Homeಅಂಕಣಗಳು`ಅರೆರೆ, ನಮ್ದು ಕುತ್ತೆ ನಮಿಗೇ ಬೌ..ಬೌ..’

`ಅರೆರೆ, ನಮ್ದು ಕುತ್ತೆ ನಮಿಗೇ ಬೌ..ಬೌ..’

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳು, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.
ಬ್ಲೂಜೆಪಿಯೆಂಬ ಕೊಳಕುಮಂಡಲ ಪಾರ್ಟಿಯು ದೇಶದ ತುಂಬೆಲ್ಲ ಕಾರ್ಯಕರ್ತರ ಹೆಸರಿನಲ್ಲಿ ಮಿಡಿನಾಗರಗಳನ್ನು ಸಾಕಿ, ವಿರೋಧಿಗಳ ಮೇಲೆ ಎಸೆಯುತ್ತಿರುವುದು ಗೊತ್ತೇ ಇದೆ. ಕಂಡಕಂಡವರಿಗೆಲ್ಲ ಕಚ್ಚಿ ಕಚ್ಚಿ ಅಭ್ಯಾಸವಾಗಿರುವ ಈ ಹಾವುಗಳು ಕಚ್ಚಲು ಬೇರೆ ಯಾರೂ ಸಿಗದೆ ಇತ್ತೀಚೆಗೆ ಬ್ಲೂಜೆಪಿ ಪಕ್ಷದವರನ್ನೇ ಅಗಿಯುತ್ತಿರುವುದು ಹೊಸ ಸಮಾಚಾರ. ಅಂತರ್ಧರ್ಮೀಯ ಮದುವೆಯಾದ ದಂಪತಿಗಳಿಗೆ ಪಾಸ್ ಪೋರ್ಟ್ ಕೊಡಲ್ಲ ಎಂದ ಸರ್ಕಾರಿ ಅಧಿಕಾರಿಯೊಬ್ಬನನ್ನು ಕೇಂದ್ರ ವಿದೇಶಾಂಗ ಮಂತ್ರಿ ಚೆಷ್ಮಾ ಸುರಾಜಮ್ಮ ಒದೆಯಬಾರದ ಜಾಗಕ್ಕೆ ಒದ್ದು ಕೆಲಸದಿಂದ ಓಡಿಸಿದ್ದರು. ಇಷ್ಟಕ್ಕೇ ರೊಚ್ಚಿಗೆದ್ದ ಬ್ಲೂಜೆಪಿಯ ಕಾರ್ಯಕರ್ತ ಸರ್ಪಗಳ ಪಡೆಯು ಚೆಶ್ಮಮ್ಮನನ್ನು ಕೊಲೆ ಮಾಡಲು, ತುಳಿದು ಸಾಯಿಸಲು ಕರೆ ಕೊಟ್ಟಿದ್ದವು. ಮುದ್ದು ಮಾಡಿ, ತಲೆಸವರಿ, ವಿಷವುಣಿಸಿ ಬೆಳೆಸಿದ ತಮ್ಮ ಸ್ವಂತ ಸರ್ಪಗಳೇ ತಿರುಗಿ ಬಿದ್ದು ಕಚ್ಚುತ್ತಿರುವುದರಿಂದ ಘಾಸಿಗೊಂಡ ಚೆಷ್ಮಮ್ಮ `ಅರೆರೆ, ನಮ್ದು ಕುತ್ತಾ ನಮಿಗೇ ಬೌ..ಬೌ..’ ಎಂದು ಕನವರಿಸುತ್ತಾ ಜೀವನದಲ್ಲಿ ಜಿಗುಪ್ಸೆ ಹುಟ್ಟಿಸಿಕೊಂಡಿದ್ದಾರೆಂದು ಅನಧಿಕೃತ ಮೂಲಗಳು ತಿಳಿಸಿವೆ.

