ಮುಂಬೈನ ಬಾಂದ್ರಾ ಟರ್ಮಿನಸ್ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಾಹಿತಿಯ ಪ್ರಕಾರ, ಭಾನುವಾರ ಮುಂಜಾನೆ ಮುಂಬೈನಿಂದ ಗೋರಖ್ಪುರಕ್ಕೆ ಹೋಗುತ್ತಿದ್ದ ರೈಲು ಪ್ಲಾಟ್ಫಾರ್ಮ್ ತಲುಪಿದಾಗ ಈ ಘಟನೆ ಸಂಭವಿಸಿದೆ. ಆದರೆ, ಪ್ರಯಾಣಿಕರು ರೈಲು ಹತ್ತಲು ಆತುರಪಡುತ್ತಿದ್ದಂತೆ ಕಾಲ್ತುಳಿತ ಉಂಟಾಗಿ ಸುಮಾರು ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡ ಎಲ್ಲ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಮುಂಬೈನ ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದ್ರಜಿತ್ ಸಹಾನಿ ಮತ್ತು ನೂರ್ ಮೊಹಮ್ಮದ್ ಶೇಖ್ ಎಂದು ಗುರುತಿಸಲಾದ ಇಬ್ಬರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ನಾಗರಿಕ ಅಧಿಕಾರಿಗಳ ಪ್ರಕಾರ, ಭಾನುವಾರದಂದು ಘಟನೆ ವರದಿಯಾಗಿದೆ, ಹಬ್ಬದ ಋತುವಿನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬಾಂದ್ರಾ-ಗೋರಖ್ಪುರ ಅಂತ್ಯೋದಯ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಣಿಸಲು ಜನರಲ್ ಕೋಚ್ಗಳಿಗೆ ಹತ್ತಲು ಪ್ಲಾಟ್ಫಾರ್ಮ್ ನಂ. 1 ಕ್ಕೆ ಧಾವಿಸಿದ್ದರು.
ಪ್ರಯಾಣಿಕರು ಅಂತ್ಯೋದಯ ಎಕ್ಸ್ಪ್ರೆಸ್ ಅನ್ನು ಹತ್ತಲು ಪ್ರಯತ್ನಿಸಿದಾಗ (ಎಲ್ಲಾ 22 ಸಾಮಾನ್ಯ ದರ್ಜೆಯ ಬೋಗಿಗಳನ್ನು ಹೊಂದಿರುವ) ಒಳಗಿನಿಂದ ಕೋಚ್ಗಳ ಬಾಗಿಲುಗಳನ್ನು ಲಾಕ್ ಮಾಡಿದಾಗ ಪರಿಸ್ಥಿತಿ ಹದಗೆಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನಲ್ಲಿ ಆಸನವನ್ನು ಹಿಡಿಯುವ ಪ್ರಯತ್ನದಲ್ಲಿ, ಕೆಲವರು ಪ್ಲಾಟ್ಫಾರ್ಮ್ನಲ್ಲಿ ಇನ್ನೂ ನಿಲ್ಲದಿರುವಾಗ ರೈಲು ಹತ್ತಲು ಪ್ರಯತ್ನಿಸಿದರು. ಇದರಿಂದ ಎರಡು ಬೋಗಿಗಳ ನಡುವಿನ ಜಾಗದಲ್ಲಿ ಜನರು ಪ್ಲಾಟ್ಫಾರ್ಮ್ ಮೇಲೆ ಬೀಳಲು ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.
“ಸಾಮಾನ್ಯವಾಗಿ, ಪ್ಲಾಟ್ಫಾರ್ಮ್ನಲ್ಲಿ ರೈಲು ನಿಂತ ನಂತರ ಕೋಚ್ಗಳ ಬಾಗಿಲು ತೆರೆಯಲಾಗುತ್ತದೆ ಮತ್ತು ಪ್ರಯಾಣಿಕರು ನಂತರ ಸರದಿಯಲ್ಲಿ ಹತ್ತುತ್ತಾರೆ” ಎಂದು ಡಬ್ಲ್ಯುಆರ್ ಮೂಲಗಳು ತಿಳಿಸಿವೆ.
ಘಟನೆಯ ನಂತರ, ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಮತ್ತು ಸ್ಥಳೀಯ ಜನರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಭಾಭಾ ಆಸ್ಪತ್ರೆಗೆ ವರ್ಗಾಯಿಸಿದರು. ಅಲ್ಲಿ ಅವರು ಪ್ರಸ್ತುತ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಥಾಣೆ ಸೆಂಟ್ರಲ್ ರೈಲ್ವೆ ಡೆಪ್ಯುಟಿ ಕಮಿಷನರ್ ಮನೋಜ್ ನಾನಾ ಪಾಟೀಲ್, ಪೊಲೀಸರು ಸತ್ಯಾಸತ್ಯತೆಗಾಗಿ ವಿಚಾರಣೆ ನಡೆಸುತ್ತಿದ್ದಾರೆ. “ಇದು ಪ್ರತಿ ಭಾನುವಾರ ಓಡುವ ಸಾಪ್ತಾಹಿಕ ರೈಲು. ರೈಲು ಕಾಯ್ದಿರಿಸಲಾಗಿಲ್ಲ.. ಸಾಮಾನ್ಯ ಸಾರ್ವಜನಿಕರು ಈ ರೈಲಿನ ಟಿಕೆಟ್ ಸುಲಭವಾಗಿ ಖರೀದಿಸಬಹುದು. ಆದ್ದರಿಂದ, ಈ ರೈಲಿಗೆ ಸಾಮಾನ್ಯವಾಗಿ ವಿಪರೀತ ರಶ್ ಇರುತ್ತದೆ.. ನಮ್ಮ ತಂಡವು ಇಲ್ಲಿ ಹಾಜರಿದ್ದರು, ಆದರೆ ಜನರು ಹಠಾತ್ತನೆ ಆಸನಗಳಿಗಾಗಿ ಧಾವಿಸಿದರು.. ಘಟನೆಯಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ.. ನಾವು ವಿಚಾರಣೆ ನಡೆಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದರು.
ಇದನ್ನೂ ಓದಿ; ದೆಹಲಿ: ಪಾಲಿಕಾ ಬಜಾರ್ನಲ್ಲಿ ಅನುಮಾನಾಸ್ಪದ ಚೈನೀಸ್ ಜಾಮರ್ಗಳು ಪತ್ತೆ, ತನಿಖೆ ಕೈಗೆತ್ತಿಕೊಂಡ ಪೊಲೀಸರು


