Homeಮುಖಪುಟ"ಸೈಂಟಿಫಿಕ್ ಪೆಪ್ಪರಮಿಂಟ್" ಅಂದ್ರೆ ಏನು, ಹೇಗಿರುತ್ತೆ ಗೊತ್ತಾ?

“ಸೈಂಟಿಫಿಕ್ ಪೆಪ್ಪರಮಿಂಟ್” ಅಂದ್ರೆ ಏನು, ಹೇಗಿರುತ್ತೆ ಗೊತ್ತಾ?

- Advertisement -
- Advertisement -

ಹೊಸ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಕೇಂದ್ರದ ಸಾಂಸ್ಕೃತಿಕ ವಕ್ತಾರರನ್ನು ಸಂದರ್ಶಿಸಲಾಯಿತು. ಈ ದೇಶದ ಮುಂದಿನ ಐವತ್ತು ವರ್ಷಗಳ ಶಿಕ್ಷಣ, ಸಾಂಸ್ಕೃತಿಕ ನಡೆ ಕುರಿತ ಕಾಣ್ಕೆಯನ್ನು ವಕ್ತಾರರು ಹಂಚಿಕೊಂಡರು.

ಅದರ ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.

ನಾನು: ಹೊಸ ಶಿಕ್ಷಣ ನೀತಿಯ ಒತ್ತು ಏನು?

ಸಾಂಸ್ಕೃತಿಕ ವಕ್ತಾರ: ನೋಡಿ ಕಳೆದ ಎಪ್ಪತ್ತು ವರ್ಷಗಳಲ್ಲಿ ನಮ್ಮ ಸಂಸ್ಕೃತಿಯನ್ನು ನಾಶಮಾಡುವ ಕೆಲಸವನ್ನು ನೆಹರೂ ಮತ್ತು ಎಡಚರು ಮಾಡಿದ್ದಾರೆ . ನಾವು ಅದನ್ನು ತಿದ್ದಿ ಭಾರತದ ಭವ್ಯ ಸಂಸ್ಕೃತಿಯನ್ನು ಸ್ಥಾಪಿಸಬೇಕಾಗಿದೆ. ಭಾರತ ವಿಶ್ವಗುರುವಾಗಲು ಇದು ಬುನಾದಿ.

ನಾನು: ಇದನ್ನು ಹೇಗೆ ಸಾಧಿಸಲಾಗುತ್ತದೆ?

ಸಾಂವ: ಈಗ ನೋಡಿ ಮೊನ್ನೆ ಗ್ರಹಣ ಆಯಿತು. ಎಡಚರು ಇದನ್ನು ಖಗೋಳ ಶಾಸ್ತ್ರೀಯ ಘಟನೆ ಅನ್ನುತ್ತಾರೆ. ಆದರೆ ನಮ್ಮ ಹಳ್ಳಿಹಳ್ಳಿಗಳಲ್ಲೂ ಇದನ್ನು ಸಾವಿರಾರು ವರ್ಷಗಳಿಂದ ಗಮನಿಸಿದ್ದಾರೆ. ಇದರ ಪರಿಣಾಮಗಳನ್ನು ನಿವಾರಿಸಲು ಪರಿಹಾರ ಕ್ರಮ ಮಾಡುತ್ತಾರೆ. ಹಾಗಿದ್ದರೆ ಅವರು ಅಜ್ಞಾನಿಗಳೇ? ಉದಾ: ಗ್ರಹಣ ಕಾಲದಲ್ಲಿ ವಿಕಿರಣ ಪರಿಣಾಮ ಆಗುತ್ತೆ. ಅದಕ್ಕೇ ಮಕ್ಕಳನ್ನು ತಿಪ್ಪೆಯಲ್ಲಿ ಹುಗಿದಿಡುವ ಸಂಪ್ರದಾಯ ಇದೆ. ಯಾಕೆ ಹೇಳಿ? ಗೋವಿನ ಸೆಗಣಿಗೆ ವಿಕಿರಣವನ್ನು ತಡೆಯುವ ಶಕ್ತಿ ಇದೆ.

ನಾನು: ಅಂದರೆ?

