Homeಮುಖಪುಟ"ಸೈಂಟಿಫಿಕ್ ಪೆಪ್ಪರಮಿಂಟ್" ಅಂದ್ರೆ ಏನು, ಹೇಗಿರುತ್ತೆ ಗೊತ್ತಾ?

“ಸೈಂಟಿಫಿಕ್ ಪೆಪ್ಪರಮಿಂಟ್” ಅಂದ್ರೆ ಏನು, ಹೇಗಿರುತ್ತೆ ಗೊತ್ತಾ?

- Advertisement -
- Advertisement -

ಹೊಸ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಕೇಂದ್ರದ ಸಾಂಸ್ಕೃತಿಕ ವಕ್ತಾರರನ್ನು ಸಂದರ್ಶಿಸಲಾಯಿತು. ಈ ದೇಶದ ಮುಂದಿನ ಐವತ್ತು ವರ್ಷಗಳ ಶಿಕ್ಷಣ, ಸಾಂಸ್ಕೃತಿಕ ನಡೆ ಕುರಿತ ಕಾಣ್ಕೆಯನ್ನು ವಕ್ತಾರರು ಹಂಚಿಕೊಂಡರು.

ಅದರ ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.

ನಾನು: ಹೊಸ ಶಿಕ್ಷಣ ನೀತಿಯ ಒತ್ತು ಏನು?

ಸಾಂಸ್ಕೃತಿಕ ವಕ್ತಾರ: ನೋಡಿ ಕಳೆದ ಎಪ್ಪತ್ತು ವರ್ಷಗಳಲ್ಲಿ ನಮ್ಮ ಸಂಸ್ಕೃತಿಯನ್ನು ನಾಶಮಾಡುವ ಕೆಲಸವನ್ನು ನೆಹರೂ ಮತ್ತು ಎಡಚರು ಮಾಡಿದ್ದಾರೆ . ನಾವು ಅದನ್ನು ತಿದ್ದಿ ಭಾರತದ ಭವ್ಯ ಸಂಸ್ಕೃತಿಯನ್ನು ಸ್ಥಾಪಿಸಬೇಕಾಗಿದೆ. ಭಾರತ ವಿಶ್ವಗುರುವಾಗಲು ಇದು ಬುನಾದಿ.

ನಾನು: ಇದನ್ನು ಹೇಗೆ ಸಾಧಿಸಲಾಗುತ್ತದೆ?

ಸಾಂವ: ಈಗ ನೋಡಿ ಮೊನ್ನೆ ಗ್ರಹಣ ಆಯಿತು. ಎಡಚರು ಇದನ್ನು ಖಗೋಳ ಶಾಸ್ತ್ರೀಯ ಘಟನೆ ಅನ್ನುತ್ತಾರೆ. ಆದರೆ ನಮ್ಮ ಹಳ್ಳಿಹಳ್ಳಿಗಳಲ್ಲೂ ಇದನ್ನು ಸಾವಿರಾರು ವರ್ಷಗಳಿಂದ ಗಮನಿಸಿದ್ದಾರೆ. ಇದರ ಪರಿಣಾಮಗಳನ್ನು ನಿವಾರಿಸಲು ಪರಿಹಾರ ಕ್ರಮ ಮಾಡುತ್ತಾರೆ. ಹಾಗಿದ್ದರೆ ಅವರು ಅಜ್ಞಾನಿಗಳೇ? ಉದಾ: ಗ್ರಹಣ ಕಾಲದಲ್ಲಿ ವಿಕಿರಣ ಪರಿಣಾಮ ಆಗುತ್ತೆ. ಅದಕ್ಕೇ ಮಕ್ಕಳನ್ನು ತಿಪ್ಪೆಯಲ್ಲಿ ಹುಗಿದಿಡುವ ಸಂಪ್ರದಾಯ ಇದೆ. ಯಾಕೆ ಹೇಳಿ? ಗೋವಿನ ಸೆಗಣಿಗೆ ವಿಕಿರಣವನ್ನು ತಡೆಯುವ ಶಕ್ತಿ ಇದೆ.

ನಾನು: ಅಂದರೆ?

ಸಾಂ ವ: ಅಂದರೆ ನಾವು ಈ ಬಗ್ಗೆ ವಿಶೇಷ ಸಂಶೋಧನೆಗೆ ಅನುದಾನ ನೀಡುತ್ತೇವೆ. ಮಾತ್ರವಲ್ಲ ಮುಂದಿನ ವರ್ಷಗಳಲ್ಲಿ ಗ್ರಹಣ ಕಾಲದಲ್ಲಿ ಅಂಗನವಾಡಿ ಮತ್ತು ಶಾಲಾಮಕ್ಕಳನ್ನು ಶಾಲಾ ಆವರಣದಲ್ಲೇ ತಿಪ್ಪೆಯಲ್ಲಿ ಹೂತಿಡುವ ಬೃಹತ್ ರಾಷ್ಟ್ರೀಯ ಕಾರ್ಯಕ್ರಮವನ್ನು ಚಾಲೂ ಮಾಡಲಾಗುವುದು. ವಿದೇಶಗಳಲ್ಲೂ ಇದರ ವೈಜ್ಞಾನಿಕ ಮಹತ್ವವನ್ನು ಸಾರಲೂ ವಿದೇಶದಲ್ಲಿರುವ ಭಾರತೀಯ ಮಕ್ಕಳನ್ನು ಬಳಸಿ ಅಲ್ಲಿ ಪ್ರಾತ್ಯಕ್ಷಿಕೆ ಮಾಡಿ ವಿದೇಶಗಳಲ್ಲೂ ನಮ್ಮ ಆಚರಣೆಯ ಮಹತ್ವವನ್ನು ಪ್ರಚುರಪಡಿಸಲಾಗುವುದು.

ನಾನು : ಮತ್ತೆ ಈ ದರ್ಭೆಗೆ ವಿಶೇಷ ಮಹತ್ವ ಇದೆ ಎಂದು ಹೇಳ್ತಿದ್ರು..

ಸಾಂವ: ದರ್ಭೆ? ಅದು ಜಗತ್ತಿನಲ್ಲೇ ವಿಶೇಷ. ಅದರ ಒಂದು ತುಂಡು ಹಾಕಿದರೂ ವಿಕಿರಣ ತಾಗೋದಿಲ್ಲ. ಅಷ್ಟೇಕೆ, ನಾವೀಗ ದರ್ಭೇಯನ್ನೇ ಉಪಯೋಗಿಸಿ ಬೆನ್ನಟ್ಟುವ ಕ್ಷಿಪಣಿ ತಯಾರು ಮಾಡುವ ತಂತ್ರಜ್ಞಾನದ ಸಂಶೋಧನೆ ಆರಂಭಿಸಿದ್ದೇವೆ

ನಾನು: ಅದು ಹೇಗೆ?

ಸಾಂವ: ಅಯ್ಯೋ, ರಾಮಾಯಣದಲ್ಲಿ ಶ್ರೀರಾಮ ದೇವರು ದರ್ಭೆಗೆ ಮಂತ್ರ ಆವಾಹನೆ ಮಾಡಿ ಕಾಕಾಸುರನನ್ನು ಬೆನ್ನಟ್ಟಲಿಲ್ಲವೇ? ಹಾಗೇ ಶತ್ರು ಕ್ಷಿಪಣಿ/ ವಿಮಾನದ ಶಾಖವನ್ನೇ ಬೆನ್ನು ಹತ್ತಿ ಅದನ್ನು ನಾಶ ಮಾಡೋದು. ದರ್ಭೆ ಸಣ್ಣಕ್ಕೆ ಇರುವ ಕಾರಣ ಅದು ರಾಡಾರಿನಲ್ಲೂ ಕಾಣಿಸೋದಿಲ್ಲ. ಅದಕ್ಕೆ ಆಗ್ನೇಯಾಸ್ತ, ಬ್ರಹ್ಮಾಸ್ತ್ರದಂಥಾ ಮಂತ್ರವನ್ನು ಆವಾಹಿಸಲು ವಿಶೇಷ ವಿಪ್ರ ಪುರೋಹಿತರನ್ನು ಸೈನ್ಯ ನಿಯೋಜಿಸಲಿದೆ.

ನಾನು: ಅದ್ಭುತ. ಇದನ್ನು ಜಗತ್ತಿಗೆ ಹೇಳಬೇಕು!!

