Homeಅಂಕಣಗಳುಒಳಮೀಸಲಾತಿ ತೀರ್ಪು : ಕಬಾಬ್‌ನಲ್ಲೊಂದು ಮುಳ್ಳು

ಒಳಮೀಸಲಾತಿ ತೀರ್ಪು : ಕಬಾಬ್‌ನಲ್ಲೊಂದು ಮುಳ್ಳು

"ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ನಿಜ. ಇದು ಸಂತೋಷದ ವಿಚಾರವೇ ಆಗಿದೆ. ಆದರೆ, ಸುಖಾ ಸುಮ್ಮನೆ ಮತ್ತೆ 'ಕ್ರೀಮಿಲೇಯರ್' ಎಂಬ ವಾಮನನನ್ನು ಎಳೆದು ತರಲಾಗಿದೆ"

- Advertisement -
- Advertisement -

1975 ರಲ್ಲಿ ಪಂಜಾಬ್ ಸರ್ಕಾರವು ಅಲ್ಲಿನ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದಿದ್ದ ಮಜಬಿ ಸಿಖ್ ಸಮುದಾಯಕ್ಕೆ ಒಳಮೀಸಲಾತಿ ಘೋಷಿಸಿ ಆದೇಶಿಸಿದಾಗ ಆರಂಭವಾದ ಒಳಮೀಸಲಾತಿ ಪರ ವಿರೋಧದ ಚರ್ಚೆಯು ಪರಸ್ಪರ ಹೋರಾಟವಾಗಿ ಮಾರ್ಪಟ್ಟು 5 ದಶಕಗಳ ಕಾಲ ಮುಂದುವರೆಯಿತು. ಈ ನಡುವೆ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಮಾದಿಗ ದಂಡೋರ ನೇತೃತ್ವದ ಒಳಮೀಸಲಾತಿ ಪರ ಹೋರಾಟವು ಇಡೀ ದೇಶದ ರಾಜಕಾರಣದಲ್ಲಿ ಮೈಲುಗಲ್ಲಾಗಿ ನಿಂತಿದೆ. ಎರಡೂ ರಾಜ್ಯದ ಸರ್ಕಾರಗಳನ್ನು ಏಳಿಸುವ ಹಾಗೂ ಬೀಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ಈ ಸಂಘಟನೆ ವಹಿಸಿದೆ. ಹಾಗಾಗಿ , ಸುಪ್ರೀಂಕೋರ್ಟ್ ನೀಡಿರುವ ಒಳಮೀಸಲಾತಿ ಪರ ತೀರ್ಪನ್ನು ಮಾದಿಗ ದಂಡೋರದಂತೆ ದೇಶದಾದ್ಯಂತ ಒಳಮೀಸಲಾತಿ ಪರ ಹೋರಾಟದ ಕಿಚ್ಚು ಹಚ್ಚಿದ ಹೋರಾಟಗಾರರಿಗೆ ಅರ್ಪಿಸಬೇಕಿದೆ.

ಇ.ವಿ ಚಿನ್ನಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಒಳಮೀಸಲಾತಿಯ ವಿರುದ್ಧ ತೀರ್ಪಿತ್ತಿತ್ತು. ಪಂಜಾಬಿನ ಧವಿಂದರ್ ಪ್ರಕರಣದಲ್ಲಿ ಜಸ್ಟೀಸ್ ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಒಳಮೀಸಲಾತಿ ಪರ ತೀರ್ಪು ನೀಡಿತ್ತು. ಹೀಗಾಗಿ ಒಳಮೀಸಲಾತಿಯ ಪ್ರಶ್ನೆಯು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠದ ಮುಂದೆ ಬಂದಿತ್ತು. ಈ ಪೀಠದ ಮುಂದೆ ಬಹುಮುಖ್ಯವಾದ ಎರಡು ಪ್ರಶ್ನೆಗಳಿದ್ದವು.

1. ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ನೀಡುವ ಅಧಿಕಾರವಿದೆಯೇ?

2. ಸಂವಿಧಾನಕ್ಕನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಉಪವರ್ಗೀಕರಣ (ಒಳಮೀಸಲಾತಿ) ಮಾಡಬಹುದೇ?

