ಉತ್ತರ ಪ್ರದೇಶದಲ್ಲಿ ಪ್ರಬಲ ಜಾತಿ ಜನರ ಗುಂಪೊಂದು, ತನ್ನ ಮನೆಯ ಹೊರಗೆ ಮದ್ಯಪಾನ ಮಾಡುವುದನ್ನು ವಿರೋಧಿಸಿದ ನಂತರ ದಲಿತ ಯುವಕನ ಕೈಯನ್ನು ಕತ್ತಿಯಿಂದ ಕತ್ತರಿಸಿದ ಘಟನೆ ನಡೆದಿದೆ.
ಶಿವಂ ಜಾತವ್ ಮತ್ತು ಆತನ ತಂದೆ ಮದ್ಯಪಾನ ಮಾಡುವುದನ್ನು ವಿರೋಧಿಸಿದಾಗ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲಾಗಿದೆ. ಅವರನ್ನು ಮೀರತ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ 15 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ನಂತರ, ಅವರ ಕೈ ರಕ್ತನಾಳಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂದು ವೈದ್ಯರು ಘೋಷಿಸಿದರು.
ಈ ಘಟನೆ ಆಗಸ್ಟ್ 17 ರಂದು ಮುಸಲ್ಲೇಪುರ ಗ್ರಾಮದಲ್ಲಿ ನಡೆದಿದೆ. ಆದರೆ, ಭೀಮ್ ಆರ್ಮಿ ಪಕ್ಷದ ಸಂಸ್ಥಾಪಕ ಮತ್ತು ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಅವರು ಸೆಪ್ಟೆಂಬರ್ 16 ರ ಮಂಗಳವಾರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
“ಆತನ ಚಿಕಿತ್ಸೆಗಾಗಿ ಕುಟುಂಬವು ಈಗಾಗಲೇ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ಘಟನೆ ಅತ್ಯಂತ ನೋವಿನಿಂದ ಕೂಡಿದ್ದು ಶಿಕ್ಷೆಗೆ ಅರ್ಹವಾಗಿದೆ. ಇದಕ್ಕೆ ವಿರುದ್ಧವಾಗಿ, ಬಲಿಪಶುವಿನ ಕುಟುಂಬದ ಮೇಲೆ ರಾಜಿ ಮಾಡಿಕೊಳ್ಳಲು ಒತ್ತಡ ಹೇರಲಾಗುತ್ತಿದೆ” ಎಂದು ಅವರ ಎಕ್ಸ್ ಪೋಸ್ಟ್ ಮಾಡಿದ್ದಾರೆ.
जिला अमरोहा के बछरांव थाना क्षेत्र के मुसल्लेपुर निवासी शिवम जाटव पर एक महीने पहले जातंकवादियों ने जानलेवा हमला किया। शिवम का हाथ बुरी तरह जख्मी हो गया, नसें कट गईं और अब उसका हाथ काम करना बंद कर चुका है। इलाज में परिवार के लाखों रुपये खर्च हो चुके हैं। यह घटना अत्यंत पीड़ादायक…
— Chandra Shekhar Aazad (@BhimArmyChief) September 16, 2025
ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು, ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಶಿವಾಮ್ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಜಾದ್ ಅವರು ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದರು.
“ಎಸ್ಸಿ/ಎಸ್ಟಿ ಕಾಯ್ದೆಯ ಕಟ್ಟುನಿಟ್ಟಿನ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. ಸಂತ್ರಸ್ತನಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡಿ, ಸೂಕ್ತ ಪರಿಹಾರ ನೀಡಬೇಕು. ಬಲಿಪಶುವಿನ ಕುಟುಂಬಕ್ಕೆ ಭದ್ರತೆ ಒದಗಿಸಬೇಕು” ಎಂದು ಆಜಾದ್ ಹೇಳಿದರು.
ಅವರು ಈ ಕೃತ್ಯವನ್ನು “ದಲಿತರ ವಿರುದ್ಧ ಬಿಜೆಪಿ ಪ್ರಾಯೋಜಿತ ಜಾತಿ ಭಯೋತ್ಪಾದನೆ” ಎಂದು ಕರೆದರು.
ಆಜಾದ್ ಅವರ ದೂರಿನ ಆಧಾರದ ಮೇಲೆ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಅಮ್ರೋಹಾ ಪೊಲೀಸರು ಅವರ ಪೋಸ್ಟ್ಗೆ ಉತ್ತರಿಸಿದ್ದಾರೆ. ಆರೋಪಿಗಳು ಪ್ರಸ್ತುತ ಪರಾರಿಯಾಗಿದ್ದಾರೆ.
ದಲಿತ ಯುವಕ ವೈರಮುತ್ತು ಕೊಲೆ ಪ್ರಕರಣ; ಸಂಚು ರೂಪಿಸಿದ ಗೆಳತಿಯ ತಾಯಿ ಬಂಧನ


