Homeಮುಖಪುಟಹಳ್ಳಿ ತಲುಪಲು 500 ಕಿ.ಮೀ. ಸೈಕಲ್ ಪ್ರಯಾಣ ಹೊರಟ 'ಲಕ್ಷ್ಮಿ'! : ಮೋದಿ ಪ್ಯಾಕೇಜ್‌ನಿಂದ ಪ್ರಯೋಜನವಿಲ್ಲ...

ಹಳ್ಳಿ ತಲುಪಲು 500 ಕಿ.ಮೀ. ಸೈಕಲ್ ಪ್ರಯಾಣ ಹೊರಟ ‘ಲಕ್ಷ್ಮಿ’! : ಮೋದಿ ಪ್ಯಾಕೇಜ್‌ನಿಂದ ಪ್ರಯೋಜನವಿಲ್ಲ ಎನ್ನುತ್ತಾರೆ.

- Advertisement -
- Advertisement -

ಪತಿ ಹಾಗೂ ಸಣ್ಣ ಮಗುವಿನೊಂದಿಗೆ ಲಕ್ನೋದಲ್ಲಿ ದಿನಗೂಲಿ ಕಾರ್ಮಿಕಳಾಗಿ ಜೀವನ ಸಾಗಿಸುತ್ತಿದ್ದ ಲಕ್ಷ್ಮಿ ಸಾಹು 500 ಕಿ.ಮೀ. ದೂರದ ಛತ್ತೀಸ್ ಗಡದ ತನ್ನ ಹಳ್ಳಿಗೆ ಸೈಕಲ್ ಮೂಲಕ ಹೊರಟಿದ್ದಾರೆ.

ಲಕ್ಷ್ಮಿ ಸಾಹು ಉತ್ತರಪ್ರದೇಶದ ರಾಜಧಾನಿಯಲ್ಲಿ ತನ್ನ ಪತಿಯೊಂದಿಗೆ ದೈನಂದಿನ ಕೂಲಿ ಕಾರ್ಮಿಕಳಾಗಿ ಜೀವನ ಸಾಗಿಸುತ್ತಿದ್ದರು. ದೇಶದಾದ್ಯಂತ ವರದಿಯಾದ ವಲಸೆ ಕಾರ್ಮಿಕರ ದುರಂತ ಕತೆಗಳ ನಡುವೆ ಸುರಕ್ಷಿತವಾಗಿ ಮನೆಗೆ ಸೇರುವುದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದಾಗಿ ಅವರು ಹೇಳುತ್ತಾರೆ.

“ಕೆಲಸವಿಲ್ಲದಿದ್ದಾಗ ಸಂತೋಷವಾಗಿರಲು ಹೇಗೆ ಸಾಧ್ಯ? ನಾನು ಕಾರ್ಮಿಕಳು ಉದ್ಯೋಗವಿಲ್ಲ … ಏನು ತಿನ್ನಲಿ? ಇದಕ್ಕಿಂತ ನನ್ನು ಹಳ್ಳಿಗೆ ಹಿಂತಿರುಗಿ ಹೊಲಗಳಲ್ಲಿ ಕೆಲಸ ಮಾಡುವುದು ಉತ್ತಮ” ಎಂದು ಅವರು ಹೇಳುತ್ತಾರೆ.

ಲಕ್ಷ್ಮಿ ಸಾಹು, ಅವರ ಪತಿ ಮತ್ತು ಅವರ ಚಿಕ್ಕ ಮಗು ಮಂಗಳವಾರ ರಾತ್ರಿಯಿಂದ ತಮ್ಮ ಗುಡಿಸಲಿನಿಂದ ಹೊರಟು, 70 ಕಿ.ಮೀ ದೂರದಲ್ಲಿರುವ ರಾಯ್ ಬರೇಲಿಯನ್ನು ತಲುಪಿದ್ದರು. ಅಲ್ಲಿ ಅವರು ಪತ್ರಕರ್ತರನ್ನು ಭೇಟಿಯಾಗುವಾಗ ಬಿಸಿಲಿಗೆ ಬಳಲಿ ಚಹಾ ಕುಡಿಯಲು ರಸ್ತೆಯ ಬದಿಯಲ್ಲಿ ಕುಳಿತಿದ್ದರು.

ಲಕ್ಷ್ಮಿ ಮತ್ತು ಅವರ ಕುಟುಂಬವು ತಮ್ಮ ಮುಂದಿನ ಪ್ರಯಾಣಕ್ಕಾಗಿ ತಯಾರಾಗುತ್ತಿದ್ದಂತೆ ಪತ್ರಕರ್ತರು ಪ್ರಧಾನ ಮಂತ್ರಿಯ ಪ್ಯಾಕೇಜಿನ ಪ್ರಯೋಜನಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

“ಅದರಿಂದ ಏನು ಪ್ರಯೋಜನ? ನಾವು ಇದ್ದಲ್ಲಿ ನಮಗೆ ಪಡಿತರ ಸಿಗಲಿಲ್ಲ. ನಾನು ಮೂರು ಪಡಿತರ ಅಂಗಡಿಗಳಿಗೆ ಹೋಗಿದ್ದೆ. ಎಲ್ಲರೂ ನನ್ನ ಆಧಾರ್ ಕೇಳಿದರು, ಯಾರೂ ನನಗೆ ಅಕ್ಕಿ ಕೊಟ್ಟಿಲ್ಲ. ಅವರು ನಮಗೆ ಮನೆಗೆ ಹೋಗಲು ಬಸ್ಸುಗಳನ್ನು ವ್ಯವಸ್ಥೆ ಮಾಡಿದ್ದರೆ ಚೆನ್ನಾಗಿತ್ತು. ಕನಿಷ್ಠ ಸರ್ಕಾರವು ನಮ್ಮನ್ನು ನೋಡಿಕೊಳ್ಳುತ್ತದೆ ಎಂದು ನಾವು ಹೇಳಬಹುದಿತ್ತು,” ಎಂದು ಹೇಳತ್ತಾರೆ.