ಸಾಂವ: ( ನಕ್ಕು) ನೋಡಿ.. ಇದು ಡಿಫೆನ್ಸ್ ಸೀಕ್ರೆಟ್. ಇದನ್ನು ನಾವು ಯಾರಿಗೂ ಹೇಳೋದಿಲ್ಲ ಹ್ಹ.. ಹ್ಹಾ..

ನಾನು: ಅದ್ಭುತ.. ಇನ್ನು ಇಂಥಾ ಎಷ್ಟು ಯೋಜನೆಗಳಿದಾವೆ?

ಸಾಂವ: ತುಂಬಾ ಇದೆ. ಆದರೆ ಕೆಲವನ್ನು ನಾವು ಗುಪ್ತವಾಗಿ ಮಾಡಬೇಕಿದೆ. ಉದಾ: ನಾವು ಈಗಾಗಲೇ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಮೆದುಳು ಮತ್ತು ಹೃದಯವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆಯನ್ನು ಗುಂಪು ಗುಂಪಿಗೆ ಮಾಡಿದ್ದೇವೆ. ಇದರಲ್ಲಿ ಮೆದುಳನ್ನು ಮೆತ್ತಗೆ ಮಾಡಿ ವಿಧೇಯತೆಯನ್ನು ಮುದ್ರಿಸುವುದನ್ನು ಮಾಡಲಾಗುತ್ತದೆ. ಇನ್ನು ಹೃದಯದ್ದು ಸ್ವಲ್ಪ ಬೇರೆ. ಅದು ಮೃದು ಇದ್ದರೆ ಕಷ್ಟ. ಅದಕ್ಕೇ ಕೆಲವು ಮೂಲಿಕೆ ಬಳಸಿ ಅದು ಕಲ್ಲಾಗುವ ತರ ಮಾಡುವುದು. ರಕ್ತಪರಿಚಲನೆ ಬಿಟ್ಟು ಬೇರೆ ಭಾವನೆಗಳ ಕೆಲಸ ಹೃದಯಕ್ಕೆ ಇರೋದು ವೇಸ್ಟ್ .

ನಾನು: ಅದ್ಭುತ.. ಇದು ಯಾವಾಗ ಚಾಲೂ ಆಗುತ್ತೆ?

ಸಾಂವ: ಚಾಲೂ? ಎಲ್ಲಿದ್ದೀರಿ ನೀವು..? ಈಗ ನಮ್ಮ ಪರವಾಗಿ ಮಾತಾಡಿ, ಬೀದಿಗಿಳಿದು ಗಲಾಟೆ ಮಾಡೋರು ಯಾರು ಅಂದ್ಕೊಂಡ್ರಿ? ಅದು ಈಗಾಗಲೇ ಲಕ್ಷಾಂತರ ಮಂದಿಗೆ ಮಾಡಿಯಾಗಿದೆ..

ನಾನು: ಅದ್ಭುತ: ಈ ಒಟ್ಟಾರೆ ನೀತಿಗೆ ಏನೆಂದು ಕರೆಯಲಾಗುತ್ತೆ?

ಸಾಂವ: ನೋಡಿ ನೆಹರೂ ಇದನ್ನು ಸೈಂಟಿಫಿಕ್ ಟೆಂಪರಮೆಂಟ್ ಅಂತ ಕರಿತಿದ್ರು. ಎಂಥಾ ಟೆಂಪರ್? ಅದಕ್ಕೇ ನಾವಿದನ್ನು ಪೆಪ್ಪರಮಿಂಟ್.. ಸೈಂಟಿಫಿಕ್ ಪೆಪ್ಪರಮಿಂಟ್ ಎಂದು ಕರೆಯುತ್ತೇವೆ. ಪೆಪ್ಪರಮಿಂಟ್ ಅಂದ್ರೇನು? ಗೊತ್ತಲ್ಲ. ಮಕ್ಕಳಿಗೆ ಇಷ್ಟ. ಅದಕ್ಕೇ ಈ ಯೋಜನೆಗೆ ಆ ಹೆಸರು

ನಾನು: ಸೂಪರ್ ಸಾರ್… ಅಭಿನಂದನೆಗಳು..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...