******

ಬ್ರದಾನಮಂತ್ರಿ ಫಕೀರಪ್ಪನನ್ನು ರೋಡ್ ಶೋ ಟೈಮಿನಲ್ಲಿ ಆನೆಪಟಾಕಿ ಸರಕ್ಕೆ ಬೆಂಕಿಹಚ್ಚಿ ಎಸೆದು ಉಡೀಸ್ ಮಾಡಲು ದುಷ್ಕರ್ಮಿಗಳು ಹೊಂಚು ಹಾಕುತ್ತಿದ್ದಾರೆಂದು ಹಗಲುಕನಸು ಕಂಡ ಮಹಾರಾಷ್ಟ್ರ ಪೊಲೀಸರು ಈ ಕೆಟ್ಟಕನಸಿನ ಬಗ್ಗೆ ಬ್ರಧಾನಮಂತ್ರಿ ಕಚೇರಿಗೆ ಮಾಹಿತಿ ತಲುಪಿಸಿದ್ದಾರೆ. ಈ ತಳಬುಡವಿಲ್ಲದ ದುಸ್ವಪ್ನದ ಆಧಾರದ ಮೇಲೆ ಪಿ.ಎಂ ಫಕೀರಪ್ಪನಿಗೆ ಸೆಕ್ಯುರಿಟಿಯನ್ನು ಟೈಟ್ ಮಾಡಲಾಗಿದೆಯಂತೆ. ಹೊಸ ಆದೇಶದ ಪ್ರಕಾರ ಫಕೀರಪ್ಪನನ್ನು ದೇಶದ ಎಂ.ಎಲ್.ಎ, ಎಂಪಿಗಳು, ಅಧಿಕಾರಿಗಳೂ ಸಹ ಭೇಟಿ ಮಾಡಲು ನಿಬರ್ಂಧ ಹೇರಲಾಗಿದೆ. ಫಕೀರಪ್ಪನನ್ನು ಒಂದು ಪುರಿಮೂಟೆಯೊಳಗೆ ತುಂಬಿ, ಲಾರಿಯೊಂದಕ್ಕೆ ಎಸೆದು, ಆ ಲಾರಿಯ ಸುತ್ತ ಎಸ್.ಪಿ.ಜಿ ಕಮ್ಯಾಂಡೋಗಳು ಬಂದೂಕು ಹಿಡಿದು ಪಹರೆ ಕಾಯುತ್ತಿದ್ದಾರೆ ಎನ್ನಲಾಗಿದೆ. ತಿಂಡಿ, ಊಟ, ಸುಸ್ಸು ಮಾಡಲಷ್ಟೇ ಪುರಿಮೂಟೆಯಿಂದ ಹೊರಬರುವ ಫಕೀರಪ್ಪ, ಬಂದ ಕೆಲಸ ಮುಗಿಯುತ್ತಿದ್ದಂತೆ ಪುಸುಕ್ ಅಂತ ಲಾರಿ ಹತ್ತಿ ವಾಪಸ್ ಪುರಿಮೂಟೆಯೊಳಗೆ ಹೋಗಿ ಅವಿತು ಕುಳಿತುಕೊಳ್ಳುತ್ತಿದ್ದಾರೆಂದು ಅನಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

