Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತಕಕ್ಕಸು ಗುಂಡೀಲಿ ತರ್ಕಾರಿ ಬ್ಯೆಳ್ಕಂಡು ತಿನ್ಕಳಿ !

ಕಕ್ಕಸು ಗುಂಡೀಲಿ ತರ್ಕಾರಿ ಬ್ಯೆಳ್ಕಂಡು ತಿನ್ಕಳಿ !

- Advertisement -
- Advertisement -

ಎಲ್ಲರಿಗೂ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ ಅಂತ. ಬನ್ನಿ ಈ ವಾರದ ಆಘಾತಕಾರಿ ಸುದ್ದಿಗಳು ಏನೇನಿವೆ ಎಂದು ಒಂಚೂರು ಬಗ್ಗಿ ನೋಡೋಣ.

ಹಾರೆಸ್ಸೆಸ್‍ಗೆ ಬಂತು ಮುಸ್ಲಿಮರ ಮೇಲೆ ಯದ್ವಾತದ್ವಾ ಲವ್ವು: ಎಲೆಕ್ಷನ್ ಟೈಮಲ್ಲಿ ಶುರುವಾಯ್ತು ಕುರಾನ್ ಮೇಲೆ ಪ್ಯಾರು..
ದಿನದ ಇಪ್ಪತ್ನಾಲ್ಕೂ ತಾಸೂ ದೇಶದ ಮುಸ್ಲಿಮರ ಮೇಲೆ ಕತ್ತಿ, ಕೊಡಲಿ, ಮಚ್ಚು, ಬ್ಲೇಡು, ಗರಗಸ ಹೀಗೆ ಕೈಗೆ ಸಿಕ್ಕಿದ್ದೆಲ್ಲವನ್ನೂ ಮಸೆದು ಕೊಯಕೊಯ ಅನ್ನುವ ಹಾರೆಸ್ಸೆಸ್ ಎಂಬ ಬ್ರಿಟಿಷರಿಗೆ ಗುಲಾಮಗಿರಿ ಮಾಡುತ್ತಿದ್ದ ಗೂಢಚಾರಿಗಳ ಸಂಸ್ಥೆಗೆ ಇದ್ದಕ್ಕಿದ್ದಂತೆ ಮುಸ್ಲಿಮರ ಮೇಲೆ ಪ್ಯಾರ್‍ಗೆ ಆಗ್ಬುಟ್ಟೈತೆ ಎಂಬ ನಸುಗುನ್ನಿ ನ್ಯೂಸೊಂದು ನಮಗೆ ಲಭ್ಯವಾಗಿದೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿರುವ ಈ ಸಂದರ್ಭದಲ್ಲಿ ಹಾರೆಸ್ಸೆಸ್ ಬುಡ್ಡಾಗಳು ಅಯೋಧ್ಯೆಯಲ್ಲಿ ಕುರಾನ್ ಪಠಣ ಮತ್ತು ನಮಾಜ್ ಪ್ರೋಗ್ರಾಂ ಹಮ್ಮಿಕೊಂಡಿದ್ದಾರೆ. ಮುಸ್ಲಿಮರ ಓಟು ನಮಗೆ ಬೇಡವೇ ಬೇಡ ಎಂದು ಈಗ ಅಬ್ಬೇಪಾರಿ ಪರಿಸ್ಥಿತಿಗೆ ತಲುಪಿರುವ ಹಾರೆಸ್ಸೆಸ್.. ಇದೀಗ ಸಾಬರ ಗಡ್ಡಕ್ಕೆ ಕೊಬ್ರಿ ಎಣ್ಣೆ ಸವರಿ ‘ಗಡ್ಡ ಎಳೀತೀವಿ ಮಿಠಾಯಿ ಕೊಡಿ’ ಎಂದು ಗಡ್ಡ ನೀವಲು ಹೊರಟಿರುವುದು ನಿಜಕ್ಕೂ ಅವರು ತಲುಪಿರುವ ದರ್ವೇಸಿ ಗತಿಗೆ ಸಾಕ್ಷಿಯಾಗಿದೆಯೆಂದು ತಿಳಿದು ಬಂದಿದೆ.
