Homeಅಂಕಣಗಳುಮೆರಿಟ್, ಮೀಸಲಾತಿ ಮತ್ತು ವೈದ್ಯಕೀಯ ಶಿಕ್ಷಣ ವಾಸ್ತವಗಳೇನು?

ಮೆರಿಟ್, ಮೀಸಲಾತಿ ಮತ್ತು ವೈದ್ಯಕೀಯ ಶಿಕ್ಷಣ ವಾಸ್ತವಗಳೇನು?

- Advertisement -
- Advertisement -

ಜರ್ವೇಶನ್‍ನಿಂದ ಡಾಕ್ಟರಾದೋರು ಎಂಥಾ ಚಿಕಿತ್ಸೆ ಕೊಡ್ತಾರೆ?’ ‘35% ಮಾಕ್ರ್ಸ್ ತಗೊಂಡು ಡಾಕ್ಟರ್ ಆದೋನು ಅವನೆಂಥಾ ಡಾಕ್ಟರ್?’ ಎಂಬ ಮಾತುಗಳು ಈಗ ಹಾದಿಬೀದಿಯಲ್ಲಿ ಕೇಳಿಬರುತ್ತಿವೆ. ಇಂಥಾ ವಾದವನ್ನು ಮುಂದಿಡುವ `ಮೆರಿಟ್‍ಪಂಥೀಯ’ ಜನ ತಮ್ಮ ವಾದಕ್ಕೆ ಯಾವ ಸೂಕ್ತ ಆಧಾರಗಳನ್ನೂ ಕೊಡದಿದ್ದರೂ, ತಮ್ಮ ಒಣತರ್ಕಗಳನ್ನು ಮಾತ್ರ ತೇಲಿ ಬಿಡುತ್ತಿದ್ದಾರೆ. ಕಾರ್ಪೊರೇಟ್ ಮೀಡಿಯಾಗಳು ಮಾತ್ರ ಇಂಥ ಪರಮಸತ್ಯವನ್ನು ಪದೇಪದೇ ಬಿತ್ತರಿಸುವುದರಿಂದ ಈ ಬಗ್ಗೆ ಸಹಜವಾಗಿ ಸಮಾಜದಲ್ಲಿ ಒಂದಷ್ಟು ಗೊಂದಲ ಏರ್ಪಟ್ಟಿದೆ.
ಕಟುಸತ್ಯಗಳನ್ನು ಸಾರಿ ಹೇಳುತ್ತಿರುವ ವಾಸ್ತವಗಳನ್ನು ನೋಡೋಣ. ಮುಖ್ಯವಾಹಿನಿ ಪತ್ರಿಕೆಯಾದ ಟೈಮ್ಸ್ ಆಫ್ ಇಂಡಿಯಾ ಕಳೆದ ವರ್ಷ ಮೆಡಿಕಲ್‍ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ನೀಟ್ ಪರೀಕ್ಷೆಯ ಅಂಕಗಳ ಮಾಹಿತಿ ಪಡೆದು ವಿಶ್ಲೇಷಣೆಗೆ ಒಳಪಡಿಸಿ ವರದಿಯೊಂದನ್ನು ತಯಾರಿಸಿದೆ. ಆ ವರದಿ ಪ್ರಕಾರ ದೇಶಾದ್ಯಂತ 409 ಕಾಲೇಜುಗಳಲ್ಲಿ ಒಟ್ಟು 56,000 ವಿದ್ಯಾರ್ಥಿಗಳು ಮೆಡಿಕಲ್‍ಗೆ ದಾಖಲಾಗಿದ್ದಾರೆ. ಅದರಲ್ಲಿ 39,000 ವಿದ್ಯಾರ್ಥಿಗಳು ಸರಕಾರಿ ಕೋಟಾದಡಿಯಲ್ಲೂ, 17,000 ಜನ ವಿದ್ಯಾರ್ಥಿಗಳು ಖಾಸಗಿ ಕೋಟಾದಲ್ಲಿ ದಾಖಲಾತಿ ಪಡೆದಿದ್ದಾರೆ. ಸರಕಾರಿ ಕೋಟಾದಲ್ಲಿ(ಅಂದರೆ ಮೀಸಲಾತಿಯನ್ನೂ ಒಳಗೊಂಡಿದ್ದು) ಪ್ರವೇಶ ಪಡೆದ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಕ್ಕೂ, ಹೆಚ್ಚು ಶುಲ್ಕ ಪಾವತಿಸಿ ಆಯ್ಕೆಯಾದ ಶ್ರೀಮಂತ ಮತ್ತು ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಗುಣಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಸಂಬಂಧಿತ ನೀಟ್ ಪರೀಕ್ಷೆಯಲ್ಲಿ ಗರಿಷ್ಟ ಒಟ್ಟು 720 ಅಂಕಗಳಲ್ಲಿ ಸರಕಾರಿ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳು ಸರಾಸರಿ 448 ಅಂಕಗಳನ್ನು(62%) ಪಡೆದಿದ್ದರೆ, ಮ್ಯಾನೇಜ್‍ಮೆಂಟ್ ಕೋಟಾದ ವಿದ್ಯಾರ್ಥಿಗಳು ಸರಾಸರಿ 306(42%) ಅಂಕಗಳನ್ನು ಪಡೆದಿದ್ದಾರೆ. ಹಣಬಲದಿಂದ ಮೆಡಿಕಲ್ ಸೀಟು ಪಡೆದವರು ಸರ್ಕಾರಿ ಕೋಟಾದಡಿ ಆಯ್ಕೆಯಾದವರಿಗಿಂತ 20% ಕಡಿಮೆ ಅಂಕ ಗಳಿಸಿದ್ದಾರೆ ಎಂಬ ಸತ್ಯ ಆಶ್ಚರ್ಯವಾದರೂ ಅದೇ ಕಹಿಸತ್ಯ. ಇನ್ನು ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ಮತ್ತಷ್ಟು ಹೀನಾಯ. ನೀಟ್ ಪರೀಕ್ಷೆಯಲ್ಲಿ ಎನ್‍ಆರ್‍ಐಗಳು ಗಳಿಸಿರುವ ಸರಾಸರಿ ಕೇವಲ 221 ಅಂಕಗಳು(29%).
ಒಟ್ಟು ಸರ್ಕಾರಿ ಕೋಟಾದ ವಿವರಣೆಗಳಿಗೆ ಹೋದರೆ ಮತ್ತಷ್ಟು ಕಣ್ಣು ತೆರೆಸುವ ಮಾಹಿತಿ ಸಿಗುತ್ತದೆ. ಉದಾಹರಣೆಗೆ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳ ಸರಾಸರಿ ಅಂಕ 398(53%). ಮ್ಯಾನೇಜ್‍ಮೆಂಟ್ ಕೋಟಾದಡಿ ಬಂದ ವಿದ್ಯಾರ್ಥಿಗಳ ಸರಾಸರಿ 306 ಅಂಕ(42%). ಅಂದರೆ ಮೀಸಲಾತಿಯಲ್ಲಿ ಬಂದ ಪರಿಶಿಷ್ಟ ವಿದ್ಯಾರ್ಥಿಗಳು ಹಣಬಲದ ವಿದ್ಯಾರ್ಥಿಗಳಿಗಿಂತಲೂ 11% ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ಪಂಜಾಬ್‍ನ ನೀಟ್ ಪರೀಕ್ಷೆಯ ವಿಶ್ಲೇಷಣೆಯೂ ಇದೇ ಕತೆಯನ್ನು ಹೇಳುತ್ತಿದೆ. ಇಲ್ಲಿ ಸರ್ಕಾರಿ ಕೋಟಾದ ವಿದ್ಯಾರ್ಥಿಗಳು ಗಳಿಸಿದ್ದ ಅಂಕ ಗರಿಷ್ಟ 86% ರಿಂದ ಕನಿಷ್ಟ 75%. ಆದರೆ ಖಾಸಗಿ ಕೋಟಾದಡಿಯ ವಿದ್ಯಾರ್ಥಿಗಳ ಅಂಕ 73% ರಿಂದ 65% ಮಾತ್ರ. ಪ್ರೈವೇಟ್ ಯೂನಿವರ್ಸಿಟಿಗಳೆಂದು ಕರೆದುಕೊಳ್ಳುವ ಸಂಸ್ಥೆಗಳ ಸ್ಥಿತಿ ಇನ್ನೂ ಅಧ್ವಾನ. ಕನಿಷ್ಟ 41% ಅಂಕ ಗಳಿಸಿದವರಿಗೂ ಇಲ್ಲಿ ಮೆಡಿಕಲ್ ಸೀಟ್ ಲಭ್ಯವಾಗಿದೆ. ಈ ಅಂಕಿ ಅಂಶಗಳು ಏನನ್ನು ಹೇಳುತ್ತಿವೆ? ಅನಾದಿಯಿಂದಲೂ `ಮೆರಿಟ್‍ಪಂಥೀಯ’ ವಾಕ್ಪಟುಗಳು ಹೇಳುತ್ತಿರುವುದು ಅಪ್ಪಟ ಸುಳ್ಳು ಎಂಬುದನ್ನು ಮೇಲಿನ ಅಂಕಿಅಂಶಗಳು ಅನುಮಾನಕ್ಕೆಡೆಯಿಲ್ಲದಂತೆ ಸಾರಿ ಹೇಳುತ್ತಿವೆ.
