Homeಅಂಕಣಗಳುಮೆರಿಟ್, ಮೀಸಲಾತಿ ಮತ್ತು ವೈದ್ಯಕೀಯ ಶಿಕ್ಷಣ ವಾಸ್ತವಗಳೇನು?

ಮೆರಿಟ್, ಮೀಸಲಾತಿ ಮತ್ತು ವೈದ್ಯಕೀಯ ಶಿಕ್ಷಣ ವಾಸ್ತವಗಳೇನು?

- Advertisement -
- Advertisement -

ಜರ್ವೇಶನ್‍ನಿಂದ ಡಾಕ್ಟರಾದೋರು ಎಂಥಾ ಚಿಕಿತ್ಸೆ ಕೊಡ್ತಾರೆ?’ ‘35% ಮಾಕ್ರ್ಸ್ ತಗೊಂಡು ಡಾಕ್ಟರ್ ಆದೋನು ಅವನೆಂಥಾ ಡಾಕ್ಟರ್?’ ಎಂಬ ಮಾತುಗಳು ಈಗ ಹಾದಿಬೀದಿಯಲ್ಲಿ ಕೇಳಿಬರುತ್ತಿವೆ. ಇಂಥಾ ವಾದವನ್ನು ಮುಂದಿಡುವ `ಮೆರಿಟ್‍ಪಂಥೀಯ’ ಜನ ತಮ್ಮ ವಾದಕ್ಕೆ ಯಾವ ಸೂಕ್ತ ಆಧಾರಗಳನ್ನೂ ಕೊಡದಿದ್ದರೂ, ತಮ್ಮ ಒಣತರ್ಕಗಳನ್ನು ಮಾತ್ರ ತೇಲಿ ಬಿಡುತ್ತಿದ್ದಾರೆ. ಕಾರ್ಪೊರೇಟ್ ಮೀಡಿಯಾಗಳು ಮಾತ್ರ ಇಂಥ ಪರಮಸತ್ಯವನ್ನು ಪದೇಪದೇ ಬಿತ್ತರಿಸುವುದರಿಂದ ಈ ಬಗ್ಗೆ ಸಹಜವಾಗಿ ಸಮಾಜದಲ್ಲಿ ಒಂದಷ್ಟು ಗೊಂದಲ ಏರ್ಪಟ್ಟಿದೆ.
ಕಟುಸತ್ಯಗಳನ್ನು ಸಾರಿ ಹೇಳುತ್ತಿರುವ ವಾಸ್ತವಗಳನ್ನು ನೋಡೋಣ. ಮುಖ್ಯವಾಹಿನಿ ಪತ್ರಿಕೆಯಾದ ಟೈಮ್ಸ್ ಆಫ್ ಇಂಡಿಯಾ ಕಳೆದ ವರ್ಷ ಮೆಡಿಕಲ್‍ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ನೀಟ್ ಪರೀಕ್ಷೆಯ ಅಂಕಗಳ ಮಾಹಿತಿ ಪಡೆದು ವಿಶ್ಲೇಷಣೆಗೆ ಒಳಪಡಿಸಿ ವರದಿಯೊಂದನ್ನು ತಯಾರಿಸಿದೆ. ಆ ವರದಿ ಪ್ರಕಾರ ದೇಶಾದ್ಯಂತ 409 ಕಾಲೇಜುಗಳಲ್ಲಿ ಒಟ್ಟು 56,000 ವಿದ್ಯಾರ್ಥಿಗಳು ಮೆಡಿಕಲ್‍ಗೆ ದಾಖಲಾಗಿದ್ದಾರೆ. ಅದರಲ್ಲಿ 39,000 ವಿದ್ಯಾರ್ಥಿಗಳು ಸರಕಾರಿ ಕೋಟಾದಡಿಯಲ್ಲೂ, 17,000 ಜನ ವಿದ್ಯಾರ್ಥಿಗಳು ಖಾಸಗಿ ಕೋಟಾದಲ್ಲಿ ದಾಖಲಾತಿ ಪಡೆದಿದ್ದಾರೆ. ಸರಕಾರಿ ಕೋಟಾದಲ್ಲಿ(ಅಂದರೆ ಮೀಸಲಾತಿಯನ್ನೂ ಒಳಗೊಂಡಿದ್ದು) ಪ್ರವೇಶ ಪಡೆದ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಕ್ಕೂ, ಹೆಚ್ಚು ಶುಲ್ಕ ಪಾವತಿಸಿ ಆಯ್ಕೆಯಾದ ಶ್ರೀಮಂತ ಮತ್ತು ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಗುಣಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಸಂಬಂಧಿತ ನೀಟ್ ಪರೀಕ್ಷೆಯಲ್ಲಿ ಗರಿಷ್ಟ ಒಟ್ಟು 720 ಅಂಕಗಳಲ್ಲಿ ಸರಕಾರಿ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳು ಸರಾಸರಿ 448 ಅಂಕಗಳನ್ನು(62%) ಪಡೆದಿದ್ದರೆ, ಮ್ಯಾನೇಜ್‍ಮೆಂಟ್ ಕೋಟಾದ ವಿದ್ಯಾರ್ಥಿಗಳು ಸರಾಸರಿ 306(42%) ಅಂಕಗಳನ್ನು ಪಡೆದಿದ್ದಾರೆ. ಹಣಬಲದಿಂದ ಮೆಡಿಕಲ್ ಸೀಟು ಪಡೆದವರು ಸರ್ಕಾರಿ ಕೋಟಾದಡಿ ಆಯ್ಕೆಯಾದವರಿಗಿಂತ 20% ಕಡಿಮೆ ಅಂಕ ಗಳಿಸಿದ್ದಾರೆ ಎಂಬ ಸತ್ಯ ಆಶ್ಚರ್ಯವಾದರೂ ಅದೇ ಕಹಿಸತ್ಯ. ಇನ್ನು ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ಮತ್ತಷ್ಟು ಹೀನಾಯ. ನೀಟ್ ಪರೀಕ್ಷೆಯಲ್ಲಿ ಎನ್‍ಆರ್‍ಐಗಳು ಗಳಿಸಿರುವ ಸರಾಸರಿ ಕೇವಲ 221 ಅಂಕಗಳು(29%).
ಒಟ್ಟು ಸರ್ಕಾರಿ ಕೋಟಾದ ವಿವರಣೆಗಳಿಗೆ ಹೋದರೆ ಮತ್ತಷ್ಟು ಕಣ್ಣು ತೆರೆಸುವ ಮಾಹಿತಿ ಸಿಗುತ್ತದೆ. ಉದಾಹರಣೆಗೆ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳ ಸರಾಸರಿ ಅಂಕ 398(53%). ಮ್ಯಾನೇಜ್‍ಮೆಂಟ್ ಕೋಟಾದಡಿ ಬಂದ ವಿದ್ಯಾರ್ಥಿಗಳ ಸರಾಸರಿ 306 ಅಂಕ(42%). ಅಂದರೆ ಮೀಸಲಾತಿಯಲ್ಲಿ ಬಂದ ಪರಿಶಿಷ್ಟ ವಿದ್ಯಾರ್ಥಿಗಳು ಹಣಬಲದ ವಿದ್ಯಾರ್ಥಿಗಳಿಗಿಂತಲೂ 11% ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ಪಂಜಾಬ್‍ನ ನೀಟ್ ಪರೀಕ್ಷೆಯ ವಿಶ್ಲೇಷಣೆಯೂ ಇದೇ ಕತೆಯನ್ನು ಹೇಳುತ್ತಿದೆ. ಇಲ್ಲಿ ಸರ್ಕಾರಿ ಕೋಟಾದ ವಿದ್ಯಾರ್ಥಿಗಳು ಗಳಿಸಿದ್ದ ಅಂಕ ಗರಿಷ್ಟ 86% ರಿಂದ ಕನಿಷ್ಟ 75%. ಆದರೆ ಖಾಸಗಿ ಕೋಟಾದಡಿಯ ವಿದ್ಯಾರ್ಥಿಗಳ ಅಂಕ 73% ರಿಂದ 65% ಮಾತ್ರ. ಪ್ರೈವೇಟ್ ಯೂನಿವರ್ಸಿಟಿಗಳೆಂದು ಕರೆದುಕೊಳ್ಳುವ ಸಂಸ್ಥೆಗಳ ಸ್ಥಿತಿ ಇನ್ನೂ ಅಧ್ವಾನ. ಕನಿಷ್ಟ 41% ಅಂಕ ಗಳಿಸಿದವರಿಗೂ ಇಲ್ಲಿ ಮೆಡಿಕಲ್ ಸೀಟ್ ಲಭ್ಯವಾಗಿದೆ. ಈ ಅಂಕಿ ಅಂಶಗಳು ಏನನ್ನು ಹೇಳುತ್ತಿವೆ? ಅನಾದಿಯಿಂದಲೂ `ಮೆರಿಟ್‍ಪಂಥೀಯ’ ವಾಕ್ಪಟುಗಳು ಹೇಳುತ್ತಿರುವುದು ಅಪ್ಪಟ ಸುಳ್ಳು ಎಂಬುದನ್ನು ಮೇಲಿನ ಅಂಕಿಅಂಶಗಳು ಅನುಮಾನಕ್ಕೆಡೆಯಿಲ್ಲದಂತೆ ಸಾರಿ ಹೇಳುತ್ತಿವೆ.
