Homeಕಥೆಸಣ್‌ಸಣ್ ಕಥೆ: ತೆರೇಸಾ ಎಂದು ಕೂಗಿದ ಮನುಷ್ಯ

ಸಣ್‌ಸಣ್ ಕಥೆ: ತೆರೇಸಾ ಎಂದು ಕೂಗಿದ ಮನುಷ್ಯ

- Advertisement -
- Advertisement -

ನಾನು ಪಾದಚಾರಿ ರಸ್ತೆಯಿಂದ ಹೊರಬಿದ್ದು, ಮೇಲೆ ನೋಡುತ್ತಾ ಕೆಲ ಹೆಜ್ಜೆ ಹಿಂದೆ ಬಂದು, ರಸ್ತೆಯ ನಟ್ಟನಡುವೆ ನಿಂತು, ಎರಡೂ ಕೈಗಳನ್ನ ಬಾಯಿಗೆ ಲೌಡ್ ಸ್ಪೀಕರ್ ರೀತಿಯಲ್ಲಿ ಹಿಡಿದುಕೊಂಡು ಬಿಲ್ಡಿಂಗ್‌ನ ಮೇಲ್ಮಹಡಿಗಳತ್ತ ನೋಡುತ್ತ ಜೋರಾಗಿ ಕೂಗಿಕೊಂಡೆ: “ತೆರೇಸಾ”.

ನನ್ನ ನೆರಳು ಚಂದ್ರನಿಗೆ ಹೆದರಿಕೊಂಡಂತೆ, ನನ್ನ ಕಾಲುಗಳ ನಡುವೆ ಬಂದು ಸೇರಿಕೊಂಡಿತು.

ಯಾರೋ ಒಬ್ಬ ಹತ್ತಿರ ಬಂದ, ನಾನು ಮತ್ತೊಮ್ಮೆ ಕೂಗಿಕೊಂಡೆ: “ತೆರೇಸಾ”. ಆ ಮನುಷ್ಯ ನನ್ನ ಹತ್ತಿರ ಬಂದು ಹೇಳಿದ: “ನೀನು ಜೋರಾಗಿ ಕೂಗದಿದ್ದರೆ ಅವಳಿಗೆ ಕೇಳಿಸುವುದಿಲ್ಲ. ಇಬ್ಬರೂ ಸೇರಿ ಪ್ರಯತ್ನ ಮಾಡುವ. ಮೂರು ಎಣಿಸುತ್ತೇನೆ, ಮೂರು ಮುಗಿಯುತ್ತಿದ್ದ ಹಾಗೆ ಇಬ್ಬರೂ ಸೇರಿ ಕೂಗುವ”. ಆ ಮನುಷ್ಯ ಮೂರು ಎಣಿಸಲು ಶುರು ಮಾಡಿದ: “ಒಂದು.. ಎರಡು.. ಮೂರು..”. ಇಬ್ಬರೂ ಜೋರಾಗಿ ಕೂಗಿದೆವು, “ತೆ..ರೇ..ಸಾ..”

ಆ ದಾರಿಯಲ್ಲೇ ಹಾದು ಹೋಗುತ್ತಿದ್ದ, ಬಹುಶಃ ಥಿಯೇಟರ್ ಇಂದ ಅಥವಾ ಕಾಫಿ ಶಾಪ್ ಇಂದ ವಾಪಸ್ಸಾಗುತ್ತಿದ್ದ ಸಣ್ಣ ಗೆಳೆಯರ ಗುಂಪೊಂದು ನಾವು ಕೂಗುವುದನ್ನ ಗಮನಿಸಿ, ನನ್ನ ಹತ್ತಿರ ಬಂದು, “ನಾವೂ ನಿಮ್ಮ ಜೊತೆ ಕೂಗುತ್ತೇವೆ” ಎಂದು ರಸ್ತೆಯ ನಡುವೆ ನಮ್ಮನ್ನು ಸೇರಿಕೊಂಡರು. ಆ ಗುಂಪಿನಲ್ಲಿ ಒಬ್ಬ ಮೂರು ಎಣಿಸಲು ಶುರು ಮಾಡಿದ, ಒಂದು.. ಎರಡು.. ಮೂರು, ನಾವೆಲ್ಲ ಸೇರಿ ಜೋರಾಗಿ ಕೂಗಿದೆವು, “ತೆ.. ರೇ.. ಸಾ..!”

ಇನ್ನೂ ಯಾರೋ ಒಬ್ಬರು ಬಂದು ನಮ್ಮನ್ನು ಸೇರಿಕೊಂಡರು; ಹತ್ತು ಹದಿನೈದು ನಿಮಿಷಗಳಲ್ಲಿ ಅಲ್ಲಿ ನಾವು ಒಂದು ಇಪ್ಪತ್ತು ಜನ ಸೇರಿಕೊಂಡಿದ್ದೆವು. ಆಗಾಗ ಇನ್ನೂ ಕೆಲವು ಹೊಸಬರು ನಮ್ಮನ್ನು ಸೇರುತ್ತಲೇ ಇದ್ದರು.

ನಾವೆಲ್ಲರೂ ಸೇರಿ ಒಂದೇ ಬಾರಿ, ಒಂದೇ ರೀತಿಯಲ್ಲಿ ಕೂಗುವುದು ಅಷ್ಟು ಸುಲಭವಾಗಿರಲಿಲ್ಲ. ಯಾರೋ ಒಬ್ಬರು ಮೂರು ಎಣಿಸುವುದಕ್ಕಿಂತ ಮುಂಚೆಯೇ ಕೂಗುತ್ತಿದ್ದರೆ, ಮತ್ತಿನ್ನೊಬ್ಬರು ನಾವೂ ಕೂಗಿ ಆದ ಮೇಲೆ ಕೂಗುತ್ತಿದ್ದರು, ಆದರೆ ಕೊನೆಕೊನೆಗೆ ಎಲ್ಲರೂ ಸೇರಿ ತಕ್ಕಮಟ್ಟಿನ ಜೋರಾದ ಒಂದೇ ದನಿಯ ಕೂಗು ಹಾಕುವುದರಲ್ಲಿ ಸಫಲರಾದೆವು. ’ತೆ’ ಯನ್ನ ಸಣ್ಣದಾಗಿ ಮತ್ತು ಬಹಳ ಹೊತ್ತಿನವರೆಗೆ ಕೂಗುವುದೆಂದೂ, ’ರೆ’ ಯನ್ನ ಜೋರಾಗಿ ಮತ್ತು ಬಹಳ ಹೊತ್ತಿನವರೆಗೆ ಕೂಗುವುದೆಂದೂ ಮತ್ತು ’ಸಾ’ನ್ನ ಮೆಲ್ಲಗೆ ಬೇಗ ಕೂಗಿ ಮುಗಿಸುವುದೆಂದೂ ನಮ್ಮ ನಡುವೆ ಒಪ್ಪಂದವಾಯಿತು. ಈ ಥರ ಕೂಗುವುದು ತುಂಬ ಮಜವಾಗಿಯೂ, ಪರಿಣಾಮಕಾರಿಯೂ ಆಗಿತ್ತು. ಯಾರಾದರೂ ತಪ್ಪು ಮಾಡಿದಾಗ ಆಗಾಗ ಸಣ್ಣಪುಟ್ಟ ತಕರಾರುಗಳು ಹುಟ್ಟಿಕೊಳ್ಳುತ್ತಿದ್ದವು.

ನಮ್ಮ ಕೂಗು ಈಗ ಸರಿಯಾಗಿ ಮೂಡಿಬರುತ್ತಿತ್ತು. ಆಗಲೇ ಒಬ್ಬ-ಅವನ ದನಿಯನ್ನಷ್ಟೇ ಕೇಳಿದರೆ ಇವನದು ವಿಚಿತ್ರ ಮುಖ ಆಗಿರಬಹುದು ಅನಿಸುವಂಥವ-ಪ್ರಶ್ನೆ ಮಾಡಿದ: “ಅವಳು ಮನೆಯಲ್ಲಿರುವುದು ನಿನಗೆ ಖಾತ್ರೀನಾ?”

“ಇಲ್ಲ ನಾನು ಉತ್ತರಿಸಿದೆ”.

“ಇದು ಕಷ್ಟ, ಕೀ ಏನಾದರೂ ಮರೆತಿದ್ದೀಯಾ?” ಇನ್ನೊಬ್ಬ ಕೇಳಿದ.

“ಇಲ್ಲ ಇಲ್ಲ ಕೀ ನನ್ನ ಹತ್ತಿರವೇ ಇದೆ”

ಉತ್ತರಿಸಿದೆ.

“ಮೇಲೆ ಹೋಗಿ ಯಾಕೆ ಚೆಕ್ ಮಾಡಬಾರದು ನೀನು?” ಮತ್ತೊಬ್ಬ ಸಲಹೆ ನೀಡಿದ.

“ನಾನು ಇಲ್ಲಿರುವುದಿಲ್ಲ, ನಾನು ಇರೋದು ಊರಿನ ಇನ್ನೊಂದು ಬದಿಯಲ್ಲಿ ಸಮಾಧಾನವಾಗಿ ಹೇಳಿದೆ”.

“ನನ್ನ ಕುತೂಹಲಕ್ಕೆ ಕ್ಷಮೆ ಇರಲಿ, ಹಾಗಾದರೆ ಇಲ್ಲಿ ಇರೋದು ಯಾರು?” ವಿಚಿತ್ರ ದನಿಯ ಮನುಷ್ಯ ಮೆಲುದನಿಯಲ್ಲಿ ಪ್ರಶ್ನೆ ಮಾಡಿದ.

“ನಿಜವಾಗಿಯೂ ನನಗೆ ಗೊತ್ತಿಲ್ಲ ನಾನು ಉತ್ತರಿಸಿದೆ”.

ನನ್ನ ಉತ್ತರ ಕೇಳಿ ಸುತ್ತ ಇದ್ದ ಜನ ಬೇಸರ ಮಾಡಿಕೊಂಡರು.

“ಹಾಗಾದರೆ ನೀನು ಇಲ್ಲಿ ನಿಂತು ತೆರೇಸಾ ಅಂತ ಕೂಗುತ್ತಿರುವುದು ಯಾರನ್ನ?” ಕೀರಲು ದನಿಯ ವ್ಯಕ್ತಿಯೊಬ್ಬ ಸ್ವಲ್ಪ ಗಡುಸಾಗಿಯೇ ಪ್ರಶ್ನಿಸಿದ.

“ನನ್ನ ಪ್ರಕಾರ, ನಾವು ಬೇರೆ ಯಾವ ಹೆಸರನ್ನಾದರೂ ಕೂಗಬಹುದು ಅಥವಾ ಬೇರೆ ಯಾವ ಜಾಗದಲ್ಲೂ ಕೂಗಬಹುದು, ಅದೇನು ಅಂಥ ದೊಡ್ಡ ವಿಷಯ ಅಲ್ಲ” ನಾನೂ ಸ್ವಲ್ಪ ಗಡುಸಾಗಿಯೇ ಉತ್ತರಿಸಿದೆ.

ನನ್ನ ಉತ್ತರದಿಂದ ಸುತ್ತಲಿನ ಜನಕ್ಕೆ ಸಿಟ್ಟು ಬಂತು.

“ನೀನು ನಮ್ಮನ್ನ ಯಾವುದರಲ್ಲಾದರೂ ಸಿಕ್ಕಿಸಿ ಹಾಕಿಸುತ್ತಿಲ್ಲ ತಾನೇ?” ಕೀರಲು ದನಿಯ ಮನುಷ್ಯ ಮತ್ತೆ ಪ್ರಶ್ನೆ ಮಾಡಿದ.

