Homeಚಳವಳಿ2 ನಿಮಿಷದ ಕಿರುಚಿತ್ರ ದೂಸ್ರಾ: CAA-NRC-NPR ವಿರುದ್ಧ ಸಂದೇಶ ಸಾರಿದ ಇರ್ಫಾನ್-ಪಾ.ರಂಜಿತ್ ಜೋಡಿ

2 ನಿಮಿಷದ ಕಿರುಚಿತ್ರ ದೂಸ್ರಾ: CAA-NRC-NPR ವಿರುದ್ಧ ಸಂದೇಶ ಸಾರಿದ ಇರ್ಫಾನ್-ಪಾ.ರಂಜಿತ್ ಜೋಡಿ

ನೀವು ನಿರಂತರವಾಗಿ ನಮ್ಮನ್ನು ಬೇಟೆಯಾಡಬಹದು, ಆದರೆ ನಿಮ್ಮ ಕಾರಾಗೃಹಗಳು ಸಾಕಾಗುವುದಿಲ್ಲ. ನಿಮ್ಮ ದುಷ್ಟ ಸರಪಳಿಗಳು ಮುರಿದುಬಿದ್ದಾಗ, ನ್ಯಾಯದ ಸಮಯ ಆಗಮಿಸುತ್ತದೆ. 

- Advertisement -
- Advertisement -

ಇಬ್ಬರು ಮುಸ್ಲಿಂ ಯುವಕರು ಕ್ರಿಕೆಟ್ ಆಡಲು ಬಹುದೂರದಿಂದ ಓಡೋಡಿ ಬಂದು ಮೈದಾನ ಸೇರುತ್ತಾರೆ. ಆದರೆ ಅಲ್ಲಿದ್ದ ತಂಡದ ನಾಯಕ ಅವರ ಧರ್ಮದ ಕಾರಣಕ್ಕೆ ಅವರನ್ನು ಆಟಕ್ಕೆ ಸೇರಿಸಿಕೊಳ್ಳುವುದಿಲ್ಲ. ‘ನೀನು ಕೆಲದಿನ ಇಲ್ಲದಿದ್ದಾಗ ಇವರೊಡನೆ ನಾವು ಆಡಿದ್ದೇವೆ’ ಎಂದು ಸಹ ಆಟಗಾರ ನಾಯಕನಿಗೆ ತಿಳಿಸುತ್ತಾನೆ. ಆಗ ನಾಯಕ, ‘ಯಾರನ್ನು ಕೇಳಿ ಸೇರಿಸಿಕೊಂಡಿರಿ? ಈ ಈಡಿಯಟ್‌ಗಳಿಗೆ ಅವಕಾಶವಿಲ್ಲ, ಇಲ್ಲಿಂದ ಹೊರದಬ್ಬಿರಿ’ ಎಂದು ಕೆಟ್ಟದಾಗಿ ಬೈಯ್ಯುತ್ತಾನೆ. ನಂತರ ಆಟ ಮುಂದುವರೆಸಿದಾಗ ನಾಯಕ ದೂಸ್ರಾ ಬೌಲ್‌ಗೆ ಸಿಕ್ಸರ್ ಎತ್ತಲು ಪ್ರಯತ್ನಿಸುತ್ತಾನೆ, ಆದರೆ ಮೈದಾನಕ್ಕೆ ಬಂದ 45-50 ವರ್ಷದ ಒಬ್ಬ ಮುಸ್ಲಿಂ ವ್ಯಕ್ತಿ ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯುತ್ತಾನೆ. ಆತನ ಹಿಂದೆ 20ಕ್ಕೂ ಹೆಚ್ಚು ಎಲ್ಲಾ ಧರ್ಮದ ಯುವಕರು, ಮಕ್ಕಳು ಒಟ್ಟುಗೂಡಿರುತ್ತಾರೆ. ‘REACT ON EXCLUSION’ (ಹೊರಗಿಡುವಿಕೆಗೆ ಪ್ರತಿಕ್ರಿಯೆ) ಎಂಬ ಅಕ್ಷರಗಳು ಪರದೆಯ ಮೇಲೆ ಮೂಡುತ್ತವೆ. “ತಾರತಮ್ಯವೆಣಿಸುವ ಎಲ್ಲಾ ಕಾಯ್ದೆಗಳ ವಿರುದ್ಧ ಹೋರಾಟ, “NO CAA NRC NPR” ಎಂಬ ಸಂದೇಶದೊಂದಿಗೆ ದೂಸ್ರಾ ಕಿರುಚಿತ್ರ ಮುಕ್ತಾಯವಾಗುತ್ತದೆ.

ಇದು ಸಂವೇದನಾವೇದಿ ಮತ್ತು ಪಾ.ರಂಜಿತ್‌ರವರ ನೀಲಂ ಬ್ಯಾನರ್‌ನಡಿ ನಿರ್ಮಾಣಗೊಂಡ, ಇರ್ಫಾನ್ ಹದಿ ನಿರ್ದೇಶನದ ಕೇವಲ 2 ನಿಮಿಷದ ದೂಸ್ರಾ ಎಂಬ ಹಿಂದಿ ಕಿರುಚಿತ್ರ. ರೈತರೊಂದಿಗೆ ಐಕ್ಯಮತ್ಯ (In Solidarity with Farmers) ಎಂಬ ಆರಂಭಿಕ ಸಾಲುಗಳೊಂದಿಗೆ ಆರಂಭವಾಗುವ ಈ ಕಿರುಚಿತ್ರದಲ್ಲಿ ಕೇವಲ ಎರಡೇ ನಿಮಿಷದಲ್ಲಿ ನಿರ್ದೇಶಕರು ದಾಟಿಸಬೇಕಾದ ಸಂದೇಶವನ್ನು ಪರಿಣಾಮಕಾರಿಯಾಗಿ ಮುಟ್ಟಿಸಿದ್ದಾರೆ. ಕಳೆದ ವರ್ಷ ಭಾರೀ ಪ್ರತಿಭಟನೆಗೆ ಗುರಿಯಾದ ಪೌರತ್ವ ತಿದ್ದಪಡಿ ಕಾಯ್ದೆ, ರಾಷ್ಟ್ರೀಯ ನಾಗರೀಕ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಳಿಗೆ ಪ್ರತಿರೋಧವಾಗಿ ಇದು ಮೂಡಿಬಂದಿದೆ.

ನಮ್ಮ ಸ್ವಂತ ಮಣ್ಣಿನಲ್ಲಿ ಬದುಕುಳಿಯಲು ಹೋರಾಡಬೇಕಿದೆ.

ಜನರ ನಂಬಿಕೆ ಮತ್ತು ಚರ್ಮದಿಂದ ಅವರ ಸ್ವಾತಂತ್ರ್ಯವನ್ನು ನಿರ್ಧರಿಸಲಾಗುತ್ತಿದೆ.

ನೀವು ನಿರಂತರವಾಗಿ ನಮ್ಮನ್ನು ಬೇಟೆಯಾಡಬಹದು, ಆದರೆ ನಿಮ್ಮ ಕಾರಾಗೃಹಗಳು ಸಾಕಾಗುವುದಿಲ್ಲ.

ನಿಮ್ಮ ದುಷ್ಟ ಸರಪಳಿಗಳು ಮುರಿದುಬಿದ್ದಾಗ, ನ್ಯಾಯದ ಸಮಯ ಆಗಮಿಸುತ್ತದೆ. 

ಈ ಪರಿಣಾಮಕಾರಿ ಸಂದೇಶದೊಂದಿಗೆ ಕಿರುಚಿತ್ರ ಅಂತ್ಯಗೊಂಡಿದೆ. ದೇಶಾದ್ಯಂತ ಭಾರೀ ಪ್ರತಿಭಟನೆಗಳಿಗೆ ಕಾರಣವಾದ ಆ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರ 2021ರ ಜನವರಿಯಿಂದ ಜಾರಿಗೊಳಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ.