ದೇಶಿಯ ಮತ್ತು ಅಂತರರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಗಳು ದೇಶದುದ್ದಕ್ಕೂ ಆರೋಗ್ಯ ಸೇವೆಯ ಹೆಸರಲ್ಲಿ ಹಲವು ಖಾಸಗಿ ಕಾಲೇಜು ಮತ್ತು ಆಸ್ಪತ್ರೆಗಳನ್ನು ತೆರೆದು ಕೂತಿವೆ. ಇದರ ಪರಿಣಾಮವೆಂಬಂತೆ 1974ರಲ್ಲಿ ಶೇ.18ರಷ್ಟಿದ್ದ ಖಾಸಗಿ ಆಸ್ಪತ್ರೆಗಳು 2014 ಹೊತ್ತಿಗೆ ಶೇ.75ರಷ್ಟು ಹೆಚ್ಚಾಗಿವೆ. 1974ರಲ್ಲಿ ಶೇ.21ರಷ್ಟು ಹಾಸಿಗೆಗಳನ್ನು ಹೊಂದಿದ್ದ ಖಾಸಗಿ ಆಸ್ಪತ್ರೆಗಳು 2014 ರಷ್ಟೊತ್ತಿಗೆ ಶೇ.54ಕ್ಕೇರಿಸಿಕೊಂಡಿವೆ. ಶೇ.75ರಷ್ಟು ಔಷಧಾಲಯಗಳು, ಶೇ.80 ರಷ್ಟು ಅರ್ಹ ವೈದ್ಯರನ್ನು ಖಾಸಗಿ ಆಸ್ಪತ್ರೆಗಳು ಹೊಂದಿವೆ. ಶೇ.60ರಷ್ಟು ಒಳರೋಗಿಗಳು, ಶೇ.80ರಷ್ಟು ಹೊರರೋಗಿಗಳು ಖಾಸಗಿ ಆಸ್ಪತ್ರೆಯ ಸಂಪರ್ಕದಲ್ಲಿದ್ದಾರೆ. ಇಲ್ಲಿಂದ ಮುಂದೆ ಇದು ದೊಡ್ಡ ಬಂಡವಾಳ ಹೂಡುವ ಕ್ಷೇತ್ರವಾಗಿ ಮಾರ್ಪಟ್ಟು ಲಾಭ ಮತ್ತು ಅತಿಲಾಭದ ಲೆಕ್ಕಾಚಾರದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ತೊಡಗಿವೆ. ಇದಕ್ಕೆ ಬೇಕಾದ ಸಂಪನ್ಮೂಲವನ್ನು ಸೃಷ್ಟಿಸುವ ನಿಟ್ಟಿನಲ್ಲಿ ವೈದ್ಯಕೀಯ ವಿದ್ಯಾಸಂಸ್ಥೆಗಳು ರೂಪುಗೊಂಡವು. ಅದರಲ್ಲೂ ಸರ್ಕಾರಿ ವೈದ್ಯಕೀಯ ವಿದ್ಯಾಸಂಸ್ಥೆಗಳನ್ನು ದೂರತಳ್ಳಿ ಖಾಸಗಿ ಸಂಸ್ಥೆಗಳು ಬೇರುಬಿಡತೊಡಗಿದವು. ಇದರ ಫಲವೆಂಬಂತೆ 1950ರಲ್ಲಿ ಶೇ.4ರಷ್ಟಿದ್ದ ಖಾಸಗಿ ವೈದ್ಯಕೀಯ ವಿದ್ಯಾಸಂಸ್ಥೆಗಳು 2014ರಲ್ಲಿ ಶೇ.54ರಷ್ಟು ಹೆಚ್ಚಾದವು. ಈ ಖಾಸಗಿ ಮೆಡಿಕಲ್ ಕಾಲೇಜುಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ತಮ್ಮ ಶುಲ್ಕವನ್ನು ಹತ್ತಾರು ಪಟ್ಟು ಹೆಚ್ಚು ಮಾಡುತ್ತಲೇ ಬಂದಿವೆ. ಇದರಿಂದ ‘ವೈದ್ಯಸೇವೆ’ ಎಂಬ ಪದವನ್ನು ಅಚ್ಚುಕಟ್ಟಾಗಿ ದೂರಸರಿಸಿ ವೈದ್ಯಲೋಕವನ್ನು ಹಣ ಹೂಡಿ ಹಣ ಗಳಿಸುವ ದಂಧೆಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿವೆ.
