Homeಅಂತರಾಷ್ಟ್ರೀಯgaza ceasefire: ಹಮಾಸ್‌ ಸೆರೆಯಿಂದ 471 ದಿನಗಳ ನಂತರ 3 ಇಸ್ರೇಲಿ ಮಹಿಳೆಯರು ಮನೆಗೆ: ಅವರು ಯಾರು? 

gaza ceasefire: ಹಮಾಸ್‌ ಸೆರೆಯಿಂದ 471 ದಿನಗಳ ನಂತರ 3 ಇಸ್ರೇಲಿ ಮಹಿಳೆಯರು ಮನೆಗೆ: ಅವರು ಯಾರು? 

- Advertisement -
- Advertisement -

ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದವು ಭಾನುವಾರ ಜಾರಿಗೆ ಬಂದಿದ್ದು, ಪ್ಯಾಲೆಸ್ತೀನ್ ಪ್ರತಿರೋಧ ಸಂಘಟನೆಯು ಕದನ ವಿರಾಮ ಒಪ್ಪಂದದ ಮೊದಲ ದಿನದಂದು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತು. ಹಾಗಾಗಿ 471 ದಿನಗಳ ಕಾಲ ಸೆರೆಯಲ್ಲಿದ್ದ ಮೂವರು ಮಹಿಳೆಯರು ಗಾಜಾದಿಂದ ಹೊರಬಂದಿದ್ದಾರೆ.

ಹಮಾಸ್ ತನ್ನ ಚೌಕಾಶಿಯನ್ನು ಕೊನೆಗೊಳಿಸುತ್ತಿದ್ದಂತೆ ರೋಮಿ ಗೊನೆನ್, ಎಮಿಲಿ ಡಮರಿ ಮತ್ತು ಡೊರೊನ್ ಸ್ಟೈನ್‌ಬ್ರೆಚರ್ ತಮ್ಮ ಪ್ರೀತಿಯ ಕುಟುಂಬಗಳಿಗೆ ಮರಳಿದರು. ಪ್ರತಿಯಾಗಿ, ಇಸ್ರೇಲ್ 90 ಪ್ಯಾಲೆಸ್ತೀನ್‌ನ ಕೈದಿಗಳು ಮತ್ತು ಬಂಧಿತರನ್ನು ಬಿಡುಗಡೆ ಮಾಡಿತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ

ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲಿನ ದಾಳಿಯಲ್ಲಿ ಹಮಾಸ್ ಸುಮಾರು 250 ಜನರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಮಾಡಿತ್ತು. ಹಾಗಾಗಿ ಗಾಜಾದಲ್ಲಿ ಕಳೆದ 15 ತಿಂಗಳಿನಿಂದ ಇಸ್ರೇಲ್ ನರಮೇಧ ನಡೆಸಿ ಸುದೀರ್ಘ ಯುದ್ಧಕ್ಕೆ ಮುಂದಾಗಿತ್ತು.

ಈ 15 ತಿಂಗಳ ನಡುವೆ ಅನೇಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು, ರಕ್ಷಿಸಲಾಯಿತು ಅಥವಾ ಅವರ ಶವಗಳನ್ನು ಮರುಪಡೆಯಲಾಯಿತು, ಅದಾಗ್ಯೂ, ಸುಮಾರು 100 ಜನರು ಹಮಾಸ್‌ನ ಸೆರೆಯಲ್ಲಿಯೇ ಇದ್ದರು.

ಮೂವರು ಮಹಿಳೆಯರ ಮನೆಗೆ ಮರಳುವಿಕೆ
ರೋಮಿ ಗೊನೆನ್
2023ರ ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್‌ನಲ್ಲಿ ನಡೆದ ನೋವಾ ಸಂಗೀತ ಉತ್ಸವದಿಂದ 24 ವರ್ಷದ ಇಸ್ರೇಲಿ ಮಹಿಳೆಯನ್ನು ಹಮಾಸ್ ಅಪಹರಿಸಲಾಯಿತು.