ದೇಶಿಯ ಮತ್ತು ಅಂತರರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಗಳು ದೇಶದುದ್ದಕ್ಕೂ ಆರೋಗ್ಯ ಸೇವೆಯ ಹೆಸರಲ್ಲಿ ಹಲವು ಖಾಸಗಿ ಕಾಲೇಜು ಮತ್ತು ಆಸ್ಪತ್ರೆಗಳನ್ನು ತೆರೆದು ಕೂತಿವೆ. ಇದರ ಪರಿಣಾಮವೆಂಬಂತೆ 1974ರಲ್ಲಿ ಶೇ.18ರಷ್ಟಿದ್ದ ಖಾಸಗಿ ಆಸ್ಪತ್ರೆಗಳು 2014 ಹೊತ್ತಿಗೆ ಶೇ.75ರಷ್ಟು ಹೆಚ್ಚಾಗಿವೆ. 1974ರಲ್ಲಿ ಶೇ.21ರಷ್ಟು ಹಾಸಿಗೆಗಳನ್ನು ಹೊಂದಿದ್ದ ಖಾಸಗಿ ಆಸ್ಪತ್ರೆಗಳು 2014 ರಷ್ಟೊತ್ತಿಗೆ ಶೇ.54ಕ್ಕೇರಿಸಿಕೊಂಡಿವೆ. ಶೇ.75ರಷ್ಟು ಔಷಧಾಲಯಗಳು, ಶೇ.80 ರಷ್ಟು ಅರ್ಹ ವೈದ್ಯರನ್ನು ಖಾಸಗಿ ಆಸ್ಪತ್ರೆಗಳು ಹೊಂದಿವೆ. ಶೇ.60ರಷ್ಟು ಒಳರೋಗಿಗಳು, ಶೇ.80ರಷ್ಟು ಹೊರರೋಗಿಗಳು ಖಾಸಗಿ ಆಸ್ಪತ್ರೆಯ ಸಂಪರ್ಕದಲ್ಲಿದ್ದಾರೆ. ಇಲ್ಲಿಂದ ಮುಂದೆ ಇದು ದೊಡ್ಡ ಬಂಡವಾಳ ಹೂಡುವ ಕ್ಷೇತ್ರವಾಗಿ ಮಾರ್ಪಟ್ಟು ಲಾಭ ಮತ್ತು ಅತಿಲಾಭದ ಲೆಕ್ಕಾಚಾರದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ತೊಡಗಿವೆ. ಇದಕ್ಕೆ ಬೇಕಾದ ಸಂಪನ್ಮೂಲವನ್ನು ಸೃಷ್ಟಿಸುವ ನಿಟ್ಟಿನಲ್ಲಿ ವೈದ್ಯಕೀಯ ವಿದ್ಯಾಸಂಸ್ಥೆಗಳು ರೂಪುಗೊಂಡವು. ಅದರಲ್ಲೂ ಸರ್ಕಾರಿ ವೈದ್ಯಕೀಯ ವಿದ್ಯಾಸಂಸ್ಥೆಗಳನ್ನು ದೂರತಳ್ಳಿ ಖಾಸಗಿ ಸಂಸ್ಥೆಗಳು ಬೇರುಬಿಡತೊಡಗಿದವು. ಇದರ ಫಲವೆಂಬಂತೆ 1950ರಲ್ಲಿ ಶೇ.4ರಷ್ಟಿದ್ದ ಖಾಸಗಿ ವೈದ್ಯಕೀಯ ವಿದ್ಯಾಸಂಸ್ಥೆಗಳು 2014ರಲ್ಲಿ ಶೇ.54ರಷ್ಟು ಹೆಚ್ಚಾದವು. ಈ ಖಾಸಗಿ ಮೆಡಿಕಲ್ ಕಾಲೇಜುಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ತಮ್ಮ ಶುಲ್ಕವನ್ನು ಹತ್ತಾರು ಪಟ್ಟು ಹೆಚ್ಚು ಮಾಡುತ್ತಲೇ ಬಂದಿವೆ. ಇದರಿಂದ ‘ವೈದ್ಯಸೇವೆ’ ಎಂಬ ಪದವನ್ನು ಅಚ್ಚುಕಟ್ಟಾಗಿ ದೂರಸರಿಸಿ ವೈದ್ಯಲೋಕವನ್ನು ಹಣ ಹೂಡಿ ಹಣ ಗಳಿಸುವ ದಂಧೆಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿವೆ.
