ಬಿಜೆಪಿ ಪಕ್ಷದ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ‘1000’ ಮತ್ತು ‘500’ ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿ ಇಂದಿಗೆ ಆರು ವರ್ಷ ಪೂರ್ಣಗೊಂಡಿವೆ. ಅಂದು ನೋಟ್ ಬ್ಯಾನ್ಗೆ ಹಲವಾರು ಕಾರಣಗಳು ಮತ್ತು ಸಮರ್ಥನೆಗಳನ್ನು ಪ್ರಧಾನಿ ನೀಡಿದ್ದರು.
2016 ರ ನವೆಂಬರ್ 8 ರ ರಾತ್ರಿ 08:15 ಕ್ಕೆ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು ತಡೆಗೆ ಹಾಗೂ ನಗದು ರಹಿತ ಆರ್ಥಿಕತೆಗೆ ಬೇಕಾಗಿ ‘1000’ ಮತ್ತು ‘500’ ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಹೇಳಿದ್ದರು.
ಆದರೆ, ಇವುಗಳಿಗೆ ವಿರುದ್ದವಾಗಿ ದೇಶದ ಬ್ಯಾಂಕುಗಳಲ್ಲಿ, ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಈ ಸಮಯದಲ್ಲಿ ಹಲವರು ಮೃತಪಟ್ಟರು. ತಮ್ಮ ಅಗತ್ಯಗಳಿಗೆ ಬೇಕಾದಷ್ಟು ಹಣವಿಲ್ಲದೆ ಜನರು ಪರದಾಡಬೇಕಾಯಿತು. ಬಡಜನತೆಯ ಅಸಹಾಯಕತೆಯಿಂದ ಅಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ನೋಡ ನೋಡುತ್ತಿದ್ದಂತೆ ದೇಶದಲ್ಲಿ ಮನುಷ್ಯ ನಿರ್ಮಿತ ದುರಂತವೊಂದು ನಡೆದೇ ಹೋಯಿತು.
ದೇಶವು ಮರೆಯಬಾರದ ದುರಂತವೊಂದರ ಚಿತ್ರಗಳು ಇಲ್ಲಿವೆ.
ಗುರ್ಗಾಂವ್ನ ಬ್ಯಾಂಕ್ನ ಹೊರಗೆ ಇದ್ದ ಸಾಲಿನಲ್ಲಿ ತನ್ನ ಸರತಿಯನ್ನು ಕಳೆದುಕೊಂಡ ಕಾರಣಕ್ಕೆ ವೃದ್ಧನೊಬ್ಬ ಅಳುತ್ತಿರುವ ದೃಶ್ಯ | PC: HTಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ನಿವಾಸಿಯಾದ ತೀರ್ಥಜಿ ದೇವಿ ತನ್ನ ಮತ್ತು ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಿದ್ದರು. ನೋಟು ಅಮಾನ್ಯೀಕರಣದ ಬಗ್ಗೆ ಮಾಹಿತಿ ತಿಳಿಯದೆ ನವೆಂಬರ್ 9 ರಂದು ತಮ್ಮ ಉಳಿತಾಯದಿಂದ ತಲಾ ಒಂದು ಸಾವಿರ ರೂಪಾಯಿಗಳ ನಾಲ್ಕು ನೋಟುಗಳನ್ನು ಠೇವಣಿ ಮಾಡಲು ಸೆಂಟ್ರಲ್ ಬ್ಯಾಂಕ್ಗೆ ತೆರಳಿದ್ದರು. ಬ್ಯಾಂಕಿನ ಹೊರಗಿದ್ದ ಜನರು 500-1000 ನೋಟುಗಳ ಅಮಾನ್ಯೀಕರಣದ ಬಗ್ಗೆ ತಿಳಿಸಿದಾಗ, ತನ್ನ ಸಂಪಾದನೆಯ ನಾಲ್ಕು ಸಾವಿರ ರೂಪಾಯಿ ವ್ಯರ್ಥವಾಯಿತು ಎಂದು ಮಹಿಳೆ ಭಾವಿಸಿ ತೀವ್ರ ಆಘಾತಕ್ಕೊಳಗಾಗಿ ಅಲ್ಲಿಯೇ ನಿಧನರಾದರು.