Homeಮುಖಪುಟ45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

- Advertisement -
- Advertisement -

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್ ಆಗಿದ್ದರೂ, ಬಂಕ್ ಸಿಬ್ಬಂದಿ ಬರೋಬ್ಬರಿ 52 ಲೀಟರ್ ಪೆಟ್ರೋಲ್ ತುಂಬಿ ಬಿಲ್ ನೀಡಿದ್ದಾರೆ! ಕಾರಿನ ಮಾಲೀಕರು ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ ನಂತರ, ಜಿಲ್ಲಾಡಳಿತವು ತಕ್ಷಣವೇ ಮಧ್ಯಪ್ರವೇಶಿಸಿ ಪೆಟ್ರೋಲ್ ಬಂಕ್‌ನ ಯಂತ್ರಗಳ ತಪಾಸಣೆಗೆ ಆದೇಶಿಸಿದೆ.

ಘಟನೆಯ ವಿವರ:

ಕಾರಿನ ಮಾಲೀಕರಾದ ಚರಣ್ ಸಿಂಗ್ ಅವರು ಇತ್ತೀಚೆಗಷ್ಟೇ ಹೊಸ ‘ಫೋಕ್ಸ್‌ವ್ಯಾಗನ್ ವರ್ಟಸ್’ (Volkswagen Virtus) ಕಾರನ್ನು ಖರೀದಿಸಿದ್ದರು. ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗುತ್ತಿದೆ ಎಂಬ ಇಂಡಿಕೇಟರ್ ತೋರಿಸಿದಾಗ, ಅವರು ಬಂಕ್‌ಗೆ ಹೋಗಿ ಟ್ಯಾಂಕ್ ಫುಲ್ (ಗರಿಷ್ಠ ಸಾಮರ್ಥ್ಯಕ್ಕೆ) ಮಾಡಲು ಹೇಳಿದರು.

ಮೊದಲು ಸಿಬ್ಬಂದಿ ಸುಮಾರು 41 ಲೀಟರ್ ಪೆಟ್ರೋಲ್ ತುಂಬಿಸಿ ಅರ್ಧಕ್ಕೆ ನಿಲ್ಲಿಸಿದರು. ಚರಣ್ ಸಿಂಗ್ ಅವರು ಯಾಕೆ ನಿಲ್ಲಿಸಿದ್ರಿ ಎಂದು ಕೇಳಿದಾಗ, “ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ತುಂಬಿಸುವಾಗ ಎರಡು ಕಂತುಗಳಲ್ಲಿ ತುಂಬಿಸಬೇಕು” ಎಂದು ಸಿಬ್ಬಂದಿ ಹಾರಿಕೆ ಉತ್ತರ ನೀಡಿ, ಮತ್ತೆ ಪೆಟ್ರೋಲ್ ತುಂಬಲು ಆರಂಭಿಸಿದರು. ಆದರೆ, ಬಿಲ್ ಕೈಗೆ ಬಂದಾಗ ಚರಣ್ ಸಿಂಗ್ ಅವರಿಗೆ ಶಾಕ್ ಕಾದಿತ್ತು. ಅದರಲ್ಲಿ ಒಟ್ಟು 52 ಲೀಟರ್ ಪೆಟ್ರೋಲ್ ತುಂಬಲಾಗಿದೆ ಎಂದು ಬರೆಯಲಾಗಿತ್ತು ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ತನಿಖೆಗೆ ಆದೇಶ:

ಕೇವಲ 45 ಲೀಟರ್ ಹಿಡಿಯುವ ಟ್ಯಾಂಕಿಗೆ 52 ಲೀಟರ್ ತುಂಬಿಸಲು ಹೇಗೆ ಸಾಧ್ಯ ಎಂದು ಚರಣ್ ಸಿಂಗ್ ಬಂಕ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದೊಂದು ಸಂಘಟಿತ ವಂಚನೆ ಜಾಲ ಎಂದು ಶಂಕಿಸಿದ ಅವರು, ತಕ್ಷಣವೇ ಕಾರು ತಯಾರಕ ಕಂಪನಿಯ (Volkswagen) ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿದರು. ಸ್ಥಳಕ್ಕೆ ಬಂದ ಕಂಪನಿ ಅಧಿಕಾರಿ, “ಯಾವುದೇ ಪರಿಸ್ಥಿತಿಯಲ್ಲೂ ಈ ಕಾರಿನ ಟ್ಯಾಂಕ್‌ನಲ್ಲಿ 45 ಲೀಟರ್‌ಗಿಂತ ಹೆಚ್ಚು ಪೆಟ್ರೋಲ್ ಹಿಡಿಯಲು ಸಾಧ್ಯವೇ ಇಲ್ಲ” ಎಂದು ತಾಂತ್ರಿಕವಾಗಿ ದೃಢಪಡಿಸಿದರು.

