Homeಅಂಕಣಗಳುಶಾರದೆ ಪೂಜೆ ಸಂವಿಧಾನದಲ್ಲೇ ಅದೆ ಕಂಡ್ರಿ !

ಶಾರದೆ ಪೂಜೆ ಸಂವಿಧಾನದಲ್ಲೇ ಅದೆ ಕಂಡ್ರಿ !

- Advertisement -
- Advertisement -

ದಷ್ಟಪುಷ್ಟವಾಗಿ ಬೆಳೆದ ಹಳ್ಳಿಕಾರ ಹೋರಿಯ ಬೀಜದಂತೆ ಕಾಣುವ ಈ ಸರಕಾರವನ್ನು ನೋಡಿದ ಬಿಜೆಪಿ ನರಿಗಳು ಖುಷಿಯಿಂದ ಊಳಿಡುತ್ತಿರಬೇಕಾದರೆ, ಅತ್ತ ದೇವೇಗೌಡರು ಮತ್ತು ಕುಮಾರಣ್ಣನವರು ಶೃಂಗೇರಿಯ ಶಾರದಾಂಬೆಯ ಆವರಣದಲ್ಲಿ ರವಿಕೆ ಹಾಕದ ವಡ್ಡರಂತೆ ಕುಳಿತು ಅದೇನೇನೋ ಮಾಡುತ್ತಿರುವ ದೃಶ್ಯ ನೋಡಿ ಫೋನು ಮಾಡಿ ಕೇಳಬೇಕೆನಿಸಿತ್ತಲ್ಲಾ. ಕೂಡಲೇ ಫೋನ್ ಮಾಡಲಾಗಿ ಕುಮಾರಣ್ಣನ ಫೋನ್ ರಿಂಗಾಯ್ತು.
ರಿಂಗ್ ಟೋನ್- “ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನಮಗೆ ಸಾಲದಮ್ಮ…………..

ಹಲೋ ಯಾರ್ರಿ ಮಾತಾಡದು”
“ತಾವ್ಯಾರು ಸಾರ್”
“ನಾನು ಭೋಜೆಗೌಡ.”
“ಭೋಜೆಗೌಡ್ರೆ ಕುಮಾರಣ್ಣನಿಗೆ ಫೋನ್ ಕೊಡಿ ನಾನು ಯಾಹೂ.”
“ಕೊಟ್ಟೆ ಮಾತಾಡಿ.”
“ನಮಸ್ಕಾರ ಕುಮಾರಣ್ಣರಿಗೆ ನಾನು ಯಾಹೂ.”
“ಏನೇಳ್ರಿ ಯಾಹೂ ಟೈಮಿಲ್ಲ.”
“ಒಂದೆರಡು ಮಾತು ಸಾರ್.”
“ಕೇಳಿ.”
“ಶೃಂಗೇರಿಲಿ ನಿಮ್ಮನ್ನ ಅಂಥ ಆಕಾರದಲ್ಲಿ ನೋಡಿ ಬಾಳ ಖುಷಿಯಾಯ್ತು ಸಾರ್. ಪೂಜೆ ಚೆನ್ನಾಗಿತ್ತಾ?”
“ಚೆನ್ನಾಗಿತ್ತು ಕಂಡ್ರಿ, ಕರ್ನಾಟಕ ಸರಕಾರದ ಕೆಲಸ ಮಾಡದರ ಜೊತೆಗೆ ಆಗಾಗ್ಗೆ ಬಂದು ಶಾರದಾಂಬೆ ಪೂಜೆ ಮಾಡತಕ್ಕಂತ ಪರಿಪಾಠವನ್ನ ಇಟ್ಟುಗೊಬೇಕು ಅಂತ ಅನ್ನಸ್ತು.”
“ಅದು ಸಹಜ ಸಾರ್, ವಿದ್ಯೆ ಬುದ್ಧಿಯ ಕೊರತೆ ಇದ್ದೋರು ಶಾರದೆ ಪೂಜೆ ಮಾಡ್ತಾರೆ.”
