Homeರಾಜಕೀಯಮಾಯಕೊಂಡದ ಮಾಯಾ`ಬಜಾರಿ’ನಲ್ಲಿ....

ಮಾಯಕೊಂಡದ ಮಾಯಾ`ಬಜಾರಿ’ನಲ್ಲಿ….

- Advertisement -
- Advertisement -
  • ಟಿ.ಎನ್.ಷಣ್ಮುಖ |

ಇತ್ತ ದಾವಣಗೆರೆಯ ಸೆರಗಿಗೂ, ಅತ್ತ ಚಿತ್ರದುರ್ಗದ ಚುಂಗಿಗೂ ಆತುಕೊಂಡಂತಿರುವ ಮಾಯಕೊಂಡದ ಎಲೆಕ್ಷನ್ ಕಣದಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಅದರಲ್ಲೂ ಬಿಜೆಪಿಗೆ ಮಾಯಕೊಂಡ ಬಿಸಿ ತುಪ್ಪದಂತಾಗಿದೆ. ಯಾಕಂದ್ರೆ ಬಿಜೆಪಿ ಅಲ್ಲಿ ಇಬ್ಬಿಬ್ಬರು ಬಂಡಾಯಗಾರರನ್ನು ಎದುರಿಸುವಂತಾಗಿದೆ. ಕಳೆದ ಬಾರಿ ಯಡಿಯೂರಪ್ಪ ಕೆಜೆಪಿ ಕಟ್ಟಿ, ಮಾಯಕೊಂಡದಿಂದ ಪ್ರೊ.ಲಿಂಗಪ್ಪನ ಕೈಗೆ ತೆಂಗಿನಕಾಯಿ ಕೊಟ್ಟು ಈಡುಗಾಡಿ ಹೊಡೆಯಲು ಹೇಳಿದ್ದರು. ಹಾಗಾಗಿ ಬಿಜೆಪಿ ಬಸವರಾಜ ನಾಯ್ಕ ಎಂಬ ಅಪರಿಚಿತನನ್ನು ಕಣಕ್ಕಿಳಿಸಿತ್ತು. ಆದರೆ ಈ ಸಲ ಕೆಜೆಪಿ ಬಿಜೆಪಿಯೊಳಗೆ ಐಕ್ಯಗೊಂಡಿದೆ. ಸೋ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಸವರಾಜ ನಾಯ್ಕನಿಗೆ ಟಿಕೇಟು ಕೊಡಬೇಕೊ ಅಥವಾ ಯಡಿಯೂರಪ್ಪನವರನ್ನು ನಂಬಿ ಈಡುಗಾಯಿ ಹೊಡೆದಿದ್ದ ಲಿಂಗಪ್ಪನಿಗೆ ಟಿಕೇಟು ಕೊಡಬೇಕೊ ಎಂಬ ಜಿಜ್ಞಾಸೆ ಆರಂಭದಿಂದಲೂ ಬಿಜೆಪಿಯನ್ನು ಹೈರಾಣು ಮಾಡಿತ್ತು. ಅದರ ನಡುವೆ ಎಚ್.ಆನಂದಪ್ಪ ಅನ್ನೋ ಮತ್ತೊಬ್ಬ ಗಿರಾಕಿ ಬಿಜೆಪಿ ಟಿಕೇಟಿಗೆ ತಾಲೀಮು ನಡೆಸಿದ್ದ.

ಲಿಂಗಪ್ಪ

ಕೊನೆಗೆ ಯಡಿಯೂರಪ್ಪನ ಪವರ್ರೇ ಗೆದ್ದು, ಕೆಜೆಪಿಯಿಂದ ಬಂದ ಲಿಂಗಪ್ಪನಿಗೇ ಟಿಕೇಟು ಸಿಗುವಂತಾಯ್ತು. ಇದರಿಂದ ಬಂಡೆದ್ದ ಬಸವರಾಜ ನಾಯ್ಕ ಮಹಿಮಾ ಪಟೇಲರ ಸಾರಥ್ಯದ ಜೆಡಿಯು ಹೊಕ್ಕು ಆ ಪಕ್ಷದ ಅಭ್ಯರ್ಥಿಯಾಗಿ ಬಿಜೆಪಿಯತ್ತ ಬಾಣ ನೆಟ್ಟಿದ್ದಾನೆ. ಇತ್ತ ಮತ್ತೋರ್ವ ಟಿಕೇಟ್ ಆಕಾಂಕ್ಷಿ ಆನಂದಪ್ಪ ಕೂಡಾ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾನೆ. `ಬಿಜೆಪಿ ನಮಗೆ ನಂಬಿಕೆ ದ್ರೋಹ ಮಾಡಿದೆ. ನಮ್ಮನ್ನು ರಾಜಕೀಯವಾಗಿ ತುಳಿಯಲು ಹವಣಿಸಿದೆ. ಹಾಗಾಗಿ ನಾವು ಆ ಪಾರ್ಟಿಯನ್ನು ಮಾಯಕೊಂಡದಲ್ಲಿ ನಿರ್ನಾಮ ಮಾಡ್ತೀವಿ’ ಅನ್ನೋ ಕಾಮನ್ ಸ್ಲೋಗನ್ ಇಟ್ಟುಕೊಂಡು ಇವರಿಬ್ಬರೂ ಬಬ್ರುವಾಹನ ಸ್ಟೈಲಿನಲ್ಲಿ ಅಬ್ಬರಿಸುತ್ತಿರೋದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಅದರಲ್ಲೂ ಹಾಲಿ ಜೆಡಿಯು ಅಭ್ಯರ್ಥಿಯಾಗಿರುವ ಬಸವರಾಜ ನಾಯ್ಕನ ಜೊತೆ ಬಿಜೆಪಿ ವರ್ತಿಸಿದ ರೀತಿ ಇದೆಯಲ್ಲ ಅದು, ಈ ಕ್ಷೇತ್ರದ ಬಹುಸಂಖ್ಯಾತ ಮತದಾರರಾದ ಲಂಬಾಣಿ ನಾಯ್ಕ ಮತಗಳನ್ನು ರೊಚ್ಚಿಗೆಬ್ಬಿಸಿದೆ. ಲಿಂಗಾಯತ ಮದಗಜ ಕಾದಾಟದ ನಡುವೆ ಒಬ್ಬ ಶೂದ್ರನನ್ನು ಬಲಿಕೊಟ್ಟ ಈ ವೃತ್ತಾಂತಕ್ಕೆ ಐದು ವರ್ಷಗಳ ಇತಿಹಾಸವಿದೆ. ದಾವಣಗೆರೆಯ ಕೇಸರಿ ಮೇಳದಲ್ಲಿ ತಾಳಮೇಳ ತಪ್ಪಿ ಒಂದು ದಶಕವೇ ಕಳೆದುಹೋಗಿದೆ. ಮಾಜಿ ತರ್ಕಾರಿ ಮಂತ್ರಿ ಎಸ್.ಎ.ರವೀಂದ್ರನಾಥನ ಕ್ಷೀಣಬಣ ಒಂದು ಕಡೆಗಾದರೆ, ಯಡ್ಯೂರಪ್ಪನವರ ಬಣ ಮತ್ತೊಂದು ಕಡೆ. ಸಂಸದ ಸಿದ್ದೇಶ್ವರ ಆದಿಯಾಗಿ ಬಹುತೇಕ ಹಾಲಿ, ಮಾಜಿ ಎಂಎಲ್‍ಎಗಳು ಯಡ್ಯೂರಪ್ಪನವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಸವರಾಜ ನಾಯ್ಕ ರವೀಂದ್ರನಾಥನ ಕಟ್ಟಾಳುವಾಗಿದ್ದ. 2013ರಲ್ಲಿ ಯಡಿಯೂರಪ್ಪ ಬಿಜೆಪಿ ಕಟ್ಟಿದಾಗ ರವೀಂದ್ರನಾಥ ಮಾಯಕೊಂಡದ ಬಿಜೆಪಿ ಟಿಕೇಟು ಕೊಡಿಸಿ ಕಾದಾಟಕ್ಕೆ ತಳ್ಳಿದ್ದು ಇದೇ ಬಸವರಾಜ ನಾಯ್ಕನನ್ನು.