ಈ ಎರಡು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ದಿನಾಂಕ 01.08.2024ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠವು ತೀರ್ಪು ನೀಡಿದೆ. 6:1ರ ಬಹುಮತದೊಂದಿಗೆ ಇ.ವಿ ಚಿನ್ನಯ್ಯ ಪ್ರಕರಣದಲ್ಲಿ ನೀಡಲಾಗಿದ್ದ ಒಳಮೀಸಲಾತಿ ಸಾಧ್ಯವಿಲ್ಲ ಎಂಬ ತೀರ್ಪನ್ನು ರದ್ದುಗೊಳಿಸಿದೆ. ಈ ಮೂಲಕ ಸಾಂವಿಧಾನಿಕವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ನೀಡಬಹುದು. ಹೀಗೆ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ದಲಿತ ಪರ ತೀರ್ಪು ನೀಡಿದೆ. ಈ ಮೂಲಕ ಒಳಮೀಸಲಾತಿ ಜಾರಿಗಾಗಿ ಉಷಾ ಮೆಹ್ರಾ ಸಮಿತಿಯ ಶಿಫಾರಸಿನಂತೆ ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರದ ಮುಂದೆ ಹೋರಾಟ ಮಾಡುವ ಅವಶ್ಯಕತೆ ಇಲ್ಲದಂತೆ ಮಾಡಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ರಾಜ್ಯ ಸರ್ಕಾರಗಳೇ ಪರಿಶಿಷ್ಟರಿಗೆ ಒಳಮೀಸಲಾತಿ ಜಾರಿ ಮಾಡಬಹುದಾಗಿದೆ.

ಒಳಮೀಸಲಾತಿ ಜಾರಿ ಹೇಗೆ?

ಸುಪ್ರೀಂ ಕೋರ್ಟ್ ತೀರ್ಪಿನಂತೆ 7 ಜನ ನ್ಯಾಯಾಧೀಶರಲ್ಲಿ ಏಕೈಕ ಮಹಿಳಾ ನ್ಯಾಯಾಧೀಶೆಯಾಗಿರುವ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿಯವರನ್ನು ಹೊರತುಪಡಿಸಿದರೆ, ಉಳಿದಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ, ಜಿ.ಎ.ಗವಾಯ್, ವಿಕ್ರಮ್ ನಾಥ್ ಜೆ, ಪಂಕಜ್ ಮಿತ್ತಲ್, ಸತೀಶ್ ಚಂದ್ರ ಶರ್ಮಾ ಇವರುಗಳು ರಾಜ್ಯಗಳಿಗೆ ಒಳಮೀಸಲಾತಿಯನ್ನು ನೀಡುವ ಅಧಿಕಾರವಿದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದರೆ, ಒಳಮೀಸಲಾತಿ ನೀಡಲು ನಿರ್ದಿಷ್ಟ ಸಮುದಾಯದ ಪ್ರಾತಿನಿಧ್ಯದ ಕೊರತೆಯನ್ನು ದೃಢಪಡಿಸಿಕೊಳ್ಳಲು ಅಂಕಿ ಅಂಶ ಸಂಗ್ರಹಿಸಲು ತಿಳಿಸುತ್ತಾರೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಮನೋಜ್ ಮಿಶ್ರಾರವರು ಪ್ರಾತಿನಿಧ್ಯದ ಹಿಂದುಳಿದಿರುವಿಕೆಯನ್ನು ತಿಳಿದುಕೊಳ್ಳಲು ರಾಜ್ಯವು ‘ರಾಜ್ಯ ಸರ್ಕಾರದ ಉದ್ಯೋಗ’ಗಳ ಅಂಕಿ ಅಂಶವನ್ನು ಸಂಗ್ರಹಿಸಬೇಕೆಂದು ನಿರ್ದಿಷ್ಟವಾಗಿಯೇ ತಿಳಿಸಿದ್ದಾರೆ. ಉದಾಹರಣೆಗೆ, ಕರ್ನಾಟಕ ಸರ್ಕಾರಕ್ಕೆ ಒಳಮೀಸಲಾತಿ ನೀಡುವ ಅಧಿಕಾರವಿದ್ದು, ಜಸ್ಟೀಸ್ ಸದಾಶಿವ ಆಯೋಗದ ಮಾದರಿಯಲ್ಲಿಯೇ ಅಥವಾ ಅದಕ್ಕಿಂತಲೂ ಸಮರ್ಥವಾದ ಆಯೋಗವನ್ನು ರಚಿಸಿ ಅಂಕಿ ಅಂಶಗಳನ್ನು ಕ್ರೋಡೀಕರಿಸಿ ಒಳಮೀಸಲಾತಿ ಜಾರಿಗೊಳಿಸಬೇಕಿದೆ.

ಈ ತೀರ್ಪಿನಲ್ಲಿ ಒಂದು ಅನ್ಯಾಯವೂ ಇದೆ

ಈಗಾಗಲೇ ಹೇಳಿದಂತೆ 6:1ರ ಬಹುಮತದೊಂದಿಗೆ ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ನಿಜ. ಇದು ಸಂತೋಷದ ವಿಚಾರವೇ ಆಗಿದೆ. ಆದರೆ, ಸುಖಾ ಸುಮ್ಮನೆ ಮತ್ತೆ ‘ಕ್ರೀಮಿಲೇಯರ್’ ಎಂಬ ವಾಮನನನ್ನು ಎಳೆದು ತರಲಾಗಿದೆ. ಈ ವಾಮನ ‘ಕ್ರೀಮಿಲೇಯರ್’ ಅನ್ನು ಮೊದಲು ಪ್ರಸ್ತಾಪಿಸಿರುವ ನ್ಯಾಯಾಧೀಶರು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಜಿ.ಎ ಗವಾಯ್ ಅವರೇ ಆಗಿದ್ದಾರೆ! ಇವರು ಒಳಮೀಸಲಾತಿಗೆ ಒಪ್ಪಿಗೆ ನೀಡುತ್ತಾ, “ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗೂ ಕ್ರೀಮಿಲೇಯರ್ ತತ್ವವನ್ನು ಅಳವಡಿಸಬೇಕು. ಹೀಗೆ ಅಳವಡಿಸುವಾಗ ಹಿಂದುಳಿದ ವರ್ಗಗಳ ಅನುಸರಿಸಿರುವ ಕ್ರೀಮಿಲೇಯರ್ ಮಾನದಂಡಗಳ ಬದಲಾಗಿ ಇತರೆ ಮಾನದಂಡಗಳನ್ನು ಅಳವಡಿಸಿಕೊಳ್ಳಬಹುದು” ಎಂದಿದ್ದಾರೆ. ಈ ಮೂಲಕ ಕಬಾಬಿನಲ್ಲಿ ಮುಳ್ಳಿಡುವ ಕೆಲಸವನ್ನು ಇವರೇ ಮಾಡಿದ್ದಾರೆ. ಮುಂದೆ ತೀರ್ಪು ಬರೆದಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಜೆ, ಪಂಕಜ್ ಮಿತ್ತಲ್, ಸತೀಶ್ ಚಂದ್ರ ಶರ್ಮಾರವರು ಗವಾಯ್ ಅವರ ತೀರ್ಪನ್ನು ಉಲ್ಲೇಖ ಮಾಡುತ್ತಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೂ ‘ಕ್ರೀಮಿಲೇಯರ್’ ತತ್ವವನ್ನು ಅಳವಡಿಸಬೇಕೆಂದು ತೀರ್ಪಿತ್ತಿದ್ದಾರೆ. ಅಲ್ಲಿಗೆ ಪರಿಗಣನೆಯಲ್ಲಿ ಇಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ. ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರಂತೂ ತಮ್ಮ ತೀರ್ಪಿನಲ್ಲಿ ಚಾತುರ್ವರ್ಣ ಪದ್ಧತಿಯನ್ನು ಸಮರ್ಥಿಸಿಕೊಳ್ಳಲು ಭಗವದ್ಗೀತೆ, ಸ್ಕಂಧ ಪುರಾಣವನ್ನೂ ಎಳೆದು ತಂದಿದ್ದಾರೆ. ಜಾತಿ ಸೃಷ್ಠಿಗೆ ಚಾತುರ್ವರ್ಣ ಪದ್ಧತಿ ಕಾರಣವಲ್ಲ, ಈ ಪದ್ಧತಿಯು ಗುಣಗಳ ಆಧಾರದ ಮೇಲಿತ್ತು, ಜನ್ಮದ ಆಧಾರವಲ್ಲ ಎಂಬ ಹಳತು ಹಿಂದುತ್ವ ಉಪದೇಶವನ್ನೂ ಮಾಡಿದ್ದಾರೆ. ಗಾಂಧೀಜಿಯವರ ಹರಿಜನ ಪದವನ್ನು ಸಮರ್ಥಿಸಿಕೊಂಡಿರುವ ನ್ಯಾಯಮೂರ್ತಿ ಮಿತ್ತಲ್ ಅಪ್ಪಿತಪ್ಪಿಯೂ ಅಂಬೇಡ್ಕರರನ್ನು ಉಲ್ಲೇಖಿಸುವುದಿಲ್ಲ.

