Homeಅಂಕಣಗಳುನಾವು ಮರೆಯಲಾಗದ ಇತಿಹಾಸ ಹಾಗೂ ವರ್ತಮಾನದ ಎರಡು ಸಂಗತಿಗಳು..

ನಾವು ಮರೆಯಲಾಗದ ಇತಿಹಾಸ ಹಾಗೂ ವರ್ತಮಾನದ ಎರಡು ಸಂಗತಿಗಳು..

- Advertisement -
- Advertisement -

| ಡಾ. ವಾಸು ಎಚ್.ವಿ |

ಬಹುಶಃ ನೀವು ಇದನ್ನು ಕೇಳಿರಬಹುದು. ನಿಮ್ಮ ಕೈಯ್ಯಲ್ಲಿ ಒಂದು ಜೀವಂತ ಕಪ್ಪೆಯನ್ನು ಹಿಡಿದು ಅದನ್ನು ಬಿಸಿ ಬಿಸಿಯಾದ ನೀರಿನಲ್ಲಿ ಹಾಕಿದರೆ ಕಪ್ಪೆ ಏನು ಮಾಡುತ್ತದೆ? ಕೂಡಲೇ ಜಿಗಿದು ಹೊರ ಹಾರುತ್ತದೆ. ಆದರೆ, ಅದೇ ಕಪ್ಪೆಯನ್ನು ತಣ್ಣೀರಿನಲ್ಲಿ ಇಟ್ಟು, ನಿಧಾನಕ್ಕೆ ಕೆಳಗಿನಿಂದ ಬೆಂಕಿ ಹಾಕಿ ಉರಿಸುತ್ತಾ ಹೋದರೆ? ಕಪ್ಪೆಯು ಸ್ವಲ್ಪ ಸ್ವಲ್ಪವೇ ಬಿಸಿಯಾಗುತ್ತಿರುವ ನೀರಿನ ಉಷ್ಣತೆಗೆ ಹೊಂದಿಕೊಳ್ಳುತ್ತಾ ಹೋಗುತ್ತದೆ. ಕಡೆಗೆ ಹೊಂದಿಕೊಳ್ಳಲು ಸಾಧ್ಯವೇ ಆಗದ ಮಟ್ಟ ಮುಟ್ಟಿದಾಗಲೂ ಅದರ ಅರಿವಾಗದೇ ಬೇಯಲು ಶುರುವಾಗುತ್ತದೆ ಮತ್ತು ಸತ್ತು ಹೋಗುತ್ತದೆ.

ಒಟ್ಟಿಗೇ 10-15 ರೂ.ಗಳಷ್ಟು ಪೆಟ್ರೋಲ್ ದರ ಏರಿಸದೇ, ವಾರಕ್ಕೆ 2 ರೂ.ಗಳಂತೆ ಏರಿಸಿದರೆ? ಜನರಿಗೆ ಅದರ ಅರಿವೇ ಆಗುವುದಿಲ್ಲ. ಈ ದಿನ ಮಧ್ಯರಾತ್ರಿಯಿಂದ 5 ರೂ. ಏರಿಕೆ ಆಗುತ್ತದೆ ಎಂದು ಗೊತ್ತಾದಾಗ ವಾಹನ ಸವಾರರು ಏನು ಮಾಡುತ್ತಾರೆ? ಹಿಂದಿನ ದಿನ ಸಂಜೆಯಿಂದಲೇ ಪೆಟ್ರೋಲ್ ಬಂಕಿನಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಆದಷ್ಟು ಬೇಗ ತಮ್ಮ ಬೈಕ್ ಅಥವಾ ಕಾರಿಗೆ ಫುಲ್ ಟ್ಯಾಂಕ್ ಮಾಡಿಸಿಕೊಂಡರೆ ಯಾರನ್ನೋ ಮಣಿಸಿದ ಹೆಮ್ಮೆಯಲ್ಲಿ ಆ ಮಧ್ಯರಾತ್ರಿ ಗಾಢನಿದ್ರೆ ಮಾಡುತ್ತಾರೆ. ಒಂದು ವೇಳೆ ಸಾಧ್ಯವಾಗದೇ ಹೋದರೆ ನಿದ್ದೆಯಲ್ಲಿ ಚಡಪಡಿಸಿ, ಪೆಟ್ರೋಲ್ ಬಂಕಿನ ನೂಕುನುಗ್ಗಲನ್ನು ಬಯ್ದುಕೊಳ್ಳುತ್ತಾ, ಮುಂದಿನ ಸಾರಿ ಹಾಗಾಗದಂತೆ ಎಚ್ಚರ ವಹಿಸಬೇಕೆಂದುಕೊಳ್ಳುತ್ತಾರೆ.

