Homeಮುಖಪುಟ45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

- Advertisement -
- Advertisement -

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್ ಆಗಿದ್ದರೂ, ಬಂಕ್ ಸಿಬ್ಬಂದಿ ಬರೋಬ್ಬರಿ 52 ಲೀಟರ್ ಪೆಟ್ರೋಲ್ ತುಂಬಿ ಬಿಲ್ ನೀಡಿದ್ದಾರೆ! ಕಾರಿನ ಮಾಲೀಕರು ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ ನಂತರ, ಜಿಲ್ಲಾಡಳಿತವು ತಕ್ಷಣವೇ ಮಧ್ಯಪ್ರವೇಶಿಸಿ ಪೆಟ್ರೋಲ್ ಬಂಕ್‌ನ ಯಂತ್ರಗಳ ತಪಾಸಣೆಗೆ ಆದೇಶಿಸಿದೆ.

ಘಟನೆಯ ವಿವರ:

ಕಾರಿನ ಮಾಲೀಕರಾದ ಚರಣ್ ಸಿಂಗ್ ಅವರು ಇತ್ತೀಚೆಗಷ್ಟೇ ಹೊಸ ‘ಫೋಕ್ಸ್‌ವ್ಯಾಗನ್ ವರ್ಟಸ್’ (Volkswagen Virtus) ಕಾರನ್ನು ಖರೀದಿಸಿದ್ದರು. ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗುತ್ತಿದೆ ಎಂಬ ಇಂಡಿಕೇಟರ್ ತೋರಿಸಿದಾಗ, ಅವರು ಬಂಕ್‌ಗೆ ಹೋಗಿ ಟ್ಯಾಂಕ್ ಫುಲ್ (ಗರಿಷ್ಠ ಸಾಮರ್ಥ್ಯಕ್ಕೆ) ಮಾಡಲು ಹೇಳಿದರು.

ಮೊದಲು ಸಿಬ್ಬಂದಿ ಸುಮಾರು 41 ಲೀಟರ್ ಪೆಟ್ರೋಲ್ ತುಂಬಿಸಿ ಅರ್ಧಕ್ಕೆ ನಿಲ್ಲಿಸಿದರು. ಚರಣ್ ಸಿಂಗ್ ಅವರು ಯಾಕೆ ನಿಲ್ಲಿಸಿದ್ರಿ ಎಂದು ಕೇಳಿದಾಗ, “ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ತುಂಬಿಸುವಾಗ ಎರಡು ಕಂತುಗಳಲ್ಲಿ ತುಂಬಿಸಬೇಕು” ಎಂದು ಸಿಬ್ಬಂದಿ ಹಾರಿಕೆ ಉತ್ತರ ನೀಡಿ, ಮತ್ತೆ ಪೆಟ್ರೋಲ್ ತುಂಬಲು ಆರಂಭಿಸಿದರು. ಆದರೆ, ಬಿಲ್ ಕೈಗೆ ಬಂದಾಗ ಚರಣ್ ಸಿಂಗ್ ಅವರಿಗೆ ಶಾಕ್ ಕಾದಿತ್ತು. ಅದರಲ್ಲಿ ಒಟ್ಟು 52 ಲೀಟರ್ ಪೆಟ್ರೋಲ್ ತುಂಬಲಾಗಿದೆ ಎಂದು ಬರೆಯಲಾಗಿತ್ತು ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ತನಿಖೆಗೆ ಆದೇಶ:

ಕೇವಲ 45 ಲೀಟರ್ ಹಿಡಿಯುವ ಟ್ಯಾಂಕಿಗೆ 52 ಲೀಟರ್ ತುಂಬಿಸಲು ಹೇಗೆ ಸಾಧ್ಯ ಎಂದು ಚರಣ್ ಸಿಂಗ್ ಬಂಕ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದೊಂದು ಸಂಘಟಿತ ವಂಚನೆ ಜಾಲ ಎಂದು ಶಂಕಿಸಿದ ಅವರು, ತಕ್ಷಣವೇ ಕಾರು ತಯಾರಕ ಕಂಪನಿಯ (Volkswagen) ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿದರು. ಸ್ಥಳಕ್ಕೆ ಬಂದ ಕಂಪನಿ ಅಧಿಕಾರಿ, “ಯಾವುದೇ ಪರಿಸ್ಥಿತಿಯಲ್ಲೂ ಈ ಕಾರಿನ ಟ್ಯಾಂಕ್‌ನಲ್ಲಿ 45 ಲೀಟರ್‌ಗಿಂತ ಹೆಚ್ಚು ಪೆಟ್ರೋಲ್ ಹಿಡಿಯಲು ಸಾಧ್ಯವೇ ಇಲ್ಲ” ಎಂದು ತಾಂತ್ರಿಕವಾಗಿ ದೃಢಪಡಿಸಿದರು.