ಮಿತ್ತಲ್ ಗವಾಯಿಯವರನ್ನು ಉಲ್ಲೇಖಿಸುತ್ತಲೇ ಪೂರ್ವಾಗ್ರಹ ಪೀಡಿತರಾಗಿ ಅಭಿಪ್ರಾಯಿಸಿದ್ದಾರೆ. ಹಿಂದುಳಿದ ವರ್ಗಗಳವರು ಐಎಎಸ್‌, ಐಪಿಎಸ್‌ ಅಥವಾ ಇತರೆ ಯಾವುದೇ ಅಖಿಲ ಭಾರತ ಮಟ್ಟದ ಸೇವೆಯಲ್ಲಿದ್ದು, ತಮ್ಮ ಸ್ಥಾನವನ್ನು ಮೇಲ್ಮಟ್ಟಕ್ಕೆರಿಸಿಕೊಂಡಿದ್ದರೆ, ಅಂತಹವರ ಮಕ್ಕಳೂ ಸಹ ಮುಂದೆ ಮೀಸಲಾತಿ ಪಡೆಯುತ್ತಾರೆ. ಅಂತವರ ಮಕ್ಕಳನ್ನು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಹೇಳಲು ಸಾಧ್ಯವೇ? ಎಂದಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿರುವ ಪ.ಜಾ/ಪ.ಪಂ ದವರನ್ನು ಮೀಸಲಾತಿಯಿಂದ ಹೊರಗಿಡಬೇಕು. ಸೈಂಟ್ ಸ್ಟೀಫನ್ ಕಾಲೇಜು ಅಥವಾ ನಗರದ ಉತ್ತಮ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿ ಒಂದೇ ಅಲ್ಲ ಎನ್ನುವ ಇವರಿಗೆ, ವರ್ಗ ಮತ್ತು ಜಾತಿಯ ನಡುವಿನ ವ್ಯತ್ಯಾಸವೇ ತಿಳಿದಿಲ್ಲ. ಅಸ್ಪೃಶ್ಯರೆಂಬ ಕಾರಣಕ್ಕೆ ರಾಷ್ಟ್ರಪತಿಯವರನ್ನೇ ಅವಮಾನಿಸುವ ಸಮಾಜದಲ್ಲಿ ಸಾಮಾಜಿಕ ಸಮಾನತೆ ಇರಲು ಸಾಧ್ಯವೇ ಇಲ್ಲ ಎಂಬ ಸಣ್ಣ ಅಂಶವೂ ನ್ಯಾಯಾಧೀಶರ ಗಮನಕ್ಕೆ ಬರದಿರುವುದು ವಿಷಾದನೀಯ. ಇಂತಹ ಅಭಿಪ್ರಾಯಗಳನ್ನು ನೀಡುವ ಮಿತ್ತಲ್ ಅವರು ಮತ್ತೊಂದು ಹೆಬ್ಬಂಡೆಯನ್ನು ಪರಿಶಿಷ್ಟರ ಮೀಸಲಾತಿ ಮೇಲೆ ಹಾಕಿದ್ದಾರೆ. ಅದೆಂದರೆ ಮೀಸಲಾತಿಯು ಒಂದೇ ಪೀಳಿಗೆಗೆ ಸಾಕಂತೆ! ಇದಕ್ಕೆ ಪದೇ ಪದೇ ಗವಾಯಿಯವರ ಅಭಿಪ್ರಾಯಕ್ಕೆ ಮೊರೆ ಹೋಗಿದ್ದಾರೆ. ಈ ಅಭಿಪ್ರಾಯ ಎಷ್ಟು ಬಾಲಿಶವಾಗಿದೆ ಎಂದರೆ, ಪಿಯುಸಿಯಲ್ಲಿ ಮೀಸಲಾತಿ ಪಡೆದಿರುವ ಪೋಷಕರ ಮಗ/ಮಗಳು ಪದವಿ ಓದುವಾಗ ಮೀಸಲಾತಿ ಪಡೆಯುವಂತಿಲ್ಲ! ಒಮ್ಮೆ ಮೀಸಲಾತಿ ಪಡೆದ ಡಿ ಗ್ರೂಪ್ ನೌಕರ/ಳ ಮಗ/ಮಗಳು ಮುಂದೆ ಉನ್ನತ ಹುದ್ದೆ ಪಡೆಯಲು ಮೀಸಲಾತಿ ಪಡೆಯುವಂತಿಲ್ಲ! ಇಂತಹ ಅವೈಜ್ಞಾನಿಕ ಹಾಗೂ ಸಮಾಜ ವಿರೋಧಿ ಅಭಿಪ್ರಾಯವನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ.

