Homeದಲಿತ್ ಫೈಲ್ಸ್ದರ್ಶನ್ ಸೋಲಂಕಿ ಜಾತಿ ತಿಳಿಯಲು ರ್‍ಯಾಂಕ್‌ ಬಗ್ಗೆ ಕೇಳಿದ್ದ ರೂಮ್‌ಮೇಟ್‌; ಪೋನ್‌ ಕಾಲ್‌ ಬಿಚ್ಚಿಟ್ಟ ಸತ್ಯಗಳಿವು!

ದರ್ಶನ್ ಸೋಲಂಕಿ ಜಾತಿ ತಿಳಿಯಲು ರ್‍ಯಾಂಕ್‌ ಬಗ್ಗೆ ಕೇಳಿದ್ದ ರೂಮ್‌ಮೇಟ್‌; ಪೋನ್‌ ಕಾಲ್‌ ಬಿಚ್ಚಿಟ್ಟ ಸತ್ಯಗಳಿವು!

ಸೋಲಂಕಿಯ ಸಾವಿನಲ್ಲಿ ಜಾತಿ ತಾರತಮ್ಯ ಕಂಡುಬಂದಿಲ್ಲ ಎಂದು ಐಐಟಿ ಬಾಂಬೆಯ ತನಿಖಾ ಸಮಿತಿ ಹೇಳಿಕೊಳ್ಳುತ್ತಿರುವಾಗ ‘ನ್ಯೂಸ್‌ಲಾಂಡ್ರಿ’ ಮಹತ್ವದ ಪೋನ್‌ ಕಾಲ್‌ ಕುರಿತು ವರದಿ ಮಾಡಿದೆ

- Advertisement -
- Advertisement -

ಬಾಂಬೆ ಐಐಟಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿ ದರ್ಶನ್ ಸೋಲಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಪೋನ್‌ ಕಾಲ್‌ನಲ್ಲಿ ದಾಖಲಾದ ಸಂಭಾಷಣೆಯ ಕುರಿತು ‘ನ್ಯೂಸ್‌ಲಾಂಡ್ರಿ’ ವರದಿ ಮಾಡಿದೆ.

ದರ್ಶನ್‌ ಅವರಲ್ಲಿ ಜೆಇಇ ರ್‍ಯಾಂಕ್‌ ಸಂಬಂಧ ಆತನ ರೂಮ್‌ಮೇಟ್‌ಗಳು ಪ್ರಶ್ನಿಸಿದ ನಂತರ, ರೂಮ್‌ಮೇಟ್‌ ಹೇಗೆ ಮಾತನಾಡುವುದನ್ನು ಕಡಿಮೆ ಮಾಡಿದರು ಎಂಬುದರ ಕುರಿತು ಈ ಪೋನ್‌ಕಾಲ್‌ ಬಿಚ್ಚಿಟ್ಟಿದೆ. ಇಬ್ಬರು ವಿದ್ಯಾರ್ಥಿಗಳು ಸೋಲಂಕಿ ಸಾವಿನ ಕುರಿತು ಪರಸ್ಪರ ಹಂಚಿಕೊಂಡಿರುವ ಮಾಹಿತಿಗಳನ್ನು ‘ನ್ಯೂಸ್‌ಲಾಂಡ್ರಿ’ ತೆರೆದಿಟ್ಟಿದೆ.

ಮೊದಲ ತಲೆಮಾರಿನ ವಿದ್ಯಾವಂತನಾಗಿರುವ ದರ್ಶನ್ (18) ಸೋಲಂಕಿ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಓದುತ್ತಿದ್ದರು. ಫೆಬ್ರವರಿ 12ರಂದು ಆತ್ಮಹತ್ಯೆ ಮಾಡಿಕೊಂಡರು. ಸೋಲಂಕಿಯ ಸಾವಿನ ಆಂತರಿಕ ತನಿಖೆಗಾಗಿ ಐಐಟಿ ಬಾಂಬೆ ರಚಿಸಿದ 12 ಸದಸ್ಯರ ಸಮಿತಿಯು ಹದಿನೆಂಟು ದಿನಗಳ ನಂತರ ತನ್ನ ವರದಿ ನೀಡಿದೆ. “ಜಾತಿ ತಾರತಮ್ಯವನ್ನು ಸೋಲಂಕಿ ಎದುರಿಸಿದ್ದಾರೆ ಎಂಬುದಕ್ಕೆ ಯಾವುದೇ ನೇರ ಪುರಾವೆಗಳಿಲ್ಲ” ಎಂದು ವರದಿ ಹೇಳಿದೆ.