ತನ್ನ ಹಣವನ್ನು ಬದಲಾಯಿಸಲು ಹೆಣಗಾಡುತ್ತಿರುವ ವೃದ್ಧ ಅಂಗವಿಕಲ ಮಹಿಳೆ.ನಗದು ಇಲ್ಲ ಎಂದು ಬೋರ್ಡ್ ಹಾಕಿದ ಬ್ಯಾಂಕಿನ ಮುಂದೆ ರೋಧಿಸುತ್ತಿರುವ ವೃದ್ದೆತನ್ನ ಹಣಕ್ಕಾಗಿ ಮೂತ್ರಚೀಲದೊಂದಿಗೆ ಬ್ಯಾಂಕಿಗೆ ಬಂದ ವೃದ್ಧ ರೋಗಿಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ನಿವಾಸಿಯಾದ ತೀರ್ಥಜಿ ದೇವಿ ತನ್ನ ಮತ್ತು ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಿದ್ದರು. ನೋಟು ಅಮಾನ್ಯೀಕರಣದ ಬಗ್ಗೆ ಮಾಹಿತಿ ತಿಳಿಯದೆ ನವೆಂಬರ್ 9 ರಂದು ತಮ್ಮ ಉಳಿತಾಯದಿಂದ ತಲಾ ಒಂದು ಸಾವಿರ ರೂಪಾಯಿಗಳ ನಾಲ್ಕು ನೋಟುಗಳನ್ನು ಠೇವಣಿ ಮಾಡಲು ಸೆಂಟ್ರಲ್ ಬ್ಯಾಂಕ್ಗೆ ತೆರಳಿದ್ದರು. ಬ್ಯಾಂಕಿನ ಹೊರಗಿದ್ದ ಜನರು 500-1000 ನೋಟುಗಳ ಅಮಾನ್ಯೀಕರಣದ ಬಗ್ಗೆ ತಿಳಿಸಿದಾಗ, ತನ್ನ ಸಂಪಾದನೆಯ ನಾಲ್ಕು ಸಾವಿರ ರೂಪಾಯಿ ವ್ಯರ್ಥವಾಯಿತು ಎಂದು ಮಹಿಳೆ ಭಾವಿಸಿ ತೀವ್ರ ಆಘಾತಕ್ಕೊಳಗಾಗಿ ಅಲ್ಲಿಯೇ ನಿಧನರಾದರು. ಅವರ ಸಾವಿಗೆ ರೋಧಿಸುತ್ತಿರುವ ಸಂಬಂಧಿಕರುತಮ್ಮ ಹಣಗಳ ಬಗ್ಗೆ ಚಿಂತಿತರಾಗಿರುವ ಜನರು
ಹಣ ಬದಲಾವಣೆಗೆ ಬಂದ ವೃದ್ದೆ
ವಿಡಿಯೊಗಳು
ಅಮಾಯಕ ಜನರ ಮೇಲೆ ಲಾಠಿ ಚಾರ್ಜ್
ಬ್ಯಾಂಕಗಳಲ್ಲಿನ ಪರಿಸ್ಥಿತಿ
ಬ್ಯಾಂಕಿನ ಮುಂದೆ ಜನರ ಸರತಿ ಸಾಲು
2016 ನವೆಂಬರ್ 13 ರಂದು ಗೋವಾದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಐವತ್ತು ದಿನಗಳ ಕಾಲಾವಕಾಶವನ್ನು ದೇಶದ ಜನತೆಯಿಂದ ಕೇಳಿದ್ದರು. ನಂತರವೂ ತಾವು ಕೈಗೊಂಡ ಕ್ರಮದಲ್ಲಿ ಲೋಪದೋಷಗಳಿದ್ದರೆ ದೇಶ ನೀಡುವ ಶಿಕ್ಷೆಗೆ ನಾನು ಸಿದ್ದನಿದ್ದೇನೆ ಎಂದು ಭಾವೋದ್ವೇಗದಿಂದ ಮಾತನಾಡಿದ್ದರು. ಆದರೆ ಇಂದಿಗೆ ನೋಟ್ ಬ್ಯಾನ್ ಆಗಿ ಆರು ವರ್ಷಗಳಾಯಿತು!.
