Homeನ್ಯಾಯ ಪಥಪುಟಕ್ಕಿಟ್ಟ ಪುಟಗಳು: ಶುಭ ಸಂದೇಶ ಹೊಸ ಒಡಂಬಡಿಕೆ - ಯೋಗೇಶ್ ಮಾಸ್ಟರ್

ಪುಟಕ್ಕಿಟ್ಟ ಪುಟಗಳು: ಶುಭ ಸಂದೇಶ ಹೊಸ ಒಡಂಬಡಿಕೆ – ಯೋಗೇಶ್ ಮಾಸ್ಟರ್

ಬಸವನ ಕುರುಹನ್ನು ಉಳಿಸಿ ವಿಜೃಂಭಿಸಲು ಪ್ರಾರಂಭದ ಬಸವಪ್ರೇಮಿಗಳು ಪುರಾಣದ ಮೊರೆ ಹೋದಂತೆ ಪ್ರಾರಂಭದ ಕ್ರೈಸ್ತರು ಕ್ರಿಸ್ತನ ಮಹತ್ವವನ್ನು ವಿಜೃಂಭಿಸಲು ಪವಾಡಗಳ ಮೊರೆ ಹೋದರು.

- Advertisement -
- Advertisement -

ಅತ್ಯಂತ ಹೆಚ್ಚು ಮುದ್ರಣವಾದ ಪುಸ್ತಕ ಬೈಬಲ್. ಅದರ ಪ್ರತಿಗಳಷ್ಟು ಕ್ರೈಸ್ತರಿರದಿದ್ದರೂ, ಧರ್ಮಪ್ರಚಾರದ ಕರ್ತವ್ಯದಿಂದ ಪಾದ್ರಿಗಳು ಭಾಷೆಗಳನ್ನು ಕಲಿತು ಬೈಬಲ್ಲನ್ನೂ ಮತ್ತು ಕ್ರಿಸ್ತನನ್ನೂ ಜನರಿಗೆ ಪರಿಚಯಿಸಿದರು. ಇದರ ಅಡ್ಡಪರಿಣಾಮಗಳಾಗಿ ನಿಘಂಟುಗಳು ಪ್ರಾದೇಶಿಕ ಭಾಷೆಗಳಿಗೆ ಲಭ್ಯವಾದವು ಮತ್ತು ಅಕ್ಷರವಂಚಿತ ವರ್ಗದವರು ಸುಶಿಕ್ಷಿತರಾದರು. ಕನ್ನಡಕ್ಕೆ ಕಿಟ್ಟಲ್ ನಿಘಂಟನ್ನು ನೀಡಿದಂತೆ ಕ್ರೈಸ್ತರು ಬಹಳಷ್ಟು ಭಾಷೆಗಳಿಗೆ ನಿಘಂಟುಗಳನ್ನು ನೀಡಿದರು.

ಶುಭ ಸಂದೇಶವೆಂದರೆ ಕ್ರಿಸ್ತನ ಜೀವನ ಮತ್ತು ಅವನ ಆಪ್ತ ಶಿಷ್ಯರು ತಮ್ಮ ಗುರುವಿನ ಶುಭ ಸಂದೇಶವನ್ನು ಪ್ರಚಾರ ಮಾಡಿದ ಕತೆ. ಇದನ್ನು ಒಡಂಬಡಿಕೆ ಅಥವಾ ಒಪ್ಪಂದ ಎನ್ನುವುದು. ಏಕೆಂದರೆ, ದೇವರು ಮಾನವರೊಂದಿಗೆ ಮಾಡಿಕೊಂಡಿರುವ ಹೊಸ ಒಪ್ಪಂದ ಎಂದು. ಮನುಷ್ಯರ ಬಾಳ್ವೆಗೆ ಬೇಕಾದ ಸತ್ಯವನ್ನೇ ದೇವರೆಂದು, ಅದರ ಮಗನಾಗಿ ಗುರುತಿಸಿಕೊಂಡ ಯೇಸು ತನ್ನಪ್ಪನ ಒಲವ ಪಡೆಯಲು ತಾನೇ ಬೆಳಕು ಮತ್ತು ಮಾರ್ಗವಾದ.