ಆದರೆ 17 ನಿಮಿಷಗಳ ದೂರವಾಣಿ ಸಂಭಾಷಣೆಯು ಬೇರೆಯೇ ಕತೆಯನ್ನು ಹೇಳುತ್ತಿದೆ. ಪೋನ್‌ ಕಾಲ್‌ನ ವಿವರಗಳನ್ನು ಪ್ರವೇಶಿಸಿರುವ ‘ನ್ಯೂಸ್‌ಲಾಂಡ್ರಿ’ ಜಾಲತಾಣ ಐಐಟಿ ಬಾಂಬೆಯಲ್ಲಿ ಸೋಲಂಕಿ ಹೇಗೆ ಕಷ್ಟಗಳನ್ನು ಅನುಭವಿಸಿದರು ಎಂಬುದನ್ನು ವಿವರಿಸಿದೆ.

ಸೋಲಂಕಿ ಅವರಿಗೆ ಪರಿಚಯವಿದ್ದ ಐಐಟಿ ವಿದ್ಯಾರ್ಥಿ ಉದಯ್ ಸಿಂಗ್ ಮೀನಾ ಮತ್ತು ಸಂಸ್ಥೆಯ ಎಸ್‌ಸಿ/ಎಸ್‌ಟಿ ಸೆಲ್‌ನ ವಿದ್ಯಾರ್ಥಿ ಪ್ರತಿನಿಧಿ ನವೀನ್ ಗುರ್ರಾಪು ನಡುವಿನ ಸಂಭಾಷಣೆ ಇದಾಗಿದೆ. ಕ್ಯಾಂಪಸ್‌ನಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ದರ್ಶನ್ ಹೇಗೆ ತಾರತಮ್ಯವನ್ನು ಎದುರಿಸಿದರು ಎಂಬ ಬಗ್ಗೆ ಉದಯ್ ತನಿಖಾ ಸಮಿತಿಗೆ ಹೇಳಿಕೆಯನ್ನು ನೀಡಿದ್ದರು.

ಅಹಮದಾಬಾದ್‌ನಲ್ಲಿರುವ ದರ್ಶನ್ ಅವರ ಕುಟುಂಬ ಇದೇ ವಿಷಯವನ್ನು ಹಂಚಿಕೊಂಡಿತ್ತು. ದರ್ಶನ್ ತಾನು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಆಗಾಗ್ಗೆ ಹೇಳುತ್ತಿದ್ದನು ಎಂದು ಕುಟುಂಬ ಆರೋಪಿಸಿತ್ತು.

“ತಮ್ಮ ಜಾತಿ ಗುರುತಿನ ಬಗ್ಗೆ ದರ್ಶನ್ ತಾನಾಗಿಯೇ ಸೆನ್ಸಿಟಿವ್ ಆಗಿದ್ದರು. ಶೈಕ್ಷಣಿಕ ಕಾರ್ಯಕ್ಷಮತೆ ಕ್ಷೀಣಿಸುತ್ತಿರುವ ಹತಾಶೆಯು ದರ್ಶನ್ ಸೋಲಂಕಿ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು” ಎಂದು ಐಐಟಿ ಬಾಂಬೆಯ ತನಿಖಾ ವರದಿ ಹೇಳಕೊಂಡಿದೆ.

“ಆಡಿಯೊ ಕುರಿತು ಸ್ಪಷ್ಟನೆ ಪಡೆಯಲು ಉದಯ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ” ಎಂದಿರುವ ‘ನ್ಯೂಸ್‌ಲಾಂಡ್ರಿ’, ‘ಈ ಸಂಭಾಷಣೆ ನಡೆದಿರುವುದು ನಿಜ’ ಎಂದು ನವೀನ್ ಅವರು ದೃಢೀಕರಿಸಿರುವಾಗಿ ವರದಿ ಮಾಡಿದೆ.

