Homeಅಂಕಣಗಳುನಾಸ್ತಿಕ ಗೋರಾ ಮತ್ತು ಗಾಂಧಿ

ನಾಸ್ತಿಕ ಗೋರಾ ಮತ್ತು ಗಾಂಧಿ

- Advertisement -
- Advertisement -

| ಎಚ್.ಎಸ್ ದೊರೆಸ್ವಾಮಿ |

ಗೋ.ರಾಮಚಂದ್ರರಾಯರು ನಾಸ್ತಿಕರು. ಅವರು ಸಸ್ಯಶಾಸ್ತ್ರ ಎಂಎಸ್ಸಿ ಪದವೀಧರರೂ ಹೌದು. ನಾಲ್ಕಾರು ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದವರು. ಬ್ರಾಹ್ಮಣರಾಗಿದ್ದ ಗೋರಾ, ಸರಸ್ವತಿ ಎಂಬ ಹರಿಜನ ಮಹಿಳೆಯನ್ನು ಮದುವೆಯಾದರು. ವಿಜಯವಾಡ ಹತ್ತಿರದ ಪಟನುಟಾ ಎಂಬ ಹಳ್ಳಿಯಲ್ಲಿ ಆಶ್ರಮವನ್ನು ಕಟ್ಟಿ ಅಲ್ಲಿಯೇ ಸಂಸಾರ ಸಮೇತ ವಾಸವಿದ್ದರು. ಗೋರಾ ಹೆಚ್ಚು ಸಮಯವನ್ನು ನಾಸ್ತಿಕ ಚಳವಳಿ, ಮುಖ್ಯಮಂತ್ರಿಗಳು ಮತ್ತು ಪ್ರಧಾನಿಗಳು ನಡೆಸುವ ವೈಭವೋಪೇತ ಜೀವನವನ್ನು ಕೈಬಿಡುವಂತೆ ಜನಾಭಿಪ್ರಾಯ ಮೂಡಿಸುವ ಚಳವಳಿಗಳು, ಅಸ್ಪೃಶ್ಯತಾ ನಿವಾರಣೆ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಸ್ಪೃಶ್ಯರೊಡನೆ ಸಹಭೋಜನ, ಮಾಂಸಾಹಾರ ಸೇವಿಸುವ ಸಮಾರಂಭಗಳಲ್ಲಿ ನಿರತರಾಗಿರುತ್ತಿದ್ದರು.

ಅವರಿಗೆ ಇಬ್ಬರು ಗಂಡು ಮಕ್ಕಳು ಒಬ್ಬ ಮಗಳು. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ನೆನಪಿಗಾಗಿ ಹುಟ್ಟಿದ ಮೊದಲನೇ ಮಗನಿಗೆ ಲವಣಂ ಎಂದು ಹೆಸರಿಟ್ಟರು. ಎರಡನೇ ಮಹಾಯುದ್ಧದ ಸಮಯದಲ್ಲಿ ಹುಟ್ಟಿದ ಎರಡನೆಯ ಮಗನಿಗೆ ‘ಸಮರಂ’ ಎಂದು, ಸಂತ ವಿನೋಬಾರವರ ಭೂದಾನ ಯಜ್ಞ ಚಳವಳಿಯ ಕಾಲಕ್ಕೆ ಹುಟ್ಟಿದ ಮಗಳಿಗೆ ‘ಭೂಕ್ರಾಂತಿ’ ಎಂದು ಹೆಸರನ್ನಿಟ್ಟರು.

ಎನ್.ಸಂಜೀವರೆಡ್ಡಿಯವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಿದ್ದಾಗ ಅವರ ಸರ್ಕಾರಿ ನಿವಾಸದ ಮುಂದೆ ಗೋರಾ ಅವರು ಅನಿರ್ದಿಷ್ಟ ಕಾಲದ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ಮುಖ್ಯಮಂತ್ರಿಗಳಾದವರು ಸಾಮಾನ್ಯ ಜನರಂತೆ ಸರಳ ಜೀವನ ನಡೆಸಬೇಕು. ಅದು ಬಿಟ್ಟು ಸರ್ಕಾರಿ ಮಹಲಿನಲ್ಲಿದ್ದುಕೊಂಡು, ವೈಭವದ ಜೀವನ ನಡೆಸುವುದು ಅಸಭ್ಯತೆ. ಕೂಡಲೇ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿ, ನಿಜವಾದ ಜನಪ್ರತಿನಿಧಿಯಂತೆ ನಡೆದುಕೊಳ್ಳಿ ಎಂಬ ಬೇಡಿಕೆ ಇಟ್ಟರು. ಸಂಜೀವ ರೆಡ್ಡಿಯವರು ಗೋರಾರವರ ಬೇಡಿಕೆಯನ್ನು ಈಡೇರಿಸುವುದಾಗಿ ಮಾತು ಕೊಟ್ಟರಾದರೂ, ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ.

