Homeಅಂಕಣಗಳುಸಹಭಾಗಿ ಪತ್ರಿಕೋದ್ಯಮ-ಚಿಂತನೆ-ಚಳುವಳಿ

ಸಹಭಾಗಿ ಪತ್ರಿಕೋದ್ಯಮ-ಚಿಂತನೆ-ಚಳುವಳಿ

- Advertisement -
- Advertisement -

ಇತ್ತೀಚೆಗೆ ‘ದಿ ಸ್ಟೇಟ್’ ವೆಬ್ ಪತ್ರಿಕೆಯು ‘ಸಹಭಾಗಿ ಪತ್ರಿಕೋದ್ಯಮ’ ಎಂಬ ವಿಭಾಗದಲ್ಲಿ ಒಂದು ವಿಶಿಷ್ಟ ಸಂಗತಿಯನ್ನು ಪ್ರಕಟಿಸುತ್ತದೆ. ತಾನು ಮುಂಚೆ ಪ್ರಕಟಿಸಿದ್ದ ಯಾವುದಾದರೂ ವರದಿಯಲ್ಲಿದ್ದ ಸಂಗತಿಯನ್ನೇ ಇನ್ನಾರಾದರೂ (ಪ್ರಧಾನವಾಗಿ ಮುದ್ರಿತ ಪತ್ರಿಕೆಗಳು) ನಂತರ ಪ್ರಕಟಿಸಿದರೆ ಅಥವಾ ಅದರ ಫಾಲೋಅಪ್ ವರದಿಯನ್ನು ಪ್ರಕಟಿಸಿದರೆ ಅದನ್ನು ಗುರುತಿಸುತ್ತದೆ ಮತ್ತು ‘ಸಹಭಾಗಿ ಪತ್ರಿಕೋದ್ಯಮ’ ವಿಭಾಗದಲ್ಲಿ ತನ್ನ ಆ ವರದಿಯನ್ನು ಇಂತಹ ಪತ್ರಿಕೆಯೂ ಮಾಡಿದೆಯೆಂದು ಹೇಳಿ ಶ್ಲಾಘಿಸುತ್ತದೆ. ಯಾವುದೇ ಜನಪರವಾದ ಸುದ್ದಿಯು ಒಂದು ಪತ್ರಿಕೆಯಿಂದ ಇನ್ನೊಂದಕ್ಕೆ, ಒಂದು ಮಾಧ್ಯಮದ ರೂಪದಿಂದ ಇನ್ನೊಂದಕ್ಕೆ ಹರಿಯುವ ಅಗತ್ಯವಿದೆ. ಇನ್ನೊಂದು ಪತ್ರಿಕೆಯು ಮೊದಲು ಗುರುತಿಸಿದ ಸುದ್ದಿಯು ಅಂತಹ ದೊಡ್ಡ ಬ್ರೇಕಿಂಗ್ ನ್ಯೂಸ್ ಏನೂ ಅಲ್ಲ ಎನಿಸಿದರೆ ಅದನ್ನು ಮಿಕ್ಕವರು ಮೂಸಿ ನೋಡುವುದಿಲ್ಲ. ಅದರಲ್ಲೂ ಮೊದಲು ಬರೆದ ಪತ್ರಿಕೆ ಅಥವಾ ಚಾನೆಲ್ ಇದು ತನ್ನದೇ ಹೆಗ್ಗಳಿಕೆಯೆಂಬಂತೆ ಬಿಂಬಿಸಿದ್ದರಂತೂ ಆ ಕಡೆಗೆ ತಲೆ ಹಾಕುವುದಿಲ್ಲ. ಆ ಮೂಲಕ ತಾನು ಆ ಇನ್ನೊಂದು ಪತ್ರಿಕೆ ಅಥವಾ ಚಾನೆಲ್‍ಗೆ ಪ್ರಚಾರ ಕೊಡುವಂತಾಗುತ್ತದೆ ಎಂಬ ಸಂಕುಚಿತ ಮನೋಭಾವನೆ ಅದು. ಅದನ್ನು ದಾಟಿ ತನ್ನ ಸುದ್ದಿಯನ್ನು ಬೇರೆಯವರು ಪ್ರಕಟಿಸಿದ್ದಾರೆ ಎಂಬುದನ್ನು ಸಕಾರಾತ್ಮಕವಾಗಿ ಗುರುತಿಸುವ ಈ ಪರಿಪಾಠವು ಸಕಾರಾತ್ಮಕವಾದುದು.
‘ವೆಬ್ ಪತ್ರಿಕೆಗಳಿಗೆ ಅಂತಹ ಮಹತ್ವವಿಲ್ಲವೆಂದು ಭಾವಿಸಬೇಡಿ, ನಮ್ಮ ಸುದ್ದಿಯನ್ನು ಇತರರೂ ಕಾಪಿ ಮಾಡಿ ಪ್ರಕಟಿಸುತ್ತಿದ್ದಾರೆ’ ಎಂಬ ಸಂದೇಶ ಕೊಡುವ ಅಗತ್ಯವೂ ಇದರ ಹಿಂದೆ ಇದ್ದಿರಬಹುದು. ಅದೇನೂ ಅಂತಹ ಸಮಸ್ಯೆಯಲ್ಲ. ಇಂತಹ ಅಗತ್ಯಗಳು ಹೊಸ ರೀತಿಯ ಮಾಧ್ಯಮಕ್ಕೆ ಇರುತ್ತವೆ. ಕನ್ನಡದ ಬಹಳ ವಿಶಿಷ್ಟ ಪ್ರಯತ್ನವಾದ ದಿ ಸ್ಟೇಟ್ ಪತ್ರಿಕೆಯನ್ನು ಅವರ ಪ್ರಯೋಗಕ್ಕಾಗಿ ನಾವು ಅಭಿನಂದಿಸಬೇಕು.
ಈ ವಿದ್ಯಮಾನವನ್ನು ಈ ಸಂಚಿಕೆಯಲ್ಲಿ ಬರೆಯುತ್ತಿರುವುದಕ್ಕೆ ಕಾರಣವಿದೆ. ಸಿಪಿಎಂ ಪಕ್ಷದ ಮುಖವಾಣಿಯಾದ ಜನಶಕ್ತಿ ವಾರಪತ್ರಿಕೆಯು ‘ನ್ಯಾಯಪಥ’ ಪತ್ರಿಕೆಯ ಬಿಡುಗಡೆಯೂ ಇದ್ದ, ಗೌರಿದಿನ ಕಾರ್ಯಕ್ರಮದ ಕುರಿತು ಸಂಪಾದಕೀಯ ಹಾಗೂ ವರದಿಯನ್ನು ವಿಶೇಷವಾದ ರೀತಿಯಲ್ಲಿ ಪ್ರಕಟಿಸಿದೆ. ತನ್ನ ಮೆಚ್ಚುಗೆಯನ್ನೂ, ಕೆಲವು ವಿಮರ್ಶೆಗಳನ್ನು ಅದರಲ್ಲಿ ದಾಖಲಿಸಿದೆ. ನ್ಯಾಯಪಥ ಮುಖಪುಟವನ್ನೂ ತನ್ನ ಕಡೆಯ ಪುಟದಲ್ಲಿ ಅಚ್ಚಿಸಿದೆ. ಇಂತಹ ‘ಸಹಭಾಗಿತ್ವ’ವೂ ಸಕಾರಾತ್ಮಕವಾದುದು.
ಒಂದು ಮಹತ್ವದ ಅಂಶವನ್ನು ‘ಜನಶಕ್ತಿ’ಯ ಸಂಪಾದಕೀಯದಲ್ಲಿ ಬರೆಯಲಾಗಿದೆ. ಸೆಪ್ಟೆಂಬರ್ 5ರ ಆ ದಿನದಂದೇ ದೆಹಲಿಯಲ್ಲಿ ನಡೆದ ರೈತ-ಕಾರ್ಮಿಕರ ಐಕ್ಯ ರ್ಯಾಲಿ, ಗೌರಿ ದಿನ ಮತ್ತು ದಕ್ಷಿಣಾಯನ ಹಾಗೂ ಗ್ರಾಮಸೇವಾ ಸಂಘದ ವತಿಯಿಂದ ನಡೆದ ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ – ಆ ವಾರದ ಮೂರು ಪ್ರಮುಖ ಕಾರ್ಯಕ್ರಮಗಳೆಂದು ಹೇಳಿ, ಮೂರರ ಕುರಿತಾಗಿ ವಿಶ್ಲೇಷಣೆಯನ್ನು ಮುಂದಿಡಲಾಗಿದೆ. ಸಾಹಿತ್ಯಿಕ-ಸಾಂಸ್ಕøತಿಕ ಎಂದು ತೋರುವ ಬೆಂಗಳೂರಿನ ಎರಡು ಕಾರ್ಯಕ್ರಮಗಳ ಸಕಾರಾತ್ಮಕ ಅಂಶಗಳನ್ನು ಶ್ಲಾಘಿಸುತ್ತಲೇ, ರೈತ ಕಾರ್ಮಿಕರ ಆಂದೋಲನ ಫ್ಯಾಸಿಸಂನ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಬಲ್ಲುದು ಎಂಬುದನ್ನು ಅದು ಹೇಳುತ್ತದೆ. ಹಾಗಾಗಿ ಅಂತಹ ಸಮುದಾಯಗಳನ್ನು ಪ್ರತಿನಿಧಿಸುವ ದೊಡ್ಡ ಸಂಘಟನೆಗಳನ್ನು ಒಳಗೊಳ್ಳದ ಯಾವುದೇ ಪ್ರತಿರೋಧ ಅದ್ಹೇಗೆ ಯಶಸ್ವಿಯಾಗಬಲ್ಲುದು ಎಂಬ ಪ್ರಶ್ನೆಯನ್ನು ‘ಜನಶಕ್ತಿ’ ಪತ್ರಿಕೆಯು ಮುಂದಿಟ್ಟಿದೆ.