ಸಾಂ ವ: ಅಂದರೆ ನಾವು ಈ ಬಗ್ಗೆ ವಿಶೇಷ ಸಂಶೋಧನೆಗೆ ಅನುದಾನ ನೀಡುತ್ತೇವೆ. ಮಾತ್ರವಲ್ಲ ಮುಂದಿನ ವರ್ಷಗಳಲ್ಲಿ ಗ್ರಹಣ ಕಾಲದಲ್ಲಿ ಅಂಗನವಾಡಿ ಮತ್ತು ಶಾಲಾಮಕ್ಕಳನ್ನು ಶಾಲಾ ಆವರಣದಲ್ಲೇ ತಿಪ್ಪೆಯಲ್ಲಿ ಹೂತಿಡುವ ಬೃಹತ್ ರಾಷ್ಟ್ರೀಯ ಕಾರ್ಯಕ್ರಮವನ್ನು ಚಾಲೂ ಮಾಡಲಾಗುವುದು. ವಿದೇಶಗಳಲ್ಲೂ ಇದರ ವೈಜ್ಞಾನಿಕ ಮಹತ್ವವನ್ನು ಸಾರಲೂ ವಿದೇಶದಲ್ಲಿರುವ ಭಾರತೀಯ ಮಕ್ಕಳನ್ನು ಬಳಸಿ ಅಲ್ಲಿ ಪ್ರಾತ್ಯಕ್ಷಿಕೆ ಮಾಡಿ ವಿದೇಶಗಳಲ್ಲೂ ನಮ್ಮ ಆಚರಣೆಯ ಮಹತ್ವವನ್ನು ಪ್ರಚುರಪಡಿಸಲಾಗುವುದು.

ನಾನು : ಮತ್ತೆ ಈ ದರ್ಭೆಗೆ ವಿಶೇಷ ಮಹತ್ವ ಇದೆ ಎಂದು ಹೇಳ್ತಿದ್ರು..

ಸಾಂವ: ದರ್ಭೆ? ಅದು ಜಗತ್ತಿನಲ್ಲೇ ವಿಶೇಷ. ಅದರ ಒಂದು ತುಂಡು ಹಾಕಿದರೂ ವಿಕಿರಣ ತಾಗೋದಿಲ್ಲ. ಅಷ್ಟೇಕೆ, ನಾವೀಗ ದರ್ಭೇಯನ್ನೇ ಉಪಯೋಗಿಸಿ ಬೆನ್ನಟ್ಟುವ ಕ್ಷಿಪಣಿ ತಯಾರು ಮಾಡುವ ತಂತ್ರಜ್ಞಾನದ ಸಂಶೋಧನೆ ಆರಂಭಿಸಿದ್ದೇವೆ

ನಾನು: ಅದು ಹೇಗೆ?

ಸಾಂವ: ಅಯ್ಯೋ, ರಾಮಾಯಣದಲ್ಲಿ ಶ್ರೀರಾಮ ದೇವರು ದರ್ಭೆಗೆ ಮಂತ್ರ ಆವಾಹನೆ ಮಾಡಿ ಕಾಕಾಸುರನನ್ನು ಬೆನ್ನಟ್ಟಲಿಲ್ಲವೇ? ಹಾಗೇ ಶತ್ರು ಕ್ಷಿಪಣಿ/ ವಿಮಾನದ ಶಾಖವನ್ನೇ ಬೆನ್ನು ಹತ್ತಿ ಅದನ್ನು ನಾಶ ಮಾಡೋದು. ದರ್ಭೆ ಸಣ್ಣಕ್ಕೆ ಇರುವ ಕಾರಣ ಅದು ರಾಡಾರಿನಲ್ಲೂ ಕಾಣಿಸೋದಿಲ್ಲ. ಅದಕ್ಕೆ ಆಗ್ನೇಯಾಸ್ತ, ಬ್ರಹ್ಮಾಸ್ತ್ರದಂಥಾ ಮಂತ್ರವನ್ನು ಆವಾಹಿಸಲು ವಿಶೇಷ ವಿಪ್ರ ಪುರೋಹಿತರನ್ನು ಸೈನ್ಯ ನಿಯೋಜಿಸಲಿದೆ.

ನಾನು: ಅದ್ಭುತ. ಇದನ್ನು ಜಗತ್ತಿಗೆ ಹೇಳಬೇಕು!!

