Homeಅಂಕಣಗಳುಒಳಮೀಸಲಾತಿ ತೀರ್ಪು : ಕಬಾಬ್‌ನಲ್ಲೊಂದು ಮುಳ್ಳು

ಒಳಮೀಸಲಾತಿ ತೀರ್ಪು : ಕಬಾಬ್‌ನಲ್ಲೊಂದು ಮುಳ್ಳು

"ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ನಿಜ. ಇದು ಸಂತೋಷದ ವಿಚಾರವೇ ಆಗಿದೆ. ಆದರೆ, ಸುಖಾ ಸುಮ್ಮನೆ ಮತ್ತೆ 'ಕ್ರೀಮಿಲೇಯರ್' ಎಂಬ ವಾಮನನನ್ನು ಎಳೆದು ತರಲಾಗಿದೆ"

- Advertisement -
- Advertisement -

1975 ರಲ್ಲಿ ಪಂಜಾಬ್ ಸರ್ಕಾರವು ಅಲ್ಲಿನ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದಿದ್ದ ಮಜಬಿ ಸಿಖ್ ಸಮುದಾಯಕ್ಕೆ ಒಳಮೀಸಲಾತಿ ಘೋಷಿಸಿ ಆದೇಶಿಸಿದಾಗ ಆರಂಭವಾದ ಒಳಮೀಸಲಾತಿ ಪರ ವಿರೋಧದ ಚರ್ಚೆಯು ಪರಸ್ಪರ ಹೋರಾಟವಾಗಿ ಮಾರ್ಪಟ್ಟು 5 ದಶಕಗಳ ಕಾಲ ಮುಂದುವರೆಯಿತು. ಈ ನಡುವೆ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಮಾದಿಗ ದಂಡೋರ ನೇತೃತ್ವದ ಒಳಮೀಸಲಾತಿ ಪರ ಹೋರಾಟವು ಇಡೀ ದೇಶದ ರಾಜಕಾರಣದಲ್ಲಿ ಮೈಲುಗಲ್ಲಾಗಿ ನಿಂತಿದೆ. ಎರಡೂ ರಾಜ್ಯದ ಸರ್ಕಾರಗಳನ್ನು ಏಳಿಸುವ ಹಾಗೂ ಬೀಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ಈ ಸಂಘಟನೆ ವಹಿಸಿದೆ. ಹಾಗಾಗಿ , ಸುಪ್ರೀಂಕೋರ್ಟ್ ನೀಡಿರುವ ಒಳಮೀಸಲಾತಿ ಪರ ತೀರ್ಪನ್ನು ಮಾದಿಗ ದಂಡೋರದಂತೆ ದೇಶದಾದ್ಯಂತ ಒಳಮೀಸಲಾತಿ ಪರ ಹೋರಾಟದ ಕಿಚ್ಚು ಹಚ್ಚಿದ ಹೋರಾಟಗಾರರಿಗೆ ಅರ್ಪಿಸಬೇಕಿದೆ.

ಇ.ವಿ ಚಿನ್ನಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಒಳಮೀಸಲಾತಿಯ ವಿರುದ್ಧ ತೀರ್ಪಿತ್ತಿತ್ತು. ಪಂಜಾಬಿನ ಧವಿಂದರ್ ಪ್ರಕರಣದಲ್ಲಿ ಜಸ್ಟೀಸ್ ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಒಳಮೀಸಲಾತಿ ಪರ ತೀರ್ಪು ನೀಡಿತ್ತು. ಹೀಗಾಗಿ ಒಳಮೀಸಲಾತಿಯ ಪ್ರಶ್ನೆಯು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠದ ಮುಂದೆ ಬಂದಿತ್ತು. ಈ ಪೀಠದ ಮುಂದೆ ಬಹುಮುಖ್ಯವಾದ ಎರಡು ಪ್ರಶ್ನೆಗಳಿದ್ದವು.

1. ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ನೀಡುವ ಅಧಿಕಾರವಿದೆಯೇ?

2. ಸಂವಿಧಾನಕ್ಕನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಉಪವರ್ಗೀಕರಣ (ಒಳಮೀಸಲಾತಿ) ಮಾಡಬಹುದೇ?

ಈ ಎರಡು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ದಿನಾಂಕ 01.08.2024ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠವು ತೀರ್ಪು ನೀಡಿದೆ. 6:1ರ ಬಹುಮತದೊಂದಿಗೆ ಇ.ವಿ ಚಿನ್ನಯ್ಯ ಪ್ರಕರಣದಲ್ಲಿ ನೀಡಲಾಗಿದ್ದ ಒಳಮೀಸಲಾತಿ ಸಾಧ್ಯವಿಲ್ಲ ಎಂಬ ತೀರ್ಪನ್ನು ರದ್ದುಗೊಳಿಸಿದೆ. ಈ ಮೂಲಕ ಸಾಂವಿಧಾನಿಕವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ನೀಡಬಹುದು. ಹೀಗೆ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ದಲಿತ ಪರ ತೀರ್ಪು ನೀಡಿದೆ. ಈ ಮೂಲಕ ಒಳಮೀಸಲಾತಿ ಜಾರಿಗಾಗಿ ಉಷಾ ಮೆಹ್ರಾ ಸಮಿತಿಯ ಶಿಫಾರಸಿನಂತೆ ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರದ ಮುಂದೆ ಹೋರಾಟ ಮಾಡುವ ಅವಶ್ಯಕತೆ ಇಲ್ಲದಂತೆ ಮಾಡಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ರಾಜ್ಯ ಸರ್ಕಾರಗಳೇ ಪರಿಶಿಷ್ಟರಿಗೆ ಒಳಮೀಸಲಾತಿ ಜಾರಿ ಮಾಡಬಹುದಾಗಿದೆ.

ಒಳಮೀಸಲಾತಿ ಜಾರಿ ಹೇಗೆ?

ಸುಪ್ರೀಂ ಕೋರ್ಟ್ ತೀರ್ಪಿನಂತೆ 7 ಜನ ನ್ಯಾಯಾಧೀಶರಲ್ಲಿ ಏಕೈಕ ಮಹಿಳಾ ನ್ಯಾಯಾಧೀಶೆಯಾಗಿರುವ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿಯವರನ್ನು ಹೊರತುಪಡಿಸಿದರೆ, ಉಳಿದಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ, ಜಿ.ಎ.ಗವಾಯ್, ವಿಕ್ರಮ್ ನಾಥ್ ಜೆ, ಪಂಕಜ್ ಮಿತ್ತಲ್, ಸತೀಶ್ ಚಂದ್ರ ಶರ್ಮಾ ಇವರುಗಳು ರಾಜ್ಯಗಳಿಗೆ ಒಳಮೀಸಲಾತಿಯನ್ನು ನೀಡುವ ಅಧಿಕಾರವಿದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದರೆ, ಒಳಮೀಸಲಾತಿ ನೀಡಲು ನಿರ್ದಿಷ್ಟ ಸಮುದಾಯದ ಪ್ರಾತಿನಿಧ್ಯದ ಕೊರತೆಯನ್ನು ದೃಢಪಡಿಸಿಕೊಳ್ಳಲು ಅಂಕಿ ಅಂಶ ಸಂಗ್ರಹಿಸಲು ತಿಳಿಸುತ್ತಾರೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಮನೋಜ್ ಮಿಶ್ರಾರವರು ಪ್ರಾತಿನಿಧ್ಯದ ಹಿಂದುಳಿದಿರುವಿಕೆಯನ್ನು ತಿಳಿದುಕೊಳ್ಳಲು ರಾಜ್ಯವು ‘ರಾಜ್ಯ ಸರ್ಕಾರದ ಉದ್ಯೋಗ’ಗಳ ಅಂಕಿ ಅಂಶವನ್ನು ಸಂಗ್ರಹಿಸಬೇಕೆಂದು ನಿರ್ದಿಷ್ಟವಾಗಿಯೇ ತಿಳಿಸಿದ್ದಾರೆ. ಉದಾಹರಣೆಗೆ, ಕರ್ನಾಟಕ ಸರ್ಕಾರಕ್ಕೆ ಒಳಮೀಸಲಾತಿ ನೀಡುವ ಅಧಿಕಾರವಿದ್ದು, ಜಸ್ಟೀಸ್ ಸದಾಶಿವ ಆಯೋಗದ ಮಾದರಿಯಲ್ಲಿಯೇ ಅಥವಾ ಅದಕ್ಕಿಂತಲೂ ಸಮರ್ಥವಾದ ಆಯೋಗವನ್ನು ರಚಿಸಿ ಅಂಕಿ ಅಂಶಗಳನ್ನು ಕ್ರೋಡೀಕರಿಸಿ ಒಳಮೀಸಲಾತಿ ಜಾರಿಗೊಳಿಸಬೇಕಿದೆ.

