Homeಮುಖಪುಟಆಧಾರರಹಿತ ಕ್ಷುಲ್ಲಕ ದೇಶದ್ರೋಹ ಪ್ರಕರಣಗಳ ಇತ್ತೀಚಿನ 10 ಉದಾಹರಣೆಗಳು

ಆಧಾರರಹಿತ ಕ್ಷುಲ್ಲಕ ದೇಶದ್ರೋಹ ಪ್ರಕರಣಗಳ ಇತ್ತೀಚಿನ 10 ಉದಾಹರಣೆಗಳು

ಕಳೆದ ಆರು ವರ್ಷಗಳಲ್ಲಿ ದೇಶದ್ರೋಹಕ್ಕಾಗಿ ಬಂಧಿಸಲ್ಪಟ್ಟ 559 ಜನರಲ್ಲಿ, ಕೇವಲ 1% ಮಾತ್ರ ಶಿಕ್ಷೆಗೊಳಗಾಗಿದ್ದಾರೆ, ಮತ್ತು 73 ಜನರನ್ನು ಖುಲಾಸೆಗೊಳಿಸಲಾಗಿದೆ.

- Advertisement -
- Advertisement -

ಪಂಜಾಬಿನಲ್ಲಿ ವೆಂಟಿಲೇಟರ್‌ಗಳ ಕೊರತೆಯನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ದೇಶದ್ರೋಹದ ಕೇಸ್ ದಾಖಲಾಗಿತ್ತು! ಪ್ರಭುತ್ವ ವಿರೋಧಿ ಪೋಸ್ಟರ್‌ಗಳನ್ನು ಹೊಂದಿದ್ದಕ್ಕಾಗಿ ಇನ್ನೊಬ್ಬರ ವಿರುದ್ಧ ಪೊಲೀಸರು ದೇಶದ್ರೋಹದ ಆರೋಪಗಳನ್ನು ಸಲ್ಲಿಸಿದ್ದರು….! ಕರ್ನಾಟಕದಲ್ಲಿ, ಭಾರತೀಯ ಮತ್ತು ಪಾಕಿಸ್ತಾನದ ಧ್ವಜಗಳನ್ನು ವೀಡಿಯೊದಲ್ಲಿ ವಿಲೀನಗೊಳಿಸಿದ್ದಕ್ಕಾಗಿ; ಬಿಹಾರದಲ್ಲಿ ಕುಡಿದ ವಿದ್ಯಾರ್ಥಿಗಳ “ದೇಶದ್ರೋಹದ ಘೋಷಣೆಗಳಿಗಾಗಿ” ಈ ದೇಶದ್ರೋಹ-ಸೆಡಿಷನ್-ಕೇಸ್‌ಗಳನ್ನು ದಾಖಲಿಸಲಾಗಿತ್ತು!

ಭಾರತದ 151 ವರ್ಷದ ಹಳೆಯ 1860ರ ದೇಶದ್ರೋಹ ಕಾನೂನನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಅಡಿಯಲ್ಲಿ ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಲೇ ಹೊರಟಿದ್ದಾರೆ. ಈ ಕಾಯ್ದೆಯೇ ರದ್ದಾಗಬೇಕು ಎಂದು ಹಲವು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು ಮತ್ತು ಸಂವಿಧಾನ ತಜ್ಞರು ಆಗ್ರಹಿಸುತ್ತಲೇ ಬಂದಿದ್ದಾರೆ.

2014 ಮತ್ತು 2020 ರ ನಡುವಿನ ದೇಶದ್ರೋಹದ ಕುರಿತ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಸಂಖ್ಯೆ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ದೇಶದ್ರೋಹಕ್ಕಾಗಿ ಬಂಧಿಸಲ್ಪಟ್ಟ 559 ಜನರಲ್ಲಿ, ಕೇವಲ 1% ಮಾತ್ರ ಶಿಕ್ಷೆಗೊಳಗಾಗಿದ್ದಾರೆ, ಮತ್ತು 73 ಜನರನ್ನು ಖುಲಾಸೆಗೊಳಿಸಲಾಗಿದೆ.

ಆಧಾರರಹಿತ ಇಂತಹ ಕ್ಷುಲ್ಲಕ ದೇಶದ್ರೋಹ ಪ್ರಕರಣಗಳ ಇತ್ತೀಚಿನ 10 ಉದಾಹರಣೆಗಳು ಇಲ್ಲಿವೆ.

ಪೊಲೀಸರು ದೇಶದ್ರೋಹ ಆರೋಪಗಳನ್ನು ಕಡಿಮೆ ಆಲೋಚನೆ, ಪುರಾವೆಗಳು ಅಥವಾ ಕಾನೂನು ಸಮರ್ಥನೆಯೊಂದಿಗೆ ಹೇಗೆ ಅನ್ವಯಿಸುತ್ತಾರೆ ಮತ್ತು ಹೈಕೋರ್ಟ್‌ಗಳು ಮತ್ತು ಸುಪ್ರೀಂ ನ್ಯಾಯಾಂಗದ ತೀರ್ಪುಗಳ ಸರಣಿಯನ್ನು ನಿರ್ಲಕ್ಷಿಸುತ್ತಾರೆ ಎಂಬುದನ್ನು ಈ 10 ಪ್ರಕರಣಗಳು ಸೂಚಿಸುತ್ತವೆ.

  1. ದಿಶಾರವಿ

21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ತಪ್ಪಾಗಿ ಅನ್ವಯಿಸಿದ ದೇಶದ್ರೋಹ ಆರೋಪ ಮತ್ತು ವಿಚಾರಣೆಗೆ ಮುಂಚಿನ ಉಲ್ಲಂಘನೆಗಳ ಬಗ್ಗೆ ಅನುಮಾನಗಳಿಗೆ ಈಗಲೂ ಸ್ಪಷ್ಟ ಉತ್ತರ ಪ್ರಭುತ್ವದ ಕಡೆಯಿಂದ ಬಂದಿಲ್ಲ. ಆದರೆ, ದಿಶಾಗೆ ಜಾಮೀನು ನೀಡುವಾಗ ನ್ಯಾಯಾಧೀಶರು ದೇಶದ್ರೋಹ ಕಾಯ್ದೆ ದುರುಪಯೋಗದ ಬಗ್ಗೆ ಉಲ್ಲೇಖಿಸಿದ ಅಂಶಗಳು ಗಮನಾರ್ಹವಾಗಿವೆ.

“ಸಾರ್ವಜನಿಕ ಶಾಂತಿಯ ಅವ್ಯವಸ್ಥೆ ಅಥವಾ ಗೊಂದಲವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿರುವ ಅಥವಾ ಪ್ರವೃತ್ತಿಯನ್ನು ಹೊಂದಿರುವಂತಹ ಚಟುವಟಿಕೆಗಳನ್ನು ಮಾತ್ರ ಕಾನೂನು ನಿಷೇಧಿಸುತ್ತದೆ” ಎಂದು ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಫೆಬ್ರವರಿ 23 ರಂದು ಹೇಳಿದರು, “ಯಾವುದೇ ಕರೆ ಯಾವುದೇ ರೀತಿಯ ಹಿಂಸಾಚಾರವನ್ನು ಪ್ರಚೋದನೆ ಮಾಡದೇ ಇದ್ದರೆ ಅದು ದೇಶದ್ರೋಹ ಆಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

2. ಕನ್ಹಯ್ಯ ಕುಮಾರ್

2016 ರ ಫೆಬ್ರವರಿ 15 ರಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕರಾಗಿದ್ದ ಕನ್ಹಯ್ಯ ಕುಮಾರ್ ಮತ್ತು ಇತರರ ವಿರುದ್ಧ ದೆಹಲಿ ಪೊಲೀಸರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದರು.

3. ಪತ್ರಕರ್ತರ ವಿರುದ್ಧ

ಮಾಜಿ ಸಚಿವ ಶಶಿ ತರೂರ್ ಮತ್ತು ಟೆಲಿವಿಷನ್ ಆಂಕರ್ ರಾಜ್‌ದೀಪ್ ಸರ್ದೇಸಾಯಿ ಮತ್ತು ಕಾರವಾನ್ ನಿಯತಕಾಲಿಕೆಯ ಸಂಪಾದಕ ವಿನೋದ್ ಜೋಸ್ ಅವರಂತಹ ಆರು ಪತ್ರಕರ್ತರ ಪ್ರತಿಭಟನೆಗೆ ಸಂಬಂಧಿಸಿದಂತೆ 2021ರ ಜನವರಿಯಲ್ಲಿ ಕನಿಷ್ಠ ಐದು ವಿಭಿನ್ನ ರಾಜ್ಯಗಳಲ್ಲಿ ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ. 2021 ರ ಫೆಬ್ರವರಿ 9 ರಂದು ಸುಪ್ರೀಂ ಕೋರ್ಟ್ ಅವರ ಬಂಧನವನ್ನು ತಡೆಹಿಡಿದಿದೆ.

4. ಕಂಗನಾ ರಾಣಾವತ್

ನಟಿ ಕಂಗನಾ ರಾಣಾವತ್ ವಿರುದ್ಧದ ದೇಶದ್ರೋಹದ ಪ್ರಕರಣದಲ್ಲಿ 2020 ರ ನವೆಂಬರ್ 24 ರಂದು ಬಾಂಬೆ ಹೈಕೋರ್ಟ್ ಗಮನಿಸಿದಂತೆ: “ದೂರಿನಲ್ಲಿ 124 ಎ ಐಪಿಸಿ (ದೇಶದ್ರೋಹ) ಸೇರಿಸುವುದು ಒಂದು ಪ್ರವೃತ್ತಿಯಾಗಿದೆ. ಇದರ ಅವಶ್ಯಕತೆ ಏನು? ನಾವು ನಮ್ಮ ನಾಗರಿಕರಿಗೆ ಕಿರುಕುಳ ನೀಡುತ್ತಿದ್ದೇವೆಯೇ?; ಎಂದು ಪ್ರಶ್ನೆ ಮಾಡಿತ್ತು. ಸೆಕ್ಷನ್ 124 ಎ ಅನ್ನು ಅನಗತ್ಯವಾಗಿ ಹೇರದಂತೆ ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಕಾರ್ಯಾಗಾರಗಳನ್ನು ನಡೆಸುವ ಅಗತ್ಯತೆಯ ಬಗ್ಗೆ ಅದು ಮೌಖಿಕ ಹೇಳಿಕೆಗಳನ್ನು ನೀಡಿತ್ತು. ತನ್ನ ಟ್ವೀಟ್ ಹಿಂಸಾಚಾರಕ್ಕೆ ಯಾವುದೇ ಪ್ರಚೋದನೆಯನ್ನು ಉಂಟು ಮಾಡಲಿಲ್ಲ ಎಂದು ಕಂಗನಾ ನ್ಯಾಯಾಲಯದ ಮುಂದೆ ವಾದಿಸಿದ್ದರು.

ದೆಹಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳು ಕ್ರಮವಾಗಿ ಫೆಬ್ರವರಿ 2021 ಮತ್ತು ಅಕ್ಟೋಬರ್ 2020 ರಲ್ಲಿ ದೇಶದ್ರೋಹದ ಬಳಕೆಯನ್ನು ಪ್ರಶ್ನಿಸಿವೆ.

ದಿಶಾ, ಕನ್ನಯ್ಯ ಕುಮಾರ್, ಕಂಗನಾ ಮತ್ತು ಇತರರು ಸೇರಿದಂತೆ, ಕಳೆದ ಒಂದು ದಶಕದಲ್ಲಿ ಸುಮಾರು 11,000 ಭಾರತೀಯರು ಹೀಗೆ ತಳಬುಡವಿಲ್ಲದ ಕ್ಷುಲ್ಲಕ ಅಪಾದನೆಗಳ ದೇಶದ್ರೋಹ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹೊಸದಾಗಿ ಪ್ರಾರಂಭಿಸಲಾದ ಆರ್ಟಿಕಲ್ 14 ಡೇಟಾಬೇಸ್ ಪೋರ್ಟಲ್ ಪ್ರಕಾರ, ಇದರ ಪ್ರಾಥಮಿಕ ಸಂಶೋಧನೆಗಳನ್ನು ನೀವು ಇಲ್ಲಿ ಓದಬಹುದು.

ಪುರಾತನ ಕಾನೂನು ಮತ್ತು ದೇಶದ್ರೋಹ

ಯಾವುದೇ ಭಾಷಣ, ಕಾರ್ಯಕ್ಷಮತೆ ಅಥವಾ ಪ್ರಕಟಣೆಯು ಭಾರತ ಸರ್ಕಾರದ ವಿರುದ್ಧ ವಿಶ್ವಾಸದ್ರೋಹ ಅಥವಾ ದ್ವೇಷವನ್ನು ಉಂಟುಮಾಡುವ ಪರಿಣಾಮವನ್ನು ಹೊಂದಿದ್ದರೆ ಮಾತ್ರ ಅದು ದೇಶದ್ರೋಗ ಆಗಬಲ್ಲದು. ಹಾಗಂತ ಪ್ರಭುತ್ವವನ್ನು ಪ್ರಶ್ನಿಸಿದ ಮಾತ್ರಕ್ಕೆ ದೇಶದ್ರೋಹ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹಲವು ಕೊರ್ಟ್‌ಗಳು ಹಲವು ಬಾರಿ ಉಲ್ಲೇಖ ಮಾಡಿವೆ.

1962 ರಲ್ಲಿ ಕೇದಾರ್ ನಾಥ್ ಸಿಂಗ್ ಕೇಸಿನಲ್ಲಿ ಸುಪ್ರೀಂ ಕೋರ್ಟ್ ದೇಶದ್ರೋಹ ಕಾನೂನಿನ ದುರುಪಯೋಗ ಆಗುತ್ತಿದೆ ಎಂದು ಉಲ್ಲೇಖಿಸಿ, ಮಹತ್ವದ ತೀರ್ಪು ನೀಡಿತ್ತು. ದೇಶದ್ರೋಹದ ನಿಬಂಧನೆಯು ಸಾಂವಿಧಾನಿಕವಾಗಿದ್ದರೂ, ಹಿಂಸೆ ಅಥವಾ ಸಾರ್ವಜನಿಕ ಅಸ್ವಸ್ಥತೆಯನ್ನು ಪ್ರಚೋದಿಸುವ ಪ್ರವೃತ್ತಿಯನ್ನು ಹೊಂದಿರದಿದ್ದರೆ ಅದನ್ನು ದೇಶದ್ರೋಹ ಎನ್ನಲಾಗದು ಎಂದು ತೀರ್ಪು ಹೇಳಿತ್ತು.