ಮೊದಲನೆಯದು ಸಾರ್ವಕಾಲಿಕ ಸತ್ಯವಿರಬಹುದಾದರೂ, ಎರಡನೆಯದು ಇತ್ತೀಚಿನ ವಿದ್ಯಮಾನ. ಖಾಸಗಿ ಹೋಟೆಲಿನಲ್ಲಿ ಇಡ್ಲಿಯ ಬೆಲೆ 50 ಪೈಸೆ ಹೆಚ್ಚಾಗಿದ್ದಕ್ಕೂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾರೀ ಪ್ರತಿಭಟನೆ ನಡೆಸಿದ ಉದಾಹರಣೆಗಳಿವೆ. ಕಾಲ ಬದಲಾಗಿದೆ. ಎಷ್ಟು ಬದಲಾಗಿದೆ ಎಂಬುದಕ್ಕೆ ಟ್ರಾಫಿಕ್ ನಿಯಮಗಳ ಉಲ್ಲಂಘನೆಯ ದಂಡದ ಏರಿಕೆಯೇ ನಿದರ್ಶನ.

ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ದಂಡವನ್ನು 1000 ರೂ.ನಿಂದ 10,000 ರೂ.ಗಳಿಗೆ ಏರಿಸುವಾಗ ಸರ್ಕಾರದ ಅನಿಸಿಕೆ ಏನಿದ್ದಿರಬಹುದು? ಇದಕ್ಕೆ ಬಹಳ ವಿರೋಧ ಬರುವುದರಿಂದ ಅದನ್ನು ಅರ್ಧಕ್ಕೆ ಇಳಿಸಿದರೂ, ಶೇ.500ರಷ್ಟು ಏರಿಕೆಯಾಗುತ್ತದೆ. ಸಾಮಾನ್ಯವಾಗಿ ಇಂತಹ ದಂಡಗಳಿಂದ ಸರ್ಕಾರ ದೊಡ್ಡ ಆದಾಯವೇನೂ ಮಾಡುವುದಿಲ್ಲ. ಸರ್ವಾಧಿಕಾರಿ ಮನಸ್ಥಿತಿಯ ಆಳುವವರಿದ್ದಾಗ ಇಂತಹ ತೀವ್ರ ಹೆಚ್ಚಳವನ್ನು ಹೇರುತ್ತಾರಷ್ಟೇ. ಉಳಿದಂತೆ, ವಿರೋಧ ಬಂದ ಮೇಲೆ ಇಳಿಸಿದರೂ ಲಾಭವಾಗುವ ರೀತಿ ವಿವಿಧ ಶುಲ್ಕಗಳನ್ನು ಏರಿಸುವ ಒಂದು ಚಾಳಿ ಅಧಿಕಾರಶಾಹಿಯಲ್ಲಿದೆ.

ಈ ಸಾರಿಯೂ ಹಾಗೆಯೇ ಆಯಿತು. ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಹಲವು ಈ ಹೆಚ್ಚಳ ಮಾಡಲೇ ಇಲ್ಲ. ಹೆಚ್ಚಿಸಿ ನಂತರ ಶೇ.50ರಷ್ಟು ಗುಜರಾತ್ ಸರ್ಕಾರ ಇಳಿಸಿ ಸುಮ್ಮನಾಯಿತು. ಕರ್ನಾಟಕದಲ್ಲಿ ಹೆಚ್ಚಳದ ಕುರಿತು ಕೆಲವು ನಕಾರಾತ್ಮಕ ಪತ್ರಿಕಾ ವರದಿಗಳು ಬಂದವು, ಸಾಮಾಜಿಕ ಜಾಲತಾಣಗಳಲ್ಲಿ ಗೊಣಗಾಟ ನಡೆಯಿತು. ಸಮಸ್ಯೆ ಆಗಬಹುದೇನೋ ಎಂದು ಮುಖ್ಯಮಂತ್ರಿಗಳು ‘ಇದನ್ನು ವಾಪಸ್ ತೆಗೆದುಕೊಳ್ಳುತ್ತೇವೆ’ ಎಂದು ಘೋಷಿಸಿದರು. ಅದರ ನಂತರ ಇದುವರೆಗೂ ಶುಲ್ಕ ಹೆಚ್ಚಳವನ್ನು ವಾಪಸ್ಸೂ ತೆಗೆದುಕೊಂಡಿಲ್ಲ; ಇಳಿಸಿಯೂ ಇಲ್ಲ.

ಅಂದರೆ, ಶೇ.1000ದಷ್ಟು ಏರಿಸಿ, ಶೇ.500ಕ್ಕಿಳಿಸುವ ಅಗತ್ಯವೂ ಇಲ್ಲ! ಈ ಪ್ರಮಾಣಕ್ಕೆ ಜನರ ಹೊಂದಾಣಿಕೆ ಮನೋಭಾವ ಏರಿದೆ!! ಬಹುಶಃ ಹೀಗೇ ಇದ್ದರೆ, ಯಡಿಯೂರಪ್ಪನವರು ಸುಮ್ಮನಾಗುವ ಸಾಧ್ಯತೆಯೇ ಹೆಚ್ಚು. ಇದೇಕೆ ಹೀಗೆ ಎಂಬುದನ್ನು ಆಳವಾಗಿ ಪರಿಶೀಲಿಸಿ ನೋಡುವ ಅಗತ್ಯವಿದೆ.

ಮೇಲಿನ ಕಪ್ಪೆಯ ನಿದರ್ಶನ ಒಂದು ಸಾಧ್ಯತೆಯನ್ನು ನಮ್ಮ ಮುಂದಿಡುತ್ತದೆ. ಮತಧರ್ಮ ಮತ್ತು ಜಾತಿಗಳ ಅಮಲು (ಜಾತಿಯ ಅಮಲು ಮೇಲ್ಜಾತಿಗಳಲ್ಲಿ ಮಾತ್ರ ಇರುವುದಿಲ್ಲ; ಶೋಷಿತ ಸಮುದಾಯಕ್ಕೆ ಸೇರಿದ ಸಚಿವರೊಬ್ಬರು ಭ್ರಷ್ಟಾಚಾರ ಅಥವಾ ಜನವಿರೋಧಿ ನೀತಿ ತಂದರೆ, ಅಲ್ಲಿಯೂ ಸಮರ್ಥನೆ ಇದ್ದೇ ಇರುತ್ತದೆ) ಅನಸ್ತೇಷಿಯಾ ಥರ ಕೆಲಸ ಮಾಡುತ್ತಿದೆ ಎಂದು ಕೆಲವರು ಹೇಳುತ್ತಾರೆ.

ಯಾವುದಾದರೂ ಒಂದು ವಿಚಾರಕ್ಕೆ, ಸುದ್ದಿಗೆ, ವಿದ್ಯಮಾನಕ್ಕೆ ದೀರ್ಘಕಾಲ ಅಂಟಿಕೊಳ್ಳುವ ಗುಣವೂ ಇಲ್ಲವಾಗಿದೆ. ಎಲ್ಲರ ಗಮನದ ಅವಧಿ (attention span)ಯೂ ಕಡಿಮೆಯಾಗಿದೆ. ತುಸು ಹೆಚ್ಚು ಕಾಲ ಒಂದೇ ವಿಚಾರದ ಮೇಲೆ ಕೇಂದ್ರೀಕರಿಸುವುದು ಬೋರಿಂಗ್ ಆದ ಕೆಲಸ ಎಂಬ ಭಾವನೆ ಹೆಚ್ಚಾಗಿದೆ. ಹಾಗಾಗಿ ಏನೇ ನಡೆದರೂ ತಕ್ಷಣದಲ್ಲಿ ಮುಗಿಯಬೇಕು. ಪ್ರಜ್ಞಾವಂತರು, ಜೀವಪರ ಕಾಳಜಿಯುಳ್ಳವರೂ ಫೇಸ್‍ಬುಕ್‍ನ ಆತ್ಮರತಿ ಮತ್ತು ತಕ್ಷಣದ ಪ್ರತಿಕ್ರಿಯೆಯ ಜೋಶ್‍ನಲ್ಲಿ ಇರುವ ಶಕ್ತಿಯನ್ನೆಲ್ಲಾ ಕಳೆದುಕೊಂಡು ಸಮಾಧಾನ ಪಟ್ಟುಕೊಳ್ಳುತ್ತಾರೆ. ಪ್ರತಿ ವ್ಯಕ್ತಿಯೂ ಕೇವಲ ಬಿಡಿ ವ್ಯಕ್ತಿ ಮಾತ್ರ ಆಗಿಬಿಡಲು ಬೇಕಾದ ಪ್ರತ್ಯೇಕತೆಗಳು ಹಲವು ರೀತಿಯಲ್ಲಿ ಹಿಗ್ಗುತ್ತಿವೆ.