ಈ ತೀರ್ಪಿನಲ್ಲಿ ಒಂದು ಅನ್ಯಾಯವೂ ಇದೆ

ಈಗಾಗಲೇ ಹೇಳಿದಂತೆ 6:1ರ ಬಹುಮತದೊಂದಿಗೆ ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ನಿಜ. ಇದು ಸಂತೋಷದ ವಿಚಾರವೇ ಆಗಿದೆ. ಆದರೆ, ಸುಖಾ ಸುಮ್ಮನೆ ಮತ್ತೆ ‘ಕ್ರೀಮಿಲೇಯರ್’ ಎಂಬ ವಾಮನನನ್ನು ಎಳೆದು ತರಲಾಗಿದೆ. ಈ ವಾಮನ ‘ಕ್ರೀಮಿಲೇಯರ್’ ಅನ್ನು ಮೊದಲು ಪ್ರಸ್ತಾಪಿಸಿರುವ ನ್ಯಾಯಾಧೀಶರು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಜಿ.ಎ ಗವಾಯ್ ಅವರೇ ಆಗಿದ್ದಾರೆ! ಇವರು ಒಳಮೀಸಲಾತಿಗೆ ಒಪ್ಪಿಗೆ ನೀಡುತ್ತಾ, “ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗೂ ಕ್ರೀಮಿಲೇಯರ್ ತತ್ವವನ್ನು ಅಳವಡಿಸಬೇಕು. ಹೀಗೆ ಅಳವಡಿಸುವಾಗ ಹಿಂದುಳಿದ ವರ್ಗಗಳ ಅನುಸರಿಸಿರುವ ಕ್ರೀಮಿಲೇಯರ್ ಮಾನದಂಡಗಳ ಬದಲಾಗಿ ಇತರೆ ಮಾನದಂಡಗಳನ್ನು ಅಳವಡಿಸಿಕೊಳ್ಳಬಹುದು” ಎಂದಿದ್ದಾರೆ. ಈ ಮೂಲಕ ಕಬಾಬಿನಲ್ಲಿ ಮುಳ್ಳಿಡುವ ಕೆಲಸವನ್ನು ಇವರೇ ಮಾಡಿದ್ದಾರೆ. ಮುಂದೆ ತೀರ್ಪು ಬರೆದಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಜೆ, ಪಂಕಜ್ ಮಿತ್ತಲ್, ಸತೀಶ್ ಚಂದ್ರ ಶರ್ಮಾರವರು ಗವಾಯ್ ಅವರ ತೀರ್ಪನ್ನು ಉಲ್ಲೇಖ ಮಾಡುತ್ತಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೂ ‘ಕ್ರೀಮಿಲೇಯರ್’ ತತ್ವವನ್ನು ಅಳವಡಿಸಬೇಕೆಂದು ತೀರ್ಪಿತ್ತಿದ್ದಾರೆ. ಅಲ್ಲಿಗೆ ಪರಿಗಣನೆಯಲ್ಲಿ ಇಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ. ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರಂತೂ ತಮ್ಮ ತೀರ್ಪಿನಲ್ಲಿ ಚಾತುರ್ವರ್ಣ ಪದ್ಧತಿಯನ್ನು ಸಮರ್ಥಿಸಿಕೊಳ್ಳಲು ಭಗವದ್ಗೀತೆ, ಸ್ಕಂಧ ಪುರಾಣವನ್ನೂ ಎಳೆದು ತಂದಿದ್ದಾರೆ. ಜಾತಿ ಸೃಷ್ಠಿಗೆ ಚಾತುರ್ವರ್ಣ ಪದ್ಧತಿ ಕಾರಣವಲ್ಲ, ಈ ಪದ್ಧತಿಯು ಗುಣಗಳ ಆಧಾರದ ಮೇಲಿತ್ತು, ಜನ್ಮದ ಆಧಾರವಲ್ಲ ಎಂಬ ಹಳತು ಹಿಂದುತ್ವ ಉಪದೇಶವನ್ನೂ ಮಾಡಿದ್ದಾರೆ. ಗಾಂಧೀಜಿಯವರ ಹರಿಜನ ಪದವನ್ನು ಸಮರ್ಥಿಸಿಕೊಂಡಿರುವ ನ್ಯಾಯಮೂರ್ತಿ ಮಿತ್ತಲ್ ಅಪ್ಪಿತಪ್ಪಿಯೂ ಅಂಬೇಡ್ಕರರನ್ನು ಉಲ್ಲೇಖಿಸುವುದಿಲ್ಲ.

