Homeಕರ್ನಾಟಕಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮವೇನು? ಸಾಧ್ಯತೆಗಳೇನು?

ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮವೇನು? ಸಾಧ್ಯತೆಗಳೇನು?

- Advertisement -
- Advertisement -

ಇದುವರೆಗೆ ಸ್ಪಷ್ಟವಾಗಿರುವಂತೆ ಶಾಸಕರ ರಾಜೀನಾಮೆ ವಿಚಾರದಲ್ಲಿ ಸುಪ್ರೀಂಕೋರ್ಟು ಈ ರೀತಿ ಹೇಳಿದೆ.

1. ರಾಜೀನಾಮೆ ಅಂಗೀಕಾರದ ವಿಚಾರದಲ್ಲಿ ಸ್ಪೀಕರ್ ತೀರ್ಮಾನವೇ ಅಂತಿಮ.

2. ಅವರಿಗೆ ಸಮಯ ನಿಗದಿ ಮಾಡುವುದಿಲ್ಲ.

3. ಸದನದಲ್ಲಿ ವಿಶ್ವಾಸಮತ ಯಾಚನೆ ನಾಳೆ ಮುಂದುವರೆಯಬಹುದು.

4. ರಾಜೀನಾಮೆ ನೀಡಿರುವ ಶಾಸಕರು ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸಲೇಬೇಕೆಂದು ಒತ್ತಾಯಿಸುವಂತಿಲ್ಲ.

ಇದರ ಅರ್ಥ ಏನು?

1. ರಾಜೀನಾಮೆ ಅಂಗೀಕಾರ ಮಾಡುತ್ತೇನೆ/ಮಾಡುವುದಿಲ್ಲ ಎಂದು ಸ್ಪೀಕರ್ ಹೇಳಿದ ನಂತರವೂ ಸುಪ್ರೀಂಕೋಟು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದೇನೂ ಇದರ ಅರ್ಥವಲ್ಲ. ಆದರೆ, ಇಂತಿಷ್ಟೇ ದಿನಗಳಲ್ಲಿ ಅಂಗೀಕರಿಸಿ ಎಂದೋ, ಈಗಲೇ ಅಂಗೀಕರಿಸಿ ಎಂದೋ ಸುಪ್ರೀಂಕೋರ್ಟು ಹೇಳಿಲ್ಲ. ತಾನು ಹೇಳಬಾರದು ಎಂಬ ಅರ್ಥವನ್ನು ಅದು ಹೊರಡಿಸಿದೆ.

2. ವಿಶ್ವಾಸಮತ ಯಾಚನೆ ನಾಳೆಯೇ ನಡೆಯಬೇಕೆಂದೂ ಸುಪ್ರೀಂಕೋರ್ಟು ಹೇಳಿಲ್ಲ.

3. ಸದರಿ ಶಾಸಕರು ಭಾಗವಹಿಸಲೇಬೇಕೆಂದು ಒತ್ತಾಯಿಸುವಂತಿಲ್ಲ ಎಂದ ಮೇಲೆ ವಿಪ್ ಅನ್ವಯವಾಗುವುದಿಲ್ಲ ಎಂದೇ ಆಗುತ್ತದೆ. ಇದು ವಿಪ್ ವಿಚಾರದಲ್ಲಿ ಹೊಸದೊಂದು ನಿಯಮಕ್ಕೆ ಅಥವಾ ನಿಯಮ ತಿದ್ದುಪಡಿಗೆ ದಾರಿ ಮಾಡಿಕೊಟ್ಟಿದೆ. ಇದು ಆಪರೇಷನ್ ಕಮಲ ಎಂಬ ಪಿಡುಗಿಗೆ ಮುಕ್ತ ಅವಕಾಶ ಕೊಡಲಿದೆ.

4. ಹಾಗಾಗಿ ನಾಳೆಯ ವಿಪ್ ಉಲ್ಲಂಘನೆಯ ಆಧಾರದ ಮೇಲೆ ಅನರ್ಹತೆ ವಿಷಯ ನಿರ್ಧಾರವಾಗುವುದಿಲ್ಲ.

