Homeಮುಖಪುಟಮಾತು ಮರೆತ ಭಾರತ; ಗುಪ್ತರ ’ಸವರ್ಣ ಯುಗ’ದಲ್ಲಿ ಅಸ್ಪೃಶ್ಯತೆಯ ಉಗಮ

ಮಾತು ಮರೆತ ಭಾರತ; ಗುಪ್ತರ ’ಸವರ್ಣ ಯುಗ’ದಲ್ಲಿ ಅಸ್ಪೃಶ್ಯತೆಯ ಉಗಮ

- Advertisement -
- Advertisement -

ದಲಿತರು ಎಂದರೆ ಯಾರು? 1970ರ ದಶಕದಲ್ಲಿ ಹಿಂದೂ ಮೇಲ್ಜಾತಿಗಳ ದೌರ್ಜನ್ಯದ ವಿರುದ್ಧ ಪ್ರತಿರೋಧವಾಗಿ ದಲಿತ ಎಂಬ ಪದ ಭಾರತದ ಶೋಷಿತರೆಲ್ಲರನ್ನು ಒಂದೆಡೆ ತರುವಲ್ಲಿ ಯಶಸ್ವಿಯಾಗಿತ್ತು. ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್, ಕರ್ನಾಟಕದ ದಲಿತ ಸಂಘರ್ಷ ಸಮಿತಿ ಮತ್ತು ಆಂಧ್ರಪ್ರದೇಶದ ದಲಿತ ಮಹಾಸಭಾಗಳೇ ಇದಕ್ಕೆ ಸಾಕ್ಷಿ. ಈ ಮೂರೂ ಸಂಘಟನೆಗಳು ದಲಿತರೆಂದರೆ ಎಲ್ಲಾ ಜಾತಿಯ ಬಡವರೆಂದೇ ಹೇಳುತ್ತವೆ. ಅಷ್ಟರ ಮಟ್ಟಿಗೆ ಒಳಗೊಳ್ಳುವಿಕೆಯ ಹೋರಾಟಗಳು ಅವಾಗಿದ್ದವು. ಆದರೆ ಜಾತಿಪದ್ಧತಿ ಎಂಬುದು ಶೋಷಿತರನ್ನೂ ಒಟ್ಟುಗೂಡಲು ಬಿಡುವುದಿಲ್ಲವಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ’ಜಾತಿಯು ಕೇವಲ ಶ್ರಮದ ವಿಭಜನೆಯಲ್ಲ. ಅದು ಶ್ರಮಿಕರ ವಿಭಜನೆ’ ಎಂಬುದನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಇಂದಿಗೂ ಸಹ ದುಡಿಯುವ ಜನರು ಸಮಾನ ಶತ್ರುವಿನ ವಿರುದ್ಧ ಹೋರಾಡಲು ಸಂಘಟಿತರಾಗದಂತೆ ತಡೆಹಿಡಿದಿರುವುದು ಈ ಮೇಲು-ಕೀಳೆಂಬ ಜಾತಿಪದ್ಧತಿಯ ಕಾರಣಕ್ಕಾಗಿಯೇ. ಹಾಗಾಗಿ ಇಂದು ದಲಿತರೆಂದರೆ ಭಾರತದ ಅಸ್ಪೃಶ್ಯರೇ ಆಗಿದ್ದಾರೆ. ಭಾರತದ ಸಂವಿಧಾನ ವಿಧಿ 17ರಡಿಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ಆದರೆ ಭಾರತದಲ್ಲಿ ಅಸ್ಪೃಶ್ಯತೆ ನಿಷೇಧವಾಗಿದೆ ಎಂದು ಹೇಳುವ ಧೈರ್ಯ ಈ ದೇಶದ ರಾಷ್ಟ್ರಪತಿಯವರಿಗೂ ಇಲ್ಲ. ಹಾಗಾಗಿ ದಲಿತ ಚಳವಳಿಗಳ ಕ್ಷಮೆಯಾಚಿಸುತ್ತಾ ದಲಿತ ಎಂಬ ಪದವನ್ನು ಅಸ್ಪೃಶ್ಯರಿಗೆ ಸಮಾನವಾಗಿ ಎಲ್ಲರಂತೆ ನಾನೂ ಸಹ ಬಳಸುತ್ತೇನೆ.