******

ರಾಜ್ಯ ರಾಜಕಾರಣದ ಕಲಬೆರಕೆ ಸರ್ಕಾರದಲ್ಲಿ ದಿನಕ್ಕೊಂದು ಧೀಂತಕಿಟತೋಂ ಅವಾಂತರಗಳನ್ನು ನೋಡಿ ನೋಡಿ ಕಣ್ಣು ಬೇನೆ ಬರಿಸಿಕೊಂಡಿರುವ ಸಮಾಜವಾದಿ ಸಿದ್ದಣ್ಣನವರು ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆದೂ ಪಡೆದೂ ಬೇಜಾರಾಗಿರೋ ಸಿದ್ದಣ್ಣ ‘ಬೆರಕೆ ಸರ್ಕಾರದ ಆಯುಸ್ಸು ಇಷ್ಟು ತಿಂಗಳು, ಆಮೇಲಿದು ಕಾಲೆತ್ತಿಕೊಂಡು ಮಲಗುತ್ತದೆ’ ಅಂತ ದಿನಕ್ಕೊಂದು ಆಡಿಯೋ ರೆಕಾಡಿರ್ಂಗ್, ವಿಡಿಯೋ ಕ್ಲಿಪಿಂಗ್ ರಿಲೀಸ್ ಮಾಡುತ್ತ ಕುಮಾರಣ್ಣನ ಬೋಳುಮಂಡೆಯ ಮೇಲೆ ಟುಕುಟುಕು ಕುಟ್ಟಿಕೊಂಡು ಎಂಜಾಯ್ ಮಾಡುತ್ತಿರುವುದು ಕೈಕಮಾಂಡ್ ತಲೆ ಕೆಡಿಸಿದೆ. ಈ ಬಗ್ಗೆ ಚಿಂತಾಕ್ರಾಂತರಾದ ಕೈಕಮ್ಯಾಂಡ್ ಮುಖ್ಯಸ್ಥರು ಪೇಟದ ಹೆಗ್ಗಡೆಯವರಿಗೆ ಫೋನು ಮಾಡಿ, ಸಿದ್ದಣ್ಣನವರ ಚಿಕಿತ್ಸೆ ಮುಗಿಯುವವರೆಗೆ ಅವರು ಮಾತನಾಡಲು ಸಾಧ್ಯವಾಗದಂತೆ ಯಾವುದಾದರೂ ಬೇರನ್ನು ಅರೆದು ಸಿದ್ದಣ್ಣನಿಗೆ ಬಲವಂತವಾಗಿ ಕುಡಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆಂದು ಸೋರಿಕೆ ಸುದ್ದಿಗಳು ತಿಳಿಸಿವೆ.

******

ಬೀದಿಬೀದಿಗಳಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ಮೊಬೈಲ್ ರಿಪೇರಿ ಅಂಗಡಿಗಳ ಹುಡುಗರಿಗಿಂತ ಕಡಿಮೆ ಕಾಮನ್ ಸೆನ್ಸ್ ಮತ್ತು ಸೈನ್ಸ್ ತಿಳುವಳಿಕೆಯಿರೋ ‘ಪವನಜ್ಜ’ ಎಂಬ ವಯೋವೃದ್ಧ ಚೆಡ್ಡಿಯೊಂದು ತನ್ನ ಮಾನವನ್ನು ತಾನೇ ತೆಗೆದುಕೊಂಡಿರೋ ಘಟನೆ ವರದಿಯಾಗಿದೆ. ಮೊಬೈಲ್‍ಗಳಲ್ಲಿ ಅದಿದೆ, ಇದು ಹಂಗೆ ಕೆಲ್ಸ ಮಾಡುತ್ತೆ, ಅದು ಹಿಂಗೆ ಕೆಲ್ಸ ಮಾಡುತ್ತೆ ಅಂತ ಪತ್ರಿಕೆಗಳಲ್ಲಿ ಪುಂಗುವ ಈ ಹಳೇ ದೊಗಳೆಚೆಡ್ಡಿಯು ಪುಸ್ತಕ ನೋಡಿ ಪರೀಕ್ಷೆ ಬರೆಯುವ ಶಿಕ್ಷಣ ಇಲಾಖೆಯ ಹೊಸ ಆಲೋಚನೆಯನ್ನು ಮೀಸಲಾತಿಗೆ ಗಂಟುಹಾಕಿ ತನ್ನ ಪುಳಚಾರ್ ಪಾಲಿಟಿಕ್ಸನ್ನು ಬಟಾಬಯಲು ಮಾಡಿಕೊಂಡಿದೆ. ಮೀಸಲಾತಿ ಅನುಪಾತದ ಹಿಂದುಮುಂದು ಗೊತ್ತಿಲ್ಲದೆ ಕೆಕರುಮಕರು ಪಟ್ಟಿಯೊಂದನ್ನು ಫೇಸ್ಬುಕ್ಕಲ್ಲಿ ಪೋಸ್ಟ್ ಮಾಡಿರುವ ಪವನಜ್ಜ.. ತಾನೆಂಥ ಶ್ರೇಷ್ಟಜಾತಿಯ ಹುಳ ಎಂಬುದನ್ನು ಅಂಡು ತಟ್ಟಿಕೊಂಡು ಘೋಷಿಸಿ ಜನರಿಂದ ಛೀಥೂ ಎಂದು ಉಗಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

