Homeಚಳವಳಿ2 ನಿಮಿಷದ ಕಿರುಚಿತ್ರ ದೂಸ್ರಾ: CAA-NRC-NPR ವಿರುದ್ಧ ಸಂದೇಶ ಸಾರಿದ ಇರ್ಫಾನ್-ಪಾ.ರಂಜಿತ್ ಜೋಡಿ

2 ನಿಮಿಷದ ಕಿರುಚಿತ್ರ ದೂಸ್ರಾ: CAA-NRC-NPR ವಿರುದ್ಧ ಸಂದೇಶ ಸಾರಿದ ಇರ್ಫಾನ್-ಪಾ.ರಂಜಿತ್ ಜೋಡಿ

ನೀವು ನಿರಂತರವಾಗಿ ನಮ್ಮನ್ನು ಬೇಟೆಯಾಡಬಹದು, ಆದರೆ ನಿಮ್ಮ ಕಾರಾಗೃಹಗಳು ಸಾಕಾಗುವುದಿಲ್ಲ. ನಿಮ್ಮ ದುಷ್ಟ ಸರಪಳಿಗಳು ಮುರಿದುಬಿದ್ದಾಗ, ನ್ಯಾಯದ ಸಮಯ ಆಗಮಿಸುತ್ತದೆ. 

- Advertisement -
- Advertisement -

ಇಬ್ಬರು ಮುಸ್ಲಿಂ ಯುವಕರು ಕ್ರಿಕೆಟ್ ಆಡಲು ಬಹುದೂರದಿಂದ ಓಡೋಡಿ ಬಂದು ಮೈದಾನ ಸೇರುತ್ತಾರೆ. ಆದರೆ ಅಲ್ಲಿದ್ದ ತಂಡದ ನಾಯಕ ಅವರ ಧರ್ಮದ ಕಾರಣಕ್ಕೆ ಅವರನ್ನು ಆಟಕ್ಕೆ ಸೇರಿಸಿಕೊಳ್ಳುವುದಿಲ್ಲ. ‘ನೀನು ಕೆಲದಿನ ಇಲ್ಲದಿದ್ದಾಗ ಇವರೊಡನೆ ನಾವು ಆಡಿದ್ದೇವೆ’ ಎಂದು ಸಹ ಆಟಗಾರ ನಾಯಕನಿಗೆ ತಿಳಿಸುತ್ತಾನೆ. ಆಗ ನಾಯಕ, ‘ಯಾರನ್ನು ಕೇಳಿ ಸೇರಿಸಿಕೊಂಡಿರಿ? ಈ ಈಡಿಯಟ್‌ಗಳಿಗೆ ಅವಕಾಶವಿಲ್ಲ, ಇಲ್ಲಿಂದ ಹೊರದಬ್ಬಿರಿ’ ಎಂದು ಕೆಟ್ಟದಾಗಿ ಬೈಯ್ಯುತ್ತಾನೆ. ನಂತರ ಆಟ ಮುಂದುವರೆಸಿದಾಗ ನಾಯಕ ದೂಸ್ರಾ ಬೌಲ್‌ಗೆ ಸಿಕ್ಸರ್ ಎತ್ತಲು ಪ್ರಯತ್ನಿಸುತ್ತಾನೆ, ಆದರೆ ಮೈದಾನಕ್ಕೆ ಬಂದ 45-50 ವರ್ಷದ ಒಬ್ಬ ಮುಸ್ಲಿಂ ವ್ಯಕ್ತಿ ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯುತ್ತಾನೆ. ಆತನ ಹಿಂದೆ 20ಕ್ಕೂ ಹೆಚ್ಚು ಎಲ್ಲಾ ಧರ್ಮದ ಯುವಕರು, ಮಕ್ಕಳು ಒಟ್ಟುಗೂಡಿರುತ್ತಾರೆ. ‘REACT ON EXCLUSION’ (ಹೊರಗಿಡುವಿಕೆಗೆ ಪ್ರತಿಕ್ರಿಯೆ) ಎಂಬ ಅಕ್ಷರಗಳು ಪರದೆಯ ಮೇಲೆ ಮೂಡುತ್ತವೆ. “ತಾರತಮ್ಯವೆಣಿಸುವ ಎಲ್ಲಾ ಕಾಯ್ದೆಗಳ ವಿರುದ್ಧ ಹೋರಾಟ, “NO CAA NRC NPR” ಎಂಬ ಸಂದೇಶದೊಂದಿಗೆ ದೂಸ್ರಾ ಕಿರುಚಿತ್ರ ಮುಕ್ತಾಯವಾಗುತ್ತದೆ.

