Homeಅಂಕಣಗಳು`ಅರೆರೆ, ನಮ್ದು ಕುತ್ತೆ ನಮಿಗೇ ಬೌ..ಬೌ..’

`ಅರೆರೆ, ನಮ್ದು ಕುತ್ತೆ ನಮಿಗೇ ಬೌ..ಬೌ..’

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳು, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.
ಬ್ಲೂಜೆಪಿಯೆಂಬ ಕೊಳಕುಮಂಡಲ ಪಾರ್ಟಿಯು ದೇಶದ ತುಂಬೆಲ್ಲ ಕಾರ್ಯಕರ್ತರ ಹೆಸರಿನಲ್ಲಿ ಮಿಡಿನಾಗರಗಳನ್ನು ಸಾಕಿ, ವಿರೋಧಿಗಳ ಮೇಲೆ ಎಸೆಯುತ್ತಿರುವುದು ಗೊತ್ತೇ ಇದೆ. ಕಂಡಕಂಡವರಿಗೆಲ್ಲ ಕಚ್ಚಿ ಕಚ್ಚಿ ಅಭ್ಯಾಸವಾಗಿರುವ ಈ ಹಾವುಗಳು ಕಚ್ಚಲು ಬೇರೆ ಯಾರೂ ಸಿಗದೆ ಇತ್ತೀಚೆಗೆ ಬ್ಲೂಜೆಪಿ ಪಕ್ಷದವರನ್ನೇ ಅಗಿಯುತ್ತಿರುವುದು ಹೊಸ ಸಮಾಚಾರ. ಅಂತರ್ಧರ್ಮೀಯ ಮದುವೆಯಾದ ದಂಪತಿಗಳಿಗೆ ಪಾಸ್ ಪೋರ್ಟ್ ಕೊಡಲ್ಲ ಎಂದ ಸರ್ಕಾರಿ ಅಧಿಕಾರಿಯೊಬ್ಬನನ್ನು ಕೇಂದ್ರ ವಿದೇಶಾಂಗ ಮಂತ್ರಿ ಚೆಷ್ಮಾ ಸುರಾಜಮ್ಮ ಒದೆಯಬಾರದ ಜಾಗಕ್ಕೆ ಒದ್ದು ಕೆಲಸದಿಂದ ಓಡಿಸಿದ್ದರು. ಇಷ್ಟಕ್ಕೇ ರೊಚ್ಚಿಗೆದ್ದ ಬ್ಲೂಜೆಪಿಯ ಕಾರ್ಯಕರ್ತ ಸರ್ಪಗಳ ಪಡೆಯು ಚೆಶ್ಮಮ್ಮನನ್ನು ಕೊಲೆ ಮಾಡಲು, ತುಳಿದು ಸಾಯಿಸಲು ಕರೆ ಕೊಟ್ಟಿದ್ದವು. ಮುದ್ದು ಮಾಡಿ, ತಲೆಸವರಿ, ವಿಷವುಣಿಸಿ ಬೆಳೆಸಿದ ತಮ್ಮ ಸ್ವಂತ ಸರ್ಪಗಳೇ ತಿರುಗಿ ಬಿದ್ದು ಕಚ್ಚುತ್ತಿರುವುದರಿಂದ ಘಾಸಿಗೊಂಡ ಚೆಷ್ಮಮ್ಮ `ಅರೆರೆ, ನಮ್ದು ಕುತ್ತಾ ನಮಿಗೇ ಬೌ..ಬೌ..’ ಎಂದು ಕನವರಿಸುತ್ತಾ ಜೀವನದಲ್ಲಿ ಜಿಗುಪ್ಸೆ ಹುಟ್ಟಿಸಿಕೊಂಡಿದ್ದಾರೆಂದು ಅನಧಿಕೃತ ಮೂಲಗಳು ತಿಳಿಸಿವೆ.

