Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತಕಕ್ಕಸು ಗುಂಡೀಲಿ ತರ್ಕಾರಿ ಬ್ಯೆಳ್ಕಂಡು ತಿನ್ಕಳಿ !

ಕಕ್ಕಸು ಗುಂಡೀಲಿ ತರ್ಕಾರಿ ಬ್ಯೆಳ್ಕಂಡು ತಿನ್ಕಳಿ !

- Advertisement -
- Advertisement -

ಎಲ್ಲರಿಗೂ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ ಅಂತ. ಬನ್ನಿ ಈ ವಾರದ ಆಘಾತಕಾರಿ ಸುದ್ದಿಗಳು ಏನೇನಿವೆ ಎಂದು ಒಂಚೂರು ಬಗ್ಗಿ ನೋಡೋಣ.

ಹಾರೆಸ್ಸೆಸ್‍ಗೆ ಬಂತು ಮುಸ್ಲಿಮರ ಮೇಲೆ ಯದ್ವಾತದ್ವಾ ಲವ್ವು: ಎಲೆಕ್ಷನ್ ಟೈಮಲ್ಲಿ ಶುರುವಾಯ್ತು ಕುರಾನ್ ಮೇಲೆ ಪ್ಯಾರು..
ದಿನದ ಇಪ್ಪತ್ನಾಲ್ಕೂ ತಾಸೂ ದೇಶದ ಮುಸ್ಲಿಮರ ಮೇಲೆ ಕತ್ತಿ, ಕೊಡಲಿ, ಮಚ್ಚು, ಬ್ಲೇಡು, ಗರಗಸ ಹೀಗೆ ಕೈಗೆ ಸಿಕ್ಕಿದ್ದೆಲ್ಲವನ್ನೂ ಮಸೆದು ಕೊಯಕೊಯ ಅನ್ನುವ ಹಾರೆಸ್ಸೆಸ್ ಎಂಬ ಬ್ರಿಟಿಷರಿಗೆ ಗುಲಾಮಗಿರಿ ಮಾಡುತ್ತಿದ್ದ ಗೂಢಚಾರಿಗಳ ಸಂಸ್ಥೆಗೆ ಇದ್ದಕ್ಕಿದ್ದಂತೆ ಮುಸ್ಲಿಮರ ಮೇಲೆ ಪ್ಯಾರ್‍ಗೆ ಆಗ್ಬುಟ್ಟೈತೆ ಎಂಬ ನಸುಗುನ್ನಿ ನ್ಯೂಸೊಂದು ನಮಗೆ ಲಭ್ಯವಾಗಿದೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿರುವ ಈ ಸಂದರ್ಭದಲ್ಲಿ ಹಾರೆಸ್ಸೆಸ್ ಬುಡ್ಡಾಗಳು ಅಯೋಧ್ಯೆಯಲ್ಲಿ ಕುರಾನ್ ಪಠಣ ಮತ್ತು ನಮಾಜ್ ಪ್ರೋಗ್ರಾಂ ಹಮ್ಮಿಕೊಂಡಿದ್ದಾರೆ. ಮುಸ್ಲಿಮರ ಓಟು ನಮಗೆ ಬೇಡವೇ ಬೇಡ ಎಂದು ಈಗ ಅಬ್ಬೇಪಾರಿ ಪರಿಸ್ಥಿತಿಗೆ ತಲುಪಿರುವ ಹಾರೆಸ್ಸೆಸ್.. ಇದೀಗ ಸಾಬರ ಗಡ್ಡಕ್ಕೆ ಕೊಬ್ರಿ ಎಣ್ಣೆ ಸವರಿ ‘ಗಡ್ಡ ಎಳೀತೀವಿ ಮಿಠಾಯಿ ಕೊಡಿ’ ಎಂದು ಗಡ್ಡ ನೀವಲು ಹೊರಟಿರುವುದು ನಿಜಕ್ಕೂ ಅವರು ತಲುಪಿರುವ ದರ್ವೇಸಿ ಗತಿಗೆ ಸಾಕ್ಷಿಯಾಗಿದೆಯೆಂದು ತಿಳಿದು ಬಂದಿದೆ.
