ಸಿಎಎ ಮತ್ತು ಎನ್ಆರ್ಸಿ ವಿರುದ್ಧ ನಾನು ಪ್ರತಿಭಟನೆ ಆರಂಭಿಸುವ ಮುನ್ನವೇ ಅಹಮದಾಬಾದ್ ಪೊಲೀಸರು ನನ್ನನ್ನು ಪ್ರತಿಭಟನಾ ಸ್ಥಳದಿಂದ ಬಂಧಿಸಿದ್ದಾರೆ. ನನ್ನ ಬಂಧನವನ್ನು ಅಶ್ಫಾಕುಲ್ಲಾ ಖಾನ್ ಮತ್ತು ರಾಂಪ್ರಸಾದ್ ಬಿಸ್ಮಿಲ್ಲಾಗೆ ಅರ್ಪಿಸುತ್ತೇನೆ! ಇಂಕ್ವಿಲಾಬ್ ಜಿಂದಾಬಾದ್! ಎಂದು ಗುಜರಾತ್ನ ಶಾಸಕ ಮತ್ತು ಹೋರಾಟಗಾರ ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ.
Ahmedabad Police has detained me from the protest venue when I had not even begun protesting against CAA and NRC.
I dedicate my detention to Ashfaqullah Khan and Ramprasad Bismillah!
Inquilab Zindabad!#NoToHinduRashtra
— Jignesh Mevani (@jigneshmevani80) December 19, 2019
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅವರು ಇಂದು ಅಹಮದಾಬಾದ್ನಲ್ಲಿ ಸುಮಾರು 5 ಸಾವಿರ ಜನರೊಂದಿಗೆ ಆಗಮಿಸಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಅಶ್ಫಾಕುಲ್ಲಾ ಖಾನ್ ಮತ್ತು ರಾಂಪ್ರಸಾದ್ ಬಿಸ್ಮಿಲ್ಲಾ ಭಗತ್ ಸಿಂಗ್ನ ಸಹಚರರಾಗಿದ್ದು ಭಾರತೀಯ ಸ್ವಾತಂತ್ರ ಹೋರಾಟದ ಸೌಹಾರ್ದದ ಸಂಕೇತವಾಗಿದ್ದಾರೆ. ಅವರಿಬ್ಬರೂ ಸಹ ಹುತಾತ್ಮರಾದುದ್ದು ಇದೇ ದಿನ. ಹಾಗಾಗಿ ಜಿಗ್ನೇಶ್ ಮೇವಾನಿ ಅವರಿಗೆ ಬಂಧನವನ್ನು ಅರ್ಪಿಸಿದ್ದಾರೆ.
ಅಹಮದಾಬಾದ್ನ ಹಲವೆಡೆ ಪೊಲೀಸರಿಂದ ಘರ್ಷಣೆಗಳು ನಡೆದಿದ್ದು ಲಾಠಿಚಾರ್ಜ್ ಮಾಡಲಾಗಿದೆ. ಹಲವರನ್ನು ಬಂಧಿಸಿಲಾಗಿದೆ. ಪೊಲೀಸ್ ಠಾಣೆಗಳಲ್ಲಿಯೇ ಪ್ರತಿಭಟನೆ ಮುಂದುವರೆದಿದೆ.
Even after many detentions, the government is not able to stop the voice of democracy: Satellite Police Station, Ahmedabad. pic.twitter.com/9l5ZQ5jirq
— Sulekha (@Sulekha1A) December 19, 2019