“ಈ ಆಡಿಯೊ ರೆಕಾರ್ಡಿಂಗ್‌ನ ಮೂಲವನ್ನು ನೀವು ನನಗೆ ಹೇಳುವವರೆಗೆ ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ” ಎಂದು ನವೀನ್‌ ಕೋರಿದ್ದರು.

ಹಿಂದಿಯಲ್ಲಿ ಮಾತನಾಡಿರುವ ಆಡಿಯೊ ಸಂಬಂಧ ನ್ಯೂಸ್‌ಲಾಂಡ್ರಿ ವಿವರವಾಗಿ ವರದಿ ಮಾಡಿದೆ.

ಸ್ಕಾಲರ್‌ಶಿಪ್ ಅರ್ಜಿ ತುಂಬಲು ಸಹಾಯ ಕೋರಿದ್ದ ದರ್ಶನ್,  ವಾಟ್ಸಾಪ್ ಗ್ರೂಪ್‌ ಮೂಲಕ ನನಗೆ ಪರಿಚಯವಾಗಿದ್ದನು ಎಂದು ಫೋನ್‌ನಲ್ಲಿ ಮಾತನಾಡಿರುವ ಸಮಯದಲ್ಲಿ ಉದಯ್‌ ಉಲ್ಲೇಖಿಸಿದ್ದಾರೆ. ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಉದಯ್‌, ತಾವಾಗಿಯೇ ದರ್ಶನ್‌ ಅವರನ್ನು ತಮ್ಮ ಹಾಸ್ಟೆಲ್‌ ಕೊಠಡಿಗೆ ಕರೆದಿದ್ದರು.

“ಕಳೆದ ವರ್ಷದ ನವೆಂಬರ್‌ನಲ್ಲಿ ದರ್ಶನ್‌ ಅವರು ನಮ್ಮ ಕೊಠಡಿಗೆ ಎರಡು ಬಾರಿ ಬಂದಿದ್ದರು. ದರ್ಶನ್ ತಮ್ಮ ಮೊದಲ ಭೇಟಿಯಲ್ಲಿ ತಾರತಮ್ಯದ ಬಗ್ಗೆ ಏನನ್ನೂ ಹೇಳಲಿಲ್ಲ. ಆದರೆ ಎರಡನೇ ಬಾರಿಗೆ ಸುಮಾರು ಎರಡು ಗಂಟೆಗಳ ಕಾಲ ನನ್ನೊಂದಿಗೆ ಇದ್ದಾಗ ತಾರತಮ್ಯದ ಕುರಿತು ಹೇಳಿಕೊಂಡಿದ್ದರು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಬದಲಿಸಿ, ತಮ್ಮ ರೂಮ್‌ಮೇಟ್‌ಗಳಾಗಿ ಬೇರೆಯವರನ್ನು ಹಾಕಿಕೊಳ್ಳಲು ಸಾಧ್ಯವೇ? ಎಂದು ಸೋಲಂಕಿ ಕೇಳಿಕೊಂಡಿದ್ದನು” ಎಂದು ಉದಯ್‌ ತನ್ನ ಗೆಳೆಯನಿಗೆ ಫೋನ್‌ ಕಾಲ್‌ನಲ್ಲಿ ಹೇಳಿದ್ದಾರೆ.

“ರೂಮ್‌ಮೇಟ್‌ಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಾನು ಅವನಿಗೆ ಹೇಳಿದೆ” ಎಂದು ಉದಯ್ ನವೀನ್‌ಗೆ ತಿಳಿಸಿದ್ದಾರೆ. “ರ್‍ಯಾಂಕ್‌ ಮತ್ತು ಎಲ್ಲದರ ಬಗ್ಗೆ ಕೇಳುತ್ತಿರುವುದೇ ಸಮಸ್ಯೆ ಎಂದು ದರ್ಶನ್ ಹೇಳಿದ್ದನು. ನಿನ್ನ ರ್‍ಯಾಂಕ್ ಎಷ್ಟೆಂದು ಅವರು ಕೇಳಿದ್ದರು. ಆತನ ರ್‍ಯಾಂಕ್‌ ಸಾಕಷ್ಟು ಕಡಿಮೆ ಇತ್ತು. ತನ್ನ ರ್‍ಯಾಂಕ್‌ಗೆ ಹೋಲಿಸಿ, ಸೋಲಂಕಿಯ ರ್‍ಯಾಂಕ್‌ ಕಡಿಮೆ ಇದೆ ಎಂದು ಹಂಗಿಸಲಾಗಿತ್ತು. ಆನಂತರ ರೂಮ್‌ಮೇಟ್‌ ಮಾತನಾಡುವುದನ್ನು ಕಡಿಮೆ ಮಾಡಿದ್ದಾಗಿ ಸೋಲಂಕಿ ಹೇಳಿಕೊಂಡಿದ್ದರು.”

ದರ್ಶನ್ ಸೋಲಂಕಿಯವರು ಐಐಟಿ ಬಾಂಬೆಗೆ ಮೀಸಲಾತಿ ಅವಕಾಶ ಪಡೆದು ಪ್ರವೇಶ ಪಡೆದ್ದಾನೆ ಎಂಬುದು ರೂಮ್‌ಮೇಟ್‌ಗೆ ತಿಳಿಯುತ್ತದೆ. ಐಐಟಿ ಬಾಂಬೆಯಲ್ಲಿನ ಎಸ್‌ಸಿ/ಎಸ್‌ಟಿ ಸೆಲ್ ವತಿಯಿಂದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಸಮೀಕ್ಷೆಯನ್ನು ಡಿಸೆಂಬರ್ 2021ರಲ್ಲಿ ನಡೆಸಲಾಗಿತ್ತು. ಮೀಸಲಾತಿ ಪ್ರಾತಿನಿಧ್ಯದ ಮೂಲಕ ಅವಕಾಶ ಪಡೆದ ಶೇ.37ರಷ್ಟು ವಿದ್ಯಾರ್ಥಿಗಳು ತಮ್ಮ ರ್‍ಯಾಂಕ್‌ ಕುರಿತು ಕಹಿ ಅನುಭವವನ್ನು ಹಂಚಿಕೊಂಡಿರುವುದಾಗಿ ಸಮೀಕ್ಷೆ ಬಹಿರಂಗಪಡಿಸಿದೆ. ಜೆಇಇ, ಜಿಎಟಿಇ, ಜೆಎಎಂ, ಯು(ಯುಇಇಡಿ)ನಲ್ಲಿ ತೆಗೆದುಕೊಂಡಿರುವ ರ್‍ಯಾಂಕ್‌ ಕುರಿತು ಈ ವಿದ್ಯಾರ್ಥಿಗಳನ್ನು ಪ್ರಶ್ನಿಸಲಾಗಿದೆ. ಪ್ರಶ್ನೆ ಕೇಳುವ ವ್ಯಕ್ತಿಗೆ ಈ ವಿದ್ಯಾರ್ಥಿಗಳ ಜಾತಿ ಗುರುತು ತಿಳಿದಿರುತ್ತದೆ ಎಂದಿದೆ ‘ನ್ಯೂಸ್‌ಲಾಂಡ್ರಿ’.

ಐಐಟಿ ಬಾಂಬೆಯಲ್ಲಿನ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರು ಈ ಕುರಿತು ಮತ್ತಷ್ಟು ವಿವರಿಸಿದ್ದಾರೆ. “ಕ್ಯಾಂಪಸ್‌ನಲ್ಲಿರುವ ಜನರು ನೇರವಾಗಿ ಸರ್‌ನೇಮ್‌ (ಉಪನಾಮ) ಬಗ್ಗೆ ಮೊದಲೆಲ್ಲ ಕೇಳುತ್ತಿದ್ದರು. ಆದರೆ ಈಗ, ಕ್ಯಾಂಪಸ್‌ನಲ್ಲಿನ ಜಾತಿವಾದವು ಭಾರತದ ಇತರ ಭಾಗಗಳಿಗಿಂತ ವಿಭಿನ್ನವಾಗಿ ಕಾರ್ಯಪ್ರವೃತ್ತವಾಗಿದೆ” ಎಂದಿದ್ದಾರೆ.

ಕ್ಯಾಂಪಸ್‌ನಲ್ಲಿನ “ಸೂಕ್ಷ್ಮ ವಾತಾವರಣ”ದ ಕಾರಣ ಹೆಸರು ಉಲ್ಲೇಖಿಸದಿರಲು ಕೋರಿರುವ ಅವರು, “ವ್ಯಕ್ತಿಯ ಜಾತಿಯನ್ನು ಪತ್ತೆಹಚ್ಚಲು ಮೇಲ್ವರ್ಗದ ವಿದ್ಯಾರ್ಥಿಗಳು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಪರೀಕ್ಷೆಯಲ್ಲಿ ರ್‍ಯಾಂಕ್‌ ಬಗ್ಗೆ ಕೇಳುತ್ತಾರೆ. ಇತರ ಕೆಲವು ಮಾರ್ಗಗಳನ್ನೂ ಅನುಸರಿಸುತ್ತಾರೆ. ಜಿಮೇಲ್‌ ಉಪಯೋಗಿಸಲು ಬರುತ್ತದೆಯೇ? ಕಂಪ್ಯೂಟರ್‌‌ ಬಳಕೆ ತಿಳಿದಿದೆಯೇ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಕಟ್ಟಕಡೆಯ ಸಮುದಾಯಗಳಿಂದ ಬಂದ ಅನೇಕ ವಿದ್ಯಾರ್ಥಿಗಳಿಗೆ ಈ ಕುರಿತು ತಿಳಿದಿರುವುದಿಲ್ಲ. ಈ ಪ್ರಶ್ನೆಗಳನ್ನು ಕೇಳಿ, ಈ ಜನರು ಮೀಸಲು ವರ್ಗದಿಂದ ಬಂದವರು ಎಂದು ಮೇಲ್ಜಾತಿಯವರು ತಿಳಿದುಕೊಳ್ಳುತ್ತಾರೆ. ಐಐಟಿಯಲ್ಲಿ ಮೀಸಲಾತಿ ವಿರುದ್ಧದ ಭಾವನೆ ಪ್ರಬಲವಾಗಿದೆ” ಎಂದಿದ್ದಾರೆ ಪಿಎಚ್‌ಡಿ ವಿದ್ಯಾರ್ಥಿ.

ಉದಯ್ ಮತ್ತು ನವೀನ್‌ ನಡುವಿನ ಫೋನ್‌ ಸಂಭಾಷಣೆ ಹೀಗಿದೆ:

ಉದಯ್: ನನಗೆ ಅವನ ರೂಮ್‌ಮೇಟ್ ಕೂಡ ತಿಳಿದಿಲ್ಲ. ಆತ ಮಾತನಾಡುವುದನ್ನು ಕಡಿಮೆ ಮಾಡಿದೆ. ಆತ ಸೌಹಾರ್ದಯುತವಾಗಿಯೂ ಮಾತನಾಡುತ್ತಿರಲಿಲ್ಲ. ನಿಮ್ಮ ರೂಮ್‌ಮೇಟ್ ನಿಮ್ಮೊಂದಿಗೆ ಮಾತನಾಡಬೇಕು ಎಂಬುದು ಅನಿವಾರ್ಯವಲ್ಲ ಎಂದು ನಾನು ಸೋಲಂಕಿಗೆ ಹೇಳಿದೆ. ವಿಶ್ವವಿದ್ಯಾನಿಲಯದಲ್ಲಿ ತಮ್ಮ ರೂಮ್‌ಮೇಟ್‌ಗಳೊಂದಿಗೆ ಮಾತನಾಡದ ಬಹಳಷ್ಟು ಜನರಿದ್ದಾರೆ. ಆತ ನನಗೆ ಹೆಚ್ಚಿನದ್ದನ್ನು ಹೇಳಲಿಲ್ಲ. ಬೇರೆಯವರನ್ನು ಸ್ನೇಹಿತರನ್ನಾಗಿ ಮಾಡಿಕೋ ಎಂದು ನಾನು ಅವನಿಗೆ ಹೇಳಿದೆ.

ನವೀನ್‌: ಹಾಗಾದರೆ, ಆತ ಎರಡನೇ ಭಾರಿಗೆ ನಿಮ್ಮನ್ನು ಭೇಟಿಯಾದಾಗ ಇದನ್ನೆಲ್ಲ ಹೇಳಿದನೆ?

ಉದಯ್‌: ಹೌದು. ಪರೀಕ್ಷೆಯ ಒತ್ತಡದಿಂದ ದರ್ಶನ್ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ನಾನು ಭಾವಿಸುವುದಿಲ್ಲ. ಹೀಗಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಆದರೆ ಅವರು ಪರೀಕ್ಷೆಯ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಎಂದು ನಾನು ಭಾವಿಸುವುದಿಲ್ಲ. ಅವರೊಂದಿಗಿನ ನಾನು ಭೇಟಿಯಾಗಿ ನೋಡಿದ ಪ್ರಕಾರ ಹೇಳುವುದಾದರೆ ಅವರು ಹೀಗಿರಲಿಲ್ಲ.

ನವೀನ್‌: ದರ್ಶನ್‌ ಅವರು ನಿಮ್ಮಲ್ಲಿ ಜಾತಿ ತಾರತಮ್ಯದ ಬಗ್ಗೆ ಹೇಳಿದ ಬಳಿಕ ನೀವ್ಯಾಕೆ ಚಿರಾಗ್, ವಿಶಾಲ್ ಅಥವಾ ರಾಜೇಶ್‌ಗೆ ತಿಳಿಸಲಿಲ್ಲ? (“ಚಿರಾಗ್, ವಿಶಾಲ್ ಮತ್ತು ರಾಜೇಶ್ ಅವರು ಐಐಟಿ ಬಾಂಬೆಯಲ್ಲಿ ಎಸ್‌ಸಿ/ಎಸ್‌ಟಿ ಸೆಲ್‌ನ ಸ್ವಯಂಸೇವಕರಾಗಿದ್ದಾರೆ.)

ಉದಯ್: ಈ ಘಟನೆಯಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಕಿರುಕುಳ ಇದ್ದಾಗ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೆವು ಅಥವಾ ಎಫ್ಐಆರ್ ದಾಖಲಿಸುತ್ತಿದ್ದೆವು.

ನವೀನ್: ಹೌದು ಹೌದು, ಸರಿ. ಜಾತಿ ತಾರತಮ್ಯವು ಆತನ ರೂಮ್‌ಮೇಟ್‌ನಿಂದ ಪ್ರಾರಂಭವಾಗಿದೆ. ಇದು ಕೇವಲ ರ್‍ಯಾಂಕ್‌ಗೆ ಸಂಬಂಧಿಸಿದೆಯೇ ಅಥವಾ ದರ್ಶನ್‌ಗೆ ಜಾತಿ ನಿಂದನೆಗಳನ್ನು ಮಾಡಲಾಗಿದೆಯೇ?

ಉದಯ್: ನನಗೆ ಇಷ್ಟು ಮಾತ್ರ ಹೇಳಲಾಗಿದೆ. ಇದರ ನಂತರ ಏನಾಯಿತು ಎಂದು ನನಗೆ ತಿಳಿದಿಲ್ಲ.

ನವೀನ್: “ನನಗೆ ಒಂದು ಉಪಕಾರ ಮಾಡು. ದರ್ಶನ್ ಅವರೊಂದಿಗಿನ ವಾಟ್ಸಾಪ್ ಮಾತುಕತೆಗಳನ್ನು ಇಮೇಲ್ ಮಾಡು.

ಉದಯ್: Yes.