ಮಿತ್ತಲ್ ಗವಾಯಿಯವರನ್ನು ಉಲ್ಲೇಖಿಸುತ್ತಲೇ ಪೂರ್ವಾಗ್ರಹ ಪೀಡಿತರಾಗಿ ಅಭಿಪ್ರಾಯಿಸಿದ್ದಾರೆ. ಹಿಂದುಳಿದ ವರ್ಗಗಳವರು ಐಎಎಸ್‌, ಐಪಿಎಸ್‌ ಅಥವಾ ಇತರೆ ಯಾವುದೇ ಅಖಿಲ ಭಾರತ ಮಟ್ಟದ ಸೇವೆಯಲ್ಲಿದ್ದು, ತಮ್ಮ ಸ್ಥಾನವನ್ನು ಮೇಲ್ಮಟ್ಟಕ್ಕೆರಿಸಿಕೊಂಡಿದ್ದರೆ, ಅಂತಹವರ ಮಕ್ಕಳೂ ಸಹ ಮುಂದೆ ಮೀಸಲಾತಿ ಪಡೆಯುತ್ತಾರೆ. ಅಂತವರ ಮಕ್ಕಳನ್ನು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಹೇಳಲು ಸಾಧ್ಯವೇ? ಎಂದಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿರುವ ಪ.ಜಾ/ಪ.ಪಂ ದವರನ್ನು ಮೀಸಲಾತಿಯಿಂದ ಹೊರಗಿಡಬೇಕು. ಸೈಂಟ್ ಸ್ಟೀಫನ್ ಕಾಲೇಜು ಅಥವಾ ನಗರದ ಉತ್ತಮ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿ ಒಂದೇ ಅಲ್ಲ ಎನ್ನುವ ಇವರಿಗೆ, ವರ್ಗ ಮತ್ತು ಜಾತಿಯ ನಡುವಿನ ವ್ಯತ್ಯಾಸವೇ ತಿಳಿದಿಲ್ಲ. ಅಸ್ಪೃಶ್ಯರೆಂಬ ಕಾರಣಕ್ಕೆ ರಾಷ್ಟ್ರಪತಿಯವರನ್ನೇ ಅವಮಾನಿಸುವ ಸಮಾಜದಲ್ಲಿ ಸಾಮಾಜಿಕ ಸಮಾನತೆ ಇರಲು ಸಾಧ್ಯವೇ ಇಲ್ಲ ಎಂಬ ಸಣ್ಣ ಅಂಶವೂ ನ್ಯಾಯಾಧೀಶರ ಗಮನಕ್ಕೆ ಬರದಿರುವುದು ವಿಷಾದನೀಯ. ಇಂತಹ ಅಭಿಪ್ರಾಯಗಳನ್ನು ನೀಡುವ ಮಿತ್ತಲ್ ಅವರು ಮತ್ತೊಂದು ಹೆಬ್ಬಂಡೆಯನ್ನು ಪರಿಶಿಷ್ಟರ ಮೀಸಲಾತಿ ಮೇಲೆ ಹಾಕಿದ್ದಾರೆ. ಅದೆಂದರೆ ಮೀಸಲಾತಿಯು ಒಂದೇ ಪೀಳಿಗೆಗೆ ಸಾಕಂತೆ! ಇದಕ್ಕೆ ಪದೇ ಪದೇ ಗವಾಯಿಯವರ ಅಭಿಪ್ರಾಯಕ್ಕೆ ಮೊರೆ ಹೋಗಿದ್ದಾರೆ. ಈ ಅಭಿಪ್ರಾಯ ಎಷ್ಟು ಬಾಲಿಶವಾಗಿದೆ ಎಂದರೆ, ಪಿಯುಸಿಯಲ್ಲಿ ಮೀಸಲಾತಿ ಪಡೆದಿರುವ ಪೋಷಕರ ಮಗ/ಮಗಳು ಪದವಿ ಓದುವಾಗ ಮೀಸಲಾತಿ ಪಡೆಯುವಂತಿಲ್ಲ! ಒಮ್ಮೆ ಮೀಸಲಾತಿ ಪಡೆದ ಡಿ ಗ್ರೂಪ್ ನೌಕರ/ಳ ಮಗ/ಮಗಳು ಮುಂದೆ ಉನ್ನತ ಹುದ್ದೆ ಪಡೆಯಲು ಮೀಸಲಾತಿ ಪಡೆಯುವಂತಿಲ್ಲ! ಇಂತಹ ಅವೈಜ್ಞಾನಿಕ ಹಾಗೂ ಸಮಾಜ ವಿರೋಧಿ ಅಭಿಪ್ರಾಯವನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ.

ಒಟ್ಟಾರೆ ಇದೊಂದು ಸಮಾಧಾನಕರ ತೀರ್ಪು. ಆದರೆ, ದಲಿತರು ಎಚ್ಚರವಾಗಿರಬೇಕು. ಅಪ್ಪಿತಪ್ಪಿಯೂ ‘ಕ್ರೀಮಿಲೇಯರ್’ ಹೇರಲು ಬಿಡಬಾರದು. 8 ಲಕ್ಷ ಆದಾಯವಿದ್ದರೂ ಮೇಲ್ಜಾತಿಗಳಿಗೆ ಇಡಬ್ಲ್ಯುಎಸ್‌ ಮೂಲಕ ಶೇ. 10 ಮೀಸಲಾತಿ ನೀಡಲು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್, ಬ್ರಾಹ್ಮಣರು, ಬನಿಯಾಗಳು ಎನ್ನುವ ಕಾರಣಕ್ಕೆ ಸಾಮಾಜಿಕ-ಆರ್ಥಿಕವಾಗಿ ಮುಂದುವರೆದಿರುವಿಕೆಯನ್ನು ಪರಿಗಣಿಸಲೇ ಇಲ್ಲ. ಹಾಗೆಯೇ ದಲಿತರ ವಿಚಾರದಲ್ಲಿ ಆರ್ಥಿಕ ಮುಂದುವರೆದಿರುವಿಕೆಯನ್ನು ಹಾಗೂ ಕೋಟ್ಯಾಧಿಪತಿ ದಲಿತರ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗಣನೆಗೂ ತೆಗೆದುಕೊಳ್ಳುವುದಿಲ್ಲ. ಇದಾವ ನ್ಯಾಯ? ಬ್ಯಾಂಕ್ ಖಾತೆಯಲ್ಲಿ ಒಂದು ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇಟ್ಟಿರುವ ದಲಿತ/ದಲಿತೆ, ಅದೇ ಒಂದು ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇಟ್ಟಿರುವ ಬ್ರಾಹ್ಮಣ, ಬನಿಯಾ, ಲಿಂಗಾಯತ, ಒಕ್ಕಲಿಗ, ಕುರುಬ ಅಥವಾ ವಿಶ್ವಕರ್ಮ ಮುಂತಾದವರಿಗೆ ಸಮಾನರೇ? ಇಂತಹ ಕನಿಷ್ಠ ತಿಳುವಳಿಕೆಯೂ ಆ ನಾಲ್ವರು ನ್ಯಾಯಾಧೀಶರಿಗೆ ಇಲ್ಲದಾಯಿತೆ? ಏಕೈಕ ದಲಿತ ನ್ಯಾಯಾಧೀಶರಿಗೂ ತಿಳಿಯದಾಯಿತೆ?

ಇದನ್ನೂ ಓದಿ : ಒಳ ಮೀಸಲಾತಿ | ದಲಿತ ಸಮುದಾಯಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕಿದು ಸುವರ್ಣಾವಕಾಶ: ಅಂಬಣ್ಣ ಅರೋಲಿಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...