.                                       *****
ಅಚ್ಛೇದಿನ್ ಕೊಡ್ತೀವಿ ಅಂತ ಜನರ ಓಟು ತಗೊಂಡ್ರು; ಟಾಯ್ಲೆಟ್ ಗೊಬ್ಬರದಲ್ಲಿ ಬೆಳೆದ ತರಕಾರಿ ತಿನ್ನಿ ಅಂದ್ರು
ಬಾಲಿವುಡ್ ಚಿತ್ರರಂಗದ ಒನ್ & ಓನ್ಲಿ ಕೆನಡಾ ಮೂಲದ ದೇಶಭಕ್ತ ನಟ ಅಕ್ಷಯ್‍ಕುಮಾರ್ ಕಡೆಯಿಂದ ಸುದ್ದಿಯೊಂದು ಎಗರಿ ಬಂದಿದೆ. ಅತ್ಯುತ್ತಮ ಗುಣಮಟ್ಟದ ತರಕಾರಿಗಳು ಮತ್ತು ಉತ್ಕøಷ್ಟ ರುಚಿಗಾಗಿ ನಿಮ್ಮ ಮನೆಯ ಕಕ್ಕಸ್ಸುಗುಂಡಿಯ ಗೊಬ್ಬರದಲ್ಲಿ ನೀವೇ ತರಕಾರಿ ಬೆಳೆದು ಚಪ್ಪರಿಸಿಕೊಂಡು ತಿನ್ನಿರೆಂದು ಅಕ್ಷಯ್ ಕುಮಾರ್ ಕೇಂದ್ರ ಸರ್ಕಾರದ ಜಾಹೀರಾತಿನಲ್ಲಿ ಹೇಳಿ ಕಾಸೆತ್ತಿಕೊಂಡು ಹೋಗಿದ್ದಾರೆ. ಅಧಿಕಾರಕ್ಕೆ ಬಂದ್ರೆ ನಿಮ್ಮ ಶರ್ಟು ಜೇಬಿನೊಳಕ್ಕೆ ಸ್ವರ್ಗವನ್ನೇ ಪ್ಯಾಕ್ ಮಾಡಿ ಇಡ್ತೀವಿ ಅಂತ ಬೊಗಳಿದ್ದ ದ್ವೇಷಭಕ್ತರ ಕಮಲ ಪಕ್ಷದವರು ಕೊನೆಗೆ ನಿಮ್ಮದೇ ಸ್ವಂತದೇ ಮಲದ ಗೊಬ್ಬರದಲ್ಲಿ ನಿಮಗಿಷ್ಟ ಬಂದ ತರಕಾರಿ ಬೆಳೆದುಕೊಂಡು ಚಪ್ಪರಿಸಿಕೊಂಡು ತಿನ್ನಿ ಎನ್ನುತ್ತಿದ್ದಾರೆ, ಇದಕ್ಕೆ ಅಕ್ಷಯ್‍ಕುಮಾರ್‍ನಂತಹ ಗುಲಾಮರ ಗುಲಾಮನು ಜಾಹಿರಾತಿನಲ್ಲಿ ನಟಿಸಿ ನಾನೂ ಮನುಷ್ಯರ ಮಲದಲ್ಲಿ ಬೆಳೆದ ತರಕಾರಿ ತಿನ್ನುತ್ತೇನೆಂದು ಎದೆ ತಟ್ಟಿಕೊಂಡು ಹೇಳಿರುವುದು ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾಗಿದೆ.
