HomeUncategorizedಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

ಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

- Advertisement -
- Advertisement -

ಈಗಿನ ಸುದ್ದಿ ಬರೀ ಲಾಠಿ -ಬೂಟಿನ ಸದ್ದಿನ ಸುದ್ದಿ. ಅಸ್ಸಾಮಿನೊಳಗ ಸುರು ಆದ ಈ ಸದ್ದು ಈಗ ಎಲ್ಲಾ ಕಡೆ ಝಂಕಾರ ಬೀಟ್ಸ ಜೊತೆ ಕೇಳಲಿಕ್ಕೆ ಹತ್ತೇದ.

ಕಾಲೇಜು- ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಾಯಿ ಮುಚ್ಚಿಕೊಂಡು ಅಧ್ಯಯನ ಮಾಡಬೇಕು. ಅದನ್ನ ಬಿಟ್ಟುಕೊಟ್ಟು ಪ್ರತಿಭಟನೆ – ಹೋರಾಟ ಎಲ್ಲಾ ಯಾಕ ಮಾಡಬೇಕು? ಅಂತ ಕೆಲವರು ಕೇಳಾಕ ಹತ್ಯಾರ. ನೀವು ಗದ್ದಲಾ ಮಾಡಿದರ ನಾವು ಬಡೀತೇವಿ ಅಂತ ಹೇಳಿ ಅದು ಖರೇ ಅನ್ನೋದನ್ನ ತೋರಿಸಲಿಕ್ಕೆ ಹತ್ಯಾರ.

ಇದೆಲ್ಲಾ ಯಾಕ ಸುರು ಆತು? ಇದು ಪಾರ್ಲಿಮೆಂಟ ಭವನದಿಂದ ಸುರು ಆತು. ಅಲ್ಲೆ ನಮ್ಮನ್ನ ಪ್ರತಿನಿಧಿಸುವ ಮಹಾಮಹೋಪಾಧ್ಯಾಯರೆಲ್ಲಾ ಸೇರಿ `ಹೊರಗಿನಿಂದ ಬಂದವರನ್ನ ಹಿಡದು ಹೊರಗ ಹಾಕೋ’ ಕಾನೂನು ಖಲಬಲಿಯಿಂದ ಪಾಸು ಮಾಡಿದರು. ಅವರ ಪ್ರಕಾರ ಇದು ಅಸ್ಸಾಮು ಮತ್ತು ಇನ್ನು ಕೆಲವು ಪೂರ್ವ ಹಾಗೂ ಈಶಾನ್ಯದ ರಾಜ್ಯಗಳಿಗೆ ಅನ್ವಯ ಆಗಬೇಕಾಗಿತ್ತು. ಆದರ ಅವರಿಗೆ ಭಾಳ ದೊಡ್ಡ ಮನಸ್ಸು ಇದ್ದದ್ದಕ್ಕ ಇಡೀ ದೇಶಕ್ಕ ಲಾಗೂ ಮಾಡೋ ಹಂಗ ಅದನ್ನ ಮಾಡಿದರು.

ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ರಕ್ತ ಬರೋ ಹಂಗ ಹೊಡದು, ಅವರ ಮ್ಯಾಲೆ ದೌರ್ಜನ್ಯ ಮಾಡಿ ಅವಮಾನ ಮಾಡಿದ್ದನ್ನ ಭಾಳ ಜನಾ ಖಂಡಿಸಲಿಕ್ಕೆ ಹತ್ಯಾರ. ಆದರ ಅದನ್ನ ಬೆಂಬಲಿಸೋರ ಸಂಖ್ಯಾನೂ ಏನು ಕಮ್ಮಿ ಇಲ್ಲ. ಅವರು `ಹಂಗ ಆಗಬೇಕು’, `ದಂಡಂ ದಶಗುಣಂ’, `ಜಿಸಕಿ ಲಾಠ, ಉಸಕೀ ಭೈಂಸ್’ ಅಂತೆಲ್ಲಾ ಸಮಾಜ ವಿರೋಧಿ ಮಾಧ್ಯಮಗಳಾದ ವಾಟ್ಸಪ್ಪು – ಫೇಸುಬುಕ್ಕಿನ್ಯಾಗ ಚೀರಲಿಕ್ಕೆ ಹತ್ಯಾರ. ಈಗ ಆಗಲಿಕ್ಕೆ ಹತ್ತಿದ್ದು ಅವರ ಪ್ರಕಾರ ಸರಿ.

ಇದರ ಬಗ್ಗೆ ಒಂದು ಸ್ವಲ್ಪ ಉಲ್ಟಾ ವಿಚಾರ ಮಾಡೋಣ. ಎನ್‍ಡಿಎ ಸರಕಾರದ ಜಾಗಾದಾಗ ಯುಪಿಎ ಇತ್ತು ಅನಕೋರಿ, ಆಗ ಪೊಲೀಸರು ಬನಾರಸ ಹಿಂದೂ ಯುನಿವರ್ಸಿಟಿ ಒಳಗ ಹೊಕ್ಕು ಹುಡುಗ- ಹುಡುಗಿಯರನ್ನು ಹೊಡದಿದ್ದರೂ ಅಂತ ಅನಕೋರಿ ಆವಾಗನೂ ಅವರದು ಇದ ರೀತಿ ಪ್ರತಿಕ್ರಿಯಾ ಇರತಿತ್ತ? ಈ ನುಡಿಮುತ್ತುಗಳನ್ನ ಬಳಸಿ ಅವರು ಇದನ್ನ ಸಮರ್ಥಿಸಿ ಕೊಳ್ಳತಿದ್ದರೇನು?

ಇಷ್ಟರಾಗ ನಮ್ಮ ಮಹಾಮಹಿಮ ಪಂತ ಪ್ರಧಾನರ ಬಾಯಿಯಿಂದ ಒಂದು ಪವಿತ್ರ ವಾಕ್ಯ ಉದರಿ ಬಿದ್ದದ. ಅದೇನಂದರ ‘ಹಿಂಸಾಕೃತ್ಯಗಳನ್ನ ಮಾಡಲಿಕ್ಕೆ ಹತ್ತವರು ಯಾರು ಅಂತ ಎಲ್ಲಾರಿಗೂ ಗೊತ್ತದ. ಅವರವರು ಹಾಕ್ಕೊಂಡ ಅರಿವಿಯಿಂದ ಗೊತ್ತಾಗೇ ಬಿಡತದ’ ಅಂತ ಅಪರೂಪಕ್ಕ ಒಂದು ಖರೇ ಹೇಳ್ಯಾರ. ಯಾಕಂದರ ಹೊಡದವರು, ಬಡದವರು, ಖಾಕಿ ಸಮವಸ್ತ್ರ ಹಾಕಿಕೊಂಡ ಪೊಲೀಸರು. ದೆಹಲಿ ಪೋಲೀಸರು ದೆಹಲಿ ರಾಜ್ಯದ ಕೆಳಗ ಕೆಲಸ ಮಾಡೋರಲ್ಲ. ನೇರವಾಗಿ ಕೇಂದ್ರ ಸರಕಾರದ ಕೈಕೆಳಗ ದುಡಿಯೋರು. ಅವರ ಚಕ್ರವರ್ತಿ ಅಂದರ ಕೇಂದ್ರದ ಗೃಹ ಮಂತ್ರಿ. ಹಿಂಗಾಗಿ ಹಿಂಸೆಯನ್ನ ಆರ್ಡರ್ ಮಾಡಿದವರು ಯಾರು ಅಂತ ಎಲ್ಲಾರಿಗೂ ಗೊತ್ತಾಗತದ.

ಇನ್ನ ಕೆಲವರು ಟೀ ಷರ್ಟು – ಜೀನ್ಸ ಪ್ಯಾಂಟ್ ಹಕ್ಕೊಂಡು, ಪೊಲೀಸರ ಹೆಲ್ಮೇಟು, ಮುಖದ ಮ್ಯಾಲೆ ಮುಸುಗು ಹಾಕಿಹೊಂಡು ಸಣ್ಣಸಣ್ಣ ಹುಡುಗಿಯರನ್ನು ಹುಡುಕಿಹುಡುಕಿ ದೊಡ್ಡ ದೊಡ್ಡ ಲಾಠಿ ತೊಗೊಂಡು ಹೊಡದಾರ. ಅವರ ಅರಿವಿ ನೋಡಿದರ ಅವರು ಯಾರು ಅಂತ ಇನ್ನೋ ಗೊತ್ತಾಗವಲ್ಲದು. ಇನ್ನೇನು ಇನ್ನೊಂದು ಸ್ವಲ್ಪ ದಿವಸದಾಗ ಗೊತ್ತಾಗತದ. ನಮ್ಮ ನಾಯಕರು ದಾಡಿ- ಪೈಜಾಮಾ- ಬುರ್ಖಾ ಮನಸಿನ್ಯಾಗ ಇಟಗೊಂಡು ಹೇಳಿದ್ದರೋ ಏನೋ. ನಮಗಂತೂ ಅಂಥಾ ಅರಿವಿ ಕಾಣಲಿಲ್ಲ.

ಇಷ್ಟು ಎಲ್ಲದಕ್ಕೂ ಕಾರಣ ಏನು? ಹೊರಗಿನಿಂದ ಬಂದವರನ್ನು ಹೊರಗ ಹಾಕೋ ಹೆಸರಿನ್ಯಾಗ ನಮ್ಮ ಅಣ್ಣತಮ್ಮಂದಿರನ್ನ ಬ್ಯಾರೆ ಮಾಡೋ ಪಿತೂರಿ ನಡದದ.

ಭಾರತದ ವಿಭಜನಾ 1947 ಆದಾಗ ಹಾಗೂ ಪಾಕಿಸ್ತಾನದ ವಿಭಜನಾ 1971 ರೊಳಗ ಭಾಳ ಕುಟುಂಬ ಈ ನಾಲ್ಕೂ ದೇಶಗಳ ಗಡಿ ದಾಟಿ ಹೋದರು, ಬಂದರು. ಅವರು ಈಗ 50-70 ವರ್ಷಗಳಿಂದ ಈ ದೇಶದ ನೀರು ಕುಡದು, ಇಲ್ಲೆ ಮಣ್ಣಿನ್ಯಾಗ ಬೆವರು ಸುರಿಸಿಕೊಂಡು, ದುಡಕೊಂಡು, ದುಃಖ ಪಟಕೊಂಡು ಇದ್ದಾರ. ಇಷ್ಟು ವರ್ಷ ಆಗಲಾರದ ಈ ನಿರಾಶ್ರಿತರ ಸಮಸ್ಯಾ ಈಗ ಬಂದಂಗ ಕಾಣತದ. ಯಾಕಂದರ ಈ ದೇಶದಾಗ ಯಾವ ಸಮಸ್ಯೆನೂ ಇಲ್ಲ ಈಗ. ಬಡತನಾ ಇಲ್ಲ, ಹಸಿವು ಇಲ್ಲಾ, ನಿರಕ್ಷರತೆ ಇಲ್ಲಾ, ದೌರ್ಜನ್ಯ ಇಲ್ಲ, ಬಾಲ್ಯವಿವಾಹ ಇಲ್ಲ, ದೇವದಾಸಿ ಪದ್ಧತಿ ಇಲ್ಲ, ಬಾಲ ಕಾರ್ಮಿಕರು ಇಲ್ಲ, ಯಾವುದೇ ರೋಗ – ರುಜಿನ ಇಲ್ಲ, ಎಲ್ಲರಿಗೂ ಬೇಕಾದಷ್ಟು ಶಿಕ್ಷಣ ಸಿಕ್ಕದ, ಸಾಕಷ್ಟು ಉದ್ಯೋಗ ಅವ. ನಮ್ಮ ಆರ್ಥಿಕತೆ ಐದೋ – ಆರೋ ಟ್ರಿಲಿಯನ್ ಡಾಲರ್ ಕಡೆ ದಾಪುಗಾಲು ಹಾಕಲಿಕ್ಕೆ ಹತ್ತೇದ. ಹಿಂಗಾಗಿ ಇವೆಲ್ಲಾ.

ಹಿಂಗಾಗಿ ನಾಗರಿಕತೆ ತಿದ್ದುಪಡಿ ಕಾಯಿದೆ, ರಾಷ್ಟ್ರೀಯ ನಾಗರಿಕರ ದಾಖಲೆಪಟ್ಟಿ ಅಂತೆಲ್ಲಾ ಅವರನ್ನ ಹುಡುಕೋದು, ಕುತಗೀ ಹಿಡದು ಹೊರಗ ಹಾಕೋದು ಇಂಥಾ ವಿಚಾರ ನಡದದ. ಇದು ಉಚ್ಚ ಶಿಕ್ಷಣ ಪಡದ ವಿದ್ಯಾರ್ಥಿಗಳಿಗೆ ಮನಸು ಬರವಲ್ಲತು. ಹಿಂದೂ – ಮುಸ್ಲಿಮ ಸ್ವಾತಂತ್ರ್ಯ ಹೋರಾಟಗಾರರ ಪ್ರಾಣದ ಆಹುತಿ ಪಡದ ಮ್ಯಾಲೆ ಈ ದೇಶ ಪ್ರಜಾತಂತ್ರ ಆಗೇದ. ಈಗ ಅದನ್ನ ಧರ್ಮದ ಆಧಾರದ ಮ್ಯಾಲೆ ಒಡದು ಹಾಕಿದರ ಜನಸತ್ತಾ ಹೋಗಿ ಜನಾ ಸತ್ತಾರ ಆಗತದ ಅಂತ ಅವರ ಚಿಂತಿ.

ಅದಕ್ಕೆ ಈ ದೇಶ ಬರೇ ಹಿಂದೂಗಳದ್ದಲ್ಲ. ಬರೇ ಮೇಲುಜಾತಿಯವರದಲ್ಲ, ಬರೇ ಸಾಹುಕಾರರದ್ದಲ್ಲ. ಬರೇ ಗಂಡಸರದಲ್ಲ, ಬರೇ ಅಧಿಕಾರಸ್ಥರದಲ್ಲ, ಬರೇ ಜಮೀನುದಾರರು, ವ್ಯಾಪಾರಸ್ಥರು, ಕಾರಖಾನಿ ಮಾಲಿಕರದ್ದಲ್ಲ, ಇದು ಎಲ್ಲರಿಗೂ ಸೇರಿದ್ದು. ಐದು ಸಾವಿರ ವರ್ಷದ ಶ್ರೀಮಂತ ಬಹು ಸಾಂಸ್ಕøತಿಕ ನಾಗರಿಕತೆಯನ್ನು ಬರೇ ಐದು ವರ್ಷ ಆಳಲಿಕ್ಕೆ ಪರವಾನಗಿ ಪಡದು ಬಂದಿರೋರು ಹಾಳು ಮಾಡಬಾರದು ಅಂತ ಅವರ ಆಸೆ. ನಮ್ಮ ಯಾರನ್ನೂ ಸಾಕ್ಷ್ಯ, ಪ್ರಮಾಣ, ಗುರುತು, ಪುರಾವೆ ಕೇಳಬ್ಯಾಡರಿ. ಅಣ್ಣ- ತಮ್ಮಂದಿರಿಗೆ ಅಣ್ಣಾ ತಮ್ಮನಂಗ ಇರಲಿಕ್ಕೆ ಬಿಡರಿ ಅಂತ ಅವರ ಬೇಡಿಕೆ.

ಈ ಗುಂಗಿನ್ಯಾಗ ಶಾಯರಿ ಸರದಾರ ರಾಹತ್ ಇಂದೋರಿ ಅವರ ಒಂದು ಗಜಲ್ ಕೇಳೋಣು. ಏನಂತೀ?

ಏನು ?
ವಿರೋಧ ಮಾಡ್ತಾರಂತ?
ಮಾಡ್ಲಿ ಬಿಡು,
ಅವರೇನೀಗ
ನಮಗ ಜೀವಕ್ಕ ಜೀವಾ
ಕೊಡವರದಾರು? ಇಲ್ಲಲಾ?

ಇದೆಲ್ಲಾ ಬರೇ ಹೊಗಿ
ಬರೇ ಒಣಾ ಧೂಳು-ಹೊಗಿ ಅಷ್ಟ.
ಇದನ್ನ ಏನರ
ಮುಗಲು ಅಂತ ತಿಳ್ಕೊಂಡೀಯೇನು ಮತ್ತ?
ಇಲ್ಲಲಾ?

ಒಮ್ಮೆ ಬೆಂಕಿ ಬಿತ್ತೆಪಾ ಅಂದರ
ಕಿವಿ ತುಂಬುವಂಗ
ಕೆಟ್ಟ ಸುದ್ದಿ ಬರ್ತಾವ ನೋಡು
ಮನಿ ಎಲ್ಲಾ ಉರಕೊಂಡು ಬಿದ್ದಿದ್ದು,
ಬಾಯಿಬಾಯಿ ಬಡಕೊಂಡು ಅಳೋದು,
ಗೊತೈತಿಲ್ಲ?
ಇಲ್ಲೇನು ಬರೇ
ನಮ್ಮವ ಮನೀ
ಅದಾವೇನು?
ಇಲ್ಲಲಾ?

ನೋಡಪಾ ಯಪ್ಪಾ
ನಮ್ಮ ಬಾಯಾಗ ಬಂದದ್ದ ಮಾತೆಲ್ಲಾ
ಖರೇನ ಇರತೇತಿ
ನಮ್ಮ ಬಾಯಾಗೇನರ
ನಿಮ್ಮ ನಾಲಿಗಿ ಐತೇನ?
ಇಲ್ಲಲಾ?

ನಮ್ಮ ದುಷ್ಮನಗಳೇನೂ
ಕಮ್ಮಿ ಇಲ್ಲ ಅನ್ನೋದು
ನನಗ ಗೊತೈತಿ
ಆದರ ನಮ್ಮಂಗ ಅವರೇನು
ಮುಟಿಗ್ಯಾಗ
ಜೀವಾ ಇಟಗೊಂಡ
ಹೊಂಟಾರೇನು?
ಇಲ್ಲಲಾ?

ಇವತ್ತೇನು ಗಾದಿ ಮ್ಯಾಲೆ ಕುತುಗೊಂಡು
ಮೆರಿಲ್ಯಾಕ ಹತ್ಯಾರಲಾ
ಅವರು ನಾಳೆ ಇರಂಗಿಲ್ಲಾ
ಅವರು ಇಲ್ಲೆ
ಬಾಡಗೀಲೆ ಇರಾಕ ಬಂದಾವ್ರು
ಏನು ಈ ಮನಿ
ಇವರ ಸ್ವಂತದ್ದೇನು?
ಅಲ್ಲಲಾ?

ಎಲ್ಲಾರ ರಕ್ತ ಬಿದ್ದು ಬಿದ್ದು ಕೆಂಪಾಗೇತಿ
ಈ ಮಣ್ಣು
ಯಾರದರ
ಅಪ್ಪನ ಮನೀದೇನು
ಈ ಹಿಂದುಸ್ತಾನಾ?
ಅಲ್ಲಲಾ?

ವಿಡಿಯೋ ನೋಡಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...