ಬಿಜೆಪಿ ಪಕ್ಷದ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ‘1000’ ಮತ್ತು ‘500’ ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿ ಇಂದಿಗೆ ಆರು ವರ್ಷ ಪೂರ್ಣಗೊಂಡಿವೆ. ಅಂದು ನೋಟ್ ಬ್ಯಾನ್ಗೆ ಹಲವಾರು ಕಾರಣಗಳು ಮತ್ತು ಸಮರ್ಥನೆಗಳನ್ನು ಪ್ರಧಾನಿ ನೀಡಿದ್ದರು.
2016 ರ ನವೆಂಬರ್ 8 ರ ರಾತ್ರಿ 08:15 ಕ್ಕೆ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು ತಡೆಗೆ ಹಾಗೂ ನಗದು ರಹಿತ ಆರ್ಥಿಕತೆಗೆ ಬೇಕಾಗಿ ‘1000’ ಮತ್ತು ‘500’ ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಹೇಳಿದ್ದರು.
ಆದರೆ, ಇವುಗಳಿಗೆ ವಿರುದ್ದವಾಗಿ ದೇಶದ ಬ್ಯಾಂಕುಗಳಲ್ಲಿ, ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಈ ಸಮಯದಲ್ಲಿ ಹಲವರು ಮೃತಪಟ್ಟರು. ತಮ್ಮ ಅಗತ್ಯಗಳಿಗೆ ಬೇಕಾದಷ್ಟು ಹಣವಿಲ್ಲದೆ ಜನರು ಪರದಾಡಬೇಕಾಯಿತು. ಬಡಜನತೆಯ ಅಸಹಾಯಕತೆಯಿಂದ ಅಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ನೋಡ ನೋಡುತ್ತಿದ್ದಂತೆ ದೇಶದಲ್ಲಿ ಮನುಷ್ಯ ನಿರ್ಮಿತ ದುರಂತವೊಂದು ನಡೆದೇ ಹೋಯಿತು.
ದೇಶವು ಮರೆಯಬಾರದ ದುರಂತವೊಂದರ ಚಿತ್ರಗಳು ಇಲ್ಲಿವೆ.
ಗುರ್ಗಾಂವ್ನ ಬ್ಯಾಂಕ್ನ ಹೊರಗೆ ಇದ್ದ ಸಾಲಿನಲ್ಲಿ ತನ್ನ ಸರತಿಯನ್ನು ಕಳೆದುಕೊಂಡ ಕಾರಣಕ್ಕೆ ವೃದ್ಧನೊಬ್ಬ ಅಳುತ್ತಿರುವ ದೃಶ್ಯ | PC: HTಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ನಿವಾಸಿಯಾದ ತೀರ್ಥಜಿ ದೇವಿ ತನ್ನ ಮತ್ತು ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಿದ್ದರು. ನೋಟು ಅಮಾನ್ಯೀಕರಣದ ಬಗ್ಗೆ ಮಾಹಿತಿ ತಿಳಿಯದೆ ನವೆಂಬರ್ 9 ರಂದು ತಮ್ಮ ಉಳಿತಾಯದಿಂದ ತಲಾ ಒಂದು ಸಾವಿರ ರೂಪಾಯಿಗಳ ನಾಲ್ಕು ನೋಟುಗಳನ್ನು ಠೇವಣಿ ಮಾಡಲು ಸೆಂಟ್ರಲ್ ಬ್ಯಾಂಕ್ಗೆ ತೆರಳಿದ್ದರು. ಬ್ಯಾಂಕಿನ ಹೊರಗಿದ್ದ ಜನರು 500-1000 ನೋಟುಗಳ ಅಮಾನ್ಯೀಕರಣದ ಬಗ್ಗೆ ತಿಳಿಸಿದಾಗ, ತನ್ನ ಸಂಪಾದನೆಯ ನಾಲ್ಕು ಸಾವಿರ ರೂಪಾಯಿ ವ್ಯರ್ಥವಾಯಿತು ಎಂದು ಮಹಿಳೆ ಭಾವಿಸಿ ತೀವ್ರ ಆಘಾತಕ್ಕೊಳಗಾಗಿ ಅಲ್ಲಿಯೇ ನಿಧನರಾದರು.