******

ಬ್ರದಾನಮಂತ್ರಿ ಫಕೀರಪ್ಪನನ್ನು ರೋಡ್ ಶೋ ಟೈಮಿನಲ್ಲಿ ಆನೆಪಟಾಕಿ ಸರಕ್ಕೆ ಬೆಂಕಿಹಚ್ಚಿ ಎಸೆದು ಉಡೀಸ್ ಮಾಡಲು ದುಷ್ಕರ್ಮಿಗಳು ಹೊಂಚು ಹಾಕುತ್ತಿದ್ದಾರೆಂದು ಹಗಲುಕನಸು ಕಂಡ ಮಹಾರಾಷ್ಟ್ರ ಪೊಲೀಸರು ಈ ಕೆಟ್ಟಕನಸಿನ ಬಗ್ಗೆ ಬ್ರಧಾನಮಂತ್ರಿ ಕಚೇರಿಗೆ ಮಾಹಿತಿ ತಲುಪಿಸಿದ್ದಾರೆ. ಈ ತಳಬುಡವಿಲ್ಲದ ದುಸ್ವಪ್ನದ ಆಧಾರದ ಮೇಲೆ ಪಿ.ಎಂ ಫಕೀರಪ್ಪನಿಗೆ ಸೆಕ್ಯುರಿಟಿಯನ್ನು ಟೈಟ್ ಮಾಡಲಾಗಿದೆಯಂತೆ. ಹೊಸ ಆದೇಶದ ಪ್ರಕಾರ ಫಕೀರಪ್ಪನನ್ನು ದೇಶದ ಎಂ.ಎಲ್.ಎ, ಎಂಪಿಗಳು, ಅಧಿಕಾರಿಗಳೂ ಸಹ ಭೇಟಿ ಮಾಡಲು ನಿಬರ್ಂಧ ಹೇರಲಾಗಿದೆ. ಫಕೀರಪ್ಪನನ್ನು ಒಂದು ಪುರಿಮೂಟೆಯೊಳಗೆ ತುಂಬಿ, ಲಾರಿಯೊಂದಕ್ಕೆ ಎಸೆದು, ಆ ಲಾರಿಯ ಸುತ್ತ ಎಸ್.ಪಿ.ಜಿ ಕಮ್ಯಾಂಡೋಗಳು ಬಂದೂಕು ಹಿಡಿದು ಪಹರೆ ಕಾಯುತ್ತಿದ್ದಾರೆ ಎನ್ನಲಾಗಿದೆ. ತಿಂಡಿ, ಊಟ, ಸುಸ್ಸು ಮಾಡಲಷ್ಟೇ ಪುರಿಮೂಟೆಯಿಂದ ಹೊರಬರುವ ಫಕೀರಪ್ಪ, ಬಂದ ಕೆಲಸ ಮುಗಿಯುತ್ತಿದ್ದಂತೆ ಪುಸುಕ್ ಅಂತ ಲಾರಿ ಹತ್ತಿ ವಾಪಸ್ ಪುರಿಮೂಟೆಯೊಳಗೆ ಹೋಗಿ ಅವಿತು ಕುಳಿತುಕೊಳ್ಳುತ್ತಿದ್ದಾರೆಂದು ಅನಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