ರೋಮಿ ಆ ದಿನದ ಬೆಳಿಗ್ಗೆ ಸುಮಾರು ಐದು ಗಂಟೆಗಳ ಕಾಲ ತನ್ನ ತಾಯಿ ಮೆರಾವ್ ಮತ್ತು ಅವಳ ಹಿರಿಯ ಸಹೋದರಿಯೊಂದಿಗೆ ಮಾತನಾಡುತ್ತಾ ಕಳೆದರು.

ರಸ್ತೆಗಳು ಕೈಬಿಟ್ಟ ಕಾರುಗಳಿಂದ ನಿರ್ಬಂಧಿಸಲ್ಪಟ್ಟಿರುವುದರಿಂದ ಅಲ್ಲಿಂದ ತಪ್ಪಿಸಿಕೊಳ್ಳಲು ಅಸಾಧ್ಯವಾಗಿತ್ತು ಎಂದು ರೋಮಿ ತನ್ನ ಕುಟುಂಬಕ್ಕೆ ತಿಳಿಸಿದ್ದಳು. ಪೊದೆಗಳಲ್ಲಿ ಎಲ್ಲೋ ಅಡಗಿಕೊಳ್ಳುವುದಾಗಿ ಅವಳು ತನ್ನ ಕುಟುಂಬಕ್ಕೆ ಹೇಳಿದಳು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ತಿಳಿಸಿದೆ.

ಮುಂದುವರಿದ ಮಾತುಗಳು ರೋಮಿಯ ತಾಯಿಯನ್ನು ಇನ್ನೂ ಭಯಭೀತಗೊಳಿಸುತ್ತವೆ.  “ಅಮ್ಮಾ ನನಗೆ ಗುಂಡು ಹಾರಿಸಲಾಯಿತು, ಕಾರಿಗೆ ಗುಂಡು ಹಾರಿಸಲಾಯಿತು, ಎಲ್ಲರಿಗೂ ಗುಂಡು ಹಾರಿಸಲಾಯಿತು. … ನನಗೆ ಗಾಯವಾಗಿದೆ ಮತ್ತು ರಕ್ತಸ್ರಾವವಾಗುತ್ತಿದೆ. ಅಮ್ಮ, ನಾನು ಸಾಯುತ್ತೇನೆ ಎಂದು ನಾನು ಭಾವಿಸುತ್ತೇನೆ.” ಎಂದು ರೋಮಿ ತಿಳಿಸಿದ್ದಳು.

ಆ ಪರಿಸ್ಥಿತಿಯಲ್ಲಿ, ರೋಮಿ ತಾಯಿ ಮೆರಾವ್ ತನ್ನ ಮಗಳನ್ನು ಶಾಂತಗೊಳಿಸಲು ಪ್ರಯತ್ನಿಸಿದಳು, ಅವಳು ಸಾಯುವುದಿಲ್ಲ ಎಂದು ಮನವೊಲಿಸಿದಳು. ಅವಳು ತನ್ನ ಗಾಯಗೊಂಡ ಸ್ನೇಹಿತರಿಗೆ ಚಿಕಿತ್ಸೆ ನೀಡಲು ಹೇಳಿದಳು.

ಗುಂಡಿನ ಚಕಮಕಿ ಹತ್ತಿರವಾಗುತ್ತಿದ್ದಂತೆ ಮತ್ತು ಪುರುಷರ ಕೂಗುಗಳು ಇತರ ಎಲ್ಲಾ ಶಬ್ದಗಳು ಸೇರಿದಾಗ  ರೋಮಿಯ ಕೊನೆಯ ಪದವು ಒಂದು ಕಿರುಚಾಟವಾಗಿತ್ತು: ಅದು “ಅಮ್ಮ!” ಎಂದಾಗಿತ್ತು ಎಂದು ಮೆರಾವ್ ಹೇಳಿದ್ದರು.