ನನ್ನ ಈ ಅಂಕಣದ ಉದ್ದೇಶ ಅಸ್ಪೃಶ್ಯರು ಯಾರು ಎಂದು ತಿಳಿಸುವುದಲ್ಲ. ಅಸ್ಪೃಶ್ಯತೆ ಧಾರ್ಮಿಕ ಆಚರಣೆಯಿಂದ ಹಿಂದೂ ಮೇಲ್ಜಾತಿಗಳು ಎಂದು ಕರೆಸಿಕೊಂಡವರು ಹೇಗೆ ದಲಿತರನ್ನು ಕಿತ್ತು ಕೊಂದಿದ್ದಾರೆ ಎಂಬುದನ್ನು ತಿಳಿಸುವುದಾಗಿದೆ. ಅದಾಗ್ಯೂ ಸಂಪೂರ್ಣ ವಿವರಗಳಿಗೆ ಹೋಗದೆ ಸಂಕ್ಷಿಪ್ತವಾಗಿ ಅಸ್ಪೃಶ್ಯತೆಯ ಬಗ್ಗೆ ತಿಳಿಸುತ್ತೇನೆ. ಹರಪ್ಪ ನಾಗರಿಕತೆ ಪತನವಾಗುತ್ತಿದ್ದ ಕಾಲಕ್ಕೆ ಪ್ರಾಚೀನ ಭಾರತಕ್ಕೆ ಮಧ್ಯ ಏಷಿಯಾದಿಂದ ಆರ್ಯರು ಬಂದರು. ನಂತರ ಇಲ್ಲಿನ ಉತ್ತರ ಭಾರತದಲ್ಲಿ ನೆಲೆಸಿದ್ದ ಭಾರತದ ಮೂಲನಿವಾಸಿಗಳ ಜೊತೆಗೆ ಸಮ್ಮಿಲನ ಮತ್ತು ಸಂಘರ್ಷದ ಮೂಲಕ ಬೆರೆತರು, ಅಲ್ಲದೆ ಪ್ರತ್ಯೇಕವಾಗಿಯೂ ಗುರುತಿಸಿಕೊಂಡರು. ವೇದಗಳು, ಧರ್ಮಸೂತ್ರಗಳ ಮೂಲಕ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳ ಸಮಾಜವನ್ನು ಸ್ಥಾಪಿಸಿದರು. (ನೆನಪಿರಲಿ ಈ ವರ್ಣಗಳು ಆರ್ಯವರ್ತ ಪ್ರದೇಶಗಳಾದ ಗಂಗಾ-ಯಮುನಾ ಬಯಲಿಗೆ ಸೀಮಿತವಾಗಿದ್ದವು. ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಮಧ್ಯ ಭಾರತದ ಬಗ್ಗೆ ಇತಿಹಾಸದ ಆರಂಭಿಕ ಹೆಜ್ಜೆಗುರುತುಗಳು ಇನ್ನೂ ಸ್ಪಷ್ಟವಾಗಿ ರಚಿಸಬೇಕಿದೆ.) ಮಗಧದಲ್ಲಿ ನಂದರ ನಂತರ ವಿಶಾಲವಾದ ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾಯಿತು. ಈ ಭಾಗದಲ್ಲಿ ಆರ್ಯರು ಪ್ರಚಾರ ಮಾಡುತ್ತಿದ್ದ ಚಾತುರ್ವರ್ಣ ಧರ್ಮಕ್ಕೆ ವಿರೋಧವಾಗಿ ಹಲವು ಧರ್ಮಗಳು ಸ್ಥಾಪನೆಯಾದವು. ಅವುಗಳಲ್ಲಿ ಬೌದ್ಧ ಧರ್ಮ ಹಾಗೂ ಜೈನ ಧರ್ಮಗಳು ಪ್ರಸಿದ್ಧವಾದವು. ಹಾಗಾಗಿ ಚಂದ್ರಗುಪ್ತ ಮೌರ್ಯ ಕಡೆಯ ಕಾಲದಲ್ಲಿ ಜೈನನಾದರೆ ಸಾಮ್ರಾಟ್ ಅಶೋಕ ಕಳಿಂಗ ಯುದ್ಧದ ನಂತರ ಬೌದ್ಧನಾದನು.

