Homeಮುಖಪುಟವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ನಗರಗಳು | ಸಂಕ್ಷಿಪ್ತ ವಿವರ

ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ನಗರಗಳು | ಸಂಕ್ಷಿಪ್ತ ವಿವರ

- Advertisement -
- Advertisement -

ಪ್ರಸ್ತುತ ವಿಶ್ವದಲ್ಲಿ 796 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯಿದೆ. ಪ್ರಪಂಚದಲ್ಲಿ ಅತೀಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾವಾಗಿದ್ದು, ಎರಡನೇ ಸ್ಥಾನ ನಮ್ಮ ಭಾರತ ಪಡೆದುಕೊಂಡಿದೆ. ಪ್ರಸ್ತುತ ಭಾರತದ ಜನಸಂಖ್ಯೆ 138 ಕೋಟಿಯಾಗಿದ್ದು, ಚೀನಾದ ಜನಸಂಖ್ಯೆ 144 ಕೋಟಿ. ಇತ್ತೀಚೆಗಿನ ವರದಿಗಳ ಪ್ರಕಾರ ಭಾರತವು ಚೀನಾವನ್ನು ಹಿಂದಿಕ್ಕಿ ಸಧ್ಯದಲ್ಲೆ ಒಂದನೇ ಸ್ಥಾನಕ್ಕೆ ಏರಲಿದೆ.

ಜನಸಂಖ್ಯೆಯು ಅಭಿವೃದ್ಧಿಗೆ ಮಾರಕ ಎಂದು ಹೇಳುವ ಹಾಗೆಯೆ, ಜನಸಂಖ್ಯೆಯು ಒಂದು ಸಂಪನ್ಮೂಲವಾಗಿದ್ದು ಅದು ಅಭಿವೃದ್ಧಿಗೆ ಪೂರಕ ಎಂದೂ ಹೇಳುವವರಿದ್ದಾರೆ. ಮಾರಕ ಎನ್ನುವವರು ಹತ್ತಾರು ಕಾರಣಗಳು ಕೊಟ್ಟರೆ, ಪೂರಕ ಎನ್ನುವವರು ಕೂಡಾ ಅವುಗಳಿಗೆ ಬೇಕಾದ ಸಮರ್ಥನೆಗಳನ್ನೂ ಕೊಡುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನಗರಗಳು ಬೆಳೆದಂತೆ ಅಲ್ಲಿಗೆ ವಿವಿಧ ಕಾರಣಕ್ಕಾಗಿ ಜನರು ಬಂದು ಸೇರುತ್ತಲೆ ಇರುತ್ತಾರೆ. ಹೀಗಾಗಿ ನಗರಗಳು ಬೆಳೆಯುತ್ತಾ, ಅಲ್ಲಿನ ಜನಸಂಖ್ಯೆಗಳೂ ಬೆಳೆಯುತ್ತಲೆ ಹೋಗುತ್ತದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು ಯಾವುವು? ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಅಗ್ರ ಹತ್ತು ನಗರಗಳ ಪಟ್ಟಿ ಇಲ್ಲಿದೆ.

  1. ಟೋಕಿಯೊ: ಈ ನಗರವು ಜಪಾನ್ ದೇಶದ ರಾಜಧಾನಿಯಾಗಿದ್ದು, ಇಲ್ಲಿನ ಜನಸಂಖ್ಯೆ 3.74 ಕೋಟಿ. ಇದು ಒಟ್ಟು ದೇಶಿಯ ಉತ್ಪನ್ನದ ಮೂಲಕ ವಿಶ್ವದ ಅತಿದೊಡ್ಡ ನಗರ ಆರ್ಥೀಕತೆಯಾಗಿದೆ. ಅಲ್ಲದೆ ಈ ನಗರವೂ ಜಪಾನ್‌ನ ವ್ಯಾಪಾರ ಮತ್ತು ಹಣಕಾಸಿನ ಪ್ರಮುಖ ಕೇಂದ್ರವಾಗಿದೆ. 2022ರಲ್ಲಿ ನ್ಯೂಯಾರ್ಕ್, ಲಂಡನ್ , ಶಾಂಘೈ ನಂತರ ಜಾಗತಿಕ ಹಣಕಾಸು ಕೇಂದ್ರಗಳ ಸೂಚ್ಯಂಕದಲ್ಲಿ ಟೋಕಿಯೊ 4ನೇ ಸ್ಥಾನ ಪಡೆದಿದೆ. ವಿಶ್ವದ ಅತೀ ಎತ್ತರದ ಟವರ್‌‌ ಟೋಕಿಯೋ ಸ್ಕೈಟ್ರೀ ಇದೇ ನಗರದಲ್ಲಿದೆ.

    Tokyo
    ಟೊಕಿಯೊ | Tokyo
  2. ದೆಹಲಿ: ಭಾರತದ ರಾಜಧಾನಿಯಾಗಿರುವ ಈ ನಗರವು ಗಂಗಾನದಿಯ ಉಪನದಿ ಯಮುನ ನದಿಯ ದಡದಲ್ಲಿದೆ. ದೆಹಲಿಯ ಜನಸಂಖ್ಯೆ 2.93 ಕೋಟಿಯಾಗಿದೆ. ದೆಹಲಿಯೂ ಐತಿಹಾಸಿಕ ಪ್ರದೇಶ ಕೂಡಾ ಹೌದು. ಇಲ್ಲಿ ಹಲವಾರು ಚಾರಿತ್ರಿಕ ಮಹತ್ವದ ಸ್ಥಳಗಳೂ ಇವೆ. ಭಾರತದ ಸುಪ್ರೀಂಕೋರ್ಟ್, ಸಂಸತ್ ಭವನ ಸೇರಿದಂತೆ ಸರ್ಕಾರದ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗಗಳ ತವರು ಇದು. ವಾಯು ಮಾಲಿನ್ಯ ಸಮಸ್ಯೆಯೂ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

    ದೆಹಲಿ | Delhi
    ದೆಹಲಿ | Delhi
  3. ಶಾಂಘೈ: ಇದು ಚೀನಾದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಪ್ರದೇಶವಾಗಿದ್ದು, ಇಲ್ಲಿನ ಜನಸಂಖ್ಯೆ 2.63 ಕೋಟಿ. ಇದು ಪೂರ್ವ ಏಷ್ಯಾದ ದೇಶಗಳಲ್ಲಿ ರಾಜಧಾನಿಗಿಂತ ಹೆಚ್ಚಿನ GDP ಹೊಂದಿರುವ ಏಕೈಕ ನಗರವಾಗಿದೆ. ಈ ನಗರವೂ ವಿಶ್ವದ 3 ನೇ ಅತ್ಯಂತ ಸ್ಪರ್ಧಾತ್ಮಕ ಮತ್ತು ಅತಿದೊಡ್ಡ ಹಣಕಾಸು ಕೇಂದ್ರವಾಗಿದ್ದು, ವಿಶ್ವದ ಅತಿದೊಡ್ಡ ಮೆಟ್ರೋ ನೆಟ್‌ವರ್ಕ್ ಅನ್ನು ಹೊಂದಿದೆ.