ಮೀಸಲಾತಿಯಿಂದ ಪ್ರತಿಭೆಗೆ ಧಕ್ಕೆ ಒದಗುತ್ತಿದೆ ಎನ್ನುವವರು ಇದಕ್ಕೆ ಏನು ಹೇಳುತ್ತಿದ್ದಾರೆ. ಸರಾಸರಿ ಅಂಕ ಗಳಿಕೆಯಲ್ಲೂ ಕಡಿಮೆ ಇರುವ ಅನೇಕ ವಿದ್ಯಾರ್ಥಿಗಳು ಖಾಸಗಿ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದು ವೈದ್ಯಕೀಯ ಪದವಿಯನ್ನು ಪಡೆಯುತ್ತಿದ್ದಾರೆ. ಹಾಗಿದ್ದರೆ ಇವರೆಲ್ಲ ಪ್ರತಿಭಾವಂತರೆ? ಅರ್ಹತೆಯನ್ನು ಅಂಕಗಳಲ್ಲಿ ಅಳೆದು ‘ಮೀಸಲಾತಿಯಿಂದ ಕಡಿಮೆ ಅಂಕಗಳಿಸಿ ಬಂದವರು ವೈದ್ಯ ವೃತ್ತಿಯನ್ನು ಸರಿಯಾಗಿ ನಿಭಾಯಿಸಬಲ್ಲರೆ’ ಎನ್ನುವವರೇನೂ ಇಲ್ಲಿ ಕಡಿಮೆಯಿಲ್ಲ. ಕಡಿಮೆ ಅಂಕ ಗಳಿಸಿ ದುಡ್ಡಿನಿಂದ ಸೀಟು ಖರೀದಿಸುತ್ತಿರುವ ಹಣವಂತ ಪಡೆಗೆ ಅರ್ಹತೆಯ ಮಾನದಂಡವನ್ನು ಇವರೆಲ್ಲ ಹಿಡಿಯಬಲ್ಲರೆ? ಇವರ ಯಾವ ಮನಸ್ಸುಗಳೂ ಇದರ ಬಗ್ಗೆ ಚಕಾರ ಎತ್ತುವುದಿಲ್ಲ. ಹೋಗಲಿ, ಇಂತಹ ವಿದ್ಯಾರ್ಥಿಗಳಿಂದ ಎಂತಹ ಸಾರ್ವಜನಿಕ ಸೇವೆಯನ್ನು ನಿರೀಕ್ಷಿಸಲು ಸಾಧ್ಯ? ಈ ಪ್ರಶ್ನೆಯನ್ನು ಇವರಿಗೆ ಕೇಳುವ ಬದಲು ಮೀಸಲಾತಿಯಿಂದ ಬಂದವರಿಗೆ ಕೇಳಲಾಗುತ್ತಿದೆ. ದುಡ್ಡು ಕೊಟ್ಟು ಬಂದವರು ದುಡ್ಡನ್ನು ಸಂಪಾದಿಸಲಷ್ಟೇ ಯೋಚಿಸುತ್ತಾರೆ. ದುಡ್ಡು ಗಳಿಸಬೇಕು ಎನ್ನುವುದರ ಕಡೆ ಇವರ ತುಡಿತವಿದೆ. ಇಲ್ಲಿ ಹಣವೇ ಮೆರಿಟ್ ಆಗುತ್ತಿದೆ. ಇಂತವರಿಂದ ಗುಣಮಟ್ಟವನ್ನು ಅಪೇಕ್ಷಿಸಲು ಸಾಧ್ಯವೇ? ಅಪೇಕ್ಷಿಸಿದರೆ ಎಂತಹ ಗುಣಮಟ್ಟವನ್ನು ಅಪೇಕ್ಷಿಸಬಹುದು. ಇದೊಂದು ರೀತಿಯಲ್ಲಿ ಹಗಲು ದರೋಡೆಗೆ ಪ್ರೇರಣೆ ನೀಡಿದಂತೆಯೇ ಸರಿ. ಹಣವನ್ನು ದ್ವಿಗುಣಗೊಳಿಸುವ ಕಾರಣದಿಂದಾಗಿಯೇ ಕಾರ್ಪೊರೇಟ್ ಸಂಸ್ಥೆಗಳು ವೈದ್ಯಕೀಯ ಕ್ಷೇತ್ರದ ಮೇಲೆ ಅಪಾರ ಬಂಡವಾಳ ಹೂಡಿ, `ಮೀಸಲಾತಿ ವರ್ಸಸ್ ಮೆರಿಟ್’ ಎಂಬ ಅಪ್ಪಟ ಜನವಿರೋಧಿ ಸುಳ್ಳನ್ನು ಹರಡುತ್ತಿದೆ. ಆದರೆ ಭಾರತದ ವಾಸ್ತವಗಳು ಇವರ ದುರ್ಬಲ ಕಲ್ಪನೆಗಳನ್ನು ಮೀರಿ ಬೆಳೆಯುತ್ತಿವೆ. ಈ ದೇಶದ ಜನತಂತ್ರ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತೆಯನ್ನು ಉಳಿಸುವುದೆಂದರೆ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವುದು, ಆ ವಾಸ್ತವಗಳ ಬೆಳಕಲ್ಲಿ ಹೊಸ ಭಾರತವನ್ನು ಕಟ್ಟುವುದೇ ಆಗಿದೆ.
ಯಾವ ಕ್ಷೇತ್ರದಲ್ಲಿ ಪದೇ ಪದೇ ಮೀಸಲಾತಿಯ ವಿರೋಧಿ ಹೇಳಿಕೆಗಳು ಹೊರಬಂದು ಪ್ರತಿಭೆ ಪ್ರಶ್ನೆಯನ್ನು ಮುಂದಿಡಲಾಗುತ್ತಿದೆಯೋ ಆ ಕ್ಷೇತ್ರದಲ್ಲಿಯೇ ದುಡ್ಡಿನಿಂದ ಪದವಿಯನ್ನು ಕೊಳ್ಳುವ ದಂಧೆ ಎಗ್ಗಿಲ್ಲದೇ ಸಾಗಿದೆ. ಈ ಪಿಡುಗು ವೈದ್ಯಕೀಯ ಶಿಕ್ಷಣಕ್ಕೆ ಮಾತ್ರ ಸೀಮಿತವಾದುದಲ್ಲ; ಪೇಮೆಂಟ್ ಕೋಟಾ ಹೆಸರಿನಲ್ಲಿ ಯಾವ ಪದವಿಯ ಅಂಕಗಳಿಗೂ ಮಾನ್ಯತೆ ಕೊಡದೆ ತುಂಬಲಾಗುತ್ತಿದೆ. ಅಂಕ ಕಡಿಮೆ ಇದ್ದರೂ ಹಣ ಕೊಟ್ಟು ಯಾವ ಪದವಿಗಾದರೂ ಸೇರಬಹುದು. ಆದರೆ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಸರಾಸರಿ ಅಂಕ ಹೊಂದಿರುವ ವಿದ್ಯಾರ್ಥಿಗಳು ಮೀಸಲಾತಿ ಕೋಟಾದಲ್ಲಿ ಬಂದರೆ ಅರ್ಹತೆ, ಪ್ರತಿಭೆ ಮಾನದಂಡದ ಪ್ರಶ್ನೆಯನ್ನು ಮುಂಚೂಣಿಗೆ ತಂದು ಹುಯಿಲೆಬ್ಬಿಸಲಾಗುತ್ತದೆ. ಇನ್ನೊಂದು ಅಂಶವನ್ನು ಸ್ಪಷ್ಟಪಡಿಸುವುದಾದರೆ ಇಂದು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಸಾಮಾನ್ಯ ವರ್ಗಕ್ಕೆ ನಿಗದಿಯಾಗುವ ಅಂಕಗಳಿಗಿಂತ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನಿಗದಿತಗೊಳ್ಳುವ ಅಂಕ ಒಂದೆರಡು ಕಡಿಮೆ ಅಂಕಗಳಷ್ಟು ಮಾತ್ರ. ಈ ಸತ್ಯ ನಮ್ಮೆಲ್ಲರ ಕಣ್ಣೆದುರಿಗೇ ಇದ್ದರೂ ಪೂರ್ವಗ್ರಹಪೀಡಿತ ಮನಸ್ಥಿತಿಯವರು ಕಣ್ಣುತೆರೆಯಲು ಸಿದ್ಧರಿಲ್ಲ. ಅದಕ್ಕೇನು ಮಾಡುವುದು?