ಇದರ ನಂತರ, ಫೋನ್ ಆಫ್ ಆಯಿತು. ಕಳೆದ 15 ತಿಂಗಳುಗಳಲ್ಲಿ ಮೆರಾವ್ ನಿರಂತರವಾಗಿ ಇಸ್ರೇಲಿ ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಂಡಿದ್ದಾರೆ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಒತ್ತೆಯಾಳುಗಳ ಮರಳುವಿಕೆಗಾಗಿ ಪ್ರತಿಪಾದಿಸಿದ್ದಾರೆ. ಅವರು ಹಲವಾರು ವಿದೇಶ ಪ್ರವಾಸ ಮಾಡಿದ್ದಾರೆ.

“ಜಗತ್ತು ಮರೆಯದಂತೆ ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ” ಎಂದು ಅವರು ಹಮಾಸ್ ದಾಳಿಯ ಆರು ತಿಂಗಳ ವಾರ್ಷಿಕೋತ್ಸವದಂದು ಎಪಿಗೆ ತಿಳಿಸಿದ್ದರು.  “ಪ್ರತಿದಿನ ನಾವು ಎಚ್ಚರಗೊಂಡು ದೊಡ್ಡ ಉಸಿರು, ಆಳವಾದ ಉಸಿರನ್ನು ತೆಗೆದುಕೊಳ್ಳುತ್ತೇವೆ ಮತ್ತು ನಡೆಯುವುದನ್ನು ಮುಂದುವರಿಸುತ್ತೇವೆ, ಅವಳನ್ನು ಮರಳಿ ತರುವ ಕೆಲಸಗಳನ್ನು ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಮೆರಾವ್ ಆಗ ಹೇಳಿದ್ದರು.

ಎಮಿಲಿ ಡಮರಿ
28 ವರ್ಷದ ಬ್ರಿಟಿಷ್-ಇಸ್ರೇಲಿ ಪ್ರಜೆ ಎಮಿಲಿ ಡಮರಿ ಅವರನ್ನು ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಸಮಯದಲ್ಲಿ ತೀವ್ರವಾಗಿ ಹಲ್ಲೆಗೊಳಗಾದ ಕೃಷಿ ಗ್ರಾಮವಾದ ಕಿಬ್ಬುಟ್ಜ್ ಕ್ಫರ್ ಅಜಾದಲ್ಲಿರುವ ಅವರ ಅಪಾರ್ಟ್ಮೆಂಟ್ ನಿಂದಲೇ ಅಪಹರಿಸಲಾಯಿತು.

ಭಾನುವಾರ ಕದನ ವಿರಾಮ ಒಪ್ಪಂದದ ಭಾಗವಾಗಿ ತನ್ನ ಮಗಳನ್ನು ಬಿಡುಗಡೆ ಮಾಡಿದ ನಂತರ, ಮ್ಯಾಂಡಿ “ತನ್ನ ಹೆಸರನ್ನು ಹೇಳುವುದನ್ನು ಎಂದಿಗೂ ನಿಲ್ಲಿಸದ” ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದರು, 471 ದಿನಗಳ ನಂತರ ಎಮಿಲಿ “ಅಂತಿಮವಾಗಿ ಮನೆಗೆ ಬಂದಿದ್ದಾಳೆ” ಎಂದು ಹೇಳಿದರು.

ಡೊರೊನ್ ಸ್ಟೈನ್ಬ್ರೆಚರ್
ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ 31 ವರ್ಷದ ಪಶುವೈದ್ಯಕೀಯ ನರ್ಸ್ ಡೊರೊನ್ ಸ್ಟೈನ್ಬ್ರೆಚರ್, ಕಿಬ್ಬುಟ್ಜ್ ಕ್ಫರ್ ಅಜಾದಲ್ಲಿ ಎಮಿಲಿ ಡಮರಿಯ ನೆರೆಹೊರೆಯವರಾಗಿದ್ದರು. ಅವರು ಇಸ್ರೇಲಿ ಮತ್ತು ರೊಮೇನಿಯನ್ ಪ್ರಜೆ.