“ಅಂಗೇನು ಇಲ್ಲ. ನಮಿಗೆಲ್ಲಾ ಬುದ್ಧಿ ಕೊಡತಕ್ಕಂತ ಶಾರದೆ ನನ್ನ ಸರಕಾರದ ವಿರುದ್ಧ ಏನು ಅಪಸ್ವರಗಳಿಂದ ಮಾತನಾಡ್ತಾರೆ, ಅಂತವರಿಗೆಲ್ಲಾ ಒಳ್ಳೆ ಬುದ್ಧಿ ಕೊಡ್ಲಿ ಅಂತ ಹೇಳಿ ನಾನು ನಮ್ಮ ತಂದೆಯವರ ಸಲಹೆ ಮೇರೆಗೆ ಇಲ್ಲಿಗೆ ಬಂದು ಪೂಜೆ ಮಾಡಿ ಬೆಳಗಾವಿಗೆ ಹೋದೆ.”
“ಕುಮಾರಣ್ಣಂಗೆ ಬುದ್ಧಿ ಕೊಡುವವನು ಗಣೇಶ, ವಿದ್ಯೆ ಕೊಡೋಳು ಸರಸ್ವತಿ, ದುಡ್ಡು ಕೊಡೋಳು ಲಕ್ಷ್ಮಿ. ನಿಮಗೆ ಲಕ್ಷ್ಮಿ ಕೊರತೆ ಇಲ್ಲ ವಿದ್ಯೆ ಬುದ್ದಿ ಕೊರತೆ ಎದ್ದು ಕಾಣ್ತಾಯಿದೆ ಅಂತ ಕರ್ನಾಟಕದ ಜನ ಆಡಿಕೊಳ್ತ ಅವುರೆ.”
“ಆಡಿಕೊಳ್ತಕಂತ ಜನಗಳಿಗೆ ನಾವು ತಲೆ ಕೆಡಿಸಿಕೋಬೇಕಾಗಿಲ್ಲ ಅವರು ಸುಮ್ಮನಿದ್ರು ಆಡಿಕೊಳ್ತಾರೆ ಹೀಗೆ ಪೂಜೆ ಮಾಡಿದ್ರು ಆಡಿಕೊಳ್ತಾರೆ.”
“ಅಲ್ಲ ಸಾರ್, ಆ ಶೃಂಗೇರಿ ಬಿಜೆಪಿ ಪಾರ್ಟಿಯ ಬ್ರಾಂಚ್ ತರ ಕೆಲಸ ಮಾಡುತ್ತೆ. ಅವುರು ಏನೇ ಮಾಡಿದ್ರು ಅದು ಶ್ರೇಣೀಕೃತ ಸಮಾಜದ ಕಳಸದಂಗಿರೊ ಬ್ರಾಹ್ಮಣರಿಗಾಗಿ ಇರೊ ಮಠ ಗೊತ್ತ.”
“ನಿಮ್ಮ ಆಪಾದನೆ ನಾನು ಅಲ್ಲಗಳೀತಿನಿ.”
“ನೀವು ಅಲ್ಲಗಳೆಯೋದು ಸಹಜ. ದೇವಸ್ಥಾನದ ಹೊಸಿಲಲ್ಲೇ ಮೂರು ಕಮಲದ ಚಿತ್ರ ಕೆತ್ತಿದಾರೆ. ಆ ಕಮಲ ಬಿಜೆಪಿ ಸಿಂಬಲ್ಲು ಗೊತ್ತ.”
“ನಾನು ಹೊಸಲು ದಾಟಿಕೊಂಡೋದೆ ನೋಡಲಿಲ್ಲ.”
“ವಿದ್ಯೆ ಬುದ್ಧಿ ಕೊರತೆ ಇದ್ದಾಗ ಅಂಥವು ಅರಿವಿಗೇ ಬರದಿಲ್ಲ ಇರ್ಲಿ. ಈ ಹಿಂದೆ ಶಾರದಾಂಬೆನ ಬಂಡೆ ಮೇಲೆ ಕೂರಿಸಿದ ಚಿತ್ರ ಬರಿತಿದ್ರು.”
“ಹೌದೆ.”
“ಹೌದು ಸಾರ್ ವಿದ್ಯೆ ಬಂಡೆ ಇದ್ದಂಗೆ ನಾವು ಸಾಯೋವರಿಗೂ ಆ ಬಂಡೆ ಮೇಲೆ ಕೂತಗಂಡು ದೇಶ ಆಳಬಹುದು ಅನ್ನೊ ಸಂಕೇತ ಆ ಬಂಡೆ.”
“ಹೌದೆ.”
“ಈಗ ಬಿಜೆಪಿ ಆರ್ಟಿಸ್ಟುಗಳು ಏನು ಮಾಡ್ಯವುರೆ ಗೊತ್ತ ಸಾರ್, ಶೃಂಗೇರಿ ಶಾರದಾಂಬೆನ ಕಮಲದ ಮೇಲೆ ಕೂರಿಸಿದಾರೆ. ಅಷ್ಟೇ ಅಲ್ಲ, ಪೀಠದ ಮೇಲಿದ್ದ ಗಣಪತಿನೂ ಕಮಲದ ಮೇಲೆ ಕೂರಿಸಿದಾರೆ, ಇನ್ನು ಲಕ್ಷ್ಮಿಯಂತೂ ಯಾವಾಗ್ಲೂ ಕಮಲದ ಮೇಲಿದ್ಲು. ಅವುಳ ಅಂಗೇ ಬರದವುರೆ. ಇನ್ನ ಮುಂದೆ ಈ ಚೆಡ್ಡಿ ಕಲಾವಿದರು ನಮ್ಮ ಎಲ್ಲಾ ದೇವರುಗಳನ್ನ ಕಮಲದ ಮೇಲೆ ಕೂರುಸ್ತಾರೆ ಸಾರ್.”
“ಕೂರುಸ್ಲಿ ಬಿಡಿ.”
“ಅಲ್ಲ ಸಾರ್, ಈಗಾಗ್ಲೆ ಕಾರಿನ ಹಿಂಬದಿ ಗಾಜಿನಲ್ಲಿ ಮೆಡ್ಡಗಣ್ಣಿನ ಆಂಜನೇಯನ ಫೋಟಾ ಬರ್ಯೆಕತ್ತಾ ಅವುರೆ. ಪಾಪ ಆಂಜನೇಯನ ಆಕಾರನ ಹಾಳು ಮಾಡಿದ ಜನ, ಮುಂದೆ ಏನಾದ್ರೂ ಮಾಡ್ತಾರೆ. ನೀವು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಕೆಯಿಂದಿರಬೇಕು.”
“ಎಚ್ಚರಿಕೆ ಅಂದ್ರೆ.”
“ಆ ಶೃಂಗೇರಿಗ್ಯಾಕೊಯ್ತಿರಿ ಅದರ ಬದ್ಲು ಜಾರಕಿಹೊಳಿ ಮಾತಾಡಿಸಿ. ಎಂ.ಬಿ ಪಾಟೀಲ, ಬಿ.ಸಿ ಪಾಟೀಲನ ಮಾತಾಡಿಸಿ. ಅವುರ ಕೈಗೊಂದು ಉಂಗುರ ಕೊಡಿ, ಮುತ್ತು ಕೊಡಿ ಅದು ಬುಟ್ಟು ಆ ಶೃಂಗೇರಿ ಬ್ರಾಹ್ಮಣರಿಗೆ ಕೇಳಿದಷ್ಟು ಒಡವೆ ವಸ್ತ್ರ ಕೊಡ್ತಿರಲ್ಲಾ ಟಿಪ್ಪು ಸುಲ್ತಾನ್ ತರ, ನಿಮ್ಮ ಸರಕಾರ ಉಳಿತಾದ ಸಾರ್”
“ನಮ್ಮ ತಂದೆಯವರು ಹೇಳಿದ ಪ್ರಕಾರ ಶೃಂಗೇರಿ ಶಾರದಾಂಬೆ ಕೃಪೆಯಿಂದ ನಮ್ಮ ಸರಕಾರ ರಚನೆಯಾಯ್ತಂತೆ. ಆಕೆಯ ಅನುಗ್ರಹ ಇದ್ರೆ ಮುಂದೆ ಅವುಳೆ ಸರಕಾರನ ಕಾಪಾಡ್ತಳೆ ಅಂತ ಪೂಜೆ ಮಾಡಿಸಿದ್ದು. ಪೂಜೆ ಮಾಡದÀು ತಪ್ಪಾ.”
