Homeಮುಖಪುಟಮಾತು ಮರೆತ ಭಾರತ; ಗುಪ್ತರ ’ಸವರ್ಣ ಯುಗ’ದಲ್ಲಿ ಅಸ್ಪೃಶ್ಯತೆಯ ಉಗಮ

ಮಾತು ಮರೆತ ಭಾರತ; ಗುಪ್ತರ ’ಸವರ್ಣ ಯುಗ’ದಲ್ಲಿ ಅಸ್ಪೃಶ್ಯತೆಯ ಉಗಮ

- Advertisement -
- Advertisement -

ದಲಿತರು ಎಂದರೆ ಯಾರು? 1970ರ ದಶಕದಲ್ಲಿ ಹಿಂದೂ ಮೇಲ್ಜಾತಿಗಳ ದೌರ್ಜನ್ಯದ ವಿರುದ್ಧ ಪ್ರತಿರೋಧವಾಗಿ ದಲಿತ ಎಂಬ ಪದ ಭಾರತದ ಶೋಷಿತರೆಲ್ಲರನ್ನು ಒಂದೆಡೆ ತರುವಲ್ಲಿ ಯಶಸ್ವಿಯಾಗಿತ್ತು. ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್, ಕರ್ನಾಟಕದ ದಲಿತ ಸಂಘರ್ಷ ಸಮಿತಿ ಮತ್ತು ಆಂಧ್ರಪ್ರದೇಶದ ದಲಿತ ಮಹಾಸಭಾಗಳೇ ಇದಕ್ಕೆ ಸಾಕ್ಷಿ. ಈ ಮೂರೂ ಸಂಘಟನೆಗಳು ದಲಿತರೆಂದರೆ ಎಲ್ಲಾ ಜಾತಿಯ ಬಡವರೆಂದೇ ಹೇಳುತ್ತವೆ. ಅಷ್ಟರ ಮಟ್ಟಿಗೆ ಒಳಗೊಳ್ಳುವಿಕೆಯ ಹೋರಾಟಗಳು ಅವಾಗಿದ್ದವು. ಆದರೆ ಜಾತಿಪದ್ಧತಿ ಎಂಬುದು ಶೋಷಿತರನ್ನೂ ಒಟ್ಟುಗೂಡಲು ಬಿಡುವುದಿಲ್ಲವಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ’ಜಾತಿಯು ಕೇವಲ ಶ್ರಮದ ವಿಭಜನೆಯಲ್ಲ. ಅದು ಶ್ರಮಿಕರ ವಿಭಜನೆ’ ಎಂಬುದನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಇಂದಿಗೂ ಸಹ ದುಡಿಯುವ ಜನರು ಸಮಾನ ಶತ್ರುವಿನ ವಿರುದ್ಧ ಹೋರಾಡಲು ಸಂಘಟಿತರಾಗದಂತೆ ತಡೆಹಿಡಿದಿರುವುದು ಈ ಮೇಲು-ಕೀಳೆಂಬ ಜಾತಿಪದ್ಧತಿಯ ಕಾರಣಕ್ಕಾಗಿಯೇ. ಹಾಗಾಗಿ ಇಂದು ದಲಿತರೆಂದರೆ ಭಾರತದ ಅಸ್ಪೃಶ್ಯರೇ ಆಗಿದ್ದಾರೆ. ಭಾರತದ ಸಂವಿಧಾನ ವಿಧಿ 17ರಡಿಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ಆದರೆ ಭಾರತದಲ್ಲಿ ಅಸ್ಪೃಶ್ಯತೆ ನಿಷೇಧವಾಗಿದೆ ಎಂದು ಹೇಳುವ ಧೈರ್ಯ ಈ ದೇಶದ ರಾಷ್ಟ್ರಪತಿಯವರಿಗೂ ಇಲ್ಲ. ಹಾಗಾಗಿ ದಲಿತ ಚಳವಳಿಗಳ ಕ್ಷಮೆಯಾಚಿಸುತ್ತಾ ದಲಿತ ಎಂಬ ಪದವನ್ನು ಅಸ್ಪೃಶ್ಯರಿಗೆ ಸಮಾನವಾಗಿ ಎಲ್ಲರಂತೆ ನಾನೂ ಸಹ ಬಳಸುತ್ತೇನೆ.

ನನ್ನ ಈ ಅಂಕಣದ ಉದ್ದೇಶ ಅಸ್ಪೃಶ್ಯರು ಯಾರು ಎಂದು ತಿಳಿಸುವುದಲ್ಲ. ಅಸ್ಪೃಶ್ಯತೆ ಧಾರ್ಮಿಕ ಆಚರಣೆಯಿಂದ ಹಿಂದೂ ಮೇಲ್ಜಾತಿಗಳು ಎಂದು ಕರೆಸಿಕೊಂಡವರು ಹೇಗೆ ದಲಿತರನ್ನು ಕಿತ್ತು ಕೊಂದಿದ್ದಾರೆ ಎಂಬುದನ್ನು ತಿಳಿಸುವುದಾಗಿದೆ. ಅದಾಗ್ಯೂ ಸಂಪೂರ್ಣ ವಿವರಗಳಿಗೆ ಹೋಗದೆ ಸಂಕ್ಷಿಪ್ತವಾಗಿ ಅಸ್ಪೃಶ್ಯತೆಯ ಬಗ್ಗೆ ತಿಳಿಸುತ್ತೇನೆ. ಹರಪ್ಪ ನಾಗರಿಕತೆ ಪತನವಾಗುತ್ತಿದ್ದ ಕಾಲಕ್ಕೆ ಪ್ರಾಚೀನ ಭಾರತಕ್ಕೆ ಮಧ್ಯ ಏಷಿಯಾದಿಂದ ಆರ್ಯರು ಬಂದರು. ನಂತರ ಇಲ್ಲಿನ ಉತ್ತರ ಭಾರತದಲ್ಲಿ ನೆಲೆಸಿದ್ದ ಭಾರತದ ಮೂಲನಿವಾಸಿಗಳ ಜೊತೆಗೆ ಸಮ್ಮಿಲನ ಮತ್ತು ಸಂಘರ್ಷದ ಮೂಲಕ ಬೆರೆತರು, ಅಲ್ಲದೆ ಪ್ರತ್ಯೇಕವಾಗಿಯೂ ಗುರುತಿಸಿಕೊಂಡರು. ವೇದಗಳು, ಧರ್ಮಸೂತ್ರಗಳ ಮೂಲಕ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳ ಸಮಾಜವನ್ನು ಸ್ಥಾಪಿಸಿದರು. (ನೆನಪಿರಲಿ ಈ ವರ್ಣಗಳು ಆರ್ಯವರ್ತ ಪ್ರದೇಶಗಳಾದ ಗಂಗಾ-ಯಮುನಾ ಬಯಲಿಗೆ ಸೀಮಿತವಾಗಿದ್ದವು. ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಮಧ್ಯ ಭಾರತದ ಬಗ್ಗೆ ಇತಿಹಾಸದ ಆರಂಭಿಕ ಹೆಜ್ಜೆಗುರುತುಗಳು ಇನ್ನೂ ಸ್ಪಷ್ಟವಾಗಿ ರಚಿಸಬೇಕಿದೆ.) ಮಗಧದಲ್ಲಿ ನಂದರ ನಂತರ ವಿಶಾಲವಾದ ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾಯಿತು. ಈ ಭಾಗದಲ್ಲಿ ಆರ್ಯರು ಪ್ರಚಾರ ಮಾಡುತ್ತಿದ್ದ ಚಾತುರ್ವರ್ಣ ಧರ್ಮಕ್ಕೆ ವಿರೋಧವಾಗಿ ಹಲವು ಧರ್ಮಗಳು ಸ್ಥಾಪನೆಯಾದವು. ಅವುಗಳಲ್ಲಿ ಬೌದ್ಧ ಧರ್ಮ ಹಾಗೂ ಜೈನ ಧರ್ಮಗಳು ಪ್ರಸಿದ್ಧವಾದವು. ಹಾಗಾಗಿ ಚಂದ್ರಗುಪ್ತ ಮೌರ್ಯ ಕಡೆಯ ಕಾಲದಲ್ಲಿ ಜೈನನಾದರೆ ಸಾಮ್ರಾಟ್ ಅಶೋಕ ಕಳಿಂಗ ಯುದ್ಧದ ನಂತರ ಬೌದ್ಧನಾದನು.

ಸಾಮ್ರಾಟ್ ಅಶೋಕ

ಈ ಮೂಲಕ ಅಲ್ಲಿಯವರೆಗೂ ನೆಲೆಸಿದ್ದ ಚಾತುರ್ವರ್ಣ ಧರ್ಮದ ತಾರತಮ್ಯವನ್ನು ತೊರೆದು ಸರ್ವರೂ ಸಮವಾಗಿರಬೇಕೆಂಬ ಬೌದ್ಧ ಧರ್ಮಕ್ಕೆ ರಾಜಾಶ್ರಯ ನೀಡಿದನು. ಯಜ್ಞ-ಯಾಗಗಳನ್ನು ನಿಷೇಧಿಸಿದನು. ಅಂಬೇಡ್ಕರರು ಹೇಳುವಂತೆ ಇದರಿಂದ ಚಾತುರ್ವರ್ಣ ಧರ್ಮದ ಪುರೋಹಿತ ಜನಾಂಗದ ಬ್ರಾಹ್ಮಣರು ದಕ್ಷಿಣೆಯನ್ನು ಕಳೆದುಕೊಂಡು ಬಡವರಾದರು ಜೊತೆಗೆ ಅಧಿಕಾರವನ್ನೂ ಕಳೆದುಕೊಂಡರು. ಹಾಗಾಗಿ ಮೌರ್ಯ ಸಾಮ್ರಾಜ್ಯವನ್ನು ಉರುಳಿಸುವುದೇ ಅವರ ಮೊದಲ ಕರ್ತವ್ಯವಾಯಿತು. ಸಾಮ್ರಾಟ್ ಅಶೋಕನ ಮೊಮ್ಮಗ ಬೃಹಧ್ರತ ಮೌರ್ಯನ ಸೇನಾಧಿಪತಿಯಾಗಿದ್ದ ಶುಂಗ ಬ್ರಾಹ್ಮಣ ಪುಶ್ಯಮಿತ್ರನು ಬೃಹದ್ರತನನ್ನು ಕೊಂದು ಸಿಂಹಾಸನವೇರಿದನು. ಇಲ್ಲಿಂದ ಮತ್ತೆ ಚಾತುರ್ವರ್ಣ ಧರ್ಮ ಮೇಲುಗೈ ಸಾಧಿಸಿತು. ಈ ಕಾಲದಲ್ಲಿಯೇ ಅಂದರೆ ಕ್ರಿ.ಪೂ 1ನೇ ಶತಮಾನದಲ್ಲಿ ಶೂದ್ರರನ್ನೂ ಮಹಿಳೆಯರನ್ನು ಹದ್ದುಬಸ್ತಿನಲ್ಲಿಟ್ಟು ಕೂಲಿಗಳನ್ನಾಗಿಸಿಕೊಳ್ಳುವ ಮನುಸ್ಮೃತಿ ರಚನೆಯಾಯಿತು. ದುಡಿಯುವ ಜನರನ್ನು ಶೂದ್ರರೆಂದು ಬಗೆದು ಬಹಳ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಮನುಸ್ಮೃತಿಯು ಅಂತರ್ಜಾತಿ ವಿವಾಹ (ಕೆಳಜಾತಿಗಳು ಮೇಲ್ಜಾತಿಯವರನ್ನು ವಿವಾಹವಾಗುವುದನ್ನು) ಮತ್ತು ಅಂತರ್ ಭೋಜನವನ್ನು ನಿಷೇಧಿಸಿತು. ಇದರ ಪರಿಣಾಮವಾಗಿ ಜಾತಿಸಂಕರಗೊಂಡವರನ್ನು ಜಾತಿಭ್ರಷ್ಟರನ್ನಾಗಿಸಿ ಊರ ಹೊರಗೆ ಬಹಿಷ್ಕರಿಸಿದಾಗ ಅಸ್ಪೃಶ್ಯರು ಹುಟ್ಟಿದರೆಂದು ಮನುಸ್ಮೃತಿ ಸಮರ್ಥನೆ ನೀಡುತ್ತದೆ. ಆದರೆ ಅಂಬೇಡ್ಕರರಾಗಲೀ ಇತರೆ ಇತಿಹಾಸಕಾರರಾಗಲೀ ಈ ವಿವರಣೆಯನ್ನು ಒಪ್ಪುವುದಿಲ್ಲ. ಸುಮಾರು ಕ್ರಿ.ಶ 4ನೇ ಶತಮಾನದಷ್ಟೊತ್ತಿಗೆ ಅಸ್ಪೃಶ್ಯತೆ ಒಂದು ವ್ಯವಸ್ಥೆಯಾಗಿ ಮಾರ್ಪಟ್ಟಿತು. ಅದಕ್ಕೆ ಕಾರಣಗಳು ಇಂತಿವೆ.

  1.  ಗೋಮಾಂಸ ಸೇವಿಸುತ್ತಿದ್ದ ಬಿಡಿ ಜನಾಂಗಗಳು ಅದನ್ನು ಮುಂದುವರೆಸಿದ್ದು.
  2.  ನೆಲೆನಿಂತ ಮತ್ತು ಬಿಡಿ ಜನಾಂಗಗಳ ನಡುವಿನ ಒಪ್ಪಂದ.
  3.  ಬೌದ್ಧ ಧರ್ಮೀಯರು ಚಾತುರ್ವರ್ಣ ಧರ್ಮವನ್ನು ನಿರಾಕರಿಸಿದ್ದು.
  4.  ಸ್ವಚ್ಛ ಮಾಡುವ ಕಾಯಕವನ್ನು ಕೆಳದರ್ಜೆಗೆ ಇಳಿಸಿದ್ದು.

ಈ ಕಾರಣಗಳಿಗಾಗಿ ಚಾತುರ್ವರ್ಣ ಧರ್ಮದಲ್ಲಿ ಆರಂಭವಾದ ಅಸ್ಪೃಶ್ಯತೆಯು ಅಸ್ಪೃಶ್ಯರನ್ನು ಹುಟ್ಟುಹಾಕಿತು. ಆಶ್ಚರ್ಯವೆಂದರೆ ಅವರನ್ನು ಚಾತುರ್ವರ್ಣದಿಂದ ಹೊರಗಿಟ್ಟಿತು. ಅಂಬೇಡ್ಕರರ ಮಾತಿನಲ್ಲಿ ಹೇಳುವುದಾದರೆ ’ಆ ಸಮುದಾಯ ಹುಟ್ಟುವುದೂ ಅಸ್ಪೃಶ್ಯರಾಗಿ, ಬದುಕುವುದು ಅಸ್ಪೃಶ್ಯರಾಗಿ, ಸಾಯುವುದು ಅಸ್ಪೃಶ್ಯರಾಗಿ. ಮತ್ತೆ ಹಡೆಯುವುದು ಅಸ್ಪೃಶ್ಯತೆ ಕಳಂಕ ಅಂಟಿದ ಮಕ್ಕಳನ್ನು, ಅದು ಶಾಶ್ವತ, ಆನುವಂಶಿಕ ಕಳಂಕ ಆಗಿರುವುದರಿಂದ ಅದನ್ನು ತೊಳೆಯುವುದು ಯಾವುದರಿಂದಲೂ ಆಗದು’.

ಕ್ರಿ.ಶ 4ರ ನಂತರ ಅಸ್ಪೃಶ್ಯರೆಂದು ಕರೆಯಲಾದ ಹಲವು ಜಾತಿಗಳು ಈ ಮೊದಲು ಶೂದ್ರರಾಗಿದ್ದವು. ಬೌದ್ಧ ಗ್ರಂಥಗಳು ಹೇಳುವ ಅನೇಕ ಸೇವಾ ಜಾತಿಗಳು ಬ್ರಾಹ್ಮಣ್ಯಗಳಲ್ಲಿ ಹೇಳಿದ ಅಸ್ಪೃಶ್ಯರಿಗೆ ಸಂವಾದಿ. ಚಂಡಾಲ, ನಿಷಾದ, ವೇಣ, ರಥಕಾರ, ಪುಕ್ಕುಸರನ್ನು ನೀಚಕುಲ, ಹೀನಜಾತಿಯವರೆಂದು ಭಾವಿಸಲಾಗಿತ್ತು. ಆದರೆ ಅವರ ಮೇಲೆ ಗುಪ್ತರ ಕಾಲದವರೆಗೂ ಅಸ್ಪೃಶ್ಯತೆಯನ್ನು ಹೇರಲಾಗಿರಲಿಲ್ಲ. ಅವರನ್ನು ಮುಟ್ಟಲು, ನೋಡಲು ನಿಷೇಧಿಸಲಾಗಿರಲಿಲ್ಲ. ಕ್ರಿ.ಶ 4ನೇ ಶತಮಾನದಲ್ಲಿ ಪತಂಜಲಿ ಸೂಚಿಸುವಂತೆ ಪಾಣಿನಿ ಕಾಲದಲ್ಲಿ ಚಂಡಾಲ, ಮೃತಪರು, ಅನಿರ್ವಸಿತರು (ಊರಾಚೆ ಇರುವ) ಶೂದ್ರರು ಎನಿಸಿಕೊಂಡಿದ್ದರು. ಅವರು ಮುಟ್ಟಿದ ಕಂಚು ಪಾತ್ರೆ ಶಾಶ್ವತವಾಗಿ ಮೈಲಿಗೆಯಾಗುತ್ತಿತ್ತು. ಆದರೆ ಅವರು ಮುಟ್ಟಿದ ಮನುಷ್ಯರು ಮೈಲಿಗೆಯಾಗುತ್ತಿರಲಿಲ್ಲ. ಅಂದರೆ
ಅವರಿಬ್ಬರ ನಡುವೆ ಸಂಪರ್ಕವಿತ್ತು. ಆದರೆ ನಂತರದ ದಿನಗಳಲ್ಲಿ ಅದು ಪ್ರಕ್ಷಿಪ್ತವಾಗಿ ಆಪಸ್ತಂಬ ಸೂತ್ರದಲ್ಲಿ ಚಂಡಾಲನನ್ನು ನೋಡುವುದು, ಮುಟ್ಟುವುದು ಸಹ ಪಾಪಕರ ಎಂದಾಯಿತು. ಗೌತಮಸೂತ್ರವು ಚಂಡಾಲ ಮುಟ್ಟಿದರೆ ಸಚೇಲ ಸ್ನಾನ ಮಾಡಬೇಕೆನ್ನುತ್ತದೆ. ಇದು ಮೌರ್ಯ ಪೂರ್ವ ಯುಗದ ಕೊನೆಗೆ ಆದ ಬೆಳವಣಿಗೆಯಾದರೂ ಒಂದಿಡೀ ಸಮುದಾಯಕ್ಕೆ ಅಸ್ಪೃಶ್ಯತೆ ಕಳಂಕ ಹಚ್ಚುವ ಪರಿಪಾಠವಿರಲಿಲ್ಲ. ಗುಪ್ತರ ಕಾಲದಷ್ಟೊತ್ತಿಗೆ ಅಸ್ಪೃಶ್ಯತೆ ಭರತ ಖಂಡದಲ್ಲಿ ನೆಲೆಯೂರಲು ಆರಂಭಸಿತ್ತು.

ಆರ್. ಎಸ್ ಶರ್ಮಾ ಮತ್ತು ಕೊಸಾಂಬಿಯವರ ಪ್ರಕಾರ ಬೌದ್ಧ ಜಾತಕಗಳಲ್ಲಿ ಅನೇಕ ಕಡೆ ಚಂಡಾಲನು ಪಾಪದ ಮೂರ್ತಿಯಾಗಿ, ಅಸ್ಪೃಶ್ಯನಾಗಿ ವರ್ಣಿತನಾಗಿದ್ದಾನೆ. ಕಾಶಿಯ ಶೆಟ್ಟಿಯ ಮಗಳು ಚಂಡಾಲನನ್ನು ನೋಡಿದ್ದಕ್ಕೆ ಕಣ್ಣು ತೊಳೆದುಕೊಳ್ಳುತ್ತಾಳೆ. ಚಂಡಾಲನೊಬ್ಬನು ತಿಂದು ಬಿಸುಟಿದ್ದ ಅನ್ನಕ್ಕೆ ತಗುಲಿದ್ದ ಆಹಾರವನ್ನು ತಿಂದು 16 ಸಾವಿರ ಬ್ರಾಹ್ಮಣರು ಜಾತಿಭ್ರಷ್ಟರಾದರೆಂದು ಮತ್ತೊಂದು ಜಾತಕ ಕತೆ ಹೇಳುತ್ತದೆ. ಒಬ್ಬ ಬ್ರಾಹ್ಮಣನು ಚಂಡಾಲನ ಎಂಜಲು ತಿಂದು ಆತ್ಮಹತ್ಯೆ ಮಾಡಿಕೊಂಡ. ಅದೂ ತನ್ನ ಜಾತಿಯವರಿಂದ ಅವಹೇಳನ ತಪ್ಪಿಸಿಕೊಳ್ಳಲು! ಉತ್ತರಾಧ್ಯಯನ ಸೂತ್ರದಲ್ಲಿ ಉಲ್ಲೇಖವಾಗಿರುವಂತೆ ಕಾಮನಹಬ್ಬದಲ್ಲಿ ಕುಣಿಯುತ್ತಾ ಬಂದ ಮಾತಂಗರನ್ನು ಮೇಲುಜಾತಿಯವರು ಥಳಿಸಿ ಊರಾಚೆ ಅಟ್ಟಿದ ಕತೆ ಇದೆ. ಬೌದ್ಧ, ಜೈನ ಮೂಲಗಳಿಂದ ತಿಳಿದುಬರುವಂತೆ ಚಂಡಾಲರನ್ನು ಅಸ್ಪೃಶ್ಯರೆಂದು ಮೇಲುವರ್ಣದವರು ಹೀಯಾಳಿಸುತ್ತಿದ್ದರು. ಬ್ರಾಹ್ಮಣರಿಗೆ ಅವರ ಮೇಲೆ ವಿಶೇಷ ದ್ವೇಷವಿತ್ತು. ಗುಪ್ತರ ಕಾಲದಲ್ಲಿ ಹಲವು ಸಂಸ್ಕೃತ ಸಾಹಿತ್ಯ ಮತ್ತು ಧರ್ಮಸೂತ್ರಗಳನ್ನು ಪ್ರಕ್ಷೇಪವಾಗಿಸಿ ಅಸ್ಪೃಶ್ಯರನ್ನು ಶೂದ್ರರಿಗಿಂತ ಪ್ರತ್ಯೇಕವಾಗಿ ನೋಡುವ ಪರಿಪಾಠ ಆರಂಭವಾಯಿತು. ಇದನ್ನು ಬೌದ್ಧ ಮತ್ತು ಜೈನ ಗ್ರಂಥಗಳು ಗುರುತಿಸಿದ್ದವು ಮತ್ತು ಉಲ್ಲೇಖಿಸಿದ್ದವು.

ಕಾಲಕ್ರಮೇಣ ಶೂದ್ರರೂ ನಿರಾಕರಿಸಿದ ಸೇವಾ ಕಾರ್ಯಗಳಿಗೆ ನಿಯೋಜಿಸಿದ ಜನಾಂಗವೇ ಮುಂದೆ ಅಸ್ಪೃಶ್ಯರಾದರು. ಇದಕ್ಕೆ ಸಾಕ್ಷಿಯಾಗಿ ಚಂಡಾಲರು ಚಿಂದಿಬಟ್ಟೆ ಉಟ್ಟು ತಿರುಬೋಕಿಗಳಾದ ಚಿತ್ರಣ ಜಾತಕ ಕತೆಗಳಲ್ಲಿ ಬರುತ್ತದೆ. ಒಂದು ಜಾತಕದಲ್ಲಿ ಸೂಚಿತವಾಗಿರುವಂತೆ ಅವರನ್ನು ಬೀದಿಯ ಕಸ ಗುಡಿಸಲು ನೇಮಿಸಿದ್ದರು. ಚಂಡಾಲರ ಜೀವನವು ದುರ್ಬರವಾಗಿತ್ತು. ಬೌದ್ಧ ಗ್ರಂಥ ಅಂಗುತ್ತರ ನಿಕಾಯದಲ್ಲಿ ಹೇಳಿರುವಂತೆ ಒಬ್ಬ ಚಂಡಾಲ ಹುಡುಗ ಅಥವಾ ಹುಡುಗಿ ಚಿಂದಿ ಬಟ್ಟೆ ತೊಟ್ಟು, ಭಿಕ್ಷೆಗೆ ಬೋಕಿಯೊಂದನ್ನು ಹಿಡಿದು, ಗ್ರಾಮವೊಂದಕ್ಕೆ ಹೋಗಬೇಕಾದರೆ ತಗ್ಗಿಬಗ್ಗಿ ನಡೆಯಬೇಕಿತ್ತು. ಬೇರೆಯವರಿಂದ ಬೇರ್ಪಡಿಸಿ ಗುರುತಿಸಲು ಸಾಧ್ಯವಾಗುವಂತೆ ಅವರು ಬಣ್ಣದ ಬಟ್ಟೆ ತೊಟ್ಟು, ಸೊಂಟಕ್ಕೆ ಒಂದು ಹಗ್ಗ (ಉಡುದಾರ) ಸುತ್ತಿಕೊಂಡು ಓಡಾಡಬೇಕಿತ್ತು. ಈ ಜಾತಕಗಳೆಲ್ಲವೂ ಮೌರ್ಯ ಪೂರ್ವ ಕಾಲದ ಅಂತಿಮಘಟ್ಟಕ್ಕೆ ಸೇರಿದವು. ಗುಪ್ತರ ಕಾಲಘಟ್ಟದಲ್ಲಿ ಅಸ್ಪೃಶ್ಯತೆ ಆಚರಣೆ ಸಾಂಸ್ಥಿಕ ರೂಪ ತಳೆಯಿತೆಂದು ಹೇಳಬಹುದು. ಹಾಗಾಗಿ ಗುಪ್ತರ ಯುಗ ಸವರ್ಣರಿಗೆ ಸುವರ್ಣ ಯುಗ. ಅವರ್ಣರಿಗೆ ನರಕ ಯುಗ.

ದಾಸ ಮತ್ತು ಕರ್ಮಕಾರರಾಗಿದ್ದ ಶೂದ್ರರ ಜೀವನಕ್ಕಿಂತಲೂ ಹೆಚ್ಚಿನ ಕಾರ್ಮಣ್ಯ ಅಸ್ಪೃಶ್ಯರದ್ದು. ಶೂದ್ರರಿಗೆ ಸ್ವಲ್ಪಮಟ್ಟಿನ ಜೀವನ ಭದ್ರತೆ ಇದೆ. ಇವರಿಗೆ ಅದೂ ಇಲ್ಲ ಮತ್ತು ಚಾತುರ್ವರ್ಣ ಸಮಾಜವು ನಿಕೃಷ್ಟತೆಯನ್ನು ಇವರ ಮೇಲೆ ಸದಾ ಹೇರುತ್ತಿರುತ್ತದೆ. ಅಸ್ಪೃಶ್ಯರು ಬಗ್ಗೆ ಬೃಹಸ್ಪತಿ ವಿಶೇಷವಾಗಿ ಕಠಿಣ ಧೋರಣೆ ತಾಳುತ್ತಾನೆ. ಬ್ರಾಹ್ಮಣರಿಗೆ ಅಪಚಾರ ಮಾಡಿದರೆ ಇವರಿಗೆ ಎಂದಿಗೂ ದಂಡ ಹಾಕಬಾರದು, ಹೊಡೆತ ಕೊಡಬೇಕು. ಶ್ವಪಚ, ಮೇದ, ಚಾಂಡಾಲ, ಮಾವುತ, ದಾಸ ಮುಂತಾದವರ ಬಗ್ಗೆ ಇಂತದೇ ಕಟ್ಟಳೆಯನ್ನು ನಾರದ ವಿಧಿಸುತ್ತಾನೆ. ಚೀನಾ ಯಾತ್ರಿಕ ಫಾಹಿಯಾನನು ಚಂಡಾಲರು ಊರ ಹೊರಗೆ ವಾಸ ಮಾಡುತ್ತಿದ್ದರೆಂದೂ, ಮಾಂಸದ ವ್ಯಾಪಾರ ಮಾಡುತ್ತಿದ್ದರೆಂದೂ ತಿಳಿಸಿದ್ದಾನೆ. ಅವರು ಊರಿನೊಳಕ್ಕೆ ಬಂದಾಗ ಮೇಲ್ಜಾತಿಯವರು ದೂರವೇ ಇರುತ್ತಿದ್ದರು. ರಸ್ತೆಯೇ ಅವರಿಂದ ಮೈಲಿಗೆಯಾಯಿತು ಎಂದು ಪರಿಗಣಿಸುತ್ತಿದ್ದರು. ಒಟ್ಟಾರೆ ಅಂಬೇಡ್ಕರರು ಹೇಳುವಂತೆ ’ಬೌದ್ಧರು ಮತ್ತು ಬ್ರಾಹ್ಮಣರ ನಡುವೆ ಪಾರಮ್ಯಕ್ಕಾಗಿ ನಡೆದ ಹೋರಾಟದ ಮದ್ಯೆ ಅಸ್ಪೃಶ್ಯತೆಯ ಜನನವಾಯಿತು’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: VHP, ಬಜರಂಗದಳ ಪಕ್ಷವೊಂದರ ಬಾಲಂಗೋಚಿಗಳು; ಕರ್ನಾಟಕ ಅವರ ಜಹಗೀರಲ್ಲ: ಕುಮಾರಸ್ವಾಮಿ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆ ಆರ್ಯರು ಹರಪ್ಪ ಸಾಮ್ರಾಜ್ಯವನ್ನು ನಾಶಮಾಡಿ ಆರ್ಯವರ್ತ ಸಾಮ್ರಾಜ್ಯವನ್ನು ಸ್ಥಾಪಿಸಿದಾಗಿನಿಂದಲು ಜಾರಿಯಲ್ಲಿದೆ. ಅಂದಾಜು ೪೫೦೦ ವರ್ಷಗಳಿಂದ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...