******

ರಾಜ್ಯ ರಾಜಕಾರಣದ ಕಲಬೆರಕೆ ಸರ್ಕಾರದಲ್ಲಿ ದಿನಕ್ಕೊಂದು ಧೀಂತಕಿಟತೋಂ ಅವಾಂತರಗಳನ್ನು ನೋಡಿ ನೋಡಿ ಕಣ್ಣು ಬೇನೆ ಬರಿಸಿಕೊಂಡಿರುವ ಸಮಾಜವಾದಿ ಸಿದ್ದಣ್ಣನವರು ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆದೂ ಪಡೆದೂ ಬೇಜಾರಾಗಿರೋ ಸಿದ್ದಣ್ಣ ‘ಬೆರಕೆ ಸರ್ಕಾರದ ಆಯುಸ್ಸು ಇಷ್ಟು ತಿಂಗಳು, ಆಮೇಲಿದು ಕಾಲೆತ್ತಿಕೊಂಡು ಮಲಗುತ್ತದೆ’ ಅಂತ ದಿನಕ್ಕೊಂದು ಆಡಿಯೋ ರೆಕಾಡಿರ್ಂಗ್, ವಿಡಿಯೋ ಕ್ಲಿಪಿಂಗ್ ರಿಲೀಸ್ ಮಾಡುತ್ತ ಕುಮಾರಣ್ಣನ ಬೋಳುಮಂಡೆಯ ಮೇಲೆ ಟುಕುಟುಕು ಕುಟ್ಟಿಕೊಂಡು ಎಂಜಾಯ್ ಮಾಡುತ್ತಿರುವುದು ಕೈಕಮಾಂಡ್ ತಲೆ ಕೆಡಿಸಿದೆ. ಈ ಬಗ್ಗೆ ಚಿಂತಾಕ್ರಾಂತರಾದ ಕೈಕಮ್ಯಾಂಡ್ ಮುಖ್ಯಸ್ಥರು ಪೇಟದ ಹೆಗ್ಗಡೆಯವರಿಗೆ ಫೋನು ಮಾಡಿ, ಸಿದ್ದಣ್ಣನವರ ಚಿಕಿತ್ಸೆ ಮುಗಿಯುವವರೆಗೆ ಅವರು ಮಾತನಾಡಲು ಸಾಧ್ಯವಾಗದಂತೆ ಯಾವುದಾದರೂ ಬೇರನ್ನು ಅರೆದು ಸಿದ್ದಣ್ಣನಿಗೆ ಬಲವಂತವಾಗಿ ಕುಡಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆಂದು ಸೋರಿಕೆ ಸುದ್ದಿಗಳು ತಿಳಿಸಿವೆ.

******

ಬೀದಿಬೀದಿಗಳಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ಮೊಬೈಲ್ ರಿಪೇರಿ ಅಂಗಡಿಗಳ ಹುಡುಗರಿಗಿಂತ ಕಡಿಮೆ ಕಾಮನ್ ಸೆನ್ಸ್ ಮತ್ತು ಸೈನ್ಸ್ ತಿಳುವಳಿಕೆಯಿರೋ ‘ಪವನಜ್ಜ’ ಎಂಬ ವಯೋವೃದ್ಧ ಚೆಡ್ಡಿಯೊಂದು ತನ್ನ ಮಾನವನ್ನು ತಾನೇ ತೆಗೆದುಕೊಂಡಿರೋ ಘಟನೆ ವರದಿಯಾಗಿದೆ. ಮೊಬೈಲ್‍ಗಳಲ್ಲಿ ಅದಿದೆ, ಇದು ಹಂಗೆ ಕೆಲ್ಸ ಮಾಡುತ್ತೆ, ಅದು ಹಿಂಗೆ ಕೆಲ್ಸ ಮಾಡುತ್ತೆ ಅಂತ ಪತ್ರಿಕೆಗಳಲ್ಲಿ ಪುಂಗುವ ಈ ಹಳೇ ದೊಗಳೆಚೆಡ್ಡಿಯು ಪುಸ್ತಕ ನೋಡಿ ಪರೀಕ್ಷೆ ಬರೆಯುವ ಶಿಕ್ಷಣ ಇಲಾಖೆಯ ಹೊಸ ಆಲೋಚನೆಯನ್ನು ಮೀಸಲಾತಿಗೆ ಗಂಟುಹಾಕಿ ತನ್ನ ಪುಳಚಾರ್ ಪಾಲಿಟಿಕ್ಸನ್ನು ಬಟಾಬಯಲು ಮಾಡಿಕೊಂಡಿದೆ. ಮೀಸಲಾತಿ ಅನುಪಾತದ ಹಿಂದುಮುಂದು ಗೊತ್ತಿಲ್ಲದೆ ಕೆಕರುಮಕರು ಪಟ್ಟಿಯೊಂದನ್ನು ಫೇಸ್ಬುಕ್ಕಲ್ಲಿ ಪೋಸ್ಟ್ ಮಾಡಿರುವ ಪವನಜ್ಜ.. ತಾನೆಂಥ ಶ್ರೇಷ್ಟಜಾತಿಯ ಹುಳ ಎಂಬುದನ್ನು ಅಂಡು ತಟ್ಟಿಕೊಂಡು ಘೋಷಿಸಿ ಜನರಿಂದ ಛೀಥೂ ಎಂದು ಉಗಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