ಸಾಮ್ರಾಟ್ ಅಶೋಕ

ಈ ಮೂಲಕ ಅಲ್ಲಿಯವರೆಗೂ ನೆಲೆಸಿದ್ದ ಚಾತುರ್ವರ್ಣ ಧರ್ಮದ ತಾರತಮ್ಯವನ್ನು ತೊರೆದು ಸರ್ವರೂ ಸಮವಾಗಿರಬೇಕೆಂಬ ಬೌದ್ಧ ಧರ್ಮಕ್ಕೆ ರಾಜಾಶ್ರಯ ನೀಡಿದನು. ಯಜ್ಞ-ಯಾಗಗಳನ್ನು ನಿಷೇಧಿಸಿದನು. ಅಂಬೇಡ್ಕರರು ಹೇಳುವಂತೆ ಇದರಿಂದ ಚಾತುರ್ವರ್ಣ ಧರ್ಮದ ಪುರೋಹಿತ ಜನಾಂಗದ ಬ್ರಾಹ್ಮಣರು ದಕ್ಷಿಣೆಯನ್ನು ಕಳೆದುಕೊಂಡು ಬಡವರಾದರು ಜೊತೆಗೆ ಅಧಿಕಾರವನ್ನೂ ಕಳೆದುಕೊಂಡರು. ಹಾಗಾಗಿ ಮೌರ್ಯ ಸಾಮ್ರಾಜ್ಯವನ್ನು ಉರುಳಿಸುವುದೇ ಅವರ ಮೊದಲ ಕರ್ತವ್ಯವಾಯಿತು. ಸಾಮ್ರಾಟ್ ಅಶೋಕನ ಮೊಮ್ಮಗ ಬೃಹಧ್ರತ ಮೌರ್ಯನ ಸೇನಾಧಿಪತಿಯಾಗಿದ್ದ ಶುಂಗ ಬ್ರಾಹ್ಮಣ ಪುಶ್ಯಮಿತ್ರನು ಬೃಹದ್ರತನನ್ನು ಕೊಂದು ಸಿಂಹಾಸನವೇರಿದನು. ಇಲ್ಲಿಂದ ಮತ್ತೆ ಚಾತುರ್ವರ್ಣ ಧರ್ಮ ಮೇಲುಗೈ ಸಾಧಿಸಿತು. ಈ ಕಾಲದಲ್ಲಿಯೇ ಅಂದರೆ ಕ್ರಿ.ಪೂ 1ನೇ ಶತಮಾನದಲ್ಲಿ ಶೂದ್ರರನ್ನೂ ಮಹಿಳೆಯರನ್ನು ಹದ್ದುಬಸ್ತಿನಲ್ಲಿಟ್ಟು ಕೂಲಿಗಳನ್ನಾಗಿಸಿಕೊಳ್ಳುವ ಮನುಸ್ಮೃತಿ ರಚನೆಯಾಯಿತು. ದುಡಿಯುವ ಜನರನ್ನು ಶೂದ್ರರೆಂದು ಬಗೆದು ಬಹಳ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಮನುಸ್ಮೃತಿಯು ಅಂತರ್ಜಾತಿ ವಿವಾಹ (ಕೆಳಜಾತಿಗಳು ಮೇಲ್ಜಾತಿಯವರನ್ನು ವಿವಾಹವಾಗುವುದನ್ನು) ಮತ್ತು ಅಂತರ್ ಭೋಜನವನ್ನು ನಿಷೇಧಿಸಿತು. ಇದರ ಪರಿಣಾಮವಾಗಿ ಜಾತಿಸಂಕರಗೊಂಡವರನ್ನು ಜಾತಿಭ್ರಷ್ಟರನ್ನಾಗಿಸಿ ಊರ ಹೊರಗೆ ಬಹಿಷ್ಕರಿಸಿದಾಗ ಅಸ್ಪೃಶ್ಯರು ಹುಟ್ಟಿದರೆಂದು ಮನುಸ್ಮೃತಿ ಸಮರ್ಥನೆ ನೀಡುತ್ತದೆ. ಆದರೆ ಅಂಬೇಡ್ಕರರಾಗಲೀ ಇತರೆ ಇತಿಹಾಸಕಾರರಾಗಲೀ ಈ ವಿವರಣೆಯನ್ನು ಒಪ್ಪುವುದಿಲ್ಲ. ಸುಮಾರು ಕ್ರಿ.ಶ 4ನೇ ಶತಮಾನದಷ್ಟೊತ್ತಿಗೆ ಅಸ್ಪೃಶ್ಯತೆ ಒಂದು ವ್ಯವಸ್ಥೆಯಾಗಿ ಮಾರ್ಪಟ್ಟಿತು. ಅದಕ್ಕೆ ಕಾರಣಗಳು ಇಂತಿವೆ.

  1.  ಗೋಮಾಂಸ ಸೇವಿಸುತ್ತಿದ್ದ ಬಿಡಿ ಜನಾಂಗಗಳು ಅದನ್ನು ಮುಂದುವರೆಸಿದ್ದು.
  2.  ನೆಲೆನಿಂತ ಮತ್ತು ಬಿಡಿ ಜನಾಂಗಗಳ ನಡುವಿನ ಒಪ್ಪಂದ.
  3.  ಬೌದ್ಧ ಧರ್ಮೀಯರು ಚಾತುರ್ವರ್ಣ ಧರ್ಮವನ್ನು ನಿರಾಕರಿಸಿದ್ದು.
  4.  ಸ್ವಚ್ಛ ಮಾಡುವ ಕಾಯಕವನ್ನು ಕೆಳದರ್ಜೆಗೆ ಇಳಿಸಿದ್ದು.

ಈ ಕಾರಣಗಳಿಗಾಗಿ ಚಾತುರ್ವರ್ಣ ಧರ್ಮದಲ್ಲಿ ಆರಂಭವಾದ ಅಸ್ಪೃಶ್ಯತೆಯು ಅಸ್ಪೃಶ್ಯರನ್ನು ಹುಟ್ಟುಹಾಕಿತು. ಆಶ್ಚರ್ಯವೆಂದರೆ ಅವರನ್ನು ಚಾತುರ್ವರ್ಣದಿಂದ ಹೊರಗಿಟ್ಟಿತು. ಅಂಬೇಡ್ಕರರ ಮಾತಿನಲ್ಲಿ ಹೇಳುವುದಾದರೆ ’ಆ ಸಮುದಾಯ ಹುಟ್ಟುವುದೂ ಅಸ್ಪೃಶ್ಯರಾಗಿ, ಬದುಕುವುದು ಅಸ್ಪೃಶ್ಯರಾಗಿ, ಸಾಯುವುದು ಅಸ್ಪೃಶ್ಯರಾಗಿ. ಮತ್ತೆ ಹಡೆಯುವುದು ಅಸ್ಪೃಶ್ಯತೆ ಕಳಂಕ ಅಂಟಿದ ಮಕ್ಕಳನ್ನು, ಅದು ಶಾಶ್ವತ, ಆನುವಂಶಿಕ ಕಳಂಕ ಆಗಿರುವುದರಿಂದ ಅದನ್ನು ತೊಳೆಯುವುದು ಯಾವುದರಿಂದಲೂ ಆಗದು’.

