Homeಕಥೆಸಣ್‌ಸಣ್ ಕಥೆ: ತೆರೇಸಾ ಎಂದು ಕೂಗಿದ ಮನುಷ್ಯ

ಸಣ್‌ಸಣ್ ಕಥೆ: ತೆರೇಸಾ ಎಂದು ಕೂಗಿದ ಮನುಷ್ಯ

- Advertisement -
- Advertisement -

ನಾನು ಪಾದಚಾರಿ ರಸ್ತೆಯಿಂದ ಹೊರಬಿದ್ದು, ಮೇಲೆ ನೋಡುತ್ತಾ ಕೆಲ ಹೆಜ್ಜೆ ಹಿಂದೆ ಬಂದು, ರಸ್ತೆಯ ನಟ್ಟನಡುವೆ ನಿಂತು, ಎರಡೂ ಕೈಗಳನ್ನ ಬಾಯಿಗೆ ಲೌಡ್ ಸ್ಪೀಕರ್ ರೀತಿಯಲ್ಲಿ ಹಿಡಿದುಕೊಂಡು ಬಿಲ್ಡಿಂಗ್‌ನ ಮೇಲ್ಮಹಡಿಗಳತ್ತ ನೋಡುತ್ತ ಜೋರಾಗಿ ಕೂಗಿಕೊಂಡೆ: “ತೆರೇಸಾ”.

ನನ್ನ ನೆರಳು ಚಂದ್ರನಿಗೆ ಹೆದರಿಕೊಂಡಂತೆ, ನನ್ನ ಕಾಲುಗಳ ನಡುವೆ ಬಂದು ಸೇರಿಕೊಂಡಿತು.

ಯಾರೋ ಒಬ್ಬ ಹತ್ತಿರ ಬಂದ, ನಾನು ಮತ್ತೊಮ್ಮೆ ಕೂಗಿಕೊಂಡೆ: “ತೆರೇಸಾ”. ಆ ಮನುಷ್ಯ ನನ್ನ ಹತ್ತಿರ ಬಂದು ಹೇಳಿದ: “ನೀನು ಜೋರಾಗಿ ಕೂಗದಿದ್ದರೆ ಅವಳಿಗೆ ಕೇಳಿಸುವುದಿಲ್ಲ. ಇಬ್ಬರೂ ಸೇರಿ ಪ್ರಯತ್ನ ಮಾಡುವ. ಮೂರು ಎಣಿಸುತ್ತೇನೆ, ಮೂರು ಮುಗಿಯುತ್ತಿದ್ದ ಹಾಗೆ ಇಬ್ಬರೂ ಸೇರಿ ಕೂಗುವ”. ಆ ಮನುಷ್ಯ ಮೂರು ಎಣಿಸಲು ಶುರು ಮಾಡಿದ: “ಒಂದು.. ಎರಡು.. ಮೂರು..”. ಇಬ್ಬರೂ ಜೋರಾಗಿ ಕೂಗಿದೆವು, “ತೆ..ರೇ..ಸಾ..”

ಆ ದಾರಿಯಲ್ಲೇ ಹಾದು ಹೋಗುತ್ತಿದ್ದ, ಬಹುಶಃ ಥಿಯೇಟರ್ ಇಂದ ಅಥವಾ ಕಾಫಿ ಶಾಪ್ ಇಂದ ವಾಪಸ್ಸಾಗುತ್ತಿದ್ದ ಸಣ್ಣ ಗೆಳೆಯರ ಗುಂಪೊಂದು ನಾವು ಕೂಗುವುದನ್ನ ಗಮನಿಸಿ, ನನ್ನ ಹತ್ತಿರ ಬಂದು, “ನಾವೂ ನಿಮ್ಮ ಜೊತೆ ಕೂಗುತ್ತೇವೆ” ಎಂದು ರಸ್ತೆಯ ನಡುವೆ ನಮ್ಮನ್ನು ಸೇರಿಕೊಂಡರು. ಆ ಗುಂಪಿನಲ್ಲಿ ಒಬ್ಬ ಮೂರು ಎಣಿಸಲು ಶುರು ಮಾಡಿದ, ಒಂದು.. ಎರಡು.. ಮೂರು, ನಾವೆಲ್ಲ ಸೇರಿ ಜೋರಾಗಿ ಕೂಗಿದೆವು, “ತೆ.. ರೇ.. ಸಾ..!”

ಇನ್ನೂ ಯಾರೋ ಒಬ್ಬರು ಬಂದು ನಮ್ಮನ್ನು ಸೇರಿಕೊಂಡರು; ಹತ್ತು ಹದಿನೈದು ನಿಮಿಷಗಳಲ್ಲಿ ಅಲ್ಲಿ ನಾವು ಒಂದು ಇಪ್ಪತ್ತು ಜನ ಸೇರಿಕೊಂಡಿದ್ದೆವು. ಆಗಾಗ ಇನ್ನೂ ಕೆಲವು ಹೊಸಬರು ನಮ್ಮನ್ನು ಸೇರುತ್ತಲೇ ಇದ್ದರು.

ನಾವೆಲ್ಲರೂ ಸೇರಿ ಒಂದೇ ಬಾರಿ, ಒಂದೇ ರೀತಿಯಲ್ಲಿ ಕೂಗುವುದು ಅಷ್ಟು ಸುಲಭವಾಗಿರಲಿಲ್ಲ. ಯಾರೋ ಒಬ್ಬರು ಮೂರು ಎಣಿಸುವುದಕ್ಕಿಂತ ಮುಂಚೆಯೇ ಕೂಗುತ್ತಿದ್ದರೆ, ಮತ್ತಿನ್ನೊಬ್ಬರು ನಾವೂ ಕೂಗಿ ಆದ ಮೇಲೆ ಕೂಗುತ್ತಿದ್ದರು, ಆದರೆ ಕೊನೆಕೊನೆಗೆ ಎಲ್ಲರೂ ಸೇರಿ ತಕ್ಕಮಟ್ಟಿನ ಜೋರಾದ ಒಂದೇ ದನಿಯ ಕೂಗು ಹಾಕುವುದರಲ್ಲಿ ಸಫಲರಾದೆವು. ’ತೆ’ ಯನ್ನ ಸಣ್ಣದಾಗಿ ಮತ್ತು ಬಹಳ ಹೊತ್ತಿನವರೆಗೆ ಕೂಗುವುದೆಂದೂ, ’ರೆ’ ಯನ್ನ ಜೋರಾಗಿ ಮತ್ತು ಬಹಳ ಹೊತ್ತಿನವರೆಗೆ ಕೂಗುವುದೆಂದೂ ಮತ್ತು ’ಸಾ’ನ್ನ ಮೆಲ್ಲಗೆ ಬೇಗ ಕೂಗಿ ಮುಗಿಸುವುದೆಂದೂ ನಮ್ಮ ನಡುವೆ ಒಪ್ಪಂದವಾಯಿತು. ಈ ಥರ ಕೂಗುವುದು ತುಂಬ ಮಜವಾಗಿಯೂ, ಪರಿಣಾಮಕಾರಿಯೂ ಆಗಿತ್ತು. ಯಾರಾದರೂ ತಪ್ಪು ಮಾಡಿದಾಗ ಆಗಾಗ ಸಣ್ಣಪುಟ್ಟ ತಕರಾರುಗಳು ಹುಟ್ಟಿಕೊಳ್ಳುತ್ತಿದ್ದವು.

ನಮ್ಮ ಕೂಗು ಈಗ ಸರಿಯಾಗಿ ಮೂಡಿಬರುತ್ತಿತ್ತು. ಆಗಲೇ ಒಬ್ಬ-ಅವನ ದನಿಯನ್ನಷ್ಟೇ ಕೇಳಿದರೆ ಇವನದು ವಿಚಿತ್ರ ಮುಖ ಆಗಿರಬಹುದು ಅನಿಸುವಂಥವ-ಪ್ರಶ್ನೆ ಮಾಡಿದ: “ಅವಳು ಮನೆಯಲ್ಲಿರುವುದು ನಿನಗೆ ಖಾತ್ರೀನಾ?”

