Homeಮುಖಪುಟಹೋಗುವುದಾದರೆ ಎಲ್ಲಿಗೆ? ಇರುವುದಾದರೆ ಹೇಗೆ? ; ತುಮಕೂರಿನಲ್ಲಿ ಸಿಕ್ಕಿಕೊಂಡ ವಲಸೆ ಕಾರ್ಮಿಕರ ಗೋಳು

ಹೋಗುವುದಾದರೆ ಎಲ್ಲಿಗೆ? ಇರುವುದಾದರೆ ಹೇಗೆ? ; ತುಮಕೂರಿನಲ್ಲಿ ಸಿಕ್ಕಿಕೊಂಡ ವಲಸೆ ಕಾರ್ಮಿಕರ ಗೋಳು

- Advertisement -
- Advertisement -

ಮಟಮಟ ಮಧ್ಯಾಹ್ನದ ಉರಿ ಬಿಸಿಲು. ಸೂರ್ಯ ನೆತ್ತಿಯ ಮೇಲಿದ್ದ. ಕೆಲಸ ಕಳೆದುಕೊಂಡ ಆ ಹುಡುಗರು ಮೂತಿಗೆ ಕರವಸ್ತ್ರಗಳನ್ನು ಬಿಗಿದು ಬೆನ್ನಿಗೆ ಚೀಲಗಳನ್ನು ತಗಲುಹಾಕಿಕೊಂಡು ಹೆಜ್ಜೆ ಹಾಕುತ್ತ ಬರುತ್ತಿದ್ದರು. ಬಿಸಿಲಿನ ಪ್ರಖರತೆ ಹೆಚ್ಚಿದ್ದರಿಂದ ಆ ಹುಡುಗರು ನಿಧಾನವಾಗಿ ನಡೆದು ಹೋಗುತ್ತಿದ್ದರು. ನಾವು ಬರುತ್ತಿದ್ದ ಕಾರನ್ನು ನಿಲ್ಲಿಸಿ ವಿಚಾರಿಸಿದಾಗ ಮಾಲಿಕ ರಾಮು ಆ ಕಾರ್ಮಿಕರನ್ನು ನಿರ್ದಯವಾಗಿ ರೂಮುಗಳಿಂದ ಹೊರಹಾಕಿದ್ದ. ಊಟವನ್ನೂ ಕೊಡದೆ ಕೆಲಸವಿಲ್ಲ ನಡೀರಿ ಎಂದು ಹೇಳಿಕಳಿಸಿದ್ದ. ಆ ವಲಸೆ ಕಾರ್ಮಿಕರ ಮುಖದಲ್ಲಿ ತಮ್ಮ ಊರುಗಳಿಗೆ ಸೇರುವ ಧಾವಂತವಿತ್ತು. ಮಾಲಿಕನ ಧೋರಣೆಗೆ ಬೇಸರವಿತ್ತು. ಆತಂಕದ ಗೆರೆಗಳು ಅವರ ಮುಖದಲ್ಲಿ ಎದ್ದುಕಾಣುತ್ತಿದ್ದವು.

ಹೌದು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬರುವ ತುಮಕೂರು ತಾಲೂಕು ಮಲ್ಲಸಂದ್ರಕ್ಕೂ ಮೊದಲೇ ಬಲಭಾಗದಲ್ಲಿ ಸಿಗುವ ಗಜೇಂದ್ರ ಹಾರ್ಡ್ ವೇರ್ ನಲ್ಲಿ ದುಡಿಯುತ್ತಿದ್ದ ವಲಸೆ ಕಾರ್ಮಿಕರು ಅವರು. 12 ಜನರಿದ್ದ ಆ ಬಿಹಾರಿ ಕಾರ್ಮಿಕರು ಕಳೆದ ಒಂದು ವರ್ಷದಿಂದ ‘ಅಡಕೆಪಟ್ಟೆ ತಟ್ಟೆ’ ತಯಾರು ಮಾಡುತ್ತಿದ್ದರು. ಅಲ್ಲಿಗೆ ಹೋಗಿ ನೋಡಿದರೆ ಪಾಳುಬಿದ್ದ ಗೋಡೋನ್ ಬಳಿಯೇ ಕೆಲಸ. ಮಾಲಿಕ ರಾಮು ಹೃದರಾಬಾದ್ ನವನು. ಇಲ್ಲಿಯವರೆಗೂ ಕಾರ್ಮಿಕರಿಂದ ದುಡಿಸಿಕೊಂಡಿದ್ದ ಮಾಲಿಕ ಮೇ 12ರಂದು ರಾತ್ರಿ ಎಲ್ಲರಿಗೂ ಸಂಬಳ ನೀಡಿ ರೂಮುಗಳಿಂದ ಹೊರಹಾಕಿದ್ದಾನೆ.