ಇಂದು ಇಡೀ ದೇಶದ ಎಲ್ಲಾ ಎಡ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳು ಎದುರಿಸುತ್ತಿರುವ ಮಹತ್ವದ ಸವಾಲೆಂದರೆ ಇದೇ. ಫ್ಯಾಸಿಸಂ ಎಂಬುದು ಕೇವಲ ಸರ್ವಾಧಿಕಾರವಲ್ಲ. ಜನರ ಸಮ್ಮತಿಯೊಂದಿಗೆ ಮತ್ತು ಅವರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಸುವ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಸರ್ವಾಧಿಕಾರವದು. ಅಂದರೆ ಜನಸಾಮಾನ್ಯರ ಗಣನೀಯ ವಿಭಾಗವು, ರೈತ-ಕಾರ್ಮಿಕ-ಆದಿವಾಸಿಗಳನ್ನೊಳಗೊಂಡಂತೆ, ಒಂದು ರೀತಿಯ ಸಮ್ಮತಿಯೊಂದಿಗೆ ಜಾರಿಯಲ್ಲಿರುವ ಯಾಜಮಾನ್ಯ ಅದು. ಆರ್ಥಿಕವಾಗಿ ಕೆಲವು ಕಷ್ಟ ನಷ್ಟಗಳನ್ನೆದುರಿಸಿದಾಗ ಫ್ಯಾಸಿಸ್ಟ್ ಪ್ರಭುತ್ವದ ಮುಂದೆಯೂ ಕೆಲವು ‘ಬೇಡಿಕೆ’ಗಳನ್ನಿಟ್ಟು ಹೋರಾಡಲು ಈ ಸಮುದಾಯಗಳು ಮುಂದೆ ಬರುತ್ತವೆ. ಆದರೆ, ಈ ಸರ್ಕಾರದ ನೇತೃತ್ವ ವಹಿಸುವ ಕೋಮುವಾದಿ ಪಕ್ಷಕ್ಕೇ ಓಟು ಹಾಕುತ್ತವೆ. ದೇಶದ ಎಲ್ಲಾ ಭಾಗಗಳಲ್ಲೂ ಬಿಜೆಪಿಯ ಮತ ಪ್ರಮಾಣ ಹೆಚ್ಚಾಗುತ್ತಿರುವುದನ್ನು ನಾವು ನೋಡಬಹುದು. ಇದರಲ್ಲಿ ಮುಂಚೂಣಿಯಲ್ಲಿರುವುದು ಮಧ್ಯಮವರ್ಗ ಮತ್ತು ಮೇಲ್ಜಾತಿಗಳೇ ಆಗಿವೆ ಎಂಬುದರಲ್ಲಿ ಸಂಶಯವಿಲ್ಲ.