– ಡಾ. ಉಮಾಶಂಕರ್ ಹೆಚ್.ಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಂಣ | ಹೈದರಾಬಾದ್‌-ವಿಜಯವಾಡ ಹೆದ್ದಾರಿಯಲ್ಲಿ ಭೀಕರ ಅಪಘಾತ: 6 ಮಂದಿ ಸಾವು; ಹಲವರಿಗೆ ಗಾಯ

ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಬುಧವಾರ (ಆ.26) ಮುಂಜಾನೆ ಖಾಸಗಿ ಎಲೆಕ್ಟ್ರಿಕ್ ಬಸ್‌ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 12 ಜನರು ಗಾಯಗೊಂಡಿದ್ದಾರೆ...

ಬಿಡದಿ ಟೌನ್‌ಶಿಪ್: ಸರ್ಕಾರಕ್ಕೆ ನಾಲ್ಕು ಪ್ರಮುಖ ಹಕ್ಕೊತ್ತಾಯ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ.

ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬಿಡದಿ ರೈತರು ಹಾಗೂ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಹೋರಾಟ...

ತಮಿಳುನಾಡು| ಮರ್ಯಾದೆಗೇಡು ಹತ್ಯೆ ಶಂಕೆ; 25 ವರ್ಷದ ದಲಿತ ಯುವಕನ ಭೀಕರ ಕೊಲೆ

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಮರ್ಯಾದೆಗೇಡು ಕೊಲೆಯ ಶಂಕೆ ವ್ಯಕ್ತವಾಗಿದೆ. ಆಗಸ್ಟ್ 16 ರಂದು ರಾತ್ರಿ ಚೆಂಗಲ್ಪಟ್ಟುವಿನ ಕೇಳಂಬಾಕ್ಕಂ ನಿವಾಸಿ ಪ್ರವೀಣ್ ಅವರ ಮೇಲೆ ದಾಳಿಕೋರರಾದ...

44 ಲಕ್ಷ ಮತದಾರರಿಗೆ ನೋಟಿಸ್: BLA ಗಳಿಗೆ ಪಟ್ಟಿ ನೀಡಿ, ಪಾರದರ್ಶಕತೆ ಕಾಯ್ದುಕೊಳ್ಳಲು ‘ಜಾಗೃತ ಕರ್ನಾಟಕ’ ಒತ್ತಾಯ

ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಪ್ರಕಟಗೊಳ್ಳುತ್ತಿರುವ ಕರಡು ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಎಚ್ಚರವಹಿಸಬೇಕು ಹಾಗೂ ನೋಟಿಸ್ ಪ್ರಕ್ರಿಯೆಗೆ ಕಾಲಾವಕಾಶ ವಿಸ್ತರಿಸಬೇಕು ಎಂದು ಆಗ್ರಹಿಸಿ ‘ಜಾಗೃತ...

