Homeಅಂಕಣಗಳುನಾವು ಮರೆಯಲಾಗದ ಇತಿಹಾಸ ಹಾಗೂ ವರ್ತಮಾನದ ಎರಡು ಸಂಗತಿಗಳು..

ನಾವು ಮರೆಯಲಾಗದ ಇತಿಹಾಸ ಹಾಗೂ ವರ್ತಮಾನದ ಎರಡು ಸಂಗತಿಗಳು..

- Advertisement -
- Advertisement -

| ಡಾ. ವಾಸು ಎಚ್.ವಿ |

ಬಹುಶಃ ನೀವು ಇದನ್ನು ಕೇಳಿರಬಹುದು. ನಿಮ್ಮ ಕೈಯ್ಯಲ್ಲಿ ಒಂದು ಜೀವಂತ ಕಪ್ಪೆಯನ್ನು ಹಿಡಿದು ಅದನ್ನು ಬಿಸಿ ಬಿಸಿಯಾದ ನೀರಿನಲ್ಲಿ ಹಾಕಿದರೆ ಕಪ್ಪೆ ಏನು ಮಾಡುತ್ತದೆ? ಕೂಡಲೇ ಜಿಗಿದು ಹೊರ ಹಾರುತ್ತದೆ. ಆದರೆ, ಅದೇ ಕಪ್ಪೆಯನ್ನು ತಣ್ಣೀರಿನಲ್ಲಿ ಇಟ್ಟು, ನಿಧಾನಕ್ಕೆ ಕೆಳಗಿನಿಂದ ಬೆಂಕಿ ಹಾಕಿ ಉರಿಸುತ್ತಾ ಹೋದರೆ? ಕಪ್ಪೆಯು ಸ್ವಲ್ಪ ಸ್ವಲ್ಪವೇ ಬಿಸಿಯಾಗುತ್ತಿರುವ ನೀರಿನ ಉಷ್ಣತೆಗೆ ಹೊಂದಿಕೊಳ್ಳುತ್ತಾ ಹೋಗುತ್ತದೆ. ಕಡೆಗೆ ಹೊಂದಿಕೊಳ್ಳಲು ಸಾಧ್ಯವೇ ಆಗದ ಮಟ್ಟ ಮುಟ್ಟಿದಾಗಲೂ ಅದರ ಅರಿವಾಗದೇ ಬೇಯಲು ಶುರುವಾಗುತ್ತದೆ ಮತ್ತು ಸತ್ತು ಹೋಗುತ್ತದೆ.

ಒಟ್ಟಿಗೇ 10-15 ರೂ.ಗಳಷ್ಟು ಪೆಟ್ರೋಲ್ ದರ ಏರಿಸದೇ, ವಾರಕ್ಕೆ 2 ರೂ.ಗಳಂತೆ ಏರಿಸಿದರೆ? ಜನರಿಗೆ ಅದರ ಅರಿವೇ ಆಗುವುದಿಲ್ಲ. ಈ ದಿನ ಮಧ್ಯರಾತ್ರಿಯಿಂದ 5 ರೂ. ಏರಿಕೆ ಆಗುತ್ತದೆ ಎಂದು ಗೊತ್ತಾದಾಗ ವಾಹನ ಸವಾರರು ಏನು ಮಾಡುತ್ತಾರೆ? ಹಿಂದಿನ ದಿನ ಸಂಜೆಯಿಂದಲೇ ಪೆಟ್ರೋಲ್ ಬಂಕಿನಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಆದಷ್ಟು ಬೇಗ ತಮ್ಮ ಬೈಕ್ ಅಥವಾ ಕಾರಿಗೆ ಫುಲ್ ಟ್ಯಾಂಕ್ ಮಾಡಿಸಿಕೊಂಡರೆ ಯಾರನ್ನೋ ಮಣಿಸಿದ ಹೆಮ್ಮೆಯಲ್ಲಿ ಆ ಮಧ್ಯರಾತ್ರಿ ಗಾಢನಿದ್ರೆ ಮಾಡುತ್ತಾರೆ. ಒಂದು ವೇಳೆ ಸಾಧ್ಯವಾಗದೇ ಹೋದರೆ ನಿದ್ದೆಯಲ್ಲಿ ಚಡಪಡಿಸಿ, ಪೆಟ್ರೋಲ್ ಬಂಕಿನ ನೂಕುನುಗ್ಗಲನ್ನು ಬಯ್ದುಕೊಳ್ಳುತ್ತಾ, ಮುಂದಿನ ಸಾರಿ ಹಾಗಾಗದಂತೆ ಎಚ್ಚರ ವಹಿಸಬೇಕೆಂದುಕೊಳ್ಳುತ್ತಾರೆ.