.                                       *****
ಹಾಫ್‍ಮೆಂಟ್ಲು ಆದಿತ್ಯನಾಥ ಬಿತ್ತು ಫುಲ್‍ಮೆಂಟ್ಲು ಡ್ರೀಮ್ ಪ್ಯಾಕೇಜು: 2000 ವರ್ಷದ ಹಿಂದೆ ಇಂಡಿಯಾಗು ಕೊರಿಯಾಗು ಆಯ್ತಂತೆ ಮ್ಯಾರೇಜು
ಯುಪಿ ರಾಜ್ಯದಲ್ಲಿ ಕಂಡಕಂಡ ಟಾಯ್ಲೆಟ್ಟುಗಳಿಗೆಲ್ಲ ಕೇಸರಿ ಬಣ್ಣ ಹೊಡೆದುಕೊಂಡು ಆರಾಮಾಗಿ ಓಡಾಡುತ್ತಿರುವ ಅಲ್ಲಿನ ಸನ್ಯಾಸಿ ಸಿಎಂ ಯೋಗಿ ಹಾದಿತ್ಯನಾಥ ಅಲಿಯಾಸ್ ಅಜಯ್‍ಸಿಂಗ್ ಭಿಷ್ಟ್ ಎಂಬ ತಲೆತಿಕ್ಕಲು ಐಲು ಗಿರಾಕಿಯ ತಲೆಯಲ್ಲಿರುವ ನಟ್ಟು ಬೋಲ್ಟುಗಳೆಲ್ಲ ತೊಪತೊಪನೆ ಉದುರಿ ಹೋಗಿರುವ ವರ್ತಮಾನ ಇದೀಗತಾನೇ ಲಭ್ಯವಾಗಿದೆ. ಜನರ ಬದುಕನ್ನು ಹಸನು ಮಾಡು ಪುಣ್ಯದ ಕೆಲಸವೊಂದನ್ನು ಬಿಟ್ಟು ಮಿಕ್ಕೆಲ್ಲ ಕೋತಿಚೇಷ್ಟೆ ಮಾಡಿಕೊಂಡು ತಿರುಗುತ್ತಿರುವ ಈ ಬೋಳುಮಂಡೆ ಸೋಂಬೇರಿ ಸಿಎಂ ಇತ್ತೀಚೆಗಷ್ಟೇ ಒಂದು ಬ್ರೈನ್‍ಲೆಸ್ ಹೇಳಿಕೆಯೊಂದನ್ನು ಕೊಟ್ಟು ನಗೆಪಾಟಲಿಗೆ ಈಡಾಗಿದೆ. ಅಯೋಧ್ಯೆಯ ರಾಜಕುಮಾರಿಯನ್ನು 2 ಸಾವಿರ ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ರಾಜಕುಮಾರನಿಗೆ ಕೊಟ್ಟು ಮದುವೆ ಮಾಡಲಾಗಿತ್ತು ಎಂದಿದ್ದಾನೆÀ ಯುಪಿ ರಾಜ್ಯದ ಸನ್ಯಾಸಿ ಸಿಎಂ, ಈ ಬಗ್ಗೆ ಅಧಿಕೃತ ಮಾಹಿತಿ ಎಲ್ಲಿಂದ ಲಭಿಸಿತು? ಆವಾಗ ನೀವು ಯಾವ ಕುದುರೆಲಾಯದಲ್ಲಿ ಲಂಗೋಟಿ ಹಾಕ್ಕೊಂಡು ಸೆಗಣಿ ಎತ್ತುತ್ತ ಇದನ್ನೆಲ್ಲ ಗಮನಿಸಿದಿರಿ.. ಎಂಬ ಪತ್ರಕರ್ತರ ಪ್ರಶ್ನೆಗೆ ತೀವ್ರವಾಗಿ ಬೇಜಾರು ಮಾಡಿಕೊಂಡ ಈ ಕೆಪರಗೇಡಿಯು, ಪ್ರಶ್ನೆ ಕೇಳಿದ ಟಿವಿ ಚಾನೆಲ್‍ನ ಮೈಕನ್ನು ಕೈಗೆತ್ತಿಕೊಂಡು ತನ್ನ ಬಾಣಲಿತಲೆಗೆ ¥sಟ್ ಫಟ್ ಫಟ್ ಎಂದು ಹೊಡೆದುಕೊಂಡು ತಮ್ಮ ಅಸಮಾಧಾನವನ್ನು ಹೊರಹಾಕಿಲ್ಲವೆಂದು ತಿಳಿದುಬಂದಿದೆ.
