Homeಮುಖಪುಟ45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

- Advertisement -
- Advertisement -

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್ ಆಗಿದ್ದರೂ, ಬಂಕ್ ಸಿಬ್ಬಂದಿ ಬರೋಬ್ಬರಿ 52 ಲೀಟರ್ ಪೆಟ್ರೋಲ್ ತುಂಬಿ ಬಿಲ್ ನೀಡಿದ್ದಾರೆ! ಕಾರಿನ ಮಾಲೀಕರು ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ ನಂತರ, ಜಿಲ್ಲಾಡಳಿತವು ತಕ್ಷಣವೇ ಮಧ್ಯಪ್ರವೇಶಿಸಿ ಪೆಟ್ರೋಲ್ ಬಂಕ್‌ನ ಯಂತ್ರಗಳ ತಪಾಸಣೆಗೆ ಆದೇಶಿಸಿದೆ.

ಘಟನೆಯ ವಿವರ:

ಕಾರಿನ ಮಾಲೀಕರಾದ ಚರಣ್ ಸಿಂಗ್ ಅವರು ಇತ್ತೀಚೆಗಷ್ಟೇ ಹೊಸ ‘ಫೋಕ್ಸ್‌ವ್ಯಾಗನ್ ವರ್ಟಸ್’ (Volkswagen Virtus) ಕಾರನ್ನು ಖರೀದಿಸಿದ್ದರು. ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗುತ್ತಿದೆ ಎಂಬ ಇಂಡಿಕೇಟರ್ ತೋರಿಸಿದಾಗ, ಅವರು ಬಂಕ್‌ಗೆ ಹೋಗಿ ಟ್ಯಾಂಕ್ ಫುಲ್ (ಗರಿಷ್ಠ ಸಾಮರ್ಥ್ಯಕ್ಕೆ) ಮಾಡಲು ಹೇಳಿದರು.

ಮೊದಲು ಸಿಬ್ಬಂದಿ ಸುಮಾರು 41 ಲೀಟರ್ ಪೆಟ್ರೋಲ್ ತುಂಬಿಸಿ ಅರ್ಧಕ್ಕೆ ನಿಲ್ಲಿಸಿದರು. ಚರಣ್ ಸಿಂಗ್ ಅವರು ಯಾಕೆ ನಿಲ್ಲಿಸಿದ್ರಿ ಎಂದು ಕೇಳಿದಾಗ, “ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ತುಂಬಿಸುವಾಗ ಎರಡು ಕಂತುಗಳಲ್ಲಿ ತುಂಬಿಸಬೇಕು” ಎಂದು ಸಿಬ್ಬಂದಿ ಹಾರಿಕೆ ಉತ್ತರ ನೀಡಿ, ಮತ್ತೆ ಪೆಟ್ರೋಲ್ ತುಂಬಲು ಆರಂಭಿಸಿದರು. ಆದರೆ, ಬಿಲ್ ಕೈಗೆ ಬಂದಾಗ ಚರಣ್ ಸಿಂಗ್ ಅವರಿಗೆ ಶಾಕ್ ಕಾದಿತ್ತು. ಅದರಲ್ಲಿ ಒಟ್ಟು 52 ಲೀಟರ್ ಪೆಟ್ರೋಲ್ ತುಂಬಲಾಗಿದೆ ಎಂದು ಬರೆಯಲಾಗಿತ್ತು ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ತನಿಖೆಗೆ ಆದೇಶ:

ಕೇವಲ 45 ಲೀಟರ್ ಹಿಡಿಯುವ ಟ್ಯಾಂಕಿಗೆ 52 ಲೀಟರ್ ತುಂಬಿಸಲು ಹೇಗೆ ಸಾಧ್ಯ ಎಂದು ಚರಣ್ ಸಿಂಗ್ ಬಂಕ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದೊಂದು ಸಂಘಟಿತ ವಂಚನೆ ಜಾಲ ಎಂದು ಶಂಕಿಸಿದ ಅವರು, ತಕ್ಷಣವೇ ಕಾರು ತಯಾರಕ ಕಂಪನಿಯ (Volkswagen) ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿದರು. ಸ್ಥಳಕ್ಕೆ ಬಂದ ಕಂಪನಿ ಅಧಿಕಾರಿ, “ಯಾವುದೇ ಪರಿಸ್ಥಿತಿಯಲ್ಲೂ ಈ ಕಾರಿನ ಟ್ಯಾಂಕ್‌ನಲ್ಲಿ 45 ಲೀಟರ್‌ಗಿಂತ ಹೆಚ್ಚು ಪೆಟ್ರೋಲ್ ಹಿಡಿಯಲು ಸಾಧ್ಯವೇ ಇಲ್ಲ” ಎಂದು ತಾಂತ್ರಿಕವಾಗಿ ದೃಢಪಡಿಸಿದರು.