ಯೇಸು ದೇವಾಲಯಗಳಲ್ಲಿನ ವ್ಯಾಪಾರಿ ಧೋರಣೆಗಳನ್ನು ಖಂಡಿಸಿ ಆ್ಯಂಗ್ರೀ ಯಂಗ್‍ಮ್ಯಾನ್‍ನಂತೆ ಅಲ್ಲಿ ವಸ್ತುಗಳನ್ನೆಲ್ಲಾ ಚೆಲ್ಲಾಡಿ, ಚಾಟಿ ಬೀಸಿ ಕೂಗಾಡುತ್ತಾನೆ “ದೇವಾಲಯವನ್ನು ಸಂತೆಯನ್ನಾಗಿಸಬೇಡಿ” ಎಂದು. ರೋಮ್ ಚಕ್ರಾಧಿಪತ್ಯದ ಅಂಕೆಯಲ್ಲಿದ್ದ ಯೆಹೂದಿಗಳು ಮೌಢ್ಯ ಮತ್ತು ಸಂಪ್ರದಾಯಗಳಲ್ಲಿ ಬಿದ್ದಿದ್ದಾರೆಂದು ಅರ್ಥವಾಗಿ ಯೇಸುವೂ ಕಲ್ಯಾಣದ ಬಸವಣ್ಣನಂತೆ ಸಮಾಜದಿಂದ ಬಹಿಷ್ಕೃತರೊಂದಿಗೆ, ತಳವರ್ಗದವರೊಂದಿಗೆಯೇ ಸೇರಿ ಕಣ್ಣು ತೆರೆಸಲು ಪ್ರಾರಂಭಿಸುತ್ತಾನೆ.

ಅವನ ಬೆಟ್ಟದ ಮೇಲಿನ ಬೋಧನೆ ಮತ್ತು ಸಂದರ್ಭಾನುಸಾರ ನೀಡುವ ತಿಳುವಳಿಕೆ ಈಗೂ ಅತ್ಯದ್ಭುತ ಮತ್ತು ಸೂಕ್ಷ್ಮ ಒಳನೋಟಗಳು. ತಲೆ ಮೇಲೆ ಆಣೆ ಮಾಡಿದರೆ ಕಪ್ಪು ಕೂದಲನ್ನು ಬೆಳ್ಳಗಾಗಿಸದು, ಬಿಳಿಯದನ್ನು ಕಪ್ಪಾಗಿಸದು ಎನ್ನುತ್ತಾ ಮೌಢ್ಯವನ್ನು ಧಿಕ್ಕರಿಸಿದರೆ, ದೇವರಿಗೆ ನೈವೇದ್ಯ ನೀಡುವಾಗ ಮೊದಲು ನಿನ್ನ ನೆರೆಯವನೊಂದಿಗಿನ ವ್ಯಾಜ್ಯವನ್ನು ಬಗೆಹರಿಸಿ ಆರಾಧನೆ ಸಲ್ಲಿಸು ಎನ್ನುತ್ತಾ ದೇವರಿಗಿಂತ ಮುಖ್ಯ ಮಾನವನೊಂದಿಗಿನ ನಿನ್ನ ಸಂಬಂಧ ಎಂದು ಸೌಹಾರ್ದತೆ ತೋರುತ್ತಾನೆ. ಹಾದರದವಳಿಗೆ ಕಲ್ಲೊಗೆಯುವ ಮಂದಿಗೆ ತಪ್ಪು ಮಾಡದವರು ಮೊದಲು ಕಲ್ಲು ಬೀರಲಿ ಎಂದು ಸಮಾಜದ ಸೋಗಲಾಡಿ ನೈತಿಕತೆಯನ್ನು ಪ್ರಶ್ನಿಸುತ್ತಾನೆ. ಭೀತಿಯ ದೇವರನ್ನು ಪ್ರೀತಿಯ ತಂದೆಯನ್ನಾಗಿಸಿ ಸಾಂಪ್ರದಾಯಕ ಪರಿಕಲ್ಪನೆಯನ್ನು ತೊಲಗಿಸಿಬಿಡುತ್ತಾನೆ. ಬದುಕು ಮತ್ತು ಬೋಧನೆಗಳ ಪೂರ್ತಿ ಪ್ರೀತಿ, ಸಾಮರಸ್ಯ, ಕ್ಷಮೆ, ಆತ್ಮಾವಲೋಕನ, ಪಶ್ಚಾತ್ತಾಪದಂತಹ ಮೌಲ್ಯಗಳನ್ನೇ ಪ್ರತಿಪಾದಿಸುತ್ತಾನೆ.

ಮ್ಯಾಥ್ಯೂ, ಮಾರ್ಕ್, ಲೂಕ್ ಮತ್ತು ಜಾನ್ ಅವರದ್ದನ್ನೇ ಪ್ರಧಾನವಾಗಿ ಬೈಬಲ್ಲಿನಲ್ಲಿ ಹೊಂದಿದ್ದರೂ ಅವರ ಬರವಣಿಗೆಗಳಲ್ಲಿಯೇ ವ್ಯತ್ಯಾಸಗಳಿವೆ. ಯೇಸುವಿನ ಕಾಲದಲ್ಲಿ ಬದುಕಿದ್ದ ಜೋಸೆಫಸ್‍ನ ಬರವಣಿಗೆಗಳನ್ನು ಇವರು ತೆಗೆದುಕೊಳ್ಳದೇ ಇರುವುದಕ್ಕೆ ಕಾರಣ ಧಾರ್ಮಿಕತೆಯನ್ನು ಗಟ್ಟಿಗೊಳಿಸದೇ ವಾಸ್ತವದ ಶೈಲಿಯಲ್ಲಿರಬಹುದು. ಯೇಸುವೇ ಪವಾಡಗಳನ್ನು ಅಲ್ಲಗಳೆಯುವಾಗ ಬೈಬಲ್ಲು ಪವಾಡಗಳಿಂದಲೇ ತುಂಬಿವೆ. ಉತ್ಪ್ರೇಕ್ಷೆ ಮತ್ತು ರೂಪಕಗಳಲ್ಲಿ ನಾವು ಯೇಸುವನ್ನು ಗುರುತಿಸಬೇಕು.