.                                       *****
ಸನಾತನಿ ಸಂಘಿ-ಮಂಕಿಗಳ ಭ್ರಮೆಯ ರೋಗವಾಯ್ತು ವಿಪರೀತ: ಲಂಗೋಟಿಗೆ ಬಿದ್ದ ಬೆಂಕಿಗೆ ಮಾಡ್ತಿದ್ದಾರೆ ತೋಂ ತಕಿಟ ತಕಧಿಮಿತ
ಇತ್ತೀಚೆಗೆ ಯಾರ ಕಣ್ಣಿಗೂ ಕಾಣದ್ದೆಲ್ಲ ಭ್ರಮೆಯಲ್ಲೇ ನುಗುರುಕೊಂಡು ಓಡಾಡುವ ಸಂಘಿ ಮಂಕಿಗಳಿಗೆ ಕಾಣುತ್ತಿರುವುದು ಆಶ್ಚರ್ಯದ ವಿಷಯವೇ ಸರಿ. ದನದ ಮೂತ್ರದಲ್ಲಿ ಜಗತ್ತಿನ ಎಲ್ಲ ಕಾಯಿಲೆಗಳಿಗೂ ಔಷಧಿ ಕಂಡುಹಿಡಿದ ಈ ಇಂಕಿ ಮಂಕಿ ಪಾಂಕಿಗಳು ಇದೀಗ ತಮ್ಮ ಎಂಜಲುಕಾಸಿನ ದೊರೆ ಅಂಬಾನಿಯು ಇನ್ನೂ ಸ್ಥಾಪಿಸದೇ ಇರುವ ಸಂಸ್ಥೆಯೊಂದು ಕಂಡುಬಿಟ್ಟಿದೆಯಂತೆ. ‘ಜಿಯೋ ಇನ್ಸ್‍ಟಿಟ್ಯೂಟ್’ ಎಂಬ ಅಸ್ತಿತ್ವದಲ್ಲೇ ಇಲ್ಲದ ಅಂಬಾನಿಯ ಸಂಸ್ಥೆಯು ದೇಶದ ಅತ್ಯುತ್ತಮ ಸಂಸ್ಥೆಗಳಲ್ಲೊಂದು ಎಂದು ತಮ್ಮ ಗುಲಾಮಿ ಸರ್ಕಾರದ ಮೂಲದ ಘೋಷಿಸಿರುವ ಈ ಸಾಂಪ್ ಸಂಘಿಗಳು ಈ ಮೂಲಕ ತಾವು ಹ್ಯಾಲೂಸಿನೇಷನ್ ರೋಗದಿಂದ ನರಳಾಡಿ ಹುಳ ಬಿದ್ದು ಒದ್ದಾಡುತ್ತಿದ್ದೇವೆಂದು ಘಂಟಾಘೋಷವಾಗಿ ಸಾರಿಬಿಟ್ಟಿದ್ದಾರೆÉ. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಸಂಘಿಗಳ ಮಾನಸಿಕ ಅಸ್ವಸ್ಥತೆಯ ಮೇಲೆ ಮುಗಿಬಿದ್ದ ಅಷ್ಟಿಷ್ಟು ಮಾಧ್ಯಮಗಳು ಸಂಘಿಗಳ ಲಂಗೋಟಿಗೆ ಸೀಮೆಎಣ್ಣೆ ಎರಚಿ ಕಡ್ಡಿ ಗೀರಿದ್ದಾರೆಂದು, ಉರಿ ತಡೆಯಲಾಗದೆ ಸಂಘಿ-ಮಂಕಿಗಳು ಲಡಕಾಸಿ ನೃತ್ಯ ಮಾಡುತ್ತ ಉರಿ ಶಮನ ಮಾಡಿಕೊಳ್ಳುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
.                                       *****

ಹೆಡ್ಡಪ್ಪನ ಮರೆಗುಳಿ ಅಧ್ವಾನಗಳಿಗೆ ಸ್ಕೋಪಕ್ಕ ಆದ್ರು ಕಕ್ಕಾಬಿಕ್ಕಿ: ಇವರಿಗೆ ಕೊಡೋದು ಅವ್ರಿಗೆ, ಅವ್ರಿಗೆ ಕೊಡೋದು ಇವ್ರಿಗೆ..
