ಕ್ಯಾನ್ಸರ್ ಆರೈಕೆಯನ್ನು ವಿಕೇಂದ್ರೀಕರಿಸಲು ಮತ್ತು ರೋಗಿಗಳಿಗೆ ಹಣದ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರವು ರಾಜ್ಯದಲ್ಲಿ ಜಿಲ್ಲಾ ಡೇ ಕೇರ್ ಕಿಮೊಥೆರಪಿ ಕೇಂದ್ರಗಳನ್ನು (ಡಿಸಿಸಿಸಿ) ಪ್ರಾರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮೈಸೂರಿನಲ್ಲಿ ಹಬ್-ಅಂಡ್-ಸ್ಪೋಕ್ ಮಾದರಿ ಕಾರ್ಯಕ್ರಮವನ್ನು ಉದ್ಘಾಟಸಿದ್ದಾರೆ. ಆರೋಗ್ಯ ಇಲಾಖೆಯ ಅಡಿಯಲ್ಲಿರುವ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಸಿಸಿಸಿಗಳು ಏಕಕಾಲದಲ್ಲಿ ಕಾರ್ಯಗತಗೊಂಡಿದೆ. ರಾಜ್ಯದ 16 ಜಿಲ್ಲಾ
ಈ ಯೋಜನೆಯನ್ನು ಮೊದಲು 2024-25 ರ ರಾಜ್ಯ ಬಜೆಟ್ನಲ್ಲಿ ಘೋಷಿಸಲಾಯಿತು. ಈ ವೇಳೆ ಮುಖ್ಯಮಂತ್ರಿ ಪ್ರತಿ ಜಿಲ್ಲೆಯಲ್ಲಿ ಒಟ್ಟು 20 ಕೋಟಿ ರೂ. ವೆಚ್ಚದಲ್ಲಿ ಡಿಸಿಸಿಸಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದರು.
ರಾಜ್ಯದಲ್ಲಿ ವಾರ್ಷಿಕವಾಗಿ ಸುಮಾರು 70,000 ಹೊಸ ಕ್ಯಾನ್ಸರ್ ಪ್ರಕರಣಗಳನ್ನು ವರದಿಯಾಗುತ್ತಿವೆ ಎಂದು ಆರೋಗ್ಯ ಇಲಾಖೆಯ ದತ್ತಾಂಶಗಳು ತೋರಿಸುತ್ತವೆ. ಸ್ತನ (18%), ಗರ್ಭಕಂಠ (14%), ಬಾಯಿ (12%), ಶ್ವಾಸಕೋಶ (8%) ಮತ್ತು ಕೊಲೊರೆಕ್ಟಲ್ (6%) ಕ್ಯಾನ್ಸರ್ಗಳು ರಾಜ್ಯದಲ್ಲಿ ಅತಿ ಹೆಚ್ಚು ವರದಿಯಾಗುತ್ತಿದ್ದು ಬಾಯಿಯ ಕ್ಯಾನ್ಸರ್ (1 ಲಕ್ಷ ಜನರಿಗೆ 12 ಪ್ರಕರಣಗಳು) ವರದಿಯಾಗುತ್ತಿವೆ. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕನಿಷ್ಠ 60% ದಷ್ಟು ರೋಗಿಗಳು 100 ಕಿ.ಮೀ.ಗಿಂತ ಹೆಚ್ಚು ಪ್ರಯಾಣಿಸಬೇಕಾಗುತ್ತದೆ ಮತ್ತು ಹೆಚ್ಚಿನ ವೆಚ್ಚ ಮತ್ತು ಲಾಜಿಸ್ಟಿಕ್ಸ್ ಕಾರಣದಿಂದಾಗಿ 30% ರಷ್ಟು ಹೆಚ್ಚಿನ ಡ್ರಾಪ್ಔಟ್ ದರವಿದೆ ಎಂದು ಇಲಾಖೆ ಹೇಳಿದೆ.