ಅಕ್ಟೋಬರ್ 7, 2023 ರ ಬೆಳಿಗ್ಗೆ, ಸುಮಾರು 10:20 ಗಂಟೆಗೆ, ಡೊರೊನ್ ತನ್ನ ತಾಯಿಗೆ ಕರೆ ಮಾಡಿ ತಾನು ಭಯಭೀತಳಾಗಿದ್ದೇನೆ ಎಂದು ಹೇಳಿದರು. “ನಾನು ಹಾಸಿಗೆಯ ಕೆಳಗೆ ಅಡಗಿಕೊಂಡಿದ್ದೇನೆ ಮತ್ತು ಅವರು ನನ್ನ ಅಪಾರ್ಟ್ಮೆಂಟ್ಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ನಾನು ಕೇಳುತ್ತೇನೆ” ಎಂದು ಅವಳ ಸಹೋದರ ಡೋರ್ ಅವರು ಹೇಳಿದ್ದನ್ನು ನೆನಪಿಸಿಕೊಂಡರು.

ಅವಳು ತನ್ನ ಸ್ನೇಹಿತರಿಗೆ ಧ್ವನಿ ಟಿಪ್ಪಣಿಯನ್ನು ಕಳುಹಿಸಲು ಸಹ ಸಾಧ್ಯವಾಯಿತು. ಮತ್ತು ಅವಳ ಅಪಹರಣದ ಕ್ಷಣಗಳಲ್ಲಿ, ಅವಳು “ಅವರು ನನ್ನನ್ನು ಬಂಧಿಸಿದ್ದಾರೆ! ಅವರು ನನ್ನನ್ನು ಬಂಧಿಸಿದ್ದಾರೆ! ಅವರು ನನ್ನನ್ನು ಬಂಧಿಸಿದ್ದಾರೆ!” ಎಂದು ಕೂಗಿದಳು.

ಜನವರಿ 26, 2024 ರಂದು ಹಮಾಸ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಡೋರನ್ ಮತ್ತು ಇಬ್ಬರು ಮಹಿಳಾ ಇಸ್ರೇಲಿ ಸೈನಿಕರು ಕಾಣಿಸಿಕೊಂಡಿದ್ದಾರೆ. ಆಕೆಯ ಸಹೋದರ ಈ ವೀಡಿಯೊವು ಆಕೆ ಇನ್ನೂ ಜೀವಂತವಾಗಿದ್ದಾಳೆ ಎಂಬ ಭರವಸೆಯ ಕಿರಣ ಎಂದು ಹೇಳಿದ್ದರು.

ಹಮಾಸ್ ಅಕ್ಟೋಬರ್ 7, 2023ರಂದು 64 ಜನರು ಮತ್ತು 22 ಸೈನಿಕರನ್ನು ಕೊಂದಿತ್ತು ಮತ್ತು  ಕಿಬ್ಬುಟ್ಜ್ ಕ್ಫರ್ ಅಜಾದಿಂದ 19 ಜನರನ್ನು ಅಪಹರಿಸಿತ್ತು. ಡೋರನ್ ಮತ್ತು ಎಮಿಲಿ ಸ್ವದೇಶಕ್ಕೆ ಮರಳುವುದರೊಂದಿಗೆ, ಕಿಬ್ಬುಟ್ಜ್‌ನ ಇನ್ನೂ ಮೂವರು ಸದಸ್ಯರು ಗಾಜಾದಲ್ಲಿ ಸೆರೆಯಲ್ಲಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಮೊದಲ ಹಂತವು ಒಟ್ಟು 33 ಒತ್ತೆಯಾಳುಗಳ ಬಿಡುಗಡೆಗೆ ಸಾಕ್ಷಿಯಾಗಲಿದೆ.

ಭಾನುವಾರ ಕದನ ವಿರಾಮ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು 2014 ರ ಹಮಾಸ್‌ನೊಂದಿಗಿನ ಯುದ್ಧದಲ್ಲಿ ಕೊಲ್ಲಲ್ಪಟ್ಟ ಮತ್ತು ಅಂದಿನಿಂದ ಹಮಾಸ್ ಹಿಡಿದಿಟ್ಟುಕೊಂಡಿದ್ದ ಓರಾನ್ ಶೌಲ್ ಎಂಬ ಸೈನಿಕನ ದೇಹವನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಘೋಷಿಸಿತ್ತು.

35 ಜನರ ಕೊಂದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಚೀನಾ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...