ಕಿರು ಚಿತ್ರದ ‘ದೂಸ್ರಾ’ ಹೆಸರೇ ಅರ್ಥಗರ್ಭಿತವಾಗಿದೆ. ಇದಕ್ಕೆ ಹಿಂದಿಯಲ್ಲಿ ಎರಡನೆಯ ಅಥವಾ ಇತರ ಎನ್ನುವ ಅರ್ಥ ಬರುತ್ತದೆ. ಹಾಗಾಗಿ ದೇಶದಲ್ಲಿನ ಅಲ್ಪಸಂಖ್ಯಾತರನ್ನು ಈ ಕಾಯ್ದೆಗಳ ಮೂಲಕ ಎರಡನೇ ದರ್ಜೆಯ ಪ್ರಜೆಗಳಾಗಿ ನೋಡಲಾಗುತ್ತದೆ ಎಂದು ಅರ್ಥೈಸಬಹುದು. ಅದೇ ರೀತಿಯಲ್ಲಿ ಈ ಚಿತ್ರದಲ್ಲಿ ಕ್ರಿಕೆಟ್ ಆಟವನ್ನು ಸಾಂಕೇತಿಕವಾಗಿ ತೋರಿಸಲಾಗಿದೆ. ಕ್ರಿಕೆಟ್‌ ಪರಿಭಾಷೆಯಲ್ಲಿ ದೂಸ್ರಾ ಎಂದರೆ ಆಫ್‌ ಸ್ಪಿನ್ನರ್ ಬೌಲರ್‌ ಪ್ರಯೋಗಿಸುವ ವಿಭಿನ್ನ ಬೌಲ್. ದೂಸ್ರಾ ಬೌಲ್ ಆಫ್ ಬ್ರೇಕ್‌ಗೆ (ಆಫ್-ಸ್ಪಿನ್ನರ್‌ನ ಸಾಮಾನ್ಯ ಎಸೆತ) ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ, ಮತ್ತು ಬ್ಯಾಟ್ಸ್‌ಮನ್‌ನನ್ನು ಕಳಪೆ ಶಾಟ್ ಆಡುವಂತೆ ಗೊಂದಲಗೊಳಿಸುವ ಗುರಿ ಹೊಂದಿರುತ್ತದೆ. ಈ ಚಿತ್ರದಲ್ಲಿ ತಂಡದ ನಾಯಕ ಸಹ ದೂಸ್ರಾ ಬೌಲ್‌ಗೆ ಔಟಾಗುತ್ತಾರೆ. ಹಾಗೆಯೇ ಕೇಂದ್ರ ಸರ್ಕಾರ ಸಹ ಈ ಕಾಯ್ದೆಗಳನ್ನು ತಂದಲ್ಲಿ ಬಹುಜನರ ದೂಸ್ರಾ ದಾಳಿಗೆ ತತ್ತರಿಸುವುದು ಖ‍ಚಿತ ಎಂಬುದಾಗಿ ಕೂಡ ಅರ್ಥ ಮಾಡಿಕೊಳ್ಳಬಹುದಾಗಿದೆ.

ಪಾ ರಂಜಿತ್ ತಳಸಮುದಾಯದ, ಜಾತಿಯತೆಯ ವಿಷಯಗಳನ್ನು ಸಂಕೇತಗಳ ಮೂಲಕ ಮುಖ್ಯವಾಹಿನಿ ಸಿನಿಮಾದಲ್ಲಿ ತೋರಿಸುವುದರಲ್ಲಿ ನಿಸ್ಸೀಮರು. ಇದನ್ನು ಅವರ ನಿರ್ದೇಶನದ ಕಾಲಾ, ಕಬಾಲಿ, ಮದ್ರಾಸ್ ಮತ್ತು ಅಟ್ಟಕತ್ತಿಗಳಲ್ಲಿ, ಅವರ ನಿರ್ಮಾಣದ ಪರಿಯುರಮ್ ಪೆರುಮಾಳ್, ಗುಂಡು ಚಿತ್ರಗಳಲ್ಲಿ ಕಾಣಬಹುದು. ಅವರೀಗ ತಮ್ಮ ನೀಲಂ ಪ್ರೊಡಕ್ಷನ್ ಮೂಲಕ ಯೂಟ್ಯೂಬ್‌ನಲ್ಲಿ ಅಂಬೇಡ್ಕರ್, ಪೆರಿಯಾರ್ ಕುರಿತು, ಜಾತಿ-ಲಿಂಗ ತಾರತಮ್ಯದ ವಿಷಯಗಳನ್ನು ಪರಿಣಾಮಕಾರಿಯಾಗಿ ಹೇಳುತ್ತಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ಈ ಕಿರುಚಿತ್ರವಾಗಿದೆ.

ನಿನ್ನೆ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡಿರುವ ಸಂವೇದನಾವೇದಿ ನಿರ್ಮಾಣದ ಕೇವಲ ಎರಡು ನಿಮಿಷದ ‘ದೂಸ್ರಾ’ ನೋಡಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...