ಮೀಸಲಾತಿಯಿಂದ ಪ್ರತಿಭೆಗೆ ಧಕ್ಕೆ ಒದಗುತ್ತಿದೆ ಎನ್ನುವವರು ಇದಕ್ಕೆ ಏನು ಹೇಳುತ್ತಿದ್ದಾರೆ. ಸರಾಸರಿ ಅಂಕ ಗಳಿಕೆಯಲ್ಲೂ ಕಡಿಮೆ ಇರುವ ಅನೇಕ ವಿದ್ಯಾರ್ಥಿಗಳು ಖಾಸಗಿ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದು ವೈದ್ಯಕೀಯ ಪದವಿಯನ್ನು ಪಡೆಯುತ್ತಿದ್ದಾರೆ. ಹಾಗಿದ್ದರೆ ಇವರೆಲ್ಲ ಪ್ರತಿಭಾವಂತರೆ? ಅರ್ಹತೆಯನ್ನು ಅಂಕಗಳಲ್ಲಿ ಅಳೆದು ‘ಮೀಸಲಾತಿಯಿಂದ ಕಡಿಮೆ ಅಂಕಗಳಿಸಿ ಬಂದವರು ವೈದ್ಯ ವೃತ್ತಿಯನ್ನು ಸರಿಯಾಗಿ ನಿಭಾಯಿಸಬಲ್ಲರೆ’ ಎನ್ನುವವರೇನೂ ಇಲ್ಲಿ ಕಡಿಮೆಯಿಲ್ಲ. ಕಡಿಮೆ ಅಂಕ ಗಳಿಸಿ ದುಡ್ಡಿನಿಂದ ಸೀಟು ಖರೀದಿಸುತ್ತಿರುವ ಹಣವಂತ ಪಡೆಗೆ ಅರ್ಹತೆಯ ಮಾನದಂಡವನ್ನು ಇವರೆಲ್ಲ ಹಿಡಿಯಬಲ್ಲರೆ? ಇವರ ಯಾವ ಮನಸ್ಸುಗಳೂ ಇದರ ಬಗ್ಗೆ ಚಕಾರ ಎತ್ತುವುದಿಲ್ಲ. ಹೋಗಲಿ, ಇಂತಹ ವಿದ್ಯಾರ್ಥಿಗಳಿಂದ ಎಂತಹ ಸಾರ್ವಜನಿಕ ಸೇವೆಯನ್ನು ನಿರೀಕ್ಷಿಸಲು ಸಾಧ್ಯ? ಈ ಪ್ರಶ್ನೆಯನ್ನು ಇವರಿಗೆ ಕೇಳುವ ಬದಲು ಮೀಸಲಾತಿಯಿಂದ ಬಂದವರಿಗೆ ಕೇಳಲಾಗುತ್ತಿದೆ. ದುಡ್ಡು ಕೊಟ್ಟು ಬಂದವರು ದುಡ್ಡನ್ನು ಸಂಪಾದಿಸಲಷ್ಟೇ ಯೋಚಿಸುತ್ತಾರೆ. ದುಡ್ಡು ಗಳಿಸಬೇಕು ಎನ್ನುವುದರ ಕಡೆ ಇವರ ತುಡಿತವಿದೆ. ಇಲ್ಲಿ ಹಣವೇ ಮೆರಿಟ್ ಆಗುತ್ತಿದೆ. ಇಂತವರಿಂದ ಗುಣಮಟ್ಟವನ್ನು ಅಪೇಕ್ಷಿಸಲು ಸಾಧ್ಯವೇ? ಅಪೇಕ್ಷಿಸಿದರೆ ಎಂತಹ ಗುಣಮಟ್ಟವನ್ನು ಅಪೇಕ್ಷಿಸಬಹುದು. ಇದೊಂದು ರೀತಿಯಲ್ಲಿ ಹಗಲು ದರೋಡೆಗೆ ಪ್ರೇರಣೆ ನೀಡಿದಂತೆಯೇ ಸರಿ. ಹಣವನ್ನು ದ್ವಿಗುಣಗೊಳಿಸುವ ಕಾರಣದಿಂದಾಗಿಯೇ ಕಾರ್ಪೊರೇಟ್ ಸಂಸ್ಥೆಗಳು ವೈದ್ಯಕೀಯ ಕ್ಷೇತ್ರದ ಮೇಲೆ ಅಪಾರ ಬಂಡವಾಳ ಹೂಡಿ, `ಮೀಸಲಾತಿ ವರ್ಸಸ್ ಮೆರಿಟ್’ ಎಂಬ ಅಪ್ಪಟ ಜನವಿರೋಧಿ ಸುಳ್ಳನ್ನು ಹರಡುತ್ತಿದೆ. ಆದರೆ ಭಾರತದ ವಾಸ್ತವಗಳು ಇವರ ದುರ್ಬಲ ಕಲ್ಪನೆಗಳನ್ನು ಮೀರಿ ಬೆಳೆಯುತ್ತಿವೆ. ಈ ದೇಶದ ಜನತಂತ್ರ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತೆಯನ್ನು ಉಳಿಸುವುದೆಂದರೆ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವುದು, ಆ ವಾಸ್ತವಗಳ ಬೆಳಕಲ್ಲಿ ಹೊಸ ಭಾರತವನ್ನು ಕಟ್ಟುವುದೇ ಆಗಿದೆ.