ಬಸವರಾಜ ನಾಯ್ಕ್

ಆದರೆ ಯಾವಾಗ ಯಡಿಯೂರಪ್ಪ ಬಿಜೆಪಿಗೆ ವಾಪಾಸಾದರೋ ಆಗಿನಿಂದ ಅವರ ವಿರೋಧಿಗಳನ್ನು ವ್ಯವಸ್ಥಿತವಾಗಿ ಮಟ್ಟ ಹಾಕುತ್ತಾ ಬಂದರು. ಅಂಥಾ ಈಶ್ವರಪ್ಪನೇ ಥಂಡಾ ಹೊಡೆದು ರಾಯಣ್ಣ ಬ್ರಿಗೇಡ್ ನೆಪದಲ್ಲಿ ಟಿಕೇಟಿಗೆ ಹೆಣಗಾಡಬೇಕಾಯ್ತು. ಇತ್ತ ದಾವಣಗೆರೆಯಲ್ಲೂ ರವೀಂದ್ರನಾಥರ ಬಣದ ಮೇಲೆ ಅದೇ ದುಷ್ಮನಿಯ ಕಣ್ಣಿಟ್ಟ ಯಡಿಯೂರಪ್ಪ ಅವರ ಬೆಂಬಲಿಗರಿಗೆ ಬಿಸಿನೀರು ಬಿಡುತ್ತಾ ಬಂದರು. ರವೀಂದ್ರನಾಥಗೂ ಟಿಕೇಟ್ ತಪ್ಪಿಸಲು ಯಡ್ಯೂರಪ್ಪ ಯತ್ನಿಸಿದರಾದರೂ ಕಾಂಗ್ರೆಸ್‍ನ ಎಸ್.ಎಸ್.ಮಲ್ಲಿಕಾರ್ಜುನ್‍ಗೆ ಪ್ರಬಲ ಸ್ಪರ್ಧೆಯೊಡ್ಡುವಂತವರು ಬಿಜೆಪಿಯಲ್ಲಿ ಯಾರೂ ಇರದ ಕಾರಣ ರವೀಂದ್ರನಾಥ್‍ಗೆ ಟಿಕೇಟ್ ತಪ್ಪಿಸಲು ಸಾಧ್ಯವಾಗಲಿಲ್ಲ. ಆದರೆ ರವೀಂದ್ರನಾಥ್ ಮೇಲಿನ ಸಿಟ್ಟಿಗೆ ಬಸವರಾಜ ನಾಯ್ಕನಿಗೆ ಟಿಕೇಟ್ ತಪ್ಪಿಸಿ, ಕೆಜೆಪಿಯ ಲಿಂಗಪ್ಪನಿಗೆ ಬಿ ಫಾರಂ ದಯಪಾಲಿಸಿದ್ದಾರೆ. ಯಡ್ಯೂರಪ್ಪ-ರವೀಂದ್ರನಾಥ್ ಎಂಬ ಇಬ್ಬರು ಬಿಜೆಪಿ ಲಿಂಗವಂತರ ಕಾದಾಟಕ್ಕೆ ನಮ್ಮ ಬಸರಾಜ ನಾಯ್ಕ ಬಲಿಪಶು ಆಗುವಂತೆ ಆಯ್ತಲ್ಲ ಎಂಬ ಸಿಟ್ಟು ಈಗ ಲಂಬಾಣಿ ಜನರದ್ದು.