“ಇಲ್ಲ ನಾನು ಉತ್ತರಿಸಿದೆ”.

“ಇದು ಕಷ್ಟ, ಕೀ ಏನಾದರೂ ಮರೆತಿದ್ದೀಯಾ?” ಇನ್ನೊಬ್ಬ ಕೇಳಿದ.

“ಇಲ್ಲ ಇಲ್ಲ ಕೀ ನನ್ನ ಹತ್ತಿರವೇ ಇದೆ”

ಉತ್ತರಿಸಿದೆ.

“ಮೇಲೆ ಹೋಗಿ ಯಾಕೆ ಚೆಕ್ ಮಾಡಬಾರದು ನೀನು?” ಮತ್ತೊಬ್ಬ ಸಲಹೆ ನೀಡಿದ.

“ನಾನು ಇಲ್ಲಿರುವುದಿಲ್ಲ, ನಾನು ಇರೋದು ಊರಿನ ಇನ್ನೊಂದು ಬದಿಯಲ್ಲಿ ಸಮಾಧಾನವಾಗಿ ಹೇಳಿದೆ”.

“ನನ್ನ ಕುತೂಹಲಕ್ಕೆ ಕ್ಷಮೆ ಇರಲಿ, ಹಾಗಾದರೆ ಇಲ್ಲಿ ಇರೋದು ಯಾರು?” ವಿಚಿತ್ರ ದನಿಯ ಮನುಷ್ಯ ಮೆಲುದನಿಯಲ್ಲಿ ಪ್ರಶ್ನೆ ಮಾಡಿದ.

“ನಿಜವಾಗಿಯೂ ನನಗೆ ಗೊತ್ತಿಲ್ಲ ನಾನು ಉತ್ತರಿಸಿದೆ”.

ನನ್ನ ಉತ್ತರ ಕೇಳಿ ಸುತ್ತ ಇದ್ದ ಜನ ಬೇಸರ ಮಾಡಿಕೊಂಡರು.

“ಹಾಗಾದರೆ ನೀನು ಇಲ್ಲಿ ನಿಂತು ತೆರೇಸಾ ಅಂತ ಕೂಗುತ್ತಿರುವುದು ಯಾರನ್ನ?” ಕೀರಲು ದನಿಯ ವ್ಯಕ್ತಿಯೊಬ್ಬ ಸ್ವಲ್ಪ ಗಡುಸಾಗಿಯೇ ಪ್ರಶ್ನಿಸಿದ.

“ನನ್ನ ಪ್ರಕಾರ, ನಾವು ಬೇರೆ ಯಾವ ಹೆಸರನ್ನಾದರೂ ಕೂಗಬಹುದು ಅಥವಾ ಬೇರೆ ಯಾವ ಜಾಗದಲ್ಲೂ ಕೂಗಬಹುದು, ಅದೇನು ಅಂಥ ದೊಡ್ಡ ವಿಷಯ ಅಲ್ಲ” ನಾನೂ ಸ್ವಲ್ಪ ಗಡುಸಾಗಿಯೇ ಉತ್ತರಿಸಿದೆ.

ನನ್ನ ಉತ್ತರದಿಂದ ಸುತ್ತಲಿನ ಜನಕ್ಕೆ ಸಿಟ್ಟು ಬಂತು.

“ನೀನು ನಮ್ಮನ್ನ ಯಾವುದರಲ್ಲಾದರೂ ಸಿಕ್ಕಿಸಿ ಹಾಕಿಸುತ್ತಿಲ್ಲ ತಾನೇ?” ಕೀರಲು ದನಿಯ ಮನುಷ್ಯ ಮತ್ತೆ ಪ್ರಶ್ನೆ ಮಾಡಿದ.