ಕ್ರಿ.ಶ 4ರ ನಂತರ ಅಸ್ಪೃಶ್ಯರೆಂದು ಕರೆಯಲಾದ ಹಲವು ಜಾತಿಗಳು ಈ ಮೊದಲು ಶೂದ್ರರಾಗಿದ್ದವು. ಬೌದ್ಧ ಗ್ರಂಥಗಳು ಹೇಳುವ ಅನೇಕ ಸೇವಾ ಜಾತಿಗಳು ಬ್ರಾಹ್ಮಣ್ಯಗಳಲ್ಲಿ ಹೇಳಿದ ಅಸ್ಪೃಶ್ಯರಿಗೆ ಸಂವಾದಿ. ಚಂಡಾಲ, ನಿಷಾದ, ವೇಣ, ರಥಕಾರ, ಪುಕ್ಕುಸರನ್ನು ನೀಚಕುಲ, ಹೀನಜಾತಿಯವರೆಂದು ಭಾವಿಸಲಾಗಿತ್ತು. ಆದರೆ ಅವರ ಮೇಲೆ ಗುಪ್ತರ ಕಾಲದವರೆಗೂ ಅಸ್ಪೃಶ್ಯತೆಯನ್ನು ಹೇರಲಾಗಿರಲಿಲ್ಲ. ಅವರನ್ನು ಮುಟ್ಟಲು, ನೋಡಲು ನಿಷೇಧಿಸಲಾಗಿರಲಿಲ್ಲ. ಕ್ರಿ.ಶ 4ನೇ ಶತಮಾನದಲ್ಲಿ ಪತಂಜಲಿ ಸೂಚಿಸುವಂತೆ ಪಾಣಿನಿ ಕಾಲದಲ್ಲಿ ಚಂಡಾಲ, ಮೃತಪರು, ಅನಿರ್ವಸಿತರು (ಊರಾಚೆ ಇರುವ) ಶೂದ್ರರು ಎನಿಸಿಕೊಂಡಿದ್ದರು. ಅವರು ಮುಟ್ಟಿದ ಕಂಚು ಪಾತ್ರೆ ಶಾಶ್ವತವಾಗಿ ಮೈಲಿಗೆಯಾಗುತ್ತಿತ್ತು. ಆದರೆ ಅವರು ಮುಟ್ಟಿದ ಮನುಷ್ಯರು ಮೈಲಿಗೆಯಾಗುತ್ತಿರಲಿಲ್ಲ. ಅಂದರೆ
ಅವರಿಬ್ಬರ ನಡುವೆ ಸಂಪರ್ಕವಿತ್ತು. ಆದರೆ ನಂತರದ ದಿನಗಳಲ್ಲಿ ಅದು ಪ್ರಕ್ಷಿಪ್ತವಾಗಿ ಆಪಸ್ತಂಬ ಸೂತ್ರದಲ್ಲಿ ಚಂಡಾಲನನ್ನು ನೋಡುವುದು, ಮುಟ್ಟುವುದು ಸಹ ಪಾಪಕರ ಎಂದಾಯಿತು. ಗೌತಮಸೂತ್ರವು ಚಂಡಾಲ ಮುಟ್ಟಿದರೆ ಸಚೇಲ ಸ್ನಾನ ಮಾಡಬೇಕೆನ್ನುತ್ತದೆ. ಇದು ಮೌರ್ಯ ಪೂರ್ವ ಯುಗದ ಕೊನೆಗೆ ಆದ ಬೆಳವಣಿಗೆಯಾದರೂ ಒಂದಿಡೀ ಸಮುದಾಯಕ್ಕೆ ಅಸ್ಪೃಶ್ಯತೆ ಕಳಂಕ ಹಚ್ಚುವ ಪರಿಪಾಠವಿರಲಿಲ್ಲ. ಗುಪ್ತರ ಕಾಲದಷ್ಟೊತ್ತಿಗೆ ಅಸ್ಪೃಶ್ಯತೆ ಭರತ ಖಂಡದಲ್ಲಿ ನೆಲೆಯೂರಲು ಆರಂಭಸಿತ್ತು.

ಆರ್. ಎಸ್ ಶರ್ಮಾ ಮತ್ತು ಕೊಸಾಂಬಿಯವರ ಪ್ರಕಾರ ಬೌದ್ಧ ಜಾತಕಗಳಲ್ಲಿ ಅನೇಕ ಕಡೆ ಚಂಡಾಲನು ಪಾಪದ ಮೂರ್ತಿಯಾಗಿ, ಅಸ್ಪೃಶ್ಯನಾಗಿ ವರ್ಣಿತನಾಗಿದ್ದಾನೆ. ಕಾಶಿಯ ಶೆಟ್ಟಿಯ ಮಗಳು ಚಂಡಾಲನನ್ನು ನೋಡಿದ್ದಕ್ಕೆ ಕಣ್ಣು ತೊಳೆದುಕೊಳ್ಳುತ್ತಾಳೆ. ಚಂಡಾಲನೊಬ್ಬನು ತಿಂದು ಬಿಸುಟಿದ್ದ ಅನ್ನಕ್ಕೆ ತಗುಲಿದ್ದ ಆಹಾರವನ್ನು ತಿಂದು 16 ಸಾವಿರ ಬ್ರಾಹ್ಮಣರು ಜಾತಿಭ್ರಷ್ಟರಾದರೆಂದು ಮತ್ತೊಂದು ಜಾತಕ ಕತೆ ಹೇಳುತ್ತದೆ. ಒಬ್ಬ ಬ್ರಾಹ್ಮಣನು ಚಂಡಾಲನ ಎಂಜಲು ತಿಂದು ಆತ್ಮಹತ್ಯೆ ಮಾಡಿಕೊಂಡ. ಅದೂ ತನ್ನ ಜಾತಿಯವರಿಂದ ಅವಹೇಳನ ತಪ್ಪಿಸಿಕೊಳ್ಳಲು! ಉತ್ತರಾಧ್ಯಯನ ಸೂತ್ರದಲ್ಲಿ ಉಲ್ಲೇಖವಾಗಿರುವಂತೆ ಕಾಮನಹಬ್ಬದಲ್ಲಿ ಕುಣಿಯುತ್ತಾ ಬಂದ ಮಾತಂಗರನ್ನು ಮೇಲುಜಾತಿಯವರು ಥಳಿಸಿ ಊರಾಚೆ ಅಟ್ಟಿದ ಕತೆ ಇದೆ. ಬೌದ್ಧ, ಜೈನ ಮೂಲಗಳಿಂದ ತಿಳಿದುಬರುವಂತೆ ಚಂಡಾಲರನ್ನು ಅಸ್ಪೃಶ್ಯರೆಂದು ಮೇಲುವರ್ಣದವರು ಹೀಯಾಳಿಸುತ್ತಿದ್ದರು. ಬ್ರಾಹ್ಮಣರಿಗೆ ಅವರ ಮೇಲೆ ವಿಶೇಷ ದ್ವೇಷವಿತ್ತು. ಗುಪ್ತರ ಕಾಲದಲ್ಲಿ ಹಲವು ಸಂಸ್ಕೃತ ಸಾಹಿತ್ಯ ಮತ್ತು ಧರ್ಮಸೂತ್ರಗಳನ್ನು ಪ್ರಕ್ಷೇಪವಾಗಿಸಿ ಅಸ್ಪೃಶ್ಯರನ್ನು ಶೂದ್ರರಿಗಿಂತ ಪ್ರತ್ಯೇಕವಾಗಿ ನೋಡುವ ಪರಿಪಾಠ ಆರಂಭವಾಯಿತು. ಇದನ್ನು ಬೌದ್ಧ ಮತ್ತು ಜೈನ ಗ್ರಂಥಗಳು ಗುರುತಿಸಿದ್ದವು ಮತ್ತು ಉಲ್ಲೇಖಿಸಿದ್ದವು.

ಕಾಲಕ್ರಮೇಣ ಶೂದ್ರರೂ ನಿರಾಕರಿಸಿದ ಸೇವಾ ಕಾರ್ಯಗಳಿಗೆ ನಿಯೋಜಿಸಿದ ಜನಾಂಗವೇ ಮುಂದೆ ಅಸ್ಪೃಶ್ಯರಾದರು. ಇದಕ್ಕೆ ಸಾಕ್ಷಿಯಾಗಿ ಚಂಡಾಲರು ಚಿಂದಿಬಟ್ಟೆ ಉಟ್ಟು ತಿರುಬೋಕಿಗಳಾದ ಚಿತ್ರಣ ಜಾತಕ ಕತೆಗಳಲ್ಲಿ ಬರುತ್ತದೆ. ಒಂದು ಜಾತಕದಲ್ಲಿ ಸೂಚಿತವಾಗಿರುವಂತೆ ಅವರನ್ನು ಬೀದಿಯ ಕಸ ಗುಡಿಸಲು ನೇಮಿಸಿದ್ದರು. ಚಂಡಾಲರ ಜೀವನವು ದುರ್ಬರವಾಗಿತ್ತು. ಬೌದ್ಧ ಗ್ರಂಥ ಅಂಗುತ್ತರ ನಿಕಾಯದಲ್ಲಿ ಹೇಳಿರುವಂತೆ ಒಬ್ಬ ಚಂಡಾಲ ಹುಡುಗ ಅಥವಾ ಹುಡುಗಿ ಚಿಂದಿ ಬಟ್ಟೆ ತೊಟ್ಟು, ಭಿಕ್ಷೆಗೆ ಬೋಕಿಯೊಂದನ್ನು ಹಿಡಿದು, ಗ್ರಾಮವೊಂದಕ್ಕೆ ಹೋಗಬೇಕಾದರೆ ತಗ್ಗಿಬಗ್ಗಿ ನಡೆಯಬೇಕಿತ್ತು. ಬೇರೆಯವರಿಂದ ಬೇರ್ಪಡಿಸಿ ಗುರುತಿಸಲು ಸಾಧ್ಯವಾಗುವಂತೆ ಅವರು ಬಣ್ಣದ ಬಟ್ಟೆ ತೊಟ್ಟು, ಸೊಂಟಕ್ಕೆ ಒಂದು ಹಗ್ಗ (ಉಡುದಾರ) ಸುತ್ತಿಕೊಂಡು ಓಡಾಡಬೇಕಿತ್ತು. ಈ ಜಾತಕಗಳೆಲ್ಲವೂ ಮೌರ್ಯ ಪೂರ್ವ ಕಾಲದ ಅಂತಿಮಘಟ್ಟಕ್ಕೆ ಸೇರಿದವು. ಗುಪ್ತರ ಕಾಲಘಟ್ಟದಲ್ಲಿ ಅಸ್ಪೃಶ್ಯತೆ ಆಚರಣೆ ಸಾಂಸ್ಥಿಕ ರೂಪ ತಳೆಯಿತೆಂದು ಹೇಳಬಹುದು. ಹಾಗಾಗಿ ಗುಪ್ತರ ಯುಗ ಸವರ್ಣರಿಗೆ ಸುವರ್ಣ ಯುಗ. ಅವರ್ಣರಿಗೆ ನರಕ ಯುಗ.