ಯಾವ ಕ್ಷೇತ್ರದಲ್ಲಿ ಪದೇ ಪದೇ ಮೀಸಲಾತಿಯ ವಿರೋಧಿ ಹೇಳಿಕೆಗಳು ಹೊರಬಂದು ಪ್ರತಿಭೆ ಪ್ರಶ್ನೆಯನ್ನು ಮುಂದಿಡಲಾಗುತ್ತಿದೆಯೋ ಆ ಕ್ಷೇತ್ರದಲ್ಲಿಯೇ ದುಡ್ಡಿನಿಂದ ಪದವಿಯನ್ನು ಕೊಳ್ಳುವ ದಂಧೆ ಎಗ್ಗಿಲ್ಲದೇ ಸಾಗಿದೆ. ಈ ಪಿಡುಗು ವೈದ್ಯಕೀಯ ಶಿಕ್ಷಣಕ್ಕೆ ಮಾತ್ರ ಸೀಮಿತವಾದುದಲ್ಲ; ಪೇಮೆಂಟ್ ಕೋಟಾ ಹೆಸರಿನಲ್ಲಿ ಯಾವ ಪದವಿಯ ಅಂಕಗಳಿಗೂ ಮಾನ್ಯತೆ ಕೊಡದೆ ತುಂಬಲಾಗುತ್ತಿದೆ. ಅಂಕ ಕಡಿಮೆ ಇದ್ದರೂ ಹಣ ಕೊಟ್ಟು ಯಾವ ಪದವಿಗಾದರೂ ಸೇರಬಹುದು. ಆದರೆ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಸರಾಸರಿ ಅಂಕ ಹೊಂದಿರುವ ವಿದ್ಯಾರ್ಥಿಗಳು ಮೀಸಲಾತಿ ಕೋಟಾದಲ್ಲಿ ಬಂದರೆ ಅರ್ಹತೆ, ಪ್ರತಿಭೆ ಮಾನದಂಡದ ಪ್ರಶ್ನೆಯನ್ನು ಮುಂಚೂಣಿಗೆ ತಂದು ಹುಯಿಲೆಬ್ಬಿಸಲಾಗುತ್ತದೆ. ಇನ್ನೊಂದು ಅಂಶವನ್ನು ಸ್ಪಷ್ಟಪಡಿಸುವುದಾದರೆ ಇಂದು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಸಾಮಾನ್ಯ ವರ್ಗಕ್ಕೆ ನಿಗದಿಯಾಗುವ ಅಂಕಗಳಿಗಿಂತ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನಿಗದಿತಗೊಳ್ಳುವ ಅಂಕ ಒಂದೆರಡು ಕಡಿಮೆ ಅಂಕಗಳಷ್ಟು ಮಾತ್ರ. ಈ ಸತ್ಯ ನಮ್ಮೆಲ್ಲರ ಕಣ್ಣೆದುರಿಗೇ ಇದ್ದರೂ ಪೂರ್ವಗ್ರಹಪೀಡಿತ ಮನಸ್ಥಿತಿಯವರು ಕಣ್ಣುತೆರೆಯಲು ಸಿದ್ಧರಿಲ್ಲ. ಅದಕ್ಕೇನು ಮಾಡುವುದು?

– ಡಾ. ಉಮಾಶಂಕರ್ ಹೆಚ್.ಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...