ಕರ್ನಾಟಕದಲ್ಲಿ ಬಸವಣ್ಣನ ಮರಣಾನಂತರ ಶರಣರು ಚೆಲ್ಲಾಪಿಲ್ಲಿಯಾದಂತೆ ಕ್ರಿಸ್ತನ ಮರಣಾನಂತರವೂ ಅವನ ಶಿಷ್ಯರು ಚೆಲ್ಲಾಪಿಲ್ಲಿಯಾಗಿದ್ದರು. ಬಸವನ ಕುರುಹನ್ನು ಉಳಿಸಿ ವಿಜೃಂಭಿಸಲು ಪ್ರಾರಂಭದ ಬಸವಪ್ರೇಮಿಗಳು ಪುರಾಣದ ಮೊರೆ ಹೋದಂತೆ ಪ್ರಾರಂಭದ ಕ್ರೈಸ್ತರು ಕ್ರಿಸ್ತನ ಮಹತ್ವವನ್ನು ವಿಜೃಂಭಿಸಲು ಪವಾಡಗಳ ಮೊರೆ ಹೋದರು. ಗುಟ್ಟಾಗಿ ಒಟ್ಟಾಗುತ್ತಾ ಧರ್ಮಸಭೆಗಳನ್ನು ಮಾಡುತ್ತಾ ಹೊರಗಿನ ಸಮಾಜಕ್ಕೆ ಬಂದಿದ್ದು ಅವರ ತ್ಯಾಗ ಬಲಿದಾನಗಳ ಕತೆಯೇ.

ಕ್ರಿಸ್ತನೆಂಬ ಕ್ರಾಂತಿಯೋಗಿ ತನ್ನ ಜೀವಿತಾವಧಿಯಲ್ಲಿ ಪ್ರೀತಿ, ಕರುಣೆ, ಸೌಹಾರ್ದ, ಕ್ಷಮೆ, ಪಶ್ಚಾತ್ತಾಪ, ಸಮಾನತೆ ಇವುಗಳೆಲ್ಲವನ್ನೂ ಹೊಂದಿರುವ ವ್ಯಕ್ತಿಗಳನ್ನು ರೂಪಿಸಲು, ಸಮಾಜವನ್ನು ಕಟ್ಟಲು ಯತ್ನಿಸಿದ್ದೇ ಪವಾಡ. ಇದೇ ಶುಭ ಸಂದೇಶದ ಪುಟಗಳಲ್ಲಿ ಪುಟಕ್ಕಿಟ್ಟಂತೆ ಹೊಳೆಯುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ರೂ. ದಂಡ

ಕಲ್ಲು ಗಣಿಗಾರಿಕೆ ನಡೆಸುವ ವೇಳೆ ಸಾಲು ಸಾಲು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಗಣಿ ಮತ್ತು...

ಪಶ್ಚಿಮ ಬಂಗಾಳ SIR: 38 ಲಕ್ಷ ಮೇಲ್ಮನವಿಗಳಲ್ಲಿ ವಿಲೇವಾರಿಯಾಗಿದ್ದು ಕೇವಲ 1 ಲಕ್ಷ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಬೃಹತ್ ಪ್ರಮಾಣದ ಮೇಲ್ಮನವಿಗಳ ಪೈಕಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆ ತೀರಾ ಕನಿಷ್ಠ ಮಟ್ಟದಲ್ಲಿದೆ ಎಂಬ ಆಘಾತಕಾರಿ ಮಾಹಿತಿ...

ಕರ್ನಾಟಕ ಎಸ್‌ಐಆರ್: ತಡವಾಗಿ ತಲುಪಿದ ನೋಟಿಸ್‌ಗಳಿಂದ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ; ಮತದಾರರಲ್ಲಿ ಗೊಂದಲ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗಳನ್ನು ಮತದಾರರಿಗೆ ತಲುಪಿಸುವಲ್ಲಿ ಉಂಟಾಗುತ್ತಿರುವ ವಿಳಂಬವು ಹಲವು ಕಡೆ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ ಮತ್ತು ಗೊಂದಲಕ್ಕೆ ಕಾರಣವಾಗುತ್ತಿದೆ. ‘ನೋ-ಮ್ಯಾಪಿಂಗ್’...

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...