ಇದು ಸಂವೇದನಾವೇದಿ ಮತ್ತು ಪಾ.ರಂಜಿತ್‌ರವರ ನೀಲಂ ಬ್ಯಾನರ್‌ನಡಿ ನಿರ್ಮಾಣಗೊಂಡ, ಇರ್ಫಾನ್ ಹದಿ ನಿರ್ದೇಶನದ ಕೇವಲ 2 ನಿಮಿಷದ ದೂಸ್ರಾ ಎಂಬ ಹಿಂದಿ ಕಿರುಚಿತ್ರ. ರೈತರೊಂದಿಗೆ ಐಕ್ಯಮತ್ಯ (In Solidarity with Farmers) ಎಂಬ ಆರಂಭಿಕ ಸಾಲುಗಳೊಂದಿಗೆ ಆರಂಭವಾಗುವ ಈ ಕಿರುಚಿತ್ರದಲ್ಲಿ ಕೇವಲ ಎರಡೇ ನಿಮಿಷದಲ್ಲಿ ನಿರ್ದೇಶಕರು ದಾಟಿಸಬೇಕಾದ ಸಂದೇಶವನ್ನು ಪರಿಣಾಮಕಾರಿಯಾಗಿ ಮುಟ್ಟಿಸಿದ್ದಾರೆ. ಕಳೆದ ವರ್ಷ ಭಾರೀ ಪ್ರತಿಭಟನೆಗೆ ಗುರಿಯಾದ ಪೌರತ್ವ ತಿದ್ದಪಡಿ ಕಾಯ್ದೆ, ರಾಷ್ಟ್ರೀಯ ನಾಗರೀಕ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಳಿಗೆ ಪ್ರತಿರೋಧವಾಗಿ ಇದು ಮೂಡಿಬಂದಿದೆ.

ನಮ್ಮ ಸ್ವಂತ ಮಣ್ಣಿನಲ್ಲಿ ಬದುಕುಳಿಯಲು ಹೋರಾಡಬೇಕಿದೆ.

ಜನರ ನಂಬಿಕೆ ಮತ್ತು ಚರ್ಮದಿಂದ ಅವರ ಸ್ವಾತಂತ್ರ್ಯವನ್ನು ನಿರ್ಧರಿಸಲಾಗುತ್ತಿದೆ.

ನೀವು ನಿರಂತರವಾಗಿ ನಮ್ಮನ್ನು ಬೇಟೆಯಾಡಬಹದು, ಆದರೆ ನಿಮ್ಮ ಕಾರಾಗೃಹಗಳು ಸಾಕಾಗುವುದಿಲ್ಲ.

ನಿಮ್ಮ ದುಷ್ಟ ಸರಪಳಿಗಳು ಮುರಿದುಬಿದ್ದಾಗ, ನ್ಯಾಯದ ಸಮಯ ಆಗಮಿಸುತ್ತದೆ. 

ಈ ಪರಿಣಾಮಕಾರಿ ಸಂದೇಶದೊಂದಿಗೆ ಕಿರುಚಿತ್ರ ಅಂತ್ಯಗೊಂಡಿದೆ. ದೇಶಾದ್ಯಂತ ಭಾರೀ ಪ್ರತಿಭಟನೆಗಳಿಗೆ ಕಾರಣವಾದ ಆ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರ 2021ರ ಜನವರಿಯಿಂದ ಜಾರಿಗೊಳಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ.

ಕಿರು ಚಿತ್ರದ ‘ದೂಸ್ರಾ’ ಹೆಸರೇ ಅರ್ಥಗರ್ಭಿತವಾಗಿದೆ. ಇದಕ್ಕೆ ಹಿಂದಿಯಲ್ಲಿ ಎರಡನೆಯ ಅಥವಾ ಇತರ ಎನ್ನುವ ಅರ್ಥ ಬರುತ್ತದೆ. ಹಾಗಾಗಿ ದೇಶದಲ್ಲಿನ ಅಲ್ಪಸಂಖ್ಯಾತರನ್ನು ಈ ಕಾಯ್ದೆಗಳ ಮೂಲಕ ಎರಡನೇ ದರ್ಜೆಯ ಪ್ರಜೆಗಳಾಗಿ ನೋಡಲಾಗುತ್ತದೆ ಎಂದು ಅರ್ಥೈಸಬಹುದು. ಅದೇ ರೀತಿಯಲ್ಲಿ ಈ ಚಿತ್ರದಲ್ಲಿ ಕ್ರಿಕೆಟ್ ಆಟವನ್ನು ಸಾಂಕೇತಿಕವಾಗಿ ತೋರಿಸಲಾಗಿದೆ. ಕ್ರಿಕೆಟ್‌ ಪರಿಭಾಷೆಯಲ್ಲಿ ದೂಸ್ರಾ ಎಂದರೆ ಆಫ್‌ ಸ್ಪಿನ್ನರ್ ಬೌಲರ್‌ ಪ್ರಯೋಗಿಸುವ ವಿಭಿನ್ನ ಬೌಲ್. ದೂಸ್ರಾ ಬೌಲ್ ಆಫ್ ಬ್ರೇಕ್‌ಗೆ (ಆಫ್-ಸ್ಪಿನ್ನರ್‌ನ ಸಾಮಾನ್ಯ ಎಸೆತ) ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ, ಮತ್ತು ಬ್ಯಾಟ್ಸ್‌ಮನ್‌ನನ್ನು ಕಳಪೆ ಶಾಟ್ ಆಡುವಂತೆ ಗೊಂದಲಗೊಳಿಸುವ ಗುರಿ ಹೊಂದಿರುತ್ತದೆ. ಈ ಚಿತ್ರದಲ್ಲಿ ತಂಡದ ನಾಯಕ ಸಹ ದೂಸ್ರಾ ಬೌಲ್‌ಗೆ ಔಟಾಗುತ್ತಾರೆ. ಹಾಗೆಯೇ ಕೇಂದ್ರ ಸರ್ಕಾರ ಸಹ ಈ ಕಾಯ್ದೆಗಳನ್ನು ತಂದಲ್ಲಿ ಬಹುಜನರ ದೂಸ್ರಾ ದಾಳಿಗೆ ತತ್ತರಿಸುವುದು ಖ‍ಚಿತ ಎಂಬುದಾಗಿ ಕೂಡ ಅರ್ಥ ಮಾಡಿಕೊಳ್ಳಬಹುದಾಗಿದೆ.

ಪಾ ರಂಜಿತ್ ತಳಸಮುದಾಯದ, ಜಾತಿಯತೆಯ ವಿಷಯಗಳನ್ನು ಸಂಕೇತಗಳ ಮೂಲಕ ಮುಖ್ಯವಾಹಿನಿ ಸಿನಿಮಾದಲ್ಲಿ ತೋರಿಸುವುದರಲ್ಲಿ ನಿಸ್ಸೀಮರು. ಇದನ್ನು ಅವರ ನಿರ್ದೇಶನದ ಕಾಲಾ, ಕಬಾಲಿ, ಮದ್ರಾಸ್ ಮತ್ತು ಅಟ್ಟಕತ್ತಿಗಳಲ್ಲಿ, ಅವರ ನಿರ್ಮಾಣದ ಪರಿಯುರಮ್ ಪೆರುಮಾಳ್, ಗುಂಡು ಚಿತ್ರಗಳಲ್ಲಿ ಕಾಣಬಹುದು. ಅವರೀಗ ತಮ್ಮ ನೀಲಂ ಪ್ರೊಡಕ್ಷನ್ ಮೂಲಕ ಯೂಟ್ಯೂಬ್‌ನಲ್ಲಿ ಅಂಬೇಡ್ಕರ್, ಪೆರಿಯಾರ್ ಕುರಿತು, ಜಾತಿ-ಲಿಂಗ ತಾರತಮ್ಯದ ವಿಷಯಗಳನ್ನು ಪರಿಣಾಮಕಾರಿಯಾಗಿ ಹೇಳುತ್ತಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ಈ ಕಿರುಚಿತ್ರವಾಗಿದೆ.

ನಿನ್ನೆ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡಿರುವ ಸಂವೇದನಾವೇದಿ ನಿರ್ಮಾಣದ ಕೇವಲ ಎರಡು ನಿಮಿಷದ ‘ದೂಸ್ರಾ’ ನೋಡಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...