******

ಬಿಹಾರದಲ್ಲಿ ಲಲ್ಲೂ ಯಾದವ್ ಜೊತೆಗೆ ನೆಟ್ಟಗೆ ನಡೆಯುತ್ತಿದ್ದ ಕೂಡುಸಂಸಾರದ ಸರ್ಕಾರಕ್ಕೆ ಕೈ ಕೊಟ್ಟು ಬ್ಲೂಜೆಪಿಯೆಂಬ ಮಾನಸಿಕ ಅಸ್ವಸ್ಥ ಕತ್ತೆಯೊಂದರ ಜೊತೆಗೆ ಹೊಸ ಸಂಸಾರದ ಸರ್ಕಾರ ಮಾಡಿಕೊಂಡಿದ್ದ ನಿತೀಶ್ ಕುಮಾರ್‍ಗೆ ತಾನು ಓತಿಕ್ಯಾತಕ್ಕೆ ಹೆದರಿ ಹೆಬ್ಬಾವನ್ನು ತಬ್ಬಿಕೊಂಡಿದ್ದೇನೆ ಅಂತ ತಡವಾಗಿ ಅರಿವಾಗಿದೆಯತೆ. ಬ್ಲೂಜೆಪಿ ತಿಕ್ಕಲರು ಕೊಡ್ತಿರೋ ಚಿತ್ರಹಿಂಸೆಯಿಂದ ಹೇಗಾದರೂ ಸರಿ ತಪ್ಪಿಸಿಕೊಳ್ಳಲು ಹೆಣಗುತ್ತಿರೋ ನಿತೀಶ್, ಹಳೇ ಹಸ್ಬೆಂಡಿನ ಲೆಗ್ಗೇ ಗತಿ ಎಂಬ ತೀರ್ಮಾನಕ್ಕೆ ಬಂದು “ಲಲ್ಲೂ ಮಾಮ, ಐ ಲವ್ ಯೂ ಮಾಮಾ “ ಎಂದು ಲಲ್ಲೂ ಯಾದವ್‍ಗೆ ಮೆಸೇಜು ಪಾಸ್ ಮಾಡ್ತಿದ್ದಾರೆಂದು ಗೊತ್ತಾಗಿದೆ. ಹೋದ ಬಂದಲ್ಲೆಲ್ಲ ಮಕಮೂತಿಗೆ ಇಕ್ಕಿಸಿಕೊಂಡು ಏದುಸಿರು ಬಿಡುತ್ತಿರೋ ಹಮೀದ್ ಷಾ ಎಂಬ ಹಳೇ ಕ್ರಿಮಿನಲ್ ಗಿರಾಕಿಗೆ ಈ ಬೆಳವಣಿಗೆಯಿಂದ ಹೊಸದಾಗಿ ಬೇಧಿ ಕಿತ್ಕೊಂಡಿದೆಯೆಂದು ಗುಪ್ತಮೂಲಗಳು ತಿಳಿಸಿವೆ. ಬಿಹಾರದಲ್ಲೇನಾದ್ರೂ ಎಡವಟ್ಟಾದರೆ ಅಕ್ಕಪಕ್ಕದ ರಾಜ್ಯಗಳೂ ಕೈಗೆ ಕೆರ ಎತ್ತಿಕೊಳ್ತವೆ ಅಂತ ಗಾಬರಿಯಾಗಿರುವ ಡ್ರಾಮಾ ಮಾಸ್ಟರ್ ಫಕೀರಪ್ಪ ಪಕೋಡೇಂದ್ರನು ನಿತೀಶ್ ಕುಮಾರ್‍ಗೆ ತಕ್ಷಣ ಫೋನ್ ಮಾಡಿ “ಬಾ.. ಮುತ್ತು ಕೊಡುವೆ ಕಂದನೆ, ನನ್ನ ಮುದ್ದು ರಾಜ” ಎಂಬ ಹಾಡನ್ನು ಹಾಡಿದರಂತೆ.. ಇದಕ್ಕೆ ಉತ್ತರಿಸಿದ ನಿತೀಶ್ ಕುಮಾರ್ “ನಾನು ಆ ಟೈಪ್‍ನವನಲ್ಲ… ಮುಚ್ಕೊಂಡ್ ಫೋನ್ ಮಡಗು” ಎಂದು ಖಡಕ್‍ಆಗಿ ಹೇಳಿ ಫೋನು ಕುಕ್ಕಿದರೆಂದು ಬಲ್ಲ ಮೂಲಗಳು ತಿಳಿಸಿವೆ.

