Homeಮುಖಪುಟಪುಲ್ವಾಮ ದಾಳಿ ಕುರಿತು ಸತ್ಯಪಾಲ್ ಮಲಿಕ್‌ರವರ 5 ಗಂಭೀರ ಆರೋಪಗಳು: ಪ್ರಧಾನಿಯನ್ನು ಪ್ರಶ್ನಿಸದವರು ಪಾಕಿಸ್ತಾನಕ್ಕೆ ಹೋಗಿ

ಪುಲ್ವಾಮ ದಾಳಿ ಕುರಿತು ಸತ್ಯಪಾಲ್ ಮಲಿಕ್‌ರವರ 5 ಗಂಭೀರ ಆರೋಪಗಳು: ಪ್ರಧಾನಿಯನ್ನು ಪ್ರಶ್ನಿಸದವರು ಪಾಕಿಸ್ತಾನಕ್ಕೆ ಹೋಗಿ

ದುರಂತವೆಂದರೆ ಈ ‘ಬ್ರೇಕಿಂಗ್ ನ್ಯೂಸ್’ ಅನ್ನು ಯಾವ ಮುಖ್ಯವಾಹಿನಿಯ ಮಾಧ್ಯಮಗಳೂ ‘ಕನಿಷ್ಠಪಕ್ಷ ನ್ಯೂಸ್’ ಮಾಡುತ್ತಿಲ್ಲ. ಆದರೂ ಈ ವಿಚಾರ ಬೂದಿಯಲ್ಲಿ ಮುಚ್ಚಿ ಹೋಗುವಂತದ್ದಲ್ಲ.

- Advertisement -
- Advertisement -

ಜಮ್ಮು-ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರು ‘ದಿ ವೈರ್’ ನಡೆಸಿದ ಸಂದರ್ಶನದಲ್ಲಿ ಕರಣ್ ಥಾಪರ್ ಪ್ರಶ್ನೆಗಳಿಗೆ ನೀಡಿರುವ ಮಾಹಿತಿ ಇಡೀ ಭಾರತವನ್ನೇ ದಂಗು ಬಡಿಸಿದೆ. ಹೌದು, ಭಾರತದ ಯೋಧರು ಫುಲ್ವಾಮ ಬಳಿ ಉಗ್ರರ ದಾಳಿಗೆ ಹತರಾಗಿದ್ದರು. ಭಾರತೀಯರ ನೆಮ್ಮದಿಗಾಗಿ ಹಗಲೂರಾತ್ರಿ ಗಡಿಗಳಲ್ಲಿ ಚಳಿ, ಮಳೆ, ಗಾಳಿ, ಬಿಸಿಲೆನ್ನದೆ ದುಡಿಯುವ 40 ಯೋಧರ ದೇಹದ ಭಾಗಗಳೂ ಸಿಗದಂತೆ ಸೂಸೈಡ್ ಬಾಂಬರ್ ಉಗ್ರನೊಬ್ಬ ಆಸ್ಪೋಟಿಸಿದ್ದನು. ಕುಟುಂಬದವರಿಗೆ ತಮ್ಮ ಮನೆ ಮಗನ ಮುಖ ನೋಡಲೂ ಆಗಲಿಲ್ಲ. ಆ ಪಾಪಿ ಉಗ್ರ ಸ್ಪೋಟಕ ಬಾಂಬ್ ಅನ್ನು ಯೋಧರ ಹತ್ತಿರದವರೆಗೂ ಹೇಗೆ ತಂದನು? ಆ ಸ್ಪೋಟಕಗಳನ್ನು ಎಲ್ಲಿಂದ, ಹೇಗೆ ತಂದನು? ಎಂಬ ಪ್ರಶ್ನೆಗಳನ್ನು ಕೇಳಿದವರನ್ನು ದೇಶದ್ರೋಹಿಗಳೆಂದರು. ಇರಲಿ ಅದೆಲ್ಲವನ್ನೂ ಮರೆತುಬಿಡೋಣ. ಆ 40 ಯೋಧರ ಪ್ರಾಣ ಹಾಗೂ ಆ ಕುಟುಂಬಗಳ ಕಣ್ಣೀರ ಮುಂದೆ ನಮ್ಮನ್ನು ನಿಂದಿಸಿದ್ದು ಯಾವ ಲೆಕ್ಕ?

ಗವರ್ನರ್ ಸತ್ಯಪಾಲ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಸರ್ಕಾರದ ಮೇಲೆ ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಅವುಗಳನ್ನೊಮ್ಮೆ ನೋಡೋಣ.