ಕೇರಳ ಬಿಜೆಪಿಗೆ ಹಿರಿಯ ನಟ ಎಸ್. ದೇವನ್ ಗುಡ್‌ಬೈ: ‘ದಳಪತಿ’ ವಿಜಯ್ ಟಿವಿಕೆ ಪಕ್ಷ ಸೇರಲು ಒಲವು!

ಮಲಯಾಳಂ ನಟ ಹಾಗೂ ರಾಜಕಾರಣಿ ಎಸ್. ದೇವನ್ ಅವರು ತಮಿಳುನಾಡಿನ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವನ್ನು ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಕೇರಳ...

ಮತ್ತೆ ಜೈಲಿನಿಂದ ಹೊರಬಂದ ಅತ್ಯಾಚಾರಿ ರಾಮ್ ರಹೀಮ್! 6 ವರ್ಷದಲ್ಲಿ 17ನೇ ಬಾರಿ ಪೆರೋಲ್

ನವದೆಹಲಿ/ರೋಹ್ಟಕ್: ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ ಪುನಃ...

ಎಸ್‌ಐಆರ್‌ ಕರಡು ತಿರಸ್ಕರಿಸಿದ ನಾಗರಿಕ ಸಂಘಟನೆಗಳು; ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ

ಆಗಸ್ಟ್ 24 ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಎಸ್‌ಐಆರ್‌ ಕರಡು ಪಟ್ಟಿಯನ್ನು ಕರ್ನಾಟಕದ ನಾಗರಿಕ ಸಂಘಟನೆಗಳು ತಿರಸ್ಕರಿಸಿದ್ದು, ಲಕ್ಷಾಂತರ ಮತದಾರರಿಗೆ ನೋಟಿಸ್‌ ಕೊಡಲು ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ...

‘ಕೇಂದ್ರ ಸರ್ಕಾರ ಜಾತಿ ಗಣತಿಗೆ ರೂಪಿಸಿರುವ ಪ್ರಶ್ನಾವಳಿ ವಿಧಾನ ದಾರಿತಪ್ಪಿಸುವಂತಿವೆ’: ಹೊಸ ಪ್ರಶ್ನಾವಳಿ ರಚಿಸಲು ಪ್ರಧಾನಿ ಮೋದಿಗೆ ಖರ್ಗೆ-ರಾಹುಲ್ ಪತ್ರ

ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರೂಪಿಸಿರುವ ಪ್ರಶ್ನಾವಳಿಯ ವಿಧಾನವು ಅತ್ಯಂತ ದಾರಿತಪ್ಪಿಸುವಂತಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ...

ಪತ್ರಕರ್ತ ಅಭಿಷೇಕ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಸುಪ್ರೀಂ ಕೋರ್ಟ್ ಆದೇಶ

ರಾಮ ಮಂದಿರ ದೇಣಿಗೆ ಅಕ್ರಮದ ಕುರಿತು ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದ್ದು,...

2027ರ ಜನಗಣತಿಯಲ್ಲಿ ಪೋಷಕರ ಧರ್ಮ, ಜನ್ಮಸ್ಥಳದ ವಿವರ ಏಕೆ? ಕೇಂದ್ರದ ವಿರುದ್ಧ ಸಿಪಿಐ(ಎಂ) ಆಕ್ರೋಶ

2027ರ ಜನಗಣತಿ ಪ್ರಶ್ನಾವಳಿಯಲ್ಲಿ ಪೋಷಕರ ಧರ್ಮ ಹಾಗೂ ಜನ್ಮಸ್ಥಳದ ಕುರಿತಾದ ವಿವರಗಳನ್ನು ಸಂಗ್ರಹಿಸಲು ಉದ್ದೇಶಿಸಿರುವುದರ ವಿರುದ್ಧ ಸಿಪಿಐ(ಎಂ) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಕ್ರಮವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರುವ...