Homeಅಂಕಣಗಳುಸಾರ್ವಜನಿಕ ನೀತಿಗಳು ಮತ್ತು ಕಪ್ಪುಹಣ

ಸಾರ್ವಜನಿಕ ನೀತಿಗಳು ಮತ್ತು ಕಪ್ಪುಹಣ

- Advertisement -
- Advertisement -

ಹೆಚ್.ಎಸ್.ದೊರೆಸ್ವಾಮಿ |

ಪ್ರಜಾಪ್ರಭುತ್ವದಲ್ಲಿ ಜನರ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಬೇಕು. ನಮ್ಮ ಸಂವಿಧಾನದಲ್ಲಿ ಪಕ್ಷಗಳ ಪ್ರಸ್ತಾಪವೇ ಇಲ್ಲದಿದ್ದರೂ ರಾಜಕೀಯ ಪಕ್ಷಗಳು ಎಲ್ಲೆಡೆ ವೃದ್ಧಿಯಾಗುತ್ತಲೇ ಇವೆ. ಜನರ ಪ್ರತಿನಿಧಿಯಾರೂ ಆಯ್ಕೆಯಾಗುತ್ತಿಲ್ಲ; ರಾಜಕೀಯ ಪಕ್ಷದ ಅಭ್ಯರ್ಥಿಗಳೆ ಸ್ಪರ್ಧಿಸಿ ಆಯ್ಕೆಯಾಗುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ಹೀಗೆ ಇತರೆ ಪಕ್ಷಗಳ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದಾರೆ. ಜನರ ಪ್ರತಿನಿಧಿಗಳು ಎಲ್ಲಿ? ಜನರ ಮತಗಳಿಂದಲೇ ಆಯ್ಕೆಯಾದರೂ ಪಕ್ಷಗಳ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುತ್ತಿದ್ದಾರೆ. ಹಾಗಾಗಿ ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಜನರ ಪ್ರತಿನಿಧಿಗಳೇ ಇಲ್ಲ.
ಒಂದು, ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ರಾಜಕೀಯ ಪಕ್ಷಗಳನ್ನು ನಿರ್ಬಂಧಿಸಬೇಕು ಇಲ್ಲವೇ ಪರ್ಯಾಯವಾಗಿ ಅಥವಾ ಚುನಾವಣೆಗಳಲ್ಲಿ ಸ್ಪರ್ಧಿಸಿ, ಮತದಾರರ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಮತದಾರರ ಕೌನ್ಸಿಲ್‍ಗಳ ರಚನೆಯಾಗಬೇಕು.
ಪಂಚವಾರ್ಷಿಕ ಯೋಜನೆಗಳು
ದೇಶದ ಮೊದಲ ಪ್ರಧಾನಿ ನೆಹರು ಅವರು ಪರಿಚಯಿಸಿದ ಪಂಚವಾರ್ಷಿಕ ಯೋಜನೆಗಳು ಯಶಸ್ವಿಯಾಗಲಿಲ್ಲ. ಈ ಯೋಜನೆಗಳು ಸಾರ್ವಜನಿಕ ನೀತಿಗಳ ಚೈತನ್ಯದ ವಿರುದ್ಧವಾಗಿದ್ದವು. 65 ವರ್ಷಗಳಲ್ಲಿ 13 ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಒಂದೊಂದು ಪಂಚವಾರ್ಷಿಕ ಯೋಜನೆಗಳಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಲಾಯಿತು. ಆದರೆ ಅದರ ಫಲಿತಾಂಶ : ಶ್ರೀಮಂತರು ಇನ್ನಷ್ಟು ಶ್ರೀಮಂತರಾದರೆ ಬಡವರು ಹೆಚ್ಚಿನ ಬಡತನಕ್ಕೆ ದೂಡಲ್ಪಟ್ಟರು. ಈ ಪ್ರಯೋಗ ಬಡತನದ ರೇಖೆಯ ಕೆಳಗೆ 33% ಜನರನ್ನು ಸೃಷ್ಟಿಸಿತು. ದೇಶಕ್ಕೆ ಸ್ವಾತಂತ್ರ ಬಂದಕೂಡಲೇ ಬಡತನವನ್ನು ನಿರ್ಮೂಲನೆ ಮಾಡಬೇಕು ಎಂದು ಗಾಂಧೀಜಿಯವರು ಪಣತೊಟ್ಟಿದ್ದರು. ಆದರೆ ಸ್ವಾತಂತ್ರಾನಂತರ ಬಂದ ಸರಕಾರಗಳ ನೀತಿಗಳಿಂದಾಗಿ ಇದು ಆಗಲಿಲ್ಲ. ಸ್ವಾತಂತ್ರ ಸಿಕ್ಕ ಕೂಡಲೇ ಬಡತನ ನಿರ್ಮೂಲನೆಗಾಗಿ ಸಾರ್ವಜನಿಕ ನೀತಿಯೊಂದನ್ನು ರೂಪಿಸಿದ್ದರೆ, ಇಂದು ನಾವು ಒಂದು ಸಮಾನಾವಕಾಶವುಳ್ಳ (egಚಿಟiಣಚಿಡಿiಚಿಟಿ) ಸಮಾಜವನ್ನು ಸೃಷ್ಟಿಸಿರುತ್ತಿದ್ದೆವು.