ಸಾಂವ: ( ನಕ್ಕು) ನೋಡಿ.. ಇದು ಡಿಫೆನ್ಸ್ ಸೀಕ್ರೆಟ್. ಇದನ್ನು ನಾವು ಯಾರಿಗೂ ಹೇಳೋದಿಲ್ಲ ಹ್ಹ.. ಹ್ಹಾ..

ನಾನು: ಅದ್ಭುತ.. ಇನ್ನು ಇಂಥಾ ಎಷ್ಟು ಯೋಜನೆಗಳಿದಾವೆ?

ಸಾಂವ: ತುಂಬಾ ಇದೆ. ಆದರೆ ಕೆಲವನ್ನು ನಾವು ಗುಪ್ತವಾಗಿ ಮಾಡಬೇಕಿದೆ. ಉದಾ: ನಾವು ಈಗಾಗಲೇ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಮೆದುಳು ಮತ್ತು ಹೃದಯವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆಯನ್ನು ಗುಂಪು ಗುಂಪಿಗೆ ಮಾಡಿದ್ದೇವೆ. ಇದರಲ್ಲಿ ಮೆದುಳನ್ನು ಮೆತ್ತಗೆ ಮಾಡಿ ವಿಧೇಯತೆಯನ್ನು ಮುದ್ರಿಸುವುದನ್ನು ಮಾಡಲಾಗುತ್ತದೆ. ಇನ್ನು ಹೃದಯದ್ದು ಸ್ವಲ್ಪ ಬೇರೆ. ಅದು ಮೃದು ಇದ್ದರೆ ಕಷ್ಟ. ಅದಕ್ಕೇ ಕೆಲವು ಮೂಲಿಕೆ ಬಳಸಿ ಅದು ಕಲ್ಲಾಗುವ ತರ ಮಾಡುವುದು. ರಕ್ತಪರಿಚಲನೆ ಬಿಟ್ಟು ಬೇರೆ ಭಾವನೆಗಳ ಕೆಲಸ ಹೃದಯಕ್ಕೆ ಇರೋದು ವೇಸ್ಟ್ .

ನಾನು: ಅದ್ಭುತ.. ಇದು ಯಾವಾಗ ಚಾಲೂ ಆಗುತ್ತೆ?

ಸಾಂವ: ಚಾಲೂ? ಎಲ್ಲಿದ್ದೀರಿ ನೀವು..? ಈಗ ನಮ್ಮ ಪರವಾಗಿ ಮಾತಾಡಿ, ಬೀದಿಗಿಳಿದು ಗಲಾಟೆ ಮಾಡೋರು ಯಾರು ಅಂದ್ಕೊಂಡ್ರಿ? ಅದು ಈಗಾಗಲೇ ಲಕ್ಷಾಂತರ ಮಂದಿಗೆ ಮಾಡಿಯಾಗಿದೆ..

ನಾನು: ಅದ್ಭುತ: ಈ ಒಟ್ಟಾರೆ ನೀತಿಗೆ ಏನೆಂದು ಕರೆಯಲಾಗುತ್ತೆ?

ಸಾಂವ: ನೋಡಿ ನೆಹರೂ ಇದನ್ನು ಸೈಂಟಿಫಿಕ್ ಟೆಂಪರಮೆಂಟ್ ಅಂತ ಕರಿತಿದ್ರು. ಎಂಥಾ ಟೆಂಪರ್? ಅದಕ್ಕೇ ನಾವಿದನ್ನು ಪೆಪ್ಪರಮಿಂಟ್.. ಸೈಂಟಿಫಿಕ್ ಪೆಪ್ಪರಮಿಂಟ್ ಎಂದು ಕರೆಯುತ್ತೇವೆ. ಪೆಪ್ಪರಮಿಂಟ್ ಅಂದ್ರೇನು? ಗೊತ್ತಲ್ಲ. ಮಕ್ಕಳಿಗೆ ಇಷ್ಟ. ಅದಕ್ಕೇ ಈ ಯೋಜನೆಗೆ ಆ ಹೆಸರು

ನಾನು: ಸೂಪರ್ ಸಾರ್… ಅಭಿನಂದನೆಗಳು..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...