“ಏನು ಹಾಗಂದರೆ?” ನಾನೂ ಸ್ವಲ್ಪ ಸಿಟ್ಟಾದೆ, ನನ್ನ ಒಳ್ಳೆಯತನಕ್ಕಾಗಿ ಸಾಕ್ಷಿ ಹೇಳುವಂತೆ ಸುತ್ತಲಿನ ಜನರನ್ನೊಮ್ಮೆ ತಿರುಗಿ ನೋಡಿದೆ. ಎಲ್ಲ ಸುಮ್ಮನೇ ನಿಂತಿದ್ದರು, ನನ್ನ ಸೂಚನೆಯನ್ನ ಗಮನಿಸದವರಂತೆ.

ಎಲ್ಲರ ಮುಖದಲ್ಲೂ ಮುಜುಗರ ಎದ್ದು ಕಾಣುತ್ತಿತ್ತು.

“ಇಲ್ಲಿಂದ ಹೊರಡುವ ಮುನ್ನ ಯಾಕೆ ನಾವು ಒಮ್ಮೆ ಕೊನೆಯ ಬಾರಿ ಪ್ರಯತ್ನ ಮಾಡಬಾರದು?” ಮೃದು ಸ್ವಭಾವದವನಂತೆ ಕಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮಾತನಾಡಿದ. ಅವನ ಮಾತು ಒಪ್ಪಿಕೊಂಡವರಂತೆ ಒಂದು.. ಎರಡು.. ಮೂರು ಎಣಿಸುತ್ತ ಎಲ್ಲರೂ ಜೋರಾಗಿ ಕೂಗಿದೆವು, ತೆ.. ರೇ.. ಸಾ.. ಆದರೆ ಯಾಕೋ ಈ ಕೂಗು ಅಷ್ಟು ಸರಿಯಾಗಿ ಮೂಡಿ ಬರಲಿಲ್ಲ. ಆಮೇಲೆ ಎಲ್ಲರೂ ತಮ್ಮತಮ್ಮ ದಾರಿ ಹಿಡಿದು ಅಲ್ಲಿಂದ ಹೊರಟುಹೋದರು.

ನಾನೂ ಆ ಜಾಗ ಖಾಲಿ ಮಾಡಿ ಮುಂದಿನ ರಸ್ತೆಯ ಚೌಕಿಗೆ ಬರುತ್ತಿದ್ದ ಹಾಗೆಯೇ, ತೆ.. ರೇ.. ಸಾ ಎಂದು ಕೂಗುತ್ತಿದ್ದ ಒಂದು ದನಿ ನನ್ನ ಕಿವಿಗೆ ಬಿತ್ತು.

ಯಾರೋ ಒಬ್ಬ ಇನ್ನೂ ಅಲ್ಲೇ ನಿಂತು ಪ್ರಯತ್ನ ಮಾಡುತ್ತಿದ್ದಾನೆ, ಯಾರೋ ಒಬ್ಬ ಮೊಂಡ ಮನುಷ್ಯ.

ಅನುವಾದ: ಚಿದಂಬರ ನರೇಂದ್ರ

ಇಟಾಲೋ ಕ್ಯಾಲ್ವಿನೋ

ಇಟಾಲೋ ಕ್ಯಾಲ್ವಿನೋ
ಇಟಾಲಿಯನ್ ಕಥೆಗಾರ-ಕಾದಂಬರಿಕಾರ. ’ಕಾಸ್ಮಿಕಾಮಿಕ್ಸ್’, ’ಇನ್‌ವಿಸಿಬಲ್ ಸಿಟೀಸ್’, ’ಇಫ್ ಆನ್ ಎ ವಿಂಟರ್ಸ್ ನೈಟ್ ಎ ಟ್ರಾವೆಲ್ಲರ್’ ಅವರ ಪುಸ್ತಕಗಳಲ್ಲಿ ಕೆಲವು. ಪ್ರಸ್ತುತ ಕಥೆ ಅವರ ’ನಂಬರ್ಸ್ ಇನ್ ಡಾರ್ಕ್’ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ.


ಇದನ್ನೂ ಓದಿ: ನಾನೊಂದ ಬುಕ್ಕ ಕಂಡೆ: ಪುಸ್ತಕ ಸಂಗ್ರಹ ಲೋಕದ ಕುರಿತ ಪ್ರಬಂಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...