ನಾಸ್ತಿಕರಾದ ರಾಮಚಂದ್ರರಾಯರು ಮಹಾತ್ಮ ಗಾಂಧಿಯವರನ್ನು ಕಂಡು ಅವರೊಡನೆ ನಾಸ್ತಿಕವಾದದ ಬಗ್ಗೆ ಚರ್ಚಿಸಲು ಅವರ ಆಶ್ರಮಕ್ಕೆ ಹೋದರು. ಗಾಂಧೀಜಿ ಅವರನ್ನು ಆಶ್ರಮದಲ್ಲಿ ಉಳಿಸಿಕೊಂಡು ಆಸ್ತಿಕತೆ- ನಾಸ್ತಿಕತೆಗಳ ಬಗೆಗೆ ಸುದೀರ್ಘ ಚರ್ಚೆ ನಡೆಸಿದರು. ಗಾಂಧೀಜಿ ಕೊನೆಗೆ ಗೋರಾಗೆ ಹೇಳಿದ ಮಾತು ‘ನಾನು ಆಸ್ತಿಕ. ನನಗೆ ದೇವರ ಇರುವಿನ ಬಗೆಗೆ ನಂಬಿಕೆ, ಶ್ರದ್ಧೆ ಎರಡೂ ಇದೆ. ನನ್ನ ಜೀವನದಲ್ಲಿ ಅನೇಕ ಸಾರಿ ಮುಂದಿನ ದಾರಿ ತೋರದ ಸನ್ನಿವೇಶ ಒದಗಿಬಂದಿದೆ. ದಾರಿ ತೋರಲು ಅನನ್ಯ ಭಕ್ತಿಯಿಂದ ಅಂತಹ ಸಂದರ್ಭಗಳಲ್ಲಿ ಭಗವಂತನಲ್ಲಿ ಮೊರೆ ಹೋಗಿ ಶರಣಾಗತನಾಗಿದ್ದೇನೆ. ಅವನು ಅಂತಹ ಸಂಕಟಮಯ ಸಂದರ್ಭದಲ್ಲಿ ನನ್ನ ನೆರವಿಗೆ ಬಂದಿದ್ದಾನೆ. ಅದನ್ನು ನಾನು ‘inner voice’ ಎಂದು ಗುರುತಿಸಿದ್ದೇನೆ. ಈ ‘inner voice’ ಆ ಸಂಕಟಮಯ ಪರಿಸ್ಥಿತಿಯಲ್ಲಿ ಮಾರ್ಗದರ್ಶನ ಮಾಡಿದೆ.’

‘ರಾಮಚಂದ್ರರವರೇ ನೀವು ದೇವರನ್ನು ನಂಬುವವರಲ್ಲ. ಎಲ್ಲಾ ಜವಾಬ್ದಾರಿಯನ್ನೂ ನೀವೇ ವಹಿಸಿಕೊಂಡು ನಿಮ್ಮ ಸಂಕಟಮಯ ಸಂದರ್ಭಗಳನ್ನು ನೀವೇ ನಿರ್ವಹಿಸಿಕೊಳ್ಳುತ್ತೀರಿ. ಈ ದೃಷ್ಟಿಯಿಂದ ನೀವು ನನಗಿಂತ ಒಂದು ಹೆಜ್ಜೆ ಮುಂದೆ ಇರುವವರು. ನಾನು ಅಂತಹ ಸಂಕಟ ಪರಿಸ್ಥಿತಿಯಲ್ಲಿ ಅಸಹಾಯಕನಾಗಿ ಅನ್ಯಥಾ ಶರಣಂ ನಾಸ್ತಿ ಎಂದು ದೇವರಿಗೆ ಮುಗಿಬೀಳುತ್ತೇನೆ. ಅವನು ನನಗೆ ಮಾರ್ಗದರ್ಶನ ಮಾಡುತ್ತಾನೆ.’ ರಾಮಚಂದ್ರರಾಯರು ಗಾಂಧಿಯವರ ಆಶ್ರಮದಲ್ಲಿದ್ದುಕೊಂಡು ‘An atheist with Gandhi’ ಎಂಬ ಕಿರು ಹೊತ್ತಿಗೆ ಬರೆದಿದ್ದಾರೆ. ಅದನ್ನು ಗಾಂಧಿಯವರು ಸ್ಥಾಪಿಸಿದ ‘Navajeevan Publication’ ಹೊರತಂದಿದೆ.

ರಾಮಚಂದ್ರರಾಯರಿಗೆ ರಾಜಕೀಯ ಪಕ್ಷಗಳ ಹಾವಳಿ ತುಂಬ ಬೇಸರ ತಂದಿತು. ಅವರಿಗೆ ನನ್ನಂತಹ ಗಾಂಧಿ ವಾದದವರನ್ನು ಕಟ್ಟಿಕೊಂಡು ದೆಹಲಿಗೆ ಕಾಲ್ನಡಿಗೆಯಲ್ಲಿ ಹೋಗಿ ಪಾರ್ಲಿಮೆಂಟ್ ಭವನದ ಮುಂದೆ ಧರಣಿ ಮಾಡಬೇಕೆಂಬ ಆಸೆ ಇತ್ತು. ಇದಕ್ಕಾಗಿ ಸಕಲ ಸಿದ್ಧತೆಯನ್ನೂ ಅವರು ಮಾಡಿಕೊಂಡಿದ್ದರು. ಎಲ್ಲ ರಾಜಕೀಯ ಪಕ್ಷಗಳ ಬಾವುಟಗಳನ್ನೂ ಒಟ್ಟುಗೂಡಿಸಿ ಅವುಗಳನ್ನು ಒಂದು ದಂಡಕ್ಕೆ ಬಿಗಿದು ಕಟ್ಟಿಕೊಂಡೊಯ್ಯಬೇಕೆಂದು ಯೋಜಿಸಿದ್ದರು. ಪಕ್ಷ ರಾಜಕೀಯ ಒಂದಾಗಲಿ. ನಿಜವಾದ ಪ್ರಜಾರಾಜ್ಯ ಸ್ಥಾಪನೆಯಾಗಲಿ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ಆರಂಭಗೊಳಿಸುವುದೆಂದು ತೀರ್ಮಾನ ತೆಗೆದುಕೊಂಡಿದ್ದರು. ಆದರೆ ಆಕಸ್ಮಿಕವಾಗಿ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದರು. ಅವರ ಕನಸು ನನಸಾಗದೆ ಉಳಿಯಿತು.

ಗೋರಾ ಮೊದಲನೆಯ ಅಂತರರಾಷ್ಟ್ರೀಯ ನಾಸ್ತಿಕ ಸಮ್ಮೇಳನವನ್ನು ಬೆಜವಾಡದಲ್ಲಿ ನೆರವೇರಿಸಿದರು. ದೇಶ-ವಿದೇಶಗಳಿಂದ ನಾಸ್ತಿಕ ಪ್ರತಿನಿಧಿಗಳು ಈ ಸಮ್ಮೇಳನಕ್ಕೆ ಬಂದಿದ್ದರು. ಅವರು ಜೀವಂತ ಇದ್ದಾಗಲೇ ಎರಡು ಅಂತರರಾಷ್ಟ್ರೀಯ ನಾಸ್ತಿಕ ಸಮ್ಮೇಳನಗಳು ಯುರೋಪಿಯನ್ ರಾಷ್ಟ್ರಗಳಲ್ಲಿ ನಡೆದವು. ಈಗ ಅವರ ಮಗ ಡಾ.ಲವಣಂ ಈ ಜವಾಬ್ದಾರಿಯನ್ನು ಹೊತ್ತು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...