- Advertisement -
- Advertisement -
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಖ್ಯಾತ ಸಾಹಿತಿ ಮತ್ತು ಚಿಂತಕಿ ಅರುಂಧತಿ ರಾಯ್ ಈ ಬಾರಿ ನೀವು ನಮ್ಮನ್ನು ತಡೆಯಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
“ಭಾರತ ಎದ್ದು ನಿಂತಿದೆ. ಈ ಸರ್ಕಾರವು ಬಹಿರಂಗ ಅಪಖ್ಯಾತಿಗೆ ಒಳಗಾಗಿದೆ. ಪ್ರೀತಿ ಮತ್ತು ಒಗ್ಗಟ್ಟಿನಿಂದ ಧರ್ಮಾಂಧತೆ ಮತ್ತು ಫ್ಯಾಸಿಸಂ ಎದುರಾಗುವ ದಿನ ಇದು” ಎಂದು ಅವರು ಗುಡುಗಿದ್ದಾರೆ.
“ಅಸಂವಿಧಾನಿಕ ಸಿಎಬಿ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟಿಸಲು ಎಲ್ಲರೂ ಸೇರಿದ್ದಾರೆ. ನಾವು ದಲಿತರು, ಮುಸ್ಲಿಮರು, ಹಿಂದೂಗಳು, ಕ್ರಿಶ್ಚಿಯನ್ನರು, ಸಿಖ್ಖರು, ಆದಿವಾಸಿಗಳು, ಮಾರ್ಕ್ಸ್ವಾದಿಗಳು, ಅಂಬೇಡ್ಕರರು, ರೈತರು, ಕಾರ್ಮಿಕರು, ಶಿಕ್ಷಣ ತಜ್ಞರು, ಬರಹಗಾರರು, ಕವಿಗಳು, ವರ್ಣಚಿತ್ರಕಾರರು ಮತ್ತು ಈ ದೇಶದ ಭವಿಷ್ಯದ ಎಲ್ಲ ವಿದ್ಯಾರ್ಥಿಗಳು ಒಗ್ಗಟ್ಟಾಗಿದ್ದೇವೆ. ಈ ಬಾರಿ ನೀವು ನಮ್ಮನ್ನು ತಡೆಯಲಾಗುವುದಿಲ್ಲ”ಎಂದು ಅವರು ಹೇಳಿದ್ದಾರೆ.
ಅರುಂಧತಿ ರಾಯ್ ಅವರ ಧೈರ್ಯಕ್ಕೆ ಒಂದು ಸಲಾಂ.
At right time,at right cause.