ಒಪ್ಪಿಕೊಳ್ಳಲು ಹೇಗೆ ಸಾಧ್ಯ ನೋಟು ಅಮನಿಕರಣ ಆಗುವ ಮೊದಲೇ ಅವರ ಸ್ನೇಹಿತರ ಬಳಿ ನೂತನ ನೋಟುಗಳ ರಾಶಿ ಅವರ ಕೈ ಸೇರಿಸಿದ್ದರು. ಮತ್ತೆ ಅವರದ್ದೇ ಪಕ್ಷದ ನಾಯಕರು ಮುಖಂಡರು ಮೊದಲೇ ಅವರು ಹೊಸ ನೋಟುಗಳನ್ನು ಇಡಿದು ಪೋಟೋ ಕ್ಲಿಕಿಸಿದ್ದರು. ಅವರಿಗೆ ದೇಶದ ನಾಗರಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ಯಾವಾಗ ಈ ದೇಶದ ಸತ್ತ ಪ್ರಜೆಗಳಿಗೆ ಅವರ ನಾಟಕೀಯ ರಾಜಕೀಯ ಅರ್ಥ ವಾಗುವುದೋ ತಿಳಿಯದು. ಆದರೂ ಈ ಸತ್ತ ಪ್ರಜೆಗಳು ಅವರನ್ನೇ ಬೆಂಬಲಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಸತ್ತ ಪ್ರಜೆಗಳಿಗೆ ಬುದ್ದಿ ಬರಲ್ಲ. ಅವರು ಈ ನಾಟಕೀಯ ರಾಜಕೀಯ ನಿಲ್ಲಿಸಲ್ಲ. ಒಟ್ಟಿನಲ್ಲಿ ದೇಶದ ಪ್ರಗತಿ ಸ್ವಾತಂತ್ರ್ಯ ಪೂರ್ವಕ್ಕೆ ಮರಳುತ್ತಿದೆ. ಇದು ದುಃಖದ ಸಂಗತಿ
ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...
ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...
ವಿಬಿ ಜಿರಾಮ್ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...
ಏಪ್ರಿಲ್ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...
"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...
ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...
ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ.
ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...
'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...
ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....
ಒಪ್ಪಿಕೊಳ್ಳಲು ಹೇಗೆ ಸಾಧ್ಯ ನೋಟು ಅಮನಿಕರಣ ಆಗುವ ಮೊದಲೇ ಅವರ ಸ್ನೇಹಿತರ ಬಳಿ ನೂತನ ನೋಟುಗಳ ರಾಶಿ ಅವರ ಕೈ ಸೇರಿಸಿದ್ದರು. ಮತ್ತೆ ಅವರದ್ದೇ ಪಕ್ಷದ ನಾಯಕರು ಮುಖಂಡರು ಮೊದಲೇ ಅವರು ಹೊಸ ನೋಟುಗಳನ್ನು ಇಡಿದು ಪೋಟೋ ಕ್ಲಿಕಿಸಿದ್ದರು. ಅವರಿಗೆ ದೇಶದ ನಾಗರಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ಯಾವಾಗ ಈ ದೇಶದ ಸತ್ತ ಪ್ರಜೆಗಳಿಗೆ ಅವರ ನಾಟಕೀಯ ರಾಜಕೀಯ ಅರ್ಥ ವಾಗುವುದೋ ತಿಳಿಯದು. ಆದರೂ ಈ ಸತ್ತ ಪ್ರಜೆಗಳು ಅವರನ್ನೇ ಬೆಂಬಲಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಸತ್ತ ಪ್ರಜೆಗಳಿಗೆ ಬುದ್ದಿ ಬರಲ್ಲ. ಅವರು ಈ ನಾಟಕೀಯ ರಾಜಕೀಯ ನಿಲ್ಲಿಸಲ್ಲ. ಒಟ್ಟಿನಲ್ಲಿ ದೇಶದ ಪ್ರಗತಿ ಸ್ವಾತಂತ್ರ್ಯ ಪೂರ್ವಕ್ಕೆ ಮರಳುತ್ತಿದೆ. ಇದು ದುಃಖದ ಸಂಗತಿ