ಹಾಗಾಗಿ ಆ ಯುವ ವಲಸೆ ಕಾರ್ಮಿಕರು ಅನಿವಾರ್ಯವಾಗಿ ಏನೂ ತೋಚದೆ ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಆ ಕಾರ್ಮಿಕರಿಗೆ ಪಿಎಫ್, ಇಲ್ಲ, ಸಂಬಳ ಚೀಟಿಯೂ ನೀಡಿಲ್ಲ. ಒಂದು ವರ್ಷ ನಿರಂತರವಾಗಿ ಪ್ರತಿನಿತ್ಯ 12 ಗಂಟೆ ದುಡಿಸಿಕೊಂಡು ಅವರನ್ನು ಅಡಕೆಪಟ್ಟೆ ತಟ್ಟೆ ತಯಾರಿಕೆ ಫ್ಯಾಕ್ಟರಿಯಿಂದ ಮಾಲಿಕ ಹೊರಹಾಕಿದ್ದ. ಬೀದಿಗೆ ಬಿದ್ದ ಕಾರ್ಮಿಕರು ತಮ್ಮ ಊರಾದ ಬಿಹಾರದ ಮಾಧವ್ ಪುರ್ ಮಲಾಟುಲಕ್ಕೆ ತೆರಳುತ್ತಿದ್ದರು. ನಾವು ತಡೆದಿದ್ದಕ್ಕಾಗಿ ಮರದ ನೆರಳಲ್ಲಿ ಸ್ವಲ್ಪಕಾಲ ವಿಶ್ರಮಿಸಿದರು. ಬಿಹಾರದ 12 ಮಂದಿ ವಲಸೆ ಕಾರ್ಮಿಕರು ಸೇವಾಸಿಂಧುವಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಅವರಲ್ಲಿ ಹಿರಿಯರೊಬ್ಬರು ಮಾತ್ರ ತಾಂತ್ರಿಕ ತೊಂದರೆ ಆಗಿ ನೋಂದಣಿ ಮಾಡಿಸಿರಲಿಲ್ಲ. ನೋಂದಣಿ ಮಾಡಿಸಿದವರಿರೂ ಇನ್ನೂ ಮೆಸೇಜ್ ಬಂದಿರಲಿಲ್ಲ.