ತನ್ನ ಹಣವನ್ನು ಬದಲಾಯಿಸಲು ಹೆಣಗಾಡುತ್ತಿರುವ ವೃದ್ಧ ಅಂಗವಿಕಲ ಮಹಿಳೆ.ನಗದು ಇಲ್ಲ ಎಂದು ಬೋರ್ಡ್ ಹಾಕಿದ ಬ್ಯಾಂಕಿನ ಮುಂದೆ ರೋಧಿಸುತ್ತಿರುವ ವೃದ್ದೆತನ್ನ ಹಣಕ್ಕಾಗಿ ಮೂತ್ರಚೀಲದೊಂದಿಗೆ ಬ್ಯಾಂಕಿಗೆ ಬಂದ ವೃದ್ಧ ರೋಗಿಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ನಿವಾಸಿಯಾದ ತೀರ್ಥಜಿ ದೇವಿ ತನ್ನ ಮತ್ತು ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಿದ್ದರು. ನೋಟು ಅಮಾನ್ಯೀಕರಣದ ಬಗ್ಗೆ ಮಾಹಿತಿ ತಿಳಿಯದೆ ನವೆಂಬರ್ 9 ರಂದು ತಮ್ಮ ಉಳಿತಾಯದಿಂದ ತಲಾ ಒಂದು ಸಾವಿರ ರೂಪಾಯಿಗಳ ನಾಲ್ಕು ನೋಟುಗಳನ್ನು ಠೇವಣಿ ಮಾಡಲು ಸೆಂಟ್ರಲ್ ಬ್ಯಾಂಕ್ಗೆ ತೆರಳಿದ್ದರು. ಬ್ಯಾಂಕಿನ ಹೊರಗಿದ್ದ ಜನರು 500-1000 ನೋಟುಗಳ ಅಮಾನ್ಯೀಕರಣದ ಬಗ್ಗೆ ತಿಳಿಸಿದಾಗ, ತನ್ನ ಸಂಪಾದನೆಯ ನಾಲ್ಕು ಸಾವಿರ ರೂಪಾಯಿ ವ್ಯರ್ಥವಾಯಿತು ಎಂದು ಮಹಿಳೆ ಭಾವಿಸಿ ತೀವ್ರ ಆಘಾತಕ್ಕೊಳಗಾಗಿ ಅಲ್ಲಿಯೇ ನಿಧನರಾದರು. ಅವರ ಸಾವಿಗೆ ರೋಧಿಸುತ್ತಿರುವ ಸಂಬಂಧಿಕರುತಮ್ಮ ಹಣಗಳ ಬಗ್ಗೆ ಚಿಂತಿತರಾಗಿರುವ ಜನರು
ಹಣ ಬದಲಾವಣೆಗೆ ಬಂದ ವೃದ್ದೆ
ವಿಡಿಯೊಗಳು
ಅಮಾಯಕ ಜನರ ಮೇಲೆ ಲಾಠಿ ಚಾರ್ಜ್
ಬ್ಯಾಂಕಗಳಲ್ಲಿನ ಪರಿಸ್ಥಿತಿ
ಬ್ಯಾಂಕಿನ ಮುಂದೆ ಜನರ ಸರತಿ ಸಾಲು
2016 ನವೆಂಬರ್ 13 ರಂದು ಗೋವಾದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಐವತ್ತು ದಿನಗಳ ಕಾಲಾವಕಾಶವನ್ನು ದೇಶದ ಜನತೆಯಿಂದ ಕೇಳಿದ್ದರು. ನಂತರವೂ ತಾವು ಕೈಗೊಂಡ ಕ್ರಮದಲ್ಲಿ ಲೋಪದೋಷಗಳಿದ್ದರೆ ದೇಶ ನೀಡುವ ಶಿಕ್ಷೆಗೆ ನಾನು ಸಿದ್ದನಿದ್ದೇನೆ ಎಂದು ಭಾವೋದ್ವೇಗದಿಂದ ಮಾತನಾಡಿದ್ದರು. ಆದರೆ ಇಂದಿಗೆ ನೋಟ್ ಬ್ಯಾನ್ ಆಗಿ ಆರು ವರ್ಷಗಳಾಯಿತು!.
ಒಪ್ಪಿಕೊಳ್ಳಲು ಹೇಗೆ ಸಾಧ್ಯ ನೋಟು ಅಮನಿಕರಣ ಆಗುವ ಮೊದಲೇ ಅವರ ಸ್ನೇಹಿತರ ಬಳಿ ನೂತನ ನೋಟುಗಳ ರಾಶಿ ಅವರ ಕೈ ಸೇರಿಸಿದ್ದರು. ಮತ್ತೆ ಅವರದ್ದೇ ಪಕ್ಷದ ನಾಯಕರು ಮುಖಂಡರು ಮೊದಲೇ ಅವರು ಹೊಸ ನೋಟುಗಳನ್ನು ಇಡಿದು ಪೋಟೋ ಕ್ಲಿಕಿಸಿದ್ದರು. ಅವರಿಗೆ ದೇಶದ ನಾಗರಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ಯಾವಾಗ ಈ ದೇಶದ ಸತ್ತ ಪ್ರಜೆಗಳಿಗೆ ಅವರ ನಾಟಕೀಯ ರಾಜಕೀಯ ಅರ್ಥ ವಾಗುವುದೋ ತಿಳಿಯದು. ಆದರೂ ಈ ಸತ್ತ ಪ್ರಜೆಗಳು ಅವರನ್ನೇ ಬೆಂಬಲಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಸತ್ತ ಪ್ರಜೆಗಳಿಗೆ ಬುದ್ದಿ ಬರಲ್ಲ. ಅವರು ಈ ನಾಟಕೀಯ ರಾಜಕೀಯ ನಿಲ್ಲಿಸಲ್ಲ. ಒಟ್ಟಿನಲ್ಲಿ ದೇಶದ ಪ್ರಗತಿ ಸ್ವಾತಂತ್ರ್ಯ ಪೂರ್ವಕ್ಕೆ ಮರಳುತ್ತಿದೆ. ಇದು ದುಃಖದ ಸಂಗತಿ
2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...
ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್ನಿಂದ...
ರಾಜಸ್ಥಾನದ ಹನುಮಾನ್ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...
ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...
ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...
ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...
ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...
ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ.
ದೆಹಲಿ ಪರಿಸರ ಸಚಿವ ಮಂಜಿಂದರ್...
ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್ಬಾಗ್ ಪೊಲೀಸ್...
ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...
ಒಪ್ಪಿಕೊಳ್ಳಲು ಹೇಗೆ ಸಾಧ್ಯ ನೋಟು ಅಮನಿಕರಣ ಆಗುವ ಮೊದಲೇ ಅವರ ಸ್ನೇಹಿತರ ಬಳಿ ನೂತನ ನೋಟುಗಳ ರಾಶಿ ಅವರ ಕೈ ಸೇರಿಸಿದ್ದರು. ಮತ್ತೆ ಅವರದ್ದೇ ಪಕ್ಷದ ನಾಯಕರು ಮುಖಂಡರು ಮೊದಲೇ ಅವರು ಹೊಸ ನೋಟುಗಳನ್ನು ಇಡಿದು ಪೋಟೋ ಕ್ಲಿಕಿಸಿದ್ದರು. ಅವರಿಗೆ ದೇಶದ ನಾಗರಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ಯಾವಾಗ ಈ ದೇಶದ ಸತ್ತ ಪ್ರಜೆಗಳಿಗೆ ಅವರ ನಾಟಕೀಯ ರಾಜಕೀಯ ಅರ್ಥ ವಾಗುವುದೋ ತಿಳಿಯದು. ಆದರೂ ಈ ಸತ್ತ ಪ್ರಜೆಗಳು ಅವರನ್ನೇ ಬೆಂಬಲಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಸತ್ತ ಪ್ರಜೆಗಳಿಗೆ ಬುದ್ದಿ ಬರಲ್ಲ. ಅವರು ಈ ನಾಟಕೀಯ ರಾಜಕೀಯ ನಿಲ್ಲಿಸಲ್ಲ. ಒಟ್ಟಿನಲ್ಲಿ ದೇಶದ ಪ್ರಗತಿ ಸ್ವಾತಂತ್ರ್ಯ ಪೂರ್ವಕ್ಕೆ ಮರಳುತ್ತಿದೆ. ಇದು ದುಃಖದ ಸಂಗತಿ