ಈ ಮಾನದಂಡವನ್ನು ಪರೀಕ್ಷಿಸಲು, 2020 ರಿಂದ ಮೂರು ವರ್ಷಗಳಲ್ಲಿ ದಾಖಲಾದ ದೇಶಾದ್ಯಂತ 10 ದೇಶದ್ರೋಹ ಪ್ರಕರಣಗಳಲ್ಲಿ ಮೊದಲ ಮಾಹಿತಿ ವರದಿಗಳನ್ನು (ಎಫ್‌ಐಆರ್) ಪರಿಶೀಲಿಸೋಣ.

ಈ ಮೇಲೆ ಉಲ್ಲೀಖಿಸಲಾದ ಈ ನಾಲ್ಕು ಪ್ರಕರಣಗಳು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿವೆ. ಎಫ್‌ಐಆರ್‌ಗಳನ್ನು ರಾಜ್ಯ ಪೊಲೀಸ್ ಇಲಾಖೆಯ ವೆಬ್‌ಸೈಟ್‌ಗಳಿಂದ ಪಡೆಯಲಾಗಿದೆ. ಎಫ್‌ಐಆರ್‌ಗಳು 2016 ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದಂತೆ ಸಾರ್ವಜನಿಕ ದಾಖಲೆಗಳಾಗಿವೆ. ಎಲ್ಲಾ ವೈಯಕ್ತಿಕ ವಿವರಗಳನ್ನು ಮರುರೂಪಿಸಲಾಗಿದೆ.

5. ಪಂಜಾಬ್‌ ಪ್ರಕರಣ

2020 ರ ಆರಂಭದಲ್ಲಿ, ಕೊವಿಡ್-19 ರ ನಂತರ ಪಂಜಾಬ್‌ನಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು ಮತ್ತು ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ವಿಷಯವೇ ದೇಶದ್ರೋಹಕ್ಕೆ ಕಾರಣವಾಗಿತ್ತು!

ಒಂದು ಪ್ರಕರಣದಲ್ಲಿ ಆರೋಪಿ ವೆಂಟಿಲೇಟರ್‌ಗಳ ಕೊರತೆಯ ಬಗ್ಗೆ ಪೋಸ್ಟ್ ಮಾಡಿದ್ದರು. ಆತನ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ, “ರಾಜ್ಯ ಸರ್ಕಾರದ ವಿರುದ್ಧ ದ್ವೇಷವನ್ನು ಪ್ರಚೋದಿಸಿದರು, ಸಾರ್ವಜನಿಕರನ್ನು ಮತ್ತು ಆಡಳಿತವನ್ನು ದಾರಿ ತಪ್ಪಿಸಿದರು ಮತ್ತು ಹಿರಿಯ ಅಧಿಕಾರಿಗಳ ಆದೇಶಗಳನ್ನು ಉಲ್ಲಂಘಿಸಿದ್ದಾರೆ” ಎಂದು ಆರೋಪ ಮಾಡಲಾಗಿತ್ತು.

ಎರಡನೆಯ ಪ್ರಕರಣದಲ್ಲಿ, ಎಫ್‌ಐಆರ್ ಆರೋಪಿಯು ತನ್ನ ಮೋಟಾರ್‌ಸೈಕಲ್ ಸವಾರಿ ಮಾಡುತ್ತ ಸಾಮಾಜಿಕ ಮಾಧ್ಯಮದಲ್ಲಿ, “ಭಾರತ ಸರ್ಕಾರ, ಪಂಜಾಬ್ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಜನರನ್ನು ಪ್ರಚೋದಿಸುವ ದೊಡ್ಡ ಧ್ವನಿಯಲ್ಲಿ…. ಕೆಟ್ಟ ಭಾಷೆಯನ್ನು ಬಳಸಿದ್ದಾರೆ.. ಅವರು ಹಿಂದೂ ದೇವತೆಗಳ ಬಗ್ಗೆ ಕೆಟ್ಟ ಮಾತುಗಳನ್ನು ಹೇಳುತ್ತಿದ್ದರು ಮತ್ತು ಹಿಂದೂ ಧರ್ಮಕ್ಕೆ ಸೇರಿದ ಜನರ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತಿದ್ದರು” ಎಂದು ಆರೋಪಿಸಿ ದೇಶದ್ರೋಹ ಆರೋಪ ಹೊರಿಸಲಾಗುತ್ತು!

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, 2020 ರಲ್ಲಿ ಈ ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ, ಸೆಕ್ಷನ್ 124 ಎಯ ಬಳಕೆಯನ್ನು ಟೀಕಿಸಿತು. ಆಕ್ಷೇಪಾರ್ಹ ವೀಡಿಯೊದ ಪ್ರತಿಲೇಖನವನ್ನು ಅಧ್ಯಯನ ಮಾಡಿದ ನಂತರ, ಹೈಕೋರ್ಟ್, “ಸರ್ಕಾರದ ಕಾರ್ಯವೈಖರಿಯ ಕುರಿತು ಅಸಮಾಧಾನ ಮತ್ತು ಅದರ ನೀತಿಗಳ ಟೀಕೆ” ದೇಶದ್ರೋವಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಈ ಆದೇಶದ ಸಮಯದಲ್ಲಿ ಆರೋಪಿ ಆರು ತಿಂಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿ ಕಳೆಯಬೇಕಾಗಿತು.