ಮೊದಲನೆಯದು ಸಾರ್ವಕಾಲಿಕ ಸತ್ಯವಿರಬಹುದಾದರೂ, ಎರಡನೆಯದು ಇತ್ತೀಚಿನ ವಿದ್ಯಮಾನ. ಖಾಸಗಿ ಹೋಟೆಲಿನಲ್ಲಿ ಇಡ್ಲಿಯ ಬೆಲೆ 50 ಪೈಸೆ ಹೆಚ್ಚಾಗಿದ್ದಕ್ಕೂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾರೀ ಪ್ರತಿಭಟನೆ ನಡೆಸಿದ ಉದಾಹರಣೆಗಳಿವೆ. ಕಾಲ ಬದಲಾಗಿದೆ. ಎಷ್ಟು ಬದಲಾಗಿದೆ ಎಂಬುದಕ್ಕೆ ಟ್ರಾಫಿಕ್ ನಿಯಮಗಳ ಉಲ್ಲಂಘನೆಯ ದಂಡದ ಏರಿಕೆಯೇ ನಿದರ್ಶನ.

ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ದಂಡವನ್ನು 1000 ರೂ.ನಿಂದ 10,000 ರೂ.ಗಳಿಗೆ ಏರಿಸುವಾಗ ಸರ್ಕಾರದ ಅನಿಸಿಕೆ ಏನಿದ್ದಿರಬಹುದು? ಇದಕ್ಕೆ ಬಹಳ ವಿರೋಧ ಬರುವುದರಿಂದ ಅದನ್ನು ಅರ್ಧಕ್ಕೆ ಇಳಿಸಿದರೂ, ಶೇ.500ರಷ್ಟು ಏರಿಕೆಯಾಗುತ್ತದೆ. ಸಾಮಾನ್ಯವಾಗಿ ಇಂತಹ ದಂಡಗಳಿಂದ ಸರ್ಕಾರ ದೊಡ್ಡ ಆದಾಯವೇನೂ ಮಾಡುವುದಿಲ್ಲ. ಸರ್ವಾಧಿಕಾರಿ ಮನಸ್ಥಿತಿಯ ಆಳುವವರಿದ್ದಾಗ ಇಂತಹ ತೀವ್ರ ಹೆಚ್ಚಳವನ್ನು ಹೇರುತ್ತಾರಷ್ಟೇ. ಉಳಿದಂತೆ, ವಿರೋಧ ಬಂದ ಮೇಲೆ ಇಳಿಸಿದರೂ ಲಾಭವಾಗುವ ರೀತಿ ವಿವಿಧ ಶುಲ್ಕಗಳನ್ನು ಏರಿಸುವ ಒಂದು ಚಾಳಿ ಅಧಿಕಾರಶಾಹಿಯಲ್ಲಿದೆ.

ಈ ಸಾರಿಯೂ ಹಾಗೆಯೇ ಆಯಿತು. ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಹಲವು ಈ ಹೆಚ್ಚಳ ಮಾಡಲೇ ಇಲ್ಲ. ಹೆಚ್ಚಿಸಿ ನಂತರ ಶೇ.50ರಷ್ಟು ಗುಜರಾತ್ ಸರ್ಕಾರ ಇಳಿಸಿ ಸುಮ್ಮನಾಯಿತು. ಕರ್ನಾಟಕದಲ್ಲಿ ಹೆಚ್ಚಳದ ಕುರಿತು ಕೆಲವು ನಕಾರಾತ್ಮಕ ಪತ್ರಿಕಾ ವರದಿಗಳು ಬಂದವು, ಸಾಮಾಜಿಕ ಜಾಲತಾಣಗಳಲ್ಲಿ ಗೊಣಗಾಟ ನಡೆಯಿತು. ಸಮಸ್ಯೆ ಆಗಬಹುದೇನೋ ಎಂದು ಮುಖ್ಯಮಂತ್ರಿಗಳು ‘ಇದನ್ನು ವಾಪಸ್ ತೆಗೆದುಕೊಳ್ಳುತ್ತೇವೆ’ ಎಂದು ಘೋಷಿಸಿದರು. ಅದರ ನಂತರ ಇದುವರೆಗೂ ಶುಲ್ಕ ಹೆಚ್ಚಳವನ್ನು ವಾಪಸ್ಸೂ ತೆಗೆದುಕೊಂಡಿಲ್ಲ; ಇಳಿಸಿಯೂ ಇಲ್ಲ.