ಇವಿಷ್ಟು ಹೇಳಿದರೂ ಇಂದಿನ ನಿಸ್ತೇಜ, ನಿರ್ವೀರ್ಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ವಿವರಣೆ ಕೊಟ್ಟಂತಾಗುವುದಿಲ್ಲ. ಇಡೀ ಸಮುದಾಯಗಳು ಇಂತಹ ಸ್ಥಿತಿಗೆ ಇಳಿದಿರುವುದನ್ನು ಕಂಡು ರೋಸಿಹೋದ ಸಂವೇದನಾಶೀಲರು ಹತಾಶೆಯಿಂದ ‘ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿ, ಆಗ ಎಲ್ಲರಿಗೂ ಅರ್ಥವಾಗುತ್ತದೆ’ ಎಂದು ಹೇಳುವುದನ್ನು ನೋಡುತ್ತೇವೆ. ಇಂತಹ ಹತಾಶೆ ಇಲ್ಲದಂತಾಗಿ ಪರಿವರ್ತನಶೀಲ ಪ್ರಕ್ರಿಯೆಗಳಿಗೆ ದಾರಿ ಮಾಡಿಕೊಡಲಾದರೂ ಸರಿಯಾದ ವಿಶ್ಲೇಷಣೆ ಮತ್ತು ಬದಲಾವಣೆಯ ವಿಧಾನಗಳ ಶೋಧನೆ ಅಗತ್ಯವಿದೆ.

ಅಂತಹ ವಿಶ್ಲೇಷಣೆಗೆ ತೊಡಗುವವರು ಎರಡು ಅಂಶಗಳನ್ನು ನಿರ್ಲಕ್ಷಿಸಲಾಗದು. ಒಂದು, ಇಡಿ ಇಡೀ ಸಮುದಾಯವೇ ಆತ್ಮಸಾಕ್ಷಿ ಕಳೆದುಕೊಂಡ, ಕೊಳೆತ ಅಥವಾ ಸಂವೇದನಾಶೂನ್ಯ ಸ್ಥಿತಿಯಲ್ಲಿ ದೀರ್ಘಕಾಲವಿದ್ದ ಅವಧಿಗಳು ಇತಿಹಾಸದಲ್ಲಿ ಸಾಕಷ್ಟಿದ್ದವು. ಇದೇ ಮೊದಲೂ ಅಲ್ಲ, ಬಹುಶಃ ಕೊನೆಯೂ ಅಲ್ಲ. ಅಂತಹ ಸ್ಥಿತಿಗಳು ದೀರ್ಘವಿರಬಹುದಾದರೂ ಶಾಶ್ವತವಾಗಿ ಎಲ್ಲೂ ಉಳಿದಿಲ್ಲ. ಎರಡು, ಈಗಿನ ವಿದ್ಯಮಾನದ ಸ್ವರೂಪ ಹಾಗೂ ಅದನ್ನು ಬದಲಿಸಬಲ್ಲ ಪ್ರಕ್ರಿಯೆಯು ಅನನ್ಯ. ಏಕೆಂದರೆ 21ನೇ ಶತಮಾನ ಈ ಭುವಿಯ ಮೇಲೆ ಇದೇ ಮೊದಲ ಸಾರಿ ಬಂದಿದೆ; ಇಂತಹ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂಕೀರ್ಣತೆ ಈಗ ಮಾತ್ರ ಇದ್ದದ್ದು. ಹಾಗಾಗಿ ಇದನ್ನು ಬದಲಿಸುವ ವಿಧಾನವನ್ನು ಹೊಸದಾಗಿಯೇ ಕಂಡುಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕರಾವಳಿಯಲ್ಲಿ ಒಂದು ಬಹಳ ಹಳೆಯ ಮಾತಿದೆ. ಮಲಗಿರುವ ಕೋಣಕ್ಕೆ ಬೆತ್ತದಲ್ಲಿ ಒಂದೇಟು ಕೊಟ್ಟರೆ ದಪ್ಪ ಚರ್ಮದ ಅದಕ್ಕೆ ಗೊತ್ತೇ ಆಗುವುದಿಲ್ಲ. ಎರಡನೇ ಏಟಿಗೆ ಕಣ್ಣು ತೆರೆಯುತ್ತದೆ. ಮೂರನೇ ಏಟಿಗೆ ಏನದು ಸದ್ದು ಎಂದು ಯೋಚಿಸುತ್ತದೆ. ನಾಲ್ಕನೇ ಏಟಿಗೆ- ಹೋ! ಯಾರಿಗೋ ಹೊಡೆಯುತ್ತಿದ್ದಾರೆ ಎಂದು ಯೋಚಿಸುತ್ತದೆ. ಐದನೇ ಏಟಿಗೆ ನನಗೇ ಹೊಡೆಯುತ್ತಿರುವುದು ಎಂದು ಗೊತ್ತಾಗಿ ಮೆಲ್ಲಗೆ ಎದ್ದುನಿಲ್ಲುತ್ತದೆ. ನಮ್ಮ ಜನರು ಐದು ಏಟುಗಳ ಬಳಿಕ, ಅಂದರೆ ಮುಂದಿನ ಚುನಾವಣೆ ಹೊತ್ತಿಗಾದರೂ, ತಮಗೆ ಬೀಳುತ್ತಿರುವ ಏಟುಗಳನ್ನು ತಿಳಿದುಕೊಂಡು ಎದ್ದೇಳಲಿ!

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...