.                                       *****
ಅಚ್ಛೇದಿನ್ ಕೊಡ್ತೀವಿ ಅಂತ ಜನರ ಓಟು ತಗೊಂಡ್ರು; ಟಾಯ್ಲೆಟ್ ಗೊಬ್ಬರದಲ್ಲಿ ಬೆಳೆದ ತರಕಾರಿ ತಿನ್ನಿ ಅಂದ್ರು
ಬಾಲಿವುಡ್ ಚಿತ್ರರಂಗದ ಒನ್ & ಓನ್ಲಿ ಕೆನಡಾ ಮೂಲದ ದೇಶಭಕ್ತ ನಟ ಅಕ್ಷಯ್‍ಕುಮಾರ್ ಕಡೆಯಿಂದ ಸುದ್ದಿಯೊಂದು ಎಗರಿ ಬಂದಿದೆ. ಅತ್ಯುತ್ತಮ ಗುಣಮಟ್ಟದ ತರಕಾರಿಗಳು ಮತ್ತು ಉತ್ಕøಷ್ಟ ರುಚಿಗಾಗಿ ನಿಮ್ಮ ಮನೆಯ ಕಕ್ಕಸ್ಸುಗುಂಡಿಯ ಗೊಬ್ಬರದಲ್ಲಿ ನೀವೇ ತರಕಾರಿ ಬೆಳೆದು ಚಪ್ಪರಿಸಿಕೊಂಡು ತಿನ್ನಿರೆಂದು ಅಕ್ಷಯ್ ಕುಮಾರ್ ಕೇಂದ್ರ ಸರ್ಕಾರದ ಜಾಹೀರಾತಿನಲ್ಲಿ ಹೇಳಿ ಕಾಸೆತ್ತಿಕೊಂಡು ಹೋಗಿದ್ದಾರೆ. ಅಧಿಕಾರಕ್ಕೆ ಬಂದ್ರೆ ನಿಮ್ಮ ಶರ್ಟು ಜೇಬಿನೊಳಕ್ಕೆ ಸ್ವರ್ಗವನ್ನೇ ಪ್ಯಾಕ್ ಮಾಡಿ ಇಡ್ತೀವಿ ಅಂತ ಬೊಗಳಿದ್ದ ದ್ವೇಷಭಕ್ತರ ಕಮಲ ಪಕ್ಷದವರು ಕೊನೆಗೆ ನಿಮ್ಮದೇ ಸ್ವಂತದೇ ಮಲದ ಗೊಬ್ಬರದಲ್ಲಿ ನಿಮಗಿಷ್ಟ ಬಂದ ತರಕಾರಿ ಬೆಳೆದುಕೊಂಡು ಚಪ್ಪರಿಸಿಕೊಂಡು ತಿನ್ನಿ ಎನ್ನುತ್ತಿದ್ದಾರೆ, ಇದಕ್ಕೆ ಅಕ್ಷಯ್‍ಕುಮಾರ್‍ನಂತಹ ಗುಲಾಮರ ಗುಲಾಮನು ಜಾಹಿರಾತಿನಲ್ಲಿ ನಟಿಸಿ ನಾನೂ ಮನುಷ್ಯರ ಮಲದಲ್ಲಿ ಬೆಳೆದ ತರಕಾರಿ ತಿನ್ನುತ್ತೇನೆಂದು ಎದೆ ತಟ್ಟಿಕೊಂಡು ಹೇಳಿರುವುದು ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾಗಿದೆ.