13 ಪಂಚವಾರ್ಷಿಕ ಯೋಜನೆಗಳಲ್ಲಿ ಎರಡು ಅಥವಾ ಮೂರು ಯೋಜನೆಗಳನ್ನಷ್ಟೇ ಬಡತನ ನಿರ್ಮೂಲನೆಗಾಗಿ ಮೀಸಲಿಟ್ಟಿದ್ದರೂ, ಭಾರತದ ಪರಿಸ್ಥಿತಿ ಬೇರಯೇ ಆಗಿರುತ್ತಿತ್ತು.
ಸಾರ್ವಜನಿಕ ನೀತಿಗಳೆಂದರೆ, ಸಂವಿಧಾನದ ನಿಬಂಧನೆಗಳ ವಿರುದ್ಧವಿರದ, ಸಾರ್ವಜನಿಕರಿಗೆ ಒಪ್ಪಿಗೆಯಾಗುವ ಸರಕಾರದ ನೀತಿಗಳು ಎಂದು ವ್ಯಾಖ್ಯಾನಿಸಬಹುದು.
ಸಾರ್ವಜನಿಕ ನೀತಿ ಎಂದರೆ, ಕಾನೂನು ಮತ್ತು ಸಾಂಸ್ಥಿಕ ಪದ್ಧತಿಗಳೊಂದಿಗೆ ಅನುಗುಣವಾಗಿರುವಂತೆ, ಎದುರಿಗಿರುವ ಸಮಸ್ಯೆ/ವಿಷಯಗಳನ್ನು ನಿವಾರಿಸಲು ಸರಕಾರದ ಆಡಳಿತದ ಕಾರ್ಯಾಂಗಗಳು ತೆಗೆದುಕೊಳ್ಳುವ ಕ್ರಮಗಳಿಗೆ ಇರಬೇಕಾದ ತತ್ವಾಧಾರಿತ ಮಾರ್ಗದರ್ಶಿ ಎನ್ನಬಹುದು.
ಇನ್ನೂ ಕೆಲವು ವಿದ್ವಾಂಸರು ಸಾರ್ವಜನಿಕ ನೀತಿ ಎಂದರೆ,, a system of courses of actions, regulatory measures, laws and funding priorities, concerning a given topic promulgated by government entity or it’s representatives’ . ಸರಕಾರ ಅಥವಾ ಅದರ ಪ್ರತಿನಿಧಿಗಳಿಂದ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಅನುಸರಿಸುವ ಕ್ರಮಗಳು, ನಿಯಂತ್ರಕ ಕ್ರಮಗಳು ಹಾಗೂ ಬಂಡವಾಳ ಒದಗಿಸುವ ವ್ಯವಸ್ಥೆ. ಸಂವಿಧಾನದಲ್ಲಿ, ಶಾಸನಬದ್ಧ ಕ್ರಮಗಳಲ್ಲಿ ಹಾಗೂ ನ್ಯಾಯಾಂಗದಲ್ಲಿ ಸಾರ್ವಜನಿಕ ನೀತಿಗಳು ಸಾಮಾನ್ಯವಾಗಿ ಸಾಕಾರಗೊಳ್ಳುತ್ತವೆ.