ಜನಸಾಮಾನ್ಯರನ್ನು ಒಳಗೊಳ್ಳದ ‘ಪ್ರಜ್ಞಾವಂತರ’ ಸೆಕ್ಯುಲರಿಸಂ, ಲಭ್ಯವಿದ್ದ ಮತ್ತು ಇಂದೂ ಸ್ವಲ್ಪಮಟ್ಟಿಗೆ ಉಳಿದುಕೊಂಡಿರುವ ಲಿಬರಲ್ ಅವಕಾಶಗಳನ್ನು ಬಳಸಿಕೊಂಡು ಪ್ರಜಾತಾಂತ್ರಿಕ ಆಶಯಗಳನ್ನು ಮಂಡಿಸಬಯಸುತ್ತಿದೆ. ಆದರೆ, ಒಂದು ಸಮಗ್ರ ಕಾರ್ಯಸೂಚಿಯ ಕೊರತೆ ಈ ಸಮೂಹವನ್ನು ‘ತನ್ನಂತೆಯೇ ಯೋಚಿಸುವ ನಿರ್ದಿಷ್ಟ ಸಮೂಹದೊಳಗೇ ಆಡಿದ್ದೇ ಆಡುವ’ ವರ್ತುಲದಲ್ಲಿ ಕಟ್ಟಿ ಹಾಕಿದೆ. ಸ್ವಲ್ಪ ಆಚೀಚೆ ಹೋಗಬಯಸುವ ಪ್ರಯತ್ನಗಳನ್ನು ಗುಮಾನಿಯಿಂದಲೂ ನೋಡುವ ವಾತಾವರಣವಿದೆ. ಗ್ರಾಮಸೇವಾ ಸಂಘದ ಪ್ರಯತ್ನಗಳ ಕುರಿತು ಇನ್ನೂ ಸ್ವಲ್ಪಕಾಲ ತಾಳ್ಮೆಯಿಂದ ಪರಿಶೀಲಿಸುವ ಅಗತ್ಯವಿದೆ. ಜನಶಕ್ತಿಯ ಸಂಪಾದಕೀಯದಲ್ಲೂ, ಅದೇ ಪತ್ರಿಕೆಯಲ್ಲಿ ಪುನರ್‍ಮುದ್ರಿತವಾದ ಅರುಣ್ ಜೋಳದಕೂಡ್ಲಿಗಿಯವರ ದಿ ಸ್ಟೇಟ್‍ನ ಬರಹದಲ್ಲೂ ಇದೇ ಗುಮಾನಿಯ ಧ್ವನಿಯಿದೆ. ಒಂದು ಕಡೆ ಸಾಪ್ತಾಹಿಕ ಪುರವಣಿಯ ಬರಹಗಾರರು ಕೋಮುವಾದದ ವಿರುದ್ಧದ ಆಂದೋಲನಕ್ಕೆ ಬರುವುದಿಲ್ಲವೆಂದು ಟೀಕಿಸುವುದು, ಇನ್ನೊಂದು ಕಡೆ ಅವರು ಬಂದರೆ ಅದನ್ನೂ ಟೀಕಿಸುವುದು ನಡೆದರೆ, ಅದು ಫ್ಯಾಸಿಸಂ ವಿರುದ್ಧದ ವಿಶಾಲ ತಳಹದಿಯ ಆಂದೋಲನಕ್ಕೆ ತೊಡಕುಂಟು ಮಾಡುವುದಿಲ್ಲವೇ? ಕಾಂಗ್ರೆಸ್ಸನ್ನು ಮೃದು ಹಿಂದುತ್ವವಾದಿ ಎಂದು ಕರೆದು ದೂರವಿಡುವ ಪರಿಸ್ಥಿತಿಯಲ್ಲಿ ಇಂದು ದೇಶದ ಫ್ಯಾಸಿಸ್ಟ್ ವಿರೋಧಿ ಶಕ್ತಿಗಳು ಇರುವವೇ? ಹೀಗಿರುವಾಗ ನಮ್ಮ ಜೊತೆ ಬರುವ ಅಲ್ಪಸ್ವಲ್ಪ ಸಾಧ್ಯತೆಯಿರುವವರನ್ನೂ ದೂರ ತಳ್ಳುವ ಕೆಲಸ ಆಗಬಾರದು.
ಎರಡನೆಯದಾಗಿ ಸ್ಪಷ್ಟ ಕಾರ್ಯಸೂಚಿಯ ಪ್ರಶ್ನೆ. ಸ್ಪಷ್ಟ ಕಾರ್ಯಸೂಚಿಯನ್ನು ಸೀಮಿತವಾದ ಉದ್ದೇಶ ಹೊಂದಿರುವ ಕಾರ್ಯಕ್ರಮಗಳು ಮುಂದಿಡಲು ಸಾಧ್ಯವೇ? ದೇಶದ ಬಹುತೇಕ ಜನರ ಹಿತಾಸಕ್ತಿಯನ್ನು ಒಳಗೊಳ್ಳುವ, ದೊಡ್ಡ ಜನಸಮುದಾಯಗಳನ್ನು ಸಂಘಟಿಸಲು ಸಾಧ್ಯವಿರುವ, ರಾಜಕೀಯ ಸಂಘಟನೆಗಳು ಮಾಡಬಹುದಾದ್ದನ್ನು ಮಿಕ್ಕವರು ಮಾಡಲಿಲ್ಲ ಎಂದು ಆರೋಪಿಸಲಾಗದು. ಆದರೆ, ಸಾಂಸ್ಕøತಿಕ ಮತ್ತು ಮಾಧ್ಯಮ ಪ್ರಯತ್ನಗಳೂ ಸಹಾ ತಮ್ಮ ಮಿತಿಯೊಳಗೆ ಮಾಡಬಹುದಾದ್ದನ್ನು ಸ್ಪಷ್ಟಗೊಳಿಸಿಕೊಳ್ಳದೇ ಸಂಘಟಿಸಲಾಗುತ್ತಿರುವ ವಾರ್ಷಿಕ ಕಾರ್ಯಕ್ರಮಗಳಲ್ಲೂ ಸಹಾ ‘ಬಿಡಿ ಬಿಡಿ ಆತಂಕಗಳೇ’ ಪದೇ ಪದೇ ಪುನರಾವರ್ತನೆಯಾಗುತ್ತಿವೆ. ಇದನ್ನು ದಕ್ಷಿಣಾಯನಕ್ಕೆ ಮಾತ್ರ ಅನ್ವಯಿಸಲಾಗದು. ಎಡ ಸಂಘಟನೆಗಳು ಸೇರಿದಂತೆ ಹಲವರು ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಲು ಆರಂಭಿಸಿ ಬಹಳ ವರ್ಷಗಳೇ ಕಳೆದವು. ಇನ್ನಾದರೂ ಕಾರ್ಯಸೂಚಿಯನ್ನು ಚರ್ಚಿಸುವುದಕ್ಕೇ ಎಲ್ಲರೂ ಫೋಕಸ್ ಮಾಡಿಕೊಳ್ಳಬೇಕಿದೆ.
ಬಹಳ ಮುಖ್ಯವಾಗಿ ದುಡಿಯುವ ವರ್ಗಗಳ ಅತ್ಯುತ್ತಮ ಹೋರಾಟಗಳೂ ತಕ್ಷಣದ ಆರ್ಥಿಕ ಬೇಡಿಕೆಗಳಾಚೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಅರಿವು ಪಡೆದುಕೊಳ್ಳದೇ ಹೋದ ದುರಂತವನ್ನೂ ದೇಶ ನೋಡಿದೆ. ಹಾಗಾಗಿಯೇ ‘ಎಡಪರ್ಯಾಯ’ವು ಪರ್ಯಾಯವಲ್ಲ ಎಂಬ ಭಾವನೆ ಬಲಗೊಂಡಿದೆ. ಮಧ್ಯಮವರ್ಗವನ್ನೂ ಒಳಗೊಳ್ಳಬಲ್ಲ, ವಿಶಾಲ ಜನಸಮುದಾಯವನ್ನು ಆರ್ಥಿಕ ರಾಜಕೀಯ ಸಾಮಾಜಿಕ ಮತ್ತು ಸಾಂಸ್ಕøತಿಕ ನೆಲೆಯಲ್ಲಿ ಒಂದಾಗಿಸಬಲ್ಲ ಪರ್ಯಾಯವನ್ನು ಮುಂದಿಡಲಾಗದೇ ಹೋದದ್ದಕ್ಕೆ ಒಬ್ಬರು ಇನ್ನೊಬ್ಬರನ್ನು ದೂರಿಕೊಂಡು ಕುಳಿತರೆ ಸಾಕಾಗದು.
ಸಹಭಾಗಿ ಪತ್ರಿಕೋದ್ಯಮದಂತೆಯೇ ಸಹಭಾಗಿ ಚಿಂತನೆ, ಸಹಭಾಗಿ ಚಳವಳಿ ಸಾಧ್ಯವಾಗಬೇಕು. ಈ ಸದಾಶಯದೊಂದಿಗೆ ಎಲ್ಲರೂ ಅವರವರ ಪಾತ್ರವನ್ನು ನಿಭಾಯಿಸೋಣ. ನ್ಯಾಯಪಥ ಎಂಬ ಈ ಗೌರಿ ಪತ್ರಿಕೆಯು ತನ್ನ ಪಾತ್ರ ನಿಭಾಯಿಸಲು ಸಜ್ಜಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...