ಕೇರಳದ ಆಲ್ ಇಂಡಿಯಾ ರೇಡಿಯೋ (ಎಐಆರ್) ಕಾರ್ಯಕ್ರಮ ನಿರ್ಮಾಪಕಿಯೊಬ್ಬರು ಫೇಸ್ಬುಕ್ನಲ್ಲಿ, “ಹಿಂದೂಗಳು ಕೇವಲ ಧಾರ್ಮಿಕ ರ್ಯಾಲಿಗಳನ್ನು ಆಯೋಜಿಸುವ ಬದಲು ಶಸ್ತ್ರಾಸ್ತ್ರಗಳನ್ನು ಹಿಡಿಯಿರಿ” ಎಂದು ಒತ್ತಾಯಿಸುವ ಇಸ್ಲಾಮೋಫೋಬಿಕ್ ಪೋಸ್ಟ್ ಅನ್ನು ಹಂಚಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಬರಹಗಾರ್ತಿಯೂ ಆಗಿರುವ ಎಐಆರ್ ಉದ್ಯೋಗಿ ಕೆ.ಆರ್. ಇಂದಿರಾ, ಪಶ್ಚಿಮ ಬಂಗಾಳದ ಮುರ್ಸಿದಾಬಾದ್ನಲ್ಲಿ ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆಗಳ ನಂತರ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಗಲಭೆಯಲ್ಲಿ 21 ವರ್ಷದ ಮುಸ್ಲಿಂ ವ್ಯಕ್ತಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
“ಹಿಂದೂಗಳು ಶಸ್ತ್ರಗಳನ್ನು ತೆಗೆದುಕೊಂಡು ಉಗ್ರವಾಗಿ ದಾಳಿ ಮಾಡಲು ಕಲಿಯಬೇಕು. ನಾಮಜಪ (ಧಾರ್ಮಿಕ) ಮೆರವಣಿಗೆಯನ್ನು ಹೇಗೆ ಮುನ್ನಡೆಸಬೇಕೆಂದು ಕಲಿಯುವುದು ಸಾಕಾಗುವುದಿಲ್ಲ” ಎಂದು ಇಂದಿರಾ ಅವರ ಫೇಸ್ಬುಕ್ ಪೋಸ್ಟ್ನಲ್ಲಿ ಬರೆಯಲಾಗಿದೆ.
ವಿವಾದದ ಬಳಿಕ ಪೋಸ್ಟ್ ಅನ್ನು ಅಳಿಸಲಾಗಿದೆ. ಆದರೆ, ಶಾಹುಲ್ ಅಂಬಲತ್ ಎಂಬ ಫೇಸ್ಬುಕ್ ಬಳಕೆದಾರರು ಇಂದೀರಾ ಅವರ ಹಿಂದುತ್ವ ಸಿದ್ಧಾಂತ ಬಿಂಬಿಸುವ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ಆದರೂ, ಕೇರಳ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ‘ಮಕ್ತೂಬ್ ಮೀಡಿಯಾ’ ವರದಿ ಮಾಡಿದೆ. ಈ ನಿಷ್ಕ್ರಿಯತೆಯು ರಾಜ್ಯದ ನಾಗರಿಕ ಸಮಾಜ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ ವ್ಯಾಪಕ ಖಂಡನೆಗೆ ಕಾರಣವಾಗಿದೆ.
ಆಲ್ ಇಂಡಿಯಾ ರೇಡಿಯೋ ಕಾರ್ಯಕ್ರಮ ನಿರ್ಮಾಪಕಿ ದ್ವೇಷ ತುಂಬಿದ ಕೋಮು ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿ, ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದಾಗ, ಇಂದಿರಾ ಅಸ್ಸಾಂನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರು. ಅವರಲ್ಲಿ ಅನೇಕರನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಪ್ರಕ್ರಿಯೆಯ ಸಮಯದಲ್ಲಿ ಬಂಧನ ಶಿಬಿರಗಳಲ್ಲಿ ಇರಿಸಲಾಗಿತ್ತು.
ಇಂದಿರಾ ಅವರು ಮುಸ್ಲಿಮರಿಗೆ ಸಂತಾನಹರಣ ಮಾಡುವುದನ್ನು ಪ್ರತಿಪಾದಿಸಿದರು. “ಜಗತ್ತನ್ನು ಉಳಿಸಲು ಗರ್ಭನಿರೋಧಕಗಳನ್ನು ಮುಸ್ಲಿಮರು ಕುಡಿಯುವ ನೀರಿನೊಂದಿಗೆ ಬೆರೆಸಬೇಕು” ಎಂದು ಹೇಳಿದರು.
ಕೇರಳ ಪೊಲೀಸರು ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (o) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಾಗರಿಕ ಸಮಾಜ ಗುಂಪುಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಕೆ.ಆರ್. ಇಂದಿರಾ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
ಲೇಖಕಿ-ಕಾರ್ಯಕರ್ತೆ ರೇಖಾ ರಾಜ್ ಕೇರಳದಲ್ಲಿ ಕುದಿಯುತ್ತಿರುವ ಅಪಾಯಕಾರಿ ಹಿಂದುತ್ವ ಮಾದರಿಯನ್ನು ಬಹಿರಂಗಪಡಿಸಿದ್ದಾರೆ. “ಇದು ಕೇವಲ ಒಬ್ಬ ವ್ಯಕ್ತಿಯ ಬಗ್ಗೆ ಅಲ್ಲ, ಬದಲಾಗಿ ಮುಸ್ಲಿಮರನ್ನು ಭಯ ಮತ್ತು ಅಭದ್ರತೆಯ ಸ್ಥಿತಿಗೆ ತಳ್ಳುತ್ತಿರುವ ಅಪಾಯಕಾರಿ ಸಿದ್ಧಾಂತದ ಬಗ್ಗೆ” ಎಂದು ಅವರು ಹೇಳಿದರು.
ದಲಿತ ದೌರ್ಜನ್ಯ ಪ್ರಕರಣ: ಸಹಪಾಠಿಗಳಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ವರ್ಷದ ಬಳಿಕ ವಿದ್ಯಾರ್ಥಿ ಮೇಲೆ ಪುನಃ ಹಲ್ಲೆ