ಶಾಮನೂರು ದಣಿಗಳನ್ನು ವಿಪರೀತ ವಿರೋಧ ಮಾಡಿಕೊಂಡಿದ್ದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ ಕಳೆದ ಎಲೆಕ್ಷನ್‍ನಲ್ಲೇ ಟಿಕೇಟು ಮಿಸ್ ಮಾಡಿಕೊಳ್ಳಬೇಕಿತ್ತು. ಆದರೆ ಹೈಕಮಾಂಡ್ ತಂತ್ರಗಾರಿಕೆ ಬಳಸಿ ಟಿಕೇಟ್ ಗಿಟ್ಟಿಸಿದ್ದಲ್ಲದೆ ಬಿಜೆಪಿ-ಕೆಜೆಪಿ ಕಾದಾಟದ ನಡುವೆ ಗೆದ್ದು ಶಾಸಕನೂ ಆಗಿದ್ದ. ಆಮೇಲೆ ಆತ ಕ್ಷೇತ್ರದತ್ತ ಮುಖ ಮಾಡಿ ನೋಡಿದವನಲ್ಲ. ತನಗೆ ಮಂತ್ರಿಗಿರಿ ಕೊಡಲಿಲ್ಲ ಅಂತ ವಿಧಾನಸೌಧದ ಮುಂದೆ ಧರಣಿ ಕೂತು ನಗೆಪಾಟಲಿಗೆ ಈಡಾದ ಶಿವಮೂರ್ತಿ ನಾಯ್ಕನ ಬೆಂಬಲಕ್ಕೆ ಅವನ ಕ್ಷೇತ್ರದಿಂದ ಒಬ್ಬನೇ ಒಬ್ಬ ಕಾರ್ಯಕರ್ತನೂ ಬರಲಿಲ್ಲ ಎಂದಮೇಲೆ ಅವನ ಜನಪ್ರಿಯತೆ ಇನ್ನೆಂತದ್ದಿರಬೇಡ. ಅದೇ ಕಾರಣಕ್ಕೆ ಈ ಸಲ ಶಿವಮೂರ್ತಿ ನಾಯ್ಕನಿಗೆ ಖೊಕ್ ಕೊಟ್ಟು ಆನಗೋಡು ಜಿಲ್ಲಾ ಪಂಚಾಯ್ತಿ ಮೆಂಬರು ಬಸವರಾಜನಿಗೆ ಟಿಕೇಟ್ ನೀಡಲಾಗಿದೆ. ಈ ಬಸವರಾಜ, ಹಾಲಿ ಸಮಾಜ ಕಲ್ಯಾಣ ಮಂತ್ರಿ ಎಚ್.ಆಂಜನೇಯರ ಖಾಸಾ ಅಳಿಯ. ಅದಕ್ಕಿಂತಲೂ ಮುಖ್ಯವಾಗಿ ಕ್ಷೇತ್ರದಲ್ಲಿ ಜನರ ಒಡನಾಟ ಉಳಿಸಿಕೊಂಡಿರುವಾತ. ಬಸವರಾಜ್ ಅಭ್ಯರ್ಥಿಯಾಗಿರೋದ್ರಿಂದ ಬಂಡಾಯದಿಂದ ಬೆಂಡಾಗಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್ ಬಸವರಾಜ್

ಮಾಯಕೊಂಡದಲ್ಲಿ 52 ಸಾವಿರದಷ್ಟಿರುವ ಲಿಂಗಾಯತ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇವೆಯಾದರೂ, ಹೆಚ್ಚೂಕಮ್ಮಿ ಸಮಪ್ರಮಾಣದಲ್ಲಿರುವ ಇತರೆ ಜಾತಿಗಳ ಮತಗಳೂ ನಿರ್ಣಾಯಕ. ಮಾದಿಗ, ಲಂಬಾಣಿ ಮತ್ತು ನಾಯಕ ಜಾತಿಯ ತಲಾ 40 ಸಾವಿರ ಮತಗಳು ತಮ್ಮ ಪೊಲಿಟಿಕಲ್ ಅಸ್ಮಿತೆಯ ಮಹತ್ವವನ್ನು ಸಾರಿ ಹೇಳುತ್ತವೆ. ಕೈ ಪಾರ್ಟಿಯ ಬಸವರಾಜ ಮತ್ತು ಬಿಜೆಪಿಯ ಲಿಂಗಪ್ಪ ಇಬ್ಬರೂ ಮಾದಿಗ ಸಮುದಾಯದವರು. ಆದರೆ ಈ ಮತಗಳ ಮೇಲೆ ಮಂತ್ರಿ ಆಂಜನೇಯರ ಬಿಗಿ ಪ್ರಭಾವ ಇರೋದ್ರಿಂದ ಅವು ಕಾಂಗ್ರೆಸ್‍ಗೆ ಹರಿದು ಬರೋದ್ರಲ್ಲಿ ಸಂಶಯವಿಲ್ಲ. ಅದೂಅಲ್ಲದೇ, ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ದಲಿತ ವಿರೋಧಿ ನಡವಳಿಕೆ ಹೆಚ್ಚಾಗುತ್ತಿರೋದ್ರಿಂದ ದಲಿತರ ಮತಗಳು ಬಿಜೆಪಿಗೆ ಹೋಗೋದೆ ಡೌಟು. ಇನ್ನು ಬಸವರಾಜ ನಾಯ್ಕನಿಗೆ ಟಿಕೇಟು ತಪ್ಪಿಸಿದ ಬಿಜೆಪಿಯ ಆಂತರಿಕ ಗುದಮುರಗಿ ವಿರುದ್ಧ ಸಿಡಿದೆದ್ದಿರುವ ಲಂಬಾಣಿ ಮತಗಳು ಜೆಡಿಯು ಬಸವರಾಜ ನಾಯ್ಕ, ಜೆಡಿಎಸ್‍ನ ಶೀಲಾ ನಾಯ್ಕ ನಡುವೆ ಹಂಚಿಹೋಗುವುದರ ನಡುವೆ `ಅಹಿಂದ’ ಹಾದಿಗುಂಟ ಕಾಂಗ್ರೆಸ್ಸನ್ನೂ ಎಡತಾಕಲಿವೆ. ಪಾರಂಪರಿಕ ಬಿಜೆಪಿ ಮತಗಳೂ ಆನಂದಪ್ಪನ ಬಂಡಾಯ ಸ್ಪರ್ಧೆಯಿಂದ ಮುಕ್ಕಾಗಲಿವೆ. ನಾಯಕ ಜನಾಂಗದ ಮತಗಳಂತೂ ಕಾಂಗ್ರೆಸ್ ಹಸ್ತದಲ್ಲಿ ಭದ್ರವಾಗಿವೆ. ಮಾಯಕೊಂಡದ ಲಿಂಗಾಯತ ಮತಗಳ ಮೇಲೆ ಯಡಿಯೂರಪ್ಪನ ಖದರ್ರು ಇರೋದಕ್ಕಿಂತ ಶಾಮನೂರು ಧಣಿಗಳ ಛಾಪು ಇದೆ. ಹಾಗಾಗಿ ಏನಿಲ್ಲವೆಂದರೂ ಅವುಗಳಲ್ಲಿ ಕನಿಷ್ಠ ಅರ್ಧದಷ್ಟಾದರು ಕಾಂಗ್ರೆಸ್‍ಗೆ ಬರಲಿವೆ. ಜೊತೆಗೆ, ಸಾಧು ಲಿಂಗಾಯತರ ರವೀಂದ್ರ ನಾಥ ಪಕ್ಷದೊಳಗೆ ಯಡಿಯೂರಪ್ಪನ ಪ್ರಭಾವ ಕುಗ್ಗಿಸಲು ಆತನ ಶಿಷ್ಯನ ವಿರುದ್ಧ ಕರಾಮತ್ತು ಮಾಡುವ ಸಾಧ್ಯತೆಯೂ ಕಾಣುತ್ತಿದೆ. ಹಾಗೇನಾದರು ಆದಲ್ಲಿ ಕಾಂಗ್ರೆಸ್ ಸೇರುವ ಲಿಂಗಾಯತರ ಮತಗಳ ಪ್ರಮಾಣದಲ್ಲಿ ಮತ್ತಷ್ಟೂ ಏರಿಕೆಯಾಗಲಿದೆ. ಈ ಸಮೀಕರಣವನ್ನೆಲ್ಲ ತಾಳೆ ಹಾಕಿ ನೋಡಿದರೆ ಮಾಯಕೊಂಡದಲ್ಲಿ ಕಾಂಗ್ರೆಸ್ ಅಧಿಕಾರವೇ ಮುಂದುವರೆಯುವ ಲಕ್ಷಣಗಳೇ ದಟ್ಟವಾಗಿವೆ. ಫಲಿತಾಂಶದ ದಿನ ಸ್ಪಷ್ಟ ಉತ್ತರ ಸಿಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...