ನಮ್ಮೆದುರಿಗೆ ಈಗ ಇನ್ನೊಂದು ಸಮಸ್ಯೆಯಿದೆ, ಲೋಕಸಭೆಯಲ್ಲಿ ಹಾಗೂ ವಿಧಾನಸಭೆಯಲ್ಲಿಯ ಕಾರ್ಯಕಲಾಪಗಳು ನಾಚಿಕೆ ಹುಟ್ಟಿಸುವಂತಿವೆ. ವಿರೋಧ ಪಕ್ಷಗಳು ನಡೆದುಕೊಳ್ಳುವ ರೀತಿ ಅಸಹ್ಯವಾಗಿದೆ. ತಮ್ಮನ್ನು ಜನರ ಸೇವೆಗಾಗಿ ಆಯ್ಕೆ ಮಾಡಲಾಗಿದೆ ಎನ್ನುವುದು ಅವರುಗಳು ಮರೆತಂತಿದೆ. ಸಭೆಯಲ್ಲಿ ಅವರು ಗೊಂದಲ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲು ಇವರುಗಳು ಅವಕಾಶವೇ ನೀಡುತ್ತಿಲ್ಲ. ಅವರೆದುರಿಗಿರಿಸಿದ ಬಿಲ್‍ಗಳನ್ನು ಯಾವುದೇ ಚರ್ಚೆಯಿಲ್ಲದೇ ಪಾಸ್ ಮಾಡುತ್ತಿದ್ದಾರೆ. ವಿಧೇಯಕವನ್ನು ಅಂಗೀಕರಿಸುವ ಸಮಯದಲ್ಲಿ, ಸದನದಿಂದ ಹೊರನಡೆಯುತ್ತಾರೆ ಹಾಗೂ ಆಗ ಆಡಳಿತ ಪಕ್ಷದ ಸದಸ್ಯರು ವಿಧೇಯಕದ ಪರವಾಗಿ ತಮ್ಮ ಧ್ವನಿಯೆತ್ತುತ್ತಾರೆ ಆಗ ಸದನದ ಸ್ಪೀಕರ್ ವಿಧಾಯಕ ಅಂಗೀಕರಿಸಲಾಗಿದೆ ಎಂದು ಘೋಷಿಸುತ್ತಾರೆ. ಕಳೆದ 10-15 ವರ್ಷದಿಂದ ಈ ಪ್ರಹಸನ ನಡೆಯುತ್ತಲೇ ಇದೆ. ಹಿರಿಯ ಸಭಾಪತಿಗಳಾದ ಸೋಮನಾಥ್ ಚಟರ್ಜಿಗೆ ಕೂಡ ಎಮ್‍ಪಿಗಳ ಮಾಬ್ ಮನಸ್ಥಿತಿಯನ್ನು ಹದ್ದುಬಸ್ತಿನಲ್ಲಿಡಲು ಆಗಲಿಲ್ಲ. ಇಂತಹ ಅವ್ಯವಸ್ಥೆಗಳಲ್ಲಿ ತೊಡಗಿದ್ದಾಗಲೇ, ತಮ್ಮ ಸಂಬಳ ಮತ್ತು ಸವಲತ್ತುಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಏಳು ಸಲ ಏರಿಸಿಕೊಂಡರು. ಅದೂ ಯಾವುದೇ ಚರ್ಚೆ, ವಿರೋಧವಿಲ್ಲದೇ.