ಅಂದರೆ, ಶೇ.1000ದಷ್ಟು ಏರಿಸಿ, ಶೇ.500ಕ್ಕಿಳಿಸುವ ಅಗತ್ಯವೂ ಇಲ್ಲ! ಈ ಪ್ರಮಾಣಕ್ಕೆ ಜನರ ಹೊಂದಾಣಿಕೆ ಮನೋಭಾವ ಏರಿದೆ!! ಬಹುಶಃ ಹೀಗೇ ಇದ್ದರೆ, ಯಡಿಯೂರಪ್ಪನವರು ಸುಮ್ಮನಾಗುವ ಸಾಧ್ಯತೆಯೇ ಹೆಚ್ಚು. ಇದೇಕೆ ಹೀಗೆ ಎಂಬುದನ್ನು ಆಳವಾಗಿ ಪರಿಶೀಲಿಸಿ ನೋಡುವ ಅಗತ್ಯವಿದೆ.

ಮೇಲಿನ ಕಪ್ಪೆಯ ನಿದರ್ಶನ ಒಂದು ಸಾಧ್ಯತೆಯನ್ನು ನಮ್ಮ ಮುಂದಿಡುತ್ತದೆ. ಮತಧರ್ಮ ಮತ್ತು ಜಾತಿಗಳ ಅಮಲು (ಜಾತಿಯ ಅಮಲು ಮೇಲ್ಜಾತಿಗಳಲ್ಲಿ ಮಾತ್ರ ಇರುವುದಿಲ್ಲ; ಶೋಷಿತ ಸಮುದಾಯಕ್ಕೆ ಸೇರಿದ ಸಚಿವರೊಬ್ಬರು ಭ್ರಷ್ಟಾಚಾರ ಅಥವಾ ಜನವಿರೋಧಿ ನೀತಿ ತಂದರೆ, ಅಲ್ಲಿಯೂ ಸಮರ್ಥನೆ ಇದ್ದೇ ಇರುತ್ತದೆ) ಅನಸ್ತೇಷಿಯಾ ಥರ ಕೆಲಸ ಮಾಡುತ್ತಿದೆ ಎಂದು ಕೆಲವರು ಹೇಳುತ್ತಾರೆ.

ಯಾವುದಾದರೂ ಒಂದು ವಿಚಾರಕ್ಕೆ, ಸುದ್ದಿಗೆ, ವಿದ್ಯಮಾನಕ್ಕೆ ದೀರ್ಘಕಾಲ ಅಂಟಿಕೊಳ್ಳುವ ಗುಣವೂ ಇಲ್ಲವಾಗಿದೆ. ಎಲ್ಲರ ಗಮನದ ಅವಧಿ (attention span)ಯೂ ಕಡಿಮೆಯಾಗಿದೆ. ತುಸು ಹೆಚ್ಚು ಕಾಲ ಒಂದೇ ವಿಚಾರದ ಮೇಲೆ ಕೇಂದ್ರೀಕರಿಸುವುದು ಬೋರಿಂಗ್ ಆದ ಕೆಲಸ ಎಂಬ ಭಾವನೆ ಹೆಚ್ಚಾಗಿದೆ. ಹಾಗಾಗಿ ಏನೇ ನಡೆದರೂ ತಕ್ಷಣದಲ್ಲಿ ಮುಗಿಯಬೇಕು. ಪ್ರಜ್ಞಾವಂತರು, ಜೀವಪರ ಕಾಳಜಿಯುಳ್ಳವರೂ ಫೇಸ್‍ಬುಕ್‍ನ ಆತ್ಮರತಿ ಮತ್ತು ತಕ್ಷಣದ ಪ್ರತಿಕ್ರಿಯೆಯ ಜೋಶ್‍ನಲ್ಲಿ ಇರುವ ಶಕ್ತಿಯನ್ನೆಲ್ಲಾ ಕಳೆದುಕೊಂಡು ಸಮಾಧಾನ ಪಟ್ಟುಕೊಳ್ಳುತ್ತಾರೆ. ಪ್ರತಿ ವ್ಯಕ್ತಿಯೂ ಕೇವಲ ಬಿಡಿ ವ್ಯಕ್ತಿ ಮಾತ್ರ ಆಗಿಬಿಡಲು ಬೇಕಾದ ಪ್ರತ್ಯೇಕತೆಗಳು ಹಲವು ರೀತಿಯಲ್ಲಿ ಹಿಗ್ಗುತ್ತಿವೆ.

ಇವಿಷ್ಟು ಹೇಳಿದರೂ ಇಂದಿನ ನಿಸ್ತೇಜ, ನಿರ್ವೀರ್ಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ವಿವರಣೆ ಕೊಟ್ಟಂತಾಗುವುದಿಲ್ಲ. ಇಡೀ ಸಮುದಾಯಗಳು ಇಂತಹ ಸ್ಥಿತಿಗೆ ಇಳಿದಿರುವುದನ್ನು ಕಂಡು ರೋಸಿಹೋದ ಸಂವೇದನಾಶೀಲರು ಹತಾಶೆಯಿಂದ ‘ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿ, ಆಗ ಎಲ್ಲರಿಗೂ ಅರ್ಥವಾಗುತ್ತದೆ’ ಎಂದು ಹೇಳುವುದನ್ನು ನೋಡುತ್ತೇವೆ. ಇಂತಹ ಹತಾಶೆ ಇಲ್ಲದಂತಾಗಿ ಪರಿವರ್ತನಶೀಲ ಪ್ರಕ್ರಿಯೆಗಳಿಗೆ ದಾರಿ ಮಾಡಿಕೊಡಲಾದರೂ ಸರಿಯಾದ ವಿಶ್ಲೇಷಣೆ ಮತ್ತು ಬದಲಾವಣೆಯ ವಿಧಾನಗಳ ಶೋಧನೆ ಅಗತ್ಯವಿದೆ.

ಅಂತಹ ವಿಶ್ಲೇಷಣೆಗೆ ತೊಡಗುವವರು ಎರಡು ಅಂಶಗಳನ್ನು ನಿರ್ಲಕ್ಷಿಸಲಾಗದು. ಒಂದು, ಇಡಿ ಇಡೀ ಸಮುದಾಯವೇ ಆತ್ಮಸಾಕ್ಷಿ ಕಳೆದುಕೊಂಡ, ಕೊಳೆತ ಅಥವಾ ಸಂವೇದನಾಶೂನ್ಯ ಸ್ಥಿತಿಯಲ್ಲಿ ದೀರ್ಘಕಾಲವಿದ್ದ ಅವಧಿಗಳು ಇತಿಹಾಸದಲ್ಲಿ ಸಾಕಷ್ಟಿದ್ದವು. ಇದೇ ಮೊದಲೂ ಅಲ್ಲ, ಬಹುಶಃ ಕೊನೆಯೂ ಅಲ್ಲ. ಅಂತಹ ಸ್ಥಿತಿಗಳು ದೀರ್ಘವಿರಬಹುದಾದರೂ ಶಾಶ್ವತವಾಗಿ ಎಲ್ಲೂ ಉಳಿದಿಲ್ಲ. ಎರಡು, ಈಗಿನ ವಿದ್ಯಮಾನದ ಸ್ವರೂಪ ಹಾಗೂ ಅದನ್ನು ಬದಲಿಸಬಲ್ಲ ಪ್ರಕ್ರಿಯೆಯು ಅನನ್ಯ. ಏಕೆಂದರೆ 21ನೇ ಶತಮಾನ ಈ ಭುವಿಯ ಮೇಲೆ ಇದೇ ಮೊದಲ ಸಾರಿ ಬಂದಿದೆ; ಇಂತಹ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂಕೀರ್ಣತೆ ಈಗ ಮಾತ್ರ ಇದ್ದದ್ದು. ಹಾಗಾಗಿ ಇದನ್ನು ಬದಲಿಸುವ ವಿಧಾನವನ್ನು ಹೊಸದಾಗಿಯೇ ಕಂಡುಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕರಾವಳಿಯಲ್ಲಿ ಒಂದು ಬಹಳ ಹಳೆಯ ಮಾತಿದೆ. ಮಲಗಿರುವ ಕೋಣಕ್ಕೆ ಬೆತ್ತದಲ್ಲಿ ಒಂದೇಟು ಕೊಟ್ಟರೆ ದಪ್ಪ ಚರ್ಮದ ಅದಕ್ಕೆ ಗೊತ್ತೇ ಆಗುವುದಿಲ್ಲ. ಎರಡನೇ ಏಟಿಗೆ ಕಣ್ಣು ತೆರೆಯುತ್ತದೆ. ಮೂರನೇ ಏಟಿಗೆ ಏನದು ಸದ್ದು ಎಂದು ಯೋಚಿಸುತ್ತದೆ. ನಾಲ್ಕನೇ ಏಟಿಗೆ- ಹೋ! ಯಾರಿಗೋ ಹೊಡೆಯುತ್ತಿದ್ದಾರೆ ಎಂದು ಯೋಚಿಸುತ್ತದೆ. ಐದನೇ ಏಟಿಗೆ ನನಗೇ ಹೊಡೆಯುತ್ತಿರುವುದು ಎಂದು ಗೊತ್ತಾಗಿ ಮೆಲ್ಲಗೆ ಎದ್ದುನಿಲ್ಲುತ್ತದೆ. ನಮ್ಮ ಜನರು ಐದು ಏಟುಗಳ ಬಳಿಕ, ಅಂದರೆ ಮುಂದಿನ ಚುನಾವಣೆ ಹೊತ್ತಿಗಾದರೂ, ತಮಗೆ ಬೀಳುತ್ತಿರುವ ಏಟುಗಳನ್ನು ತಿಳಿದುಕೊಂಡು ಎದ್ದೇಳಲಿ!

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...