“ಕೀಮೋಥೆರಪಿ, ವಿಕಿರಣ ಚಿಕಿತ್ಸೆ (ರೋಗಿಗಳಿಗೆ) ಸುಲಭವಲ್ಲ. ಇದಕ್ಕಾಗಿ ಅವರು ಬೆಂಗಳೂರು, ಮೈಸೂರು ಅಥವಾ ಕಲಬುರಗಿಗೆ ಪ್ರಯಾಣಿಸಬೇಕಾಗಬಹುದು. ಬಡವರಿಗೆ, ಕಿದ್ವಾಯಿ ಒಂದೇ ಆಯ್ಕೆಯಾಗಿದ್ದು, ಇದು ದೂರದಿಂದ ಪ್ರಯಾಣಿಸುವ ರೋಗಿಗಳಿಗೆ ವೆಚ್ಚವನ್ನು ಹೆಚ್ಚಿಸುತ್ತದೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು.
ಆರೈಕೆಯನ್ನು ವಿಕೇಂದ್ರೀಕರಿಸುವ ಮೂಲಕ ನಗರ-ಗ್ರಾಮೀಣ ಅಸಮಾನತೆಯನ್ನು ಕಡಿಮೆ ಮಾಡುವುದು, ಪ್ರಯಾಣ ಮತ್ತು ಆಸ್ಪತ್ರೆಗೆ ದಾಖಲು ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಚಿಕಿತ್ಸೆಯ ನಿರಂತರತೆಯನ್ನು ಖಚಿತಪಡಿಸುವುದು ಡಿಸಿಸಿಸಿಗಳ ಗುರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ. ಈ ವ್ಯವಸ್ಥೆಯು ಆರಂಭಿಕ ಪತ್ತೆ ಮತ್ತು ಹೆಚ್ಚಿನ ಸಂಖ್ಯೆಯ ಕ್ಯಾನ್ಸರ್ ರೋಗಿಗಳನ್ನು ನೋಡುವ ಹಬ್ ಆಸ್ಪತ್ರೆಗಳಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಕ್ಯಾನ್ಸರ್ ಚಿಕಿತ್ಸೆಯು ತೃತೀಯ ಹಂತದ ಆರೈಕೆಯ ಭಾಗವಾಗಿದೆ; ಆರೋಗ್ಯ ಇಲಾಖೆಯ ಅಡಿಯಲ್ಲಿರುವ ಆಸ್ಪತ್ರೆಗಳಲ್ಲಿ ನಾವು ಅದನ್ನು ನೀಡುವುದಿಲ್ಲ… ಡೇಕೇರ್ ಕಿಮೊಥೆರಪಿ ಕೇಂದ್ರಗಳ ಅಗತ್ಯವು ಕಳೆದ ವರ್ಷ ಬಂದಿತು. ಆದಾಗ್ಯೂ, ಅದನ್ನು ಕಾರ್ಯಗತಗೊಳಿಸುವುದು ಸುಲಭವಲ್ಲ; ನಮ್ಮಲ್ಲಿ (ಸಾಕಷ್ಟು) ಆಂಕೊಲಾಜಿಸ್ಟ್ಗಳು ಇಲ್ಲ… ಆದ್ದರಿಂದ, ನಾವು ಹಬ್-ಅಂಡ್-ಸ್ಪೋಕ್ ಮಾದರಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದೇವೆ,” ಎಂದು ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡದಲ್ಲಿ, ಹಲವಾರು ವೈದ್ಯಕೀಯ ಕಾಲೇಜುಗಳಿರುವುದರಿಂದ ಎರಡು ತಾಲ್ಲೂಕುಗಳಲ್ಲಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಿಸಿಸಿಸಿಗಳನ್ನು ಹೊಂದುವ ಪ್ರಸ್ತಾಪವನ್ನು ಸಹ ಚರ್ಚಿಸಲಾಗಿದೆ, ಇದಕ್ಕಾಗಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ. ರಾಜ್ಯದ 16 ಜಿಲ್ಲಾ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹೈದರಾಬಾದ್ನಲ್ಲಿ ಜೆಪ್ಟೋ ವಿತರಣಾ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ
ಹೈದರಾಬಾದ್ನಲ್ಲಿ ಜೆಪ್ಟೋ ವಿತರಣಾ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ

