ಪಿನ ಹಠಾತ್ ಕ್ರಾಂತಿಯ ಬಗ್ಗೆ. ಯಾಕೆಂದರೆ, ಹಾಲೀ ಕೇಂದ್ರ ಸರ್ಕಾರ ಕಳೆದ ಆರು ವರ್ಷಗಳಲ್ಲಿ, ಅದರಲ್ಲೂ ನೋಟು ರದ್ಧತಿಯ ಬಳಿಕ, ಉದ್ದಿಮೆಗಳಿಗೆ ಕೊಟ್ಟಿರುವಷ್ಟು ಸವಲತ್ತುಗಳನ್ನು ಬೇರಾರಿಗೂ ಕೊಟ್ಟಿಲ್ಲ. ಆದರೂ ಹೀಗೇಕೆ?

ಒಂದು ಮಗ್ಗುಲಿನಿಂದ ನೋಡಿದಾಗ, ಇದು ಅಧಿಕಾರಸ್ಥರಿಗೆ ಹತ್ತಿರ ಇರುವ ಉದ್ದಿಮೆಗಳ (ಉದಾಹರಣೆಗೆ ಎಲ್ಲ ಆರ್ಥಿಕ ಹೊಡೆತಗಳ ಹೊರತಾಗಿಯೂ ಅಸ್ವಾಭಾವಿಕ ಎಂಬಷ್ಟು ಬೆಳವಣಿಗೆ ಕಂಡಿರುವ ಅದಾನಿ, ಅಂಬಾನಿ ಇತ್ಯಾದಿ ಕಾರ್ಪೋರೇಟ್ ಗಳು) ವಿರುದ್ಧ ಸ್ವಲ್ಪ ದೂರದಲ್ಲಿರುವವರ ಅಸಹಾಯಕ ಅಸಹನೆಯಂತೆ ಕಾಣಿಸುತ್ತದೆ.
ಎರಡನೆಯದಾಗಿ ತಮ್ಮ ಇಷ್ಟಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೆ, ಸರ್ಕಾರಿ ವ್ಯವಸ್ಥೆ ಬಳಸಿಕೊಂಡು ಉದ್ದಿಮೆಗಳವರ ಬೆನ್ನು ಮುರಿಯಲು ನಾವು ಹಿಂಜರಿಯಲಾರೆವು ಎಂಬ ಸರ್ಕಾರದ ಪರೋಕ್ಷ ಎಚ್ಚರಿಕೆಗೆ ಉದ್ಯಮಿ ವರ್ಗದ ಭಯ-ಆತಂಕದ ಪ್ರತಿಕ್ರಿಯೆಯೂ ಇದಾಗಿರಬಹುದು.

ಇದಲ್ಲದೇ ಬೇರೆ ಕಾರಣಗಳೂ ಇದ್ದಿರಬಹುದು. ಆದರೆ ಕಾರಣಗಳಿಗಿಂತ ಹೆಚ್ಚಾಗಿ ಇದೊಂದು ಸುಯೋಜಿತ ತಂತ್ರವಾಗಿರಬಹುದು ಎಂಬ ಸಂಶಯ ಮೂಡಿದರೂ ಅಚ್ಚರಿ ಇಲ್ಲ.

ಮಾರುಕಟ್ಟೆಯ ವಾಸ್ತವಗಳು

ಆದರೆ ಸೇವಾ ಉದ್ಯಮವನ್ನೇ 65%ರಷ್ಟು ನೆಚ್ಚಿಕೊಂಡಿರುವ ಭಾರತದಂತಹ ದೇಶವೊಂದರಲ್ಲಿ ಮೂಲಸೌಕರ್ಯ, ಆಟೊ ಮೊಬೈಲ್‍ನಂತಹ ಉದ್ಯಮಗಳು ಬದಿಗೆ ಸರಿಯತೊಡಗಿದ್ದು ಹೊಸ ಬೆಳವಣಿಗೆಯೇನಲ್ಲ. ಇದು 90ರ ದಶಕದ ಕೊನೆಯಲ್ಲಿ ನಡೆದ “ಐಟಿ ಕ್ರಾಂತಿ”ಯ ಫಲ.

ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿತ, ಮಾರುಕಟ್ಟೆಯಲ್ಲಿ ಬೇರೆ ದೇಶಗಳ ಬುಡ ಕತ್ತರಿಸುವ ಸ್ಪರ್ಧೆ ಹಾಗೂ ಮೂರನೇ ಹಂತದ ಐಟಿ ಕ್ರಾಂತಿ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇತ್ಯಾದಿ) ಆರಂಭಗೊಂಡಿರುವುದರಿಂದ, ಅದಕ್ಕೆ ಸನ್ನದ್ಧಗೊಂಡಿರದ ಭಾರತದ ಐಟಿ ಉದ್ಯಮ ಥಂಡಾ ಹೊಡೆಯುತ್ತಿದೆ. ಪರ್ಯಾಯ ಇಂಧನ ಮೂಲಗಳ ಗಲಾಟೆಯಲ್ಲಿ ಆಟೊಮೊಬೈಲ್ ಉದ್ಯಮ ಕೂಡ ದಾರಿಕಾಣದೆ ನಿಂತಿದೆ.

ಇತ್ತ ಡಿಮಾನೆಟೈಸೇಷನ್‍ನಿಂದಾಗಿ ದೇಶದ ಹಣಕಾಸು ವ್ಯವಸ್ಥೆಗೆ “ಸಾಸಿವೆ ಡಬ್ಬಿಯ ಶಾಪ” ತಗುಲಿದೆ. ಒಂದು ಪುಟ್ಟ ಗಲ್ಲಿಯ ಆರ್ಥಿಕತೆಯ ಮೇಲೆ ಇದರಿಂದ ಬಿದ್ದಿರುವ ಹೊಡೆತ ಹಂತಹಂತವಾಗಿ ಮೇಲೆದ್ದು, ಎಲ್ಲವನ್ನೂ ನುಂಗಿ ನೊಣೆಯುತ್ತಾ, ಬಹುತೇಕ ಎಲ್ಲ ಮೂಲಸೌಕರ್ಯ ಉದ್ದಿಮೆಗಳ ಮೇಲೂ ದುಷ್ಪರಿಣಾಮ ಬೀರಿದೆ.

ನೋಟುರದ್ಧತಿಯ ಬಳಿಕ ಕೇಂದ್ರ ಸರ್ಕಾರ ತನ್ನಲ್ಲಿ ಆರೋಗ್ಯವಂತ ಯೋಜನೆಯೊಂದು ಇದ್ದಿದ್ದರೆ, ತನ್ನ ಮರುನಿರ್ಮಾಣ ಕೆಲಸವನ್ನು ದೇಶದ ಕೃಷಿಭೂಮಿಗಳಿಂದ ಆರಂಭಿಸಬೇಕಿತ್ತು. ಅದನ್ನು ಬಿಟ್ಟು ಕೃಷಿ ಭೂಮಿಗಳನ್ನು ಈಗ ಕೆಲಸ ಇಲ್ಲದೆ ಕುಳಿತಿರುವ ಕಾರ್ಪೋರೇಟ್ ಗಳಿಗೆ ಹಸ್ತಾಂತರಿಸುವ ಹಠ ಹಿಡಿದು ಕಾರ್ಯಾಚರಿಸುತ್ತಿದೆ. ಏನೆಲ್ಲ ಇದೆಯೋ ಅದನ್ನೆಲ್ಲ ಕಾರ್ಪೋರೇಟ್ ಗಳಿಗೆ ದಾನ ಕೊಡುವುದೇ ತನ್ನ ಉದ್ಯೋಗ ಎಂದು ತಿಳಿದಂತಿದೆ.

ಒಟ್ಟು ಅರ್ಥ ಏನು?

ಇಂತಹದೊಂದು ಗಂಭೀರ ಸನ್ನಿವೇಶದಲ್ಲಿ ಕೈಗಾರಿಕೆಗಳ ಪ್ರತಿನಿಧಿಯೊಬ್ಬರು ಸರ್ಕಾರವನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಾಗ ಅದನ್ನು ದೇಶದ ನಾಗರಿಕ ಹೇಗೆ ಗ್ರಹಿಸಬೇಕು?

ಸರ್ಕಾರವೊಂದು ತನ್ನ ಎಲ್ಲ ಬಲ ಬಳಸಿಕೊಂಡು, ತನ್ನ ವಿರುದ್ಧ ತಳಮಟ್ಟದಲ್ಲಿ ಯಾರೂ ಚಕಾರ ಎತ್ತುವಂತಿಲ್ಲ ಎಂಬ ವಾತಾವರಣ ನಿರ್ಮಿಸಿರುವಾಗ, ಧ್ವನಿ ಎತ್ತಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನೂ ತನ್ನ ಕ್ರಿಯೆಯ ಮೂಲಕವೇ ಸ್ಪಷ್ಟವಾಗಿ ನೀಡಿರುವಾಗ, ರಾಹುಲ್ ಬಜಾಜ್ ಅವರ ಈ ಪ್ರತಿಕ್ರಿಯೆ “ಕೃತಕವಾಗಿ ಉತ್ಪಾದಿಸಲಾದ” ಪ್ರತಿಕ್ರಿಯೆ ಎಂಬ ಯೋಚನೆಗಳು ಬರುವುದೂ ಸಹಜ.

ಸಾವಿರಾರು ರೈತರು ದಿಲ್ಲಿ ಚಲೋ ಮಾಡಿದಾಗಲಾಗಲೀ, ಬ್ಯಾಂಕ್ ನೌಕರರು-ಸಾರ್ವಜನಿಕ ವಲಯದ ಸಂಸ್ಥೆಗಳ ಉದ್ಯೋಗಿಗಳು ತಮ್ಮ ಸಂಸ್ಥೆಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂದು ನಡೆಸಿದ ಹೋರಾಟಕ್ಕಾಗಲೀ, ಯಾವತ್ತೂ ಮಣೆ ಹಾಕದ ಮಾಧ್ಯಮಗಳು ಇದೊಂದು ಒಂಟಿಧ್ವನಿಗೆ ಈ ಮಹತ್ವ ಯಾಕೆ ಕೊಟ್ಟವು?!

ಸದ್ಯಕ್ಕೆ ಚಹಾಕಪ್ಪಿನಲ್ಲಿ ನಡೆದುಹೋದ ಈ ಕ್ರಾಂತಿ ಅಲ್ಲಿಂದ ಹೊರಜಗತ್ತಿಗೆ ಚೆಲ್ಲಿ ಬಿರುಗಾಳಿ ಮೂಡಿಸೀತೇ ಎಂಬುದು ಸ್ಪಷ್ಟವಾಗಲು ಇನ್ನೂ ಸ್ವಲ್ಪ ಸಮಯ ಕಾದುನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...