“ಏನು ಹಾಗಂದರೆ?” ನಾನೂ ಸ್ವಲ್ಪ ಸಿಟ್ಟಾದೆ, ನನ್ನ ಒಳ್ಳೆಯತನಕ್ಕಾಗಿ ಸಾಕ್ಷಿ ಹೇಳುವಂತೆ ಸುತ್ತಲಿನ ಜನರನ್ನೊಮ್ಮೆ ತಿರುಗಿ ನೋಡಿದೆ. ಎಲ್ಲ ಸುಮ್ಮನೇ ನಿಂತಿದ್ದರು, ನನ್ನ ಸೂಚನೆಯನ್ನ ಗಮನಿಸದವರಂತೆ.

ಎಲ್ಲರ ಮುಖದಲ್ಲೂ ಮುಜುಗರ ಎದ್ದು ಕಾಣುತ್ತಿತ್ತು.

“ಇಲ್ಲಿಂದ ಹೊರಡುವ ಮುನ್ನ ಯಾಕೆ ನಾವು ಒಮ್ಮೆ ಕೊನೆಯ ಬಾರಿ ಪ್ರಯತ್ನ ಮಾಡಬಾರದು?” ಮೃದು ಸ್ವಭಾವದವನಂತೆ ಕಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮಾತನಾಡಿದ. ಅವನ ಮಾತು ಒಪ್ಪಿಕೊಂಡವರಂತೆ ಒಂದು.. ಎರಡು.. ಮೂರು ಎಣಿಸುತ್ತ ಎಲ್ಲರೂ ಜೋರಾಗಿ ಕೂಗಿದೆವು, ತೆ.. ರೇ.. ಸಾ.. ಆದರೆ ಯಾಕೋ ಈ ಕೂಗು ಅಷ್ಟು ಸರಿಯಾಗಿ ಮೂಡಿ ಬರಲಿಲ್ಲ. ಆಮೇಲೆ ಎಲ್ಲರೂ ತಮ್ಮತಮ್ಮ ದಾರಿ ಹಿಡಿದು ಅಲ್ಲಿಂದ ಹೊರಟುಹೋದರು.

ನಾನೂ ಆ ಜಾಗ ಖಾಲಿ ಮಾಡಿ ಮುಂದಿನ ರಸ್ತೆಯ ಚೌಕಿಗೆ ಬರುತ್ತಿದ್ದ ಹಾಗೆಯೇ, ತೆ.. ರೇ.. ಸಾ ಎಂದು ಕೂಗುತ್ತಿದ್ದ ಒಂದು ದನಿ ನನ್ನ ಕಿವಿಗೆ ಬಿತ್ತು.

ಯಾರೋ ಒಬ್ಬ ಇನ್ನೂ ಅಲ್ಲೇ ನಿಂತು ಪ್ರಯತ್ನ ಮಾಡುತ್ತಿದ್ದಾನೆ, ಯಾರೋ ಒಬ್ಬ ಮೊಂಡ ಮನುಷ್ಯ.

ಅನುವಾದ: ಚಿದಂಬರ ನರೇಂದ್ರ

ಇಟಾಲೋ ಕ್ಯಾಲ್ವಿನೋ

ಇಟಾಲೋ ಕ್ಯಾಲ್ವಿನೋ
ಇಟಾಲಿಯನ್ ಕಥೆಗಾರ-ಕಾದಂಬರಿಕಾರ. ’ಕಾಸ್ಮಿಕಾಮಿಕ್ಸ್’, ’ಇನ್‌ವಿಸಿಬಲ್ ಸಿಟೀಸ್’, ’ಇಫ್ ಆನ್ ಎ ವಿಂಟರ್ಸ್ ನೈಟ್ ಎ ಟ್ರಾವೆಲ್ಲರ್’ ಅವರ ಪುಸ್ತಕಗಳಲ್ಲಿ ಕೆಲವು. ಪ್ರಸ್ತುತ ಕಥೆ ಅವರ ’ನಂಬರ್ಸ್ ಇನ್ ಡಾರ್ಕ್’ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ.


ಇದನ್ನೂ ಓದಿ: ನಾನೊಂದ ಬುಕ್ಕ ಕಂಡೆ: ಪುಸ್ತಕ ಸಂಗ್ರಹ ಲೋಕದ ಕುರಿತ ಪ್ರಬಂಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...