1. ಪುಲ್ವಾಮ ದಾಳಿ ನಡೆದ ದಿನ ಅಂದರೆ ಫೆಬ್ರವರಿ 14, 2019 ಕ್ಕೂ ಮುಂಚೆ ಜಮ್ಮು-ಕಾಶ್ಮೀರದ ಹಳ್ಳಿಗಳಲ್ಲಿ ರಸ್ತೆಯ ಮೇಲೆ ಸುಮಾರು 10 ರಿಂದ 12 ದಿನಗಳವರೆಗೆ 300 ಕೆ.ಜಿ. ಆರ್.ಡಿ.ಎಕ್ಸ್ ಬಾಂಬ್ ಅನ್ನು ಇರಿಸಿಕೊಂಡು ಉಗ್ರ ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದನು.

2. ಪುಲ್ವಾಮ ಮಾರ್ಗವಾಗಿ ರಸ್ತೆಯ ಮೂಲಕ ಪ್ರಯಾಣ ಬೆಳೆಸಿದ್ದ ಯೋಧರ ತಂಡವು ಮೊದಲು ಮೋದಿಯವರ ಸರ್ಕಾರವನ್ನು ಗೃಹ ಇಲಾಖೆಯ ಮೂಲಕ ಸಂಪರ್ಕಿಸಿ ಸ್ಥಳಾಂತರಕ್ಕಾಗಿ ‘5 ವಿಮಾನಗಳನ್ನು’  ನೀಡಬೇಕೆಂದು ಕೇಳಿಕೊಂಡಿತ್ತು. ಅಷ್ಟೂ ಯೋಧರನ್ನು ಸ್ಥಳಾಂತರಿಸಲು 5 ಹೆಲಿಕಾಪ್ಟರ್‌ಗಳು ಸಾಕಾಗಿದ್ದವು. ಆದರೆ ದುರಂತವೆಂದರೆ ರಾಜನಾಥ್ ಸಿಂಗ್ ನೇತೃತ್ವದ ಗೃಹ ಇಲಾಖೆಯು ಹೆಲಿಕಾಪ್ಟರ್ ನೀಡಲು ನಿರಾಕರಿಸಿತು. ಇದರ ಪರಿಣಾಮದಿಂದಾಗಿ ಪುಲ್ವಾಮ ರಸ್ತೆಯಲ್ಲಿ 40 ಯೋಧರು ಬರುವಂತಾಯಿತು.

3. ಯೋಧರು ಸಂಚರಿಸುತ್ತಿದ್ದ ಆ ಪುಲ್ವಾಮ ರಸ್ತೆಯಲ್ಲಿ 8 ರಿಂದ 10 ಲಿಂಕ್ ರಸ್ತೆಗಳಿವೆ. ಯೋಧರು ಪಯಣಿಸುವಾಗ ಈ ಲಿಂಕ್ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ತಡೆಗಟ್ಟಿ ನಿಲ್ಲಿಸುವ ಅಥವಾ ತಪಾಸಣೆ ಮಾಡುವ ವ್ಯವಸ್ಥೆ ಸಹಜವಾಗಿ ಇರುತ್ತದೆ. ಆದರೆ ದಾಳಿ ನಡೆದ ದಿನದಂದು ಲಿಂಕ್ ರಸ್ತೆಗಳ ಬಳಿ ತಪಾಸಣೆ ನಡೆಸುವ ಒಬ್ಬರೂ ಇರಲಿಲ್ಲ. ಅಷ್ಟೂ ಲಿಂಕ್ ರಸ್ತೆಗಳು ಮುಕ್ತವಾಗಿದ್ದವು.

4. ಈ ವಿಷಯವನ್ನು ತಿಳಿಸಲು ಅಂದಿನ ಜಮ್ಮು-ಕಾಶ್ಮೀರ್ ಗವರ್ನರ್ ಆಗಿದ್ದ ಸತ್ಯಪಾಲ್ ಮಲಿಕ್ ಪ್ರಧಾನಿ ಮೋದಿಯವರಿಗೆ ಕರೆ ಮಾಡಿದಾಗ ಪ್ರಧಾನಿಗಳು ಉತ್ತರಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್‌ನಲ್ಲಿ ಡಿಸ್ಕವರಿ ಚಾನಲ್‌ನ ‘ಮ್ಯಾನ್ ವರ್ಸಸ್ ವೈಲ್ಡ್’ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಫುಲ್ವಾಮಾ ಧಾಳಿ ಅಪರಾಹ್ನ 3:15 ರ ಸುಮಾರಿಗೆ ನಡೆದಿತ್ತು. ಮೋದಿಯವರು ರಾತ್ರಿ ಸುಮಾರು 7:00 ಗಂಟೆಗೆ ಸಂಪರ್ಕಕ್ಕೆ ಬಂದು ವಿಚಾರಿಸಿದರು. ಆಗ ಸತ್ಯಪಾಲ್ ಮಲಿಕ್, ‘ಇದೆಲ್ಲವೂ ನಮ್ಮ ಸರ್ಕಾರದ ಕರ್ತವ್ಯ ಲೋಪದಿಂದ ಆಗಿದೆ. ಗುಪ್ತಚರ ಇಲಾಖೆ, ಗೃಹ ಇಲಾಖೆಯ ವೈಫಲ್ಯದಿಂದ ಈ ಅನಾಹುತ ಸಂಭವಿಸಿದೆ’ ಎಂದು ಹೇಳಿದಾಗ ಪ್ರಧಾನಿ ಮೋದಿಯವರು ‘ಈ ವಿಷಯದ ಬಗ್ಗೆ ತುಟಿ ಬಿಚ್ಚಬೇಡ’ ಎಂದು ಅವರಿಗೆ ಹೇಳಿದರಂತೆ.

5. ಮೋದಿ ಸರ್ಕಾರ ಇದನ್ನು ಮುಚ್ಚಿಟ್ಟಿದ್ದಕ್ಕೆ ಬೇರೆಯದೇ ಕಾರಣವಿರುತ್ತದೆ ಎಂದ ಮಲಿಕ್ ಯಾವುದಕ್ಕೆಂದು ನೇರವಾಗಿ ಬಾಯಿಬಿಟ್ಟಿಲ್ಲ. ಆದರೆ ಆಗ 2019 ರ ಲೋಕಸಭಾ ಚುನಾವಣೆ ಇತ್ತೆಂಬುದನ್ನು ಎಲ್ಲರಿಗೂ ಗೊತ್ತಿರುವ ವಿಷಯ.

6. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಬಳಿಯೂ ಇದರ ಬಗ್ಗೆ ಮಲಿಕ್ ಪ್ರಸ್ತಾಪ ಮಾಡಿದಾಗ ‘ಇದರ ಬಗ್ಗೆ ಮಾತಾಡಬೇಡ, ನಾವಲ್ಲಿಗೆ ಬಂದು ಸರಿಯಾದ ನಿರೂಪಣೆ ನೀಡುತ್ತೇವೆ’ ಎಂದಿದ್ದರಂತೆ.

ಈ ಮೇಲಿನ ಸತ್ಯಪಾಲ್ ಮಲಿಕ್ ನೀಡಿರುವ ಮಾಹಿತಿಯನ್ನು ಕೇಳಿಸಿಕೊಂಡವರಿಗೆ ಎದೆ ಜಲ್ಲೆನ್ನದೇ ಇರಲಾರದು. ಇವು ಹಾದಿ ಬೀದಿಯಲ್ಲಿ ಗಾಳಿ ಸುದ್ಧಿಗಳನ್ನು ಹರಡುವ ಪುಡಾರಿಯ ಮಾತುಗಳಲ್ಲ. ಮೋದಿಯವರ ಸರ್ಕಾರವೇ ನೇಮಿಸಿದ್ದ ಜಮ್ಮು-ಕಾಶ್ಮೀರದ ಅಂದಿನ ರಾಜ್ಯಪಾಲರ ಮಾತು. ಜಮ್ಮು-ಕಾಶ್ಮೀರದ 370 ರ ಸ್ಥಾನವನ್ನು ರದ್ದುಪಡಿಸಿದಾಗ ಇದೇ ರಾಜ್ಯಪಾಲರು ಅಲ್ಲಿದ್ದದ್ದು. ಅಲ್ಲದೆ ಅವರು ಬಿಜೆಪಿಯ ಹಿರಿಯ ಮುಖಂಡರು. ಹಾಗಾಗಿ ಈ ಆರೋಪಗಳನ್ನು ಅಷ್ಟು ಸುಲಭಕ್ಕೆ ತೆಗೆದು ಹಾಕುವಂತಿಲ್ಲ. ದುರಂತವೆಂದರೆ ಈ ‘ಬ್ರೇಕಿಂಗ್ ನ್ಯೂಸ್’ ಅನ್ನು ಯಾವ ಮುಖ್ಯವಾಹಿನಿಯ ಮಾಧ್ಯಮಗಳೂ ‘ಕನಿಷ್ಠಪಕ್ಷ ನ್ಯೂಸ್’ ಮಾಡುತ್ತಿಲ್ಲ. ಆದರೂ ಈ ವಿಚಾರ ಬೂದಿಯಲ್ಲಿ ಮುಚ್ಚಿ ಹೋಗುವಂತದ್ದಲ್ಲ.