ಪ್ರಭುತ್ವವು, “ದೇಶದ್ರೋಹ ಮತ್ತು ಧಾರ್ಮಿಕ ಅಸಮಾಧಾನಕ್ಕೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೆ ತರುವಾಗ” ಹೆಚ್ಚು ಸಹಿಷ್ಣುತೆ ಮತ್ತು ಸೂಕ್ಷ್ಮವಾಗಿ ಗಮನಹರಿಸಬೇಕು” ಎಂದು ಕೋರ್ಟ್ ಹೇಳಿತ್ತು.

6. ಕರ್ನಾಟಕದ ಯುವಕರು

ಸ್ವಾತಂತ್ರ‍್ಯ ದಿನಾಚರಣೆಯಂದು 2019 ರಲ್ಲಿ ಕರ್ನಾಟಕದಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ, ಆರೋಪಿಯು ಪಾಕಿಸ್ತಾನದ ಧ್ವಜದಿಂದ ಅರ್ಧ ಚಂದ್ರ ಮತ್ತು ನಕ್ಷತ್ರವನ್ನು ಭಾರತದ ಕೇಸರಿ, ಬಿಳಿ ಮತ್ತು ಹಸಿರು ಧ್ವಜದೊಂದಿಗೆ ಎಡಿಟ್ ಮಾಡಿದ್ದ ಮತ್ತು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ “ಚಾಂದ್ ತಾರಾ (ಚಂದ್ರ ಮತ್ತು ನಕ್ಷತ್ರಗಳು) ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಹಾಗೆ ಮಾಡುವ ಮೂಲಕ, ಅವರು ಭಾರತೀಯ ಧ್ವಜವನ್ನು ಅವಮಾನಿಸಿದ್ದಾರೆ ಮತ್ತು “ರಾಷ್ಟ್ರೀಯ ಸಮಗ್ರತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಹಾನಿ ಉಂಟುಮಾಡಿದ್ದಾರೆ” ಎಂದು ವಿವರಿಸಿದ್ದ ಎಫ್‌ಐಆರ್ ಆರೋಪಿಯ ಮೇಲೆ ದೇಶದ್ರೋಹದ ಅಪಾದನೆ ಮಾಡಿತ್ತು!

7. ಕೇರಳ ಪ್ರಕರಣ

ಅದೇ ವರ್ಷ, ಕೇರಳದ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ “ಆರೋಪಿ, ವಿದ್ಯಾರ್ಥಿ ಕಾಲೇಜಿನ ಪೋರ್ಟಿಕೊ ಗೋಡೆಗಳ ಮೇಲೆ ರಾಷ್ಟ್ರ ವಿರೋಧಿ ಘೋಷಣೆಗಳೊಂದಿಗೆ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಭಾರತದ ಒಗ್ಗಟ್ಟಿಗೆ ಹಾನಿ ಮಾಡಿದ್ದ” ಎಂದು ಹೇಳಲಾಗಿತ್ತು.

8. ಪಂಜಾಬ್‌ ಪೋಸ್ಟರ್ ಪ್ರಕರಣ

2019 ರಲ್ಲಿ, ಪಂಜಾಬ್‌ನಲ್ಲಿ ಪೊಲೀಸರು, “ಸರ್ಕಾರದ ವಿರುದ್ಧ”ದ ಪೋಸ್ಟರ್‌ಗಳನ್ನು ಹೊಂದಿದ್ದಕ್ಕಾಗಿ ಇಬ್ಬರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು ಮತ್ತು ಸರ್ಕಾರದ ವಿರುದ್ಧ ಜನರನ್ನು ಸಜ್ಜುಗೊಳಿಸಲು ಪೋಸ್ಟರ್‌ಗಳನ್ನು ವಿತರಿಸಲಾಗಿತ್ತು ಎಂದು ಆರೋಪಿಸಿದ್ದರು. ಪೋಸ್ಟರ್‌ಗಳ ವಿಷಯಗಳು ಯಾವುವು ಮತ್ತು ಅವು ಸರ್ಕಾರದ ವಿರುದ್ಧ ಹೇಗೆ ಸಮರ ಸಾರುತ್ತವೆ ಎಂದು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರತಲಿಲ್ಲ.

9. ಬಿಹಾರ ಪತ್ರಗಳು

2019 ರ ಅಕ್ಟೋಬರ್‌ನಲ್ಲಿ ಬಿಹಾರದಲ್ಲಿ ದಾಖಲಿಸಲಾದ ಎಫ್‌ಐಆರ್‌ನಲ್ಲಿ, “ಪತ್ರಗಳನ್ನು ಬರೆದ ಆರೋಪಿತ ವ್ಯಕ್ತಿಗಳ ಉದ್ದೇಶವು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ದೇಶದ ಚಿತ್ರಣವನ್ನು ಹದಗೆಡಿಸುವುದಾಗಿದೆ. ಅವರು ಪ್ರಧಾನಿಗೆ ಕೆಟ್ಟ ಹೆಸರು ತರಲು ಬಯಸಿದ್ದಾರೆ. ಇದು ರಾಷ್ಟ್ರೀಯತೆ ಮತ್ತು ಮಾನವೀಯತೆಗೆ ವಿರುದ್ಧವಾಗಿದೆ ಮತ್ತು ಪ್ರಧಾನ ಮಂತ್ರಿಯ ಚಿತ್ರಣವನ್ನು ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅವರ ಕಾರ್ಯವನ್ನು ಕೆಣಕುವ ಉದ್ದೇಶ ಹೊಂದಿದೆ. ಆರೋಪಿತ ವ್ಯಕ್ತಿ ಉದ್ದೇಶಪೂರ್ವಕವಾಗಿ ಪತ್ರವನ್ನು ಬರೆದಿದ್ದು ದೇಶವನ್ನು ವಿಭಜಿಸುವ ಮತ್ತು ಕೆಡವುವ ಉದ್ದೇಶದಿಂದ ದ್ವೇಷವನ್ನು ಹರಡುವ ಮೂಲಕ ಮತ್ತು ಜನರನ್ನು ದಾರಿತಪ್ಪಿಸುವ ಮೂಲಕ ದೇಶದ್ರೋಹ ಮಾಡಲಾಗಿದೆ’ ಎಂದು ಹೇಳಲಾಗಿತ್ತು.

ಕುಡಿದು ತಮ್ಮ ಸಹಪಾಠಿಗಳ ಜೊತೆ ಬಡಿದಾಡಿಕೊಂಡ ವಿದ್ಯಾರ್ಥಿಗಳ ವಿರುದ್ಧ ಬಿಹಾರ ಪೊಲೀಸರು 2018 ರಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ “ಈ ವಿದ್ಯಾರ್ಥಿಗಳು ದೇಶದ್ರೋಹದ ಘೋಷಣೆಗಳನ್ನು ಕೂಗಿದರು” ಎಂದು ಆರೋಪಿಸಲಾಗಿತ್ತು.

ಅದೇ ರೀತಿ ಬಿಹಾರದಲ್ಲಿ, 2018 ರಲ್ಲಿ, ಸ್ವಾತಂತ್ರ‍್ಯ ದಿನದಂದು , “ರಾಷ್ಟ್ರಧ್ವಜವನ್ನು ಕಿತ್ತುಹಾಕಿದರು” ಮತ್ತು “ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದರು” ಎಂದು ಮೂವರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಜಾರ್ಖಂಡ್‌ನಲ್ಲಿ 2017 ರಲ್ಲಿ ದೇಶ ವಿರೋಧಿ ಘೋಷಣೆ ಕೂಗಿದರೆಂದು ಎತ್ತುವ ಕಾರಣಕ್ಕಾಗಿ ಒಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

10. ಇತರ ಪ್ರಕರಣಗಳು

ಜೂನ್ 2017 ರಲ್ಲಿ ಭಾರತ ಕ್ರಿಕೆಟ್‌ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಕಳೆದುಕೊಂಡಿತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅದು ಸೋತಿತ್ತು. ಪಾಕಿಸ್ತಾನದ ಗೆಲುವನ್ನು ಆಚರಿಸಿದ ಕೆಲವು ಆರೋಪಿಗಳು ಪಟಾಕಿ ಸಿಡಿಸಿ ಭಾರತದ ವಿರುದ್ಧ “ಪಾಕಿಸ್ತಾನ ಜಿಂದಾಬಾದ್” ಎಂದು ಸಾರ್ವಜನಿಕವಾಗಿ ಕೂಗಿದರು ಎಂದು ಕರ್ನಾಟಕದಲ್ಲಿ ದಾಖಲಾಗಿದ್ದ ಎಫ್‌ಐಆರ್ ದೇಶದ್ರೋಹದ ಆರೋಪ ಹೊರಿಸಿತ್ತು.

ಅಸ್ಸಾಂನಲ್ಲಿ, ಏಪ್ರಿಲ್ 2019 ರಲ್ಲಿ, ಒಬ್ಬ ವ್ಯಕ್ತಿಯನ್ನು ದೇಶದ್ರೋಹಕ್ಕಾಗಿ ಬಂಧಿಸಲಾಯಿತು, “ತನ್ನ ಫೇಸ್ಬುಕ್ ಖಾತೆಯಲ್ಲಿ ರಾಷ್ಟ್ರ ವಿರೋಧಿ ಕಾಮೆಂಟ್ ಅನ್ನು ಪೋಸ್ಟ್ ಮಾಡಿದ್ದಕ್ಕಾಗಿ (ಪಾಕಿಸ್ತಾನ ಸೈನ್ಯವನ್ನು ಬೆಂಬಲಿಸಿದೆದನಂತೆ!) ದೇಶದ್ರೋಹ ಆರೋಪ ಹೊರಿಸಲಾಗಿತ್ತು.
ಪರಿಶೀಲಿಸಿದ ಈ ಎಫ್‌ಐಆರ್‌ಗಳಲ್ಲಿ ಯಾವುದೂ ಹಿಂಸಾಚಾರದ ಸಂಭವನೀಯತೆಯನ್ನು ಅಥವಾ ಘಟನೆಯ ನಂತರ ನಂತರ ನಿಜವಾದ ಹಿಂಸಾಚಾರ ಸಂಭವಿಸಿದ ಸಂಪರ್ಕವನ್ನು ವಿವರಿಸಿಲ್ಲ. ದ್ವೇಷ ಅಥವಾ ಕೋಮು ಅಸಮಾನತೆಯ ಭಾವನೆಗಳನ್ನು ಹರಡುವುದನ್ನು ಅವರು ವಿವರಿಸುವುದಿಲ್ಲ. ದಿಶಾ ರವಿ ಜಾಮೀನು ಆದೇಶದಲ್ಲಿ ವಿವರಿಸಿರುವ ಅದೇ ರೀತಿಯ ಉಪದ್ರವದಿಂದ ಪೊಲೀಸರು ಬಹುಶಃ ಬಳಲುತ್ತಿದ್ದಾರೆ, ಹಿಂಸಾಚಾರಕ್ಕೆ ಪ್ರಚೋದನೆಗೆ ನೇರ ಸಂಪರ್ಕವಿಲ್ಲದ “ಸಾಮಾನ್ಯ ಆರೋಪ” ಗಳ ಕುರಿತು ಪೊಲೀಸರು ವಿಪರೀತ ತಲೆ ಕೆಡಿಸಿಕೊಂಡಿದ್ದಾರೆ, ಅದಕ್ಕೆ ಪ್ರಭುತ್ವದ ಒತ್ತಡವೇ ಕಾರಣವಾಗಿದೆ.

ಆರ್ಟಿಕಲ್ 14 ಪೋರ್ಟಲ್ ದತ್ತಸಂಚಯವು ಪ್ರಸ್ತುತ ಬಿಜೆಪಿ ಸರ್ಕಾರದ ಅಡಿಯಲ್ಲಿ ಆರು ವರ್ಷಗಳಲ್ಲಿ ದಾಖಲಾದ 519 ದೇಶದ್ರೋಹ ಪ್ರಕರಣಗಳನ್ನು ಕಂಡುಹಿಡಿದಿದೆ. ಹಿಂದಿನ ಯುಪಿಎ -2 ಸರ್ಕಾರದ ಅವಧಿಯಲ್ಲಿ 2010 ಮತ್ತು ಮೇ 2014 ರ ನಡುವೆ ದಾಖಲಾದ 279 ಪ್ರಕರಣಗಳಿಗೆ ಹೋಲಿಸಿದರೆ, ಇದು ದುಪ್ಪಟ್ಟಾಗಿದೆ.

ಕಳೆದ ಒಂದು ದಶಕದಲ್ಲಿ ದೇಶದ್ರೋಹದ ಆರೋಪ ಹೊತ್ತಿರುವ 10,938 ಭಾರತೀಯರಲ್ಲಿ, 65% ಜನರು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇ 2014 ರ ನಂತರ ಈ ಆರೋಪಕ್ಕೆ ಗುರಿಯಾಗಿದ್ದಾರೆ, ಅವರ ವಿರುದ್ಧ ಯಾವುದೇ ಪ್ರಬಲ ಸಾಕ್ಷ್ಯಗಳೇ ಇಲ್ಲ. 2014 ರಿಂದ ಪ್ರತಿವರ್ಷ ಪ್ರಕರಣಗಳ ಸಂಖ್ಯೆ 28% ಹೆಚ್ಚುತ್ತಿದೆ.

2019 ರ ಡಿಸೆಂಬರ್‌ನಲ್ಲಿ ಮೋದಿ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದ ನಂತರ ಇಂತಹ ಪ್ರವೃತ್ತಿ ಹೆಚ್ಚು ಗೋಚರಿಸುತ್ತಿದೆ. ದೇಶಾದ್ಯಂತ ಪೊಲೀಸ್ ಅಧಿಕಾರಿಗಳು 3,754 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ 25 ದೇಶದ್ರೋಹ ಪ್ರಕರಣಗಳನ್ನು ದಾಖಲಿಸಿದ್ದಾರೆ, ಅದರಲ್ಲಿ 96 ಜನರನ್ನು ಗುರುತಿಸಲಾಗಿದೆ ಮತ್ತು ಉಳಿದವುಗಳಲ್ಲಿ ಆರೋಪಿಗಳನ್ನೇ “ಗುರುತಿಸಲಾಗಿಲ್ಲ ”. 25 ಪ್ರಕರಣಗಳಲ್ಲಿ 22 ಪ್ರಕರಣಗಳು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿವೆ. ಸಾರ್ವಜನಿಕರ ಆಕ್ರೋಶದ ನಂತರ, ಜಾರ್ಖಂಡ್ ಸರ್ಕಾರವು ಧನ್ಬಾದ್ ಪೊಲೀಸರು ಸೆಕ್ಷನ್ 124 ಎ ಅಡಿಯಲ್ಲಿ ಪ್ರಕರಣ ದಾಖಲಾಗಿರುವ 3,000 ವ್ಯಕ್ತಿಗಳ ವಿರುದ್ಧ ಆರೋಪಗಳನ್ನು ಕೈಬಿಡಲು ಶಿಫಾರಸು ಮಾಡಿತ್ತು.