1935 ರಲ್ಲಿ ಗಾಂಧೀಜಿಯವರು ಸ್ವದೇಶಿ ಆಂದೋಲನ ಶುರುಮಾಡಿದಾಗ ಭಾರತದಲ್ಲಿ ಬರೀ ಒಂದು ವಿದೇಶಿ ಕಂಪನಿ ಇತ್ತು; ಈಸ್ಟ್ ಇಂಡಿಯಾ ಕಂಪನಿ. ಅವರು ಹಡಗುಗಳಲ್ಲಿ ತುಂಬಿಸಿ ಹತ್ತಿಯನ್ನು ಇಂಗ್ಲೆಂಡಿಗೆ ಒಯ್ದು, ಭಾರತೀಯರಿಗೆ ಮಾರಲು ಹತ್ತಿಯ ಬಟ್ಟೆಯನ್ನು ಮರಳಿ ತರುತ್ತಿದ್ದರು. ಒಂದು ವೇಳೆ ಬ್ರಿಟಿಷರಿಗೆ ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಮಾರಲು ಅವಕಾಶ ನೀಡಿದಲ್ಲಿ, ಅವರು ತಮ್ಮ ಯಂತ್ರಗಳೊಂದಿಗೆ ಇಲ್ಲಿಗೆ ಬಂದು ಕಾರ್ಖಾನೆಗಳನ್ನು ಪ್ರಾರಂಭಿಸುವ ದಿನಗಳು ದೂರವಿಲ್ಲ ಎಂದು ಗಾಂಧೀಜಿ ಭವಿಷ್ಯ ನುಡಿದಿದ್ದರು. ಹಾಗಾಗಿ ಅವರ ವಸ್ತುಗಳಿಗೆ ಇಂದೇ ಬಹಿಷ್ಕಾರ ಹಾಕಬೇಕು ಎಂದರು. ಹೊರದೇಶದಿಂದ ಭಾರತಕ್ಕೆ ಬರುವ ವಸ್ತುಗಳನ್ನು ಸುಟ್ಟುಹಾಕುವ ಅತ್ಯಂತ ಯಶಸ್ವೀ ಚಳವಳಿಯನ್ನು ಗಾಂಧೀಜಿ ಪ್ರಾರಂಭಿಸಿದರು. ಈ ಚಳವಳಿ ಕಾಳ್ಗಿಚ್ಚಿನಂತೆ ಭಾರತದೆಲ್ಲೆಡೆ ಹಬ್ಬಿತು. ಒಂದೇ ಒಂದು ವಿದೇಶಿ ಕಂಪನಿ ಕೂಡ ಭಾರತಕ್ಕೆ ಬಂದು, ಇಲ್ಲಿಯ ಜನರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಗಾಂಧೀಜಿ ಹೇಳಿದ್ದರು.
ಯಾವುದೇ ಅನುಮಾನವಿಲ್ಲದೆ ವೇಗವಾಗಿ ಆರ್ಥಿಕ ಬೆಳವಣಿಗೆ ಆಗುತ್ತಿದೆ ಆದರೆ ಅದರ ಜೊತೆಜೊತೆಗೆ ಬಡವರು ಮತ್ತು ಶ್ರೀಮಂತರ ಅಂತರವೂ ಸಹ ಬೆಳೆಯುತ್ತಲೇ ಇದೆ. ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಇಂತಹ ಅನಾರೋಗ್ಯಕರ ಬೆಳವಣಿಗೆ ಆಗುತ್ತಿರುವ ಈ ಕಾಲಘಟ್ಟದಲ್ಲಿ ವಿಶೇಷವಾಗಿ ಮೋದಿ ಸರ್ಕಾರವು ಕೋಟ್ಯಾಧಿಪತಿಗಳ ಪೋಷಣೆ ಮಾಡುತ್ತಿದ್ದಾರೆ ಇದು ಸಾಮಾನ್ಯ ಜನರ ಗಂಡಾಂತರಕ್ಕೆ ಕಾರಣವಾಗಬಹುದೇ?
ಹಣಬಲ: ನಿಯಂತ್ರಿಸುವುದು ಹೇಗೆ?
ಹಣಬಲ- ಒಂದು ಜಾಗತಿಕ ವಿದ್ಯಮಾನ. ಹಣವು ಒಂದು ನಿರ್ಜೀವ ವಸ್ತುವಾಗಿದೆ. ಅದಕ್ಕೆ ನಾವು ಜೀವ ಮತ್ತು ಚಲನೆಯನ್ನು ನೀಡುತ್ತೇವೆ. ಹಣವನ್ನು ಜನರು ಮತ್ತು ಸರ್ಕಾರಗಳೂ ನಿಯಂತ್ರಿಸುವಂತಿರಬೇಕಿತ್ತು. ಆದರೆ ಇಂದು ಹಣ ಮತ್ತು ಹಣವಂತರು ಜನರನ್ನು ಹಾಗೂ ಸಮುದಾಯಗಳನ್ನು ನಿಯಂತ್ರಿಸುತ್ತಿದೆ. ಅಷ್ಟೇ ಅಲ್ಲದೆ ಮಂತ್ರಿಗಳನ್ನು, ಸರ್ಕಾರದ ಬೇರೆ ಬೇರೆ ಪ್ರತಿನಿಧಿಗಳನ್ನು ನಿಭಾಯಿಸುತ್ತಿದೆ. ನಾಯಿ ಬಾಲವನ್ನು ಅಲುಗಾಡಿಸುವ ಬದಲಿಗೆ ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿರುವಂತಿದೆ.
ಹಣವು ವ್ಯಕ್ತಿಗಳನ್ನು ಮತ್ತು ಸರ್ಕಾರವನ್ನು ಕೊಂಡುಕೊಳ್ಳಬಹುದಾಗಿದೆ. ನಾವುಗಳು ಹಣ ಮತ್ತು ಹಣವಂತ ವರ್ಗಕ್ಕೆ ಗುಲಾಮರಾಗಿದ್ದೇವೆ. ಇದರಿಂದ ಹೇಗೆ ಹೊರಬರಬೇಕು ಅನ್ನುವುದೇ ಇಡೀ ಜಗತ್ತಿಗೆ ದೊಡ್ಡ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.
ನಾನು ಕಪ್ಪು ಹಣದ ಉತ್ಪತ್ತಿಯ ಬಗ್ಗೆ ಒಂದು ಉದಾಹರಣೆ ಕೊಡುತ್ತೇನೆ. ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ತುಂಬಿಹೋಗಿವೆ ಎಂಬುದು ನಿಮಗೆ ಗೊತ್ತಿದೆ; ಕೆಲವು ಗುಂಡಿಗಳು ಚಿಕ್ಕವು, ಕೆಲವು ಆಳವಾದವು, ಭಯಂಕರವಾದವು. ಮಳೆ ಬಂದಾಗ ಈ ಗುಂಡಿಗಳೆಲ್ಲ ನೀರಿನಿಂದ ತುಂಬಿಹೋಗುತ್ತವೆ. ಕೆಲವು ದಿನಗಳ ನಂತರ ಈ ನೀರು ಕಲುಷಿತಗೊಳ್ಳುತ್ತದೆ, ಅದರಲ್ಲಿ ರೋಗಾಣುಗಳು ಸೇರಿಕೊಳ್ಳುತ್ತವೆ ಮತ್ತು ಅದರಿಂದ ಇಡೀ ಬೆಂಗಳೂರಿಗೆ ಕಾಯಿಲೆ ಹರಡುತ್ತದೆ. ಕಪ್ಪು ಹಣದ ವಿಚಾರವೂ ಹೀಗೆಯೇ. ಯಾವಾಗ ಹಣವು ಹರಿವಿನಲ್ಲಿಲ್ಲದೆ ನಿಂತಲ್ಲೇ ನಿಲ್ಲುತ್ತದೋ ಆಗ ಅದು ಕಪ್ಪು ಹಣವಾಗುತ್ತದೆ. ಹಣ ಇರುವುದೇ ಹರಿಯುವುದಕ್ಕಾಗಿ. ಅದು ಕೈಯಿಂದ ಕೈಗೆ ನಿರಂತರವಾಗಿ ಹರಿದಾಡುತ್ತಲೇ ಇರಬೇಕು. ಅದಕ್ಕಾಗಿಯೇ ಹಣವನ್ನು ಕರೆನ್ಸಿ ಎಂದು ಕರೆದಿರುವುದು. ಹಣವನ್ನು ಈ ರೀತಿ ಕರೆಂಟಿನಂತೆ ಹರಿದಾಡುವ ಹಾಗೆ ಮಾಡುವುದು ಹೇಗೆ? ಸಾರ್ವಜನಿಕ ನೀತಿ ನಿರೂಪಣೆಯ ಕೇಂದ್ರಗಳು ಈ ಸಂಕೀರ್ಣ ವಿಚಾರದ ಬಗ್ಗೆ ಗಂಭೀರವಾದ ಚಿಂತನೆ ನಡೆಸಿ, ಸೂಕ್ತ ಪರಿಹಾರೋಪಾಯವನ್ನು ಕಂಡುಕೊಳ್ಳಬೇಕು. ಇದು ಸಾಧ್ಯವಾದಾಗಲೇ ಹಣವನ್ನು ನಿಯಂತ್ರಣಕ್ಕೆ ತರಬಹುದು ಮತ್ತು ನಾವು ಅದನ್ನು ಬೇಕಾದಂತೆ ಆಡಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...