ಭಾರತಾಂಬೆಯ ಬಗ್ಗೆ ಗೌರವ ಇರುವವರೆಲ್ಲರೂ ಯೋಧರ ಹೆಸರಿನಲ್ಲಿ ಗದ್ದುಗೆ ಹಿಡಿದ ಮೋದಿಯವರ ಸರ್ಕಾರವನ್ನು ಪ್ರಶ್ನೆ ಮಾಡಲೇ ಬೇಕಿದೆ. ಆಗ ಮಾತ್ರ ಭಾರತಾಂಬೆಯ ಮಕ್ಕಳಾಗಿ ಉಳಿಯಬಹುದಾಗಿದೆ. ಪ್ರಶ್ನೆ ಮಾಡಲು ಹಿಂಜರಿಯುವವರು ಪಾಕಿಸ್ತಾನಕ್ಕೆ ಹೋಗಬಹುದಾಗಿದೆ. ಆ 40 ಜೀವಗಳ ಆತ್ಮಗಳಿಗೆ ಶಾಂತಿ ಸಿಗಬೇಕೆಂದರೆ 300 ಕೆ.ಜಿ ಬಾಂಬ್ ಹೊತ್ತು ವಾರಗಟ್ಟಲೆ ಅಲೆದಾಡಿದ ಉಗ್ರನನ್ನು ತಪಾಸಣೆ ಮಾಡದೆ ತೆಪ್ಪಗಿದ್ದ ದೇಶದ್ರೋಹಿಗಳಿಗೆ ಶಿಕ್ಷೆಯಾಗಬೇಕು. ಆ 40 ಕುಟುಂಬಗಳ ಕಣ್ಣೀರಿಗೂ ಬೆಲೆ ಇದೆಯೆಂದಾದರೆ ಫುಲ್ವಾಮ ಲಿಂಕ್ ರಸ್ತೆಯನ್ನು ಮುಕ್ತವಾಗಿಟ್ಟ ದೇಶದ್ರೋಹಿಗಳಿಗೆ ಶಿಕ್ಷೆಯಾಗಬೇಕು. ಆ 40 ಜೀವಗಳ ನೆನೆದು ಕಣ್ಣೀರಾದ ಭಾರತಾಂಬೆಯ ಮಕ್ಕಳಿಗೆ ಸಮಾಧಾನವಾಗಬೇಕಾದರೆ ಹೆಲಿಕಾಪ್ಟರ್ ಕೊಡದ ಗೃಹ ಇಲಾಖೆಯ ಸಚಿವ ಮತ್ತು ಸಿಬ್ಬಂದಿಗಳಿಗೆ ಶಿಕ್ಷೆಯಾಗಬೇಕು. ಇದೆಲ್ಲಕ್ಕೂ ಮೊದಲು ಸತ್ಯಪಾಲ್ ಮಲಿಕ್ ಮಾಡಿರುವ ಆರೋಪಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯಿಸಬೇಕು. ತಮ್ಮ ಸರ್ಕಾರದ ಯಾವ ತಪ್ಪೂ ಇಲ್ಲವೆಂದು ಹೇಳಿದರೆ ಸಾಲದು, ವಿರೋಧ ಪಕ್ಷದ ಸದಸ್ಯರು ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ನೇಮಿಸಿ ಪುಲ್ವಾಮ ದಾಳಿಯ ತನಿಖೆ ಮಾಡಿಸಬೇಕು.

ಇದನ್ನೂ ಓದಿ: ಅದಾನಿ ಹಗರಣವು ಸಾಮಾನ್ಯ ಜನರನ್ನು ತಲುಪಿದರೆ ಬಿಜೆಪಿ ಕೆಟ್ಟದಾಗಿ ಸೋಲಲಿದೆ: ಸತ್ಯಪಾಲ್ ಮಲಿಕ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...