Homeಅಂಕಣಗಳುಸಾರ್ವಜನಿಕ ನೀತಿಗಳು ಮತ್ತು ಕಪ್ಪುಹಣ

ಸಾರ್ವಜನಿಕ ನೀತಿಗಳು ಮತ್ತು ಕಪ್ಪುಹಣ

- Advertisement -
- Advertisement -

ಹೆಚ್.ಎಸ್.ದೊರೆಸ್ವಾಮಿ |

ಪ್ರಜಾಪ್ರಭುತ್ವದಲ್ಲಿ ಜನರ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಬೇಕು. ನಮ್ಮ ಸಂವಿಧಾನದಲ್ಲಿ ಪಕ್ಷಗಳ ಪ್ರಸ್ತಾಪವೇ ಇಲ್ಲದಿದ್ದರೂ ರಾಜಕೀಯ ಪಕ್ಷಗಳು ಎಲ್ಲೆಡೆ ವೃದ್ಧಿಯಾಗುತ್ತಲೇ ಇವೆ. ಜನರ ಪ್ರತಿನಿಧಿಯಾರೂ ಆಯ್ಕೆಯಾಗುತ್ತಿಲ್ಲ; ರಾಜಕೀಯ ಪಕ್ಷದ ಅಭ್ಯರ್ಥಿಗಳೆ ಸ್ಪರ್ಧಿಸಿ ಆಯ್ಕೆಯಾಗುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ಹೀಗೆ ಇತರೆ ಪಕ್ಷಗಳ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದಾರೆ. ಜನರ ಪ್ರತಿನಿಧಿಗಳು ಎಲ್ಲಿ? ಜನರ ಮತಗಳಿಂದಲೇ ಆಯ್ಕೆಯಾದರೂ ಪಕ್ಷಗಳ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುತ್ತಿದ್ದಾರೆ. ಹಾಗಾಗಿ ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಜನರ ಪ್ರತಿನಿಧಿಗಳೇ ಇಲ್ಲ.
ಒಂದು, ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ರಾಜಕೀಯ ಪಕ್ಷಗಳನ್ನು ನಿರ್ಬಂಧಿಸಬೇಕು ಇಲ್ಲವೇ ಪರ್ಯಾಯವಾಗಿ ಅಥವಾ ಚುನಾವಣೆಗಳಲ್ಲಿ ಸ್ಪರ್ಧಿಸಿ, ಮತದಾರರ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಮತದಾರರ ಕೌನ್ಸಿಲ್‍ಗಳ ರಚನೆಯಾಗಬೇಕು.
ಪಂಚವಾರ್ಷಿಕ ಯೋಜನೆಗಳು
ದೇಶದ ಮೊದಲ ಪ್ರಧಾನಿ ನೆಹರು ಅವರು ಪರಿಚಯಿಸಿದ ಪಂಚವಾರ್ಷಿಕ ಯೋಜನೆಗಳು ಯಶಸ್ವಿಯಾಗಲಿಲ್ಲ. ಈ ಯೋಜನೆಗಳು ಸಾರ್ವಜನಿಕ ನೀತಿಗಳ ಚೈತನ್ಯದ ವಿರುದ್ಧವಾಗಿದ್ದವು. 65 ವರ್ಷಗಳಲ್ಲಿ 13 ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಒಂದೊಂದು ಪಂಚವಾರ್ಷಿಕ ಯೋಜನೆಗಳಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಲಾಯಿತು. ಆದರೆ ಅದರ ಫಲಿತಾಂಶ : ಶ್ರೀಮಂತರು ಇನ್ನಷ್ಟು ಶ್ರೀಮಂತರಾದರೆ ಬಡವರು ಹೆಚ್ಚಿನ ಬಡತನಕ್ಕೆ ದೂಡಲ್ಪಟ್ಟರು. ಈ ಪ್ರಯೋಗ ಬಡತನದ ರೇಖೆಯ ಕೆಳಗೆ 33% ಜನರನ್ನು ಸೃಷ್ಟಿಸಿತು. ದೇಶಕ್ಕೆ ಸ್ವಾತಂತ್ರ ಬಂದಕೂಡಲೇ ಬಡತನವನ್ನು ನಿರ್ಮೂಲನೆ ಮಾಡಬೇಕು ಎಂದು ಗಾಂಧೀಜಿಯವರು ಪಣತೊಟ್ಟಿದ್ದರು. ಆದರೆ ಸ್ವಾತಂತ್ರಾನಂತರ ಬಂದ ಸರಕಾರಗಳ ನೀತಿಗಳಿಂದಾಗಿ ಇದು ಆಗಲಿಲ್ಲ. ಸ್ವಾತಂತ್ರ ಸಿಕ್ಕ ಕೂಡಲೇ ಬಡತನ ನಿರ್ಮೂಲನೆಗಾಗಿ ಸಾರ್ವಜನಿಕ ನೀತಿಯೊಂದನ್ನು ರೂಪಿಸಿದ್ದರೆ, ಇಂದು ನಾವು ಒಂದು ಸಮಾನಾವಕಾಶವುಳ್ಳ (egಚಿಟiಣಚಿಡಿiಚಿಟಿ) ಸಮಾಜವನ್ನು ಸೃಷ್ಟಿಸಿರುತ್ತಿದ್ದೆವು.
13 ಪಂಚವಾರ್ಷಿಕ ಯೋಜನೆಗಳಲ್ಲಿ ಎರಡು ಅಥವಾ ಮೂರು ಯೋಜನೆಗಳನ್ನಷ್ಟೇ ಬಡತನ ನಿರ್ಮೂಲನೆಗಾಗಿ ಮೀಸಲಿಟ್ಟಿದ್ದರೂ, ಭಾರತದ ಪರಿಸ್ಥಿತಿ ಬೇರಯೇ ಆಗಿರುತ್ತಿತ್ತು.
ಸಾರ್ವಜನಿಕ ನೀತಿಗಳೆಂದರೆ, ಸಂವಿಧಾನದ ನಿಬಂಧನೆಗಳ ವಿರುದ್ಧವಿರದ, ಸಾರ್ವಜನಿಕರಿಗೆ ಒಪ್ಪಿಗೆಯಾಗುವ ಸರಕಾರದ ನೀತಿಗಳು ಎಂದು ವ್ಯಾಖ್ಯಾನಿಸಬಹುದು.
ಸಾರ್ವಜನಿಕ ನೀತಿ ಎಂದರೆ, ಕಾನೂನು ಮತ್ತು ಸಾಂಸ್ಥಿಕ ಪದ್ಧತಿಗಳೊಂದಿಗೆ ಅನುಗುಣವಾಗಿರುವಂತೆ, ಎದುರಿಗಿರುವ ಸಮಸ್ಯೆ/ವಿಷಯಗಳನ್ನು ನಿವಾರಿಸಲು ಸರಕಾರದ ಆಡಳಿತದ ಕಾರ್ಯಾಂಗಗಳು ತೆಗೆದುಕೊಳ್ಳುವ ಕ್ರಮಗಳಿಗೆ ಇರಬೇಕಾದ ತತ್ವಾಧಾರಿತ ಮಾರ್ಗದರ್ಶಿ ಎನ್ನಬಹುದು.
ಇನ್ನೂ ಕೆಲವು ವಿದ್ವಾಂಸರು ಸಾರ್ವಜನಿಕ ನೀತಿ ಎಂದರೆ,, a system of courses of actions, regulatory measures, laws and funding priorities, concerning a given topic promulgated by government entity or it’s representatives’ . ಸರಕಾರ ಅಥವಾ ಅದರ ಪ್ರತಿನಿಧಿಗಳಿಂದ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಅನುಸರಿಸುವ ಕ್ರಮಗಳು, ನಿಯಂತ್ರಕ ಕ್ರಮಗಳು ಹಾಗೂ ಬಂಡವಾಳ ಒದಗಿಸುವ ವ್ಯವಸ್ಥೆ. ಸಂವಿಧಾನದಲ್ಲಿ, ಶಾಸನಬದ್ಧ ಕ್ರಮಗಳಲ್ಲಿ ಹಾಗೂ ನ್ಯಾಯಾಂಗದಲ್ಲಿ ಸಾರ್ವಜನಿಕ ನೀತಿಗಳು ಸಾಮಾನ್ಯವಾಗಿ ಸಾಕಾರಗೊಳ್ಳುತ್ತವೆ.
ನಮ್ಮೆದುರಿಗೆ ಈಗ ಇನ್ನೊಂದು ಸಮಸ್ಯೆಯಿದೆ, ಲೋಕಸಭೆಯಲ್ಲಿ ಹಾಗೂ ವಿಧಾನಸಭೆಯಲ್ಲಿಯ ಕಾರ್ಯಕಲಾಪಗಳು ನಾಚಿಕೆ ಹುಟ್ಟಿಸುವಂತಿವೆ. ವಿರೋಧ ಪಕ್ಷಗಳು ನಡೆದುಕೊಳ್ಳುವ ರೀತಿ ಅಸಹ್ಯವಾಗಿದೆ. ತಮ್ಮನ್ನು ಜನರ ಸೇವೆಗಾಗಿ ಆಯ್ಕೆ ಮಾಡಲಾಗಿದೆ ಎನ್ನುವುದು ಅವರುಗಳು ಮರೆತಂತಿದೆ. ಸಭೆಯಲ್ಲಿ ಅವರು ಗೊಂದಲ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲು ಇವರುಗಳು ಅವಕಾಶವೇ ನೀಡುತ್ತಿಲ್ಲ. ಅವರೆದುರಿಗಿರಿಸಿದ ಬಿಲ್‍ಗಳನ್ನು ಯಾವುದೇ ಚರ್ಚೆಯಿಲ್ಲದೇ ಪಾಸ್ ಮಾಡುತ್ತಿದ್ದಾರೆ. ವಿಧೇಯಕವನ್ನು ಅಂಗೀಕರಿಸುವ ಸಮಯದಲ್ಲಿ, ಸದನದಿಂದ ಹೊರನಡೆಯುತ್ತಾರೆ ಹಾಗೂ ಆಗ ಆಡಳಿತ ಪಕ್ಷದ ಸದಸ್ಯರು ವಿಧೇಯಕದ ಪರವಾಗಿ ತಮ್ಮ ಧ್ವನಿಯೆತ್ತುತ್ತಾರೆ ಆಗ ಸದನದ ಸ್ಪೀಕರ್ ವಿಧಾಯಕ ಅಂಗೀಕರಿಸಲಾಗಿದೆ ಎಂದು ಘೋಷಿಸುತ್ತಾರೆ. ಕಳೆದ 10-15 ವರ್ಷದಿಂದ ಈ ಪ್ರಹಸನ ನಡೆಯುತ್ತಲೇ ಇದೆ. ಹಿರಿಯ ಸಭಾಪತಿಗಳಾದ ಸೋಮನಾಥ್ ಚಟರ್ಜಿಗೆ ಕೂಡ ಎಮ್‍ಪಿಗಳ ಮಾಬ್ ಮನಸ್ಥಿತಿಯನ್ನು ಹದ್ದುಬಸ್ತಿನಲ್ಲಿಡಲು ಆಗಲಿಲ್ಲ. ಇಂತಹ ಅವ್ಯವಸ್ಥೆಗಳಲ್ಲಿ ತೊಡಗಿದ್ದಾಗಲೇ, ತಮ್ಮ ಸಂಬಳ ಮತ್ತು ಸವಲತ್ತುಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಏಳು ಸಲ ಏರಿಸಿಕೊಂಡರು. ಅದೂ ಯಾವುದೇ ಚರ್ಚೆ, ವಿರೋಧವಿಲ್ಲದೇ.
1935 ರಲ್ಲಿ ಗಾಂಧೀಜಿಯವರು ಸ್ವದೇಶಿ ಆಂದೋಲನ ಶುರುಮಾಡಿದಾಗ ಭಾರತದಲ್ಲಿ ಬರೀ ಒಂದು ವಿದೇಶಿ ಕಂಪನಿ ಇತ್ತು; ಈಸ್ಟ್ ಇಂಡಿಯಾ ಕಂಪನಿ. ಅವರು ಹಡಗುಗಳಲ್ಲಿ ತುಂಬಿಸಿ ಹತ್ತಿಯನ್ನು ಇಂಗ್ಲೆಂಡಿಗೆ ಒಯ್ದು, ಭಾರತೀಯರಿಗೆ ಮಾರಲು ಹತ್ತಿಯ ಬಟ್ಟೆಯನ್ನು ಮರಳಿ ತರುತ್ತಿದ್ದರು. ಒಂದು ವೇಳೆ ಬ್ರಿಟಿಷರಿಗೆ ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಮಾರಲು ಅವಕಾಶ ನೀಡಿದಲ್ಲಿ, ಅವರು ತಮ್ಮ ಯಂತ್ರಗಳೊಂದಿಗೆ ಇಲ್ಲಿಗೆ ಬಂದು ಕಾರ್ಖಾನೆಗಳನ್ನು ಪ್ರಾರಂಭಿಸುವ ದಿನಗಳು ದೂರವಿಲ್ಲ ಎಂದು ಗಾಂಧೀಜಿ ಭವಿಷ್ಯ ನುಡಿದಿದ್ದರು. ಹಾಗಾಗಿ ಅವರ ವಸ್ತುಗಳಿಗೆ ಇಂದೇ ಬಹಿಷ್ಕಾರ ಹಾಕಬೇಕು ಎಂದರು. ಹೊರದೇಶದಿಂದ ಭಾರತಕ್ಕೆ ಬರುವ ವಸ್ತುಗಳನ್ನು ಸುಟ್ಟುಹಾಕುವ ಅತ್ಯಂತ ಯಶಸ್ವೀ ಚಳವಳಿಯನ್ನು ಗಾಂಧೀಜಿ ಪ್ರಾರಂಭಿಸಿದರು. ಈ ಚಳವಳಿ ಕಾಳ್ಗಿಚ್ಚಿನಂತೆ ಭಾರತದೆಲ್ಲೆಡೆ ಹಬ್ಬಿತು. ಒಂದೇ ಒಂದು ವಿದೇಶಿ ಕಂಪನಿ ಕೂಡ ಭಾರತಕ್ಕೆ ಬಂದು, ಇಲ್ಲಿಯ ಜನರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಗಾಂಧೀಜಿ ಹೇಳಿದ್ದರು.
ಯಾವುದೇ ಅನುಮಾನವಿಲ್ಲದೆ ವೇಗವಾಗಿ ಆರ್ಥಿಕ ಬೆಳವಣಿಗೆ ಆಗುತ್ತಿದೆ ಆದರೆ ಅದರ ಜೊತೆಜೊತೆಗೆ ಬಡವರು ಮತ್ತು ಶ್ರೀಮಂತರ ಅಂತರವೂ ಸಹ ಬೆಳೆಯುತ್ತಲೇ ಇದೆ. ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಇಂತಹ ಅನಾರೋಗ್ಯಕರ ಬೆಳವಣಿಗೆ ಆಗುತ್ತಿರುವ ಈ ಕಾಲಘಟ್ಟದಲ್ಲಿ ವಿಶೇಷವಾಗಿ ಮೋದಿ ಸರ್ಕಾರವು ಕೋಟ್ಯಾಧಿಪತಿಗಳ ಪೋಷಣೆ ಮಾಡುತ್ತಿದ್ದಾರೆ ಇದು ಸಾಮಾನ್ಯ ಜನರ ಗಂಡಾಂತರಕ್ಕೆ ಕಾರಣವಾಗಬಹುದೇ?
ಹಣಬಲ: ನಿಯಂತ್ರಿಸುವುದು ಹೇಗೆ?
ಹಣಬಲ- ಒಂದು ಜಾಗತಿಕ ವಿದ್ಯಮಾನ. ಹಣವು ಒಂದು ನಿರ್ಜೀವ ವಸ್ತುವಾಗಿದೆ. ಅದಕ್ಕೆ ನಾವು ಜೀವ ಮತ್ತು ಚಲನೆಯನ್ನು ನೀಡುತ್ತೇವೆ. ಹಣವನ್ನು ಜನರು ಮತ್ತು ಸರ್ಕಾರಗಳೂ ನಿಯಂತ್ರಿಸುವಂತಿರಬೇಕಿತ್ತು. ಆದರೆ ಇಂದು ಹಣ ಮತ್ತು ಹಣವಂತರು ಜನರನ್ನು ಹಾಗೂ ಸಮುದಾಯಗಳನ್ನು ನಿಯಂತ್ರಿಸುತ್ತಿದೆ. ಅಷ್ಟೇ ಅಲ್ಲದೆ ಮಂತ್ರಿಗಳನ್ನು, ಸರ್ಕಾರದ ಬೇರೆ ಬೇರೆ ಪ್ರತಿನಿಧಿಗಳನ್ನು ನಿಭಾಯಿಸುತ್ತಿದೆ. ನಾಯಿ ಬಾಲವನ್ನು ಅಲುಗಾಡಿಸುವ ಬದಲಿಗೆ ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿರುವಂತಿದೆ.
ಹಣವು ವ್ಯಕ್ತಿಗಳನ್ನು ಮತ್ತು ಸರ್ಕಾರವನ್ನು ಕೊಂಡುಕೊಳ್ಳಬಹುದಾಗಿದೆ. ನಾವುಗಳು ಹಣ ಮತ್ತು ಹಣವಂತ ವರ್ಗಕ್ಕೆ ಗುಲಾಮರಾಗಿದ್ದೇವೆ. ಇದರಿಂದ ಹೇಗೆ ಹೊರಬರಬೇಕು ಅನ್ನುವುದೇ ಇಡೀ ಜಗತ್ತಿಗೆ ದೊಡ್ಡ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.
ನಾನು ಕಪ್ಪು ಹಣದ ಉತ್ಪತ್ತಿಯ ಬಗ್ಗೆ ಒಂದು ಉದಾಹರಣೆ ಕೊಡುತ್ತೇನೆ. ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ತುಂಬಿಹೋಗಿವೆ ಎಂಬುದು ನಿಮಗೆ ಗೊತ್ತಿದೆ; ಕೆಲವು ಗುಂಡಿಗಳು ಚಿಕ್ಕವು, ಕೆಲವು ಆಳವಾದವು, ಭಯಂಕರವಾದವು. ಮಳೆ ಬಂದಾಗ ಈ ಗುಂಡಿಗಳೆಲ್ಲ ನೀರಿನಿಂದ ತುಂಬಿಹೋಗುತ್ತವೆ. ಕೆಲವು ದಿನಗಳ ನಂತರ ಈ ನೀರು ಕಲುಷಿತಗೊಳ್ಳುತ್ತದೆ, ಅದರಲ್ಲಿ ರೋಗಾಣುಗಳು ಸೇರಿಕೊಳ್ಳುತ್ತವೆ ಮತ್ತು ಅದರಿಂದ ಇಡೀ ಬೆಂಗಳೂರಿಗೆ ಕಾಯಿಲೆ ಹರಡುತ್ತದೆ. ಕಪ್ಪು ಹಣದ ವಿಚಾರವೂ ಹೀಗೆಯೇ. ಯಾವಾಗ ಹಣವು ಹರಿವಿನಲ್ಲಿಲ್ಲದೆ ನಿಂತಲ್ಲೇ ನಿಲ್ಲುತ್ತದೋ ಆಗ ಅದು ಕಪ್ಪು ಹಣವಾಗುತ್ತದೆ. ಹಣ ಇರುವುದೇ ಹರಿಯುವುದಕ್ಕಾಗಿ. ಅದು ಕೈಯಿಂದ ಕೈಗೆ ನಿರಂತರವಾಗಿ ಹರಿದಾಡುತ್ತಲೇ ಇರಬೇಕು. ಅದಕ್ಕಾಗಿಯೇ ಹಣವನ್ನು ಕರೆನ್ಸಿ ಎಂದು ಕರೆದಿರುವುದು. ಹಣವನ್ನು ಈ ರೀತಿ ಕರೆಂಟಿನಂತೆ ಹರಿದಾಡುವ ಹಾಗೆ ಮಾಡುವುದು ಹೇಗೆ? ಸಾರ್ವಜನಿಕ ನೀತಿ ನಿರೂಪಣೆಯ ಕೇಂದ್ರಗಳು ಈ ಸಂಕೀರ್ಣ ವಿಚಾರದ ಬಗ್ಗೆ ಗಂಭೀರವಾದ ಚಿಂತನೆ ನಡೆಸಿ, ಸೂಕ್ತ ಪರಿಹಾರೋಪಾಯವನ್ನು ಕಂಡುಕೊಳ್ಳಬೇಕು. ಇದು ಸಾಧ್ಯವಾದಾಗಲೇ ಹಣವನ್ನು ನಿಯಂತ್ರಣಕ್ಕೆ ತರಬಹುದು ಮತ್ತು ನಾವು ಅದನ್ನು ಬೇಕಾದಂತೆ ಆಡಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...