    ಶಾಂಘೈ | Shanghai
    ಶಾಂಘೈ | Shanghai
  4. ಸಾವೊ ಪಾಲೊ: ಇದು ಬ್ರೆಜಿಲ್‌‌ ದೇಶದ ನಗರವಾಗಿದ್ದು, ಲ್ಯಾಟಿನ್ ಅಮೇರಿಕಾ ಮತ್ತು ದಕ್ಷಿಣ ಗೋಳಾರ್ಧದ ಅತಿ ದೊಡ್ಡ ಆರ್ಥಿಕತೆಯ ನಗರವಾಗಿದೆ. ಇಲ್ಲಿನ ಜನಸಂಖ್ಯೆ 2.18 ಕೋಟಿ. ಜೊತೆಗೆ ಸಾವೊ ಪಾಲೊ ಸ್ಟಾಕ್‌ ಎಕ್ಸ್‌ಚೇಂಜ್‌ನ ನೆಲೆಯಾಗಿದೆ. ಈ ನಗರವು ವಿಶ್ವದ 23ನೇ ಅತಿ ಹೆಚ್ಚು GDPಯನ್ನು ಹೊಂದಿದೆ. ಈ ಮಹಾನಗರವು ಬ್ರೆಜಿಲ್‌ನ ಹಲವಾರು ಎತ್ತರದ ಗಗನಚುಂಬಿ ಕಟ್ಟಡಗಳಿಗೆ ನೆಲೆಯಾಗಿದೆ. ಇಲ್ಲಿ ಸ್ಮಾರಕಗಳು, ಉದ್ಯಾನವನಗಳು ಮತ್ತು ವಸ್ತುಸಂಗ್ರಹಾಲಯಗಳು ಇವೆ.

    ಸಾವೊ ಪಾಲೊ । Sao Paulo
  5. ಮೆಕ್ಸಿಕೊ ಸಿಟಿ: ಈ ನಗರವು ನಾಗರಿಕತೆಯ ತೊಟ್ಟಿಲಾದ ‘ಯುನೈಟೆಡ್ ಮೆಕ್ಸಿಕನ್ ಸ್ಟೇಟ್ಸ್(ಮೆಕ್ಸಿಕೊ)’ ದೇಶದ ರಾಜಧಾನಿಯಾಗಿದೆ. ಉತ್ತರ ಅಮೆರಿಕಾ ಖಂಡದ ದಕ್ಷಿಣ ಭಾಗದಲ್ಲಿರುವ ಈ ನಗರ 2.16 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಅತ್ಯಂತ ಎತ್ತರದಲ್ಲಿ ಇರುವ ರಾಜಧಾನಿಗಳಲ್ಲಿ ಇದೂ ಒಂದಾಗಿದೆ. ಚಾರಿತ್ರಿಕ ನಗರವಾಗಿರುವ ಮೆಕ್ಸಿಕೊ ಸಿಟಿಯಲ್ಲಿ 13 ನೇ ಶತಮಾನದ ಅಜ್ಟೆಕ್ ದೇವಾಲಯ, ಸ್ಪ್ಯಾನಿಷ್ ವಿಜಯಶಾಲಿಗಳ ಐತಿಹಾಸಿಕ ಭಿತ್ತಿಚಿತ್ರಗಳನ್ನು ಹೊಂದಿರುವ ‘ಪ್ಯಾಲಾಸಿಯೊ ನ್ಯಾಶನಲ್‌’ ಇಲ್ಲಿದೆ.

    ಮೆಕ್ಸಿಕೊ ಸಿಟಿ । Mexico City
    ಮೆಕ್ಸಿಕೊ ಸಿಟಿ । Mexico City
  6. ಕೈರೋ: ಐತಿಹಾಸಿಕ ನಗರ ಕೈರೋ ಈಜಿಪ್ಟ್‌ನ ರಾಜಧಾನಿಯಾಗಿದ್ದು, ಇಲ್ಲಿನ ಜನಸಂಖ್ಯೆ2.04 ಕೋಟಿ. ಅಲ್ಲದೆ ಅರಬ್ ಜಗತ್ತಿನ ಅತಿದೊಡ್ಡ ನಗರವಾಗಿದೆ. ಜಗತ್ತಿನ ಅತ್ಯಂತ ಪ್ರಾಚೀನಾ ನಾಗರೀಕತೆಯ ತೊಟ್ಟಿಲಾಗಿರುವ ಈಜಿಫ್ಟ್‌‌ನ ಕೈರೋ ಹಲವು ಐತಿಹಾಸಿಕ ಮತ್ತು ಚಾರಿತ್ರಿಕೆ ಸ್ಥಳಗಳನ್ನು ಹೊಂದಿದೆ. ನಗರವೂ ವಿಶ್ವದ ಅತ್ಯಂತ ಉದ್ದವಾದ ನೈಲ್ ನದಿಯ ದಡದಲ್ಲಿದೆ. ನಗರವೂ ಪ್ರಾಚೀನ ಕಾಲದಿಂದಲೂ ರಾಜಕೀಯ ಮತ್ತು ಸಾಂಸ್ಕೃತಿಕ ಜೀವನದ ಕೇಂದ್ರವಾಗಿದೆ. ಅತ್ಯಂತ ಸುಂದರವಾದ ಇಸ್ಲಾಮಿಕ್ ವಾಸ್ತುಶಿಲ್ಪ ಹೊಂದಿರುವ ಕೈರೋವನ್ನು ‘ಸಾವಿರ ಮಿನಾರ್‌ಗಳ ನಗರ’ ಎಂದೂ ಕರೆಯಲಾಗುತ್ತದೆ. ಹಾಗೆಯೆ ವಿಶ್ವದ ಎರಡನೇ ಅತ್ಯಂತ ಹಳೆಯ ಉನ್ನತ ಶಿಕ್ಷಣ ಸಂಸ್ಥೆ ಅಲ್-ಅಜರ್ ವಿಶ್ವವಿದ್ಯಾಲಯವನ್ನು ಹೊಂದಿದೆ.

    ಕೈರೋ । Cairo
  7. ಢಾಕಾ: ಬಾಂಗ್ಲಾದೇಶದ ರಾಜಧಾನಿಯಾಗಿರುವ ಈ ನಗರವು, ಐತಿಹಾಸಿಕವಾಗಿ ಮೊಘಲ್ ಸಾಮ್ರಾಜ್ಯದ ಪ್ರಾಂತೀಯ ರಾಜಧಾನಿಯಾಗಿತ್ತು. ವೇಗವಾಗಿ ಬೆಳೆಯುತ್ತಿರುವ ಆಧುನಿಕ ಮಹಾನಗರಗಳಲ್ಲಿ ಒಂದಾಗಿರುವ ಇಲ್ಲಿನ ಜನಸಂಖ್ಯೆ ಜನಸಂಖ್ಯೆ 2.02 ಕೋಟಿ. ಈ ನಗರವು ವಾಣಿಜ್ಯ ಕೇಂದ್ರವಾಗಿ 17 ನೇ ಶತಮಾನದಿಂದಲೆ ಪ್ರಸಿದ್ದಿಯಾಗಿದೆ. ಇದನ್ನು 1962 ರಲ್ಲಿ ಪಾಕಿಸ್ತಾನದ ಶಾಸಕಾಂಗ ರಾಜಧಾನಿ ಎಂದು ಘೋಷಿಸಲಾಯಿತು. 1971 ರ ವಿಮೋಚನಾ ಯುದ್ಧದ ನಂತರ ಇದು ಸ್ವತಂತ್ರ ಬಾಂಗ್ಲಾದೇಶದ ರಾಜಧಾನಿಯಾಯಿತು.

    ಢಾಕಾ । Dhaka
    ಢಾಕಾ । Dhaka
  8. ಮುಂಬೈ: ಈ ನಗರ ಭಾರತದ ಆರ್ಥಿಕ, ವಾಣಿಜ್ಯ ಮತ್ತು ಮನರಂಜನಾ ರಾಜಧಾನಿಯಾಗಿದೆ. ಇಲ್ಲಿನ ಜನಸಂಖ್ಯೆ 2.01 ಕೋಟಿ. ದೇಶದ ಪ್ರಮುಖ ಸಿನಿಮಾ ರಂಗವಾದ ಬಾಲಿವುಡ್‌ ಇಲ್ಲೆ ಇದೆ. ಹಿಂದೆ ಈ ನಗರವನ್ನು ‘ಬಾಂಬೆ’ ಎಂದು ಕರೆಯಲಾಗುತ್ತಿತ್ತು. ಜಾಗತಿಕ ಹಣಕಾಸು ಹರಿವಿನ ದೃಷ್ಟಿಯಿಂದ ಇದು ವಿಶ್ವದ ಹತ್ತು ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದೆ. ಮುಂಬೈ ಮೂರು UNESCO ವಿಶ್ವ ಪರಂಪರೆಯ ತಾಣಗಳಿಗೆ ನೆಲೆಯಾಗಿದೆ.

    ಮುಂಬೈ । Mumbai
    ಮುಂಬೈ । Mumbai
  9. ಬೀಜಿಂಗ್: ಈ ನಗರವು ಚೀನಾ ದೇಶದ ರಾಜಧಾನಿಯಾಗಿದ್ದು, ಇಲ್ಲಿನ ಜನಸಂಖ್ಯೆ 2 ಕೋಟಿ. ಜಾಗತಿಕ ನಗರವಾಗಿರುವ ಬೀಜಿಂಗ್‌ ಸಂಸ್ಕೃತಿ, ರಾಜತಾಂತ್ರಿಕತೆ, ರಾಜಕೀಯ, ಹಣಕಾಸು, ವ್ಯಾಪಾರ ಮತ್ತು ಅರ್ಥಶಾಸ್ತ್ರ, ಶಿಕ್ಷಣ, ಸಂಶೋಧನೆ, ಭಾಷೆ, ಪ್ರವಾಸೋದ್ಯಮ, ಮಾಧ್ಯಮ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಾರಿಗೆಗಾಗಿ ವಿಶ್ವದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಬೀಜಿಂಗ್‌ ನಗರವೂ ಶಾಂಘೈ ನಂತರ ಚೀನಾದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶವಾಗಿದೆ. ಚೀನಾದ ಹೆಚ್ಚಿನ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪ್ರಧಾನ ಕಛೇರಿಗಳು ಇಲ್ಲಿಯೆ ಇದೆ.

    ಬೀಜಿಂಗ್ । Beijing
    ಬೀಜಿಂಗ್ । Beijing
  10. ಒಸಾಕಾ: ಜಪಾನಿನ ಹೊನ್ಶು ದ್ವೀಪದಲ್ಲಿರುವ ‘ಒಸಾಕಾ’ ನಗರವು ದೇಶ ಅತ್ಯಂತ ದೊಡ್ಡ ಬಂದರು ನಗರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿನ ಜನಸಂಖ್ಯೆ 1.92 ಕೋಟಿ. ನಗರವೂ ಆಧುನಿಕ ವಾಸ್ತುಶಿಲ್ಪ ಹೊಂದಿದ್ದು, ರಾತ್ರಿಯಲ್ಲೂ ಎಚ್ಚರವಾಗಿರುವ ನಗರವಾಗಿದೆ. ಅಲ್ಲದೆ ನಗರವೂ ಬೀದಿಬದಿ ಆಹಾರಕ್ಕಾಗಿ ಹೆಸರುವಾಸಿಯಾಗಿದೆ. ಶೀಂಟೊ ಧರ್ಮದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿರುವ ‘ಸುಮಿಯೋಶಿ-ತೈಶಾ’ ಈ ನಗರದಲ್ಲಿ ಇದೆ.

    ಒಸಾಕಾ । Osaka
    ಒಸಾಕಾ । Osaka
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶನ: ದೆಹಲಿಯ ಮೆಕ್‌ಡೊನಾಲ್ಡ್ಸ್ ಹೊರಗೆ ಪ್ರತಿಭಟನೆ

ಪ್ಯಾಲೆಸ್ಟೈನ್ ಜೊತೆ ಒಗ್ಗಟ್ಟಿನ ಭಾರತೀಯ ಜನರು (ಐಪಿಎಸ್‌ಪಿ) ಗುಂಪಿನ ಸದಸ್ಯರು (ಏ.3) ಜನಪಥ್ ಪ್ರದೇಶದ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನ ಹೊರಗೆ ದಿಢೀರ್ ಪ್ರತಿಭಟನೆಯನ್ನು ಆಯೋಜಿಸಿದ್ದರು. ಪ್ಯಾಲೆಸ್ತೀನಿಯನ್ನರನ್ನು ಒಳಗೊಂಡ ನಡೆಯುತ್ತಿರುವ ಸಂಘರ್ಷದಲ್ಲಿ ಮೆಕ್‌ಡೊನಾಲ್ಡ್ಸ್ ಮತ್ತು ಕೋಕಾ-ಕೋಲಾದಂತಹ ಬಹುರಾಷ್ಟ್ರೀಯ...

‘ಇರಾನಿಯನ್ನರು ಸ್ಮಾರ್ಟ್ ಚೆಸ್ ಆಡುತ್ತಿದ್ದು, ಟ್ರಂಪ್ ಭ್ರಮಾಲೋಕದಲ್ಲಿದ್ದಾರೆ..’; ಮಾಜಿ ರಾಜತಾಂತ್ರಿಕ ಅಧಿಕಾರಿ ಕೆ.ಪಿ. ಫ್ಯಾಬಿಯನ್

ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದ ಭಾರತದ ಮಾಜಿ ರಾಯಭಾರಿ ಕೆ.ಪಿ. ಫ್ಯಾಬಿಯನ್, "ಇರಾನಿಯನ್ನರು ಸ್ಮಾರ್ಟ್ ಚೆಸ್ ಆಟವನ್ನು ಆಡುತ್ತಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು...

‘ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ’ : ಎಎಪಿ ಆರೋಪಗಳನ್ನು ತಳ್ಳಿ ಹಾಕಿದ ರಾಘವ್ ಚಡ್ಡಾ

ತನ್ನ ವಿರುದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಮಾಡಿರುವ ಎಲ್ಲಾ ಆರೋಪಗಳನ್ನು ರಾಘವ್ ಚಡ್ಡಾ ಶನಿವಾರ (ಏ.4) ಅಲ್ಲಗಳೆದಿದ್ದು, "ಅವೆಲ್ಲವೂ ಸುಳ್ಳು ಮತ್ತು ಸಂಘಟಿತ ಅಭಿಯಾನದ ಭಾಗ" ಎಂದಿದ್ದಾರೆ. "ಸಂಸತ್ತಿನಲ್ಲಿ ನನ್ನ ಉದ್ದೇಶ...

ಎಡರಂಗದಲ್ಲಿ ಎಡಪಂಥೀಯರೇ ಇಲ್ಲ; ದ್ವೇಷ ಹರಡುವ ಜನರೊಂದಿಗೆ ಪಿಣರಾಯಿ ಪಾಲುದಾರಿಕೆ ಹೊಂದಿದ್ದಾರೆ: ರಾಹುಲ್ ಗಾಂಧಿ

ಕೇರಳ ವಿಧಾನಸಭಾ ಚುನಾವಣೆ ಪ್ರಚಾರವು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ತೀಕ್ಷ್ಣವಾದ ರಾಜಕೀಯ ದಾಳಿಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಸಿಪಿಐ-ಎಂ ನೇತೃತ್ವದ ಎಡಪಕ್ಷವು ತನ್ನ ಸೈದ್ಧಾಂತಿಕ ತಿರುಳನ್ನು ಕಳೆದುಕೊಳ್ಳುತ್ತಿದೆ" ಎಂದು ಆರೋಪಿಸಿದ್ದಾರೆ. "ಎಲ್‌ಡಿಎಫ್...

ಬಿಜೆಪಿ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಅಂದಿದ್ದೆ : ಅಣ್ಣಾಮಲೈ

"ವಿಧಾನಸಭಾ ಚುನಾವಣೆಗೆ ಬಿಜೆಪಿ ನನಗೆ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಎಂದು ಮುಂಚಿತವಾಗಿ ಹೈಕಮಾಂಡ್‌ಗೆ ತಿಳಿಸಿದ್ದೆ" ಎಂದು ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಶನಿವಾರ...

ಸುರಕ್ಷಿತವಾಗಿ ಹಾರ್ಮುಜ್ ದಾಟಿದ 7ನೇ ಎಲ್‌ಪಿಜಿ ಹಡಗು; ಸರದಿಯಲ್ಲಿ ಕಾಯುತ್ತಿವೆ ಭಾರತದ 17 ಟ್ಯಾಂಕರ್‌ಗಳು

ಭಾರತದ ಧ್ವಜ ಹೊಂದಿದ್ದ ಮತ್ತೊಂದು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಟ್ಯಾಂಕರ್, ಗ್ರೀನ್ ಸಾನ್ವಿ ಹೆಸರಿನ ಹಡಗು ಹಾರ್ಮುಜ್ ಜಲಸಂಧಿಯ ಪೂರ್ವಕ್ಕೆ ಯಶಸ್ವಿಯಾಗಿ ತಲುಪಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ನಡೆಯುತ್ತಿರುವ ಪಶ್ಚಿಮ...

ಸಿಬಿಎಸ್‌ಇ ಹಿಂದಿ ಹೇರಿಕೆಯು ತ್ರಿಭಾಷಾ ಸೂತ್ರ ಜಾರಿಯ ‘ರಹಸ್ಯ ಕಾರ್ಯವಿಧಾನ’: ಸ್ಟಾಲಿನ್ ಆರೋಪ

ಸಿಬಿಎಸ್‌ಇ ಇತ್ತೀಚೆಗೆ ಅನಾವರಣಗೊಳಿಸಿದ ಪಠ್ಯಕ್ರಮ ಚೌಕಟ್ಟಿನ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ಮೂರು ಭಾಷಾ ಸೂತ್ರ ಎಂದು ಕರೆಯಲ್ಪಡುವುದು ವಾಸ್ತವದಲ್ಲಿ ಹಿಂದಿ ಮಾತನಾಡದ ಪ್ರದೇಶಗಳಿಗೆ ಹಿಂದಿ ವಿಸ್ತರಿಸುವ ರಹಸ್ಯ ಕಾರ್ಯವಿಧಾನವಾಗಿದೆ"...

‘ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ, ನಿಮ್ಮ ಅಧಿಕ ಪ್ರಸಂಗ ಕರ್ನಾಟಕದ ಜನತೆ ಒಪ್ಪುವುದಿಲ್ಲ’ : ರಾಜ್ಯಪಾಲರ ವಿರುದ್ಧ ಕರವೇ ಕಿಡಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ...

‘ತಪ್ಪಾಗಿದೆ’ : ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್‌ ವಿಧೇಯಕದ ಕುರಿತ ಟೀಕೆಗಳನ್ನು ಕೈಬಿಟ್ಟ ರಾಜಸ್ಥಾನ ಹೈಕೋರ್ಟ್

ಟ್ರಾನ್ಸ್‌ಜೆಂಡರ್ ಕಾಯ್ದೆ, 2019ರಲ್ಲಿ ಬದಲಾವಣೆಗಳನ್ನು ತರಲಿರುವ ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026ರ ಕುರಿತು ಈ ಹಿಂದೆ ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು ರಾಜಸ್ಥಾನ ಹೈಕೋರ್ಟ್ ತೆಗೆದುಹಾಕಿದೆ ಎಂದು...

ಯುಸಿಸಿ ಜಾರಿ ನಂತರ ‘ಜನಸಂಖ್ಯಾ ನಿಯಂತ್ರಣ’ ಕಾನೂನಿಗೆ ಮುಂದಾದ ಉತ್ತರಾಖಂಡ ಬಿಜೆಪಿ ಸರ್ಕಾರ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಂದ ನಂತರ, ಉತ್ತರಾಖಂಡ ಸರ್ಕಾರ ಈಗ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಬಗ್ಗೆ ಯೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಸೂಚಿಸಿದ್ದಾರೆ. ಪ್ರಸ್ತಾವಿತ ಕ್ರಮದ...