ಘೋಷಣೆಗಳು ಸರ್ಕಾರಕ್ಕೆ ಯಾವುದೇ ಬೆದರಿಕೆಯಲ್ಲ

1962ರ ಕೇದಾರ್ ನಾಥ್ ಸಿಂಗ್ ಮತ್ತು 1995 ರ ಬಲ್ವಂತ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಘೋಷಣೆ ಕೂಗುವುದು ಭಾರತ ಸರ್ಕಾರಕ್ಕೆ ಯಾವುದೇ ಅಪಾಯ ಉಂಟು ಮಾಡದು’ ಎಂದು ಪ್ರತಿಪಾದಿಸಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಘೋಷಣೆಗಳನ್ನು ಕೂಗಿದ್ದಕ್ಕಾಗಿ 1984 ರಲ್ಲಿ ಪೊಲೀಸರು ದೇಶದ್ರೋಹ ಮತ್ತು ಐಪಿಸಿಯ ಸೆಕ್ಷನ್ 153 ಎ ಆರೋಪದ ಮೇಲೆ ಬಲ್ವಂತ್ ಸಿಂಗ್ ಮತ್ತು ಭೂಪಿಂದರ್ ಸಿಂಗ್ ಅವರನ್ನು ಬಂಧಿಸಿದ್ದರು. “ಅಂತಹ ಪ್ರಾಸಂಗಿಕ ಘೋಷಣೆಗಳನ್ನು ಕೂಗುವುದು ಅಪರಾಧವಲ್ಲ. ಬೇರೆ ಯಾವುದೇ ಅಪರಾಧ ಕೃತ್ಯವಿಲ್ಲದೆ ಘೋಷಣೆ ಕೂಗಿದ ಮಾತ್ರಕ್ಕೆ ದೇಶದ್ರೋಹ ಅಥವಾ 153 ಎ ಅನ್ನು ಸಮರ್ಥಿಸಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಇಬ್ಬರೂ ಖುಲಾಸೆಗೊಂಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ದೇಶದ್ರೋಹ: ನ್ಯಾಯಾಂಗ ಮಾರ್ಗಸೂಚಿಗಳು

ದೇಶದ್ರೋಹ ಪ್ರಕರಣಗಳಲ್ಲಿ ಮಾರ್ಗಸೂಚಿಗಳನ್ನು ಸುಪ್ರೀಂಕೋರ್ಟ್ ಸೂಚಿಸಿದೆ. ಅಸೀಮ್ ತ್ರಿವೇದಿ ಪ್ರಕರಣದ ನಂತರ ಇಂತಹ ಮಾರ್ಗಸೂಚಿಗಳನ್ನು ಕೋರ್ಟ್ ಪುನರುಚ್ಛರಿಸುತ್ತಲೇ ಇದೆ. ಕಾರ್ಟೂನಿಸ್ಟ್ ಆಗಿದ್ದ ಅಸೀಮ್ ತ್ರಿವೇದಿಯವರ ಮೇಲೆ, ಕಾಂಗ್ರೆಸ್-ಎನ್‌ಸಿಪಿ ಸರ್ಕಾರವು 2012 ರಲ್ಲಿ ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ದೇಶದ್ರೋಹದ ಆರೋಪ ಹೊರಿಸಿತ್ತು.. ತ್ರಿವೇದಿ ಅವರ ಬಂಧನದ ವಿರುದ್ಧ ವ್ಯಾಪಕ ಸಾರ್ವಜನಿಕ ಪ್ರತಿರೋಧ ವ್ಯಕ್ತವಾಗಿತ್ತು. ಅದೇ ವರ್ಷ ಅವರ ವಿರುದ್ಧ ದೇಶದ್ರೋಹದ ಆರೋಪಗಳನ್ನು ಕೈಬಿಡಲಾಯಿತು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದ್ರೋಹದ ಪ್ರಕರಣಗಳು ಹೆಚ್ಚಿವೆ ಮತ್ತು ಮೋದಿ, ಯೋಗಿ ಅಥವಾ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕಾಗಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಧೀಶ ದೀಪಕ್ ಗುಪ್ತಾ ದೇಶದ್ರೋಹ ಕಾನೂನನ್ನು ರದ್ದು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(ಆಧಾರ: ದಿ ಕ್ವಿಂಟ್, ಸ್ಕ್ರೋಲ್, ಆರ್ಟಿಕಲ್ 14 ಮತ್ತು ಇತರ ಮೂಲಗಳು)


ಇದನ್ನೂ ಓದಿ: ಸರ್ಕಾರದಿಂದ ದೇಶದ್ರೋಹ ಕಾನೂನು ದುರುಪಯೋಗ, ಅದನ್ನು ರದ್ದುಗೊಳಿಸಬೇಕು : ನಿವೃತ್ತ ಸುಪ್ರೀಂ ನ್ಯಾಯಾಧೀಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...