******

ಕಳೆದ ಮುವ್ವತ್ತು ವರ್ಷಗಳಿಂದಲೂ ‘ಮಂದಿರ್ ವಹೀ ಬನಾಯೇಂಗೆ, ಇಟ್ಟಿಗೆ ಕೊಡಿ, ಚಪ್ಪಡಿ ಕೊಡಿ, ಮಣ್ಣು ಕೊಡಿ, ಸಿಮೆಂಟು ಕೊಡಿ’ ಅಂತ ಗಂಟಲು ಹರಿದುಕೊಳ್ತಿದ್ದ ದೊಗಳೆಚಡ್ಡಿಗಳು 2014ರಲ್ಲಿ ತಮ್ಮದೇ ಮೆಜಾರಿಟಿ ಸರ್ಕಾರ ಬಂದ ತಕ್ಷಣ ತಮ್ಮ ನವರಂಧ್ರಗಳಿಗೂ ಮಂದಿರದ ಹೆಸರಿನಲ್ಲಿ ಕಲೆಕ್ಷನ್ ಮಾಡಿದ ಐಟಂಗಳನ್ನು ಇಟ್ಟುಕೊಂಡು ಗಪ್ ಚುಪ್ ಆಗಿದ್ದರು. 4 ವರ್ಷ ಇದೇ “ಗಪ್ ಚುಪ್ಪಾಸನ” ಮಾಡುತ್ತಿದ್ದ ಇದೇ ದೊಗಳೆಚಡ್ಡಿಗಳು, ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ. ಮತ್ತೆ “ಮಂದಿರ್ ವಹೀ ಬನಾಯೇಂಗೆ” ಎಂದು ಥಕಥಕ ಕುಣಿಯುತ್ತಿವೆ. ನಿಮ್ಮದೇ ಸರ್ಕಾರ, ನಿಮ್ಮದೇ ಕಾನೂನು, ನಿಮ್ಮದೇ ಆಡಳಿತ, ನಿಮ್ಮದೇ ರಾಜ್ಯ, ನಿಮ್ಮದೇ ಮುಖ್ಯಮಂತ್ರಿ, ಇಷ್ಟೆಲ್ಲ ಇದ್ದು ಮಂದಿರ ಕಟ್ಟದೇ ಇಷ್ಟು ವರ್ಷ ಎಲ್ಲಿ ಎಂಜಲೆತ್ತೋಕೆ ಹೋಗಿದ್ರಿ ಅಂತ ದೊಗಳೆ ಚಡ್ಡಿಗಳಿಗೆ ಜನ ಉಗಿಯುತ್ತಿದ್ದಾರೆ. ಇದನ್ನು ಕೇರು ಮಾಡದ ದೊಗಳೆಚಡ್ಡಿಗಳು ಅದೇ ಚಡ್ಡಿಯಲ್ಲಿ ಉಗುಳುಬಿದ್ದ ಮುಖವನ್ನು ಒರೆಸಿಕೊಂಡು “ಮಂದಿರ್ ವಹೀ….” ಅಂತ ತಲೆ ಮೇಲೆ ಟವೆಲ್ ಹಾಕಿಕೊಂಡು ಹತ್ತಿರದ ವೈನ್ ಸ್ಟೋರ್ ಕಡೆಗೆ ಠೀವಿಯಿಂದ ಹೆಜ್ಜೆಹಾಕಿದರು ಎಂಬ ಸುದ್ದಿ ಲಭ್ಯವಾಗಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...