ದಾಸ ಮತ್ತು ಕರ್ಮಕಾರರಾಗಿದ್ದ ಶೂದ್ರರ ಜೀವನಕ್ಕಿಂತಲೂ ಹೆಚ್ಚಿನ ಕಾರ್ಮಣ್ಯ ಅಸ್ಪೃಶ್ಯರದ್ದು. ಶೂದ್ರರಿಗೆ ಸ್ವಲ್ಪಮಟ್ಟಿನ ಜೀವನ ಭದ್ರತೆ ಇದೆ. ಇವರಿಗೆ ಅದೂ ಇಲ್ಲ ಮತ್ತು ಚಾತುರ್ವರ್ಣ ಸಮಾಜವು ನಿಕೃಷ್ಟತೆಯನ್ನು ಇವರ ಮೇಲೆ ಸದಾ ಹೇರುತ್ತಿರುತ್ತದೆ. ಅಸ್ಪೃಶ್ಯರು ಬಗ್ಗೆ ಬೃಹಸ್ಪತಿ ವಿಶೇಷವಾಗಿ ಕಠಿಣ ಧೋರಣೆ ತಾಳುತ್ತಾನೆ. ಬ್ರಾಹ್ಮಣರಿಗೆ ಅಪಚಾರ ಮಾಡಿದರೆ ಇವರಿಗೆ ಎಂದಿಗೂ ದಂಡ ಹಾಕಬಾರದು, ಹೊಡೆತ ಕೊಡಬೇಕು. ಶ್ವಪಚ, ಮೇದ, ಚಾಂಡಾಲ, ಮಾವುತ, ದಾಸ ಮುಂತಾದವರ ಬಗ್ಗೆ ಇಂತದೇ ಕಟ್ಟಳೆಯನ್ನು ನಾರದ ವಿಧಿಸುತ್ತಾನೆ. ಚೀನಾ ಯಾತ್ರಿಕ ಫಾಹಿಯಾನನು ಚಂಡಾಲರು ಊರ ಹೊರಗೆ ವಾಸ ಮಾಡುತ್ತಿದ್ದರೆಂದೂ, ಮಾಂಸದ ವ್ಯಾಪಾರ ಮಾಡುತ್ತಿದ್ದರೆಂದೂ ತಿಳಿಸಿದ್ದಾನೆ. ಅವರು ಊರಿನೊಳಕ್ಕೆ ಬಂದಾಗ ಮೇಲ್ಜಾತಿಯವರು ದೂರವೇ ಇರುತ್ತಿದ್ದರು. ರಸ್ತೆಯೇ ಅವರಿಂದ ಮೈಲಿಗೆಯಾಯಿತು ಎಂದು ಪರಿಗಣಿಸುತ್ತಿದ್ದರು. ಒಟ್ಟಾರೆ ಅಂಬೇಡ್ಕರರು ಹೇಳುವಂತೆ ’ಬೌದ್ಧರು ಮತ್ತು ಬ್ರಾಹ್ಮಣರ ನಡುವೆ ಪಾರಮ್ಯಕ್ಕಾಗಿ ನಡೆದ ಹೋರಾಟದ ಮದ್ಯೆ ಅಸ್ಪೃಶ್ಯತೆಯ ಜನನವಾಯಿತು’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: VHP, ಬಜರಂಗದಳ ಪಕ್ಷವೊಂದರ ಬಾಲಂಗೋಚಿಗಳು; ಕರ್ನಾಟಕ ಅವರ ಜಹಗೀರಲ್ಲ: ಕುಮಾರಸ್ವಾಮಿ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆ ಆರ್ಯರು ಹರಪ್ಪ ಸಾಮ್ರಾಜ್ಯವನ್ನು ನಾಶಮಾಡಿ ಆರ್ಯವರ್ತ ಸಾಮ್ರಾಜ್ಯವನ್ನು ಸ್ಥಾಪಿಸಿದಾಗಿನಿಂದಲು ಜಾರಿಯಲ್ಲಿದೆ. ಅಂದಾಜು ೪೫೦೦ ವರ್ಷಗಳಿಂದ.

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....