ದೇವಸ್ಥಾನಕ್ಕೆ ಬಂದ ದಲಿತ ಕುಟುಂಬಕ್ಕೆ ಪೂಜೆ ನಿರಾಕರಿಸಿ, ದೇವಸ್ಥಾನದಿಂದ ಹೊರಕ್ಕೆ ಹೋಗುವಂತೆ ಒತ್ತಾಯಿಸಿ ಅಸ್ಪೃಶ್ಯತೆ ಆಚರಿಸಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಡೆದಿದೆ. ಪ್ರಕರಣದ ಬಗ್ಗೆ ಈ ವರೆಗೂ ಯಾವುದೆ ಬಂಧನ ನಡೆದಿಲ್ಲ. ಘಟನೆಯ ವಿಡಿಯೊ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗಿದೆ.
ಘಟನೆಯು ಗುಬ್ಬಿಯ ನಿಟ್ಟೂರು ಗ್ರಾಮದ ಮುಳಕಟ್ಟಮ್ಮ ದೇವಾಲಯದಲ್ಲಿ ನಡೆದಿದೆ. ದೇವಾಲಯಕ್ಕೆ ತೆರಳಿದ್ದ ದಲಿತ ಕುಟುಂಬಕ್ಕೆ ಅರ್ಚಕ ಶ್ರೀಧರ್ ಎಂಬುವವರು, “ದೇವಾಲಯದ ಒಳಗಡೆ ಯಾಕೆ ಬಂದಿದ್ದೀರಿ, ಹೊರಗಡೆಯೇ ನಿಲ್ಲಿ. ನಿಮಗೆ ಪೂಜೆ ತಾನೇ ಮಾಡುತ್ತೇನೆ. ಆದರೆ ನೀವು ದೇವಸ್ಥಾನದ ಹೊರಗಡೆ ಹೋಗಿ” ಎಂದು ಹೇಳುವುದು ವಿಡಿಯೊದಲ್ಲಿ ದಾಖಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದರ ನಂತರ ದಲಿತ ಕುಟುಂಬದೊಂದಿಗೆ ಮಾತಿನ ಚಕಮಕಿ ನಡೆಸಿದ ಅರ್ಚಕ ಪೂಜೆ ಮಾಡದೆ ನಿರಾಕರಿಸಿ ಪೂಜೆ ಸಾಮಾನು ವಾಪಸ್ಸು ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಇದರ ನಂತರ ದೇವಾಲಯದ ಕಮಿಟಿ ಮತ್ತು ದಲಿತರ ನಡುವೆ ವಾದ-ವಿವಾದ ಕೂಡಾ ನಡೆದಿದೆ ಎಂದು ವರದಿಯಾಗಿದೆ.
ಘಟನೆ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿ ಗುಬ್ಬಿ ಸರ್ಕಲ್ ಇನ್ಸ್ಪೆಕ್ಟರ್ ಎಫ್.ಕೆ.ನದಾಫ್,“ಅಲ್ಲಿ ಮೊದಲಿನಿಂದಲೂ ದಲಿತರು ಪೂಜೆ ಮಾಡುತ್ತಲೆ ಬಂದಿದ್ದಾರೆ. ‘ಟ್ರಸ್ಟ್ನವರನ್ನು ಕೇಳಬೇಕು, ಹೊರಗಡೆ ಹೋಗಿ’ ಎಂದು ಅರ್ಚಕ ಹೇಳಿದ್ದಾನೆ. ಅವನನ್ನು ಕರೆಸಿ ಮಾತನಾಡಿದ್ದೇವೆ. ಇದೀಗ ಎಲ್ಲರಿಗೂ ಪೂಜೆಗೆ ಅವಕಾಶವಿದೆ ಎಂಬ ಬೋರ್ಡ್ ಹಾಕಿದ್ದು, ಎಲ್ಲರೂ ಪೂಜೆ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ವಿಗ್ರಹ ಮುಟ್ಟಿದ್ದಾನೆಂದು ದಲಿತ ವ್ಯಕ್ತಿಯ ಕೊಲೆ; ಆರೋಪ
ಪ್ರಕರಣ ದಾಖಲಾಗಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,“ಎಫ್ಐಆರ್ ಏನೂ ಆಗಿಲ್ಲ. ಪ್ರಕರಣ ದಾಖಲಿಸುವುದು ಬೇಡ ಎಂದು ದಲಿತ ಕುಟುಂಬ ಕೇಳಿಕೊಂಡಿದೆ. ಸ್ಥಳೀಯರೇ ಆಗಿರುವುದರಿಂದ ಸೌಹಾರ್ದಯುತವಾಗಿ ಪ್ರಕರಣ ಮುಗಿಸುವಂತೆ ಮತ್ತು ಪೂಜೆಗೆ ಅವಕಾಶ ಮಾಡಿಕೊಡುವಂತೆ ಕೇಳಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ” ಎಂದು ಹೇಳಿದ್ದಾರೆ.



Kaanuva devaru galada budda, Basava, Ambedkar ravarannu poojisade kanada devaru galige ee jaativyavaste yalli balavantavagi poojisalu hogo ee dalitarige buddi illa. Evaru este gudigalige hogi pooje madidaru evaru Hindugalagalu eedeshadalli sadyavilla, evarugalu modalu aatma sakshi mattu swabhiman belasikollali
ಎಲ್ಲರಿಗೂ ಪ್ರವೇಶ ವಿದೆ ಎಂಬ ಬೋರ್ಡ್ ಹಾಕಲು ೨೦೧೪ ರಲ್ಲೇ ಆದೇಶವಾಗಿದೆ. ಕೋಲಾರದ ನಮ್ಮ ತಂಡ ಪದೇಪದೇ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಆದೇಶ ಹೊರಡಿಸಿದ್ದರು. ನಮ್ಮ ಕೋಲಾರ ಮಾತ್ರವಲ್ಲದೆ ಅಲ್ಲಲ್ಲಿ ಬೋರ್ಡ್ ಹಾಕಿದ್ದಾರೆ. ಎಲ್ಲಾ ಕಡೆ ಹಾಕಬೇಕೆಂದು ಒತ್ತಾಯಿಸಬೇಕಿದೆ.