.                                       *****
ಹಾಫ್‍ಮೆಂಟ್ಲು ಆದಿತ್ಯನಾಥ ಬಿತ್ತು ಫುಲ್‍ಮೆಂಟ್ಲು ಡ್ರೀಮ್ ಪ್ಯಾಕೇಜು: 2000 ವರ್ಷದ ಹಿಂದೆ ಇಂಡಿಯಾಗು ಕೊರಿಯಾಗು ಆಯ್ತಂತೆ ಮ್ಯಾರೇಜು
ಯುಪಿ ರಾಜ್ಯದಲ್ಲಿ ಕಂಡಕಂಡ ಟಾಯ್ಲೆಟ್ಟುಗಳಿಗೆಲ್ಲ ಕೇಸರಿ ಬಣ್ಣ ಹೊಡೆದುಕೊಂಡು ಆರಾಮಾಗಿ ಓಡಾಡುತ್ತಿರುವ ಅಲ್ಲಿನ ಸನ್ಯಾಸಿ ಸಿಎಂ ಯೋಗಿ ಹಾದಿತ್ಯನಾಥ ಅಲಿಯಾಸ್ ಅಜಯ್‍ಸಿಂಗ್ ಭಿಷ್ಟ್ ಎಂಬ ತಲೆತಿಕ್ಕಲು ಐಲು ಗಿರಾಕಿಯ ತಲೆಯಲ್ಲಿರುವ ನಟ್ಟು ಬೋಲ್ಟುಗಳೆಲ್ಲ ತೊಪತೊಪನೆ ಉದುರಿ ಹೋಗಿರುವ ವರ್ತಮಾನ ಇದೀಗತಾನೇ ಲಭ್ಯವಾಗಿದೆ. ಜನರ ಬದುಕನ್ನು ಹಸನು ಮಾಡು ಪುಣ್ಯದ ಕೆಲಸವೊಂದನ್ನು ಬಿಟ್ಟು ಮಿಕ್ಕೆಲ್ಲ ಕೋತಿಚೇಷ್ಟೆ ಮಾಡಿಕೊಂಡು ತಿರುಗುತ್ತಿರುವ ಈ ಬೋಳುಮಂಡೆ ಸೋಂಬೇರಿ ಸಿಎಂ ಇತ್ತೀಚೆಗಷ್ಟೇ ಒಂದು ಬ್ರೈನ್‍ಲೆಸ್ ಹೇಳಿಕೆಯೊಂದನ್ನು ಕೊಟ್ಟು ನಗೆಪಾಟಲಿಗೆ ಈಡಾಗಿದೆ. ಅಯೋಧ್ಯೆಯ ರಾಜಕುಮಾರಿಯನ್ನು 2 ಸಾವಿರ ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ರಾಜಕುಮಾರನಿಗೆ ಕೊಟ್ಟು ಮದುವೆ ಮಾಡಲಾಗಿತ್ತು ಎಂದಿದ್ದಾನೆÀ ಯುಪಿ ರಾಜ್ಯದ ಸನ್ಯಾಸಿ ಸಿಎಂ, ಈ ಬಗ್ಗೆ ಅಧಿಕೃತ ಮಾಹಿತಿ ಎಲ್ಲಿಂದ ಲಭಿಸಿತು? ಆವಾಗ ನೀವು ಯಾವ ಕುದುರೆಲಾಯದಲ್ಲಿ ಲಂಗೋಟಿ ಹಾಕ್ಕೊಂಡು ಸೆಗಣಿ ಎತ್ತುತ್ತ ಇದನ್ನೆಲ್ಲ ಗಮನಿಸಿದಿರಿ.. ಎಂಬ ಪತ್ರಕರ್ತರ ಪ್ರಶ್ನೆಗೆ ತೀವ್ರವಾಗಿ ಬೇಜಾರು ಮಾಡಿಕೊಂಡ ಈ ಕೆಪರಗೇಡಿಯು, ಪ್ರಶ್ನೆ ಕೇಳಿದ ಟಿವಿ ಚಾನೆಲ್‍ನ ಮೈಕನ್ನು ಕೈಗೆತ್ತಿಕೊಂಡು ತನ್ನ ಬಾಣಲಿತಲೆಗೆ ¥sಟ್ ಫಟ್ ಫಟ್ ಎಂದು ಹೊಡೆದುಕೊಂಡು ತಮ್ಮ ಅಸಮಾಧಾನವನ್ನು ಹೊರಹಾಕಿಲ್ಲವೆಂದು ತಿಳಿದುಬಂದಿದೆ.
.                                       *****
ಸನಾತನಿ ಸಂಘಿ-ಮಂಕಿಗಳ ಭ್ರಮೆಯ ರೋಗವಾಯ್ತು ವಿಪರೀತ: ಲಂಗೋಟಿಗೆ ಬಿದ್ದ ಬೆಂಕಿಗೆ ಮಾಡ್ತಿದ್ದಾರೆ ತೋಂ ತಕಿಟ ತಕಧಿಮಿತ
ಇತ್ತೀಚೆಗೆ ಯಾರ ಕಣ್ಣಿಗೂ ಕಾಣದ್ದೆಲ್ಲ ಭ್ರಮೆಯಲ್ಲೇ ನುಗುರುಕೊಂಡು ಓಡಾಡುವ ಸಂಘಿ ಮಂಕಿಗಳಿಗೆ ಕಾಣುತ್ತಿರುವುದು ಆಶ್ಚರ್ಯದ ವಿಷಯವೇ ಸರಿ. ದನದ ಮೂತ್ರದಲ್ಲಿ ಜಗತ್ತಿನ ಎಲ್ಲ ಕಾಯಿಲೆಗಳಿಗೂ ಔಷಧಿ ಕಂಡುಹಿಡಿದ ಈ ಇಂಕಿ ಮಂಕಿ ಪಾಂಕಿಗಳು ಇದೀಗ ತಮ್ಮ ಎಂಜಲುಕಾಸಿನ ದೊರೆ ಅಂಬಾನಿಯು ಇನ್ನೂ ಸ್ಥಾಪಿಸದೇ ಇರುವ ಸಂಸ್ಥೆಯೊಂದು ಕಂಡುಬಿಟ್ಟಿದೆಯಂತೆ. ‘ಜಿಯೋ ಇನ್ಸ್‍ಟಿಟ್ಯೂಟ್’ ಎಂಬ ಅಸ್ತಿತ್ವದಲ್ಲೇ ಇಲ್ಲದ ಅಂಬಾನಿಯ ಸಂಸ್ಥೆಯು ದೇಶದ ಅತ್ಯುತ್ತಮ ಸಂಸ್ಥೆಗಳಲ್ಲೊಂದು ಎಂದು ತಮ್ಮ ಗುಲಾಮಿ ಸರ್ಕಾರದ ಮೂಲದ ಘೋಷಿಸಿರುವ ಈ ಸಾಂಪ್ ಸಂಘಿಗಳು ಈ ಮೂಲಕ ತಾವು ಹ್ಯಾಲೂಸಿನೇಷನ್ ರೋಗದಿಂದ ನರಳಾಡಿ ಹುಳ ಬಿದ್ದು ಒದ್ದಾಡುತ್ತಿದ್ದೇವೆಂದು ಘಂಟಾಘೋಷವಾಗಿ ಸಾರಿಬಿಟ್ಟಿದ್ದಾರೆÉ. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಸಂಘಿಗಳ ಮಾನಸಿಕ ಅಸ್ವಸ್ಥತೆಯ ಮೇಲೆ ಮುಗಿಬಿದ್ದ ಅಷ್ಟಿಷ್ಟು ಮಾಧ್ಯಮಗಳು ಸಂಘಿಗಳ ಲಂಗೋಟಿಗೆ ಸೀಮೆಎಣ್ಣೆ ಎರಚಿ ಕಡ್ಡಿ ಗೀರಿದ್ದಾರೆಂದು, ಉರಿ ತಡೆಯಲಾಗದೆ ಸಂಘಿ-ಮಂಕಿಗಳು ಲಡಕಾಸಿ ನೃತ್ಯ ಮಾಡುತ್ತ ಉರಿ ಶಮನ ಮಾಡಿಕೊಳ್ಳುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
.                                       *****

ಹೆಡ್ಡಪ್ಪನ ಮರೆಗುಳಿ ಅಧ್ವಾನಗಳಿಗೆ ಸ್ಕೋಪಕ್ಕ ಆದ್ರು ಕಕ್ಕಾಬಿಕ್ಕಿ: ಇವರಿಗೆ ಕೊಡೋದು ಅವ್ರಿಗೆ, ಅವ್ರಿಗೆ ಕೊಡೋದು ಇವ್ರಿಗೆ..
ಹತ್ತನ್ನೆರಡು ವರ್ಷಗಳ ಹಿಂದೆ 38 ಎಮ್ಮೆಲ್ಲೆಗಳನ್ನು ಹೊಂದಿದ್ದ ಕುಮಾರಣ್ಣನನ್ನು ಸಿಎಂ ಮಾಡಿ ಅಪ್ಪಿ ಮುದ್ದಾಡಿ ಲೊಚಲೊಚನೆ ಕಿಸ್ಸು ಕೊಟ್ಟಿದ್ದ ಕರ್ನಾಟಕ ಕಮಲ ಪಕ್ಷದವರು ಇದೀಗ, ಅದೇ ರೀತಿ ಕಾಂಗ್ರೆಸ್ ಕುಮಾರಣ್ಣನನ್ನು ಸಿಎಂ ಮಾಡಿರುವುದಕ್ಕೆ ಚಡ್ಡಿಯೊಳಗೆ ಓತಿಕ್ಯಾತ ಹೊಕ್ಕಂತೆ ಆಡುತ್ತಿರುವುದು ಬಯಲಾಗಿದೆ. ಸತ್ಯಹರಿಶ್ಚಂದ್ರ ದೇವರಪಾದ ಸೇರಿದ ಮೇಲೆ ಮತ್ತೆ ಶಿಕಾರಿಪುರದಲ್ಲಿ ರೈಸ್ ಮಿಲ್ ರೈಟರಾಗಿ ಮರುಜನ್ಮ ಪಡೆದು ಹುಟ್ಟಿರೋದೇ ನಾನು ಎಂಬಂತೆ ನೈತಿಕತೆಯ ಭಾಷಣ ಬೊಗಳುತ್ತಿರುವ ಹೆಡ್ಯೂರಪ್ಪನಿಗೆ ತನ್ನ ಹಳೆಯ ಬ್ಲಾಕಂಡ್ ವೈಟ್ ಡ್ರಾಮಾಗಳು ನೆನಪಾಗದಿರುವುದಕ್ಕೆ ನಿವೃತ್ತ ಕುಮಾರಿ ಸ್ಕೋಪಕ್ಕನಿಗೆ ಶ್ಯಾನೆ ಬೇಜಾರಾಗಿದೆಯಂತೆ. ಹಳೆಯದೆಲ್ಲವನ್ನೂ ಮರೆತು ಇನ್ನೇನೋ ಹೊಸ ಅಧ್ವಾನ ಮಾಡಿ ಮಾಡಿ ಎಲ್ರಿಂದಲೂ ಬೈಸಿಕೊಳ್ಳುವ ಹೆಡ್ಯೂರಪ್ಪ.. ಮನೆಯಲ್ಲಿ ಡ್ರೈವರನ್ನು ಸ್ಕೋಪÀಕ್ಕನೆಂದೂ, ಸ್ಕೋಪಕ್ಕನನ್ನು ಡ್ರೈವರೆಂದು ಕನ್ ಫ್ಯೂಸು ಮಾಡಿಕೊಂಡು ಇವರಿಗೆ ಕೊಡೋದನ್ನ ಅವರಿಗೆ ಕೊಟ್ಟು, ಅವರಿಗೆ ಕೊಡೋದನ್ನ ಇವರಿಗೆ ಕೊಟ್ಟು ಎಡವಟ್ಟಿನ ಮೇಲೆ ಎಡವಟ್ಟು ಮಾಡ್ತಿರುವುದು ಸ್ಕೋಪಕ್ಕನ ಚಿಂತೆಗೆ ಕಾರಣವಾಗಿದೆಯಂತೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ಮುಂದಿನವಾರ ಇಂಥಹದೇ ಅನಾಹುತಕಾರಿ ಸುದ್ದಿಗಳೊಡನೆ ನಿಮಗೆ ಸಿಗುತ್ತೇನೆ. ಅಲ್ಲೀತನಕ ಸಲಾಂ ನಮಸ್ತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...