ನವೀನ್: ಏಕೆಂದರೆ ನಾನು ಚಿರಾಗ್ ಮತ್ತು ವಿಶಾಲ್‌ಗೆ ಇದೇ ವಿಷಯವನ್ನು ಹೇಳಿದ್ದೇನೆ. ಈ ಘಟನೆಯಿಂದ ನಮ್ಮ ಭವಿಷ್ಯ ಹಾಳಾಗಬಾರದು. ಬೈಗುಳಗಳು ಬೈಗುಳವಾಗಿರಲಿ. ನಾವು ಈಗ ಏನನ್ನೂ ಮಾಡಲು ಸಾಧ್ಯವಿಲ್ಲ. ಹೆಚ್ಚೆಂದರೆ ಅವರಿಗೆ ಪರಿಹಾರ ಅಥವಾ ನ್ಯಾಯ ಸಿಗುತ್ತದೆ. ಅದು ಒಳ್ಳೆಯದು.

ನವೀನ್: “ನೀವು ಸ್ವಲ್ಪ ಸುರಕ್ಷಿತವಾಗಿರುತ್ತೀರಿ. ಪರಿಸ್ಥಿತಿ ಸ್ವಲ್ಪ ಟ್ರಿಕಿ ಆಗಿದೆ. ನೀವು ಅದನ್ನು ಎದುರಿಸುತ್ತೀರಾ?”

ಉದಯ್‌: ‘ಸರಿ’.

ಹೀಗೆ ಅವರ ಮಾತುಕತೆ ಮುಗಿದಿದೆ.

ಸಮಿತಿಗೆ ಉದಯ್ ಹೇಳಿಕೆ

12 ಸದಸ್ಯರ ಸಮಿತಿಗೆ ಉದಯ್ ಅವರು ಅಧಿಕೃತವಾಗಿ ಹೇಳಿಕೆ ನೀಡುತ್ತಾ, “ದರ್ಶನ್ ತನ್ನ ರೂಮ್‌ಮೇಟ್ ಅನ್ನು ಬದಲಾಯಿಸಿಕೊಳ್ಳಲು ಸಾಧ್ಯವೇ?” ಎಂದು ಕೇಳಿಕೊಂಡಿದ್ದನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ರ್‍ಯಾಂಕ್‌ಗಳ ಬಗ್ಗೆ ಪರಸ್ಪರ ತಿಳಿದುಕೊಂಡ ಬಳಿಕ ಆತನ ರೂಮ್‌‌ಮೇಟ್ ಮಾತನಾಡುವುದನ್ನು ನಿಲ್ಲಿಸಿದ್ದನು ಎಂಬುದನ್ನು  ಉದಯ್‌ ಅವರು ಸಮಿತಿಗೆ ತಿಳಿಸಿದ್ದಾರೆ.

ದರ್ಶನ್ ನಿಧನರಾದ ಮೂರು ದಿನಗಳ ನಂತರ ಫೆಬ್ರವರಿ 15 ರಂದು ನ್ಯೂಸ್ ಬೀಕ್‌ಗೆ ಅವರು ಇದೇ ಮಾತನ್ನು ಹೇಳಿದ್ದರು. ಆದರೆ ಕಮಿಟಿಯ ವರದಿಯಲ್ಲಿ ರೂಮ್‌ಮೇಟ್‌ನ ಕುರಿತು ಯಾವುದೇ ಉಲ್ಲೇಖವಿಲ್ಲ.

ಐಐಟಿ ಬಾಂಬೆಯಲ್ಲಿರುವ ಸಾರ್ವಜನಿಕ ಸಂಪರ್ಕ ಕಚೇರಿಗೆ ಪ್ರಶ್ನಾವಳಿಗಳನ್ನು ಕಳುಹಿಸಲಾಗಿದೆ. ಪ್ರತಿಕ್ರಿಯೆ ಬಂದಲ್ಲಿ ಈಗಿನ ವರದಿಯನ್ನು ನವೀಕರಿಸಲಾಗುವುದು ಎಂದು ‘ನ್ಯೂಸ್‌ಲಾಂಡ್ರಿ’ ಸ್ಪಷ್ಟಪಡಿಸಿದೆ.

ವರದಿ ಕೃಪೆ: ನ್ಯೂಸ್‌ಲಾಂಡ್ರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...