ತಾಂತ್ರಿಕ ಪುರಾವೆ ಸಿಗುತ್ತಿದ್ದಂತೆ ಪೆಟ್ರೋಲ್ ಬಂಕ್ ಮ್ಯಾನೇಜ್ಮೆಂಟ್ ಅಸ್ಪಷ್ಟ ನೆಪಗಳನ್ನು ಹೇಳಲು ತೊಡಗಿತು. ಸ್ಥಳೀಯ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳ ಶಾಮೀಲಿನಿಂದಲೇ ಈ ವಂಚನೆ ನಡೆಯುತ್ತಿದೆ ಎಂದು ಆರೋಪಿಸಿ ಚರಣ್ ಸಿಂಗ್ ಅವರು ಅಧಿಕೃತ ದೂರು ದಾಖಲಿಸಿದ್ದಾರೆ. ಸದ್ಯ ಜಿಲ್ಲಾಡಳಿತವು ಬಂಕ್‌ನ ಮಷೀನ್‌ಗಳನ್ನು ಜಪ್ತಿ ಮಾಡಿ ತನಿಖೆ ಕೈಗೆತ್ತಿಕೊಂಡಿದೆ.

ಇದು ಕೇವಲ ಕಾನ್ಪುರದ ಕಥೆಯಲ್ಲ, ನಾವು ವಾಹನಗಳಿಗೆ ಇಂಧನ ತುಂಬಿಸುವಾಗಲೂ ಇದೇ ರೀತಿ ಆಗಿರಲುಬಹುದು, ಆದರೆ ನಮ್ಮ ಒತ್ತಡದ ಕೆಲಸಗಳು, ತರಾತುರಿಗಳ ನಡುವೆ ಇದರ ಬಗ್ಗೆ ಹೆಚ್ಚು ಗಮನಕೊಡಲು ಆಗಿರುವುದಿಲ್ಲ. ಪೆಟ್ರೋಲ್ ಪಂಪ್ ಸಿಬ್ಬಂದಿಗೆ ಇಂತಿಷ್ಟು ರೂಪಾಯಿಯ ಇಂಧನ ತುಂಬಿಸಲು ಹೇಳಿ ನಮ್ಮಷ್ಟಕ್ಕೆ ನಾವು ಹೊರಟುಬಿಡುತ್ತೇವೆ. ಆದರೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂತಹ ಅತ್ಯಾಧುನಿಕ ತಂತ್ರಜ್ಞಾನದ ವಂಚನೆಗಳು (ಚಿಪ್ ಅಳವಡಿಕೆ ಅಥವಾ ರೀಡಿಂಗ್ ಮ್ಯಾನಿಪ್ಯುಲೇಷನ್) ನಡೆಯುತ್ತಿರುತ್ತವೆ. ಹಾಗಾಗಿ, ನಾವು ಪೆಟ್ರೋಲ್ ಹಾಕಿಸುವಾಗ ಈ ಕೆಳಗಿನ ಅಂಶಗಳ ಬಗ್ಗೆ ಜಾಗರೂಕರಾಗಿರಬೇಕು

ಟ್ಯಾಂಕ್ ಫುಲ್’ ಮಾಡಿಸುವಾಗ ಎಚ್ಚರ: ಎಂದಿಗೂ ಬಂಕ್ ಸಿಬ್ಬಂದಿಗೆ ‘ಟ್ಯಾಂಕ್ ಫುಲ್ ಮಾಡಿ’ ಎಂದು ಮುಖತಃ ಹೇಳಿ ಬೇರೆ ಕಡೆ ಗಮನ ಹರಿಸಬೇಡಿ. ನಿಮ್ಮ ಕಾರಿನ ಟ್ಯಾಂಕ್ ಸಾಮರ್ಥ್ಯ (Tank Capacity) ಎಷ್ಟು ಲೀಟರ್ ಇದೆ ಎಂಬ ಕನಿಷ್ಠ ಜ್ಞಾನ ನಿಮಗಿರಬೇಕು.

ಮಧ್ಯದಲ್ಲಿ ನಿಲ್ಲಿಸುವ ತಂತ್ರ (Short Fill Scam): ಈ ಘಟನೆಯಲ್ಲಿ ನಡೆದಂತೆ, ಪೆಟ್ರೋಲ್ ಹಾಕುವಾಗ ಸಿಬ್ಬಂದಿ ಮಧ್ಯದಲ್ಲಿ ಇದ್ದಕ್ಕಿದ್ದಂತೆ ನಿಲ್ಲಿಸಿ (Pause), ಆಮೇಲೆ ಮಾತು ಬದಲಾಯಿಸಿ ಮತ್ತೆ ಅಲ್ಲಿಂದಲೇ ಮುಂದುವರಿಸುತ್ತಾರೆ. ಇದು ರೀಡಿಂಗ್‌ನಲ್ಲಿ ವಂಚನೆ ಮಾಡಲು ಬಳಸುವ ತಂತ್ರ. ಪೆಟ್ರೋಲ್ ಹಾಕಿಸುವಾಗ ರೀಡಿಂಗ್ ಒಂದೇ ಸಮನೆ (Continuous) ಆಗಿ ಸಾಗುತ್ತಿದೆಯೇ ಎಂದು ಗಮನಿಸಿ.

‘ಝೀರೋ’ (Zero) ಮಾತ್ರವಲ್ಲ, ಸಾಂದ್ರತೆ (Density) ನೋಡಿ: ಪೆಟ್ರೋಲ್ ಹಾಕಿಸುವ ಮುನ್ನ ಮಷೀನ್‌ನಲ್ಲಿ ಕೇವಲ ‘0.00’ ರೀಡಿಂಗ್ ಮಾತ್ರವಲ್ಲದೆ, ಇಂಧನದ ಸಾಂದ್ರತೆ (Density) ಸರಿಯಾಗಿದೆಯೇ ಎಂದು ನೋಡಿ. ಪೆಟ್ರೋಲ್ ಸಾಂದ್ರತೆ 720 ರಿಂದ 775 kg/m³ ಮತ್ತು ಡೀಸೆಲ್ ಸಾಂದ್ರತೆ 820 ರಿಂದ 860 kg/m³ ಇರಬೇಕು.

ಪ್ರಮಾಣದ ಬಗ್ಗೆ ಸಂಶಯ ಬಂದರೆ ‘5 ಲೀಟರ್ ಟೆಸ್ಟ್’ ಕೇಳಿ: ಭಾರತ ಸರ್ಕಾರದ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲೂ ತೂಕ ಮತ್ತು ಅಳತೆ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ 5 ಲೀಟರ್‌ನ ಜಾರ್ (Conical Measure) ಇರಲೇಬೇಕು. ನಿಮಗೆ ಇಂಧನದ ಪ್ರಮಾಣದಲ್ಲಿ ಸಂಶಯ ಬಂದರೆ, ಆ ಜಾರ್‌ಗೆ 5 ಲೀಟರ್ ಪೆಟ್ರೋಲ್ ಹಾಕಿಸಿ ಅಳತೆ ತೋರಿಸಲು ನೀವು ಕಾನೂನುಬದ್ಧವಾಗಿ ಕೇಳಬಹುದು. ಬಂಕ್‌ನವರು ಇದನ್ನು ನಿರಾಕರಿಸುವಂತಿಲ್ಲ.

ಡಿಜಿಟಲ್ ರಶೀದಿ ಪಡೆದುಕೊಳ್ಳಿ: ಪೆಟ್ರೋಲ್ ಹಾಕಿಸಿದ ನಂತರ ಕಡ್ಡಾಯವಾಗಿ ಇ-ರಶೀದಿ ಅಥವಾ ಪ್ರಿಂಟೆಡ್ ಬಿಲ್ ಪಡೆದುಕೊಳ್ಳಿ. ಅದರಲ್ಲಿ ಗಾಡಿಯ ನಂಬರ್ ಮತ್ತು ಎಷ್ಟು ಇಂಧನ ಹಾಕಿಸಿದ್ದೇವೆ ಎಂಬುದು ಸ್ಪಷ್ಟವಾಗಿರಲಿ. ಇದು ಮುಂದೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಲು ಪ್ರಮುಖ ಪುರಾವೆಯಾಗುತ್ತದೆ. ಪ್ರತಿ ಬಾರಿ ಪೆಟ್ರೋಲ್ ಹಾಕಿಸುವಾಗಲೂ ವಾಹನದಿಂದ ಕೆಳಗಿಳಿದು ರೀಡಿಂಗ್ ಅನ್ನು ಸೂಕ್ಷ್ಮವಾಗಿ ಗಮನಿಸುವುದು ಇಂತಹ ವಂಚನೆಗಳಿಂದ ಪಾರಾಗಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...