ಹತ್ತನ್ನೆರಡು ವರ್ಷಗಳ ಹಿಂದೆ 38 ಎಮ್ಮೆಲ್ಲೆಗಳನ್ನು ಹೊಂದಿದ್ದ ಕುಮಾರಣ್ಣನನ್ನು ಸಿಎಂ ಮಾಡಿ ಅಪ್ಪಿ ಮುದ್ದಾಡಿ ಲೊಚಲೊಚನೆ ಕಿಸ್ಸು ಕೊಟ್ಟಿದ್ದ ಕರ್ನಾಟಕ ಕಮಲ ಪಕ್ಷದವರು ಇದೀಗ, ಅದೇ ರೀತಿ ಕಾಂಗ್ರೆಸ್ ಕುಮಾರಣ್ಣನನ್ನು ಸಿಎಂ ಮಾಡಿರುವುದಕ್ಕೆ ಚಡ್ಡಿಯೊಳಗೆ ಓತಿಕ್ಯಾತ ಹೊಕ್ಕಂತೆ ಆಡುತ್ತಿರುವುದು ಬಯಲಾಗಿದೆ. ಸತ್ಯಹರಿಶ್ಚಂದ್ರ ದೇವರಪಾದ ಸೇರಿದ ಮೇಲೆ ಮತ್ತೆ ಶಿಕಾರಿಪುರದಲ್ಲಿ ರೈಸ್ ಮಿಲ್ ರೈಟರಾಗಿ ಮರುಜನ್ಮ ಪಡೆದು ಹುಟ್ಟಿರೋದೇ ನಾನು ಎಂಬಂತೆ ನೈತಿಕತೆಯ ಭಾಷಣ ಬೊಗಳುತ್ತಿರುವ ಹೆಡ್ಯೂರಪ್ಪನಿಗೆ ತನ್ನ ಹಳೆಯ ಬ್ಲಾಕಂಡ್ ವೈಟ್ ಡ್ರಾಮಾಗಳು ನೆನಪಾಗದಿರುವುದಕ್ಕೆ ನಿವೃತ್ತ ಕುಮಾರಿ ಸ್ಕೋಪಕ್ಕನಿಗೆ ಶ್ಯಾನೆ ಬೇಜಾರಾಗಿದೆಯಂತೆ. ಹಳೆಯದೆಲ್ಲವನ್ನೂ ಮರೆತು ಇನ್ನೇನೋ ಹೊಸ ಅಧ್ವಾನ ಮಾಡಿ ಮಾಡಿ ಎಲ್ರಿಂದಲೂ ಬೈಸಿಕೊಳ್ಳುವ ಹೆಡ್ಯೂರಪ್ಪ.. ಮನೆಯಲ್ಲಿ ಡ್ರೈವರನ್ನು ಸ್ಕೋಪÀಕ್ಕನೆಂದೂ, ಸ್ಕೋಪಕ್ಕನನ್ನು ಡ್ರೈವರೆಂದು ಕನ್ ಫ್ಯೂಸು ಮಾಡಿಕೊಂಡು ಇವರಿಗೆ ಕೊಡೋದನ್ನ ಅವರಿಗೆ ಕೊಟ್ಟು, ಅವರಿಗೆ ಕೊಡೋದನ್ನ ಇವರಿಗೆ ಕೊಟ್ಟು ಎಡವಟ್ಟಿನ ಮೇಲೆ ಎಡವಟ್ಟು ಮಾಡ್ತಿರುವುದು ಸ್ಕೋಪಕ್ಕನ ಚಿಂತೆಗೆ ಕಾರಣವಾಗಿದೆಯಂತೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ಮುಂದಿನವಾರ ಇಂಥಹದೇ ಅನಾಹುತಕಾರಿ ಸುದ್ದಿಗಳೊಡನೆ ನಿಮಗೆ ಸಿಗುತ್ತೇನೆ. ಅಲ್ಲೀತನಕ ಸಲಾಂ ನಮಸ್ತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...