ತಾಂತ್ರಿಕ ಪುರಾವೆ ಸಿಗುತ್ತಿದ್ದಂತೆ ಪೆಟ್ರೋಲ್ ಬಂಕ್ ಮ್ಯಾನೇಜ್ಮೆಂಟ್ ಅಸ್ಪಷ್ಟ ನೆಪಗಳನ್ನು ಹೇಳಲು ತೊಡಗಿತು. ಸ್ಥಳೀಯ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳ ಶಾಮೀಲಿನಿಂದಲೇ ಈ ವಂಚನೆ ನಡೆಯುತ್ತಿದೆ ಎಂದು ಆರೋಪಿಸಿ ಚರಣ್ ಸಿಂಗ್ ಅವರು ಅಧಿಕೃತ ದೂರು ದಾಖಲಿಸಿದ್ದಾರೆ. ಸದ್ಯ ಜಿಲ್ಲಾಡಳಿತವು ಬಂಕ್‌ನ ಮಷೀನ್‌ಗಳನ್ನು ಜಪ್ತಿ ಮಾಡಿ ತನಿಖೆ ಕೈಗೆತ್ತಿಕೊಂಡಿದೆ.

ಇದು ಕೇವಲ ಕಾನ್ಪುರದ ಕಥೆಯಲ್ಲ, ನಾವು ವಾಹನಗಳಿಗೆ ಇಂಧನ ತುಂಬಿಸುವಾಗಲೂ ಇದೇ ರೀತಿ ಆಗಿರಲುಬಹುದು, ಆದರೆ ನಮ್ಮ ಒತ್ತಡದ ಕೆಲಸಗಳು, ತರಾತುರಿಗಳ ನಡುವೆ ಇದರ ಬಗ್ಗೆ ಹೆಚ್ಚು ಗಮನಕೊಡಲು ಆಗಿರುವುದಿಲ್ಲ. ಪೆಟ್ರೋಲ್ ಪಂಪ್ ಸಿಬ್ಬಂದಿಗೆ ಇಂತಿಷ್ಟು ರೂಪಾಯಿಯ ಇಂಧನ ತುಂಬಿಸಲು ಹೇಳಿ ನಮ್ಮಷ್ಟಕ್ಕೆ ನಾವು ಹೊರಟುಬಿಡುತ್ತೇವೆ. ಆದರೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂತಹ ಅತ್ಯಾಧುನಿಕ ತಂತ್ರಜ್ಞಾನದ ವಂಚನೆಗಳು (ಚಿಪ್ ಅಳವಡಿಕೆ ಅಥವಾ ರೀಡಿಂಗ್ ಮ್ಯಾನಿಪ್ಯುಲೇಷನ್) ನಡೆಯುತ್ತಿರುತ್ತವೆ. ಹಾಗಾಗಿ, ನಾವು ಪೆಟ್ರೋಲ್ ಹಾಕಿಸುವಾಗ ಈ ಕೆಳಗಿನ ಅಂಶಗಳ ಬಗ್ಗೆ ಜಾಗರೂಕರಾಗಿರಬೇಕು

ಟ್ಯಾಂಕ್ ಫುಲ್’ ಮಾಡಿಸುವಾಗ ಎಚ್ಚರ: ಎಂದಿಗೂ ಬಂಕ್ ಸಿಬ್ಬಂದಿಗೆ ‘ಟ್ಯಾಂಕ್ ಫುಲ್ ಮಾಡಿ’ ಎಂದು ಮುಖತಃ ಹೇಳಿ ಬೇರೆ ಕಡೆ ಗಮನ ಹರಿಸಬೇಡಿ. ನಿಮ್ಮ ಕಾರಿನ ಟ್ಯಾಂಕ್ ಸಾಮರ್ಥ್ಯ (Tank Capacity) ಎಷ್ಟು ಲೀಟರ್ ಇದೆ ಎಂಬ ಕನಿಷ್ಠ ಜ್ಞಾನ ನಿಮಗಿರಬೇಕು.

ಮಧ್ಯದಲ್ಲಿ ನಿಲ್ಲಿಸುವ ತಂತ್ರ (Short Fill Scam): ಈ ಘಟನೆಯಲ್ಲಿ ನಡೆದಂತೆ, ಪೆಟ್ರೋಲ್ ಹಾಕುವಾಗ ಸಿಬ್ಬಂದಿ ಮಧ್ಯದಲ್ಲಿ ಇದ್ದಕ್ಕಿದ್ದಂತೆ ನಿಲ್ಲಿಸಿ (Pause), ಆಮೇಲೆ ಮಾತು ಬದಲಾಯಿಸಿ ಮತ್ತೆ ಅಲ್ಲಿಂದಲೇ ಮುಂದುವರಿಸುತ್ತಾರೆ. ಇದು ರೀಡಿಂಗ್‌ನಲ್ಲಿ ವಂಚನೆ ಮಾಡಲು ಬಳಸುವ ತಂತ್ರ. ಪೆಟ್ರೋಲ್ ಹಾಕಿಸುವಾಗ ರೀಡಿಂಗ್ ಒಂದೇ ಸಮನೆ (Continuous) ಆಗಿ ಸಾಗುತ್ತಿದೆಯೇ ಎಂದು ಗಮನಿಸಿ.

‘ಝೀರೋ’ (Zero) ಮಾತ್ರವಲ್ಲ, ಸಾಂದ್ರತೆ (Density) ನೋಡಿ: ಪೆಟ್ರೋಲ್ ಹಾಕಿಸುವ ಮುನ್ನ ಮಷೀನ್‌ನಲ್ಲಿ ಕೇವಲ ‘0.00’ ರೀಡಿಂಗ್ ಮಾತ್ರವಲ್ಲದೆ, ಇಂಧನದ ಸಾಂದ್ರತೆ (Density) ಸರಿಯಾಗಿದೆಯೇ ಎಂದು ನೋಡಿ. ಪೆಟ್ರೋಲ್ ಸಾಂದ್ರತೆ 720 ರಿಂದ 775 kg/m³ ಮತ್ತು ಡೀಸೆಲ್ ಸಾಂದ್ರತೆ 820 ರಿಂದ 860 kg/m³ ಇರಬೇಕು.

ಪ್ರಮಾಣದ ಬಗ್ಗೆ ಸಂಶಯ ಬಂದರೆ ‘5 ಲೀಟರ್ ಟೆಸ್ಟ್’ ಕೇಳಿ: ಭಾರತ ಸರ್ಕಾರದ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲೂ ತೂಕ ಮತ್ತು ಅಳತೆ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ 5 ಲೀಟರ್‌ನ ಜಾರ್ (Conical Measure) ಇರಲೇಬೇಕು. ನಿಮಗೆ ಇಂಧನದ ಪ್ರಮಾಣದಲ್ಲಿ ಸಂಶಯ ಬಂದರೆ, ಆ ಜಾರ್‌ಗೆ 5 ಲೀಟರ್ ಪೆಟ್ರೋಲ್ ಹಾಕಿಸಿ ಅಳತೆ ತೋರಿಸಲು ನೀವು ಕಾನೂನುಬದ್ಧವಾಗಿ ಕೇಳಬಹುದು. ಬಂಕ್‌ನವರು ಇದನ್ನು ನಿರಾಕರಿಸುವಂತಿಲ್ಲ.

ಡಿಜಿಟಲ್ ರಶೀದಿ ಪಡೆದುಕೊಳ್ಳಿ: ಪೆಟ್ರೋಲ್ ಹಾಕಿಸಿದ ನಂತರ ಕಡ್ಡಾಯವಾಗಿ ಇ-ರಶೀದಿ ಅಥವಾ ಪ್ರಿಂಟೆಡ್ ಬಿಲ್ ಪಡೆದುಕೊಳ್ಳಿ. ಅದರಲ್ಲಿ ಗಾಡಿಯ ನಂಬರ್ ಮತ್ತು ಎಷ್ಟು ಇಂಧನ ಹಾಕಿಸಿದ್ದೇವೆ ಎಂಬುದು ಸ್ಪಷ್ಟವಾಗಿರಲಿ. ಇದು ಮುಂದೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಲು ಪ್ರಮುಖ ಪುರಾವೆಯಾಗುತ್ತದೆ. ಪ್ರತಿ ಬಾರಿ ಪೆಟ್ರೋಲ್ ಹಾಕಿಸುವಾಗಲೂ ವಾಹನದಿಂದ ಕೆಳಗಿಳಿದು ರೀಡಿಂಗ್ ಅನ್ನು ಸೂಕ್ಷ್ಮವಾಗಿ ಗಮನಿಸುವುದು ಇಂತಹ ವಂಚನೆಗಳಿಂದ ಪಾರಾಗಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...