ತಾಂತ್ರಿಕ ಪುರಾವೆ ಸಿಗುತ್ತಿದ್ದಂತೆ ಪೆಟ್ರೋಲ್ ಬಂಕ್ ಮ್ಯಾನೇಜ್ಮೆಂಟ್ ಅಸ್ಪಷ್ಟ ನೆಪಗಳನ್ನು ಹೇಳಲು ತೊಡಗಿತು. ಸ್ಥಳೀಯ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳ ಶಾಮೀಲಿನಿಂದಲೇ ಈ ವಂಚನೆ ನಡೆಯುತ್ತಿದೆ ಎಂದು ಆರೋಪಿಸಿ ಚರಣ್ ಸಿಂಗ್ ಅವರು ಅಧಿಕೃತ ದೂರು ದಾಖಲಿಸಿದ್ದಾರೆ. ಸದ್ಯ ಜಿಲ್ಲಾಡಳಿತವು ಬಂಕ್‌ನ ಮಷೀನ್‌ಗಳನ್ನು ಜಪ್ತಿ ಮಾಡಿ ತನಿಖೆ ಕೈಗೆತ್ತಿಕೊಂಡಿದೆ.

ಇದು ಕೇವಲ ಕಾನ್ಪುರದ ಕಥೆಯಲ್ಲ, ನಾವು ವಾಹನಗಳಿಗೆ ಇಂಧನ ತುಂಬಿಸುವಾಗಲೂ ಇದೇ ರೀತಿ ಆಗಿರಲುಬಹುದು, ಆದರೆ ನಮ್ಮ ಒತ್ತಡದ ಕೆಲಸಗಳು, ತರಾತುರಿಗಳ ನಡುವೆ ಇದರ ಬಗ್ಗೆ ಹೆಚ್ಚು ಗಮನಕೊಡಲು ಆಗಿರುವುದಿಲ್ಲ. ಪೆಟ್ರೋಲ್ ಪಂಪ್ ಸಿಬ್ಬಂದಿಗೆ ಇಂತಿಷ್ಟು ರೂಪಾಯಿಯ ಇಂಧನ ತುಂಬಿಸಲು ಹೇಳಿ ನಮ್ಮಷ್ಟಕ್ಕೆ ನಾವು ಹೊರಟುಬಿಡುತ್ತೇವೆ. ಆದರೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂತಹ ಅತ್ಯಾಧುನಿಕ ತಂತ್ರಜ್ಞಾನದ ವಂಚನೆಗಳು (ಚಿಪ್ ಅಳವಡಿಕೆ ಅಥವಾ ರೀಡಿಂಗ್ ಮ್ಯಾನಿಪ್ಯುಲೇಷನ್) ನಡೆಯುತ್ತಿರುತ್ತವೆ. ಹಾಗಾಗಿ, ನಾವು ಪೆಟ್ರೋಲ್ ಹಾಕಿಸುವಾಗ ಈ ಕೆಳಗಿನ ಅಂಶಗಳ ಬಗ್ಗೆ ಜಾಗರೂಕರಾಗಿರಬೇಕು

ಟ್ಯಾಂಕ್ ಫುಲ್’ ಮಾಡಿಸುವಾಗ ಎಚ್ಚರ: ಎಂದಿಗೂ ಬಂಕ್ ಸಿಬ್ಬಂದಿಗೆ ‘ಟ್ಯಾಂಕ್ ಫುಲ್ ಮಾಡಿ’ ಎಂದು ಮುಖತಃ ಹೇಳಿ ಬೇರೆ ಕಡೆ ಗಮನ ಹರಿಸಬೇಡಿ. ನಿಮ್ಮ ಕಾರಿನ ಟ್ಯಾಂಕ್ ಸಾಮರ್ಥ್ಯ (Tank Capacity) ಎಷ್ಟು ಲೀಟರ್ ಇದೆ ಎಂಬ ಕನಿಷ್ಠ ಜ್ಞಾನ ನಿಮಗಿರಬೇಕು.

ಮಧ್ಯದಲ್ಲಿ ನಿಲ್ಲಿಸುವ ತಂತ್ರ (Short Fill Scam): ಈ ಘಟನೆಯಲ್ಲಿ ನಡೆದಂತೆ, ಪೆಟ್ರೋಲ್ ಹಾಕುವಾಗ ಸಿಬ್ಬಂದಿ ಮಧ್ಯದಲ್ಲಿ ಇದ್ದಕ್ಕಿದ್ದಂತೆ ನಿಲ್ಲಿಸಿ (Pause), ಆಮೇಲೆ ಮಾತು ಬದಲಾಯಿಸಿ ಮತ್ತೆ ಅಲ್ಲಿಂದಲೇ ಮುಂದುವರಿಸುತ್ತಾರೆ. ಇದು ರೀಡಿಂಗ್‌ನಲ್ಲಿ ವಂಚನೆ ಮಾಡಲು ಬಳಸುವ ತಂತ್ರ. ಪೆಟ್ರೋಲ್ ಹಾಕಿಸುವಾಗ ರೀಡಿಂಗ್ ಒಂದೇ ಸಮನೆ (Continuous) ಆಗಿ ಸಾಗುತ್ತಿದೆಯೇ ಎಂದು ಗಮನಿಸಿ.