ಇದನ್ನು ಮಾಲಿಕ ರಾಮುಗೆ ಹೇಳಿದರೆ ‘ನಾನೇನು ಮಾಡಲು ಸಾಧ್ಯವಿಲ್ಲ. ನಿಮ್ಮ ಊರಿಗೆ ತೆರಳಿ ಎಂದು ಬ್ಯಾಗ್ ಗಳನ್ನು ಹೊರ ಎಸೆದು ರೂಮುಗಳಿಗೆ ಬೀಗಹಾಕಿದ್ದಾನೆ. ಇದರಿಂದ ನೊಂದ ಆ ಯುವ ವಲಸೆ ಕಾರ್ಮಿಕರು ತುಮಕೂರಿನತ್ತ ಸಾಗುತ್ತಿದ್ದರು. ಅವರನ್ನು ತಡೆದು ನಿಲ್ಲಿಸಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಸಾಮಾಕಿ ಕಾರ್ಯಕರ್ತ ತಾಜುದ್ದೀನ್ ಷರೀಫ್ ಮತ್ತು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಸಮಸ್ಯೆ ಏನೆಂಬುದನ್ನು ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಲಸೆ ಕಾರ್ಮಿಕ ಪ್ಯಾರೆಲಾಲ್, ಗಜೇಂದ್ರ ಹಾರ್ಡ್ ವೇರ್ ಮಾಲಿಕ ರಾಮು ಸಂಬಳ ನೀಡಿ, ನಿಮಗೆ ಇನ್ನು ಕೆಲಸವಿಲ್ಲ. ಇಲ್ಲಿಂದ ಹೊರಡಿ ಎಂದು ಫ್ಯಾಕ್ಟರಿಯಿಂದ ಹೊರಹಾಕಿದರು. ಶೀಟ್ ಡ್ಯಾಮೇಜ್ ಮಾಡಿದ್ದಕ್ಕಾಗಿ 12 ಸಾವಿರ ರೂಪಾಯಿ ಹಿಡಿದುಕೊಂಡಿದ್ದಾರೆ. ಊಟ ಕೊಟ್ಟಿಲ್ಲ. ಸೇವಾಸಿಂಧುವಿನಲ್ಲಿ ನೋಂದಣಿ ಮಾಡಿಸಿದ್ದೇವೆ. ಅಲ್ಲಿಂದ ಖಚಿತ ಮಾಹಿತಿ ಬಂದ ಮೇಲೆ ಊರಿಗೆ ತೆರಳುತ್ತೇವೆ. ಅಲ್ಲಿಯ ವರೆಗೂ ಇಲ್ಲಿರಲು ಅವಕಾಶ ಕೊಡಿ ಎಂದು ಮನವಿ ಮಾಡಿದೆವು. ಆದರೆ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಹೊರಹಾಕಿದರು ಎಂದು ಅಳಲುತೋಡಿಕೊಂಡರು.

ಪಕ್ಕದಲ್ಲಿಯೇ ಇದ್ದ ಫ್ಯಾಕ್ಟರಿಗೆ ಮಾಲಿಕರನ್ನು ಕಾಣಲು ಹೋದೆವು. ಆಗ ನಮ್ಮ ಎದುರಿಗೇ ಕಾರೊಂದು ಬಂತು. ನಿಲ್ಲಿಸಿ “ಇಲ್ಲಿ ಗಜೇಂದ್ರ ಹಾರ್ಡ್ ವೇರ್ ಇದೆಯಂತೆ ಎಲ್ಲಿ? ಅದರ ಮಾಲಿಕ ರಾಮು. ಅವರನ್ನು ಭೇಟಿ ಮಾಡಬೇಕೆಂದು ಕಾರಿನಲ್ಲಿದ್ದವರನ್ನು ಕೇಳಿದೆವು. ಆ ಹೆಸರಿನ ಮಾಲಿಕರೂ ಇಲ್ಲ. ಫ್ಯಾಕ್ಟರಿಯೂ ಇಲ್ಲ ಎಂದು ಹೇಳಿ ಹೋದರು. ಸ್ಥಳಕ್ಕೆ ಹೋದರೆ ಅಡಕೆಪಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಳೆಯ ಗೋಡನ್ ನಲ್ಲಿ ಅಡಕೆಪಟ್ಟೆಗಳನ್ನು ಸಂಗ್ರಹಿಸಿಡಲಾಗಿತ್ತು. ಅದೇ ಅಡಕೆಪಟ್ಟೆ ತಟ್ಟೆ ತಯಾರಿಸುವ ಜಾಗವೆಂದು ತಿಳಿಯಿತು. ಅಲ್ಲಿದ್ದವರನ್ನು ವಿಚಾರಿಸಿದರೆ ವಿನಯ್ ಎಂಬಾತ ಮೊದಲು ದರ್ಪದಿಂದಲೇ ಮಾತನಾಡಿದ. ನಾವು ಜೋರು ಮಾಡುತ್ತಿದ್ದಂತೆ ನಾನು ಈ ನೆಲದ ಮಾಲಿಕ. ಬಾಡಿಗೆಗೆ ನೀಡಿದ್ದೇನೆ. ರಾಮು ಎಂಬುವರು ಫ್ಯಾಕ್ಟರಿ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು..