“ತಪ್ಪು ಸಾರ್, ನಿಮ್ಮ ಸರಕಾರ ರಚನೆ ಮಾಡಂಗೆ ಮಾಡಿದೋರು ಒಕ್ಕಲಿಗರು. ಅವುರು ಸಾಮೂಹಿಕವಾಗಿ ನಮ್ಮ ಕುಮಾರಣ್ಣನ ಮುಖ್ಯಮಂತ್ರಿ ಮಾಡಬೇಕು ಅಂತ ಓಟು ಮಾಡಿದ್ರು, ಶೃಂಗೇರಿ ಬ್ರಾಹ್ಮಣರಲ್ಲ. ನೀವು ಕೃತಜ್ಞತೆ ಸಲ್ಲಿಸಬೇಕಾದ್ದು ಜನಾಂಗದ ಮತದಾರರಿಗೆ, ಅದು ಬಿಟ್ಟು ಪುರೋಹಿತರ ದೇವರಿಗಲ್ಲ.”
“ಶಾರದಾಂಬೆ ಎಲ್ಲರಿಗೂ ದೇವರು ಗೊತ್ತ.”
“ಗೋಪಾಲಗೌಡ್ರು ಗೊತ್ತ ಸಾರ್”
“ಗೊತ್ತು ಅದೇ ಜಡಜು ಗೋಪಾಲಗೌಡ್ರು.”
“ಅವುರಲ್ಲ ಸಾರ್ ತೀರ್ಥಹಳ್ಳಿ-ಸಾಗರದಿಂದ ಮೂರು ಸಾರಿ ಗೆದ್ದು ಶಾಸಕರಾಗಿದ್ರು.”
“ಕೇಳಿದ್ದಿನಿ.”
“ಅವುರು ಮೂರು ಬಾರಿ ಶಾಸಕರಾಗಿದ್ರು ತೀರಿಕೊಂಡಾಗ ಒಂದು ಮನೆ ಇರಲಿಲ್ಲ, ಒಂದು ಸೈಟು ಇರಲಿಲ್ಲ, ಬ್ಯಾಂಕ್ ಅಕವುಂಟೇ ಇರಲಿಲ್ಲ.”
“ಪಾಪ ಯಾಕಂಗಿದ್ರು.”
“ಸೋಷಲಿಸ್ಟ್ ಪಾರ್ಟಿ ಕಟ್ಟೋರ ಸಿದ್ಧಾಂತ ಫಾಲೊ ಮಾಡಿ ಅಂಗಿದ್ರು. ಅವುರು ಹೇಳಿದ ಪ್ರಕಾರ ಕಾಗದವನ್ನ ಸರಸ್ವತಿ ಅನ್ನಕ್ಕಾಗಲ್ಲಾ ಈ ಬ್ರಾಹ್ಮಣರು ಹೊಟ್ಟೆಪಾಡಿಗೆ ಎಲ್ಲದಕ್ಕೂ ಒಂದು ಆಕಾರ ಕೊಟ್ಟು, ವಿಗ್ರಹ ಮಾಡಿ ಗರ್ಭಗುಡಿ ಮಾಡಿಕೊಂಡು ದಕ್ಷಿಣೆ ದತ್ತೀಲಿ ಜೀವನ ಮಾಡ್ತ ಅವುರಂತೆ, ಅಂತ ಜಾಗಕ್ಕೋಗಿ ಸರಕಾರ ಉಳಿಸಕ್ಕೆ ಪೂಜೆ ಮಾಡ್ತಾ ಸಮಯ ಹಾಳು ಮಾಡ್ತ ಕುಂತಿದ್ದೀರಲ್ಲಾ ಇದು ಸಂವಿಧಾನ ವಿರೋಧಿ ಕೆಲಸ ಅಲ್ಲವೆ?”
“ಪೂಜೆ ಮಾಡ್ತಕಂತ ವಿಷಯ ಏನಿದೆ ಅದು ನಮ್ಮ ಸಂವಿಧಾನದಲ್ಲೇ ಅದೆ ಕಂಡ್ರಿ.”
ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...