ಪ್ರಧಾನಿ ಮೋದಿ “ಪ್ಯಾಕೇಜ್ … ಸಣ್ಣ ಉದ್ಯಮಗಳು, ಕಾರ್ಮಿಕರು, ರೈತರು, ಮಧ್ಯಮ ವರ್ಗ ಮತ್ತು ಗೃಹ ಕೈಗಾರಿಕೆಗಳಿಗೆ ಸಹಾಯ ಮಾಡುತ್ತದೆ. ಇದು ವಲಸೆ ಕಾರ್ಮಿಕರ ಯೋಗಕ್ಷೇಮದ ಮೇಲೆ  ಕೇಂದ್ರೀಕರಿಸುತ್ತದೆ” ಎಂದು ತಮ್ಮ ಭಾಷಣದಲ್ಲಿ ಹೇಳುತ್ತಾ “ಈ ಅವಧಿಯಲ್ಲಿ ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹೆಚ್ಚು ತೊಂದರೆ ಅನುಭವಿಸಿದ್ದಾರೆ. ಅವರಿಗಾಗಿ ಏನಾದರೂ ಮಾಡುವುದು ನಮ್ಮ ಕರ್ತವ್ಯ ” ಎಂದು ಹೇಳಿದ್ದರು.

ಮಾರ್ಚ್ ನಿಂದ ಲಾಕ್ ಡೌನ್ ಘೋಷಿಸಿದ ನಂತರ, ಉದ್ಯೋಗ ಅಥವಾ ಹಣವಿಲ್ಲದೆ ಸಿಕ್ಕಿಹಾಕಿಕೊಂಡಿರುವ ಲಕ್ಷಾಂತರ ವಲಸೆ ಕಾರ್ಮಿಕರು ಮನೆಗೆ ಕಾಲ್ನಡಿಗೆಯಲ್ಲೇ ಪ್ರಯಾಣಿಸಿದ್ದರು. ನಂತರ ಕೇಂದ್ರ ಸರ್ಕಾರವು “ಶ್ರಮಿಕ್” ವಿಶೇಷ ರೈಲುಗಳನ್ನು ಬಿಟ್ಟಿತ್ತಾದರೂ ಸಾವಿರಾರು ವಲಸೆ ಕಾರ್ಮಿಕರು ಇನ್ನೂ ನೂರಾರು ಕಿಲೋಮೀಟರ್ ದೂರದ ತಮ್ಮ ಮನೆಗೆ ಕಾಲ್ನಡಿಗೆ ಅಥವಾ ಸೈಕಲ್ ಮೂಲಕ ಪ್ರಯಾಣಿಸುತ್ತಿದ್ದಾರೆ.

ಈ ಮಹಾವಲಸೆಯಲ್ಲಿ ಅನೇಕ ವಲಸೆ ಕಾರ್ಮಿಕರು ಅಫಘಾತ, ಬಳಲುವಿಕೆಯಿಂದ ದಾರಿಯಲ್ಲಿ ಸಾವನ್ನಪ್ಪಿದ್ದಾರೆ.

ಇಂದು ಬೆಳಿಗ್ಗೆ ಗುಜರಾತ್‌ನಿಂದ ಹಿಂತಿರುಗುತ್ತಿದ್ದ ಕಾರ್ಮಿಕರ ಗುಂಪಿನಲ್ಲಿದ್ದ ಮಹಿಳೆ ಮತ್ತು ಮಗು ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಪ್ರಯಾಣಿಸುತ್ತಿದ್ದಾಗ, ತಾವು ಪ್ರಯಾಣಿಸುತ್ತಿದ್ದ ಮಿನಿ ಟ್ರಕ್ ದೊಡ್ಡ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ.

ಕಳೆದ ಶನಿವಾರ ದೆಹಲಿಯಿಂದ 1000 ಕಿ.ಮಿ. ದೂರದ ಬಿಹಾರದ ಪೂರ್ವ ಚಂಪಾರನ್‌ಗೆ ತಲುಪಲು ಸೈಕಲ್ ಚಲಾಯಿಸುತ್ತಿದ್ದ ವಲಸೆ ಕಾರ್ಮಿಕರೊಬ್ಬರು ಲಕ್ನೋದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.

ಕೃಪೆ: ಎನ್ಡಿಟಿವಿ


ಓದಿ: ಬೆಂಗಳೂರಿನ ಹೊರಗೂ ರೈಲಿಗಾಗಿ ಕಾಯುತ್ತಿರುವ ವಲಸೆ ಕಾರ್ಮಿಕರು: ಇತ್ತ ಹರಿಯುವುದೇ ಸರ್ಕಾರದ ಗಮನ?


ವಿಡಿಯೋ ನೋಡಿ: ಸದ್ದು…… ಈ ಸುದ್ದಿಗಳೇನಾದವು? – 8 ನೇ ಸಂಚಿಕೆ(Facebook ವಿಡಿಯೋ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...