‘ಝೀರೋ’ (Zero) ಮಾತ್ರವಲ್ಲ, ಸಾಂದ್ರತೆ (Density) ನೋಡಿ: ಪೆಟ್ರೋಲ್ ಹಾಕಿಸುವ ಮುನ್ನ ಮಷೀನ್‌ನಲ್ಲಿ ಕೇವಲ ‘0.00’ ರೀಡಿಂಗ್ ಮಾತ್ರವಲ್ಲದೆ, ಇಂಧನದ ಸಾಂದ್ರತೆ (Density) ಸರಿಯಾಗಿದೆಯೇ ಎಂದು ನೋಡಿ. ಪೆಟ್ರೋಲ್ ಸಾಂದ್ರತೆ 720 ರಿಂದ 775 kg/m³ ಮತ್ತು ಡೀಸೆಲ್ ಸಾಂದ್ರತೆ 820 ರಿಂದ 860 kg/m³ ಇರಬೇಕು.

ಪ್ರಮಾಣದ ಬಗ್ಗೆ ಸಂಶಯ ಬಂದರೆ ‘5 ಲೀಟರ್ ಟೆಸ್ಟ್’ ಕೇಳಿ: ಭಾರತ ಸರ್ಕಾರದ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲೂ ತೂಕ ಮತ್ತು ಅಳತೆ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ 5 ಲೀಟರ್‌ನ ಜಾರ್ (Conical Measure) ಇರಲೇಬೇಕು. ನಿಮಗೆ ಇಂಧನದ ಪ್ರಮಾಣದಲ್ಲಿ ಸಂಶಯ ಬಂದರೆ, ಆ ಜಾರ್‌ಗೆ 5 ಲೀಟರ್ ಪೆಟ್ರೋಲ್ ಹಾಕಿಸಿ ಅಳತೆ ತೋರಿಸಲು ನೀವು ಕಾನೂನುಬದ್ಧವಾಗಿ ಕೇಳಬಹುದು. ಬಂಕ್‌ನವರು ಇದನ್ನು ನಿರಾಕರಿಸುವಂತಿಲ್ಲ.

ಡಿಜಿಟಲ್ ರಶೀದಿ ಪಡೆದುಕೊಳ್ಳಿ: ಪೆಟ್ರೋಲ್ ಹಾಕಿಸಿದ ನಂತರ ಕಡ್ಡಾಯವಾಗಿ ಇ-ರಶೀದಿ ಅಥವಾ ಪ್ರಿಂಟೆಡ್ ಬಿಲ್ ಪಡೆದುಕೊಳ್ಳಿ. ಅದರಲ್ಲಿ ಗಾಡಿಯ ನಂಬರ್ ಮತ್ತು ಎಷ್ಟು ಇಂಧನ ಹಾಕಿಸಿದ್ದೇವೆ ಎಂಬುದು ಸ್ಪಷ್ಟವಾಗಿರಲಿ. ಇದು ಮುಂದೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಲು ಪ್ರಮುಖ ಪುರಾವೆಯಾಗುತ್ತದೆ. ಪ್ರತಿ ಬಾರಿ ಪೆಟ್ರೋಲ್ ಹಾಕಿಸುವಾಗಲೂ ವಾಹನದಿಂದ ಕೆಳಗಿಳಿದು ರೀಡಿಂಗ್ ಅನ್ನು ಸೂಕ್ಷ್ಮವಾಗಿ ಗಮನಿಸುವುದು ಇಂತಹ ವಂಚನೆಗಳಿಂದ ಪಾರಾಗಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ರೂ. ದಂಡ

ಕಲ್ಲು ಗಣಿಗಾರಿಕೆ ನಡೆಸುವ ವೇಳೆ ಸಾಲು ಸಾಲು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಗಣಿ ಮತ್ತು...

ಪಶ್ಚಿಮ ಬಂಗಾಳ SIR: 38 ಲಕ್ಷ ಮೇಲ್ಮನವಿಗಳಲ್ಲಿ ವಿಲೇವಾರಿಯಾಗಿದ್ದು ಕೇವಲ 1 ಲಕ್ಷ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಬೃಹತ್ ಪ್ರಮಾಣದ ಮೇಲ್ಮನವಿಗಳ ಪೈಕಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆ ತೀರಾ ಕನಿಷ್ಠ ಮಟ್ಟದಲ್ಲಿದೆ ಎಂಬ ಆಘಾತಕಾರಿ ಮಾಹಿತಿ...

ಕರ್ನಾಟಕ ಎಸ್‌ಐಆರ್: ತಡವಾಗಿ ತಲುಪಿದ ನೋಟಿಸ್‌ಗಳಿಂದ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ; ಮತದಾರರಲ್ಲಿ ಗೊಂದಲ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗಳನ್ನು ಮತದಾರರಿಗೆ ತಲುಪಿಸುವಲ್ಲಿ ಉಂಟಾಗುತ್ತಿರುವ ವಿಳಂಬವು ಹಲವು ಕಡೆ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ ಮತ್ತು ಗೊಂದಲಕ್ಕೆ ಕಾರಣವಾಗುತ್ತಿದೆ. ‘ನೋ-ಮ್ಯಾಪಿಂಗ್’...