ಇದರ ಪರಿಣಾಮವೇನು? ಸಾಮಾನ್ಯ ಸಂದರ್ಭದಲ್ಲಿ ಏನು ಸಾಧ್ಯತೆಗಳಿವೆ?

1. ನಾಳೆ ವಿಶ್ವಾಸಮತ ಯಾಚನೆ ಆರಂಭವಾಗುತ್ತದೆ, ಆದರೆ ಆ ಪ್ರಕ್ರಿಯೆ ನಾಳೆಯೇ ಮುಗಿದುಬಿಡುವುದಿಲ್ಲ.

2. ಈ ಮಧ್ಯೆ ಶಾಸಕರ ಅನರ್ಹತೆ ವಿಚಾರವನ್ನು ಸ್ಪೀಕರ್ ಕೈಗೆತ್ತಿಕೊಂಡು ಅವರನ್ನು ಅನರ್ಹಗೊಳಿಸಬಹುದು. ಇವರೆಲ್ಲರೂ ಗುಂಪುಗೂಡಿಯೇ ರಾಜೀನಾಮೆ ನೀಡಿ, ಗುಂಪಾಗಿಯೇ ಹೋಟೆಲ್‍ನಲ್ಲಿರುವುದು, ಬಿಜೆಪಿಯ ಜೊತೆ ಸಂಪರ್ಕದಲ್ಲಿರುವುದು, ಸರ್ಕಾರದ ಬಹುಮತ ಕುಸಿಯುವಂತೆ ಮಾಡಿ ಬಿಜೆಪಿ ಸರ್ಕಾರ ರಚಿಸಲು ಅನುವು ಮಾಡಿಕೊಡಲೇ ರಾಜೀನಾಮೆ ಕೊಟ್ಟಿರುವುದು ಸ್ಪಷ್ಟವಿರುವುದರಿಂದ ಅದೇ ಅನರ್ಹತೆಗೆ ದಾರಿ ಮಾಡಬಹುದು.

3. ಅದೇನೇ ಇದ್ದರೂ ಇಂದಲ್ಲಾ ನಾಳೆ ಸರ್ಕಾರದ ಬಹುಮತ ಕುಸಿಯುತ್ತದೆ. ಶಾಸಕರು ಅನರ್ಹರಾಗುತ್ತಾರೆ, ಇಲ್ಲವೇ ರಾಜೀನಾಮೆ ಅಂಗೀಕಾರವಾಗುತ್ತದೆ. ಇವೆಲ್ಲದರ ಲಾಭ ಬಿಜೆಪಿಗೆ ಆಗುತ್ತದೆ. ಏಕೆಂದರೆ ಅವರು ಸರ್ಕಾರ ರಚಿಸುತ್ತಾರೆ. ರಾಜೀನಾಮೆ ಕೊಟ್ಟಿರುವ ಎಲ್ಲಾ ಶಾಸಕರಿಗೂ ಪಕ್ಷದ ಟಿಕೆಟ್ ನೀಡಲೇಬೇಕೆಂದೂ ಇಲ್ಲ. ಉಪಚುನಾವಣೆಯಲ್ಲಿ 6 ಜನ ಶಾಸಕರು ಗೆದ್ದು ಬಂದರೂ ಪೂರ್ಣ ವಿಧಾನಸಭೆಯಲ್ಲೂ ಸರಳ ಬಹುಮತ ದೊರೆಯುತ್ತದೆ.