******

ಬಿಹಾರದಲ್ಲಿ ಲಲ್ಲೂ ಯಾದವ್ ಜೊತೆಗೆ ನೆಟ್ಟಗೆ ನಡೆಯುತ್ತಿದ್ದ ಕೂಡುಸಂಸಾರದ ಸರ್ಕಾರಕ್ಕೆ ಕೈ ಕೊಟ್ಟು ಬ್ಲೂಜೆಪಿಯೆಂಬ ಮಾನಸಿಕ ಅಸ್ವಸ್ಥ ಕತ್ತೆಯೊಂದರ ಜೊತೆಗೆ ಹೊಸ ಸಂಸಾರದ ಸರ್ಕಾರ ಮಾಡಿಕೊಂಡಿದ್ದ ನಿತೀಶ್ ಕುಮಾರ್‍ಗೆ ತಾನು ಓತಿಕ್ಯಾತಕ್ಕೆ ಹೆದರಿ ಹೆಬ್ಬಾವನ್ನು ತಬ್ಬಿಕೊಂಡಿದ್ದೇನೆ ಅಂತ ತಡವಾಗಿ ಅರಿವಾಗಿದೆಯತೆ. ಬ್ಲೂಜೆಪಿ ತಿಕ್ಕಲರು ಕೊಡ್ತಿರೋ ಚಿತ್ರಹಿಂಸೆಯಿಂದ ಹೇಗಾದರೂ ಸರಿ ತಪ್ಪಿಸಿಕೊಳ್ಳಲು ಹೆಣಗುತ್ತಿರೋ ನಿತೀಶ್, ಹಳೇ ಹಸ್ಬೆಂಡಿನ ಲೆಗ್ಗೇ ಗತಿ ಎಂಬ ತೀರ್ಮಾನಕ್ಕೆ ಬಂದು “ಲಲ್ಲೂ ಮಾಮ, ಐ ಲವ್ ಯೂ ಮಾಮಾ “ ಎಂದು ಲಲ್ಲೂ ಯಾದವ್‍ಗೆ ಮೆಸೇಜು ಪಾಸ್ ಮಾಡ್ತಿದ್ದಾರೆಂದು ಗೊತ್ತಾಗಿದೆ. ಹೋದ ಬಂದಲ್ಲೆಲ್ಲ ಮಕಮೂತಿಗೆ ಇಕ್ಕಿಸಿಕೊಂಡು ಏದುಸಿರು ಬಿಡುತ್ತಿರೋ ಹಮೀದ್ ಷಾ ಎಂಬ ಹಳೇ ಕ್ರಿಮಿನಲ್ ಗಿರಾಕಿಗೆ ಈ ಬೆಳವಣಿಗೆಯಿಂದ ಹೊಸದಾಗಿ ಬೇಧಿ ಕಿತ್ಕೊಂಡಿದೆಯೆಂದು ಗುಪ್ತಮೂಲಗಳು ತಿಳಿಸಿವೆ. ಬಿಹಾರದಲ್ಲೇನಾದ್ರೂ ಎಡವಟ್ಟಾದರೆ ಅಕ್ಕಪಕ್ಕದ ರಾಜ್ಯಗಳೂ ಕೈಗೆ ಕೆರ ಎತ್ತಿಕೊಳ್ತವೆ ಅಂತ ಗಾಬರಿಯಾಗಿರುವ ಡ್ರಾಮಾ ಮಾಸ್ಟರ್ ಫಕೀರಪ್ಪ ಪಕೋಡೇಂದ್ರನು ನಿತೀಶ್ ಕುಮಾರ್‍ಗೆ ತಕ್ಷಣ ಫೋನ್ ಮಾಡಿ “ಬಾ.. ಮುತ್ತು ಕೊಡುವೆ ಕಂದನೆ, ನನ್ನ ಮುದ್ದು ರಾಜ” ಎಂಬ ಹಾಡನ್ನು ಹಾಡಿದರಂತೆ.. ಇದಕ್ಕೆ ಉತ್ತರಿಸಿದ ನಿತೀಶ್ ಕುಮಾರ್ “ನಾನು ಆ ಟೈಪ್‍ನವನಲ್ಲ… ಮುಚ್ಕೊಂಡ್ ಫೋನ್ ಮಡಗು” ಎಂದು ಖಡಕ್‍ಆಗಿ ಹೇಳಿ ಫೋನು ಕುಕ್ಕಿದರೆಂದು ಬಲ್ಲ ಮೂಲಗಳು ತಿಳಿಸಿವೆ.