ಒಟ್ಟಾರೆ ಇದೊಂದು ಸಮಾಧಾನಕರ ತೀರ್ಪು. ಆದರೆ, ದಲಿತರು ಎಚ್ಚರವಾಗಿರಬೇಕು. ಅಪ್ಪಿತಪ್ಪಿಯೂ ‘ಕ್ರೀಮಿಲೇಯರ್’ ಹೇರಲು ಬಿಡಬಾರದು. 8 ಲಕ್ಷ ಆದಾಯವಿದ್ದರೂ ಮೇಲ್ಜಾತಿಗಳಿಗೆ ಇಡಬ್ಲ್ಯುಎಸ್‌ ಮೂಲಕ ಶೇ. 10 ಮೀಸಲಾತಿ ನೀಡಲು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್, ಬ್ರಾಹ್ಮಣರು, ಬನಿಯಾಗಳು ಎನ್ನುವ ಕಾರಣಕ್ಕೆ ಸಾಮಾಜಿಕ-ಆರ್ಥಿಕವಾಗಿ ಮುಂದುವರೆದಿರುವಿಕೆಯನ್ನು ಪರಿಗಣಿಸಲೇ ಇಲ್ಲ. ಹಾಗೆಯೇ ದಲಿತರ ವಿಚಾರದಲ್ಲಿ ಆರ್ಥಿಕ ಮುಂದುವರೆದಿರುವಿಕೆಯನ್ನು ಹಾಗೂ ಕೋಟ್ಯಾಧಿಪತಿ ದಲಿತರ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗಣನೆಗೂ ತೆಗೆದುಕೊಳ್ಳುವುದಿಲ್ಲ. ಇದಾವ ನ್ಯಾಯ? ಬ್ಯಾಂಕ್ ಖಾತೆಯಲ್ಲಿ ಒಂದು ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇಟ್ಟಿರುವ ದಲಿತ/ದಲಿತೆ, ಅದೇ ಒಂದು ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇಟ್ಟಿರುವ ಬ್ರಾಹ್ಮಣ, ಬನಿಯಾ, ಲಿಂಗಾಯತ, ಒಕ್ಕಲಿಗ, ಕುರುಬ ಅಥವಾ ವಿಶ್ವಕರ್ಮ ಮುಂತಾದವರಿಗೆ ಸಮಾನರೇ? ಇಂತಹ ಕನಿಷ್ಠ ತಿಳುವಳಿಕೆಯೂ ಆ ನಾಲ್ವರು ನ್ಯಾಯಾಧೀಶರಿಗೆ ಇಲ್ಲದಾಯಿತೆ? ಏಕೈಕ ದಲಿತ ನ್ಯಾಯಾಧೀಶರಿಗೂ ತಿಳಿಯದಾಯಿತೆ?

ಇದನ್ನೂ ಓದಿ : ಒಳ ಮೀಸಲಾತಿ | ದಲಿತ ಸಮುದಾಯಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕಿದು ಸುವರ್ಣಾವಕಾಶ: ಅಂಬಣ್ಣ ಅರೋಲಿಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...