Homeಮುಖಪುಟಸಿದ್ದಾರ್ಥ್ ವರದರಾಜನ್ - `ದಾಳಿಗಿದ್ದ ಟಾರ್ಗೆಟ್ ಮೂರು; ಗುರಿಗೆ ಸಿಕ್ಕಿದ್ದು ಒಂದು!'

ಸಿದ್ದಾರ್ಥ್ ವರದರಾಜನ್ – `ದಾಳಿಗಿದ್ದ ಟಾರ್ಗೆಟ್ ಮೂರು; ಗುರಿಗೆ ಸಿಕ್ಕಿದ್ದು ಒಂದು!’

- Advertisement -
- Advertisement -

ಸಿದ್ದಾರ್ಥ್ ವರದರಾಜನ್ (Thewire.in  ಸಂಸ್ಥಾಪಕ) |

ಭಾರತದ ವಿದೇಶಾಂಗ ಕಾರ್ಯದರ್ಶಿ, ಇದು ಮಿಲಿಟರಿ ದಾಳಿಯಲ್ಲ, ಸಂಭಾವ್ಯ ದಾಳಿ ತಡೆಗಟ್ಟಲು ನಡೆಸಿದ ದಾಳಿ’ ಎಂದು ಒತ್ತಿ ಹೇಳಿದಾಗ ಅವರ ಮನದಲ್ಲಿ ಅಂತರಾಷ್ಟ್ರೀಯ ಕಾನೂನು ಇತ್ತೇನೋ? ಆದರೆ, ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಇತ್ತೆನ್ನಲಾದ ಉಗ್ರರ ತರಬೇತಿ ಶಿಬಿರದ ಮೇಲಿನ ವಾಯುದಾಳಿಯನ್ನು ಪ್ರಾಮಾಣಿಕವಾಗಿ ಹೀಗೆ ವಿಶ್ಲೇಷಿಸಬಹುದು: ಮೂರು ವಿಭಿನ್ನ ’ಪ್ರೇಕ್ಷಕರಿಗೆ’ ಸಂದೇಶವೊಂದನ್ನು ನೀಡಲು ಉದ್ದೇಶಿಸಿದ ಪ್ರತೀಕಾರದ ಕ್ರಮ…

  • ಅದರ ಮಿಲಿಟರಿ ಉದ್ದೇಶ: ಪಾಕಿಸ್ತಾನ ನಿಮಗೆ ಒದಗಿಸಿರುವ ಸುರಕ್ಷಿತ ತಾಣಗಳು ಅಷ್ಟು ಸುರಕ್ಷಿತವಲ್ಲ ಎಂದು ಜೈಶ್ ಮತ್ತು ಪಾಕಿಸ್ತಾನದ ಇತರ ಭಯೋತ್ಪಾದನಾ ಗುಂಪುಗಳಿಗೆ ಸಂದೇಶ ನೀಡುವುದು.
  • ಅದರ ರಾಜತಾಂತ್ರಿಕ ಉದ್ದೇಶ: ಭಯೋತ್ಪಾದನೆ ಬೆಂಬಲಿಸುವ ಪಾಕಿಸ್ತಾನಕ್ಕೆ ನೀವು ಎಂದಿನಂತೆ ಸಹಜವಾಗಿ ನೀಡುತ್ತಿರುವ ಬೆಂಬಲ ನೀಡಲಾಗದು ಎಂದು ಬಹುಪಾಲು ರಾಷ್ಟ್ರಗಳಿಗೆ ಸಂದೇಶ ನೀಡುವುದು.
  • ರಾಜಕೀಯ ಉದ್ದೇಶ: ಸಾರ್ವತ್ರಿಕ ಚುನಾವಣೆಯನ್ನು ತಲೆಯಲ್ಲಿ ಇಟ್ಟಕೊಂಡು, ’ದೇಶವನ್ನು ಕಾಪಾಡುವ ರಾಜಕೀಯ ಇಚ್ಛಾಶಕ್ತಿ ಇರುವ ನಾಯಕ ನರೇಂದ್ರ ಮೋದಿ’ ಎಂಬ ಸಂದೇಶವನ್ನು ದೇಶದ ಪ್ರೇಕ್ಷಕರಿಗೆ (ಪ್ರಜೆಗಳಿಗೆ) ನೀಡುವುದು.

ಇವುಗಳಲ್ಲಿ, ಕೇವಲ ರಾಜಕೀಯ ಉದ್ದೇಶ ಈಡೇರಿದೆ ಎಂದು ಮೋದಿ ಆತ್ಮವಿಶ್ವಾಸದಿಂದ ಹೇಳಬಹುದು.

ಭಾರತೀಯ ವಾಯುಸೇನೆಗೆ ಒಂದು ಕಠಿಣ ಮತ್ತು ಅಪಾಯಕಾರಿ ಕಾರ್ಯವನ್ನು ನೀಡಿದ ಸರ್ಕಾರ, ಈಗ ಆಪರೇಷನ್ ಸಕ್ಸಸ್ ಎಂದು ಘೋಷಿಸಿದೆ. ಆದರೆ ಪರಿಶೀಲನೆಗೆ ಅರ್ಹವಾದ ಯಾವುದೇ ಮಾಹಿತಿ ನೀಡದೇ ಇದನ್ನು ಮಾಡಲಾಗುತ್ತಿದೆ. ಭಾರತೀಯ ಮಾಧ್ಯಮಗಳಿಗೆ ತಲುಪಿದ ಅತಿರಂಜಿತ ಮಾಹಿತಿಗಳಿಂದಾಗಿ, ಪಾಕಿಸ್ತಾನ ಸುಮ್ಮನೇ ಕೂಡುವುದಂತೂ ಕಷ್ಟ.

2016ರ ಸರ್ಜಿಕಲ್ ದಾಳಿ ಮತ್ತು ಈಗಿನ ವಾಯುದಾಳಿ-ಈ ಎರಡರಿಂದಲೂ ಯಾವುದೇ ಹಾನಿಯಾಗಿಲ್ಲ ಎಂದು ಪಾಕಿಸ್ತಾನಿ ಸೇನೆ ಹೇಳಿದೆ. ಆದರೆ ಈ ಸಲ ರಾಜಕೀಯ ಮತ್ತು ಮಿಲಿಟರಿ ಎರಡೂ ವ್ಯವಸ್ಥೆಗಳು ಇದಕ್ಕೆ ಸೇನಾತ್ಮಕ ಪ್ರತಿಕ್ರಿಯೆ ಖಂಡಿತ ಎಂದು ಘೋಷಿಸಿವೆ. ಈ ಬೆದರಿಕೆಯನ್ನು ಹಗುರವಾಗಿ ಪರಿಗಣಿಸಲು ಯಾವ ಕಾರಣವೂ ಇಲ್ಲ.

ನಮ್ಮ ವಾಯುಸೇನೆಯ ಶಕ್ತಿ-ಸಾಮರ್ಥ್ಯಗಳ ಬಗ್ಗೆ ಎಂದಿಗೂ ಸಕಾರಾತ್ಮಕ ನಿಲುವೇ ಇದೆ. ಆದರೆ 1971ರ ನಂತರ ಮೊದಲ ಬಾರಿಗೆ ವಾಯುಸೇನೆಯನ್ನು ಗಡಿಯಾಚೆ ನುಗ್ಗಿಸುವ ಕೆಲಸ ಮಾಡಿದ್ದಾರೆ ಮೋದಿ.

ಹಿಂದಿನ ಸರ್ಕಾರಗಳು ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಮತ್ತು ಪಾಕಿಸ್ತಾನದೊಳಗೆ ಇರುವ ಉಗ್ರರ ನೆಲೆಗಳ ಮೇಲೆ ವಾಯುದಾಳಿಯ ಪ್ರಯೋಗದಿಂದ ದೂರ ಉಳಿದಿದ್ದವು. ಇದಕ್ಕೆ ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರ ಎಂಬ ಭಯವಾಗಲೀ  ಅಥವಾ ರಾಜಕೀಯ ಇಚ್ಛಾಶಕ್ತಿಯ ಕೊರತೆಯಾಗಲೀ ಕಾರಣವಲ್ಲ. ಆದರೆ, ಗಡಿಯಾಚೆಯಿಂದ ಬರುವ ಭಯೋತ್ಪಾದನಾ ಬೆದರಿಕೆಯನ್ನು ಇಂತಹ ಕ್ರಮಗಳಿಂದ ತಟಸ್ಥಗೊಳಿಸಿವುದು ಅಸಾಧ್ಯ ಎಂಬ ಅರಿವು ಆ ಸರ್ಕಾರಗಳಿಗಿತ್ತು.

ಇದನ್ನು ಅರ್ಥ ಮಾಡಿಕೊಳ್ಳಲು, 2016 ಸೆಪ್ಟೆಂಬರ್‌ನ ಸರ್ಜಿಕಲ್ ದಾಳಿಯ ನಂತರದ ಬೆಳವಣಿಗೆಗಳನ್ನು ನೋಡಬಹುದು. ಪಾಕಿಸ್ತಾನ ಮೂಲದ ಉಗ್ರರ ಗುಂಪುಗಳಿಂದ ಭವಿಷ್ಯದಲ್ಲಿ ದಾಳಿಗಳನ್ನು ತಡೆಯಬಹುದೆಂಬ ನಿರೀಕ್ಷೆಯನ್ನು ಆ ಸರ್ಜಿಕಲ್ ದಾಳಿ ಹುಸಿಗೊಳಿಸಿತು. ಈ ವಿಷಯದಲ್ಲಿ ಅದು ಪುಟ್ಟಾಪೂರಾ ವಿಫಲವಾಯಿತು. ಆ ಸರ್ಜಿಕಲ್ ದಾಳಿಯ ನಂತರ ಉಗ್ರರ ದಾಳಿಗಳು ಹೆಚ್ಚಾದವು ಮತ್ತು 1989ರಲ್ಲಿ ಕಣಿವೆಯಲ್ಲಿ ಭಯೋತ್ಪಾದನೆ ಭುಗಿಲೆದ್ದ ನಂತರ ಅತಿ ಭಯಾನಕ ದಾಳಿ ಎನಿಸಿದ ಪುಲ್ವಾಮಾ ದಾಳಿಯೂ ಸಂಭವಿಸಿತು.

ಪಾಕಿಸ್ತಾನದಲ್ಲಿರುವ ಉಗ್ರರ ನೆಲೆ ಮೇಲೆ ದಾಳಿ ಮಾಡಲು ಯೋಚಿಸಿದ ಪ್ರಧಾನಿ ಮೋದಿ ಒಬ್ಬರೇ ಅಲ್ಲ. 2001ರಲ್ಲಿ ಸಂಸತ್ ಮೇಲೆ ದಾಳಿ ಆದಾಗ ವಾಜಪೇಯಿ ಮತ್ತು 2008ರಲ್ಲಿ ಮುಂಬೈ ಮೇಲೆ ದಾಳಿ ನಡೆದಾಗ ಮನಮೋಹನಸಿಂಗ್ ಕೂಡ ಯೋಚಿಸಿದ್ದರು. ಆದರೆ ಸುದೀರ್ಘ ಸಮಾಲೋಚನೆ ನಂತರ ಈ ಮಾರ್ಗದಿಂದ ಭಯೋತ್ಪಾದನೆ ತಡೆಯುವುದು ಅಸಾಧ್ಯ ಎಂಬ ಸತ್ಯವನ್ನು ಅರಿತಿದ್ದರು. ಮಾತುಕತೆ ಮತ್ತು ಭಯೋತ್ಪಾದನೆ ಎರಡೂ ಒಟ್ಟಿಗೆ ಸಾಧ್ಯವಿಲ್ಲ ಎಂಬುದು ಇವತ್ತಿನ ಮಂತ್ರವಾಗಿರಬಹುದು. ಆದರೆ ಭಯೋತ್ಪಾದನೆ ನಿಗ್ರಹಿಸುತ್ತಲೇ ಮಾತುಕತೆಯನ್ನು ಜಾರಿಯಲ್ಲಿಡುವ ಮೂಲಕ ವಾಜಪೇಯಿ ಮತ್ತು ಮನಮೋಹನಸಿಂಗ್ ಕಾಶ್ಮೀರವನ್ನು ಸಾಧ್ಯವಾದಷ್ಟು ಶಾಂತವಾಗಿಡಲು ಸಫಲರಾಗಿದ್ದರು.

ಮೋದಿ ಈಗ ಮಿಲಿಟರಿ ಕಾರ್ಡ್ ಆಟದ ಮೂಲಕ ಗ್ಯಾಂಬ್ಲಿಂಗ್ ಮಾಡಿದ್ದಾರೆ. ಕ್ಷುದ್ರ ಪಾಕಿಸ್ತಾನ ನಡೆಸುವ ಪ್ರತೀಕಾರವೂ ಅವರಿಗೆ ಶಕ್ತಿ ತುಂಬಬಹುದು. ಆದರೆ ಒಂದು ಕಾಲ ಊಹಿಸಿದ್ದಕ್ಕಿಂತ ಬೇಗನೆ ಬರಲಿದೆ- ಭಯೋತ್ಪಾದನೆಯ ಸಮಸ್ಯೆ ಮುಗಿದಿಲ್ಲ, ಬದಲಾಗಿ ಇನ್ನಷ್ಟು ಸಂಕೀರ್ಣಗೊಂಡಿದೆ ಮತ್ತು ನಿಯಂಯ್ರಣ ಮೀರುತ್ತಿದೆ ಎಂಬುದನ್ನು ಈ ದೇಶದ ಸಾಮಾನ್ಯ ನಾಗರಿಕರು ಅರಿಯುವ ಕಾಲ.

(ಭಾವಾನುವಾದ: ಮಲ್ಲಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...