******

ಕಳೆದ ಮುವ್ವತ್ತು ವರ್ಷಗಳಿಂದಲೂ ‘ಮಂದಿರ್ ವಹೀ ಬನಾಯೇಂಗೆ, ಇಟ್ಟಿಗೆ ಕೊಡಿ, ಚಪ್ಪಡಿ ಕೊಡಿ, ಮಣ್ಣು ಕೊಡಿ, ಸಿಮೆಂಟು ಕೊಡಿ’ ಅಂತ ಗಂಟಲು ಹರಿದುಕೊಳ್ತಿದ್ದ ದೊಗಳೆಚಡ್ಡಿಗಳು 2014ರಲ್ಲಿ ತಮ್ಮದೇ ಮೆಜಾರಿಟಿ ಸರ್ಕಾರ ಬಂದ ತಕ್ಷಣ ತಮ್ಮ ನವರಂಧ್ರಗಳಿಗೂ ಮಂದಿರದ ಹೆಸರಿನಲ್ಲಿ ಕಲೆಕ್ಷನ್ ಮಾಡಿದ ಐಟಂಗಳನ್ನು ಇಟ್ಟುಕೊಂಡು ಗಪ್ ಚುಪ್ ಆಗಿದ್ದರು. 4 ವರ್ಷ ಇದೇ “ಗಪ್ ಚುಪ್ಪಾಸನ” ಮಾಡುತ್ತಿದ್ದ ಇದೇ ದೊಗಳೆಚಡ್ಡಿಗಳು, ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ. ಮತ್ತೆ “ಮಂದಿರ್ ವಹೀ ಬನಾಯೇಂಗೆ” ಎಂದು ಥಕಥಕ ಕುಣಿಯುತ್ತಿವೆ. ನಿಮ್ಮದೇ ಸರ್ಕಾರ, ನಿಮ್ಮದೇ ಕಾನೂನು, ನಿಮ್ಮದೇ ಆಡಳಿತ, ನಿಮ್ಮದೇ ರಾಜ್ಯ, ನಿಮ್ಮದೇ ಮುಖ್ಯಮಂತ್ರಿ, ಇಷ್ಟೆಲ್ಲ ಇದ್ದು ಮಂದಿರ ಕಟ್ಟದೇ ಇಷ್ಟು ವರ್ಷ ಎಲ್ಲಿ ಎಂಜಲೆತ್ತೋಕೆ ಹೋಗಿದ್ರಿ ಅಂತ ದೊಗಳೆ ಚಡ್ಡಿಗಳಿಗೆ ಜನ ಉಗಿಯುತ್ತಿದ್ದಾರೆ. ಇದನ್ನು ಕೇರು ಮಾಡದ ದೊಗಳೆಚಡ್ಡಿಗಳು ಅದೇ ಚಡ್ಡಿಯಲ್ಲಿ ಉಗುಳುಬಿದ್ದ ಮುಖವನ್ನು ಒರೆಸಿಕೊಂಡು “ಮಂದಿರ್ ವಹೀ….” ಅಂತ ತಲೆ ಮೇಲೆ ಟವೆಲ್ ಹಾಕಿಕೊಂಡು ಹತ್ತಿರದ ವೈನ್ ಸ್ಟೋರ್ ಕಡೆಗೆ ಠೀವಿಯಿಂದ ಹೆಜ್ಜೆಹಾಕಿದರು ಎಂಬ ಸುದ್ದಿ ಲಭ್ಯವಾಗಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...