ಮಾಲೀಕ ರಾಮು

ನಂತರ ರಾಮುಗೆ ಪೋನ್ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಮತ್ತೆ ವಲಸೆ ಕಾರ್ಮಿಕರ ಬಳಿ ಹೋಗಿ ಮಾತುಕತೆ ನಡೆಸಿದೆವೆ. ಅರ್ಧ ಗಂಟೆ ಬಳಿಕ ಮಾಲಿಕ ರಾಮ ಅಲ್ಲಿಗೆ ಬಂದು ಮಳ್ಳನಂತೆ ಮಾತುಕತೆ ಆಲಿಸುತ್ತಿದ್ದ. ಈ ನಡುವೆ ನಾನು ಕಾರ್ಮಿಕರನ್ನು ಕಳಿಸಿಲ್ಲ ಎಂದು ರಾಮು ಸುಳ್ಳು ಹೇಳಿದ. ಅಷ್ಟೊತ್ತಿಗಾಗಲೇ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಆಗಿತ್ತು. ಸಾಮಾಜಿಕ ಕಾರ್ಯಕರ್ತರು ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು. ಮಾಲೀಕ ಮಾತ್ರ ಒಂದಕ್ಕೂ ಉತ್ತರಿಸದೆ ಮೌನ ವಹಿಸಿದ್ದ. ಆದರೆ ಜಮೀನಿನ ಮಾಲೀಕ ವಿನಯ್ ‘ಸರ್ ಇರಲು ಕಾರ್ಮಿಕರಿಗೆ ಅವಕಾಶ ಕೊಡುತ್ತೇನೆ. ಕುಡಿಯಲು ನೀರು ಒದಗಿಸುತ್ತೇನೆ. ಊಟದ ವ್ಯವಸ್ಥೆ ಆಗೋಲ್ಲ’ ಅಂದ್ರು ಒಂದು ತೀರ್ಮಾನಕ್ಕೆ ಬಂದು ಕಾರ್ಮಿಕರಿಗೆ ಅಲ್ಲೇ ಇರಲು ವ್ಯವಸ್ಥೆ ಮಾಡಲಾಯಿತು.

ಆದರೂ ವಲಸೆ ಕಾರ್ಮಿಕರಲ್ಲಿ ಆತಂಕವಿತ್ತು. ಭದ್ರತೆಯ ಕೊರತೆ ಇತ್ತು. ಊಟದ ಸಮಸ್ಯೆ ಇತ್ತು. ಮಾಲೀಕರು ಏನು ಮಾಡುತ್ತಾರೋ ಎಂಬ ಭಯವಿತ್ತು. ಇದರ ನಡುವೆ ಊರಿಗೆ ಹೋಗುವ ಕಾತರವೂ ಇತ್ತು.  ಮನಸ್ಸು ಇಬ್ಬಂದಿಯಾಗಿತ್ತು. ಇರುವುದೋ, ಹೋಗುವುದೋ ಎಂಬ ಪ್ರಶ್ನೆ ಎದುರಾಗಿತ್ತು. ಹೋಗುವುದಾದರೆ ಎಲ್ಲಿಗೆ? ಇರುವುದಾದರೆ ಹೇಗೆ? ವ್ಯವಸ್ಥೆ ಏನು ಎಂಬ ಪ್ರಶ್ನೆಗಳು ಅವರ ಮನದಲ್ಲಿ ಮೂಡಿದ್ದವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...