4. ಅನರ್ಹಗೊಳಿಸುವುದರಿಂದ ಶಾಸಕರ ರಾಜಕೀಯ ಬದುಕಿನಲ್ಲಿ ಕಪ್ಪು ಚುಕ್ಕೆ. ಆದರೆ, ಹಾಗೆಂದು ಅವರಾಗಲೀ ಮಾಧ್ಯಮಗಳಾಗಲೀ ಭಾವಿಸುವುದಿಲ್ಲವಾದ್ದರಿಂದ ಜನರೂ ಭಾವಿಸದಂತೆ ಮಾಡಲಾಗುತ್ತದೆ. ಭ್ರಷ್ಟಾಚಾರ ಇತ್ಯಾದಿಗಳ ಕಾರಣದಿಂದ ಅನರ್ಹಗೊಳ್ಳುವವರು 6 ವರ್ಷಗಳ ಕಾಲ ಸ್ಪರ್ಧಿಸದಂತೆ ನಿಯಮವಿದೆ. ಆದರೆ, ತಮಿಳುನಾಡಿನಲ್ಲಿ ಪಕ್ಷಾಂತರದ ಕಾರಣಕ್ಕಾಗಿ ಅನರ್ಹಗೊಂಡವರು ಮತ್ತೆ ಸ್ಪರ್ಧಿಸಬಹುದು ಎಂದು ಚುನಾವಣಾ ಆಯೋಗ ಹೇಳಿತ್ತು!

ಆಶ್ಚರ್ಯಕರ ಸಾಧ್ಯತೆಗಳು

1. ಕೆಲವು ಶಾಸಕರು ತಮ್ಮ ಮಾತೃಪಕ್ಷಗಳಿಗೆ ಮರಳಿ ಬರುವುದರ ಮೂಲಕ ಇನ್ನಷ್ಟು ಕಾಲ ಸಮ್ಮಿಶ್ರ ಸರ್ಕಾರ ಉಳಿದುಕೊಳ್ಳಬಹುದು.

2. ವಿಶ್ವಾಸಮತ ಯಾಚನೆಯನ್ನೇ ಅನಿರ್ದಿಷ್ಟಾವಧಿಗೆ ಮುಂದೂಡುವುದು. ಇದು ಬಿಜೆಪಿ ಮತ್ತು ಸಮ್ಮಿಶ್ರ ಪಕ್ಷಗಳ ನಡುವೆ ಮಾತ್ರವಲ್ಲದೇ, ರಾಜ್ಯಪಾಲರು ವರ್ಸಸ್ ಸ್ಪೀಕರ್ ಸಂಘರ್ಷಕ್ಕೂ ದಾರಿ ಮಾಡಿಕೊಡಬಹುದು, ಆಗ ಸುಪ್ರೀಂಕೋರ್ಟ್ ಸಹಾ ಮಧ್ಯಪ್ರವೇಶಿಸಬಹುದು.

3. ಈಗಲೇ ಕುಮಾರಸ್ವಾಮಿಯವರು ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರಕ್ಕೆ ಅವಕಾಶ ಮಾಡಿಕೊಡುವುದು.

ಅದೇನೇ ಇದ್ದರೂ, ಅನೈತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುವ ಮೂಲಕ (ಆಪರೇಷನ್ ಕಮಲ) ಬೇರೆ ಪಕ್ಷವನ್ನು ಸೇರುವುದಕ್ಕೆ ಸುಪ್ರೀಂಕೋರ್ಟಿನ ತೀರ್ಪಿನಿಂದ ಅವಕಾಶ ಸಿಕ್ಕಿದಂತಾಗಿದೆ. ಇದನ್ನು ಕೌಂಟರ್ ಮಾಡುವ ಬೇರೇನಾದರೂ ಅಸ್ತ್ರ ಸ್ಪೀಕರ್ ಬಳಿ ಇದೆಯೇ ನೋಡಬೇಕು. ಎಲ್ಲಕ್ಕಿಂತ ದುರಂತದ ವಿಚಾರವೆಂದರೆ ಮಾಧ್ಯಮಗಳು ಅನೈತಿಕ ರಾಜಕಾರಣದ ಪರವಾಗಿ ನಿಂತಿರುವುದು ಮತ್ತು ಜನಸಾಮಾನ್ಯರು ಮೂಕವಾಗಿರುವುದು. ಇದರಲ್ಲಿ ಏನಾದರೂ ಬದಲಾವಣೆಗಳು ಬರುತ್ತದಾ ಎಂಬುದನ್ನೂ ಕಾದು ನೋಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...